ಪೋಸ್ಟ್‌ಗಳು

ಆಗಸ್ಟ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜೋಕಾಲಿ

ಇಮೇಜ್
ಮೂಲ ಕವಿತೆ - ರಾಬರ್ಟ್ ಲೂಯಿ ಸ್ಟೀವನ್ಸನ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಹೋಗೋಣವೆ ಜೋಕಾಲಿಯ ಮೇಲೆ ನೀಲ ಗಾಳಿ  ಬೀಸುವ ಆ ಕಡೆಗೆ! ಇದಕಿಂತಲೂ ಇದೆಯೇ ಸಂತೋಷ ಮಕ್ಕಳ ಮುಗ್ಧ ಜೀವನದೊಳಗೆ? ಗಾಳಿಯಲ್ಲಿ ಏರುತ ಮೇಲಕ್ಕೆ ಗೋಡೆಯ ಎತ್ತರ ದಾಟಿ ಗಿರಿ-ತೊರೆ-ಮರ-ಹುಲ್ಗಾವಲಿಗೆಲ್ಲಾ ಕೊಡಬಹುದಲ್ಲ ಭೇಟಿ! ಕೆಳಗೆ ನೋಡಿದರೆ ತೋಟದ ಹಸಿರು ಹಂಚು ಹೊದ್ದ ತಾರಸಿಗಳ ಸಾಲು! ನೋಡುತ ನೋಡುತ ಮೇಲಕೆ ಕೆಳಗೆ ಹಾರುವ ಹಕ್ಕಿಯ ಹರ್ಷದ ಬಾಳು!

ಒಡೆದ ಕಟ್ಟು

ಇಮೇಜ್
ಒಡೆದ ಕಟ್ಟು - ಒಂದು ಅತಿಸಣ್ಣಕತೆ   ಸಿ. ಪಿ. ರವಿಕುಮಾರ್  ನೆನ್ನೆ ರಾಮ್ ಸಿಕ್ಕಿದಾಗ ಸ್ವಲ್ಪ ಖಿನ್ನನಾಗಿದ್ದು ಕಂಡು ಏನೆಂದು ವಿಚಾರಿಸಿದೆ. “ಸರ್, ಅಪಾರ್ಟ್ಮೆಂಟ್ ಖರೀದಿಸಲು ಮುಂಗಡ ಹಣ ಕೊಟ್ಟು ಎರಡು ವರ್ಷಗಳಾಗಿವೆ. ಆರು ತಿಂಗಳ ಹಿಂದೆಯೇ ಮುಗಿಯಬೇಕಾಗಿದ್ದ ಕಟ್ಟಡದ ಕೆಲಸ ಇನ್ನೂ ಮುಗಿದಿಲ್ಲ. ನನ್ನ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿವೆ. ನಾನು ಕೊಡುತ್ತಿದ್ದ ಬಾಡಿಗೆ ಹೆಚ್ಚಾಗುತ್ತಿದೆ. ಈ ಕಡೆ ಸಾಲದ ಬಡ್ಡಿ ಕೂಡಾ ಹೆಚ್ಚಾಗಿದೆ ಅಂತ ಬ್ಯಾಂಕಿನಿಂದ ಪತ್ರ ಬಂದಿದೆ,” ಎಂದ. “ತಡ ಯಾಕಾಗುತ್ತಿದೆಯಂತೆ? ಬಿಲ್ಡರ್ಸ್ ಏನು ಹೇಳುತ್ತಾರೆ?” ಎಂದೆ. “ಈಗ ಜನ ಕೆಲಸಕ್ಕೆ ಸಿಕ್ಕುವುದಿಲ್ಲ ಅಂತಾರೆ.  ಎಲ್ಲರಿಗೂ ಫ್ರೀ ಅಕ್ಕಿ ಸಿಕ್ಕುತ್ತಿದೆಯಂತೆ.” “ಅದಕ್ಕೇ ಅಲ್ವಾ ಬೇರೆ ರಾಜ್ಯಗಳಿಂದ ಕೆಲಸಗಾರರು ಬರ್ತಿರೋದು?” “ಈಗ ಅದಕ್ಕೂ ಸಂಚಕಾರ ಬಂದಿದೆ. ಕಟ್ಟಡ ಕೆಡವೋ ಕೆಲಸಕ್ಕೆ ಹೆಚ್ಚು ಹಣ ಕೊಡ್ತಿದಾರೆ ಅಂತ ಎಲ್ರೂ ಕೆಡವೋ ಕೆಲಸಕ್ಕೆ ಹೋಗ್ತಿದಾರಂತೆ.” ನನಗೆ ಕ್ರಮೇಣ ಸತ್ಯದ ಅರಿವಾಯಿತು. ಕಟ್ಟಡ ಕೆಡವೋದು ಸುಲಭ. ಅದಕ್ಕೆ ಹೆಚ್ಚು ಹಣ ಕೂಡಾ. ಇದನ್ನೇ ಯೋಚಿಸುತ್ತಾ ನಾನು ಲೈಬ್ರರಿಯ ಕಡೆ ಸಾಗಿದೆ. ಅಲ್ಲಿ ಏನೋ ಕೆಲಸ ನಡೆಯುತ್ತಿದ್ದಂತೆ ಕಂಡಿತು. ಏನೆಂದು ವಿಚಾರಿಸಿದೆ. “ಸರ್, ಕ್ಸಾಸಿಕ್ಸ್ ಎಲ್ಲಾ ಯಾರೂ ಓದೋಲ್ಲ ಅಂತ ಅದನ್ನೆಲ್ಲಾ ತೆಗೆದು ಈಗ ಡಿಮ್ಯಾಂಡ್ ಇರೋ ಹೊಸಾ ಶೈಲಿಯ ಪುಸ್ತಕ ತರಿಸುತ್ತಿದ್ದೇವೆ,” ಎಂದ.”

