ಪೋಸ್ಟ್‌ಗಳು

ಮಾರ್ಚ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಡುರಾತ್ರಿಯ ಪರಿಚಯ

ಇಮೇಜ್
ಕವಿತೆ ಓದುವ ಮುನ್ನ: ರಾಬರ್ಟ್ ಫ್ರಾಸ್ಟ್ ಒಬ್ಬ ಪ್ರಮುಖ ಅಮೆರಿಕನ್ ಕವಿ.  ಈ ಸಾನೆಟ್ಟಿನಲ್ಲಿ ಅವನು ಒಂದು ಘಟನೆಯ ಚಿತ್ರಣವನ್ನು ನೀಡಿದ್ದಾನೆ. ಘಟನೆಯ ವಿವರಗಳು ಸ್ಪಷ್ಟವಾಗಿಲ್ಲ. ಮಳೆ ಬೀಳುತ್ತಿರುವ ಒಂದು ರಾತ್ರಿ. ಯಾವುದೋ ಕಾರಣಕ್ಕಾಗಿ ನಾಯಕ ಮನೆಯಿಂದ ಹೊರಗೆ ಹೊರಟು ಬಂದಿದ್ದಾನೆ.  ಮನೆಯಲ್ಲಿ ನಡೆದ ಯಾವುದೋ ಅಹಿತಕರ ಘಟನೆಯಿಂದ ಅವನ ಮನಸ್ಸು ಪ್ರಕ್ಷುಬ್ಧವಾಗಿರಬಹುದು. ಹೀಗೆ ಹೊರಟುಬಂದವನು ಬಹಳ ದೂರದವರೆಗೂ ಮಳೆಯಲ್ಲೇ ನಡೆದು ನಗರದ ತುದಿಯವರೆಗೂ ಹೋಗಿನಿಂತಿದ್ದಾನೆ. ಕಾವಲುಗಾರ ಇವನನ್ನು ಅನುಮಾನದ ದೃಷ್ಟಿಯಿಂದ ನೋಡಿದಾಗ ಸರೀಕನಾದ ಇವನಿಗೆ ಏನೂ ತೋಚದೆ ಮುಖ ಕೆಳಗೆ ಹಾಕಿದ್ದಾನೆ. ತನ್ನ ಹೆಜ್ಜೆಯ ಸಪ್ಪಳ ತನಗೇ ಅಸಹನೀಯವೆನ್ನಿಸಿ ಸ್ವಲ್ಪಹೊತ್ತು ಸುಮ್ಮನೆ ನಿಂತುಬಿಡುತ್ತಾನೆ.   ನಗರದ ಅತ್ಯಂತ ದುಃಖದ ಬೀದಿಗಳ ಮೂಲಕ ಹಾದುಹೋಗುವಾಗ ಅವನಿಗೆ ತನ್ನ ದುಃಖ ಅಂಥ ದೊಡ್ಡದೇನೂ ಅಲ್ಲ ಎನ್ನಿಸಿರಬಹುದು. ದೂರದಲ್ಲೆಲ್ಲೋ ಅವನಿಗೆ ಒಂದು ಕರೆ ಕೇಳುತ್ತದೆ. ಅವನಿಗೆ ವಿದಾಯ ಹೇಳಲು ಹೊರಟ ಕರೆಯಲ್ಲ; ಅವನನ್ನು ಮರಳಿ ಬಾ ಎಂದು ಕೂಗುವ ಕರೆಯೂ ಅಲ್ಲ. ದೂರದಲ್ಲಿ ಅವನಿಗೆ ಗಡಿಯಾರದ ಗೋಪುರ ಕಾಣುತ್ತದೆ. ಬಹುಶಃ ಅವನಿಗೆ ಕೇಳಿದ ಕರೆಯು ಈ ಗಡಿಯಾರದ ಗಂಟೆಯೇ ಇದ್ದರೂ ಇರಬಹುದು. "ಮನೆಗೆ ಮರಳು" ಎಂದು ಅದು ಹೇಳುತ್ತಿದೆಯೇ? "ಇಲ್ಲ, ಹೊರಡು" ಎಂದು ಅದು ಹೇಳುತ್ತಿದೆಯೇ? ಇದು ಯಾವುದೂ ಅಲ್ಲ. ಸರಿಯಾದ ಕಾಲ ಎನ್ನುವುದು ತನ್ನ ಮನ

