ಪೋಸ್ಟ್‌ಗಳು

ನವೆಂಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಸುಧೈವ ಕುಟುಂಬಕಮ್

ಇಮೇಜ್
ಮೂಲ: ಮಾಯಾ ಏಂಜೆಲೋ (ಅಮೇರಿಕನ್ ಕವಯಿತ್ರಿ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್  (ಕವಿತೆ ಓದುವ ಮುನ್ನ: ನೀವು ಓದಲಿರುವುದು ಕಪ್ಪು ಅಮೆರಿಕನ್ ಕವಯಿತ್ರಿ ಮಾಯಾ ಏಂಜೆಲೋ ಅವರ ಪ್ರಸಿದ್ಧ ಕವಿತೆ 'ಹ್ಯೂಮನ್ ಫ್ಯಾಮಿಲಿ'ಯ ಅನುವಾದ.  ಕವಿತೆಯ ಸಾಲುಗಳು ಹೀಗೆ ನೇರವಾಗಿ ನಮ್ಮ ಎದೆಗೆ ಬಂದು ನಾಟುತ್ತವೆ ಎಂಬುದನ್ನು ಗಮನಿಸಿ. ಇದು ಮಾಯಾ ಏಂಜೆಲೋ ಅವರ ಕವಿತೆಗಳ ವೈಶಿಷ್ಟ್ಯ ಕೂಡಾ. ಇದೇ ಕವಯಿತ್ರಿಯ ಇನ್ನೂ ಕೆಲವು ಕವಿತೆಗಳ ಅನುವಾದವನ್ನು ನನ್ನ ಬ್ಲಾಗಿನಲ್ಲಿ ನೀವು ಓದಬಹುದು.)      ಗಮನಿಸುತ್ತೇನೆ ಮಾನವ ಕುಟುಂಬದಲ್ಲಿ  ಹಲಕೆಲವು ಸ್ವಯಂವೇದ್ಯ ವ್ಯತ್ಯಾಸ. ಕೆಲವರ ಮುಖದಲ್ಲಿ ಶ್ರೀಮದ್ಗಾಂಭೀರ್ಯ  ಇನ್ನು ಕೆಲವರಿಗಿಷ್ಟ ನಗೆ, ಸುಹಾಸ ಪ್ರಯತ್ನಿಸಿ  ತಮ್ಮ ಜೀವನದಲ್ಲಿ ಕಂಡುಕೊಳ್ಳುತ್ತಾರೆ ಕೆಲವರು ಗಹನತೆ ನಾವು ಬದುಕುವುದೇ ನಿಜಜೀವನ ಎಂದು ಹೇಳಿಕೊಳ್ಳುತ್ತದೆ ಉಳಿದ ಜನತೆ ನಮ್ಮ ಮೈಚರ್ಮದ ವರ್ಣವೈವಿಧ್ಯ ತರುತ್ತದೆ ನಮಗೆ ಗೊಂದಲ, ಸಂತೋಷ, ಬೆಪ್ಪು. ಕಂದು, ಗುಲಾಬಿ, ಪೇಲವ, ನೇರಳೆಗಪ್ಪು ಮೇಘವರ್ಣ, ಹಳದಿ, ಮತ್ತು ಬಿಳುಪು. ದಾಟಿದ್ದೇನೆ ನಾನು ಸಪ್ತಸಮುದ್ರ ಮೆಟ್ಟಿದ್ದೇನೆ ಪ್ರತಿಯೊಂದು ನೆಲವ. ಕಂಡಿರುವೆ ಜಗದ ಅದ್ಭುತಗಳನ್ನು ಕಂಡಿಲ್ಲ ಒಬ್ಬನೂ ಸಾಧಾರಣ ಮಾನವ. ಜೇನ್ ಮತ್ತು ಮೇರಿ ಜೇನ್ ನಾಮಾಂಕಿತ ಮಹಿಳೆಯರು ಹತ್ತು ಸಾವಿರವಾದರೂ ಪರಿಚಿತರು ನನಗೆ. ಇವಳು ಎಲ್ಲವೂ ಅವಳ ಹಾಗೇ ಇದ್ದಾಳೆ ಎಂಬ ಇಬ್ಬರು ಯಾರೂ ಬಿದ್ದಿಲ್ಲ ಕಣ್ಣಿಗೆ.

