ಪೋಸ್ಟ್‌ಗಳು

ಜುಲೈ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೆಳಕಿನ ಹನಿ

ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್ ಬರಿದೆ ನೋಡು ಆ ಕಣ್ಣುಗಳಿಂದ ಹೊಮ್ಮುವ ಸುಗಂಧವನು ಕೈಯಿಂದ ಮುಟ್ಟಿ ತೊಡಿಸದಿರು ಸಂಬಂಧಗಳ ಬೇಡಿ ಆತ್ಮದಿಂದ ಅನುಭವಿಸು, ಪ್ರೀತಿಯನ್ನು ಹಾಗೇ ಬಿಟ್ಟು ಬಿಡು ಹಣೆಪಟ್ಟಿ ಹಚ್ಚದಿರು ಹೆಸರನ್ನು ನೀಡಿ  ಪ್ರೀತಿಗೊಂದು ಭಾಷೆಯಿಲ್ಲ, ಪ್ರೀತಿಗೆ ಸ್ವರವಿಲ್ಲ ಕೇಳುವುದು, ಆಡುವುದು ಮೌನದಲ್ಲೆ.  ಆರದಿದು, ನಿಲ್ಲದಿದು, ನೆಲೆಸದಿದು ಎಲ್ಲೂ - ಬೆಳಕಿನ ಹನಿ, ಯುಗಗಳಿಂದ ಹರಿಯುತ್ತಿದೆ.  ಕಣ್ಣುಗಳಲ್ಲಿ ಎಲ್ಲೋ ಅರಳಿ ನಗುವ ಮುಗುಳು ರೆಪ್ಪೆಗಳ ಮೇಲೆ ಆಟವಾಡುವ ಬೆಳಕು ಮೌನವಾಗಿದ್ದರೂ ಕಂಪಿಸುವ ತುಟಿಗಳಲಿ ಘನಿತವಾಗಿವೆ ಕಥಾನಕಗಳೆಷ್ಟೊಂದು ಕವಿತೆಯನ್ನು ಕುರಿತು  ಗುಲ್ಜಾರ್ ಅವರ ಈ ಕವಿತೆಯನ್ನು ಖಾಮೋಶಿ ಚಿತ್ರದಲ್ಲಿ ಗೀತೆಯನ್ನಾಗಿ ಬಳಸಲಾಗಿದೆ. ಈ ಕವಿತೆಯಲ್ಲಿ ಪ್ರೇಮದ ಬಗ್ಗೆ ಒಂದು ವ್ಯಾಖ್ಯಾನವಿದೆ.   ಪ್ರೀತಿಗೊಂದು ಭಾಷೆಯಿಲ್ಲ, ಪ್ರೀತಿಗೆ ಸ್ವರವಿಲ್ಲ ಕೇಳುವುದು, ಆಡುವುದು ಮೌನದಲ್ಲೆ ಆರದಿದು, ನಿಲ್ಲದಿದು, ನೆಲೆಸದಿದು ಎಲ್ಲೂ ಬೆಳಕಿನ ಹನಿ, ಯುಗಗಳಿಂದ ಹರಿಯುತ್ತಿದೆ ಖಾಮೋಶಿ ಚಿತ್ರದಲ್ಲಿ ದುರಂತನಾಯಕಿಯ ಪಾತ್ರದಲ್ಲಿ ವಹೀದಾ ರೆಹಮಾನ್ ಅಭಿನಯಿಸಿದ್ದಾರೆ.  ಭಗ್ನಪ್ರೇಮದಿಂದ ಹುಚ್ಚನಾದ ಕವಿಯೊಬ್ಬ ಮಾನಸಿಕ ಆಸ್ಪತ್ರೆಗೆ ಸೇರುತ್ತಾನೆ. ಅವನನ್ನು ಪ್ರೀತಿಸುವ ನಟನೆ ಮಾಡುವಂತೆ ಒಬ್ಬ ನರ್ಸ್ ಳನ್ನು  ಕ

