ಪೋಸ್ಟ್‌ಗಳು

Translation of an American Poem ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ವಿನಯ

ಇಮೇಜ್
ಜನ ಕೇಳಿದಾಗ ಪ್ರಶ್ನೆ ಕೊಡುವೆ ಸಿದ್ಧ ಉತ್ತರವನ್ನೇ : "ಓಹೋ ಚೆನ್ನಾಗಿದ್ದೇನೆ, ಎಲ್ಲಾ ನಿಮ್ಮ ಆಶೀರ್ವಾದ" ಮತ್ತೊಬ್ಬರು ಕೇಳಿದಾಗ ಪ್ರಶ್ನೆ ನನ್ನ ಉತ್ತರ ಪುನರಾವರ್ತನೆ: "ನೀವು ಹೇಗಿದ್ದೀರಿ? ನಾನು ಚೆನ್ನಾಗಿದ್ದೇನೆ! ಧನ್ಯವಾದ!" ನಾನು ಉತ್ತರಿಸುವುದು ಖಂಡಿತ ನನ್ನ ಉತ್ತರ ಪೂರ್ವನಿಶ್ಚಿತ ಮತ್ತು ವಿನಯಪೂರ್ವಕ  ಯಾವಾಗಲೂ. ಆದರೆ    ಕೆಲವೊಮ್ಮೆ ಅಂದುಕೊಳ್ಳುತ್ತೇನೆ       ಅವರು ಏನೂ ಕೇಳದಿದ್ದರೆ ಮೇಲು. ಮೂಲ: ಏ ಏ ಮಿಲ್ನ್  ಕನ್ನಡ ಅನುವಾದ: ಸಿ ಪಿ ರವಿಕುಮಾರ್

ನಿನ್ನ ಗುರುತು

ಇಮೇಜ್
 ನಿನ್ನ ಗುರುತು ಮೂಲ : ಎರಿನ್ ಹ್ಯಾನ್ಸನ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಿನ್ನ ವ್ಯಾಖ್ಯಾನವಾಗದು ನಿನ್ನ ವಯೋಮಾನ ಅಥವಾ ನೀ ತೊಟ್ಟ ಬಟ್ಟೆಗಳ ಅಳತೆ  ನೀನಲ್ಲ ನಿನ್ನ ತಲೆಗೂದಲಿನ ಬಣ್ಣ  ಅಥವಾ ತೂಕದ ಯಂತ್ರ ತೋರುವ ಸಂಖ್ಯೆ. "ನೀನು" ಎನ್ನಲಾಗದು ನಿನ್ನ ಹೆಸರನ್ನು ನೀನಲ್ಲ ನಿನ್ನ ಕೆನ್ನೆಯಲ್ಲಿ ಬೀಳುವ ಗುಳಿ ನೀನೆಂದರೆ ನೀನು ಓದುವ ಪುಸ್ತಕ ಮತ್ತು ನಿತ್ಯವೂ ನೀನು ಬಳಸುವ ಪದಾವಳಿ. ಬೆಳಗಿನ ನಿನ್ನ ಗೊಗ್ಗರು ಧ್ವನಿ ನಿನ್ನ ಗುರುತು ನಿನ್ನ ಪರಿಚಯ ನೀನು ಮರೆಮಾಚುವ ನಗೆಮುಗುಳು ನೀನು ನಿನ್ನ ನಗೆಯಲ್ಲಿರುವ ಮಧುರ ಧಾತು ನೀನೇ ನೀನು ಸುರಿಸಿದ ಕಣ್ಣೀರ ಹನಿಗಳು ಒಬ್ಬನೇ ಇದ್ದಾಗ ಹಾಡಿಕೊಳ್ಳುವೆಯಲ್ಲ, ಗಟ್ಟಿ ದನಿಯಲ್ಲಿ, ಆ ಹಾಡು ನೀನು. ನೀನಲೆದಾಡಿದ ಗುಡ್ಡಗಾಡುಗಳು ನೀನು ಮನೆಯೆಂಬ ಹೆಸರಿಟ್ಟ ಗೂಡು ನೀನು. ನಿನ್ನ ನಂಬಿಕೆಗಳು ನೀನು ನಿನ್ನ ಆತ್ಮೀಯರು ನೀನು ನಿನ್ನ ಕೋಣೆಯ ತೂಗುಚಿತ್ರಗಳು ನೀನು ನಿನ್ನಾಸೆ, ಕನಸು, ಆಕಾಂಕ್ಷೆ ನೀನು. ನಿನ್ನನ್ನು ನೀನಾಗಿಸಿದೆ ಎಷ್ಟೊಂದು ಚೆಲುವು ಎಂಬುದನ್ನು ನೀನು ಹೋದಂತಿದೆ ಮರೆತು. ನೀನಲ್ಲದ ವಸ್ತುಗಳಲ್ಲಿ ಯಾವಾಗ ನೀನು ಹುಡುಕಿಕೊಳ್ಳತೊಡಗಿದೆಯೋ ನಿನ್ನ ಗುರುತು.

