ಪೋಸ್ಟ್‌ಗಳು

ಮೇ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮೇಲೇಳುವೆ ನಾನು

ಇಮೇಜ್
2014ರಲ್ಲಿ ನಿಧನರಾದ ಮಾಯಾ ಆಂಜೆಲೋ ಖ್ಯಾತ ಕಪ್ಪು ಅಮೇರಿಕನ್  ಕವಯಿತ್ರಿ. ಅವರ "ಸ್ಟಿಲ್ ಐ ರೈಸ್" ಎಂಬ ಪ್ರಸಿದ್ಧ ಕವಿತೆಯ ಅನುವಾದವನ್ನು ಕೆಳಗೆ ಕೊಟ್ಟಿದ್ದೇನೆ.  ಮೂಲ ಅಮೇರಿಕನ್ ಕವಿತೆ - ಮಾಯಾ ಆಂಜೆಲೋ   ಕನ್ನಡಕ್ಕೆ - ಸಿ ಪಿ ರವಿಕುಮಾರ್    ಚರಿತ್ರೆಯ ಪುಟಗಳಲ್ಲಿ ನನ್ನನ್ನು ಮುಗಿಸಿಬಿಡಬಹುದು ಕಟುವಾದ ನಿನ್ನ ತಿರುಚಿದ ಸುಳ್ಳುಗಳು  ಕಸದ ಹಾಗೆ ನನ್ನನ್ನು ಮೂಲೆಗುಂಪು ಮಾಡಿದರೂ ಕಸದ ಹಾಗೆ ಮೇಲೇಳುವೆನು ನಾನು ಕೋಪ ಬರುವುದೇ ನಿನಗೆ ನನ್ನ ಧಾರ್ಷ್ಟ್ಯವನ್ನು ಕಂಡು? ಯಾಕೆ ಹಾಗಿರುವೆ ಆಕಾಶ ಬಿದ್ದಂತೆ ಮೇಲೆ? ಸಹಿಸಲಾಗುತ್ತಿಲ್ಲವೇ ನಾನು ಆಡುವುದನ್ನು ಕಂಡು ನನ್ನ ಹಿತ್ತಲಲ್ಲೇ ಪೆಟ್ರೋಲ್ ಬಾವಿ ಇರುವಂತೆ? ಸೂರ್ಯನ ಹಾಗೆ ನಾನು ಚಂದ್ರಬಿಂಬದ ಹಾಗೆ ಬಿದ್ದು ಮೇಲೇಳುವ ಜಡತ ಭರತಗಳ ಹಾಗೆ ಅದುಮಿದರೂ ಎದ್ದು ಬರುವ ಭರವಸೆಯ ಹಾಗೆ ಹಾಗೂ ಹೀಗೂ ಹೇಗೋ ಮೇಲೇಳುವೆ ಕೊನೆಗೆ  ಮುರಿಯಬೇಕೆಂದು ಬಯಸಿದೆಯಾ ಬೊಂಬೆಯ ಹಾಗೆ ಕಣ್ಣು ಕೆಳಗೆ ಹಾಕಿ, ಮುಖ ತಗ್ಗಿಸಿ ನಿಲ್ಲಬೇಕೆ ನಾನು? ಜಾರುವ ಕಂಬನಿಯಂತೆ ಕೆಳಗೆ ಕುಸಿದು ನನ್ನ ಭುಜಗಳು ಆರ್ತನಾದವು  ಆತ್ಮದಿಂದ ಹೊಮ್ಮಬೇಕೇನು? ತಾಳು, ಅಷ್ಟೊಂದು ಕೋಪ ಒಳ್ಳೆಯದಲ್ಲ! ನನ್ನ ಗರ್ವವ ಕಂಡು ನಿನಗೆಮುನಿಸಾಯಿತೇ? ಯಾಕೆ? ನಾನು ಹೀಗೆ ಆಡುವುದನ್ನು ಕಂಡೇ? ನನ್ನ ಅಂಗಳದಲ್ಲಿ ಚಿನ್ನದ ಗಣಿ ಇರುವ ಹಾಗೆ! ನಿನ್ನ ಮಾತುಗಳಿಂದ ಚುಚ್ಚಬಹುದು ನೀನು ಕತ್ತರಿಸಬಹುದು