ಚಂದ್ರನ ಅಂಗಿ

ಇಮೇಜ್
ಮೂಲ ಹಿಂದಿ ಬಾಲಕವಿತೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್  ಹೀಗಾಯಿತು ಒಮ್ಮೆ, ಚಂದ್ರಮನು ಗೋಗರೆದ ತಾಯ ಬಳಿ ಬಂದು  "ಅಮ್ಮಾ! ಹೊಲಿಸಿಕೊಡು ಚಂದದ ಅಂಗಿ ನನಗೊಂದು  ನೋಡಮ್ಮಾ ಬರಿಮೈಯಲಿ ತಿರುಗುವೆ ಹನ್ನೆರಡೂ ಮಾಸಗಳು  ಬಿಸಿಲು ಮಳೆ ಚಳಿಗಾಳಿಯಲ್ಲಿ ನಲುಗುತ್ತಿದೆ ಹೊಂದೊಗಲು!" ತಾಯಿಗೆ ನಗು ಬಂತು  ಕೊಟ್ಟಳು  ಹೂಮುತ್ತು  "ಮಗೂ! ನನಗೆ ತಿಳಿಯದೇನಪ್ಪ ನಿನ್ನ ಕಷ್ಟ ಕೊರತೆ? ಏನು ಮಾಡಲಿ! ಬದಲಾಯಿಸುವೆ ನೀನು ಪ್ರತಿದಿನವೂ ಅಳತೆ! ಪೂರ್ಣನಾಗುವೆ ಒಮ್ಮೆ, ಅರೆಮೈಯೊಮ್ಮೆ, ಕೆಲವೊಮ್ಮೆ ಸಂಪೂರ್ಣ ಮಾಯ!" ಬಾಡಿತು ಇಂದುಮುಖ, ಮರುಕ್ಷಣ  ಅರಳಿತು, ಹೊಳೆಯಿತು ಒಂದು ಉಪಾಯ! "ಸರಿಯಮ್ಮಾ! ಹೊಲಿಸಿಬಿಡು ಹಾಗಾದರೆ ಹೊಸಬಟ್ಟೆ  ಒಂದಲ್ಲ ಹದಿನೈದು  ಧರಿಸುವೆ ಒಪ್ಪುವಳತೆಯ ಚಂದದಂಗಿ ಪ್ರತಿದಿನ ಬೇರೊಂದು!" Translation by C.P. Ravikumar of a Children's Poem in Hindi by Ramdhari Singh "Dinakar"

ಕೆರೆ

ಇಮೇಜ್
ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್  ಮುಟ್ಟಬೇಡಿ ಈ ಕೆರೆಯನ್ನು  ತೂರದಿರಿ ಕಲ್ಲು  ಎಸೆಯದಿರಿ ಹುಲ್ಲು  ವಿನಾ ಕಾರಣ ಕಿತ್ತ ಎಲೆ ಹೂವು  ತೇಲಿ ಬಿಡದಿರಿ ಕಾಗದದ ನಾವೆಯನ್ನು  ಕ್ಷಣಿಕ  ಪುಳಕದ ಈ  ಆಟಗಳು ನಿಮಗಿಷ್ಟ  ಅಲೆಯೆಬ್ಬಿಸಲು ಸಲಿಲಕ್ಕೆ ಎಷ್ಟು ಕಷ್ಟ Kannada Translation by C.P. Ravikumar of a Hindi poem by Ramdhari Simgh "Dinakar"