ಚಳಿಗಾಲದ ದಿನಗಳು

ಇಮೇಜ್
ರಾಬರ್ಟ್ ಹೇಡೆನ್ (೧೯೧೩-೧೯೮೦) ಒಬ್ಬ ಅಮೆರಿಕನ್ ಕವಿ. ಇವನ ನಿಜವಾದ ತಂದೆ-ತಾಯಿ ರೂತ್ ಮತ್ತು ಆಸಾ ಷೆಫೀ ಎಂಬುವವರು. ಆದರೆ ನೆರೆಯ ಹೇಡೆನ್ ದಂಪತಿಗಳು ಅವನನ್ನು ದತ್ತುಪುತ್ರನಂತೆ ಬೆಳೆಸಿದರು. ಅವನು ಬೆಳೆದಿದ್ದು ಮಿಷಿಗನ್ ರಾಜ್ಯದ ಒಂದು ಘೆಟ್ಟೋದಲ್ಲಿ  (ತೀರಾ ಬಡವರು ವಾಸಿಸುವ ಪ್ರದೇಶ). ಬಡತನದಲ್ಲಿ ಕಳೆದ ಅವನ ಬಾಲ್ಯದ ಕಹಿ ನೆನಪುಗಳು ಅವನನ್ನು ಜೀವನದ ಉದ್ದಕ್ಕೂ ಕಾಡಿದವು. ಹೆತ್ತ ತಾಯಿ ಮತ್ತು ಸಾಕುತಾಯಿಯರು ಇವನ ಪ್ರೀತಿಗಾಗಿ ನಡೆಸುತ್ತಿದ್ದ ಪೈಪೋಟಿ ಮತ್ತು ಸಾಕಿದ ಪೋಷಕರ ನಡುವೆ ಸದಾ ನಡೆಯುತ್ತಿದ್ದ ಜಗಳಗಳು  ಅವನ ಬಾಲ್ಯವನ್ನು ಅಸಹನೀಯವೆನ್ನಿಸಿದವು.  ಪ್ರಸ್ತುತ ಪದ್ಯದಲ್ಲಿ ಹೇಡೆನ್ ತನ್ನ ಬಾಲ್ಯದ ಒಂದು ಸಂದರ್ಭವನ್ನು ಕುರಿತು ಬರೆದಿದ್ದಾನೆ.  ಮೂಲ ಅಮೇರಿಕನ್ ಕವಿತೆ: ರಾಬರ್ಟ್ ಹೇಡೆನ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ರವಿವಾರವೂ ಕೂಡಾ ಅಪ್ಪ ಬೇಗನೇ ಎದ್ದು  ಕೊರೆಯುವ ನೀಲಿಗಪ್ಪು ಚಳಿಯಲ್ಲಿ ಬಟ್ಟೆ ಧರಿಸಿ ವಾರದ ಕಠಿಣ ದುಡಿಮೆಯಿಂದ ಅಲ್ಲಲ್ಲಿ  ಸೀಳಿದ ಅಂಗೈಗಳ ನೋವನ್ನು ಲೆಕ್ಕಿಸದೆ  ಸೌದೆ ಉರಿ ಹಾಕುತ್ತಿದ್ದ. ಯಾರೂ ಹೇಳುತ್ತಿರಲಿಲ್ಲ ಧನ್ಯವಾದ.   ಚಳಿ ಚಟಪಟ ಉರಿಯತೊಡಗಿದಾಗ ನನಗೆ ಎಚ್ಚರವಾಗುತ್ತಿತ್ತು.  ಕೋಣೆ ಬೆಚ್ಚಗಾದಾಗ ಅವನು ಕೂಗಿ ಕರೆಯುತ್ತಿದ್ದ.  ನಾನು ನಿಧಾನವಾಗಿ ಎದ್ದು ಬಟ್ಟೆ ಧರಿಸುವಾಗ ಅಳುಕುತ್ತಾ  ಎಂದಿನ ಕೋಪತಾಪಗಳನ್ನು  ಎದುರುನೋಡುತ್ತಿದ್ದೆ.  ಚಳಿ ಓಡಿಸಿ ನನ್ನ ಬೂಟುಗಳನ್

