ಪೋಸ್ಟ್‌ಗಳು

ಆಗಸ್ಟ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದಯವಿಟ್ಟು ನಿಮ್ಮ ಬಣ್ಣದ ಫ್ಯಾಷನ್ ಕನ್ನಡಕಗಳನ್ನು ಬಿಚ್ಚಿ ಕೆಳಗಿಡಿ

ಇಮೇಜ್
ಸಿ ಪಿ ರವಿಕುಮಾರ್ ನೆನ್ನೆ ಪ್ರೊ। ಕಲಬುರ್ಗಿ ಅವರ ಮೇಲೆ ಮಾರಣಾಂತಕ ಹತ್ಯೆ ನಡೆದಿದ್ದು ಕೇಳಿ ಆಘಾತವಾಯಿತು.  ಪ್ರೊ। ಕಲಬುರ್ಗಿ ಅವರ ಭಾಷಣವನ್ನು ಕೇಳುವ ಅವಕಾಶ ಕೆಲವು ವರ್ಷಗಳ ಹಿಂದೆ ಒದಗಿ ಬಂದಿತ್ತು. ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ನಡೆದ "ಸಂವಾದ" ಕಾರ್ಯಕ್ರಮದಲ್ಲಿ ಅವರು ಮಾತಾಡಿದ್ದು ಕನ್ನಡವನ್ನು ಸರಿಯಾಗಿ ಕಲಿಸುವ ವಿಷಯ. ಹಳೆಗನ್ನಡ ಕಾವ್ಯ ಕಲಿಸುವಾಗ ಹೇಗೆ ಸರಿಯಾಗಿ ಓದಿದರೆ ವಿದ್ಯಾರ್ಥಿಗಳಿಗೆ ಅರ್ಥವಾಗುತ್ತದೆ  ಎಂದು ವಿವರಿಸಿದರು. ಶಾಲೆ-ಕಾಲೇಜುಗಳಲ್ಲಿ ಕನ್ನಡ ಕಲಿಸುತ್ತಿರುವವರಿಗೇ ಹಳೆಗನ್ನಡ ಅರ್ಥವಾಗದೆ ನೋಟ್ಸ್ ಇಟ್ಟುಕೊಂಡು ಪಾಠ ಮಾಡುವುದು ರೂಢಿಯಾಗಿದೆ! ಹಿಂದೆ ಶೇಕ್ಸ್ ಪಿಯರ್ ಕಾವ್ಯಕ್ಕೆ ಒದಗಿದ ನೋಟ್ಸ್ ಕಾಯಿಲೆಯು ಈಗ ರನ್ನ-ಪಂಪ-ಹರಿಹರ-ಲಕ್ಷ್ಮೀಶ-ಕುಮಾರವ್ಯಾಸರ ಕಾವ್ಯಕ್ಕೂ ಒದಗಿದೆ. ಕನ್ನಡ ಕಾವ್ಯ/ನಾಟಕಗಳನ್ನು ಕಲಿಸುವಾಗ ಮಲ್ಟಿಮೀಡಿಯಾ ಪ್ರಯೋಗದ ಬಗ್ಗೆ ಪ್ರೊ। ಕಲಬುರ್ಗಿ  ಉತ್ಸುಕರಾಗಿದ್ದರು. ನಾಟಕವನ್ನು ಓದಿ ಪಾಠ ಮಾಡಿದರೆ ಕಳೆ ಕಟ್ಟುವುದಿಲ್ಲ, ರಂಗದ ಮೇಲೆ ನೋಡಿದಾಗಲೇ ಅದನ್ನು ಸರಿಯಾಗಿ ಗ್ರಹಿಸಬಹುದು ಎಂದು ಅವರು ಪ್ರತಿಪಾದಿಸಿದರು. ಪ್ರೇಕ್ಷಕರ ಪ್ರಶ್ನೆಗಳಿಗೆ (ನನ್ನ ಪ್ರಶ್ನೆಯೂ ಸೇರಿ) ಒಳ್ಳೆಯ ಉತ್ತರಗಳನ್ನು ಕೊಟ್ಟರು. ಅವರನ್ನು ಕೇಳಿದಾಗ ಅವರೊಬ್ಬ ಕ್ರಾಂತಿಕಾರಿ  ಎಂದು ನನಗಂತೂ ಅನ್ನಿಸಲಿಲ್ಲ. ಇದಾದ ನಂತರ ಅವರು ಎರಡು ಸಲ ವಿವಾದಗಳಲ್ಲಿ ಸಿಲುಕಿದರು - [೧] ಪ್ರೊ। ಅನಂತಮೂರ್ತಿ