ಹೂವಿನ ಬಯಕೆ

ಇಮೇಜ್
ಮೂಲ ಹಿಂದಿ ಪದ್ಯ : ಮಾಖನ್ ಲಾಲ್ ಚತುರ್ವೇದಿ   ಕನ್ನಡಕ್ಕೆ : ಸಿ . ಪಿ . ರವಿಕುಮಾರ್  ಮುಡಿಯುವ ಆಭರಣವಾಗಲೇ ದೇವಕನ್ಯೆಯ   ಜಡೆಯಲ್ಲಿ ? ಇಲ್ಲ ,   ಆ ಬಯಕೆ ನನಗಿಲ್ಲ .  ಮದುಮಗನು ನಲ್ಲೆಗರ್ಪಿಸುವ ಹಾರಕ್ಕೆ   ಪದಕವಾಗುವ ತವಕ ನನ್ನೊಳಗಿಲ್ಲ .  ಕೊಂಡೊಯ್ದು ಇರಿಸದಿರು ಗೋರಿಕಲ್ಲಿನ ಮೇಲೆ   ಹಿಂದೆ ಎಂದೋ ಆಳಿ ಅಳಿದ ರಾಜನಿಗೆ ! ಮಂದಿರದ ಮೂರ್ತಿಶಿಲೆ ಮೇಲಿಡದಿರು , ನನಗಿಲ್ಲ   ಒಂದೆರಡು ಕ್ಷಣದ ಧನ್ಯತೆಯ ಬಯಕೆ ! ಕೊಂಡೊಯ್ದು ನನ್ನನ್ನು ಓ ವನಮಾಲಿ ! ಎಸೆದುಬಿಡು   ಬಂಧು ಸೈನಿಕರು ಮುನ್ನುಗ್ಗುವ    ಹಾದಿಯಲ್ಲಿ   ಇಂದು ತಾಯ್ ಭೂಮಿ ರಕ್ಷಣೆಗೆ ಹೊರಟವರ   ಪದತಲದಲೆನ್ನ  ಬಾಳಿನ ಅರ್ಥ ಹೊಮ್ಮಿ ಬರಲಿ ! Translation by C.P. Ravikumar of a Hindi Poem by Makhanlal Chaturvedi [ಚಿತ್ರ: ಶ್ರೀನಿವಾಸನ್ ಮಾರ್ಗಸಹಾಯಂ]

ಋತುಗಳ ರಾಜ ವಸಂತ! ವರ್ಷ ಋತುಗಳ ರಾಣಿ!

ಇಮೇಜ್
ಋತುಗಳ ರಾಜ ವಸಂತ! ವರ್ಷ ಋತುಗಳ ರಾಣಿ! ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್  ಕವಿತೆ ಓದುವ ಮುನ್ನ - ರಾಮಧಾರಿ ಸಿಂಹ್ ದಿನಕರ್ ಹಿಂದಿಯ ಜನಪ್ರಿಯ ಕವಿ; ಹಿಂದಿ ಕವಿಗಳ ಸಾಲಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ದ್ವಿತೀಯರು.  ಇವರು ರಚಿಸಿದ ಸಾನೆಟ್ "ಋತುಗಳ ರಾಜ ವಸಂತ! ವರ್ಷ ಋತುಗಳ ರಾಣಿ" ಎಂಬುದರ ಅನುವಾದವನ್ನು ಇಲ್ಲಿ ಕೊಟ್ಟಿದ್ದೇನೆ.  ಈ ಕವಿತೆಯಲ್ಲಿ  ಕವಿ ವಸಂತವನ್ನು ಗಂಡಿಗೆ ಮತ್ತು ಹೆಣ್ಣನ್ನು ವರ್ಷ ಋತುವಿಗೆ ಹೋಲಿಸುತ್ತಾರೆ.  ಕವಿತೆಯಲ್ಲಿ ಬಳಸಲಾಗುವ ವಿಶಿಷ್ಟ ಪದಪ್ರಯೋಗವನ್ನು ಗಮನಿಸಿ. ಉದಾಹರಣೆಗೆ "ನಗೆಮುಗುಳು ರಾಜನ ಮೊಗದಲ್ಲಿ" ಎಂಬ ಸಾಲು ವಸಂತ ಋತುವಿನಲ್ಲಿ ವನವು ಚಿಗುರಿ ಹೂವುಗಳು ಅರಳುವುದನ್ನು ಹೇಗೆ ಸೂಚಿಸುತ್ತದೋ ಹಾಗೇ ಸಮಾಜದಲ್ಲಿ ಗಂಡಿಗೆ ಸಿಗುವ ಸ್ಥಾನಮಾನದ ಬಗ್ಗೆಯೂ ಹೇಳುತ್ತದೆ. ವಸಂತ ಮಾಸದಲ್ಲಿ ಹೂವಿನ ಸುತ್ತಲೂ ಹಾರಾಡುವ ಪಾತರಗಿತ್ತಿಗಳು ಎಷ್ಟೋ! ಹಾಗೇ ಗಂಡಿನ ಸುತ್ತಲೂ ಸೇವೆಗೆ ಸಿದ್ಧರಾಗಿ ನಿಂತ ಅಪ್ಸರೆಯರು ಎಷ್ಟೋ!  ವಸಂತದ ಸಂಭ್ರಮಕ್ಕೆ ಹೋಲಿಸಿದರೆ ವರ್ಷ ಋತು ಗಾಂಭೀರ್ಯವನ್ನು ಧ್ವನಿಸುತ್ತದೆ. "ಬಿಚ್ಚಿದ ಸೆರಗು" ಎಂಬುದು ಮೋಡಕ್ಕೆ ರೂಪಕವಾಗುತ್ತದೆ.  "ಕವಿಯುವ ವ್ಯಥೆ" ಎಂಬ ಪದಪ್ರಯೋಗ ಕವಿಯುವ ಮೋಡಕ್ಕೆ ತಾಳೆಯಾಗುತ್ತದೆ.  "ಧೋ ಎಂದು ಅತ್ತಳು"  