ಕಠಿಣ ಪ್ರೇಮದ ನಿಯಮ

ಇಮೇಜ್
ಮೂಲ ಉರ್ದೂ : ನಕ್ಷ್ ಲಾಲ್ ಪುರಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  "ರಸ್ಮೆ ಉಲ್ಫತ್ ಕೋ ನಿಭಾಯೇo ತೋ ನಿಭಾಯೇo ಕೈಸೇ" ಎಂದು ಪ್ರಾರಂಭವಾಗುವ ಈ ಗೀತೆಯ ರಚನೆ ನಕ್ಷ್ ಲಾಲ್ ಪುರಿ ಅವರದ್ದು. ಇದನ್ನು "ದಿಲ್ ಕೀ ರಾಹೇಂ" ಚಿತ್ರದಲ್ಲಿ ಬಳಸಲಾಗಿದೆ. ಮದನ್ ಮೋಹನ್ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್ ಹಾಡಿದ್ದಾರೆ. ಕಠಿಣ ಪ್ರೇಮದ ನಿಯಮ ಪಾಲಿಸುವುದಾದರೂ ಹೇಗೆ ಪಾಲಿಸಲಿ  ಸುತ್ತಲೂ ಹರಡಿರುವಾಗ ಬೆಂಕಿ ಸೆರಗನ್ನು ಹೇಗೆ ಕಾಪಾಡಲಿ? ಎಬ್ಬಿಸುತ್ತಾರಲ್ಲ ಜನರು ಹೃದಯದ ಹಾದಿಯಲ್ಲಿ  ಗೋಡೆಗಳನ್ನು ಉರುಳಿಸುವುದು ಹೇಗೆಂದು ಯಾರಾದರೂ ಹೇಳುವಿರೇನು? ಹಾಡುಗಳು ಸಾವಿರಾರಿವೆ ದುಃಖದಲ್ಲಿ ಅದ್ದಿದ್ದು, ಆದರೂ  ಮುರಿದ ಹೃದಯದ ವೀಣೆಯಲ್ಲಿ ನುಡಿಸುವುದದೆಂತು? ಎತ್ತಿಕೊಳ್ಳಬಹುದಾಗಿತ್ತು ಹೇಗೋ ದುಃಖಗಳ ಹೊರೆಯನ್ನಾದರೂ  ಬದುಕೇ ಹೊರೆಯಾದಾಗ ಮೇಲೆತ್ತಿ ಹೇಗೆ ನಡೆಯುವುದು?