ಸಂದೇಹಗಳು

 ಅವಳ ಥರ್ಮಾಸ್ ಫ್ಲಾಸ್ಕಿನಲ್ಲಿದ್ದ ಸೂಪ್ ಇನ್ನೂ ಬಿಸಿಯಾಗಿತ್ತು ಆದರೆ ಅವಳೇ ತಣ್ಣಗಾಗಿ ಹೋಗಿದ್ದಳು. ಡಬ್ಬಿಯಲ್ಲಿ ಕಳಿಸಿದ್ದ ಸ್ಯಾಂಡ್ವಿಚ್ ತಿನ್ನಲು ಅವಳಿಗೆ ಅವಕಾಶವೇ ಸಿಕ್ಕಲಿಲ್ಲ.  ಚೀಸ್ ಸ್ಯಾಂಡ್ವಿಚ್ ಮಾಡಲು ನಾನು ಬೆಳಗ್ಗೆ ಬೇಗ ಎದ್ದೆ. ಅವಳಿಗೆ ಇಷ್ಟವಾಗುವಂತೆ ಬ್ರೆಡ್ ಸುತ್ತಲಿನ ಅಂಚನ್ನು ನಾಜೂಕಾಗಿ ಕತ್ತರಿಸಿದ ಸ್ಯಾಂಡ್ವಿಚ್ ಯಾರೂ ತಿನ್ನಲಿಲ್ಲ. ಮುಂದಿನ ಬುಧವಾರ ಹಲ್ಲಿನ ಡಾಕ್ಟರ್ ಅವಳನ್ನು ನೋಡಬೇಕಿತ್ತಲ್ಲ, ಕ್ಯಾನ್ಸಲ್ ಮಾಡಲೇ? ಅಥವಾ ಅವರೇ ತಿಳಿದುಕೊಳ್ಳುತ್ತಾರಾ? ಅಂದು ರಜೆ ಹಾಕಿದ್ದೇ ಆಗಿದೆ ಕ್ಕಿನಿಕ್ಕಿಗೆ ಅವಳ ಅಣ್ಣನನ್ನು ಕರೆದುಕೊಂಡು ಹೋಗಲೇ? ಹಿಂದೆ ಕಾರ್ಲಾಸ್ ಹಲ್ಲಿನಲ್ಲಿ ಕುಳಿಯಾದಾಗ ಹೇಗನ್ನಿಸುತ್ತೆ ಎಂದು ಅಮೆರಿ  ಅವನನ್ನು ಕೇಳಿದ್ದಳು. ಹಲ್ಲಿನ ಕುಳಿಯ ಅನುಭವ ಅವಳಿಗೆ ಇನ್ನು ಆಗುವುದಿಲ್ಲ. ಹಲ್ಲಿನ ಕುಳಿಯನ್ನು ತುಂಬುವ ಅನುಭವವೂ ಆಗುವುದಿಲ್ಲ. ಅವಳ ದೇಹದಲ್ಲಿ ಈಗಿರುವುದು  ಗುಂಡಿನ ಕುಳಿಗಳು. ಅವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ. ಗನ್ ಹೊತ್ತು ಬಂದವನು ತರಗತಿಯನ್ನು ಹೊಕ್ಕು ಬಾಗಿಲು ಮುಚ್ಚಿ ಒಳಗಿದ್ದವರನ್ನು ಸುಟ್ಟುಹಾಕುವ ಒಂದೆರಡು ನಿಮಿಷದ ಮುಂಚೆ ಅವಳು ಶೌಚಕ್ಕೆ ಹೋಗಲು ಅನುಮತಿ ಕೇಳಿದ್ದಿದ್ದರೆ? ಸತ್ತವರಲ್ಲಿ ಅವಳ ಸರದಿ ಮುಂಚಿನದಾಗಿತ್ತೋ ಕೊನೆಯದೋ ? ಇದಕ್ಕೆಲ್ಲಾ ಯಾರಲ್ಲಿ ಉತ್ತರ ಕೇಳಲಿ? ಅವಳ ಗೆಳತಿಯರಲ್ಲಿ ಯಾರು ಸಾಯುವುದನ್ನು ಅವಳು ನೋಡಿದಳೋ? ಹಾನಾ? ಬೆಟ್ಟಿ? ಇಬ್ಬ...

ನಿನ್ನನ್ನು ನೀನೇ ಹುಡುಕಿಕೋ

ಇಮೇಜ್
ಮೂಲ - ಎಮಿಲಿ ಮೆಕ್ ಡೊವೆಲ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನಿನ್ನನ್ನು ನೀನು ಹುಡುಕಿಕೋ  ಎಂದು ಹೇಳುವರಲ್ಲ ಜನ ನೀನೇನು ಕೋಟಿನ ಜೋಬಿನಲ್ಲಿಟ್ಟು ಮರೆತ  ನೂರು ರೂಪಾಯಿಯ ನೋಟೇ? ನೀನೆಲ್ಲೂ ಕಳೆದುಹೋಗಿಲ್ಲ  ನಿನ್ನ ನಿಜಸ್ವರೂಪ ಅಗೋ ಅಲ್ಲೇ ಇದೆ.  ಹುದುಗಿಹೋಗಿದೆ  ಸಂಸ್ಕಾರಗಳೆಂಬ ತಿದ್ದುಪಡಿ, ಒಪ್ಪಓರಣಗಳ ಕೆಳಗೆ, ಪರರ ಅಭಿಪ್ರಾಯಗಳ ಕೆಳಗೆ, ನೀನಿನ್ನೂ ಮಗುವಾಗಿದ್ದಾಗ  ನೀನು ಯಾರೆಂಬ ಪ್ರಶ್ನೆಗೆ ನೀನು  ಕಂಡುಕೊಂಡ ತಪ್ಪುತ್ತರಗಳಿಂದ  ಬೆಳೆದ ನಂಬಿಕೆಗಳ ಕೆಳಗೆ.  ನಿನ್ನನ್ನು ಹುಡುಕಿಕೊಳ್ಳುವುದೆಂದರೆ  ನಿನ್ನತನಕ್ಕೆ ಮರಳುವುದು, ಅಷ್ಟೇ.  ನಿನ್ನನ್ನು ಹುಡುಕಿಕೊಳ್ಳಬೇಕೇ? ನಿನಗೆ ಬೇಕಾಗಿರುವುದು - ಕಲಿತ ತಪ್ಪು ಪಾಠಗಳನ್ನು ಮರೆಯುವುದು, ಅಗೆಯುವುದು, ಮತ್ತು ಜಗತ್ತು ನಿನ್ನನ್ನು ಹಿಡಿಯುವ ಮೊದಲು  ನೀನು ಏನಾಗಿದ್ದೆ ಎಂದು ನೆನೆಯುವುದು 

ಬೆಟ್ಟದ ಗಾಳಿ (ಮಕ್ಕಳ ಕವಿತೆ)

ಇಮೇಜ್
ಮೂಲ - ಎ. ಎ. ಮಿಲ್ನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಬರುವುದೆಲ್ಲಿಂದ  ಬೀಸುವ ಗಾಳಿ, ಹೋಗುವುದೆಲ್ಲಿಗೆ ಎನ್ನುವ ವಿಷಯ - ಕೇಳಿದೆ ಎಷ್ಟೋ ಜನರನು ನಾನೂ ಅರಿಯರು ಯಾರೂ ರ-ಹ-ಸ್ಯ! ಬರುವುದು ಎಲ್ಲಿಂದಲೋ ವೇಗದಲಿ ಹೊರಡಲು ಅಷ್ಟೇ ಗಡಿಬಿಡಿ ತೋರಿ - ಹಿಂಬಾಲಿಸಿದರೂ ಓಡೋಡುತ್ತಾ ಕೈಯಿಗೆ ಸಿಗದೇ ಆಗಿ ಪರಾರಿ! ಪಟಪಟ ಹಾರುವ ಗಾಳೀಪಟದ ದಾರವ ಬಿಟ್ಟರೆ ಮೇಲ್ಗಡೆ ಹಾರಿ ಗಾಳಿಯ ಜೊತೆಗೆ ಹಗಲೂರಾತ್ರಿ ಮಾಡುವಾಗ ಜುಮ್ಮೆಂದು ಸವಾರಿ ಹಿಂಬಾಲಿಸುವೆನು ಪಟವನು ನಾನೂ ಬರುವುದು ನನಗೂ ಪತ್ತೇದಾರಿ! ಕಂಡುಹಿಡಿಯುವೆನು ಖಂಡಿತವಾಗಿ ಹೋಗುವುದೆಲ್ಲಿಗೆ ಗಾಳಿಯು, ಅಲೆಮಾರಿ! ಬಿಡಿಸಿದರೂ ಬೀಸುವ ಸುಳಿಗಾಳಿ ಎಲ್ಲಿಗೆ ಹೋಗುವುದೆಂಬ ರಹಸ್ಯ- ಗೂಢವಾಗಿಯೇ ಉಳಿದುಬಿಡುವುದೇ ಅದರ ಮೂಲ ಎಲ್ಲೆನ್ನುವ ವಿಷಯ! ( c) ಸಿ. ಪಿ ರವಿಕುಮಾರ್, ೨೦೧೯