ಪರಂಪರೆ

ಇಮೇಜ್
  ಕವಿತೆ ಓದುವ ಮುನ್ನ ...  ಹಿಂ ದಿ ಸಾಹಿತ್ಯದಲ್ಲಿ ದಿನಕರ್ ಅವರದ್ದು ದೊಡ್ಡ ಹೆಸರು.   ಸ್ವಾತಂತ್ರ್ಯಪೂರ್ವದಲ್ಲಿ ಬರೆಯಲು ಪ್ರಾರಂಭಿಸಿದ ದಿನಕರ್ ತಮ್ಮ ಕ್ರಾಂತಿಕಾರಿ ಧ್ವನಿಗೆ ಹೆಸರಾದವರು; ಅವರ ಕವಿತೆಗಳು ಸಾಮ್ರಾಜ್ಯಶಾಹಿಯ ವಿರುದ್ಧ ಜನರನ್ನು ಬಡಿದೆಬ್ಬಿಸುತ್ತಿದ್ದವು. ಅವರ ಕಾವ್ಯದಲ್ಲಿ ಭಾಷೆಯ ಪ್ರಯೋಗ ಯಾರನ್ನಾದರೂ ತಲೆದೂಗುವಂತೆ ಮಾಡುತ್ತದೆ. ಸ್ವಾತಂತ್ರ್ಯೋತ್ತರ ಭಾರತ ಸರಕಾರದಲ್ಲಿ ಅವರು ಸಚಿವರಾಗಿದ್ದರು.  ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು.    ಸ್ವಾ ತಂತ್ರ್ಯದ ಪೂರ್ವದಲ್ಲಿ ಭಾರತದ ಪರಂಪರೆಗಳು ಹೊರನಾಡುಗಳಿಂದ ಬಂದು ಇಲ್ಲಿ ಆಳಿದವರ ಬಲವಂತಕ್ಕೆ ಸಿಕ್ಕಿದವು.  ಸ್ವಾತಂತ್ರ್ಯದ ನಂತರದ  ದಿನಗಳಲ್ಲಿ ನಮ್ಮ ಪರಂಪರೆಗಳನ್ನು ಉಳಿಸುವ ಅಥವಾ ಅಳಿಸುವ ಬಾಧ್ಯತೆ ಭಾರತೀಯರ ಮೇಲೇ ಬಿತ್ತು. ದುರದೃಷ್ಟವಶಾತ್ ಈ ಪರಂಪರೆಗಳಿಗೆ ಈಗಾಗಲೇ ಧರ್ಮಗಳ, ಜಾತಿಗಳ, ಭಾಷೆಗಳ ಲೇಬಲ್ ಗಳು ಅಂಟಿಬಿಟ್ಟಿದ್ದವು.   ಪ್ರಸ್ತುತ ಕವಿತೆಯಲ್ಲಿ ಪರಂಪರೆಯನ್ನು ಕುರಿತಾಗಿ ಒಂದು ಜಿಜ್ಞಾಸೆ ಇದೆ. ಆಗಿನ ಕಾಲದಲ್ಲಿ ಬರುತ್ತಿದ್ದ ಸಾಹಿತ್ಯವನ್ನು ಕುರಿತು ಒಂದು ನೋಟವಿದೆ. ಪರಂಪರೆ ನಮ್ಮ ಸ್ವಂತಿಕೆಯನ್ನು ಕಾಯುತ್ತದೆ.  ಅದು "ಜನರ ನಂಬಿಕೆಯ ಆಧಾರ." ಅವುಗಳನ್ನು "ಕುರುಡು ದೊಣ್ಣೆಯಿಂದ" ಚಚ್ಚುವುದು ಸರಿಯಲ್ಲ  ಎಂಬುದು ಕವಿತೆಯ ಆಶಯ.  ಕ್ರಾಂ ತಿಗೂ ಪರಂಪರೆಗೂ ಸಂಘರ್ಷಗಳು ಸದಾ ನಡೆಯುತ್ತಿರುತ್ತದೆ. ಫಿಡ್ಲರ್ ಆನ್ ದ ರೂಫ

