ಪೋಸ್ಟ್‌ಗಳು

ಏಪ್ರಿಲ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹನುಮಾನ ಚಾಲೀಸಾ

(ಪೀಠಿಕೆ - ತುಲಸೀದಾಸರು ರಚಿಸಿದ ಹನುಮಾನ್ ಚಾಲೀಸಾ ಬಗ್ಗೆ ಗೊತ್ತಿಲ್ಲದವರು ಯಾರು? ಎಂ.ಎಸ್. ಸುಬ್ಬುಲಕ್ಷ್ಮಿ ಮೊದಲಾಗಿ ಅನೇಕ ಗಾಯಕರು ಹಾಡಿದ ಹನುಮಾನ್ ಚಾಲೀಸಾ  ಪ್ರತಿನಿತ್ಯ ರೇಡಿಯೋ/ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಲೇ ಇರುತ್ತದೆ. ಭಾರತದ ಮಂದಿರಗಳಲ್ಲಿ ಹನುಮಾನ್ ಚಾಲೀಸಾ  ಪಠಣ ನಡೆಯುತ್ತಲೇ ಇರುತ್ತದೆ. ಹನುಮಂತನನ್ನು ಸ್ಮರಿಸಿ ತುಲಸೀದಾಸರು ರಚಿಸಿದ ನಲವತ್ತು ಸಾಲುಗಳ ರಚನೆಯೇ ಹನುಮಾನ್ ಚಾಲೀಸಾ. ಪ್ರಾರಂಭದಲ್ಲಿ ಕವಿ ಹನುಮಂತನನ್ನು ತನಗೆ ಬಲ-ಬುದ್ಧಿ-ವಿದ್ಯೆ ನೀಡಲೆಂದು ಪ್ರಾರ್ಥಿಸುತ್ತಾರೆ. ಇದಾದ ನಂತರ ಹನುಮಂತನನ್ನು ಕುರಿತು ಸ್ತುತಿ ಮತ್ತು ಹನುಮಂತನ ಸ್ಮರಣೆಯಿಂದ ಸಿಗುವ ಲಾಭವನ್ನು ತುಲಸೀದಾಸರು ಹೇಳುತ್ತಾರೆ. ಕೊನೆಯಲ್ಲಿ ಹನುಮಂತನನ್ನು ತನ್ನ ಹೃದಯದಲ್ಲಿ ರಾಮ-ಲಕ್ಷ್ಮಣ-ಸೀತೆಯರೊಂದಿಗೆ ಬಂದು ನೆಲೆಸು ಎಂದು ಪ್ರಾರ್ಥಿಸುತ್ತಾರೆ.)  ಶ್ರೀಗುರು ಪದ್ಮಪಾದಗಳ ಧೂಳು ತೊಳೆಯಲೆನ್ನ ಮನದ ಕನ್ನಡಿಯ ನಿಜಮುಖ ವರ್ಣಿಸುವೆ ರಘುವರನ ವಿಮಲಯಶ, ಯಾವುದು ನೀಡುವುದೋ  ನಾಲ್ಕು ಫಲಗಳ ಸುಖ ಬುದ್ಧಿಹೀನ ನಾನೆಂದು ಬಗೆದು ಸ್ಮರಿಸುವೆನಿದೋ ರಕ್ಷಿಸಲಿ ಪವನಕುಮಾರ ಬಲಬುದ್ಧಿವಿದ್ಯೆಗಳ ವರ ನೀಡಿ ಮಾಡಲೆನ್ನ ಸಕಲ ಕ್ಲೇಶವಿಕಾರಗಳ ದೂರ ಜೈ ಹನುಮಂತ, ಜ್ಞಾನಗುಣಸಾಗರ, ಜೈ ಕಪೀಶ, ಮೂರು ಲೋಕೋದ್ಧಾರ ರಾಮದೂತ, ಅತುಲಿತ ಬಲಧಾಮ,  ಅಂಜನಿಪುತ್ರ, ಪವನಸುತ ನಾಮ ಮಹಾವೀರ, ವಿಕ್ರಮ ವಜ್ರಾಂಗಿ, ಕುಮತಿ ನಿವಾರಕ, ಸನ್ಮತಿಗಳ ಸಂಗಿ ಹೊನ್ನ ಮೈಬಣ್ಣ,  ಕ