ವಸುಧೈವ ಕುಟುಂಬಕಮ್

ಇಮೇಜ್
ಮೂಲ: ಮಾಯಾ ಏಂಜೆಲೋ (ಅಮೇರಿಕನ್ ಕವಯಿತ್ರಿ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್  (ಕವಿತೆ ಓದುವ ಮುನ್ನ: ನೀವು ಓದಲಿರುವುದು ಕಪ್ಪು ಅಮೆರಿಕನ್ ಕವಯಿತ್ರಿ ಮಾಯಾ ಏಂಜೆಲೋ ಅವರ ಪ್ರಸಿದ್ಧ ಕವಿತೆ 'ಹ್ಯೂಮನ್ ಫ್ಯಾಮಿಲಿ'ಯ ಅನುವಾದ.  ಕವಿತೆಯ ಸಾಲುಗಳು ಹೀಗೆ ನೇರವಾಗಿ ನಮ್ಮ ಎದೆಗೆ ಬಂದು ನಾಟುತ್ತವೆ ಎಂಬುದನ್ನು ಗಮನಿಸಿ. ಇದು ಮಾಯಾ ಏಂಜೆಲೋ ಅವರ ಕವಿತೆಗಳ ವೈಶಿಷ್ಟ್ಯ ಕೂಡಾ. ಇದೇ ಕವಯಿತ್ರಿಯ ಇನ್ನೂ ಕೆಲವು ಕವಿತೆಗಳ ಅನುವಾದವನ್ನು ನನ್ನ ಬ್ಲಾಗಿನಲ್ಲಿ ನೀವು ಓದಬಹುದು.)      ಗಮನಿಸುತ್ತೇನೆ ಮಾನವ ಕುಟುಂಬದಲ್ಲಿ  ಹಲಕೆಲವು ಸ್ವಯಂವೇದ್ಯ ವ್ಯತ್ಯಾಸ. ಕೆಲವರ ಮುಖದಲ್ಲಿ ಶ್ರೀಮದ್ಗಾಂಭೀರ್ಯ  ಇನ್ನು ಕೆಲವರಿಗಿಷ್ಟ ನಗೆ, ಸುಹಾಸ ಪ್ರಯತ್ನಿಸಿ  ತಮ್ಮ ಜೀವನದಲ್ಲಿ ಕಂಡುಕೊಳ್ಳುತ್ತಾರೆ ಕೆಲವರು ಗಹನತೆ ನಾವು ಬದುಕುವುದೇ ನಿಜಜೀವನ ಎಂದು ಹೇಳಿಕೊಳ್ಳುತ್ತದೆ ಉಳಿದ ಜನತೆ ನಮ್ಮ ಮೈಚರ್ಮದ ವರ್ಣವೈವಿಧ್ಯ ತರುತ್ತದೆ ನಮಗೆ ಗೊಂದಲ, ಸಂತೋಷ, ಬೆಪ್ಪು. ಕಂದು, ಗುಲಾಬಿ, ಪೇಲವ, ನೇರಳೆಗಪ್ಪು ಮೇಘವರ್ಣ, ಹಳದಿ, ಮತ್ತು ಬಿಳುಪು. ದಾಟಿದ್ದೇನೆ ನಾನು ಸಪ್ತಸಮುದ್ರ ಮೆಟ್ಟಿದ್ದೇನೆ ಪ್ರತಿಯೊಂದು ನೆಲವ. ಕಂಡಿರುವೆ ಜಗದ ಅದ್ಭುತಗಳನ್ನು ಕಂಡಿಲ್ಲ ಒಬ್ಬನೂ ಸಾಧಾರಣ ಮಾನವ. ಜೇನ್ ಮತ್ತು ಮೇರಿ ಜೇನ್ ನಾಮಾಂಕಿತ ಮಹಿಳೆಯರು ಹತ್ತು ಸಾವಿರವಾದರೂ ಪರಿಚಿತರು ನನಗೆ. ಇವಳು ಎಲ್ಲವೂ ಅವಳ ಹಾಗೇ ಇದ್ದಾಳ...

ಅಮೇರಿಕನ್ ಗಿಣ್ಣು

ಇಮೇಜ್
ಮೂಲ : ಜಿಮ್ ಡ್ಯಾನಿಯೆಲ್ಸ್ (ಅಮೆರಿಕಾ ಸಂಸ್ಥಾನ) ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಕವಿತೆ ಓದುವ ಮುನ್ನ:  ಬಾಲ್ಯದಲ್ಲಿ ಬಡತನದ ದಿನಗಳನ್ನು ಕಂಡ ಕವಿ ಈಗ ಒಳ್ಳೆಯ ಹುದ್ದೆಯಲ್ಲಿದ್ದಾನೆ.  ಶ್ರೀಮಂತಿಕೆಯ ನಾಜೂಕು ವೈಭವಗಳನ್ನು ಅನುಭವಿಸುವ  ಸಾಮರ್ಥ್ಯ ಈಗ ಅವನಿಗಿದೆ.  ಆದರೂ ಅದೇಕೋ ಬಾಲ್ಯದಲ್ಲಿ ತಾನು ನಿರ್ವಾಹವಿಲ್ಲದೇ ತಿನ್ನಬೇಕಾಗಿದ್ದ ಅಗ್ಗದ ಚೀಸ್ ಇಷ್ಟವಾಗುತ್ತದೆ! ಹೊರಗೆ ಅವನು ಹೇಗಾದರೂ ಇರಲಿ, ಮನೆಗೆ ಬಂದಾಗ ಹಾತೊರೆದು ತಿನ್ನುವುದು ಬಾಲ್ಯದ ನೆನಪುಗಳ ಉಪ್ಪು ಬೆರೆತ ಅಗ್ಗದ ಚೀಸ್!  ಇಟಲಿ, ಸ್ವಿಟ್ಜರ್ಲೆಂಡ್,  ಫ್ರಾನ್ಸ್ ಮುಂತಾದ ಐರೋಪ್ಯ ದೇಶಗಳಿಂದ  ಬರುವ ಬೆಲೆಬಾಳುವ ಗಿಣ್ಣುಗಳಿಗಿಂತಲೂ ಅಮೆರಿಕನ್ ಸಿಂಗಲ್ಸ್ ಎಂಬ ಚೀಸ್ ಬಯಸುವೆ ಎನ್ನುವಾಗ ಕವಿ ಸ್ವದೇಶಪ್ರೇಮವನ್ನೂ ಮೆರೆಯುತ್ತಿರಬಹುದೇ ಎಂಬ ಅನುಮಾನವೂ ನಿಮಗೆ ಬರಬಹುದು.  ಬಾಲ್ಯದಲ್ಲಿ  ತಾಯಿ ಬಡಿಸುತ್ತಿದ್ದ ಏಕಪ್ರಕಾರದ ಅಡುಗೆಯನ್ನು ಬೈದುಕೊಂಡೇ ತಿಂದಿರಬಹುದಾದ ಕವಿಗೆ ಅಪರಾಧಿ ಭಾವವೂ ಕಾಡುತ್ತಿರಬಹುದು. ಡಿಪಾರ್ಟ್ಮೆಂಟ್ ಪಾರ್ಟಿಗಳಲ್ಲಿ ನಾನು ಸೇವಿಸುವ ಚೀಸ್‍ಗಳ  ಹೆಸರನ್ನೂ  ನನ್ನ ತಂದೆತಾಯಿ ಕೇಳಿರಲಾರರು - ಮೆತ್ತಗಿನ, ತೆಳ್ಳನೆಯ ಗಿಣ್ಣುಗಳು  ಮಾತಾಡುತ್ತವೆ  ನಾನು ಕೇಳರಿಯದ ಭಾಷೆ.  ಕಷ್ಟಪಟ್ಟು ನಾನು ಸಾಧಿಸಿದ್ದೇನೆ  ಇವುಗಳನ್ನು ಇಷ್ಟ...