ಲೇಖನಿ, ಇಂದವರನ್ನು ನೆನೆ!

ಇಮೇಜ್
ಕವಿತೆ ಓದುವ ಮುನ್ನ  ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಇತಿಹಾಸವಾಗಿ ಇಂದು ನೆನಪಿನಲ್ಲಿ ಉಳಿದವರು ಕೆಲವರು; ಆದರೆ ಲಕ್ಷಾಂತರ ಭಾರತೀಯ ಜನಸಾಮಾನ್ಯರು ಈ ಹೋರಾಟದಲ್ಲಿ ಭಾಗವಹಿಸದಿದ್ದರೆ ಅದಕ್ಕೆ ಅರ್ಥವಿರುತ್ತಿರಲಿಲ್ಲ. ದಿನಕರ್ ತಮ್ಮ ಕವಿತೆಯಲ್ಲಿ ಇಂಥ ಸಾಮಾನ್ಯರಿಗೆ ನಮನ ಸಲ್ಲಿಸುತ್ತಾರೆ. ಗಾಂಧೀಜಿ ಸತ್ಯಾಗ್ರಹಕ್ಕೆ ಕರೆ ಕೊಟ್ಟಾಗ ಸಾಮಾನ್ಯರು ಅವರ ಮಾರ್ದನಿಯಾಗಿ ಅಲ್ಲಿರುತ್ತಿದ್ದರು. ಈ ಜನಸಾಮಾನ್ಯರ ಸ್ವಂತ ಪ್ರಭಾವಳಿ ದೊಡ್ಡದಲ್ಲದೇ ಇರಬಹುದು; ಆದರೆ ಅವರು ಲಕ್ಷಾಂತರ ಸಂಖ್ಯೆಯಲ್ಲಿ ಉರಿದು ಭಾರತದ ಸ್ವಾತಂತ್ರ್ಯಕ್ಕೆ ನಾಂದಿಯನ್ನಿಟ್ಟರು. ಗಾಂಧಿ, ನೆಹರೂ, ಲಾಜಪತ್ ರಾಯ್, ಪಟೇಲ್ ಇಂಥವರೆಲ್ಲ ಕಣ್ಣಿಗೆ ಕುಕ್ಕುವ ಬೆಳಕುಗಳು; ಹಾಗೆಂದು ಅವರನ್ನು ಮಾತ್ರ ನೆನೆದರೆ ಇತಿಹಾಸಕ್ಕೆ ಅಪಚಾರವಾಗುತ್ತದೆ ಎಂಬುದು ಕವಿತೆಯ ಆಶಯ.  "ದಿನಕರ್" ಸ್ವಾತಂತ್ರ್ಯಪೂರ್ವದಲ್ಲಿ ಬರೆಯಲು ಆರಂಭಿಸಿದ ಹಿಂದಿ ಕವಿ. ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿರದಿಂದ ನೋಡಿದವರು.  ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತರಾದ ಹಿಂದಿ ಕವಿ. ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  ಅದೆಷ್ಟು ಸಲ ಇಂಥವರ ಅಸ್ಥಿಗಳ ಸುಟ್ಟೆವೋ ಎಷ್ಟು ಸಲ ಇಂಥವರ ಚಿತೆಗೆ ಕಿಡಿ ಕೊಟ್ಟೆವೋ ಸೇರಿದರು ಹೇಗೋ ತಮ್ಮ ಕೊನೆಯ ನೆಲೆ ಗಳಿಸಲಾರದೆ ತಮ್ಮ ನಿಜವಾದ ಬೆಲೆ - ಲೇಖನಿ, ಇಂದವರನ್ನು ನೆನೆ!