ಪ್ಲವ

ಪ್ಲವವು ತರಲಿ ನವಪಲ್ಲವ ನಮ್ಮೆಲ್ಲರ ಬಾಳಲಿ ಕವಲು ಒಡೆದ ದಾರಿ ಮತ್ತೆ ಒಂದಾಗಿ ಸೇರಲಿ ತವಕ, ಕ್ಷೋಭೆ, ಅನಿಶ್ಚಿತತೆ, ಭೀತಿ ಹಿಂದೆ ಸರಿಯಲಿ ಕವಿತೆಯಲ್ಲಿ ಮತ್ತೆ ಮಾವು ಮಲ್ಲಿಗೆಗಳು ಬಿರಿಯಲಿ. ಕೆಟ್ಟ ಕನಸಿನಿರುಳಿನಂತೆ ಕಳೆದು ಹೋದ ಶಾರ್ವರೀ ಬಿತ್ತಿಹೋದ ಭೀತಿಭಾವ ಕತ್ತಲಂತೆ ಕರಗಲಿ ದಟ್ಟಗಪ್ಪು ಮೋಡದಂಚಿನಲ್ಲಿ ಬೆಳ್ಳಿ ಮಿಂಚಲಿ ಮತ್ತೆ ಸ್ಥೈರ್ಯ ಹುಟ್ಟಿ ಪ್ಲವದ ಕಣ್ಣಿನಲ್ಲಿ ಹೊಳೆಯಲಿ ಒಡೆದ ವಿಶ್ವದಲ್ಲಿ ಮತ್ತೆ ಒಂದೇ ಬಿಂಬ ಮೂಡಲಿ ಒಡಕಲು ಸ್ವರ ಒಂದಾಗಿ ಒಂದೆ ರಾಗ ಹಾಡಲಿ ಕಡೆದ ಕಡಲಿನಲ್ಲಿ ಸುಧೆಯ ಹೊತ್ತು ತರಲಿ ಪ್ಲವ ತಡೆದು ಗಂಟಲಲ್ಲಿ ನಂಜು ಕಾಯುತಿಹನು ಶಿವ! (c) ಸಿ. ಪಿ. ರವಿಕುಮಾರ್, ಏಪ್ರಿಲ್ ೧೩, ೨೦೨೧

ಸಂಪಾದಕನ ಸ್ವಗತ

ಇಮೇಜ್
ಜಲಿಯಾನ್ ವಾಲಾ ಬಾಗ್ ಹತ್ಯಾಕಾಂಡದ  ವರದಿ ತಲುಪಿದೆ  ಬ್ರಿಟನ್ ಸುದ್ದಿಪತ್ರಿಕೆಯ ಸಂಪಾದಕನಿಗೆ.  ಕನ್ನಡಕದ ಕಣ್ಣು ಓದುತ್ತಿದೆ ವರ್ತಮಾನ.  ಅಮೃತ ಸರೋವರದ ದಡದಲ್ಲಿ ಮೃತ್ಯುವಿಗೆಲ್ಲಿದೆ ಸ್ಥಾನ? ಸತ್ತವರ ಸಂಖ್ಯೆ ನೂರೂ ಚಿಲ್ಲರೆ ಅದಕ್ಕೇಕೆ ದೊಡ್ಡಕ್ಷರದ ಬಿಗುಮಾನ? ಬೇಡ ಇದಕ್ಕೆ ಸಲ್ಲದು ಮೊದಲ ಪುಟದ ಸ್ಥಾನಮಾನ ಒಳಗಿನ ಪುಟದ ಮೂಲೆಯಲ್ಲಿರಲಿ ಸಾಕು ಜಲಿಯಾನ್ ವಾಲಾ ಉದ್ಯಾನ! ಮೊದಲ ಪುಟ ಸುದ್ದಿಯೆಂದರೆ ರಾಣಿಯ ಹೊಸಬೆಕ್ಕು ಜೊಹಾನಾ. ನಗರದಲ್ಲಿದ್ದಾಗ ರೌಲಟ್ ಕಾಯಿದೆ ಅಷ್ಟೊಂದು ಜನ ಸೇರಿದ್ದೇ ಅಪಮಾನ! ಡಯರ್ ಮಾಡಿದ್ದು ಒಳ್ಳೆಯದೇ ಹೆಚ್ಚಿಕೊಳ್ಳುತ್ತಿದ್ದಾರೆ ಕಂದುಜನ ದಿನದಿನಾ! ನೆನ್ನೆ ಖಜಾನೆಗೆ ಲಗ್ಗೆ ಇಡುವಷ್ಟು ಧಾರ್ಷ್ಟ್ಯ! ಒಬ್ಬ ಬ್ರಿಟಿಷ್ ಹೊಂದಿದ್ದಾನೆ ಅವಸಾನ! ಗಾಯಗೊಂಡಿದ್ದಾರೆ ರಾಣಿಯ ಇಬ್ಬರು ಸೇವಕರು! ಈ ಗಾಂಧಿ ಆಗಿಕೂತಿದ್ದಾನೆ ದೊಡ್ಡ ಯಜಮಾನ!! ಲೋ ಯಾರಲ್ಲಿ! ತೊಗೊಳ್ಳಿ ಎಂಟನೇ ಪುಟಕ್ಕೆ ಅಳವಡಿಸಿ ಈ ಜುಜುಬಿ ವರದಿಯನ್ನ (c) ಸಿ. ಪಿ. ರವಿಕುಮಾರ್, ಏಪ್ರಿಲ್ ೨೦೨೧