ದೂರುಗಳ ನಗರ

ಇಮೇಜ್
ಸಿ ಪಿ ರವಿಕುಮಾರ್ ಕಂಪನಿ ಬಸ್ ನಲ್ಲಿ ಇಂದು ಜಗಳ. ಒಬ್ಬಾಕೆಯ ಪಕ್ಕದಲ್ಲಿ ಇನ್ನೊಬ್ಬ ಕೂತಿದ್ದಾನೆ. ಆಕೆ ತಮ್ಮಿಬ್ಬರ ನಡುವೆ ಒಂದು ಬ್ಯಾಗ್ ಇಟ್ಟುಕೊಂಡು ಕುಳಿತಿದ್ದಾಳೆ. ಬಸ್ ಅಲುಗಾಡುತ್ತಾ ಇರುವಾಗಲೋ ಅಥವಾ ನಿದ್ದೆ ಬಂದ ಕಾರಣವೋ ಈ ಬ್ಯಾಗ್ ಆತನ ತೊಡೆಯ ಮೇಲೇ ಬಂದು ಕೂತಿದೆ. ಆತ ಪ್ರತಿಭಟಿಸಿದ.  "ನೀವು ಬ್ಯಾಗ್ ತೆಗೆದು ಕೆಳಕ್ಕಿಡಿ,ಇಲ್ಲಿ ನೀವು ಅರ್ಧಕ್ಕಿಂತ ಹೆಚ್ಚು ಸೀಟ್ ಆಕ್ರಮಿಸಿಕೊಂಡಿದ್ದೀರಿ."  "ಇಲ್ಲ, ನಾನು ಬ್ಯಾಗ್ ತೆಗೆದಿಡುವುದು  ಸಾಧ್ಯವಿಲ್ಲ. ನಾನು ಹೆಂಗಸು. ನಿಮ್ಮ ಪಕ್ಕ ಹಾಗೆ ನಾನು ಕೂತುಕೊಳ್ಳುವುದು ಸಾಧ್ಯವಿಲ್ಲ." "ನೀವೇನು ಈ ಸೀಟ್ ರಿಸರ್ವ್ ಮಾಡಿಸಿದ್ದೀರಾ?" "ನೀವು ಮಾಡಿಸಿದ್ದೀರಾ?" ಆತನಿಗೆ ಸಿಟ್ಟು ಬಂತು. ಮೇಲೆದ್ದು "ಡಿಸ್ಗಸ್ಟಿಂಗ್" ಎಂದು ಬೈದ. "ನೀನು ಡಿಸ್ಗಸ್ಟಿಂಗ್!" ಎಂದು ಆಕೆ ಜೋರು ಧ್ವನಿಯಲ್ಲಿ ಕಿರುಚತೊಡಗಿದಳು. ಅವನ ಬಗ್ಗೆ, ಅವನ "ಸಂಸ್ಕೃತಿ" ಬಗ್ಗೆ, ಐ.ಟಿ. ಕೆಲಸಗಾರರ ಬಗ್ಗೆ, ಅವನ "ಕೊಳೆತ ಬುದ್ಧಿ" ಬಗ್ಗೆ ಕಿರುಚಾಡಿದಳು. ಕೊನೆಗೆ "ನಾನು ಪೊಲೀಸರಿಗೆ ಫೋನ್ ಮಾಡಿದರೆ ನೀನು ಕಂಬಿ ಎಣಿಸುತ್ತೀಯ!" ಎಂದು ಹೆದರಿಸಿದಳು. ಆತ "ಹೌದು, ನೀವು ಹೆಂಗಸು, ನಾನು ಗಂಡಸು, ಅಷ್ಟೇ ವ್ಯತ್ಯಾಸ" ಎಂದು ಮೇಲೆದ್ದು ಬೇರೆಲ್ಲೋ ಜಾಗ ಹುಡುಕಿಕೊಂಡು ಕುಳಿತುಕೊಂಡ.  ಸ

ಪಾತ್ರಗಳು

ಇಮೇಜ್
ಕಿರ್ದಾರ್ ಅಥವಾ "ಪಾತ್ರಗಳು" ಎಂಬ ಹಿಂದಿ/ಉರ್ದೂ ಕಥೆಗಳನ್ನು ಆಧರಿಸಿದ ದೂರದರ್ಶನ ಕಾರ್ಯಕ್ರಮವನ್ನು ಗುಲ್ಜಾರ್ ನಿರ್ದೇಶಿಸಿದ್ದಾರೆ. ಅಪರೂಪದ ಕಥೆಗಳನ್ನು ಅವರೇ ಆಯ್ದು ಚಿತ್ರಕಥೆ ಸಿದ್ಧಪಡಿಸಿ ನಿರ್ದೇಶಿಸಿದ್ದಾರೆ.  ಯೂ  ಟ್ಯೂಬ್ ಮಾಧ್ಯಮದಲ್ಲಿ  ಲಭ್ಯವಾಗಿವೆ. ಈ ಕಾರ್ಯಕ್ರಮದ ಆರಂಭದಲ್ಲಿ ಬಳಸಲಾದ ನಾಲ್ಕು ಸಾಲಿನ ಗೀತೆಯನ್ನು ಬರೆದವರೂ ಗುಲ್ಜಾರ್ ಅವರೇ.  ಅದನ್ನು ಮಧುರವಾಗಿ ಹಾಡಿದವರು ಜಗಜೀತ್ ಸಿಂಗ್. ಈ ಹಾಡು ಮತ್ತೆ ಮತ್ತೆ ಮೆಲಕುಹಾಕುವಂತಿದೆ.  ಮೂಲ ಹಿಂದಿ - ಗುಲ್ಜಾರ್  ಕನ್ನಡಕ್ಕೆ - ಸಿ ಪಿ  ರವಿಕುಮಾರ್  ಹಾದುಬರುವಾಗ  ಹಳೆಯ  ಹೊತ್ತಿಗೆಗಳ ಮೂಲಕ   ಎದುರಾಗುತ್ತವೆ  ಒಮ್ಮೆಲೇ ಪಾತ್ರಗಳು  ಕೆಲವು ಮುಖಾಮುಖಿಯಾಗುತ್ತಾರೆ ಕೈಬೀಸುತ್ತಾ  ಗತಕಾಲದ ಹೊಸ್ತಿಲಲ್ಲಿ ನಿಂತಿರುವ ಮಿತ್ರರು  ತೊರೆದು ಬಂದಿದ್ದೆವಲ್ಲ  ಹೃದಯದ ಬಂಜರು ನೆಲವೆಂದು ಅದೇ ಜಾಗದಲ್ಲಿ ಇಂದು  ಪಾಳುನಗರದ ನಡುವೆ ಗೋಚರಿಸುತ್ತವೆ   ಆಸರೆ ನೀಡುವ ಬಳ್ಳಿ ಒಂದೊಂದು 

