ಪೋಸ್ಟ್‌ಗಳು

ಮಾರ್ಚ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಾವಿರಾರು ಕನಸುಗಳು

ಇಮೇಜ್
ಸಿ. ಪಿ. ರವಿಕುಮಾರ್  ಮಿರ್ಜಾ ಗಾಲಿಬ್ ಅವರ ಪ್ರಸಿದ್ಧ ಗಜಲ್ ಒಂದರ ಕನ್ನಡ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ.  ಮಿರ್ಜಾ ಗಾಲಿಬ್ ಉರ್ದು ಶಾಯರಿಯ ಪ್ರಪಂಚದಲ್ಲಿ ಒಂದು ಮೇರುಶಿಖರವಿದ್ದಂತೆ.  ಅವರ ಪರಿಶುದ್ಧ ಉರ್ದು  ಮತ್ತು ಅಪೂರ್ವವೆನ್ನಿಸುವ ನುಡಿಗಟ್ಟುಗಳನ್ನು ಅನುವಾದಿಸುವುದು ಸುಲಭವಲ್ಲ! ಮೊದಲೇ ಹೇಳಿದಂತೆ ಇದೊಂದು ಪ್ರಯತ್ನ.  "ಹಜಾರೋ ಖ್ವಾಹಿಷೇ ಐಸೀ"  ಈ ಗಜಲ್ ಗಾಲಿಬ್ ಅವರ ಅತ್ಯಂತ ಜನಪ್ರಿಯ ರಚನೆಗಳಲ್ಲಿ ಒಂದು. ಇಲ್ಲಿ ಪದ್ಯಗಳ (ಶೇರ್) ನಡುವೆ ಎಲ್ಲೋ ಒಂದು ಕಥೆಯ ಎಳೆ ಇದೆ ಇಂದೂ ನಿಮಗೆ ಅನ್ನಿಸಬಹುದು. ಅನುರಕ್ತನಾದವನೊಬ್ಬನ ಕಥೆ. ಈ ಅನುರಕ್ತಿ ಒಬ್ಬ ಪ್ರೇಮಿಕೆಯಲ್ಲಿರಬಹುದು ಅಥವಾ ಮನಸ್ಸನ್ನು ಸೂರೆಗೊಳ್ಳುವ (ಶಾಯರಿಯಂಥ) ಇನ್ನಾವುದೇ ಕೆಲಸವೂ ಆಗಿರಬಹುದು.  ಮುಂದೆ ಓದುವ ಮುನ್ನ ಕವಿತೆಯ ಅನುವಾದವನ್ನು ಒಮ್ಮೆ ಓದಿ.  "ನಾನು ಕಂಡದ್ದು ಸಾವಿರಾರು ಕನಸುಗಳು, ಒಂದೊಂದನ್ನು ಪೂರೈಸಲೂ ಜೀವ ತೇಯಬೇಕು" ಎಂದು ಕವಿ ಹೇಳಿದಾಗ ಅವನು ತನ್ನ ಕಾವ್ಯ ರಚನೆಯ ಬಗ್ಗೆಯೇ ಹೇಳುತ್ತಿರಬಹುದು. "ಬಹಳಷ್ಟು ಇನ್ನೂ ಅಪೂರ್ಣ" ಎನ್ನುವಾಗ  ತಾನು ಬರೆಯಬೇಕಾದದ್ದು ಇನ್ನೂ ತುಂಬಾ ಇದೆ ಎನ್ನುವ ಅರ್ಥವೂ ಹೊಮ್ಮಬಹುದು.  "ಕೈಗೆ ನೆತ್ತರು ..." ಎನ್ನುವ ಸಾಲುಗಳಲ್ಲಿ ಗಾಲಿಬ್ ತನ್ನ ವಿಮರ್ಶಕರನ್ನು ಕುರಿತು ಹೇಳುತ್ತಿರಬಹುದೇ ಎಂಬ ಅನುಮಾನವೂ ನನಗೆ ಬರುತ್ತಿದೆ.  "ಮದಿರೆಯ ಕಡೆಗೆ ಹೊರಳ

ಪರಕೀಯನೆಂದು ನನಗೆ ತಿಳಿದಿರಲಿಲ್ಲವೇ?