ಮುಖವಾಡ

ಇಮೇಜ್
ಮೂಲ ಹಿಂದಿ ಪದ್ಯ - ಗುಲ್ಜಾರ್  ಕನ್ನಡಕ್ಕೆ - ಸಿ ಪಿ ರವಿಕುಮಾರ್ ನಾಚಿಕೆಗೆಟ್ಟ ಬೆತ್ತಲೆ ಹಗಲಿನಲ್ಲಿ ಇಡೀ ದಿವಸ ನನ್ನ ಜೀತದಾಳುಗಳಿಗೆ ಹುಣಸೆ ಬರಲಿನಿಂದ ಏಟು ಬಿಗಿಯುತ್ತೇನೆ. ಕೊಳ್ಳುತ್ತೇನೆ, ಮಾರುತ್ತೇನೆ ನನ್ನ ಗುಲಾಮರನ್ನು.   ನನ್ನ ಬೇಕುಗಳಿಗಾಗಿ ನನ್ನನ್ನೇ ಹರಾಜು ಹಾಕುತ್ತೇನೆ ನಾಚಿಕೆಗೆಟ್ಟ ಬೆತ್ತಲೆ ಹಗಲಿನಲ್ಲಿ ಒಪ್ಪಂದ ಮಾಡಿಕೊಳ್ಳುತ್ತೇನೆ, ರಾಜಿ ಮಾಡಿಕೊಳ್ಳುತ್ತೇನೆ.  ಆದರೆ ರಾತ್ರಿಯ ಖಾಲೀತನದಲ್ಲಿ ಮುಖ ಮುಚ್ಚಿಕೊಂಡು ಬಿಕ್ಕುತ್ತೇನೆ. ಒಂದು ಮುಖ ಎಷ್ಟೊಂದು ಮುಖಗಳಿಗೆ ಹಾಕುತ್ತದೆ ತೆರೆ.  --- ಕವಿತೆಯ ನವಿರು: "ಬೆತ್ತಲೆ ಹಗಲು" ಎಂದು ಬರೆಯುವ ಸ್ವಾರಸ್ಯ ಏನು? ಕವಿ ಇಲ್ಲಿ ಪ್ರಸ್ತಾಪ ಮಾಡುವ ಜೀತದಾಳುಗಳು ಯಾರು? ಯಾರ ಜೊತೆ ರಾಜಿ ಮಾಡಿಕೊಳ್ಳುಬೇಕಾಗಿದೆ ಎಂದು ಕವಿ ಹೇಳುತ್ತಾನೆ?

ನೀನಿಲ್ಲದೆ

ಇಮೇಜ್
ಮೂಲ ಹಿಂದಿ ಪದ್ಯ - ಗುಲ್ಜಾರ್  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಗಾಜಿನ ಕಿಟಕಿಯ ಹಿಂದೆ ಮರಗಳ ಬಲಿಷ್ಠ ರೆಂಬೆಗಳ ನಡುವೆ ಬೀಳುತ್ತಿದೆ ಶ್ರಾವಣದ ಮಳೆ.   ಶಬ್ದವಿದೆ, ಜನರಿದ್ದಾರಲ್ಲ, ಮಾತಾಡುತ್ತಿದ್ದಾರೆ.  ಇವರ ಮಾತುಗಳಿಗೂ ಆಚೆ ನನ್ನೊಳಗೆಲ್ಲೋ ಬೇರೊಂದು ಸಮತಲದಲ್ಲಿ ನಿನ್ನ ಗೈರುಹಾಜರಿ ಬೀಳುತ್ತಿದೆ ಮೆಲ್ಲಗೆ, ಬಹುಮೆಲ್ಲಗೆ. 

ನರಿಗಿಂತ ಚುರುಕು ಬೈನರಿ

ನನ್ನ ಟೆಕ್ನಾಲಜಿ ಕುರಿತ ಕನ್ನಡ ಬರಹಗಳನ್ನು "ಸಿ.ಪಿ. ಸಂಪದ" ಎಂಬ ಬ್ಲಾಗ್ ಗೆ ಸ್ಥಳಾಂತರಿಸಿದ್ದೇನೆ - ಇಲ್ಲಿ ನೋಡಿ:   ನರಿಗಿಂತ ಚುರುಕು ಬೈನರಿ  