ಒಂದು ಗಾಯನ ಕಚೇರಿ

ಇಮೇಜ್
ಸಿ ಪಿ ರವಿಕುಮಾರ್  ಇ ವತ್ತು ಬೆಳಗ್ಗೆ ಒಂದು ಬಹಳ ಒಳ್ಳೆಯ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಇದಕ್ಕೆ ನನ್ನನ್ನು ಆಹ್ವಾನಿಸಿದವರು ನಮ್ಮ ಮೇಷ್ಟ್ರು ಕ.ನಂ. ನಾಗರಾಜು. ತಮ್ಮ ಮನೆಯಲ್ಲಿ ಈ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು. ನನ್ನ ಮೇಲೆ ಅವರು ಇಟ್ಟುಕೊಂಡಿರುವ ವಿಶ್ವಾಸಕ್ಕೆ ನಾನು ಋಣಿ.  ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಗಂಧವೇ ಇಲ್ಲದ ನಾನು ಕಾರ್ಯಕ್ರಮಕ್ಕೆ ಹೋದಾಗ ಹೆಚ್ಚಿನ ಅಪೇಕ್ಷೆಗಳನ್ನು ಇಟ್ಟುಕೊಂಡಿರಲಿಲ್ಲ. ಗಾಯಕರಾದ ಪಂಡಿತ  ವೆಂಕಟೇಶಕುಮಾರ್  ಅವರು ತಮ್ಮ ಮೊದಲ ಪ್ರಸ್ತುತಿಯಲ್ಲೇ ನನ್ನಂಥ ಪಾಮರರ ಮನಸ್ಸನ್ನೂ ಸೆಳೆದರು.  ಮೊದಲ ಎರಡು ಪ್ರಸ್ತುತಿಗಳು ಹಿಂದಿ ಭಾಷೆಯಲ್ಲಿದ್ದವು; ಅನಂತರ ಅವರು ವಚನ ಮತ್ತು ದಾಸರ ಪದಗಳನ್ನು ಹಾಡಿದರು. ಅವರು ಹಾಡಿದ ರಾಗ/ತಾಳ ಇವುಗಳ ವಿಷಯದಲ್ಲಿ ನನಗೆ ಇರುವ ಜ್ಞಾನ ಶೂನ್ಯ.  ಆದರೆ ಅವರು ಹಾಡಿದ ರೀತಿ ಮನಸ್ಸನ್ನು ಸೆಳೆಯಿತು. ಮೊದಲ ಪ್ರಸ್ತುತಿ ದೇವರಲ್ಲಿ ಆತ್ಮ ನಿವೇದನೆ. ಹಿಂದೆ ಕೆಲವು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಚೇರಿಗಳಿಗೆ ಹೋದಾಗ ಅಲ್ಲಿ ಆಲಾಪಗಳೇ ಹೆಚ್ಚಾಗಿ ಇದ್ದಿದ್ದರಿಂದ ನನಗೆ ಅಷ್ಟೇನೂ ಅರ್ಥವಾಗಿರಲಿಲ್ಲ. ಎಲ್ಲೋ ಕೊನೆಯಲ್ಲಿ ಸಾಹಿತ್ಯ ಬಂದು ಹೋಯಿತು ಎನ್ನುವಹಾಗಿತ್ತು.  ಆದರೆ ಪಂಡಿತ ವೆಂಕಟೇಶಕುಮಾರ್  ಅವರ ಗಾಯನದಲ್ಲಿ ಸಾಹಿತ್ಯಕ್ಕೆ ಸಂಗೀತದಷ್ಟೇ ಪಾಲು.  ಸಾಹಿತ್ಯವನ್ನು ಮನಸಾರ ಅನುಭವಿಸಿ ಅವರು ಹಾಡುತ್ತಿದ್ದದ್ದು ಕಾಣುತ್ತಿತ್ತು.

