ಪೋಸ್ಟ್‌ಗಳು

ನವೆಂಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಏನಾದರೂ ಬೀರುತ್ತಿರು ತಮ್ಮ

ಇಮೇಜ್
  ಬೀರಬಲ್ ಎಂಬ ಹೆಸರಿನಲ್ಲಿ ಕೆಲವರಿಗೆ ಬಲ ಎಂಬುದು ದೊಡ್ಡದಾಗಿ ಕಂಡರೆ ಕೆಲವರಿಗೆ ಬೀರ್ ಎಂಬುದು  ದೊಡ್ಡದಾಗಿ ಕೇಳಿಸಿ ಅದರ ಹೀರಬಲ್ಲ ಸೋದರ ಬಿಯರ್ ನೆನಪಾಗಿ  ಅದಮ್ಯ ಬಾಯಾರಿಕೆ ಸೃಷ್ಟಿಸುತ್ತದೆ. ಬೀರು ಎಂಬುದು ಕನ್ನಡ ಪದವೇ. ಸಂಕ್ರಾಂತಿಯ ದಿನ ಎಳ್ಳುಬೀರುವ ನಾರಿಯರನ್ನೂ ಮತ್ತು ಕ್ರಾಂತಿಯ ವಿಭ್ರಾಂತಿಯಲ್ಲಿ ಕಲ್ಲು ಬೀರುವ ಬೀದಿಮಾರಿಯರನ್ನೂ ನೀವು ನೋಡಿಯೇ ಇರುತ್ತೀರಿ.  ಎಳ್ಳು ಮತ್ತು ಕಲ್ಲು ಅಲ್ಲದೆ ಬೀರಬಲ್ (beerable, adj.) ವಸ್ತುಗಳು ಬಹಳ ಇವೆ. ಗಂಡುಬೀರಿ,ಹಲ್ಲುಬೀರಿ (ರ) ಇತ್ಯಾದಿಗಳು ನಿಮಗೆ ಪರಿಚಿತವಾದ ಜನರೇ. ಬೀರ ಎಂಬುದು ವೀರ ಎಂಬ ಪದದ ಇನ್ನೊಂದು ರೂಪ. ವೀರಬಲ ಎಂಬುದೇ ಬೀರಬಲ್ ಆಗಿದೆ ಎಂದಾದರೆ ಹಲ್ಲುಬೀರ ಎಂದರೆ ಯಾರು? ಹಲ್ಲನ್ನೇ ಆಯುಧವಾಗಿ ಬಳಸುವ ವೀರನೆ?  ನೇಗಿಲನ್ನು ಆಯುಧವಾಗಿ ಬಳಸಿಕೊಂಡ ಬಲರಾಮ ಹೇಗೆ ಹಲಾಯುದನೋ ಹಾಗೆ ಹಲ್ಲಿನಿಂದ ಕಚ್ಚುವವನು ಹಲ್ಲಾಯುಧ.  ಇನ್ನು ಗಂಡುಬೀರಿ ಎಂದರೆ ಗಂಡಿನಂತೆ ವೀರಯುದ್ಧ ಮಾಡಿದವಳೇ ಗಂಡುಬೀರಿ ಎಂದು ಅರ್ಥೈಸುವುದು ರೂಢಿ. ಇಂದಿನ ಮಹಿಳಾ ವಿಮೋಚನಾ ಯುಗದಲ್ಲಿ ಇದನ್ನು ಹೇಳುವುದು ಕಷ್ಟ. ಗಂಡಿನಂತೆ ವೀರ ಯುದ್ಧ ಮಾಡುವುದು ಎಂಬುದನ್ನು ಕೇಳುತ್ತಲೇ ಎಷ್ಟೋ ಜನ ವಿಮೋಚಕಿಯರು ವೀರಗಚ್ಚೆ ಹಾಕಿ ಯುದ್ಧಕ್ಕೆ ಸನ್ನದ್ಧರಾಗುವರು.    ನಗೆ ಬೀರುವುದು ಎಂಬ ಪ್ರಯೋಗವೂ ಸಾಮಾನ್ಯ.  ಆದರೆ ನಗೆಬೀರ ಎಂಬ ಪ್ರಯೋಗವನ್ನು ನಾನೆಂದೂ ಕೇಳಿಲ್ಲ.  ಜೋಕಿಗೆ ನಗಬಲ್ಲ ವೀರರೇ ನಗೆವೀರರು ಎಂದಾದರೆ ಇಂಥ ನಗ