ಅಮೇರಿಕನ್ ಗಿಣ್ಣು

ಇಮೇಜ್
ಮೂಲ : ಜಿಮ್ ಡ್ಯಾನಿಯೆಲ್ಸ್ (ಅಮೆರಿಕಾ ಸಂಸ್ಥಾನ) ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಕವಿತೆ ಓದುವ ಮುನ್ನ:  ಬಾಲ್ಯದಲ್ಲಿ ಬಡತನದ ದಿನಗಳನ್ನು ಕಂಡ ಕವಿ ಈಗ ಒಳ್ಳೆಯ ಹುದ್ದೆಯಲ್ಲಿದ್ದಾನೆ.  ಶ್ರೀಮಂತಿಕೆಯ ನಾಜೂಕು ವೈಭವಗಳನ್ನು ಅನುಭವಿಸುವ  ಸಾಮರ್ಥ್ಯ ಈಗ ಅವನಿಗಿದೆ.  ಆದರೂ ಅದೇಕೋ ಬಾಲ್ಯದಲ್ಲಿ ತಾನು ನಿರ್ವಾಹವಿಲ್ಲದೇ ತಿನ್ನಬೇಕಾಗಿದ್ದ ಅಗ್ಗದ ಚೀಸ್ ಇಷ್ಟವಾಗುತ್ತದೆ! ಹೊರಗೆ ಅವನು ಹೇಗಾದರೂ ಇರಲಿ, ಮನೆಗೆ ಬಂದಾಗ ಹಾತೊರೆದು ತಿನ್ನುವುದು ಬಾಲ್ಯದ ನೆನಪುಗಳ ಉಪ್ಪು ಬೆರೆತ ಅಗ್ಗದ ಚೀಸ್!  ಇಟಲಿ, ಸ್ವಿಟ್ಜರ್ಲೆಂಡ್,  ಫ್ರಾನ್ಸ್ ಮುಂತಾದ ಐರೋಪ್ಯ ದೇಶಗಳಿಂದ  ಬರುವ ಬೆಲೆಬಾಳುವ ಗಿಣ್ಣುಗಳಿಗಿಂತಲೂ ಅಮೆರಿಕನ್ ಸಿಂಗಲ್ಸ್ ಎಂಬ ಚೀಸ್ ಬಯಸುವೆ ಎನ್ನುವಾಗ ಕವಿ ಸ್ವದೇಶಪ್ರೇಮವನ್ನೂ ಮೆರೆಯುತ್ತಿರಬಹುದೇ ಎಂಬ ಅನುಮಾನವೂ ನಿಮಗೆ ಬರಬಹುದು.  ಬಾಲ್ಯದಲ್ಲಿ  ತಾಯಿ ಬಡಿಸುತ್ತಿದ್ದ ಏಕಪ್ರಕಾರದ ಅಡುಗೆಯನ್ನು ಬೈದುಕೊಂಡೇ ತಿಂದಿರಬಹುದಾದ ಕವಿಗೆ ಅಪರಾಧಿ ಭಾವವೂ ಕಾಡುತ್ತಿರಬಹುದು. ಡಿಪಾರ್ಟ್ಮೆಂಟ್ ಪಾರ್ಟಿಗಳಲ್ಲಿ ನಾನು ಸೇವಿಸುವ ಚೀಸ್‍ಗಳ  ಹೆಸರನ್ನೂ  ನನ್ನ ತಂದೆತಾಯಿ ಕೇಳಿರಲಾರರು - ಮೆತ್ತಗಿನ, ತೆಳ್ಳನೆಯ ಗಿಣ್ಣುಗಳು  ಮಾತಾಡುತ್ತವೆ  ನಾನು ಕೇಳರಿಯದ ಭಾಷೆ.  ಕಷ್ಟಪಟ್ಟು ನಾನು ಸಾಧಿಸಿದ್ದೇನೆ  ಇವುಗಳನ್ನು ಇಷ್ಟಪಡುವುದನ್ನು. ಅದಕ್ಕೆ ಕಾರಣವೂ ಇಲ್ಲದೇ ಇಲ್ಲ.  ನಾನು ಬೆಳೆದ ಮನೆಯಲ್ಲಿ ದಿನವಿಡೀ ಕೇಳುತ್ತ