ಇಮೇಜ್
ಪರಕೀಯನೆಂದು ನನಗೆ ತಿಳಿದಿರಲಿಲ್ಲವೇ? ಸಿ. ಪಿ. ರವಿಕುಮಾರ್   "ಮುಝೆ ಖಬರ್ ಥಿ ವೋ ಮೇರಾ ನಹೀ ಪರಾಯಾ ಥಾ" ಎಂಬ ಗಜಲ್ ಇವತ್ತು ಕೇಳಿದೆ. ಇದನ್ನು ಲತಾ ಮಂಗೇಶ್ಕರ್ ಹಾಡಿದ್ದಾರೆ. ಕೇಳಿದವರು ಯಾರನ್ನಾದರೂ ಹಿಡಿದಿಡುವ ಶಕ್ತಿ ಅವರ ಗಾಯನದಲ್ಲಿದೆ. ಈ ಗಜಲ್ ಬರೆದವರು ಫರತ್ ಷಹಜಾದ್ ಎಂಬ ಉರ್ದೂ ಕವಿ. ಸಂಗೀತ ನೀಡಿದವರು ಮಯೂರೇಶ್ ಪೈ.  ನಿಜವೆಂದರೆ ಕವಿ ಮತ್ತು ಸಂಗೀತಗಾರರು ಇಬ್ಬರೂ ನನ್ನ ಮಟ್ಟಿಗೆ ಹೊಸಬರು.  ಕವಿಯ ಇನ್ನಷ್ಟು ಕವಿತೆಗಳನ್ನು ಓದುವ ಮನಸ್ಸಾಗುತ್ತಿದೆ. ಈ ಹಾಡು  ಮೂರು ಅತ್ಯಂತ ಪ್ರತಿಭಾವಂತರು ಒಂದುಗೂಡಿ ಸೃಷ್ಟಿಸಿದ ಕಲಾಕೃತಿ.   ಈ ಹಾಡನ್ನು ನೀವು ಇಲ್ಲಿ ಕೇಳಬಹುದು.       ಈ ಗಜಲ್ ನಲ್ಲಿ ಅತೀವ ದುಃಖ ಮಡುಗಟ್ಟಿದೆ. ಇಬ್ಬರು ಗಾಢ ಸ್ನೇಹಿತರು ಅಗಲಿದ್ದಾರೆ. ಕಾರಣ ಏನೆಂದು ಗೊತ್ತಿಲ್ಲ.  ಯಾವುದೋ ಮನಸ್ತಾಪವೋ ಅಥವಾ ವಿಧಿಯ ಕ್ರೌರ್ಯವೋ  ಅವರನ್ನು ದೂರ ಮಾಡಿದೆ. ಬೇರಾದರೂ ಇನ್ನೊಬ್ಬನ(ಳ)ನ್ನು ನೆನೆದು ಒಬ್ಬಳು(ನು) ದುಃಖಿಸುತ್ತಿದ್ದಾಳೆ(ನೆ).  ಗಜಲ್ ನ ಕನ್ನಡ ಅನುವಾದವನ್ನು ಕೆಳಗೆ ಕೊಟ್ಟಿದೆ.  ಅವನು ನನ್ನವನಲ್ಲ ಪರಕೀಯನೆಂದು ನನಗೆ ತಿಳಿದಿರಲಿಲ್ಲವೇ?  ಆದರೇನು ದೇವರೆಂದು ಹೃದಯದ ಬಡಿತವು ನಂಬಿತ್ತು ಅವನನ್ನೇ ಯಾರನ್ನು ಕನಸುಗಳಲ್ಲಿ ಹುಡುಕುತ್ತಿದ್ದೆನೋ ಯುಗಗಳಿಂದಲೂ  ಅದು ನನ್ನ ಕಣ್ಣಂಚಿನಲ್ಲೇ ತುಳುಕಿದ ಒಂದು ಕಣ್ಣೀರ ಬಿಂದು  ನಿನ್ನ ತಪ್ಪಲ್ಲ ಬಿಡು ನನ್ನ ಒಂಟಿತನ