ಮಕ್ಕಳ ದಿನ

ಇಮೇಜ್
ಮಕ್ಕಳಿದ್ದವರನ್ನು ಕೇಳಿ ಮಕ್ಕಳ ದಿನ ಯಾವುದೆಂದು ಹುಟ್ಟಿದಾಗ ಅತ್ತರೂ  ಕಣ್ಣಲ್ಲಿ ಮುತ್ತು ತುಂಬಿಕೊಳ್ಳುವ ತಾಯಿ ಎಂದೂ ಹಾಡದ ತಂದೆಯೂ ಕಲಿತು ಹಳ್ಳುಳ್ಳಾಯಿ ಸೀತವಾದರೆ ಕೆಮ್ಮಾದರೆ ರಾತ್ರಿ ಇಡೀ ಜಾಗರಣೆ  ಹೆಗಲಮೇಲೆ ಹೊತ್ತು ರಥಯಾತ್ರೆ ವಿಜೃಂಭಣೆ ರಾತ್ರಿ ಕುಸುಕುಸು ಸದ್ದು ನಿದ್ದೆಯಲ್ಲೇ ಎದ್ದು ಒದ್ದೆಯಾಗಿದೆಯೇ ಬೇಕಾಗಿದೆಯೇ ಹಾಲು ಹೊಟ್ಟೆನೋವೇ ಏನೋ ತಿಳಿಯದೆ ಕಂಗಾಲು ತಾರಮ್ಮಯ್ಯ ಎಂದಾಗ ನಕ್ಕರೆ ಬೀಗಿ ತೂಗಿ ತೂಗಿ ಮಲಗದ ಮಗುವಿಗೆ ರೇಗಿ ಹೆಜ್ಜೆ ಇಟ್ಟರೆ ಸಂಭ್ರಮ ಅಪ್ಪ ಅಮ್ಮ ಎಂದರೆ ವಿಭ್ರಮ ಮೊದಲ ದಿನ ಸ್ಕೂಲಲ್ಲಿ ಹೋ ಎಂದು ಅತ್ತಾಗ ಅಳದಿದ್ದರೂ ಕರುಳು ಕಿತ್ತಂತೆ ಇತ್ತಾಗ  ಎಷ್ಟು ಬೆಳೆಯಿತು ಎಂದು ಹಾಕುತ್ತಾ ಗೀಟು ಏಳು ಏಳು ಶಾಲೆಗೆ ಹೊತ್ತಾಯಿತು ಶಾಲೆಯಲ್ಲಿ ಸಂಭ್ರಮದ ಆನುವಲ್ ಡೇ  ಹಿಂದಿನ ಸಾಲಿನಲ್ಲಿ ಡ್ಯಾನ್ಸ್ ಮಾಡುವ ಮಗು ನಮ್ಮದೇ ಒಂದು ಎರಡು ಶಿಶುಗೀತೆ ಹಾಡು ಮೂರು ನಾಕು ಮಗ್ಗಿ ಉರು ಹಾಕು ಏಳು ಎಂಟು ಆಲ್ಜೀಬ್ರಾ ನಂಟು ಒಂಬತ್ತು ಹತ್ತು ಮೀಸೆ ಬಂದಿತ್ತು ಎನ್ನುತ್ತಾ ಕಳೆಯುತ್ತಾರಲ್ಲ ದಿನವೆಲ್ಲಾ  ಒಂದರ ನಂತರ ಒಂದು ಕೇಳಿ ಅವರನ್ನು ಮಕ್ಕಳ ದಿನ ಯಾವುದೆಂದು ಸಿ ಪಿ ರವಿಕುಮಾರ್ #ಕವಿತಾಸ್ಫೂರ್ತಿ

ಮೊಳಕಾಲ್ಮೂರು!!