ಹೊನಲು

ಮೂಲ ಹಿಂದಿ ಗಜಲ್ : ಜಾವೇದ್ ಅಖ್ತರ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಕೆಲವೊಮ್ಮೆ ಅಳಲು, ಕೆಲವೊಮ್ಮೆ ನಗೆಮುಗುಳು  ಕ್ಷಣ ನಿಲ್ಲದೆ ಹರಿಯುತ್ತಿದೆ ಜೀವನದ ಹೊನಲು  ಕಂಡದ್ದು  ಏನು  ಕಣ್ಣೋ, ಇಲ್ಲ ಸ್ವಪ್ನ ಶೃಂಖಲೆಯೋ  ಕೇಳಿದ್ದು ಏನು ದನಿಯೋ, ಇಲ್ಲ  ರಾಗಿಣಿಯ ಹೊನಲೋ  ಹೃದಯ ಬರಡಾಗಿ ಹಾರುತ್ತಿದೆ ಬಿರುಗಾಳಿಗೆ ಧೂಳು  ಹರಿಯುತ್ತಿತ್ತು ಹಿಂದೊಮ್ಮೆ ಇಲ್ಲಿ  ಪ್ರೇಮದ ಹೊನಲು  ಕಿರಣಗಳಲ್ಲಿ ಹೊಳೆವ ಅಲೆಯೋ ಇಲ್ಲ ಅಲೆಗಳಲ್ಲಿ ಹೊಳೆವ ಕಿರಣವೋ  ಹೊನಲಲ್ಲಿ ಹೊಳೆವ  ಬೆಳದಿಂಗಳೋ  ಇಲ್ಲ ಬೆಳ್ದಿಂಗಳದೇ ಹೊನಲೋ  Kannada translation by C.P. Ravikumar  of a Gazal by Javed Akhtar

ನೀವೂ ಬನ್ನಿ, ನಮಗೂ ನೀಡುತ್ತಿರಿ ಆಹ್ವಾನ 

ಮೂಲ ಉರ್ದು ಗಜಲ್ : ಜಾವೇದ್ ಅಖ್ತರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ನೀವೂ ಬನ್ನಿ! ಆಗಾಗ  ನಮಗೂ ನೀಡುತ್ತಿರಿ ಆಹ್ವಾನ  ಗೆಳೆತನವೇನೂ   ಅಪರಾಧವಲ್ಲ, ಬೆಳೆಸುತ್ತಿರಿ ಗೆಳೆತನ ! ನೀವು ಕುಡಿದರೂ ಹಾಲಾಹಲ, ಮಾಡಿಸಿ ಅನ್ಯರಿಗೆ  ಅಮೃತಪಾನ  ಗಾಯವಾದರೂ ಸಹಿಸಿಕೊಳ್ಳಿ ನೋವನ್ನು, ನಿಲ್ಲಿಸದಿರಿ ಗಾಯನ! ಕನ್ನ  ಹಾಕಿದೆ ಕಾಲ  ಜನರ ಆಕಾಂಕ್ಷೆಗಳಿಗೆ  ಕನಸು ಕಂಡರೆ ಹಂಚಿಕೊಳ್ಳಿ ಜನರೊಳಗೆ  ನಿಮ್ಮ ಮನದಾಳದಲ್ಲೂ ಇರಲೇಬೇಕೊಂದು ಚಹರೆ  ಬಿಡಿಸುತ್ತಿರಿ ಚಿತ್ರ, ಪೂರ್ಣವಾಗುವುದು ಇಂದಲ್ಲ ನಾಳೆ  Kannada translation by C.P. Ravikumar of a Gazal by Javed Akhtar  