ಮುಳುಗುತ್ತಿದೆ ವ್ರಜ ...

ಮುಳುಗುತ್ತಿದೆ ವ್ರಜ ...  ಮೂಲ : ಸೂರದಾಸ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಇದು ಸೂರದಾಸರು ಬರೆದ ಒಂದು ಗೀತೆಯ ಅನುವಾದ. ಇದನ್ನು ಲತಾ ಮಂಗೇಶ್ಕರ್ ಅವರ ಸುಮಧುರ ಕಂಠದಲ್ಲಿ ನೀವು ಇಲ್ಲಿ   ಕೇಳಬಹುದು .  ಕೃಷ್ಣನು ಮಥುರಾ-ಬೃಂದಾವನಗಳನ್ನು ತೊರೆದು ದ್ವಾರಕೆಗೆ ತೆರಳಿದಾಗ ದುಃಖ ತಡೆಯಲಾರದೇ ಅತ್ತ ಜೀವವೊಂದರ ಅಳಲು ಈ ಗೀತೆಯಲ್ಲಿದೆ.  ತನ್ನ ಕಣ್ಣುಗಳಿಂದ ಸದಾ ಕಾಲ ಹರಿಯುವ ಕಂಬನಿಧಾರೆಯನ್ನು ತಡೆಯುವುದು ಈ ದುಃಖಿಗೆ ಸಾಧ್ಯವಾಗುತ್ತಿಲ್ಲ. ಕಣ್ಣೀರು ಕಾಡಿಗೆಯನ್ನು ಕೆಡಿಸುತ್ತಿದೆ. ಒರೆಸಿಕೊಂಡಾಗ ಮುಖ-ಕೈಗಳೆಲ್ಲ ಕಪ್ಪಾಗುತ್ತಿವೆ. ಸೆರಗಿನ ತುದಿ ಒಣಗುವುದೇ ಇಲ್ಲ.  ಸುರಿದ ಕಂಬನಿ ಕಡಲಾಗಿದೆ. ಕಾಲು ಅಧೈರ್ಯದಿಂದ ಕುಸಿಯುತ್ತಿದೆ. ದಿಕ್ಕುತೋರುವ ತಾರೆಯೇ ಹರಿದುಹೋಗುತ್ತಿದೆ. ಇಡೀ ವ್ರಜಭೂಮಿಯಲ್ಲಿ ಪ್ರಳಯವಾದಂತಿದೆ. ತಮ್ಮನ್ನು  ಕಾಪಾಡಬಲ್ಲವನು ಕೃಷ್ಣ ಮಾತ್ರ - ಅವನೇಕೆ ಇನ್ನೂ ಬಂದಿಲ್ಲ?  ಹಗಲೂ ಇರುಳೂ ಕಂಬನಿಧಾರೆ   | ಸದಾ ಕವಿದ ಕಾರ್ಮೋಡವು ಕಣ್ಣಲ್ಲಿ  ಶ್ಯಾಮನು ತ್ಯಜಿಸಿದ ಮೇಲೆ | ಕಾಡಿಗೆ ನಿಲ್ಲದು ಕಣ್ಣಾಲಿಯಲಿ,  ಕೆನ್ನೆ ಕೈಗಳೆಲ್ಲವು ಕಲೆಯಾಗಿ  ಒಣಗದು ಸೆರಗಿನ ತುದಿ ಎಂದೂ, ಎದೆಗಿಳಿವುದು ಅಸುಧಾರೆ|| ಕಂಬನಿ ಕಡಲು, ಕುಸಿಯುವ ಕಾಲು, ಕಳೆದುಹೋದ ಧ್ರುವತಾರೆ|   ಸೂರದಾಸ! ವ್ರಜ ಮುಳುಗುತ್ತಲಿದೆ! ಪೊರೆಯದೆ ಕೃಷ್ಣನ ಲೀಲೆ ?

