ಪೋಸ್ಟ್‌ಗಳು

ಜುಲೈ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶ್ರಾವಣ ಸುರಿಸುವ ಮಳೆಯ ಹನಿ

ಇಮೇಜ್
ಮೂಲ - ಮೀರಾ ಬಾಯಿ  ಕನ್ನಡ ಭಾವಾನುವಾದ - ಸಿ. ಪಿ. ರವಿಕುಮಾರ್  (ಶ್ರಾವಣದ ಮಳೆಯ ಹನಿಗಳು ಮೈಮೇಲೆ ಬಿದ್ದಾಗ ಮೀರಾಬಾಯಿಯ ಮನಸ್ಸು ಕೃಷ್ಣನ ಸ್ಮರಣೆಯಿಂದ ತೊಯ್ಯುತ್ತದೆ.  ಬೇಸಗೆಯ ನಂತರ ತಂಗಾಳಿ ಮಳೆಯನ್ನು ತಂದ ಶ್ರಾವಣ ಅವಳಲ್ಲಿ ಉಲ್ಲಾಸ ತುಂಬುತ್ತದೆ. ಅವಳ ಮನಸ್ಸು ಗಿರಿಧರ ನಾಗರನನ್ನು ನೆನೆದು ಆನಂದದಿಂದ ತುಂಬುತ್ತದೆ.) ನೆನೆಸುತ್ತಿದೆ ಮನಮೋಹನನ  ಶ್ರಾವಣ ಸುರಿಸುವ ಮಳೆಯ ಹನಿ  ಶ್ರಾವಣ ತಂದಿತು  ಹರ್ಷೋಲ್ಲಾಸ   ಕೇಳಿದಂತೆ ಹರಿ ಗೆಜ್ಜೆ ದನಿ  ಕವಿದು ಮುಗಿದು ನಾಲ್ಕೂ ದೆಸೆಯಿಂದ  ಗುಡುಗುಮಿಂಚು ನಡುಗುವ ಅವನಿ ಪುಟ್ಟಪುಟ್ಟ ಹನಿಗಳ ಸುರಿಸುವ ಮೋಡ  ಶೀತಲ ಪವನ ಜೀವ ಸಂಚಯಿನಿ      ಪ್ರಭು ಗಿರಿಧರ ನಾಗರನನು ನೆನೆದು  ಮಂಗಳ ಹಾಡುವ ಮೀರಾ ಉನ್ಮಾದಿನಿ 

ನೇಯ್ಗೆಯ ಹಾಡು

ನೇಯ್ಗೆಯ ಹಾಡು  ಮೂಲ ಹಿಂದಿ ಕವಿತೆ: ಕೇದಾರನಾಥ್ ಸಿಂಗ್  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ಎದ್ದೇಳಿ  ಮಲಗಿರುವ ದಾರಗಳೇ  ಎದ್ದೇಳಿ  ಎದ್ದೇಳಿ, ಚಕಚಕಿಸುತ್ತಿದೆ ಆಗಲೇ  ದರ್ಜಿಯ ಯಂತ್ರ   ಎದ್ದೇಳಿ, ಕೆರೆಯ ಕಟ್ಟೆಗೆ ಬಂದಾಗಿದೆ ಮಡಿವಾಳ ಎದ್ದೇಳಿ, ಶಾಲೆಗೆ ಹೊರಟುನಿಂತಿದ್ದಾರೆ  ಮಕ್ಕಳು ಬೆತ್ತಲೆ ಎದ್ದೇಳಿ, ನನ್ನ ಬೆಳಗಿನ ದಾರಗಳೇ   ಮತ್ತು ನನ್ನ ಸಂಜೆಯ ದಾರಗಳೇ ಎದ್ದೇಳಿ  ಎದ್ದೇಳಿ, ಎಲ್ಲೋ ಸಿಕ್ಕಿಹಾಕಿಕೊಳ್ಳುತ್ತಿದೆ ಎಳೆ  ಎದ್ದೇಳಿ, ಗಂಟಾಗಿದೆ ಎಲ್ಲೋ ಏನೋ  ಎದ್ದೇಳಿ, ಎಳೆದು ಕಟ್ಟಲು  ಕೊಂಚ ಕಡಿಮೆಯಾಗಿದೆ ಯಂತ್ರದಲ್ಲಿ ಸೂತ್ರ ಏಳಿ  ಅಂಗಿಗಳಲ್ಲಿ ಕಾಲುಚೀಲಗಳಲ್ಲಿ ಜೋಳಿಗೆಗಳಲ್ಲಿ ಹಾಸಿಗೆಗಳಲ್ಲಿ ಅದುಮಿಟ್ಟ ದಾರಗಳೇ ಏಳಿ ಏಳಿ, ಏಕೆಂದರೆ ಏನೋ ತಪ್ಪಾಗಿಹೋಗಿದೆ ಏಳಿ, ಏಕೆಂದರೆ  ನೇಯಬೇಕಾಗಿದೆ ಈ ಪ್ರಪಂಚದ ಎಲ್ಲಾ ಬಟ್ಟೆ ಮತ್ತೆ ಹೊಸದಾಗಿ ಏಳಿ ನನ್ನ ತುಂಡಾದ ದಾರಗಳೇ ನನ್ನ ಗೋಜಲಾದ ದಾರಗಳೇ ಏಳಿ ಏಳಿ ಏಕೆಂದರೆ ಆಗುತ್ತಿದೆ ನೇಯ್ಗೆಯ ಸಮಯ