ನಸುಕು ಹರಿಯುವ ಸಮಯ

ಇಮೇಜ್
  ಮೂಲ ಅಮೆರಿಕನ್ ಕವಿತೆ  - ಗಾಲ್ವೇ ಕಿನೆಲ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್   ಪ್ರಸ್ತುತ ಕವಿತೆಯಲ್ಲಿ ಕವಿ ತನಗೆ ಉಂಟಾದ ಒಂದು ಪುಟ್ಟ ಅನುಭವದಲ್ಲಿ ಗೂಢವಾದದ್ದನ್ನು ಅರಸುವ ಪ್ರಯತ್ನ ಮಾಡುತ್ತಿದ್ದಾನೆ.  ಒಂದು ಸಂಜೆ ಕವಿ ಒಂದು ಜಲಧಿಯ ತೀರದಲ್ಲಿ ಕುಳಿತಿದ್ದಾನೆ. ಮಳೆಯ ನಂತರ ಬಗ್ಗಡವಾದ ನೀರಿನಲ್ಲಿ ತೇಲುವ ಅಸಂಖ್ಯ ನಕ್ಷತ್ರಮೀನುಗಳು ಅವನ ಕಣ್ಣಿಗೆ ಬೀಳುತ್ತವೆ. ಅವುಗಳನ್ನು ನೋಡಿ ಅವನಿಗೆ ಆಕಾಶದಲ್ಲಿ ಹೀಗೇ ನಿಧಾನವಾಗಿ ಸಾಗುವ ನಕ್ಷತ್ರಗಳ ಯೋಚನೆ ಬರುತ್ತದೆ.  ಬಹುಶಃ ಅವುಗಳನ್ನು ನೋಡುತ್ತಾ ಕವಿ ಇಡೀ ರಾತ್ರಿ ಕಳೆದನೇನೋ! ನಸುಕು ಹರಿದಾಗ "ನಕ್ಷತ್ರಗಳು" ಒಮ್ಮೆಲೇ "ಕೆಳಗೆ ಉದುರಿಹೋದವು." ಅಲ್ಲಿಯವರೆಗೂ ಕವಿ ಅವುಗಳನ್ನು ನಿಟ್ಟಿಸುತ್ತಾ ತನ್ನ ಕಲ್ಪನಾಜಗತ್ತಿನಲ್ಲಿ ವಿಹರಿಸುತ್ತಿದ್ದ. ನಕ್ಷತ್ರಮೀನುಗಳಲ್ಲಿ ನಿಜವಾದ ತಾರೆಗಳನ್ನು ಕಾಣುವುದು ಕಲ್ಪನೆ. ರಾತ್ರಿಯ ಸಮಯದಲ್ಲಿ ಈ ಭ್ರಮಾಲೋಕ ನಿಜವೆಂದೇ ಭಾಸವಾಗುತ್ತದೆ. ಆದರೆ ನಸುಕಾದಾಗ ಒಮ್ಮೆಲೇ - ಕನಸುಗಳಂತೆ - ಈ ಭ್ರಮಾಲೋಕ ಮಾಯವಾಗುತ್ತದೆ! ಮಳೆಯ ಬಗ್ಗಡ ನೀರಲ್ಲಿ, ಮುಸ್ಸಂಜೆಗೆ ಮುಂಚೆ, ನೂರಾರು ನಕ್ಷತ್ರಮೀನುಗಳು ತೆವಳುತ್ತಿವೆ, ಮಣ್ಣೇ ಆಕಾಶವೋ ಎಂಬಂತೆ, ಅದರ ಉದ್ದಕ್ಕೂ ನಿಧಾನವಾಗಿ ಚಲಿಸುತ್ತಿವೆ ಈ ಅಗಾಧ ಅಪರಿಪೂರ್ಣ ನಕ್ಷತ್ರಗಳು ಎಷ್ಟು ನಿಧಾನವಾಗಿ ಚಲಿಸುತ್ತವೋ ಮೇಲೆ ಸ್ವರ್ಗದಲ್ಲಿ ನಿಜವಾದ ತಾರೆಗಳು. ಅನಂತರ  ಅವು ಹ...