1914

ಇಮೇಜ್
1914  ಮೂಲ ಇಂಗ್ಲಿಷ್ ಕವಿತೆ - ವಿಲ್ಫ್ರೆಡ್ ಒವೆನ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ವಿಲ್ಫ್ರೆಡ್ ಒವೆನ್ ಒಬ್ಬ ಇಂಗ್ಲಿಷ್ ಕವಿ. ಮೊದಲ ಮಹಾಯುದ್ಧ ಪ್ರಾರಂಭವಾದಾಗ ಇಪ್ಪತ್ತರ ಹರೆಯದ ತರುಣ. ಯಾವುದೋ ಸಣ್ಣ ಕಾಲೇಜಿನಲ್ಲಿ ಅಧ್ಯಾಪಕನಾಗಿ ತನ್ನಪಾಡಿಗೆ ತಾನಿದ್ದವನ ಜೀವನದಲ್ಲಿ ಯುದ್ಧವು ಚಂಡಮಾರುತದಂತೆ ಪ್ರವೇಶಿಸಿತು. ಅವನೂ ಯುದ್ಧದಲ್ಲಿ ಪಾಲ್ಗೊಳ್ಳಬೇಕಾಯಿತು. ಇಂಗ್ಲೆಂಡ್ ಪರವಾಗಿ ಯುದ್ಧದಲ್ಲಿ ಹೋರಾಡಿದ. ಯುದ್ಧದಲ್ಲಿ ಗಾಯಗೊಂಡು ತಿಂಗಳಾನುಗಟ್ಟಲೆ ಚೇತರಿಸಿಕೊಳ್ಳುವಾಗ ಅವನು ಬರೆದ ಕವಿತೆಗಳನ್ನು ಸಿಗ್ಫ್ರೀಡ್ ಸಾಸೂನ್ ಎಂಬ ಕವಿ ಓದಿ ಅವನನ್ನು ಪ್ರೋತ್ಸಾಹಿಸಿದ. ಆದರೆ ಮರುವರ್ಷ ಮತ್ತೆ ಅವನನ್ನು ಫ್ರಾನ್ಸ್ ದೇಶಕ್ಕೆ ಯುದ್ಧಕ್ಕಾಗಿ ಕಳಿಸಲಾಯಿತು. ತರುಣ ಕವಿ ಯುದ್ಧಭೂಮಿಯಲ್ಲಿ ಹತನಾದ. ಪ್ರಸ್ತುತ ಕವಿತೆ ಯುದ್ಧವನ್ನು ಕುರಿತು ಅವನ ಭಾವನೆಗಳನ್ನು ಪ್ರಕಟಿಸುತ್ತದೆ. ಯುದ್ಧದಲ್ಲಿ ಸುರಿಯುತ್ತಿರುವ ರಕ್ತ ಹೊಸದೊಂದು ವಸಂತವನ್ನು ಅರಳಿಸಬಹುದೆಂಬ ಆಸೆ ಕವಿತೆಯಲ್ಲಿದೆ. ಯುದ್ಧ ಪ್ರಾರಂಭವಾಗಿದೆ; ಜಗತ್ತಿಗೆ ಕಾಲಿಡುತ್ತಿದೆ ನಿರ್ನಾಮಗೊಳಿಸುವ ಮಹಾಶಿಶಿರದ ಕತ್ತಲು. ಬರ್ಲಿನ್ ನಗರದಲ್ಲಿದೆ ದುಷ್ಟ ಪ್ರಳಯದ ಕೇಂದ್ರ, ಫೂತ್ಕರಿಸುತ್ತಿದೆ ಯೂರೋಪಿನ ಸುತ್ತಲೂ. ಆಗುತ್ತಿವೆ ಧೂಳೀಪಟ ಪ್ರಗತಿಯ ಎಲ್ಲ ಹಾಯಿಗಳೂ . ವಿಚ್ಛಿದ್ರವಾಗುತ್ತಿವೆ ಕಲೆಯ ಲಾಂಛನಗಳೆಲ್ಲಾ. ಬಿಕ್ಕುತ್ತಿದೆ ಕವಿತೆ. ಆಲೋಚನೆಗಳಿಗೆ-ಭಾವನೆಗಳಿಗೆ ಬಂದಿದೆ