ಮತ್ತೆ ಬೆಳಗಾಗುವುದು

ಇಮೇಜ್
ಸಾ ಹಿರ್ ಲುಧಿಯಾನವಿ ಅವರ ಲೇಖನಿಯಲ್ಲಿ ಮೂಡಿದ "ವೋ ಸುಬಹ್ ಕಭೀ ತೋ ಆಯೇಗೀ" ಯಾರ ಮನಸ್ಸನ್ನಾದರೂ ಕಲಕುವ ಗೀತೆ. ಫಿರ್ ಸುಬಹ್  ಹೋಗೀ ಎಂಬ ಚಿತ್ರಕ್ಕೆ ಬರೆದ ಗೀತೆಯನ್ನು ಖಯ್ಯಾಮ್ ಸಂಗೀತಕ್ಕೆ ಅಳವಡಿಸಿದ್ದಾರೆ ಮತ್ತು ಮುಖೇಶ್ ಹಾಡಿದ್ದಾರೆ.  ಇಲ್ಲವೇ ಇಲ್ಲವೋ ಎಂಬಷ್ಟು ಹಿನ್ನೆಲೆ ವಾದ್ಯವನ್ನು ಬಳಸಿ ಸಾಹಿತ್ಯಕ್ಕೆ ಒತ್ತು ಕೊಟ್ಟಿರುವುದು ಈ ಗೀತೆಯ ವಿಶೇಷ.  ತಮ್ಮ ಮಾಮೂಲು ಶೈಲಿಯಲ್ಲಿ ಕಠಿಣ ಉರ್ದೂ ಶಬ್ದಗಳನ್ನು ಬಳಸುವ ಸಾಹಿರ್ ಈ ಗೀತೆಯಲ್ಲಿ ವಿಭಿನ್ನವಾದ ಶೈಲಿಯನ್ನು ಅನುಸರಿಸಿದ್ದಾರೆ ಎಂಬುದು ಕೂಡಾ ಈ ಹಾಡಿನ ವಿಶೇಷ. ಒಂ ಬತ್ತು ತಿಂಗಳು ತುಂಬುವ ಮೊದಲೇ ಹುಟ್ಟಿದ ನನ್ನ ಮಗಳು ಹತ್ತು ದಿನ  ತೀವ್ರ ನಿಗಾ ಘಟಕದಲ್ಲಿ ಇದ್ದ ಸಮಯ. ಮಗು ಹುಟ್ಟಿದ ಸಂಭ್ರಮ ಇರಬೇಕಾಗಿದ್ದ ಕಡೆ ಆತಂಕ. ಪ್ರತಿ ದಿವಸ ಮನೆಯಿಂದ ವಾರ್ಡಿಗೆ, ವಾರ್ಡಿನಿಂದ ಐಸಿಯೂ, ಐಸಿಯೂನಿಂದ ಡಾಕ್ಟರ್ ಕೋಣೆಗೆ ತಿರುಗುವುದು. ಡಾಕ್ಟರ್ ಏನಾದರೂ ಶುಭಸೂಚನೆ ನೀಡುತ್ತಾರೋ ಎಂದು ಅವರ ಕಡೆ ನೋಡುವುದು.  ಯಾವ ಭರವಸೆಯನ್ನೂ ಕೊಡಲು ಸಾಧ್ಯವಿಲ್ಲ ಎಂಬ ವೈದ್ಯರ ಮಾತುಗಳನ್ನು ಕೇಳಿಸಿಕೊಂಡರೂ ಮನೆಯ ಹಿರಿಯರಿಗೆ "ಎಲ್ಲಾ ಚೆನ್ನಾಗಿದೆ" ಎಂದೇ  ಹೇಳುವುದು. ಈ ದಿನಗಳು ಎಂದು ಕೊನೆಗೊಳ್ಳುವುವೋ ಎಂದು ಅಧೀರರಾಗುವುದು ... ಒಂದು ದಿನ ಐಸಿಯೂಗೆ ಹೋಗಿದ್ದಾಗ ಹೊರಗೆ ಏನೋ ಸ್ವಲ್ಪ ಗಲಾಟೆ ಕೇಳಿಸಿತು. ಒಬ್ಬ ವೈದ್ಯೆ ಅಲ್ಲಿ ನಿಂತಿದ್ದ ಒಬ್ಬ ಯುವತಿಗೆ ಬೈಯ್ಯುತ್ತಿ