ಕುಣಿವುದೆನ್ನ ಮನ

ಇಮೇಜ್
ಮೂಲ ಇಂಗ್ಲಿಷ್  ಕವಿತೆ: ವಿಲಿಯಂ ವರ್ಡ್ಸ್‌‌ವರ್ತ್   ಕನ್ನಡಕ್ಕೆ: ಸಿ. ಪಿ. ರವಿಕುಮಾರ್   ಕುಣಿವುದೆನ್ನ ಮನ ಗರಿಗೆದರಿ ಕಂಡಾಗ ಕಾಮನಬಿಲ್ಲು ಬಾನಲ್ಲಿ! ಬಾಲ್ಯದಲ್ಲಿ ಹೇಗೆ ಚಿಮ್ಮುತ್ತಿತ್ತೋ ಸೋಜಿಗದ ಹೊನಲು ಹಾಗೇ ಹೊಮ್ಮುವುದು ಮಾನವನಾಗಿ ಬೆಳೆದು ನಿಂತಾಗಲೂ ಚಿಮ್ಮುತ್ತಿರಲಿ ಹೀಗೆಯೇ ಮುಂದೆಯೂ! ಇಲ್ಲದಿರೆ ನನಗೆ ಕೊಟ್ಟುಬಿಡು ಸಾವು! ಮಗುವಲ್ಲವೇ ಮಾನವನ ಜನಕ: ಬೇಡಿಕೊಳ್ಳುವೆ ದೈವದಲ್ಲಿ ನಾನನಕ! ಉರುಳುತ್ತ ಹೋದಂತೆ ನನ್ನ ದಿನಗಳು ಪರಸ್ಪರ ಸಹಜಭಕ್ತಿಯಿಂದ ಬೆಸೆದುಕೊಂಡಿರಲೆಂಬ ವರ!

ನಸುಕು ಹರಿಯುವ ಸಮಯ

ಇಮೇಜ್
  ಮೂಲ ಅಮೆರಿಕನ್ ಕವಿತೆ  - ಗಾಲ್ವೇ ಕಿನೆಲ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್   ಪ್ರಸ್ತುತ ಕವಿತೆಯಲ್ಲಿ ಕವಿ ತನಗೆ ಉಂಟಾದ ಒಂದು ಪುಟ್ಟ ಅನುಭವದಲ್ಲಿ ಗೂಢವಾದದ್ದನ್ನು ಅರಸುವ ಪ್ರಯತ್ನ ಮಾಡುತ್ತಿದ್ದಾನೆ.  ಒಂದು ಸಂಜೆ ಕವಿ ಒಂದು ಜಲಧಿಯ ತೀರದಲ್ಲಿ ಕುಳಿತಿದ್ದಾನೆ. ಮಳೆಯ ನಂತರ ಬಗ್ಗಡವಾದ ನೀರಿನಲ್ಲಿ ತೇಲುವ ಅಸಂಖ್ಯ ನಕ್ಷತ್ರಮೀನುಗಳು ಅವನ ಕಣ್ಣಿಗೆ ಬೀಳುತ್ತವೆ. ಅವುಗಳನ್ನು ನೋಡಿ ಅವನಿಗೆ ಆಕಾಶದಲ್ಲಿ ಹೀಗೇ ನಿಧಾನವಾಗಿ ಸಾಗುವ ನಕ್ಷತ್ರಗಳ ಯೋಚನೆ ಬರುತ್ತದೆ.  ಬಹುಶಃ ಅವುಗಳನ್ನು ನೋಡುತ್ತಾ ಕವಿ ಇಡೀ ರಾತ್ರಿ ಕಳೆದನೇನೋ! ನಸುಕು ಹರಿದಾಗ "ನಕ್ಷತ್ರಗಳು" ಒಮ್ಮೆಲೇ "ಕೆಳಗೆ ಉದುರಿಹೋದವು." ಅಲ್ಲಿಯವರೆಗೂ ಕವಿ ಅವುಗಳನ್ನು ನಿಟ್ಟಿಸುತ್ತಾ ತನ್ನ ಕಲ್ಪನಾಜಗತ್ತಿನಲ್ಲಿ ವಿಹರಿಸುತ್ತಿದ್ದ. ನಕ್ಷತ್ರಮೀನುಗಳಲ್ಲಿ ನಿಜವಾದ ತಾರೆಗಳನ್ನು ಕಾಣುವುದು ಕಲ್ಪನೆ. ರಾತ್ರಿಯ ಸಮಯದಲ್ಲಿ ಈ ಭ್ರಮಾಲೋಕ ನಿಜವೆಂದೇ ಭಾಸವಾಗುತ್ತದೆ. ಆದರೆ ನಸುಕಾದಾಗ ಒಮ್ಮೆಲೇ - ಕನಸುಗಳಂತೆ - ಈ ಭ್ರಮಾಲೋಕ ಮಾಯವಾಗುತ್ತದೆ! ಮಳೆಯ ಬಗ್ಗಡ ನೀರಲ್ಲಿ, ಮುಸ್ಸಂಜೆಗೆ ಮುಂಚೆ, ನೂರಾರು ನಕ್ಷತ್ರಮೀನುಗಳು ತೆವಳುತ್ತಿವೆ, ಮಣ್ಣೇ ಆಕಾಶವೋ ಎಂಬಂತೆ, ಅದರ ಉದ್ದಕ್ಕೂ ನಿಧಾನವಾಗಿ ಚಲಿಸುತ್ತಿವೆ ಈ ಅಗಾಧ ಅಪರಿಪೂರ್ಣ ನಕ್ಷತ್ರಗಳು ಎಷ್ಟು ನಿಧಾನವಾಗಿ ಚಲಿಸುತ್ತವೋ ಮೇಲೆ ಸ್ವರ್ಗದಲ್ಲಿ ನಿಜವಾದ ತಾರೆಗಳು. ಅನಂತರ  ಅವು ಹಠಾತ್ತನೇ ನಿಂತವು