ಸರೋವರ ತ್ಯಜಿಸಿದ ಮೀನು ಮಕರಮಿಲನಕ್ಕೆ ಬಂದಂತೆ

ಇಮೇಜ್
ಸಿ. ಪಿ. ರವಿಕುಮಾರ್  "ನಂದನಂದನ ದಿಠು ಪಡೆಯಾ ಮಾಯಿ ..." ಎಂಬ ಮೀರಾ ಭಜನೆಯನ್ನು ನೀವು ಕೇಳಿರಬಹುದು. ಲತಾ ಮಂಗೇಶ್ಕರ್ ಇದನ್ನು ಹಾಡಿದ್ದಾರೆ. ನಿಮಗೆ ಅಂತರ್ಜಾಲದ ಮೇಲೆ ರೆಕಾರ್ಡಿಂಗ್ ಸಿಕ್ಕುತ್ತದೆ.   ಈ ಭಜನೆಯಲ್ಲಿ ಮೀರಾಬಾಯಿ ಕೃಷ್ಣನನ್ನು ಕುರಿತು ತನಗಿರುವ ಅಪೂರ್ವ ಆಕರ್ಷಣೆಯ ಕಾರಣವನ್ನು ತಿಳಿಸುತ್ತಾಳೆ. ನಂದನಂದನ ಕೃಷ್ಣನ ಮೈಬಣ್ಣ ಕಪ್ಪು.  ತಲೆಯ ಮೇಲೆ  ಓರೆಯಾಗಿಟ್ಟ  ನವಿಲುಗರಿಯ ಚಂದ್ರಕಿರೀಟ! ಹಣೆಯ ಮೇಲೆ ಕೇಸರಿ ತಿಲಕ.  ಅವನನ್ನು ಕಂಡಾಗಿನಿಂದ ತಾನು ಅವನಿಗೆ ಆಕರ್ಷಿತಳಾಗಿ ಲೋಕದ ಲಜ್ಜೆಯನ್ನು ಕಿತ್ತೆಸೆದಿದ್ದೇನೆ ಎಂದು ಮೀರಾ ತನ್ನ ತಾಯಿಯಲ್ಲಿ ತೋಡಿಕೊಳ್ಳುತ್ತಿದ್ದಾಳೆ.  ಇಲ್ಲಿ "ತಾಯಿ" ಎಂದರೆ ಅವಳ ಸ್ವಂತ ತಾಯಿಯೇ ಇರಬೇಕಾಗಿಲ್ಲ, ಅವಳನ್ನು ಕರುಣೆಯಿಂದ ಮಾತಾಡಿಸಿದ ಬೇರೆ ಯಾರೇ ಆಗಿರಬಹುದು.   ಕೃಷ್ಣನ ಕಿವಿಯಲ್ಲಿರುವ ಕುಂಡಲದ ಬೆಳಕು ಅವನ ಕೆನ್ನೆಯ ಮೇಲೆ ಪ್ರತಿಫಲಿಸಿದಾಗ ತಾನು ಸರೋವರವನ್ನು ತ್ಯಜಿಸಿ ಮೊಸಳೆಯನ್ನು ಸಂಧಿಸಲು ತಾನೇ ಬಂದ ಮೀನಿನಂತೆ ಎಂಬ ಮೀರಾಬಾಯಿಯ ಉಪಮೆ ತುಂಬಾ ಸುಂದರವಾಗಿದೆ.  ತನಗೆ ಯಾರನ್ನು ಕೊಟ್ಟು ಮದುವೆ ಮಾಡಿದರೋ ಅವನೊಂದಿಗೆ ಬಾಳ್ವೆ ಮಾಡುವುದು ಮೀನು ಸರೋವರದಲ್ಲಿ ಈಜಿದಷ್ಟೇ ಸಹಜ.  ಆದರೆ ತಾನು ಅದೆಲ್ಲವನ್ನೂ ಬಿಟ್ಟು ಕೃಷ್ಣನಲ್ಲಿ ಅನುರಕ್ತಿ ಹೊಂದಿದ್ದೇನೆ! ಇದರಿಂದ ತನಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಅರಿವಿದ್ದರೂ ಮೀರಾ ಕೃಷ್ಣನ ಆಕರ್ಷಣೆಯನ್ನು ಮೀರಲ

