ಪೋಸ್ಟ್‌ಗಳು

ಶೇರ್ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹತ್ತು ಶೇರ್ ಗಳು

ಇಮೇಜ್
ಅನುವಾದ - ಸಿ. ಪಿ. ರವಿಕುಮಾರ್  ಬಾಗಿ ನಮಿಸಲು ಬೇಕಾದಷ್ಟಿವೆ ನೆಲಗಟ್ಟು, ತಬ್ಬಿಕೊಳ್ಳುವ ಬಾಗಿಲುಗಳು ಎಲ್ಲೂ ಕಾಣವು ಸುತ್ತಲೂ ಕಾಣುತ್ತಾರೆ ಸಾವಿರಾರು ದೇವರು, ಮಾನವರು ಮಾತ್ರ ಕಾಣರಲ್ಲ ಎಲ್ಲೂ -- ಖಾಲಿದ್ ಹಸನ್ ಕಾದಿರಿ ಮನುಷ್ಯ ಮನುಷ್ಯನನ್ನು ಸಂಧಿಸುತ್ತಾನೆ ಹೃದಯಗಳು ಸಂಧಿಸುವುದು ಮಾತ್ರ ಕಡಿಮೆ -- ಜಿಗರ್ ಮುರಾದಾಬಾದಿ ಮನುಷ್ಯತ್ವವೆಂಬುದು ಬೇರೆ, ಕಲಿಕೆ ಎಂಬುದೇ ಬೇರೆ ಗಿಳಿಗೆ ಎಷ್ಟೇ ಪಾಠ ಹೇಳಿದರೂ ಒರಟು ಪ್ರಾಣಿಯಾಗಿಯೇ ಉಳಿಯಿತು -- ಶೇಖ್ ಇಬ್ರಾಹಿಮ್ ಜೌಕ್ ಯಾರಿಂದ ಮನುಷ್ಯನಿಗೆ ಆಗುವುದೋ ತೊಂದರೆಯೇ ಸದಾ ಅಂಥವರು ತಾವೇ ದೇವಮಾನವರೆಂದು ಮಾಡುತ್ತಿದ್ದಾರೆ ವಾದ -- ಅಬ್ದುಲ್ ಹಮೀದ್ ಅದಮ್ ಭೂಮಿ ಸುತ್ತಿಬಳಸಿ ಸ್ವಸ್ಥಾನಕ್ಕೆ ಬರುತ್ತದೆಯಾದರೂ ಬಾರವು ಏತಕ್ಕೆ ಕಳೆದ ಸಮಯಗಳು ಮರಳಿ ವಾಪಸ್ಸು? -- ಇಬರತ್ ಮಛಲಿಶಹರಿ ತಮ್ಮದೇ ಸಮಸ್ಯೆಗಳನ್ನು ಕುರಿತು ಏನೂ ಮಾಡಲಾಗದವರು ಮಾತಾಡುವರು ತಾವೇ ಎಂಬಂತೆ ದೇವರು -- ಇಫ್ತಿಕಾರ್ ಆರಿಫ್ ಕೆಲವರು ಹಿಂದೂ ಕೆಲವರು ಮುಸಲ್ಮಾನರು ಮತ್ತು ಕೆಲವರು ಕ್ರೈಸ್ತರು ಮನುಷ್ಯರಾಗುವುದಿಲ್ಲ ಎಂದು ಭಾಷೆ ತೊಟ್ಟಂತಿದೆ ಎಲ್ಲರೂ -- ನಿದಾ ಫಾಜಲಿ ಗುಂಪು ಎಂಬುದು ಒಂಟಿತನಗಳ ಸಮ್ಮಿಲನ ಪ್ರತ್ಯೇಕವಾಗಿದ್ದಾರೆ ಜನರಿಂದ ಜನ -- ಸಬಾ ಅಕ್ಬರಾಬಾದಿ ಅವನಿಗೆ ಶತ್ರುಗಳು ಬಹಳ, ಮನುಷ್ಯ ಒಳ್ಳೆಯವನೇ ಇರಬೇಕ...