ನಾಳೆಯೋ ಇಂದಿಗೋ ಕುಸಿವ ಗೋಡೆ

ಇಮೇಜ್
ಮೂಲ ಗಜಲ್ - ಮಜರೂಹ್ ಸುಲ್ತಾನ್ ಪುರಿ ಕನ್ನಡಕ್ಕೆ - ಸಿ ಪಿ ರವಿಕುಮಾರ್ ಈ ಗಜಲ್  "ಮಮತಾ" ಎಂಬ ಹಿಂದಿ ಚಿತ್ರಕ್ಕಾಗಿ ಕವಿ ಮಜರೂಹ್ ಸುಲ್ತಾನ್ ಪುರಿ ಬರೆದಿದ್ದು. ರೋಶನ್ ಅವರ ಸಂಗೀತ ನಿರ್ದೇಶನದಲ್ಲಿ ಇದನ್ನು ಲತಾ ಮಂಗೇಶ್ಕರ್ ಅಮೋಘವಾಗಿ ಹಾಡಿದ್ದಾರೆ. ಈ ಹಾಡಿನಲ್ಲಿ ಒಬ್ಬ ಹೆಣ್ಣಿನ ನೋವಿದೆ. ಒಮ್ಮೆ ಅವಳನ್ನು ಪ್ರೇಮಿಸಿದವನು ವಿದೇಶಕ್ಕೆ ತೆರಳಿದ ಮೇಲೆ ಅವರ ನಡುವೆ ಸಂಪರ್ಕ ಕಡಿದುಹೋಗುತ್ತದೆ.  ಬಡತನ ತಾಳಲಾರದೆ ಅವಳ ಅಪ್ಪ ಅವಳನ್ನು ಬೇರೆ ಯಾರಿಗೋ ಮದುವೆ ಮಾಡಿ ತನ್ನ ಜವಾಬ್ದಾರಿ ತೊಳೆದುಕೊಂಡಿದ್ದಾನೆ. ಆದರೆ ಇವಳನ್ನು ಮದುವೆಯಾದವನು ಮದ್ಯವ್ಯಸನ ಉಳ್ಳ ಸಮಾಜಘಾತಕ. ಇವನ ಕಾಟ ತಡೆಯಲಾರದೆ ಅವಳು ಓಡಿಹೋಗುತ್ತಾಳೆ.  ಕೊನೆಗೆ ಅವಳು ವೇಶ್ಯೆಯಾಗಿ ಬದುಕಬೇಕಾಗುತ್ತದೆ. ಅವಳನ್ನು ಅರಸುತ್ತಾ ಹಿಂದಿರುಗಿದ ಅವಳ ಪ್ರಿಯಕರನಿಗೆ ಅವಳ ಪಾಡು ಹೀಗಾಗಿದೆ ಎಂದು ಗೊತ್ತಿಲ್ಲ. ಇಂಥ ಸಂದರ್ಭದಲ್ಲಿ ಬಳಸಿಕೊಂಡ ಈ ಹಾಡನ್ನು ತೆರೆಯ ಮೇಲೆ ಹಾಡಿ ಅಭಿನಯಿಸಿದವರು ಸುಚಿತ್ರಾ ಸೇನ್. ಹಾಡನ್ನು ನೀವು ಇಲ್ಲಿ ಕೇಳಬಹುದು .  "ನಾಗರಹಾವು" ಚಿತ್ರದ ಒಂದು ಹಾಡು ನಿಮಗೆ ನೆನಪಾಗಬಹುದು. ಜೀವಿಸುತ್ತಿದ್ದೆವೋ ನಾವು ಯಾರ ಹೃದಯದಲ್ಲಿ ಜೀವಕ್ಕೂ ಹೆಚ್ಚು ಪ್ರಿಯರಂತೆ ಒಮ್ಮೆ  ಇಂದು ಕುಳಿತಿದ್ದೇವೆ ಅವರದ್ದೇ ಓಣಿಗಳಲ್ಲಿ  ಅಪರಾಧ ಯಾವುದೋ ಮಾಡಿದವರಂತೆ  ನಿನ್ನ ನೋವಿನ ಮೇಲೆ ಅರ್ಧ ಅಧಿಕಾರವಿದೆ ಎಂದವರು,ಮಾತಾಡಿಸಲಿಲ್ಲ ಒಮ್ಮೆಯೂ ಬಂದು  