ಸ್ನೇಹಕ್ಕೆ ಕೈಚಾಚುವ ಮುನ್ನ

ಇಮೇಜ್
ಮೂಲ ಉರ್ದು - ನಕ್ಷ್ ಲಾಲ್ ಪುರಿ ಕನ್ನಡಕ್ಕೆ - ಸಿ. ಪಿ. ರವಿಕುಮಾರ್   ಉಲ್ಫತ್ ಮೇ ಜಮಾನೇ ಕೀ ಹರ್ ರಸ್ಮ್ ಕೋ ಠುಕರಾಓ ... ಎಂದು ಪ್ರಾರಂಭವಾಗುವ ಈ ಗೀತೆಯನ್ನು ನಕ್ಷ್ ಲಾಲ್ ಪುರಿ ಅವರು ಬರೆದಿದ್ದಾರೆ. ಇದನ್ನು ಕಾಲ್ ಗರ್ಲ್ ಎಂಬ ಚಿತ್ರದಲ್ಲಿ ಬಳಸಲಾಗಿದೆ.  ಲತಾ ಮಂಗೇಶ್ಕರ್ ಈ ಗೀತೆಯನ್ನು ಹಾಡಿದ್ದಾರೆ. ಬಹಳ ಇಂಪಾದ ಈ ಹಾಡನ್ನು ನೀವು ಕೂಡಾ ಕೇಳಬಹುದು - ಯೂ ಟ್ಯೂಬಿನಲ್ಲಿ ಲಭ್ಯವಾಗಿದೆ ದೊಂದು ಗಂಭೀರವಾದ ಸನ್ನಿವೇಶ.  ಅನುರಕ್ತನಾಗಿ ತನ್ನತ್ತ ಬಂದವನಿಗೆ ಒಬ್ಬಳು ಹೆಣ್ಣು ಎಚ್ಚರಿಕೆ ನೀಡುತ್ತಿದ್ದಾಳೆ. ಅವಳ ಜೀವನದಲ್ಲಿ ಯಾವುದೋ ಕಪ್ಪು ನೆರಳಿದೆ. ಇದನ್ನು ಅರಿತೂ ತನ್ನ ಸ್ನೇಹ ಬೇಡಿ ಬಂದಿರುವ ಗಂಡನ್ನು ಕುರಿತು ಅವಳಿಗೆ ಸಹಜವಾಗಿ ಅನುಮಾನಗಳಿವೆ.  ಮುಂದಿರುವ ದಾರಿ ಸುಗಮವಾದದ್ದಲ್ಲ ಎಂದು ಅವಳಿಗೆ ಗೊತ್ತು. ಕಷ್ಟಗಳು ಬಂದಾಗ ತನ್ನನ್ನು ಇವನು ತೊರೆದು ಹೋದರೆ ಎಂಬ ಅಳುಕು ಕೂಡಾ ಅವಳನ್ನು ಕಾಡುತ್ತದೆ.  ತಾನು ಹೇಗೋ ಈ ಸಮಾಜದಲ್ಲಿ ಒಬ್ಬಂಟಿಯಾಗಿ ಬಾಳಬಲ್ಲೆ. ಆದರೆ ನಾಲ್ಕು ಹೆಜ್ಜೆ ತನ್ನೊಂದಿಗೆ ನಡೆದು ಮುಂದೆ ತನ್ನನ್ನು ಏಕಾಂಗಿಯಾಗಿ ತೊರೆದರೆ ತಾನು ಬಾಳಬಲ್ಲೆನೇ? ನನ್ನ ಸ್ನೇಹಕ್ಕೆ ಕೈಚಾಚುವ ಮುನ್ನ  ದಾಟಬೇಕು ಜಗತ್ತಿನ ನಿಯಮಗಳನ್ನ ಎಲ್ಲೆಗಳನ್ನು ದಾಟಿ ಎಲ್ಲರಿಂದಲೂ ದೂರ  ನಾವು ಸಾಗಬೇಕೆಂದಿರುವ ಮುನ್ನಡೆಯ ಹಾದಿ  ಆ ದಾರಿಯಲ್ಲಿ ಪ್ರತಿಯೊಂದು ಹೆಜ್ಜೆಗೂ ಮುಳ್ಳಿದೆ   ಎಂಬ ಎಚ್ಚರಿಕೆ ಮೊದಲೇ