ಬೂದು ಸಾರಸ

ಇಮೇಜ್
ಮೂಲ ಕವಿತೆ - ಗಾಲ್ವೇ ಕಿನ್ನೆಲ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಪ್ರಸ್ತುತ ಕವಿತೆಯಲ್ಲಿ ಒಂದು ಸರಳ ಅನುಭವದಲ್ಲಿ ಅದಕ್ಕಿಂತ ಮೀರಿದ್ದನ್ನೇನೋ ಕಾಣುವ ಪ್ರಯತ್ನವಿದೆ. ಕವಿ ಒಂದು ಬೂದು ಸಾರಸವನ್ನು ನೋಡುತ್ತಾನೆ.  ಬಹುಶಃ ಅವನು ಒಂದು ಕೆರೆಯ ಬದಿಯಲ್ಲಿ ಕುಳಿತಿರಬಹುದು. ಒಂದು ಬೂದು ಸಾರಸ ಪಕ್ಷಿ ಅವನ ಕಣ್ಣಿಗೆ ಬೀಳುತ್ತದೆ.  ಅದನ್ನು ಕವಿ ಹಿಂಬಾಲಿಸುತ್ತಾನೆ. ಆದರೆ ಸಾರಸವು ಹಠಾತ್ ಮರೆಯಾಗಿ ಅದರ ಸ್ಥಾನದಲ್ಲಿ ಒಂದು ಸರೀಸೃಪ ಅವನ ಕಣ್ಣಿಗೆ ಬೀಳುತ್ತದೆ. ಸರೀಸೃಪ ಕುಟುಂಬಕ್ಕೆ ಸೇರಿದ ಡೈನಾಸಾರ್ ಪ್ರಾಣಿಗಳೇ ಹಕ್ಕಿಗಳಾಗಿ ವಿಕಸನ ಹೊಂದಿದವು ಎನ್ನುವ ಹಿನ್ನೆಲೆಯಲ್ಲಿ ಈ ಪದ್ಯವನ್ನು ಓದಿ. ಕವಿಗೆ ಎದುರಾದ ಸರೀಸೃಪ ಅವನತ್ತ ನೋಡಿ "ಇವನು ಹೋಗುತ್ತಾನೋ ಅಥವಾ ಬೇರಾವುದೋ ಪ್ರಾಣಿಯಾಗಿ ರೂಪಾಂತರಗೊಳ್ಳುತ್ತಾನೋ" ಎಂದು ಯೋಚಿಸುತ್ತಿದೆ! ಬಹಳ ಹಳೆಯದನ್ನು ಡೈನಾಸಾರ್ ಎಂದು ಹಂಗಿಸುವ ಪದ್ಧತಿ ಇದೆ. ಆದರೆ ಈ ಸರೀಸೃಪ ಪಕ್ಷಿ ರೂಪದಲ್ಲಿ ಇನ್ನೂ ಬದುಕಿದೆ. ಮನುಷ್ಯನೋ ತನ್ನ ವಿನಾಶವನ್ನು ತಾನೇ ತಂದುಕೊಂಡಿದ್ದಾನೆ. ತಲೆ ಅಲ್ಲಾಡಿಸದು ಅತ್ತಿತ್ತ ತನ್ನ ಕಾಯ ಮತ್ತು ಹಸಿರು ಕಾಲ್ಗಳು ಒಂದು ಪಕ್ಕದಿಂದ ಇನ್ನೊಂದಕ್ಕೆ ಓಲಾಡುತ್ತಾ ಸಾಗುವಾಗಲೂ. ಅದು ನೋಟದಿಂದ ಮರೆಯಾದಾಗ ನಾನು ಹಿಂಬಾಲಿಸಿದೆನಾದರೂ ಹಕ್ಕಿ ಇದೆ ಎಂದುಕೊಂಡಿದ್ದ ಸ್ಥಳದಲ್ಲಿ ನನಗೆ ಕಂಡಿದ್ದಾದರೂ ಏನು ತನಗೊಪ್ಪದ ಚರ್ಮವನ್ನು ಹೊದ್ದು ಗೀರುಬಾಯಿಯ ಮೂಲಕ...

ಬಾವಿಯೊಳಗೆ

ಇಮೇಜ್
ಮೂಲ - ಆಂಡ್ರೂ ಹಡ್ಜಿನ್ಸ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್    ಹಗ್ಗವನ್ನು ಕುಣಿಕೆ ಮಾಡಿದ ಅಪ್ಪ  ಬಿಗಿಗೊಳಿಸಿದ ನನ್ನ ಸೊಂಟದ ಸುತ್ತ.  ಅನಂತರ ಅಂಧಕಾರದ ಗಾಢದೊಳಗೆ   ನನ್ನನ್ನು ಮೆಲ್ಲಗೆ ಇಳಿಬಿಟ್ಟ.  ಒಮ್ಮೆಲೇ ಹಲವಾರು ರುಚಿಗಳು ನನ್ನ ಬಾಯಲ್ಲಿ  ಭೀತಿ, ಕತ್ತಲೆ, ಮಣ್ಣು, ಕೊಳೆಯುವಿಕೆಯ ರುಚಿ. ವಾಕರಿಸಿ ಮುಖ ತಿರುವಿ ತಲೆ ಬಡಿಸಿಕೊಂಡು  ಅನುಭವಿಸುತ್ತೇನೆ ಹೊಸದಾಗಿ ಕಬ್ಬಿಣದ ರುಚಿ  ತುಟಿಗೆ ಹತ್ತಿದ ನೆತ್ತರಿನಲ್ಲಿ. ಅಪ್ಪ ಕೈ ಮೇಲೆ ಕೈ ಇಟ್ಟು ಇಳಿಸುತ್ತಾನೆ ಆಳ ಆಳಕ್ಕೆ ಹಗ್ಗ  ಮೆಲ್ಲಗೆ ಬಿಟ್ಟು ಬಿಟ್ಟು. ಮುಟ್ಟುತ್ತೇನೆ ಕೊನೆಗೆ ತಣ್ಣನೆಯ ನೀರು ಕೂದಲಿನ ರಾಶಿಯೊಂದು ಎದೆಗೆ ಸುತ್ತಿ ನಾನು ಕೂಗಿಕೊಂಡಾಗ ಅಪ್ಪ ಮೇಲೆತ್ತುತ್ತಾನೆ ಒದ್ದೆ ಹಗ್ಗ ಎಳೆದು; ನಾನು ಉಸಿರು ಕಟ್ಟಿ ಮೇಲೆ ಬರುತ್ತೇನೆ ಅವಚಿಕೊಂಡು ಎದೆಗೆ ಪಕ್ಕದ ಮನೆಯ ಕಾಣೆಯಾದ ನಾಯಿ. ಸಾವನ್ನು ಅಪ್ಪಿಕೊಂಡು ಸಾಗಿದಾಗ ಮೊದಲು ಬೆಳಕು, ನಂತರ ಕೈಗಳು ತದನಂತರ ಗಾಳಿ. (ಹುಡುಗನೊಬ್ಬನನ್ನು ತಂದೆ ಬಾವಿಯೊಳಗೆ ಇಳಿಸಿದ್ದಾನೆ.  (ಹಾಗೆ ಇಳಿಸಲು ಒಂದು ಕಾರಣವಿದೆ.)  ಹುಡುಗನಿಗೆ ಇದು ಮೊದಲ ಅನುಭವ. ಕತ್ತಲು ತುಂಬಿದ ಬಾವಿಯೊಳಗೆ ಇಳಿಯುವಾಗ ಅವನನ್ನು ಭಯ ಆವರಿಸುತ್ತದೆ.  ಕೊಳೆತು ನಾರುವ ವಾಸನೆಗೆ ಅವನಿಗೆ ವಾಕರಿಕೆ ಬರುತ್ತದೆ. ಕೆಳಗ...