ಹಳ್ಳಿ ಶಾಲೆ ಮೇಷ್ಟ್ರು

ಇಮೇಜ್
  ಕವಿತೆ ಓದುವ ಮುನ್ನ ...    ಆ ಲಿವರ್ ಗೋಲ್ಡ್ ಸ್ಮಿತ್ ಮೂಲತಃ ಐರ್ ಲ್ಯಾಂಡ್ ನಲ್ಲಿ ಹುಟ್ಟಿ ನಂತರ ಇಂಗ್ಲೆಂಡ್ ಗೆ ಬಂದು ನೆಲೆಸಿದ ಕವಿ, ನಾಟಕಕಾರ, ಕಾದಂಬರಿಕಾರ. ಸಾಮ್ಯುಯೆಲ್ ಜಾನ್ಸನ್ ಎಂಬ ಖ್ಯಾತ ಬರಹಗಾರನ ಮೈತ್ರಿಯನ್ನು ಪಡೆದುದು ಇವನ ಹೆಮ್ಮೆ - ಏಕೆಂದರೆ ಜಾನ್ಸನ್ ಗೆ ಐರ್ ಲ್ಯಾಂಡ್ ಮತ್ತು ಐರಿಷ್ ಜನರ ಬಗ್ಗೆ ಅತೀವ ಅಸಹನೆಯಿತ್ತು.  ಗೋಲ್ಡ್ ಸ್ಮಿತ್ ಬರೆದ "ವಿಕರ್  ಆಫ್ ವೇಕ್ ಫೀಲ್ಡ್" ಕಾದಂಬರಿಯನ್ನು ಕುರಿತು ಒಂದು ಸ್ವಾರಸ್ಯಕರ ಘಟನೆಯಿದೆ.ಒಂದು ಮುಂಜಾನೆ  ಜಾನ್ಸನ್ ಗೆ ಯಾರೋ ಗೋಲ್ಡ್ ಸ್ಮಿತ್ ಕಳಿಸಿದ ಸಂದೇಶವನ್ನು ತಂದುಕೊಟ್ಟರು - "ನಾನು ಬಹಳ ಕಷ್ಟದಲ್ಲಿ ಸಿಲುಕಿದ್ದೇನೆ; ನಾನು ಖುದ್ದಾಗಿ ನಿಮ್ಮಲ್ಲಿ ಬರಲಾರೆ. ನೀವೇ ದಯಮಾಡಿ ನನ್ನ ಮನೆಗೆ ಬಂದರೆ ಬಹಳ ಉಪಕಾರವಾಗುತ್ತದೆ" ಎಂಬ ಒಕ್ಕಣೆ ಇದ್ದ ಪತ್ರ.  ಜಾನ್ಸನ್ ಕೂಡಲೇ ಮಿತ್ರನಿಗೆ  ತಾನು ಖಂಡಿತ  ಬರುತ್ತೇನೆಂಬ ಭರವಸೆ ಕೊಟ್ಟು ಪತ್ರಕ್ಕೆ ಉತ್ತರ ಕಳಿಸಿ; ಜೊತೆಗೆ . ಒಂದು ಗಿನಿಯಷ್ಟು ಹಣ ಕಳಿಸಿಕೊಟ್ಟ.  ಬಟ್ಟೆ ತೊಟ್ಟ ನಂತರ ಜಾನ್ಸನ್ ಮಿತ್ರನ ಮನೆಗೆ ಬಂದಾಗ ಆತ ಬಾಡಿಗೆ ಇದ್ದ ಮನೆಯ ಒಡತಿ ಬಾಡಿಗೆ ಹಣ ಕೊಡದ ಆರೋಪವನ್ನು ಹೊರಿಸಿ ಗೋಲ್ಡ್ ಸ್ಮಿತ್ ನನ್ನು ಬಂಧನಕ್ಕೆ ಒಳಪಡಿಸಿದ್ದಳು. ಇದರಿಂದ ವಿಪರೀತ ನೊಂದ ಗೋಲ್ಡ್ ಸ್ಮಿತ್ ನ ಕೋಪ-ತಾಪಗಳು ತಾರಕ್ಕೇರಿದ್ದವು. ತಾನು ಕಳಿಸಿದ್ದ ಗಿನಿಯನ್ನು ಮಿತ್ರನು ಈಗಾಗಲೇ ಮುರಿಸಿ ಒಂದು ಬಾಟಲ್ ಮದ್ಯ

ಕನ್ನಡಂ ಕತ್ತರಿಯಲ್ತೆ!