ಹತ್ತು ಉರ್ದು ಶೇರ್

ಇಮೇಜ್
೧  ಮುಳ್ಳಿಂದಲೇ ತೆಗೆದೆ ಕಾಲಿಗೆ ಚುಚ್ಚಿದ ಮುಳ್ಳು ಏಕೆಂದರೆ ನೋಡಿ ಹೂವಿಗೆ ಬರಗಾಲ ಎಲ್ಲೆಲ್ಲೂ (ಆಕೀಲ್ ಶಾದಾಬ್) ೨ ಹೇಗೆ ಬದುಕಿದ್ದೇನೆ ಭೂಮಿಯ ಮೇಲೆ ಗೊತ್ತೇ? ಶತ್ರುವಿನ ಮನೆಯಲ್ಲಿ ಅತಿಥಿ ರಾತ್ರಿ ಕಳೆದಂತೆ (ಭಗವಾನ್ ದಾಸ್ ಏಜಾಜ್) ೩ ಮನೆಯಲ್ಲೇ ಆಗುಬಹುದು ಭಗವಂತನ ದರ್ಶನ ಮಕ್ಕಳೊಂದಿಗೆ ಮಗುವಾಗಿ ಆಡಿದರೆ ಎರಡು ಕ್ಷಣ (ಬಿಸ್ಮಿಲ್ ನವಶ್ ಬಂದಿ ) ೪ ಎಲ್ಲರ ಮನೆಗೆ ಹೋಗಿ ಕೊಚ್ಚುತ್ತಾರಲ್ಲ ಅವರಿವರ ಬಗ್ಗೆ ಹರಟೆ ಗಮ್ಮತ್ತು ತಮ್ಮ ಮನೆಯಲ್ಲೇ ಅವರಿಗೆ ಸಿಕ್ಕುವುದಿಲ್ಲ ಸವಕಲು ಕಾಸಿನ ಕಿಮ್ಮತ್ತು (ಅಸಿಮ್ ಶಹನಾಜ್ ಶಿಬ್ಲಿ) ೫ ಪ್ರತಿಯೊಂದು ವಿಷಯಕ್ಕೂ ಹಿಂದೂ ಮುಸ್ಲಿಂ ಎನ್ನುವೆಯಲ್ಲ ಕರ್ಮ! ಗೊತ್ತಿಲ್ಲವೇ ನಿನಗೆ ಸುಂದರಿ, ಪ್ರೇಮವೆಂಬುದೇ ಬೇರೆ ಧರ್ಮ (ಜಮಾಲುದ್ದೀನ್ ಆಲಿ) ೬ ಹೇಗೆ ಕೂಡಿಬಂದೀತು ಮಾತು? ಪ್ರತಿಯೊಂದೂ ಇಜ್ಜೋಡು ಕಣ್ಣಿಗಿಂತಲೂ ದೊಡ್ಡದು ಕನಸು, ನಿದ್ದೆಗಿಂತ ರಾತ್ರಿಯೇ ದೊಡ್ಡದು (ಶಾಹಿದ್ ಮೀರ್) ೭ ತೆರಳುವ ಮುನ್ನ ಕಾಲ ಉಳಿಸುವುದು ನೆನಪು ಮಾತ್ರ ಹಲವಾರು ಹಾರಿಹೋದರೂ ಹಕ್ಕಿ ಉಳಿದಂತೆ ಪಂಜರದಲ್ಲದರ ನೆರಳು (ನರೇಶ್) ೮ ಕಿಸೆ ಖಾಲಿಯಾದಾಗ ಹೇಗೆ ತೆಪ್ಪಗಾಗುತ್ತಾನೆ ಮನುಷ್ಯ ನೀರಿಲ್ಲದೇ ಹೋದಾಗ ಹೇಗೆ ತೆಪ್ಪಗಾಗುತ್ತದೋ ಮತ್ಸ್ಯ (ಜಹೀರ್ ಆತಿಶ್) ೯ ಬದುಕಿನುದ್ದಕ್ಕೂ ದೊಡ್ಡ ಮರಗಳನ್ನೇ ಹುಡುಕುತ್ತ ಹಾರಾಡಿದ ಹಕ್ಕಿ ಯಾವುದೋ ಬಳ್ಳಿಯ ತೊಡರಿನಲ್ಲಿ ನೆನ್ನೆ ಅದರ ಮೃತದೇಹ ಸಿಕ್ಕಿ...