ಪತ್ರ ಪೋಸ್ಟ್ ಮಾಡಲು ಟೌನಿಗೆ ಹೋಗಿದ್ದ ರಾತ್ರಿ

ಇಮೇಜ್
ಮೂಲ - ರಾಬರ್ಟ್ ಬ್ಲೈ (ಅಮೇರಿಕಾ ಸಂಯುಕ್ತ )  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್   ಚಳಿಗಾಲದ ರಾತ್ರಿ ಹಿಮಪಾತವಾಗಿದೆ.  ನಿರ್ಜನವಾಗಿದೆ ಮುಖ್ಯರಸ್ತೆ.  ಚಲಿಸುವುದೇನಾದರೂ ಕಂಡರೆ ಅದು ಜಾರಿ ಬೀಳುವ ಹಿಮದ ಕಣ. ನಾನು ಅಂಚೆ ಪೆಟ್ಟಿಗೆಯ ಪಿಡಿ ಹಿಡಿದು  ಮೇಲೆತ್ತಿದಾಗ  ಕಬ್ಬಿಣ ಕೊರೆಯುತ್ತಿದೆ.  ಇಷ್ಟವಾಗುತ್ತದೆ ನನಗೆ ಹಿಮರಾತ್ರಿಯಲ್ಲಿರುವ ಖಾಸಗೀತನ. ಕಾರಿನಲ್ಲಿ ಇನ್ನೊಂದಷ್ಟು ಅಡ್ಡಾಡಿ ಮಾಡುತ್ತೇನೆ ಕಾಲಹರಣ. (ಒಂದು ಸರಳ ಅನುಭವವನ್ನು ಕವಿಯು ಕವಿತೆಯನ್ನಾಗಿ ಮಾರ್ಪಡಿಸಿದ್ದಾನೆ. ಹಿಮ ಬಿದ್ದ ರಾತ್ರಿಯಂದು ಸಹಜವಾಗಿ ಎಲ್ಲೆಡೆ ಸ್ತಬ್ಧತೆ ಆವರಿಸಿಕೊಂಡಿದೆ. ಇಂಥ ಹೊತ್ತಿನಲ್ಲಿ ಅಂಚೆಪೆಟ್ಟಿಗೆಯಲ್ಲಿ ಪತ್ರ ಹಾಕಿಬರುವ ಜರೂರು ಏನಿತ್ತು?  ಬೇರೊಬ್ಬರೊಂದಿಗೆ ಹಂಚಿಕೊಳ್ಳುವ ಜರೂರು ಅಂಥದ್ದು.  ಪರರೊಂದಿಗೆ ಮಾತಾಡುವ, ಹಂಚಿಕೊಳ್ಳುವ ಒತ್ತಾಸೆ ಅಷ್ಟಿದ್ದರೂ ನಮಗೆ ನಮ್ಮ ಖಾಸಗೀತನ ಆಪ್ಯಾಯಕರ! ಬೇಕಾದರೆ ಹಿಮ ಸುರಿದ ರಸ್ತೆಗಳಲ್ಲಿ ಅಡ್ಡಾಡಿ ಕಾಲಹರಣ ಮಾಡುತ್ತೇವೆ. ಹೀಗೆ ಏಕಕಾಲದಲ್ಲಿ ನಮ್ಮ ಖಾಸಗೀತನವನ್ನೂ ಸಂವಹನದ ಬಯಕೆಯನ್ನೂ ಕಾದುಕೊಳ್ಳುವ ವಿಪರ್ಯಾಸವನ್ನು ಕವಿತೆ ಹೇಳುತ್ತಿದೆ.)

ಹಿಮ

ಇಮೇಜ್
ಮೂಲ ಅಮೆರಿಕನ್ ಕವಿತೆ  - ಡೇವಿಡ್ ಬರ್ಮನ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಹೊಲದ ಮೂಲಕ ಹಾದು ಹೋಗುತ್ತಿದ್ದೆ ತಮ್ಮ ಸೆತ್ ಜೊತೆ. ಹಿಮದಲ್ಲಿ ಮಕ್ಕಳು ನಿರ್ಮಿಸಿದ್ದ ದೇವತೆಗಳ ಮೂರ್ತಿಗಳ ಕಡೆ ಬೆರಳು ಮಾಡಿ ತೋರಿಸಿದೆ. ನಂತರ ಏನೆನ್ನಿಸಿತೋ ಅವನಿಗೆ ಹೀಗೆಂದೆ - "ಬಂದೂಕಿನಿಂದ ಹೊಡೆದು ಹಾಕಿದ್ದಾರೆ, ಕರಗಿ ಹೋಗುತ್ತಾರೆ ಕುಸಿದು ಬಿದ್ದಾಗ ನೆಲಕ್ಕೆ." ಗುಂಡಿಟ್ಟು ಕೊಂದವರು ಯಾರು ಎಂದು ಕೇಳಿದ. ಒಬ್ಬ ರೈತ, ಎಂದೆ.  ನಾವೀಗ ಸರೋವರದ ಮೇಲೆ ನಡೆಯುತ್ತಿದ್ದೆವು. ಮಂಜು ನೀರಿನ ಛಾಯಾಚಿತ್ರದಂತೆ ತೋರುತ್ತಿತ್ತು. ಯಾಕೆ ? ಅವನು ಕೇಳಿದ. ಯಾಕೆ ಗುಂಡಿಟ್ಟು ಕೊಂದಿದ್ದು? ಈ ಸಂಭಾಷಣೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆಯೋ ತೋಚಲಿಲ್ಲ. ಆತನಿಗೆ ಸೇರಿದ ಜಮೀನಿನ ಮೇಲೆ ಇದ್ದರಲ್ಲ, ಅಂದೆ. ಹಿಮ ಸುರಿಯುವಾಗ ಹೊರಗಿನ ಜಗತ್ತು ಒಂದು ಕೋಣೆಯ ಹಾಗೆ ಕಾಣುತ್ತದೆ.  ಬೆಳಗ್ಗೆ ಪಕ್ಕದ ಮನೆಯವನೊಂದಿಗೆ ಉಭಯ ಕುಶಲೋಪರಿ ನಡೆಸಿದಾಗ ದೂರದಿಂದಲೇ ಕೂಗಿ ನಮ್ಮ ಧ್ವನಿಗಳು ಒಂದನ್ನೊಂದು ಸಮೀಪಿಸಿದಾಗ ಕೋಣೆಯ ಒಂದು ಗೋಡೆ ವಿಸ್ಫೋಟಿಸಿ ಪುಡಿಪುಡಿಯಾಗಿ ನೆಲಕ್ಕೆ ಉದುರಿತು.  ನಾವು ಮತ್ತೆ ತಲೆತಗ್ಗಿಸಿ ಹಿಮ ತೋಡುವುದನ್ನು ಮುಂದುವರೆಸಿದೆವು ಪಕ್ಕಪಕ್ಕದಲ್ಲೇ, ಮೌನವಾಗಿ ಕೆಲಸ ಮಾಡಿದೆವು.  ಅವರು ಯಾಕೆ ಅವನ ಜಮೀನಿನ ಮೇಲಿದ್ದರು? ಎಂದವನು ಕೇಳಿದ. ಕವಿತೆಯ ಸ್ವಾರಸ್ಯ: ನಮ್ಮ ಜಮೀನುಗಳ ನಡುವೆ ...