ಬೂದು ಸಾರಸ

ಇಮೇಜ್
ಮೂಲ ಕವಿತೆ - ಗಾಲ್ವೇ ಕಿನ್ನೆಲ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಪ್ರಸ್ತುತ ಕವಿತೆಯಲ್ಲಿ ಒಂದು ಸರಳ ಅನುಭವದಲ್ಲಿ ಅದಕ್ಕಿಂತ ಮೀರಿದ್ದನ್ನೇನೋ ಕಾಣುವ ಪ್ರಯತ್ನವಿದೆ. ಕವಿ ಒಂದು ಬೂದು ಸಾರಸವನ್ನು ನೋಡುತ್ತಾನೆ.  ಬಹುಶಃ ಅವನು ಒಂದು ಕೆರೆಯ ಬದಿಯಲ್ಲಿ ಕುಳಿತಿರಬಹುದು. ಒಂದು ಬೂದು ಸಾರಸ ಪಕ್ಷಿ ಅವನ ಕಣ್ಣಿಗೆ ಬೀಳುತ್ತದೆ.  ಅದನ್ನು ಕವಿ ಹಿಂಬಾಲಿಸುತ್ತಾನೆ. ಆದರೆ ಸಾರಸವು ಹಠಾತ್ ಮರೆಯಾಗಿ ಅದರ ಸ್ಥಾನದಲ್ಲಿ ಒಂದು ಸರೀಸೃಪ ಅವನ ಕಣ್ಣಿಗೆ ಬೀಳುತ್ತದೆ. ಸರೀಸೃಪ ಕುಟುಂಬಕ್ಕೆ ಸೇರಿದ ಡೈನಾಸಾರ್ ಪ್ರಾಣಿಗಳೇ ಹಕ್ಕಿಗಳಾಗಿ ವಿಕಸನ ಹೊಂದಿದವು ಎನ್ನುವ ಹಿನ್ನೆಲೆಯಲ್ಲಿ ಈ ಪದ್ಯವನ್ನು ಓದಿ. ಕವಿಗೆ ಎದುರಾದ ಸರೀಸೃಪ ಅವನತ್ತ ನೋಡಿ "ಇವನು ಹೋಗುತ್ತಾನೋ ಅಥವಾ ಬೇರಾವುದೋ ಪ್ರಾಣಿಯಾಗಿ ರೂಪಾಂತರಗೊಳ್ಳುತ್ತಾನೋ" ಎಂದು ಯೋಚಿಸುತ್ತಿದೆ! ಬಹಳ ಹಳೆಯದನ್ನು ಡೈನಾಸಾರ್ ಎಂದು ಹಂಗಿಸುವ ಪದ್ಧತಿ ಇದೆ. ಆದರೆ ಈ ಸರೀಸೃಪ ಪಕ್ಷಿ ರೂಪದಲ್ಲಿ ಇನ್ನೂ ಬದುಕಿದೆ. ಮನುಷ್ಯನೋ ತನ್ನ ವಿನಾಶವನ್ನು ತಾನೇ ತಂದುಕೊಂಡಿದ್ದಾನೆ. ತಲೆ ಅಲ್ಲಾಡಿಸದು ಅತ್ತಿತ್ತ ತನ್ನ ಕಾಯ ಮತ್ತು ಹಸಿರು ಕಾಲ್ಗಳು ಒಂದು ಪಕ್ಕದಿಂದ ಇನ್ನೊಂದಕ್ಕೆ ಓಲಾಡುತ್ತಾ ಸಾಗುವಾಗಲೂ. ಅದು ನೋಟದಿಂದ ಮರೆಯಾದಾಗ ನಾನು ಹಿಂಬಾಲಿಸಿದೆನಾದರೂ ಹಕ್ಕಿ ಇದೆ ಎಂದುಕೊಂಡಿದ್ದ ಸ್ಥಳದಲ್ಲಿ ನನಗೆ ಕಂಡಿದ್ದಾದರೂ ಏನು ತನಗೊಪ್ಪದ ಚರ್ಮವನ್ನು ಹೊದ್ದು ಗೀರುಬಾಯಿಯ ಮೂಲಕ ಖನಿಜವಿಶ್