ಬೇಕಾಗಿದೆ - ಸಾಹಿತ್ಯದ ಪುನರಾವಲೋಕನ

ಇಮೇಜ್
ಸಿ ಪಿ ರವಿಕುಮಾರ್  ನನ್ನ ಮಿತ್ರರೊಬ್ಬರು ಇಂದು ಹಂಚಿಕೊಂಡ ಬ್ಲಾಗ್ ಬರಹ ವನ್ನು ಓದಿದ ನಂತರ ಇದನ್ನು ಬರೆಯಬೇಕು ಎನ್ನಿಸುತ್ತಿದೆ. ಬರೆಯುವ ಮುನ್ನ ಈ ಬರಹದ ಲೇಖಕ (ರೋಹಿತ್ ಚಕ್ರತೀರ್ಥ) ಅವರು ನನಗೆ ಪರಿಚಿತರಲ್ಲ ಎಂದು ಮೊದಲೇ ಹೇಳಿಬಿಡುತ್ತೇನೆ.   ಅವರ ಲೇಖನವನ್ನು ನಾನು ಪೂರ್ವಾಗ್ರಹವಿಲ್ಲದೆ ಓದಿದ್ದೇನೆ. "ಬುದ್ಧಿಜೀವಿ"ಗಳ ಬಗ್ಗೆ ಅವರ ಸಿಟ್ಟು ನನಗೆ ಅರ್ಥವಾಗುತ್ತದೆ. ಅವರ ಸಿಟ್ಟನ್ನು ನಾವು ಇನ್ನೊಂದು ಬಗೆಯಲ್ಲಿ ಅರ್ಥ ಮಾಡಿಕೊಳ್ಳಬಹುದು - ಈಚಿನ ದಿನಗಳಲ್ಲಿ ಯಾವ ಮೂಲಾಧಾರವೂ ಇಲ್ಲದೇ ಏನನ್ನು ಬೇಕಾದರೂ ಮಾರಬಹುದು ಎಂಬ ಕಲ್ಪನೆ ಗಟ್ಟಿಯಾಗಿಹೋಗಿದೆ. ಜೋರಾಗಿ ಕಿರುಚಾಡಿದರೆ ನಂಬದವನ ಮನಸ್ಸಿನಲ್ಲೂ ಸಂಶಯ ಬಿತ್ತಬಹುದೆಂಬುದರ ಮೇಲೆ ಮಾರ್ಕೆಟಿಂಗ್ ಸಂಸ್ಕೃತಿ ನಿಂತಿದೆ. ಇದನ್ನು ಬ್ರೇನ್ ವಾಷಿಂಗ್ ಎಂದು ಕೂಡಾ ಕರೆಯುತ್ತಾರೆ. ಪ್ರತಿದಿನವೂ ನಮ್ಮ ಮಸ್ತಿಷ್ಕವನ್ನು ತೊಳೆಯುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆಧಾರವಿಲ್ಲದೆ ಸಮಾಜದಲ್ಲಿ ಒಂದು ಜನಾಂಗದ ಮೇಲೆ ಗೂಬೆ ಕೂಡಿಸುವ  ಪ್ರಯತ್ನಗಳು ಇತಿಹಾಸದ ಉದ್ದಕ್ಕೂ ನಡೆದಿವೆ ಮತ್ತು ಇಂದಿಗೂ ನಡೆಯುತ್ತಿವೆ.  ಸಾಮಾಜಿಕ ತಾಣಗಳಲ್ಲಿ ಒಂದು ರಾಜಕೀಯ ಪಕ್ಷದವರು ಇನ್ನೊಂದನ್ನು ಕೀಳಾಗಿ ತೋರಿಸಲು ಅದೆಷ್ಟು ಬಗೆಯ ಮೀಮ್ ಗಳನ್ನು ಪ್ರತಿನಿತ್ಯ ತೇಲಿ ಬಿಡುತ್ತಾರೆ!  ಅದೆಷ್ಟು ಟ್ವೀಟ್ ಗಳು, ಅದೆಷ್ಟು ಕಾಮೆಂಟುಗಳು! ಜನಾಂಗೀಯ ದ್ವೇಷಗಳು ಒಂದೇ ಎರಡೇ? ಉತ್ತರ-ದಕ್ಷಿಣ ಭಾರತೀಯರ ನಡುವೆ, ಹ