ಸಂಜೆಯಿಂದಲೂ  ಏಕೋ ಕಣ್ಣಿನಲ್ಲಿ ತೇವ 

ಇಮೇಜ್
ಮೂಲ ಉರ್ದು ಗಜಲ್ : ಗುಲ್ಜಾರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಸಂಜೆಯಿಂದಲೂ  ಏಕೋ ಕಣ್ಣಿನಲ್ಲಿ ತೇವ  ಇಂದು ಮತ್ತೆ ಕಾಡುತ್ತಿದೆ ನಿನ್ನದೇ ಅಭಾವ  ಉಸಿರಾದರೂ ಆಡುತ್ತಿದ್ದೆ ಹೂತಿದ್ದರೆ ನೆಲದಲ್ಲಿ  ನಾಡಿ ಮಿಡಿತವು ಯಾಕೋ ನಿಂತಂಥ ಭಾವ  ಕಾಲವೆಂಬುದು ಒಂದೆಡೆಗೆ ನಿಲ್ಲದು ಬಚ್ಚಿಟ್ಟುಕೊಂಡು   ಮಾನವರಂತೆ ಅದರ ಕಾರ್ಯವಿಧಿ ಕೂಡಾ  ಈಗ ಯಾವ ಸಂಬಂಧವೂ ಉಳಿದಿಲ್ಲ, ಆದರೂ  ಕರ್ತವ್ಯವೆಂಬಂತೆ ಕೈ ಮುಗಿದು ನಮಸ್ಕಾರ Kannada translation by C.P. Ravikumar of an Urdu Gazal by Gulzar  

ಉರುವಲು

ಮೂಲ ಹಿಂದಿ ಕವಿತೆ: ಗುಲ್ಜಾರ್ ಕನ್ನಡಕ್ಕೆ : ಸಿ.ಪಿ. ರವಿಕುಮಾರ್ ಚಿಕ್ಕವಯಸ್ಸಿನಲ್ಲಿ ನಮಗೊಂದು ಆಟ  ಅಮ್ಮ ಬೆರಣಿ ತಟ್ಟುತ್ತಿದ್ದಾಳೆ  ನಾವು ಹೋಗಿ ಬೆರಣಿಯಲ್ಲಿ   ನಮ್ಮ ಚಹರೆ ಬರೆಯುವವರು  ಕಣ್ಣು ಬರೆದು ಹುಬ್ಬು ತೀಡಿ ಭೇಷಾಗೊಂದು ಮೂಗು  ಕೆಳಗೆ ತೆರೆದ ಬಾಯಿ  ಕಿವಿಗೆ   ಅಲಂಕಾರದ ಮಾಟ  ಒಂದಕ್ಕೆ ಟೋಪಿ ಇನ್ನೊಂದಕ್ಕೆ ಪೇಟ  ಇದು ನನ್ನ ಬೆರಣಿ  ಅದು  ನಿನ್ನ ಬೆರಣಿ  ಹೀಗೆ ಸಾಲಾಗಿ ಚಹರೆಗಳ ಸರಣಿ  ಸೂರ್ಯ ಬರುವನು ಬೆಳಗ್ಗೆ ನಗುನಗುತ್ತ  ಅವನಿಗೆ ಬೆರಣಿಗಳೊಂದಿಗೆ ಆಟ  ಸಂಜೆಯ ಒಲೆ ಉರಿಯುವಾಗ  ಅಲ್ಲಿ ನೆರೆಯುವುದು ಮಕ್ಕಳ ಕೂಟ  ಇವತ್ತು ಯಾರ ಬೆರಣಿ ಉರಿದು ಬೂದಿ? ಪಂಡಿತನದೆ? ಪುಟ್ಟನದೇ?  ದಶರಥನದೇ ಸರದಿ? ಇದೆಲ್ಲಾ ಆಗಿ ವರ್ಷಗಳೇ ಸಂದಿವೆ  ಸ್ಮಶಾನದಲ್ಲಿ ಕುಳಿತಿದ್ದೇನೆ  ಯೋಚಿಸುತ್ತಾ  ಭೀಕರ ಮೌನದ ರಾತ್ರಿ  ಅಗೋ ಹೊತ್ತು ಉರಿಯುವ ಇಂದಿನ ಒಲೆಯಲ್ಲಿ  ಇನ್ನೊಬ್ಬನ ಬೆರಣಿ ಭಸ್ಮವಾಗಿ ಪರಿಸಮಾಪ್ತಿ  Kannada translation of a poem by Gulzar Translated by C.P. Ravikumar