ಸಿ ಪಿ ರವಿಕುಮಾರ್ " ಅ ಯ್ಯೋ ಕನ್ನಡಂ ಕತ್ತರಿಯಲ್ತೆ ಅಲ್ಲ! ಕನ್ನಡಂ ಕತ್ತುರಿಯಲ್ತೆ !" ಎಂದು ನಾನು ನಗುತ್ತಾ ಅರವಿಂದನನ್ನು ತಿದ್ದಿದ್ದು ನೆನಪಿದೆ. "ಕತ್ತುರಿ ಅಂದರೆ ಕಸ್ತೂರಿ. ಅಲ್ತೆ ಅಂದರೆ ಅಲ್ಲವೇ ಅನ್ನೋ ಅರ್ಥ. ಕನ್ನಡದ ಸುಗಂಧ ಕಸ್ತೂರಿಯ ಹಾಗೆ ಅಲ್ಲವೇ ಅಂತ ಮನೋರಮೆ  ಮುದ್ದಣನಿಗೆ ಚಾಲೆಂಜ್  ಮಾಡುತ್ತಿದ್ದಾಳೆ!" ದುರದೃಷ್ಟವಶಾತ್ ಕಸ್ತೂರಿ ಕನ್ನಡಕ್ಕೆ ಕತ್ತರಿ ಬಿದ್ದಿದೆ. ಅಥವಾ ಹಾಗೆಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಪೋಷಕರು ಯಾವ ಭಾಷೆಯನ್ನು ಮಕ್ಕಳಿಗೆ ಕಲಿಯಲು ಇಚ್ಛಿಸುತ್ತಾರೋ ಮಗು ಅದೇ ಭಾಷೆಯಲ್ಲಿ ಕಲಿಯಬೇಕು - ಯಾವುದೇ ಕಡ್ಡಾಯವನ್ನು ಹೇರುವ ಹಕ್ಕು ಸ್ಥಳೀಯ ಸರ್ಕಾರಕ್ಕೆ ಇಲ್ಲ. ನಮ್ಮ ನಾಡಿನ ಮೊದಲ ರಾಷ್ಟ್ರಕವಿ ಎಂಬ ಬಿರುದು ಪಡೆದಿದ್ದ ಮಂಜೇಶ್ವರ ಗೋವಿಂದ ಪೈ ಕನ್ನಡಿಗರನ್ನು ಕಸ್ತೂರಿ ಮೃಗಕ್ಕೆ ಹೋಲಿಸಿದರು. ಕಸ್ತೂರಿ ಮೃಗವು ತನ್ನ ಮೈಯಿಂದ ಹೊಮ್ಮುವ ಸುವಾಸನೆಯ ಗುಟ್ಟನ್ನು ತಿಳಿಯದೆ ಸುಗಂಧವು ಎಲ್ಲಿಂದ ಬರುತ್ತಿದೆ ಎಂದು ಹುಡುಕುತ್ತಲೇ ಇರುತ್ತದೆಯಂತೆ! "ಕನ್ನಡವೇ ಸತ್ಯ! ಕನ್ನಡವೇ ನಿತ್ಯ! ಅನ್ಯವೆನಲದೆ ಮಿಥ್ಯ!" ಎಂದ ಕುವೆಂಪು ಕನ್ನಡದ ಡಿಂಡಿಮವನ್ನು ಬಾರಿಸಲು ಕರೆ ಕೊಟ್ಟರು. ಅವರು ಈಗ ಇದ್ದಿದ್ದರೆ ಹೇಗೆ ಪ್ರತಿಕ್ರಿಯೆ ತೋರುತ್ತಿದ್ದರೋ! ಕನ್ನಡಿಗರ ನಿರಭಿಮಾನವನ್ನು ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ. ಈಗಿನ ಪರಿ

ನಗುವು ಸಹಜದ ಧರ್ಮ!

ಇಮೇಜ್
ಸಿ ಪಿ ರವಿಕುಮಾರ್  ಹಿಂದೆ  ಜನ ಖೊಳ್ ಅಂತ ನಗ್ತಿದ್ರು  ಇಂದು  ಫೇಸ್ ಬುಕ್ ಮುಂದೆ  LOL ಅಂತ ನಗ್ತಾರೆ ! "ನಾಯಿಮರಿ ಕಳ್ಳ ಬಂದರೇನು ಮಾಡುವೆ?  ಲೊಳ್  ಲೊಳ್ ಲೊಳ್  ಎಂದು ಕೂಗಿ ಆಡುವೆ!" "ಏನಮ್ಮಾ? ನಾಯಿಮರಿನೂ ಫೇಸ್ ಬುಕ್ ಮೇಲಿರುತ್ತಾ?" ವಿ ಶ್ವ ಹಾಸ್ಯ ದಿವಸವನ್ನು ಕುರಿತು ಇಂದು ಪತ್ರಿಕೆಗಳಲ್ಲಿ ಗಂಭೀರವಾದ (!) ವರದಿಗಳು ಬಂದಿವೆ. "ನಗುವು ಸಹಜದ ಧರ್ಮ" ಎಂದು ಡಿವಿಜಿ ಹೇಳಿಬಿಟ್ಟರು, ನಿಜ. ಆದರೆ ಇಂದಿನ ಅನೇಕ ಸನ್ನಿವೇಶಗಳಲ್ಲಿ ನಗಬೇಕೋ ಅಳಬೇಕೋ ತಿಳಿಯಲಾರದೆ ಯಾವುದು ಸಹಜದ ಧರ್ಮ ಎಂದು ಕಕ್ಕಾಬಿಕ್ಕಿ ಆಗುತ್ತೇವೆ. ನನ್ನ "ರವಿ ಕಾಣದ್ದು" ಬ್ಲಾಗ್ ಪ್ರಾರಂಭಿಸಿ ಒಂದು ವರ್ಷ ಮುಗಿಯುತ್ತಾ ಬಂತು. ಕಳೆದ ವರ್ಷ ನಾನು ಬರೆದ ಕೆಲವು ನಗೆಬರಹಗಳನ್ನು ಒಂದು ಕಡೆ ಕಲೆಹಾಕಿ ಕೊಡುತ್ತಿದ್ದೇನೆ. ಸಹಜ ಧರ್ಮ ಎಂಬಂತೆ ನೀವು ನಕ್ಕರೆ ಅದೇ ಬರಹಗಾರನಿಗೆ ಸಾರ್ಥಕತೆ! ಕಳೆದ ವರ್ಷದಲ್ಲಿ ನಾನು ಬರೆದ ನಗೆಬರಹಗಳು (ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ)  ತುಂಬಾ ಸಿಂಬಲ್ ಅಲ್ಲವೇ? (ಹರಟೆ)   ವಿಶ್ವಕವಿತಾ ದಿವಸ (ಸಿಲ್ಲಿ ಪೊಯಟ್ರಿ)!   ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)   ಫೇಸ್ ಬುಕ್ ಮತ್ತು ಕಾಶೀಯಾತ್ರೆ (ಹರಟೆ)   ಒಂದೇ ಒಂದು ಪೌಂಡ್ (ಹೀಗೇ ಸುಮ್ಮನೆ)   ಮೂಡ್ ನಂಬಿಕೆಗಳು  (ಹರಟೆ)   ಹೇ ಮಾ! ಮಾಲಿನೀ  (ಹರಟೆ) ಮೊಬೈಲಿ