ನಗುಬಂತಾ - ಕೆಲವು ಹನಿಗವನಗಳು

ಪಾನೀಯ   ಸೇವಿಸಿದರೆ ಈ ಪಾನೀಯ ಮಲಗುವ ಮುನ್ನ  ಫೇಸ್ ಬುಕ್ನಲ್ಲಿ ಯಾರೋ ಹಾಕಿದ್ದಾರೆ ಚಿನ್ನ ಕರಗಿ ಹೋಗುತ್ತಂತೆ ಕೊಬ್ಬು ಎಂದು ಹಲ್ಕಿರಿದಾಗ ಸುಬ್ಬು ಹೌದಾ! ಮತ್ತೆ ಐಸ್ ಕ್ಯೂಬ್ ಯಾತಕ್ ಬೇಕು ಅಂತ ಸುಬ್ಬಿ ಹಾಕಿದ್ಲು ಬ್ರೇಕು ಗಂಟ್ ಹಾಕ್ಕೊಂಡು ಹುಬ್ಬು ಯಾವುದು ಚೆಂದ?  ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು ಚಂದ ನಿನಗಾವುದೆಂದು ನನ್ನ ರೂ ಚೆಂದವೋ ನಿನ್ನ ರೂ ಚಂದವೋ ಚಂದ ನಿನಗಾವುದೆಂದು ನನ್ನ ರೂ ಚಂದವೋ ನಿಮ್ಮ ರೂ ಚೆಂದವೋ ಎಂದೆನ್ನ ಕೇಳಲೇಕೆ ಎರಡೂ ಡೀಮಾನಿಟೈಸ್ಡ್ ಎಂದಳಾಕೆ! ಡಬ್  ಡಬ್ ಡಬ್ ಎನ್ನುತ್ತಿದೆ ನಿನ್ನನ್ನು ನೋಡಿ ನನ್ನ ಹೃದಯ ಎಂದು ಹುಡುಗ ಹೇಳಿದಾಗ ಡಯಲಾಗು ಯಾಕೆ ನಾನೇನು ಹಿಂದಿ ಚಿತ್ರಾನಾ ಅಥವಾ ಇಂಗ್ಲಿಷ್ ಮೂವೀನಾ ಅಂದಳು ಹುಬ್ಬು ಗಂಟುಹಾಕಿ ನಾಗು . ಆಸ್ತಿ  ಅಪಾರ ಅಕ್ರಮ ಆಸ್ತಿ ಗಳಿಸಿದರೂ ಪಾಪ ಇನ್ನೂ ಹಳೆಯ ಮುರುಕಲ್ಮನೆಯಲ್ಲೇ ವಾಸ ಸುಣ್ಣ ಮಾಡಿಸಲು ಕೂಡಾ ಹೆದರುತ್ತಾರೆ ತುಂಬಾ ಭಯದಲ್ಲಿರುತ್ತಾರೆ ಬಣ್ಣ ಬಯಲಾದೀತೆಂಬ ಬಾಕ್ಸ್ ಮತ್ತು ಡಬ್ಬಾ  " ಬಾಕ್ಸ್" ಆಫೀಸ್ ಗುರಿಯಲ್ಲಿ ಇಟ್ಟುಕೊಂಡು ಮಾಡಿದರು ನಿರ್ದೇಶಕರು ಚಲನಚಿತ್ರ ಸಿಕ್ಕಾಗ ಫಲಿತಾಂಶ ಅವರಲ್ಲಿ ಇರಲಿಲ್ಲ ಉತ್ರ, "ಡಬ್ಬಾ" ಎನ್ನಿಸಿಕೊಂಡಾಗ ಎಲ್ಲಾರ್ ಹತ್ರ ಮಡ್ಡಿವಾಲಾ  ಮಣ್ಣು ತುಂಬಿದ ಕೆರೆಯೇ  ಮಡ್ಡೀವಾಲಾ ಲೇಕ್? ಪಂಜಾಬೀವಾಲಾ ಪ್ರಶ್ನೆಗೆ ಉತ್ರ ಹೇಳ್ಲೇ ಬೇಕ್ - ಸಿ. ಪಿ