ರೊಟ್ಟಿ ಮತ್ತು ಸ್ವಾತಂತ್ರ್ಯ

ಇಮೇಜ್
ರಾಮಧಾರಿ ಸಿಂಗ್ ದಿನಕರ್ ಹಿಂದಿಯ ಬಹಳ ಮುಖ್ಯ ಕವಿ.  ಸ್ವಾತಂತ್ರ್ಯ ಹೋರಾಟದಲ್ಲಿ ಸ್ವತಃ ಪಾಲ್ಗೊಂಡವರು. ಸ್ವಾತ್ಯಂತ್ರ್ಯ ಬಂದ ಹೊಸ್ತಿಲಲ್ಲಿ ಇವರು ಬರೆದ ಕವಿತೆ ಇಂದಿಗೂ ಪ್ರಸ್ತುತವಾಗಿದೆ. ಸ್ವಾತಂತ್ರ್ಯದಿನದಂದು ನಾವು ಕಲಿಯಬೇಕಾದ ಮುಖ್ಯಪಾಠವನ್ನು ಅವರು ಎಷ್ಟು ಚೆನ್ನಾಗಿ ಕವಿತೆಯ ರೂಪದಲ್ಲಿ ಹೇಳಿದ್ದಾರೆ, ನೋಡಿ.  "ಹಸಿವು ತಾಳಿಕೋ, ನಿನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಡ" ಎಂದು ಹೇಳುವವರು ಈಗ ಇಲ್ಲವೇ ಇಲ್ಲ.  ನಾನಾ ಬಗೆಯ ಹಸಿವುಗಳಿಗೆ ಶರಣಾಗುತ್ತಿರುವ ಇಂದಿನ ಸಮಾಜವನ್ನು ಈ ಕವಿತೆ ಎಚ್ಚರಿಸುತ್ತದೆ.   ಮೂಲ ಹಿಂದಿ ಕವಿತೆ : ರಾಮಧಾರಿ ಸಿಂಗ್ ದಿನಕರ್  ಕನ್ನಡ ಅನುವಾದ : ಸಿ ಪಿ ರವಿಕುಮಾರ್  ಸ್ವಾತಂತ್ರ್ಯವೇನೋ ಸಿಕ್ಕಿತು, ಆದರೆ ಸ್ಥಿರವಾಗಿರುವುದೇ ಈ ಗೌರವ? ಮಾರಿ ತಿಂದುಬಿಡುವಿಯೋ ಹೇಗೆ, ಹಸಿವೆಯಲ್ಲಿ ಸಾಯುತ್ತಿರುವ ಭಾರತೀಯ? ಸ್ವಾತಂತ್ರ್ಯವು ರೊಟ್ಟಿಯಲ್ಲ, ಇವೆರಡೂ ಶತ್ರುಗಳೂ ಅಲ್ಲ, ಹಸಿವೇ ದೊಡ್ಡದಾದರೆ ಮಾತ್ರ ಸ್ವಾತ್ರಂತ್ರ್ಯಕ್ಕೆ ಉಳಿಗಾಲವಿಲ್ಲ  ಸ್ವಾತ್ರಂತ್ರ್ಯ ದ್ರೋಹಿಗಳು ಎದ್ದು ನಿಲ್ಲುತ್ತಿದ್ದಾರೆ  ನಾಲ್ಕೂ ಕಡೆ ರೊಟ್ಟಿ ತೋರಿಸಿ ಪಶುಗಳನ್ನು  ಅಟ್ಟಿಕೊಂಡೊಯ್ಯುವುದು ಇವರ ನಡೆ. ಎಷ್ಟು ದಿನ ಸಹಿಸುವನು ಹಸಿದು ಕಂಗಾಲಾದವನು ಇವರ ಮಾಯೆ? ಹೊಟ್ಟೆಯ ಬೆಂಕಿಗೆ ಸಿಕ್ಕಿದ ಮಾನವ ಸುಟ್ಟುಹೋಗದೇ ಇರುವನೆ?   ಕೊಡಬಲ್ಲೆಯಾ ಬಲಿದಾನ? ಸಹಿಸಿಕೊಳ್ಳುವೆಯೇನು ಹಸಿವೆಯ ಪೆಟ್ಟು? ಹುಲ್ಲಿನರೊಟ್ಟಿ ಕ

ಕವಿತೆ

ಇಮೇಜ್
ಹಿಂದಿ ಮೂಲ :  ಅಂಜನಾ ಬಕ್ಷಿ  ಕನ್ನಡಕ್ಕೆ : ಸಿ ಪಿ ರವಿಕುಮಾರ್  ಕವಿತೆ ನನ್ನನ್ನು ಬರೆಯುತ್ತದೋ  ನಾನು ಕವಿತೆಯನ್ನೋ  ತಿಳಿಯುತ್ತಿಲ್ಲ  ಒಳಗಿನ ತುಮುಲವು ಕುದ್ದು ಹೊರಬಂದಾಗ  ಕವಿತೆ ಮೂಡಿಸುತ್ತದೆ    ಶಬ್ದಗಳನ್ನು ಮತ್ತು ಶಬ್ದಗಳಿಂದ ಹೊರಸೂಸುತ್ತದೆ ಕವಿತೆ  ಹೇಗೆ ಕಟ್ಟೆಯಿಂದ ಸಂಸತ್ತಿನವರೆಗೂ  ಮೂಡುತ್ತವೋ ಪಾಪದ  ಅಸಂಖ್ಯ   ಕತೆಗಳು  ಹಾಗೇ  ಮುಷ್ಟಿ ತುಂಬ ಶಬ್ದಗಳು  ಹೊಮ್ಮಿಸುತ್ತವೆ ಕಾಗದದ ಮೇಲೆ  ಎಣಿಕೆ ಮೀರಿದಷ್ಟು ಕವಿತೆಗಳನ್ನು  ಈ ಕವಿತೆಗಳಲ್ಲಿ ಮೈದಳೆದ  ಅಕ್ಷರಗಳು  ಚೂಪಾಗಿ, ಉರುಟಾಗಿ, ಓರೆಕೋರೆಯಾಗಿವೆ  ನೇರವಾಗಿ, ಚಪ್ಪಟೆಯಾಗಿ, ಸಹಜವಾದ  ಅಕ್ಷರಮಾಲೆಯಂತಲ್ಲ 