ಒಂದು ವರ್ಷ ಕಂಡ "ರವಿ ಕಾಣದ್ದು"

ಇಮೇಜ್
ಸಿ ಪಿ ರವಿಕುಮಾರ್  ನನ್ನ ಬ್ಲಾಗ್ ಗೆ ಒಂದು ವರ್ಷ ತುಂಬಿತು. ಮೇ ೮, ೨೦೧೩ ದಿನಾಂಕದಂದು ನಾನು ಪ್ರಾರಂಭಿಸಿದ "ರವಿ ಕಾಣದ್ದು" ಬ್ಲಾಗ್ ಬರಹಗಳ ಸಂಖ್ಯೆ ನೂರು ದಾಟಿವೆ. ಇದುವರೆಗೂ ಸುಮಾರು ೧೧,೦೦೦ ಹಿಟ್ಸ್ ನನ್ನ ಬರಹಗಳಿಗೆ ಬಂದಿವೆ.  ನನ್ನ ಬರಹಗಳನ್ನು ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲರಿಗೂ ನನ್ನ ಕೃತಜ್ಞತೆಗಳು. ಈ ಸಂದರ್ಭದಲ್ಲಿ ಕೆಲವು ನೆನಪುಗಳನ್ನು ಓದುಗರ ಜೊತೆ ಹಂಚಿಕೊಳ್ಳುತ್ತಿದ್ದೇನೆ. ನ ನ್ನ ಬರವಣಿಗೆಯ ಹವ್ಯಾಸಕ್ಕೆ ಮೊದಲು ಪ್ರೋತ್ಸಾಹ ನೀಡಿದವರು ನನ್ನ ತಂದೆ ದಿ. ಸಿ. ಎಚ್. ಪ್ರಹ್ಲಾದರಾವ್. ಅವರು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಹವ್ಯಾಸಿ ಪತ್ರಕರ್ತರಾಗಿದ್ದವರು. ನಮ್ಮ ಮನೆಯಲ್ಲಿ ಪುಸ್ತಕ್ಗಗಳೇ ಪುಸ್ತಕಗಳು! ನಮ್ಮ ತಂದೆಗೆ ದೆಹಲಿಗೆ ವರ್ಗವಾದಾಗ ನಾವು ಒಂದೇ ಕೋಣೆಯ ಮನೆಯಲ್ಲಿ ಬಾಡಿಗೆಗೆ ಇದ್ದೆವು; ಆಗ ನೂರಾರು ಪುಸ್ತಕಗಳನ್ನು ಅವರು ದೆಹಲಿ ಕನ್ನಡ ಶಾಲೆಯ ಗ್ರಂಥಾಲಯಕ್ಕೆ ದಾನ ಕೊಟ್ಟರು. ಈ ಪುಸ್ತಕಗಳನ್ನು ಇಟ್ಟುಕೊಳ್ಳಲು ನಮ್ಮ ಮನೆಯಲ್ಲಿ ಸ್ಥಳವಿದ್ದರೆ ತಾನೇ! ಮುಂದೆ ನಾವು ಎರಡು ಕೋಣೆಯ ಮನೆಗೆ ಬಡ್ತಿ ಹೊಂದಿದೆವು. ಆಗ ಬೆಂಗಳೂರಿಗೆ ಬೇಸಿಗೆ ರಜೆಗೆಂದು ಬಂದಾಗ ನಮ್ಮ ತಂದೆ ಕನ್ನಡ ಸಾಹಿತ್ಯ ಪರಿಷತ್ತಿನವರು ಆಯೋಜಿಸಿದ ಪುಸ್ತಕ ಪ್ರದರ್ಶನದಲ್ಲಿ  ಚಿಕ್ಕ ಹುಡುಗರಾಗಿದ್ದ ನನಗೆ ಮತ್ತು ನನ್ನ ಅಣ್ಣನಿಗೆ ಏನಿಲ್ಲವೆಂದರೂ ಐವತ್ತು-ಅರವತ್ತು ಪುಸ್ತಕಗಳನ್ನು ಕೊಂಡುತಂದರು! ಒಂದಕ್ಕಿಂತಲೂ ಒಂದು ಆಕರ