ಬಾಗಿಲು ಮತ್ತು ಗವಾಕ್ಷಿ - ಒಂದು ನೆನಪು

ಸಿ. ಪಿ. ರವಿಕುಮಾರ್  ನಾನು ದೆಹಲಿಯ ಐಐಟಿಯಲ್ಲಿ ಪ್ರೊಫೆಸರ್ ಆಗಿದ್ದಾಗ ಮೂರು ವರ್ಷ ಹಾಸ್ಟೆಲ್ ವಾರ್ಡನ್ ಕೆಲಸವನ್ನು ನನಗೆ ಕೊಟ್ಟರು (ಹೇರಿದರು!). ಆಗ ನಡೆದ ಘಟನೆ. ಕೇರ್ ಟೇಕರ್ : ಸರ್ ಜೀ, ಒಬ್ಬ ಹುಡುಗ ಇದ್ದಾನೆ. ಅವನು ನಮ್ಮ ಹಾಸ್ಟೆಲ್ ನಲ್ಲಿ ನ್ಯಾಯಬಾಹಿರ ರೀತಿಯಲ್ಲಿ ಉಳಿದಿದ್ದಾನೆ. ನಾನು: ಅದು ಹೇಗೆ ಸಾಧ್ಯ? ಯಾರು ಅವನು? ಕೇಟೇ: ಅವನು ಅನೇಕ ಸಲ ಫೇಲ್ ಆದ ವಿದ್ಯಾರ್ಥಿ. ಅವನು ಐಐಟಿಯಲ್ಲಿ ಇರಲೇ ಬಾರದು. ಅವನು ಫೀಜ್ ಕೂಡಾ ಕಟ್ಟಿಲ್ಲ. ನಾನು: ಮತ್ತೆ? ಕೇಟೇ: ಅವನು ತನ್ನ ಸ್ನೇಹಿತರ ರೂಮುಗಳಲ್ಲಿ ಹೇಗೋ ಬಂದಿರುತ್ತಾನೆ. ನಾನು: ನೀವು ಅವನನ್ನು ಕರೆದುಕೊಂಡು ಬನ್ನಿ, ನಾನು ಮಾತಾಡುತ್ತೇನೆ. ಕೇಟೇ: ಸರ್ ಜೀ, ಅವನು ನಮ್ಮ ಕೈಗೆ ಸಿಕ್ಕರೆ ತಾನೇ? ನಾನು: ಹಾಗೆಂದರೆ ಏನ್ರೀ? ಕೇಟೇ: ಸರ್, ಅವನು ದಿನಕ್ಕೊಂದು ರೂಮಿನಲ್ಲಿ ಇರುತ್ತಾನೆ. ಅರ್ಧ ರಾತ್ರಿ ಎಲ್ಲೋ ಇದ್ದು ಬೆಳಗಿನ ಜಾವ ಯಾವುದೋ ಮಾಯದಲ್ಲಿ ಹಾಸ್ಟೆಲಿಗೆ ಬರುತ್ತಾನೆ. ಇಲ್ಲಿ ಮಲಗಿದ್ದು ಯಾವುದೋ ಮಾಯದಲ್ಲಿ ಮಧ್ಯಾಹ್ನ ಪರಾರಿ ಆಗುತ್ತಾನೆ. ಕೇಟೇ: ಅವನ ಸ್ನೇಹಿತರು ಯಾರು? ಅವರನ್ನು ಕಳಿಸಿ. ಕೇಟೇ: ಸರ್ ಜೀ, ಅವರು ಅವನಿಗೆ ರೂಂ ಕೊಟ್ಟ ವಿಷಯ ಒಪ್ಪಿಕೊಳ್ಳುವುದಿಲ್ಲ. ಹೇಗೆ ಹಿಡಿಯೋದು? ಯಾರನ್ನ ಕರೆಯೋದು? ನಾನು: ಒಳ್ಳೇ ಫಜೀತಿ ಆಯಿತಲ್ಲ. ಅವನ ವಿರುದ್ಧ ಕಂಪ್ಲೇಂಟ್ ತಂದಿದ್ದೀರಿ. ಅವನು ಇಲ್ಲಿ ಇರುತ್ತಾನೆ ಅನ್ನೋದಕ್ಕೆ ಏನಾದರೂ ಪುರಾವೆ ಬೇಕಲ್ಲ. ಅದನ