ಗೋಪಿಹಕ್ಕಿ

ಇಮೇಜ್
ನೀಲಮೇಘನ ಘನನೀಲವರ್ಣ  ತುಂಬಿತ್ತು ಕಣ್ಣುಗಳಲ್ಲಿ  ಗೋಪಾಲನ ಮುರಳೀಗಾನ  ತುಂಬಿತ್ತು ಕಿವಿಗಳಲ್ಲಿ.  ಬಿಕೋ ಎನ್ನುತ್ತಿತ್ತು ಬೃಂದಾವನ  ಕೊಲ್ಲುತ್ತಿತ್ತು ಶ್ಯಾಮನ ಪ್ರಸ್ಥಾನ.  ತಾಳಲಾರದೆ ವಿರಹ, ರಾಧೆ, ನೀಲಬಣ್ಣದ ಗೋಪಿಹಕ್ಕಿಯಾದೆ!  ಎಂದೋ ನೀನು ಸ್ವರವೆತ್ತಿ ಹಾಡಿದಾಗ  ಕೇಳುತ್ತದೆ ಮುರಳೀಧರನ ಮೋಹನರಾಗ. 

ವಿಜ್ಞಾನ ಕವಿತೆಗಳು - ೨

 ಸಮಾನತೆ ಇದನ್ನೋದುವ ನೀನು ಯಾರೇ ಆಗಿದ್ದರೂ  ನಿನ್ನ ವಂಶವಾಹಿಗೂ ನನ್ನ ವಂಶವಾಹಿಗೂ  ಸಮಾನತೆ ಶತಾಂಶ ತೊಂಬತ್ತೊಂಬತ್ತು  ನೀನು ನನ್ನ ತಂದೆಯೋ ಮಗನೋ ಆಗಿದ್ದರೆ  ತೊಂಬತ್ತೊಂಬತ್ತಕ್ಕೆ ಸೇರಿಸಿಕೋ  ಇನ್ನೊಂದು ಅರ್ಧ ಪರ್ಸೆಂಟು.  ಹೇಳಲೇ ನಿನಗೆ ಇನ್ನೊಂದು ಆಶ್ಚರ್ಯಕರ ವಿಷಯ? ಕೇಳಿದರೆ ನೀನು ಹೌಹಾರುವೆ ನಿಶ್ಚಯ! ಚಿಂಪಾಂಜಿಯ ವಂಶವಾಹಿಗೂ ನನ್ನ-ನಿನ್ನ ವಂಶವಾಹಿಗೂ  ಸಮಾನತೆ ಪರ್ಸೆಂಟ್ ತೊಂಬತ್ತೆಂಟು! ಅದಕ್ಕೇ ಇರಬಹುದು ನಾವು ಕೆಲವೊಮ್ಮೆ  ಮರ್ಕಟದಂತೆ ಆಡುವುದುಂಟು! ನಿಶಬ್ದ   ಮಾಧ್ಯಮವಿಲ್ಲದೆ ಆಗದು ಶಬ್ದ ಸಂಚಲನ ಅನಿಲವೋ ದ್ರವವೋ ಅಥವಾ ಘನ ಆಕಾಶಕಾಯಗಳಿಂದ ಭಯಂಕರ ಸದ್ದು ಭೂಮಿಗೆ ಬರದಂತೆ ತಡೆ ಹಿಡಿದದ್ದು ನಡುವಣ ವ್ಯೋಮವೇ! ಪುಣ್ಯಶಾಲಿ ಭುವನ! ವಿದ್ಯುತ್ ಕಣಾ! "ಉಜ್ಜಿದರೆ ಬಾಚಣಿಗೆ ಕೂದಲಿಗೆ ಸ್ಥಿರವಿದ್ಯುತ್ ಕಣ  ನೀಡುವುದು ಹಣಿಗೆಗೆ ಕ್ಷಣಕಾಲ ಆಕರ್ಷಣ ... " "ಸರ್, ಇದನ್ನು ನೀವು ಪರೀಕ್ಷಿಸಿದ್ದೀರಾ?" ಎಂದು ಕೇಳಿದನೊಬ್ಬ ಹಿಂದಿನ ಬೆಂಚ್ ಪೋರ  ನೋಡುತ್ತಾ ಗುರುಗಳ ಮಿಂಚುವ ತಲೆಯನ್ನ! "ಅಂದಹಾಗೆ ಬಾಚಣಿಗೆಯೇ ಬೇಕು ಅಂತಿಲ್ಲ! ದೊಣ್ಣೆಯೂ ಆದೀತು, ಬೇಕಾದರೆ ಉಜ್ಜಿ ತೋರಿಸಲಾ? ಎಲ್ಲೋ, ಯಾರು ಕೇಳಿದ್ದು ಪ್ರಶ್ನೆ! ಬೆಂಚಿನ ಮೇಲೆ ನಿಂತುಕೋ ಸುಮ್ಮನೆ!" ಎಂದು ಪ್ರದರ್ಶಿಸಿದರು ಮೇಷ್ಟ್ರು ಎಲೆಕ್ಟ್ರೋಸ್ಟಾಟಿಕ್ ಲಾ  ಜಿರಾಫ್  ಎತ್ತರದ ಅಕೇಶಿಯಾ ಮರಗಳ ರಸಪೂರ್ಣ  ಎಲೆ  ಹುಡುಕುತ್ತ ನಾಲಗೆಯಿಂದ ಸೆಳೆದುಕ