ಅಪೂರ್ಣ ಆಸೆಗಳ ಕಳಂಕ ತೊಳೆವ ಪ್ರೇಮವೆ!

ಇಮೇಜ್
ಸಿ ಪಿ ರವಿಕುಮಾರ್   ಮದನ್ ಮೋಹನ್ ಸಂಗೀತ ನಿರ್ದೇಶನದಲ್ಲಿ ಮೂಡಿದ ಅನೇಕ ಉತ್ತಮ ಗಜಲ್ ಗಳಲ್ಲಿ "ಯೂಂನ್ ಹಸರತೋಂನ್ ಕೆ ದಾಗ್ ಮುಹಬ್ಬತ್ ಮೇಂನ್ ಧೋಲಿಯೇ ..." ಬಹಳ ಜನಪ್ರಿಯವಾದುದು. ಲತಾ ಮಂಗೇಶ್ಕರ್ ಹಾಡಿರುವ ಗೀತೆಯನ್ನು ಅದಾಲತ್ (ನ್ಯಾಯಾಲಯ) ಎಂಬ ಚಿತ್ರದಲ್ಲಿ ಬಳಸಲಾಗಿದೆ. ಒಬ್ಬ ವೇಶ್ಯೆಯ ಪಾತ್ರದಲ್ಲಿ ನರ್ಗಿಸ್ ಅಭಿನಯಿಸಿದ್ದಾರೆ. ಸಮಾಜದ ಅನ್ಯಾಯದಿಂದ ವೇಶ್ಯಾವೃತ್ತಿಗೆ ಬಂದು ಬಿದ್ದ ಹೆಣ್ಣಿನ ನೋವನ್ನು ಗೀತಕಾರ ರಾಜೇಂದ್ರಕೃಷ್ಣ ಈ ಗಜಲ್ ನಲ್ಲಿ ಬಹಳ ಕಲಾತ್ಮಕವಾಗಿ ಬಿಂಬಿಸಿದ್ದಾರೆ. ಮೂಲ ಚಿತ್ರಗೀತೆಯನ್ನು ಯೂ ಟ್ಯೂಬ್ ನಲ್ಲಿ ನೀವು ಕೇಳಬಹುದು .ಉರ್ದೂ ಸಾಹಿತ್ಯದಲ್ಲಿ ಗಜಲ್ ಬಹಳ ವಿಶಿಷ್ಟವಾದ ಕಾವ್ಯರೂಪ. ಎರಡೆರಡು ಸಾಲುಗಳ ಮೂರು-ನಾಲ್ಕು ಪದ್ಯಗಳಲ್ಲಿ ಮನಸ್ಸಿನ ಸೂಕ್ಷ್ಮವಾದ ಭಾವನೆಗಳನ್ನು ಹೇಳುವ ಕಲೆ ಗಜಲ್ ಕವಿಗೆ ಸಿದ್ಧಿಸಿರಬೇಕು. ಹಿಂದಿ ಚಿತ್ರಗಳಲ್ಲಿ ಪ್ರಸಿದ್ಧ ಉರ್ದೂ ಕವಿಗಳ ಗಜಲ್ ಗಳನ್ನು ಗೀತೆಗಳನ್ನಾಗಿ ಬಳಸಿಕೊಂಡಿರುವುದು ವಿಶೇಷ. ಪ್ರಸ್ತುತ ಗಜಲ್ ಒಂದು ಹೆಣ್ಣಿನ ವ್ಯಸನವನ್ನು ಕುರಿತು ಹೇಳುತ್ತದೆ. ಇವಳು ತನ್ನ ಇಚ್ಛೆಗೆ ವಿರುದ್ಧವಾಗಿ ವೇಶ್ಯಾವೃತ್ತಿಗೆ ಇಳಿಯಬೇಕಾಗಿದೆ. ಅವಳಲ್ಲಿ ಪ್ರೇಮವನ್ನು ಹುಡುಕಿಕೊಂಡು ಬರುವ ಅನೇಕರಿದ್ದಾರೆ. ಅವಳ ಪ್ರೇಮವೆನ್ನುವುದು ಅವರ ಅಪೂರ್ಣ ಆಸೆಗಳನ್ನು ತೊಳೆಯುವ ಒಂದು ಸಾಧನ ಮಾತ್ರ. ಇದನ್ನು ಅವಳು ಬೇರಾರಿಗೂ ಹೇಳಲಾರಳು. ತನ್ನ ಮಾತ್ರಕ್ಕೆ ಸ್ವಗತವನ್ನ