ಹರೀಶ್ ನಂಜಪ್ಪ ಅವರಿಗೆ

ಹರೀಶ್ ನಂಜಪ್ಪ ಅವರಿಗೆ  ೧೬-೨-೧೬ : ಸಮತೋಲನವುಳ್ಳ ದಿನಾಂಕ ಅಲ್ಲವೇ? ಆದರೆ ಹರೀಶ್ ನಂಜಪ್ಪ ಅವರಿಗೆ ಈ ದಿವಸ ಶುಭಕರವಾಗಲಿಲ್ಲ. ರಸ್ತೆ ಅಪಘಾತದಲ್ಲಿ ಅವರು ಭೀಕರ ರೀತಿಯಲ್ಲಿ ಸಾವನ್ನಪ್ಪಿದರು. ಅವರ ದೇಹ ಎರಡು ತುಂಡುಗಳಾಗಿ  ಆಚೀಚೆ ಬಿದ್ದಿತ್ತು. ಜನ ಅದನ್ನು ಚಿತ್ರೀಕರಿಸಿಕೊಂಡು ನಿಂತರು. ಕೊನೆಗೊಬ್ಬ ಕರುಣಾಳು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಕರೆದೊಯ್ದ. ದಾರಿಯಲ್ಲಿ ಅವರು ಮಾತಾಡುತ್ತಿದ್ದರು. "ನಾನು ಬದುಕಿ ಉಳಿಯುವುದಿಲ್ಲ, ನನ್ನ ಕಣ್ಣುಗಳನ್ನು ದಾನ ಮಾಡಿ," ಎಂದು ತಮ್ಮ ಅಂತಿಮ ಇಚ್ಛೆ ವ್ಯಕ್ತ ಪಡಿಸಿದರು.  ಅವರ ಚೇತನಕ್ಕೆ ಇದೊಂದು ಶ್ರದ್ಧಾಂಜಲಿ.   ಸಿ. ಪಿ. ರವಿಕುಮಾರ್  ನಮ್ಮನ್ನು ಕ್ಷಮಿಸಿ ಹರೀಶ್ ನಮಗೆ ವಿಪರೀತ ತರಾತುರಿ ಇಪ್ಪತ್ತೊಂದನೇ ಶತಮಾನದಲ್ಲಿ ಹಾಗಿರುತ್ತದೆ ಎದೆ ಉರಿ ಯಾರಿಗೂ ನಾವು ನಿಲ್ಲುವುದಿಲ್ಲ ಇದೋ ಹೇಳುತ್ತೇವೆ ಸಾರಿಸಾರಿ ಗಂಟೆಗೆ ಎಂಬತ್ತು ವೇಗದಲ್ಲಿ ನಮ್ಮದು ಮುಕ್ತ ಹೆದ್ದಾರಿ ವೇಗವಾಗಿ ಹೊರಟಿದ್ದೇವೆ ಮುಟ್ಟಬೇಕಾಗಿದೆ ಗುರಿ ಯಾವುದು ಗುರಿ ಎಂಬುದೆಲ್ಲ ಕಲ್ಪನೆಯ ನವಿಲುಗರಿ!   ವೇಗವಾಗಿ ದಾಟಲಾರದ ಮುದುಕರು ಮಕ್ಕಳು-ಮರಿ ಕಾಯುತ್ತಿರಿ ಹಹ್ಹಹ್ಹ!   ಹಕ್ಕು ನಮ್ಮದೀಗ, ಸಾರಿ! ನಮ್ಮನ್ನು ಕ್ಷಮಿಸಿ ಹರೀಶ್ ನಮಗಿದೆ ವಿಪರೀತ ತರಾತುರಿ ಇಪ್ಪತ್ತೊಂದನೇ ಶತಮಾನದಲ್ಲಿ ಹಾಗಿರುತ್ತದೆ ಎದೆ ಉರಿ ನಮ್ಮ ಆತುರಕ್ಕೆ ಬಲಿಯಾಗಿ ಎರಡು ತುಂಡಾಗಿ ಹೋದಿರಿ ಚಿಂತಿಸದ