ವಿಲಕ್ಷಣವಾಗಿತ್ತು ಆ ಸಂಜೆ

ಇಮೇಜ್
ಖಾಮೋಶಿ ಚಿತ್ರಕ್ಕಾಗಿ ಗುಲ್ಜಾರ್ ಅವರು ಬರೆದ  ಈ ಗೀತೆಯನ್ನು ಹೇಮಂತ್ ಕುಮಾರ್ ಅವರ ಸಂಗೀತ ನಿರ್ದೇಶನದಲ್ಲಿ ಕಿಶೋರ್ ಕುಮಾರ್  ಹಾಡಿದ್ದಾರೆ. ಈ ಗೀತೆ ಎಪ್ಪತ್ತು-ಎಂಬತ್ತರ ದಶಕದಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು.  ಈ ಚಿತ್ರದ ನಾಯಕನಿಗೆ ಪ್ರೇಮದಲ್ಲಿ ನಿರಾಸೆಯುಂಟಾಗಿ ಅವನು ಮತಿಭ್ರಮಣೆಗೆ ತುತ್ತಾಗಿದ್ದಾನೆ (ಅಭಿನಯ - ರಾಜೇಶ್ ಖನ್ನಾ). ಅವನನ್ನು ಪ್ರೀತಿಸಿದಂತೆ ನಟಿಸಿ ಅವನ ಮನಸ್ಸಿಗೆ ಚಿಕಿತ್ಸೆ ನೀಡಲು ಒಬ್ಬ ನರ್ಸ್ ಗೊತ್ತುಮಾಡುತ್ತಾರೆ (ಅಭಿನಯ - ವಹೀದಾ ರಹಮಾನ್). ಇವಳನ್ನು ತನ್ನ ಪ್ರೇಮಿಕೆಯೆಂದೇ ನಾಯಕ ಭ್ರಮಿಸುತ್ತಾನೆ. ಈ ಗೀತೆಯಲ್ಲಿ ನಾಯಕನ ಮನಸ್ಸಿನ ಕಳವಳವನ್ನು ಕಾಣಬಹುದು. ಹಿಂದಿನ ಯಾವುದೋ ನೆನಪು ಅವನನ್ನು ಕಾಡುತ್ತಿದೆ. ತಾನು ಪ್ರೇಮಿಸಿದವಳೂ ತನ್ನನ್ನು ಅಷ್ಟೇ ಪ್ರೀತಿಸುತ್ತಾಳೆ ಎಂದು ನಾಯಕ ಭ್ರಮಿಸಿದ್ದಾನೆ. ಆದರೆ ಆಕೆಯ ನಗೆಯಲ್ಲಿ ಅವನಿಗೆ ಏನೋ ವ್ಯಂಗ್ಯದ ಛಾಯೆ ಕಾಣುತ್ತದೆ. ಅವನ ಮನಸ್ಸು ಕುಸಿಯುತ್ತದೆ. ಅಷ್ಟರಲ್ಲಿ ಈಗ ತನ್ನೊಂದಿಗೆ ಇರುವವಳನ್ನು ಕಂಡು ಅವನು ಮತ್ತೆ ಸಾಂತ್ವನ ಹೇಳಿಕೊಳ್ಳುತ್ತಾನೆ - ತನ್ನ ನಾಯಿಕೆ ಇನ್ನೆಲ್ಲೂ ಹೋಗಿಲ್ಲ, ತನ್ನ ಬಳಿಯಲ್ಲೇ ಇದ್ದಾಳೆ! ಅವಳಿನ್ನೂ ತನ್ನನ್ನು ಪ್ರೀತಿಸುತ್ತಾಳೆ ಎಂದು ನಾಯಕ ಸಮಾಧಾನ ಪಟ್ಟುಕೊಳ್ಳುತ್ತಾನೆ.  ಕಿಶೋರ್ ಕುಮಾರ್-ಗುಲ್ಜಾರ್-ಹೇಮಂತ್ ಕುಮಾರ್ ಅವರ ಸಂಗಮ ಈ ಗೀತೆಗೆ ವಿಶೇಷ ಮೆರುಗು ತಂದುಕೊಟ್ಟಿದೆ.  ಮೂಲ ಕವಿತೆ - ಗುಲ್ಜಾರ್  ಕನ್ನಡಕ್ಕೆ - ಸಿ ಪಿ ರವಿ

ಅಂಗೈಮೇಲೆ ಮುಳ್ಳಿನಗಿಡ ಬೆಳೆಸಿಕೊಳ್ಳುವ ಮೊದಲು

ಇಮೇಜ್
ಮೂಲ ಹಿಂದಿ ಗಜಲ್ - ಅಭಿನವ್ ಅರುಣ್  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಅಂಗೈಮೇಲೆ ಮುಳ್ಳಿನಗಿಡ ಬೆಳೆಸಿಕೊಳ್ಳುವ ಮೊದಲು ಸ್ವಲ್ಪ ಯೋಚಿಸು ಸಿಡಿಮಿಡಿಗೊಳ್ಳುವ ಮೊದಲು ಗೊತ್ತಿಲ್ಲದೇ ಏನು ಪ್ರೇಮಪಾಶದ ಪರಿಣಾಮ? ಎಚ್ಚೆತ್ತುಕೋ ಜಾರಿ ಪೆಟ್ಟಾಗುವ ಮೊದಲು ಹತ್ತಿಕೊಂಡಿದೆ ಎಲ್ಲರಿಗೂ ರಾಜಕಾರಣದ ರಂಗು ತಬ್ಬಿಕೊಳ್ಳುವರು ಹೃದಯಗಳ ಮಿಲನಕ್ಕೂ ಮೊದಲು ನಿನ್ನ ಆತ್ಮದೊಳಕ್ಕೆ ನೀನೇ ಹಾಕೊಮ್ಮೆ ಇಣುಕು ಮಿತ್ರನನ್ನು ಒರೆಗೆ ಹಚ್ಚಿ ನೋಡುವ ಮೊದಲು ಬೀಸುಗಾಳಿಯ ಹರಿವು ಯಾವ ಕಡೆಗಿದೆ ಎಂದು  ನೋಡಿಕೊಳ್ಳುವುದೊಳಿತು ಗಾಳಿಪಟದಾಟಕ್ಕೆ ಮೊದಲು ಎಸೆದು ಬಿಡು ಮನೆಯೊಳಗಿನ ಪಂಜರಗಳನ್ನು ಹಕ್ಕಿಗಳಿಗೆ ಕಾಳು ಹಾಕುವ ಮೊದಲು ತಿಳಿಯಬೇಕಾಗಿಲ್ಲ ಆಕಾಶದ ಎತ್ತರ ರೆಕ್ಕೆಗಳು ಇನ್ನೂ ಬಲಿಯುವ ಮೊದಲು ಹೇಳಿಕೊಡು ನೀತಿಪಾಠದ ಒಂದೆರಡು ಕತೆಗಳು ಹಲಗೆ ಬಳಪ ಹಿಡಿದು ಅಕ್ಷರ ತಿದ್ದಿಸುವ ಮೊದಲು