ಎರಡು ದಡ

ಇಮೇಜ್
" ಬಂ ದಿನಿ" ಚಿತ್ರವನ್ನು ನಿರ್ದೇಶಿಸಿದವರು ಬಿಮಲ್ ರಾಯ್. "ಮಧುಮತಿ," "ದೇವದಾಸ್" ಮೊದಲಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತಿ ಇವರದ್ದು. "ಬಂದಿನಿ" (ಅಥವಾ "ಬಂಧಿತೆ") ಚಿತ್ರದಲ್ಲಿ ಕೊಲೆಯ ಆಪಾದನೆಯ ಮೇಲೆ ಜೈಲಿಗೆ ಸೇರಿದ ಒಬ್ಬ ಯುವತಿಯ ಕಥೆ ಇದೆ. ಚಿತ್ರದಲ್ಲಿ ಬರುವ "ಮೇರೇ ಸಾಜನ್ ಹೈಂನ್ ಉಸ್ ಪಾರ್ ..." ಗೀತೆಯಲ್ಲಿ ನಾಯಕಿಯ ಮನಸ್ಸಿನಲ್ಲಿ ಏಳುವ ದ್ವಂದ್ವಗಳ ಚಿತ್ರಣವಿದೆ. ನಾಯಕಿಯ ಪಾತ್ರದಲ್ಲಿ ನೂತನ್ ಅವರ ಅಭಿನಯ ಮನಸ್ಸನ್ನು ಕಲಕುತ್ತದೆ. ನಾಯಕಿಗೆ ಇರುವುದು ಜೈಲಿನ ಬಂಧನ ಒಂದೇ ಅಲ್ಲ. ಅವಳ ಚರಿತ್ರೆಯೂ ಅವಳನ್ನು ಬಂಧಿಸಿದೆ. ತಾನು ಹಿಂದೆ ಸ್ವೀಕರಿಸಿದ್ದ ಗಂಡಿನಿಂದ (ಅಶೋಕ್ ಕುಮಾರ್) ದೂರವಾಗಿ ತನಗೆ ಹೊಸ ಬಾಳನ್ನು ನೀಡಬಲ್ಲ ಜೈಲಿನ ಡಾಕ್ಟರ್ (ಧರ್ಮೇಂದ್ರ) ಕಡೆಗೆ ಅವಳ ಮನಸ್ಸು ವಾಲುತ್ತಿದೆ. ಆದರೆ "ಈ ಆಕರ್ಷಣೆ ತಪ್ಪು, ನಿಲ್ಲು!" ಎಂದು ಅವಳ ಮನಸ್ಸು ಅವಳನ್ನು ಸೆರಗು ಹಿಡಿದು ನಿಲ್ಲಿಸುತ್ತಿದೆ ...   ಕಪ್ಪು ಬಿಳುಪಿನ ಚಿತ್ರಪಟದ ಮೇಲೆ ಈ ಗೀತೆಯನ್ನು ಅದೆಷ್ಟು ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ ಎಂಬುದನ್ನು ನೀವು ನೋಡಿ ಮೆಚ್ಚಬೇಕು . ನಾಯಕಿ ನಿರ್ಧಾರಕ್ಕೆ ಬಂದು ತನ್ನ ಪ್ರಿಯತಮನನ್ನು ಹುಡುಕಿಕೊಂಡು ಹೊರಟಿದ್ದಾಳೆ. ನದಿಯ ಆ ದಡದಲ್ಲಿ ಅವಳ ಹೊಸ ಬದುಕು ಅವಳಿಗಾಗಿ ಕಾಯುತ್ತಿದೆ. ಆದರೆ ಹಳೆಯದೆಲ್ಲವನ್ನೂ ಬಿಟ್ಟ