ವೃಕ್ಷ - ಒಂದು ಕವಿತೆ

ಇಮೇಜ್
ಮೂಲ - ಜಾಯ್ಸ್ ಕಿಲ್ಮರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ನನ್ನ ಕಣ್ಣಿಗಂತೂ ಬಿದ್ದಿಲ್ಲ ಇದುವರೆಗೆ ವೃಕ್ಷದಂತಹ ಒಂದು ಸುಕುಮಾರ ಕವಿತೆ ಹಸಿದ ಬಾಯಿಂದ ಕಚ್ಚಿಕೊಂಡಿಹುದು ವೃಕ್ಷ ಸವಿಯೂಡುವ ಭೂತಾಯಿಯ ಸಮೃದ್ಧ ವಕ್ಷ ದಿನವೆಲ್ಲ ಕಣ್  ಬಾನತ್ತ, ಭಗವಂತನ ವೀಕ್ಷಣೆ ಎಲೆ ತುಂಬಿದ ತೋಳುಗಳ ಮೇಲೆತ್ತಿ ಪ್ರಾರ್ಥನೆ ವೈಶಾಖದಲಿ ತರುವು ತಲೆಯಲ್ಲಿ ಮುಡಿಯುವುದು ಗೊರವಂಕ ಕಾಜಾಣ ಹಕ್ಕಿಗಳ ಗೂಡು ಯಾರ ವಕ್ಷಸ್ಥಳದಲ್ಲಿ ಹೊಳೆಯುವುದೋ ಹಿಮಮಣಿ ಯಾರನ್ನು ರಮಿಸುವಳೋ ವರ್ಷಋತುರಮಣಿ ಕವಿತೆಗಳ ರಚಿಸುವರು ನನ್ನಂಥ ಮೂರ್ಖರು ದೇವನಿಂದ ಮಾತ್ರ ಸಾಧ್ಯ ಸೃಷ್ಟಿಸುವುದು ಈ ತರು!

ಚಿನ್ನದ ಕಣ

ಇಮೇಜ್
ಮೂಲ - ರಾಬರ್ಟ್ ಫ್ರಾಸ್ಟ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಧೂಳೋ ಧೂಳು ಹಾರಾಡುತ್ತದೆ ಊರೊಳಗೆ ನೆಲಕ್ಕೆ ಔಕಿದ ಹೊರತು ಅದನ್ನು ಕಡಲಿನ ಹಬೆ ನನ್ನಂಥ ಮಕ್ಕಳ ಕಿವಿಗೆ ಆಗಾಗ ಬೀಳುತ್ತಿತ್ತು ನುಡಿ: ಈ ಧೂಳಿನಲ್ಲಿ ಸೇರಿದೆ ಒಂದಿಷ್ಟು ಬಂಗಾರದ ಹುಡಿ ಮುಗಿಲೆತ್ತರ ಎದ್ದ ಧೂಳು ಸಂಜೆಯ ಹೊತ್ತು ದೈವ ಸಾಕ್ಷಾತ್ಕಾರದಂತೆ ತೋರುತ್ತಿತ್ತು ದೊಡ್ಡವರು ನನಗೆ ಹೇಳಿದರು, ಮರಿ, ಇದರಲ್ಲಿ ಬೆರೆತಿದೆ ಬಂಗಾರದ ಹುಡಿ ಹೀಗಿತ್ತು ಜೀವನ ಗೋಲ್ಡನ್ ಗೇಟಿನಲ್ಲಿ ಧೂಳಿತ್ತು ಉಂಡದ್ದರಲ್ಲಿ ಕುಡಿದದ್ದರಲ್ಲಿ ನನ್ನಂಥ ಮಕ್ಕಳಿಗೆ ಎಲ್ಲರೂ ಹೇಳುತ್ತಿದ್ದ ಮಾತು ನಮ್ಮ ಪಾಲಿನ ಚಿನ್ನದ ಕಣವನ್ನು ನಾವು ತಿನ್ನಬೇಕು ಕವಿತೆಯ ಸ್ವಾರಸ್ಯ: ಇದನ್ನು ಬರೆದ ರಾಬರ್ಟ್ ಫ್ರಾಸ್ಟ್ ಒಬ್ಬ ಪ್ರಸಿದ್ಧ ಅಮೇರಿಕನ್ ಕವಿ. ಯೌವ್ವನದಲ್ಲಿ ಇವನು ತನ್ನ ಅಜ್ಜ ಬಳುವಳಿಯಾಗಿ ಕೊಟ್ಟ ಹೊಲದಲ್ಲಿ ಒಂಬತ್ತು ವರ್ಷ ದುಡಿದ. ಆದರೆ ಈ ಕೆಲಸದಲ್ಲಿ ಅವನಿಗೆ ಸಿಕ್ಕಿದ್ದು ವೈಫಲ್ಯ ಮತ್ತು ನಿರಾಶೆ.  ಮುಂದೆ ಅವನು ಹೊಟ್ಟೆ ಪಾಡಿಗಾಗಿ ಇಂಗ್ಲಿಷ್ ಅಧ್ಯಾಪಕನಾಗಿ ದುಡಿದ. ರೈತನಾಗಿ ದುಡಿಯುವ ಅವಧಿಯಲ್ಲಿ ಅವನ ಮನಸ್ಸಿನಲ್ಲಿ ಈ ಕವಿತೆ ಹುಟ್ಟಿರಬಹುದು. ಕವಿತೆಯಲ್ಲಿ ಬರುವ ಗೋಲ್ಡನ್ ಗೇಟ್ (ಸೇತುವೆ) ಇರುವುದು ಕ್ಯಾಲಿಫಾರ್ನಿಯಾ ರಾಜ್ಯದಲ್ಲಿ. ಈ ರಾಜ್ಯದಲ್ಲಿ ಒಮ್ಮೆ ಚಿನ್ನದ ಗಟ್ಟಿಗಳು ದೊರೆಯುತ್ತಿದ್ದವು  ಎಂದು ಎಲ್ಲೆಡೆಯಿಂದ ಜನ ಅಲ್ಲಿಗೆ ವಲಸೆ ಬಂದರು. ರಾಬರ್ಟ್ ಫ...