ಕಳೆದು ಹೋದ ದಿನಗಳು

ಇಮೇಜ್
ಕಿಶೋರ್ ಕುಮಾರ್ ಅವರು ಹಾಡಿರುವ ಈ ಗ್ತೀತೆಯಲ್ಲಿ ವಿಷಾದದ ಧ್ವನಿ ಇದೆ. ಈ ಗೀತೆಯನ್ನು ಬರೆದವರು ಹಿಂದಿ ಕವಿ ಶೈಲೇಂದ್ರ. ಈ ಪ್ರಶ್ನೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಒಂದಲ್ಲಾ ಒಂದು ಸಲ ಖಂಡಿತ ಕೇಳಿಕೊಳ್ಳುತ್ತಾರೆ. ಎಲ್ಲಿ ಹೋದವು ನಮ್ಮ ಮಧುರ ದಿನಗಳು? ಬಾಲ್ಯದಲ್ಲಿ ಒಡನಾಡಿಗಳಾಗಿದ್ದವರು ಎಲ್ಲಿ ಹೊರಟುಹೋದರು? ನಿರಾತಂಕದ ಕ್ಷಣಗಳು ಎಲ್ಲಿ ಮಾಯವಾದವು? \ಯಾವುದೋ ಮರೀಚಿಕೆಯನ್ನು ಹುಡುಕುವ ಉತ್ಸಾಹದಲ್ಲಿ ಇದ್ದುದನ್ನೇ ನಾವು ಕಳೆದುಕೊಂಡೆವಲ್ಲ!   ಎಲ್ಲವೂ ದೊರೆತರೂ ಎಲ್ಲವನ್ನೂ ಕಳೆದುಕೊಂಡೆವಲ್ಲ! ಮೂಲ ಹಿಂದಿ ಗೀತೆ - ಶೈಲೇಂದ್ರ ಕನ್ನಡ ಅನುವಾದ - ಸಿ ಪಿ ರವಿಕುಮಾರ್ ಮುಗ್ಧ ಮನೋಹರ ದಿನಗಳು, ಕಳೆದುಹೋದ ಆಸರೆಗಳು, ಅಯ್ಯೋ ಎಲ್ಲಿ ಹೋದವು ಆ ದಿನಗಳು! ನನ್ನ ಕಣ್ಣ ದೀಪಗಳು, ಒಂಟಿರಾತ್ರಿಗಳ ತಾರೆಗಳು, ಅಯ್ಯೋ ಎಲ್ಲಿ ಕಳೆದು ಹೋದವು! ಹಿಂತಿರುಗಿಸಿ ಯಾರಾದರೂ  ನಾನು ಕಳೆದುಹೋದ ದಿನಗಳು! ಕಳೆದು ಹೋದ ದಿನಗಳು, ಮಧುರ ಮಧುರ ಕ್ಷಣಗಳು! ನನ್ನ ಕನಸಿನ ಮಹಲು, ನನ್ನ ಸ್ವಪ್ನದ ನಗರ, ಬಾಳಿನ ಕಹಿ ಸಹಿಸಿದೆ  ಬರಿ  ಇವುಗಳಿಗಾಗಿ! ಎಲ್ಲಿ ಹುಡುಕಲಿ ಇಂದು? ಎಲ್ಲಿ ಕಳೆದುಕೊಂಡೆ ನಾನು! ನನ್ನ ಕ್ಷಣಗಳು ನನಗೆ ಕೊಟ್ಟುಬಿಡಿ ಮರಳಿ! ಒಬ್ಬಂಟಿಯಾಗಿರಲಿಲ್ಲ, ಇದ್ದರು ಜೊತೆಗಾರರು ಎಷ್ಟೋ - ಇದ್ದುದೆಲ್ಲಾ ಕೊಂಡು ಹೋಯ್ತು ಬಿರುಗಾಳಿ! ಹಿಂದೊಮ್ಮೆ ಹಾಗಿತ್ತು, ನನ್ನ ಜಗತ್ತು ನನ್ನದೇ ಆಗಿತ್ತು! ನನ್ನ ಕ್ಷಣಗಳು ನನಗೆ ಕೊಟ್ಟುಬಿಡ