ಗಣಪ ಮತ್ತು ಬಳಪ

ಇಮೇಜ್
ಅಮ್ಮ, ಕೊಡು ಬಳಪ ಎಂದು ಬೇಡಿದನು ಗಣಪ ಏನು ಬರೆವೆ ಮಗು? ಎಂದ ಅಮ್ಮನಿಗೆ ನಗು! ಲ್ಯಾಪ್ ಟಾಪ್, ಮೌಸ್, ಟಚ್ ಪ್ಯಾಡು ಇಂಥದನ್ನು ಬೇಡು ಚಾಕ್, ಹಲಗೆ, ಬಳಪ ಹಳೆಯದಾಯ್ತು ಕಣಪ್ಪ ಲ್ಯಾಪ್ ಟಾಪ್ ನನಗೆ ಯಾಕಮ್ಮ ನಿನ್ನ ತೊಡೆಯೇ ಸಾಕಮ್ಮ ಇನ್ನೊಂದು ಮೌಸ್ ಯಾಕೆ? ಇದೆಯಲ್ಲ ನನ್ನ ನೌಕೆ! ಇನ್ನೊಂದು ಬಂದ್ರೆ ತೊಂದ್ರೆ - ನನ್ನ ಮೋದಕ ಅದೇ ತಿಂದ್ರೆ! ಸಾಕು ಬಳಪ ಹಲಗೆ ಸರಳ, ಮೊದಲ ಕಲಿಕೆ ಅಮ್ಮನಿಂದ ಬಳಪ ಪಡೆದು ಕೊಡಲಿ ಗಣಪ ಮಕ್ಕಳಿಗೆ ಬುದ್ಧಿ, ಅಭಯ ಮತ್ತು ಸೆಂಟ್ ಪರ್ಸೆಂಟ್ ಶ್ರೇಯ - ಸಿ.ಪಿ. ರವಿಕುಮಾರ್

ದರ್ಶನ

ಇಮೇಜ್
ಮ ಹಾಬೋಧಿಯ ಕೆಳಗೆ ಕುಳಿತ ವೃದ್ಧನೊಬ್ಬ ಯೋಚಿಸುತ್ತಾನೆ ಜಗತ್ತಿನ ಶೋಕಕ್ಕೆ ಕಾರಣಗಳನ್ನು. ನೀನು ಹೇಳುತ್ತೀಯಾ ಬೋಧಿವೃಕ್ಷವೇ ಮೌನವಾಗಿ ನೋಡಿರುವೆ ಎಲ್ಲ ಮೊದಲಿಂದಲೂ? ಪ್ರಾರಂಭವಾಯಿತು ಮಹಾಬೋಧಿಯ ಶೋಧನಾಯಂತ್ರ ಸುತ್ತುತ್ತಲೇ ಇತ್ತು ಸುತ್ತುತ್ತಲೇ ಇತ್ತು ಬಹಳಹೊತ್ತು ಕಾಯುತ್ತಲೇ ಇದ್ದ ವೃದ್ಧ ಪ್ರಬುಧ್ಧ ಉತ್ತರಕ್ಕಾಗಿ ಏಕೆಂದರೆ ಶೋಧನಾಯಂತ್ರಕ್ಕೆ ಎಲ್ಲವೂ ಗೊತ್ತು ಕಡೆದಾಗ ಕಡಲನ್ನು ಕಕ್ಕಿದಹಾಗೆ ಕಾರ್ಕೋಟಕ ಉತ್ತರಗಳು ಹತ್ತಾರು ಉಕ್ಕಿದವು ಹೊರಗೆ ಹಾಲಾಹಲದ ನಂತರ ಸಿಕ್ಕಬಹುದು ಅಮೃತ ಜೀರ್ಣಿಸಿಕೋ ವಿಷ(ಯ)ವನ್ನೇ ಅಲ್ಲಿವರೆಗೆ ಶೋಧಿಸುತ್ತಿದ್ದಾನೆ ಬೋಧಿ ನೀಡಿದ್ದನ್ನು ಎಂದು ಸಿಕ್ಕೀತೋ ನಿಜದ ಜಾಡು ಅರೆಬೆಂದ ಹಸಿಹಸಿಯಿಂದ ಹಸಿವು ಬಾಯಾರಿಕೆ ತೀರಿಸಿಕೊಳ್ಳುವುದೇ ಪಾಪ ಇವನ ಪಾಡು ಸಿ.ಪಿ. ರವಿಕುಮಾರ್