ಧೃತರಾಷ್ಟ್ರ

ಇಮೇಜ್
ಧೃತರಾಷ್ಟ್ರ  ಸಿ. ಪಿ. ರವಿಕುಮಾರ್ "ಧೃತರಾಷ್ಟ್ರ" ಎಂಬ ಹೆಸರೇ ಯಾಕೆ ಅಂತ ಯೋಚಿಸುತ್ತಿದ್ದೆ.  ರಾಷ್ಟ್ರ ಎಂದರೇನು ಅಂತ ನಮಗೆಲ್ಲ ಗೊತ್ತು. ಧೃತ ಎಂಬುದರ ಅರ್ಥವನ್ನು ಆನ್ಲೈನ್ ಸಂಸ್ಕೃತ ಪದಕೋಶದಲ್ಲಿ ಹುಡುಕಿದರೆ 24 ಅರ್ಥಗಳು ದೊರೆತವು (ಕೆಳಗಿರುವ ಪಟ್ಟಿ ನೋಡಿ - ಇಂಗ್ಲಿಷ್ ಅರ್ಥದ ಪಕ್ಕದಲ್ಲಿ ಕೊಟ್ಟಿರುವ ಕನ್ನಡ ಅನುವಾದ ನನ್ನದು.) ಈ ಪಟ್ಟಿಯನ್ನು ನಿಧಾನವಾಗಿ ಓದಿ.  ಮಹಾಭಾರತದ ಕವಿ ಬಹಳ ಯೋಚನೆ ಮಾಡಿ   ಧೃತರಾಷ್ಟ್ರನ ಪಾತ್ರಕ್ಕೆ ಹೆಸರನ್ನು ಇಟ್ಟಿದ್ದಾನೆ ಅಂತ ನಿಮಗೂ ಅನ್ನಿಸಬಹುದು.  ಭಾರತವು ಧೃತರಾಷ್ಟ್ರನ ಕಥೆ ಎಂದೂ ಅನ್ನಿಸಬಹುದು.  ಭಾರತವು ಒಂದು ಧೃತ-ರಾಷ್ಟ್ರದ ಕಥೆ ಎಂದೂ ಅನ್ನಿಸಬಹುದು.  धृत dhRta adj. borne धृत dhRta adj. measured  (ಅಳೆದದ್ದು) धृत dhRta adj. turned   towards   or   fixed   upon  (ಕೇಂದ್ರಿತವಾದದ್ದು) धृत dhRta adj. observed  (ಗಮನಿಸಿದ್ದು) धृत dhRta adj. detained  (ತಡೆಹಿಡಿದದ್ದು) धृत dhRta adj. practised  (ಪ್ರಯೋಗದಲ್ಲಿ ತಂದಿದ್ದು) धृत dhRta adj. being  (ಸ್ಥಿತಿ) धृत dhRta adj. kept   back  (ಮುಚ್ಚಿಟ್ಟದ್ದು) धृत dhRta adj. resolved   on  (ಯಾವುದರ ಮೇಲೆ ನಿರ್ಧಾರ ಕೈಗೊಳ್ಳಲಾಯಿತೋ ಅದು) धृत dhRta adj. held  (ಬಂಧಿಸಿದ್ದು, ಹಿಡಿದಿಟ್ಟದ್ದು) धृत dhRta adj. deposited   as