ಕಾರ್ಟೂನ್ ಭೌತಶಾಸ್ತ್ರ - ಭಾಗ ೧

ಇಮೇಜ್
ಮೂಲ: ನಿಕ್ ಫ್ಲಿನ್ (ಅಮೇರಿಕಾ ಸಂಯುಕ್ತ ರಾಷ್ಟ್ರ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಹತ್ತುವರ್ಷಕ್ಕಿಂತ ಚಿಕ್ಕಮಕ್ಕಳಿಗೆ ಗೊತ್ತಿರಕೂಡದು: ನಮ್ಮ ವಿಶ್ವ ಸದಾ ಹಿಗ್ಗುತ್ತಲೇ ಇರುತ್ತದೆ, ನಿರ್ವಾತದಲ್ಲಿ ಮುಖ ತೂರಿಸುವ ತಾರಾಗಣಗಳನ್ನು  ಇಡಿಯಾಗಿ ಕಬಳಿಸುತ್ತವೆ ತಾರಾಗಣಗಳು, ಸೌರ ವ್ಯವಸ್ಥೆಗಳು ಕುಸಿಯುತ್ತವೆ, ಎಲ್ಲವೂ ನಡೆಯುತ್ತದೆ  ನಿಶ್ಶಬ್ದ ಚಲನಚಿತ್ರದಲ್ಲಿ ನಡೆಯುವ ಹಾಗೆ, ಇತ್ಯಾದಿ.  ಹತ್ತು ವರ್ಷವಾದಾಗ ನಾವಿನ್ನೂ ತುಳಿಯುತ್ತಿರುತ್ತೇವೆ  ಕಾರ್ಟೂನ್ ಅನಿಮೇಶನ್ ನಿಯಮಗಳ ಕಲಿಕೆಯ ಹಾದಿ ಅಲ್ಲಿ ಯಾರೋ ಒಬ್ಬ ಬರೆದರೆ ಬಂಡೆಯ ಮೇಲೆ ಬಾಗಿಲ ಚಿತ್ರ  ತೆರೆದು ಒಳಹೋಗಬಲ್ಲ ಅವನೊಬ್ಬ ಮಾತ್ರ.  ಪ್ರಯತ್ನಿಸಿದರೆ ಬೇರೆ ಯಾರಾದರೂ ಬಂಡೆಗೆ ಡಿಕ್ಕಿ ಹೊಡೆದು ಚೂರುಚೂರು.  ಹತ್ತು ವರ್ಷದ ಮಕ್ಕಳ ಪ್ರಪಂಚದಲ್ಲಿ ಇಷ್ಟು ಸಾಕು - ಹೊತ್ತಿ ಉರಿಯುವ ಮನೆಗಳು,  ಫೇಲಾದ ಕಾರ್ ಬ್ರೇಕು, ಮುಳುಗುವ ಹಡಗುಗಳು, ಭೂಮಿಯ ಮೇಲೆ ಆಕ್ರಮಣ  ನಡೆಸುವ ಅದೆಷ್ಟೋ ದುಷ್ಟ ಶಕ್ತಿ,  ಇವರೇ ಅಲ್ಲಿ ನಾಯಕರು. ನುಗ್ಗಬಹುದು  ಓಡುತ್ತಾ ಬಂದು  ಹೊತ್ತಿ ಉರಿಯುವ ಮನೆಯೊಳಗೆ, ಪಾರಾಗಲು  ದೋಣಿಗಳಿವೆ ಹಡಗುಗಳಲ್ಲಿ,  ಧಾವಿಸುತ್ತವೆ ಟ್ರಕ್ಕುಗಳು, ಏಣಿಗಳನ್ನು ಹೊತ್ತು.  ಮೇಲಿಂದ ನೆಗೆದರೆ ಹಿಡಿದುಕೊಳ್ಳ...

ಫ್ಲೋರಿಡಾ ಎಂಬ ಹೆಸರಿನ ಕೋಣೆ

ಇಮೇಜ್
ಮೂಲ ಅಮೇರಿಕನ್ ಕವಿತೆ - ರಿಚರ್ಡ್ ಬ್ಲಾಂಕೋ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್     ಓದುವ ಕೋಣೆಯಲ್ಲ, ಕೂಡಿಹಾಕುವ ಕೋಣೆಯೂ ಅಲ್ಲ,   ಅದಕ್ಕೆ ಅಮ್ಮ ಕೊಟ್ಟ ಹೆಸರು "ಫ್ಲೋರಿಡಾ"   ಸುಂದರ ಹೆಸರು, ಹೊರಗೆ  ಅತ್ಯಂತ ಸುಂದರ ನೋಟ,   ಗಾಢ ಲಿಪ್ ಸ್ಟಿಕ್ ಬಣ್ಣದ  ಕೆಂಪು ದಾಸವಾಳಗಳು    ಕಿಟಕಿ ಗಾಜಿಗೆ ಮುತ್ತಿಡುತ್ತವೆ, ತಂಗಾಳಿಯಲ್ಲಿ  ತೇಲಿ ಬರುತ್ತದೆ ಹಿತ್ತಲಿನ ಮರದಿಂದ ಲಕ್ಕೋಟೆ ಹಣ್ಣುಗಳ ಸಿಹಿ ಸುಗಂಧ     ಅದು ಬಿಸಿಲುಕೋಣೆಯಲ್ಲ,  ಆದರೆ  ಸೂರ್ಯ  ಅಲ್ಲಿಂದಲೇ ಹುಟ್ಟುತ್ತಿದ್ದ,  ಮುಳುಗುತ್ತಿದ್ದ  ಬಾಳೆಲೆಗಳ ನೆರಳು  ದಿನವಿಡೀ  ಹರಿದಾಡುತ್ತಿತ್ತು  ನೆಲದ  ಮೇಲೆ, ಮಳೆಯಾದರೆ ಹೆಚ್ಚು ಸಪ್ಪಳ ಇದೇ ಕೋಣೆಯಲ್ಲೇ   ಗಾಜಿನ ಗೋಲಿಗಳು  ಬಾರಿಸಿದಂತೆ ಯಾವಾಗ ಬೀಳುವುದೋ ಆಕಾಶದಿಂದ ತೆಂಗಿನಕಾಯಿ  ಎಂದು ಹೆದರಿದ್ದ ಛಾವಣಿಯ ಮೇಲೆ.  ಅದು ಆರಾಮಕೋಣೆಯಲ್ಲ, ಆದರೆ  ನಾನು ಕುಳಿತು ಕಳೆದಿದ್ದೇನೆ ತಾಸುಗಟ್ಟಲೆ    ಪಾಲಿಯೆಸ್ಟರ್ ಪರದೆಗಳ ಮೇಲೆ    ತಟಸ್ಥವಾದ ಚಿಟ್ಟೆಗಳ ಜೊತೆ   ಪಿಂಗಾಣಿಯ ನಾಜೂಕು ಬೊಂಬೆಗಳ ಮುಖಗಳ ಜೊತೆ   ಖಿನ್ನಮುಖದ ದೇವತೆಗಳು, ವಿದೂಷಕರು, ರಾಜಕುವ...