 ಅಪರಿಚಿತನಾಗಿರುವೆ ನನ್ನ ಮನೆಗೆ ನಾ ಬಂದು 

ಇಮೇಜ್
ಮೂಲ ಉರ್ದು ಗಜಲ್ : ಗುಲ್ಜಾರ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಅಪರಿಚಿತನಾಗಿರುವೆ ನನ್ನ ಮನೆಗೇ ನಾ ಬಂದು ಬೆದರಿಹುದು ನನ್ನಾತ್ಮ ನನ್ನನ್ನಿಲ್ಲಿ ಕಂಡು ಮೂಲೆ ಸೇರಿಹವು ಆಸೆಗಳು ಯಾಕೋ ಮುನಿದು ಅಭಿಲಾಷೆಗಳ ಮುಖಗಳಲ್ಲಿ ನಂದಿಹುದು ಬೆಳಕು ಹವ್ಯಾಸವು ಮಾತಾಡದು ಹಿಡಿಯಲಾಗದೆ ಗುರುತು ಸತ್ತು ಹೋಗಿದೆ ಆಕಾಂಕ್ಷೆ ಹೊಸಲಲ್ಲಿ ತಲೆಯಿಟ್ಟು ಯಾವ ನಾಡನ್ನರಸುತ್ತಾ ಹೊರಟೆನೋ ಮನೆಯಿಂದ ಕಾಣೆ ಮರಳಿದಾಗ ಹೊರಗಿನವನಾದೆ ನನ್ನ ಮನೆಯೊಳಗೇ Translation of an Urdu Gazal by Gulzar. Translated into Kannada by C.P. Ravikumar

ಅಭ್ಯಾಸಬಲವೋ ಎಂಬಂತೆ 

ಮೂಲ ಉರ್ದು ಗಜಲ್: ಗುಲ್ಜಾರ್  ಕನ್ನಡಕ್ಕೆ : ಸಿ. ಪಿ.  ರವಿಕುಮಾರ್  ಅಭ್ಯಾಸಬಲವೋ ಎಂಬಂತೆ ಭಾಷೆಯಿತ್ತೆ ನೀನು  ಅಭ್ಯಾಸಬಲವೋ  ಎಂಬಂತೆ ಸ್ವೀಕರಿಸಿದೆ ನಾನು  ನೀನು ಬರುವ ಹಾದಿ ಎಂದು ನೆನೆನೆನೆದು ಕಾದುದಕ್ಕೆ  ನನ್ನ ವಿನಾ  ಅಲ್ಲಿ ನನಗೆ ಎದುರಾದುದೇನು? ಇನ್ನು ಬೇಡುವುದಿಲ್ಲ ದೇವರೇ ಬದುಕನ್ನು  ಆ ತಪ್ಪು ಈಗಾಗಲೇ ಮಾಡಿರುವೆನು ನಾನು  Translation of an Urdu Gazal by Gular. Translated into Kannada by C.P. Ravikumar