ಇಮೇಜ್
  ಯಾವ ಊರಿನ ಹೆಸರು ಕೇಳಿರದೇ ಇದ್ದರೂ ಮೊಳಕಾಲ್ಮೂರು ಹೆಸರನ್ನು ಎಲ್ಲರೂ ಕೇಳಿರುತ್ತಾರೆ. ಊರಿನ ಹೆಸರು ಅಂಥದ್ದು. ನೆನಪಿನಲ್ಲಿ ಉಳಿಯುವಂಥದ್ದು.  ಈ ಊರಿನ ಹೆಸರು ಅದು ಹೇಗೆ ಬಂತೋ! ಮೊಳಕಾಲಮ್ ಪ್ಲಸ್ ಊರು ಈಕ್ವಲ್ಸ್ ಮೊಳಕಾಲ್ಮೂರು ಎಂದು ಅದೇ ಊರಿನ ಒಬ್ಬರು ಅಂಕಣಕಾರರು ಹೇಳಿದರು. ಅವರು ಬರೆಯುವ ಕಾಲಂ ಅಳೆದರೆ ಒಂದು ಮೊಳ ಕರೆಕ್ಟಾಗಿ ಇರುತ್ತಿತ್ತು.  ಸಂತೆಗೆ ಒಂದು ಮೊಳ ನೇದಂತೆ ಎಂಬ ವಾಕ್ಯದಿಂದ ಪ್ರೇರಿತರಾಗಿ ಅವರು ಬರೆಯುತ್ತಿರಬಹುದು. ಮೊಳ ಕಾಲಂ ಊರು ಎಂಬ ಅವರ ವಿವರಣೆ ನನಗಂತೂ ಪಥ್ಯವಾಗಲಿಲ್ಲ. "ನೋಡಿ, ಈ ಊರು ಬಹಳ ಹಳೆಯದು. ಅದಕ್ಕೆ ಹಿಂದಿನಿಂದಲೂ ಇದೇ ಹೆಸರಿದೆ. ನೀವು ಕಾಲಂ ಬರೀತಿರೋದು ಒಂದು ಆರು ತಿಂಗಳಿಂದ, ಅಷ್ಟೇ." ಎಂದು ನಾನು ವಾದಿಸಿದೆ. ಇದರಿಂದ ಅವರು ಕೋಪಗೊಂಡು ನನ್ನ ಫೇಸ್ಬುಕ್ ಅಂಚೆಗಳಿಗೆ ಲೈಕ್ ಹಾಕುವುದನ್ನು ಬಿಟ್ಟರು. ಬಹುಶಃ ನನ್ನನ್ನು ಅಗೆಳೆಯ (unfriend) ಮಾಡಿರಲೂ ಬಹುದು. ಅದೇ ಧೈರ್ಯದ ಮೇಲೆ ಅವರ ಬಗ್ಗೆ ಬರೆಯುತ್ತಿರುವೆ.  ರಿಸರ್ಚ್ ಇಲ್ಲದೆ ಏನನ್ನೂ ಒಪ್ಪದ ಯುಗ ಇದು. ಹಾಗಾಗಿ ಹೆಸರಿನ ಒಗಟು ಬಿಡಿಸಲು ವಿಕಿಪೀಡಿಯ ನೋಡಿದೆ. ಮೊಳಕಾಲ್ಮೂರು ಹೆಸರಿಗೆ ತಕ್ಕಂತೆ ಕನ್ನಡದಲ್ಲೇ ಮೂರು ಪುಟಗಳು ಸಿಕ್ಕವು. ಒಂದೊಂದೂ ಮೂರೂ ಕಾಲು ಮೊಳ ಇದೆಯಾ ಎಂದು ಅಳತೆ ಮಾಡಿ ನೋಡುವ ಇಚ್ಛೆಯಾದರೂ ನಾನು ಹಾಗೆ ಮೊಳ ಹಾಕುವುದನ್ನು ನೋಡಿ ಜನ ಏನು ತಿಳಿದಾರೋ ಎಂದು ಸುಮ್ಮನಾದೆ. ಒಂದು ವಿಕಿಪೀಡಿಯ ಪುಟದಲ್ಲಿ ಮುರಿದ ಮೊಳಕಾ

ಗುಬ್ಬಚ್ಚಿಗೆ

ಇಮೇಜ್
 ಎಲ್ಲಿ ಕಾಣಲೇ ಇಲ್ಲವಲ್ಲ ಬಹಳ ದಿನ ಎಲ್ಲಿ ಹಾರಲು ಪ್ರೇರೇಪಿಸಿತು ಮನ! ಒಮ್ಮೊಮ್ಮೆಯಾದರೂ ಹಾಕುತ್ತಿರು ಸ್ವಂತಿ ಲೈಕ್ ಹಾಕಲಿ ಬಿಡಲಿ ಜನರು! ಏನಂತೀ? ಗೆಳೆಯರಾದ ಮೇಲೆ ಸ್ನೇಹ ಯಾಚಿಸಿ ಬಂದು ಕಾಣೆಯಾಗುವರಲ್ಲ ಕೆಲವು ಫೇಸ್ಬುಕ್ ಬಂಧು ಅವರಂತೆ ನೀನೂ ತಲೆ ಮರೆಸಿಕೊಂಡು ಹೋಗಿಬಿಟ್ಟೆಯೋ ಏನೋ ಮಾಡಿ ಅನ್ಫ್ರೆಂಡು! ಟ್ವೀಟ್ ಮಾಡುತ್ತಿರುವುದೆಲ್ಲ ಗೂಗೆ-ರಣಹದ್ದು ಎಂದು ನಿಲ್ಲಿಸಿಬಿಟ್ಟೆಯಾ ನಿನ್ನ ಚಿಲಿಪಿಲಿ ಸದ್ದು! ಯಾರೂ ಕಿವಿ ಮುಚ್ಚುವುದಿಲ್ಲ, ನಿನಗೇಕೆ ಚಿಂತೆ ಕಾದಿರಬಹುದು ನಿನ್ನುಲಿಗೇ, ಗದ್ದಲದ ಸಂತೆ! ಸಿ. ಪಿ. ರವಿಕುಮಾರ್ #ಕವಿತಾಸ್ಫೂರ್ತಿ

ಇಂಟರ್ನೆಟ್ ಉಗಮದಲ್ಲಿ ಸುದ್ದಿ ಗುಂಪುಗಳು

 ಇಂಟರ್ನೆಟ್ ಹೊಸದಾಗಿದ್ದಾಗ ಇಂದಿನ ಹಾಗೆ ಸಾಮಾಜಿಕ ತಾಣಗಳು ಇರಲಿಲ್ಲ. ಗೂಗಲ್ ಇವೆಲ್ಲ ಇನ್ನೂ ಬಂದಿರಲಿಲ್ಲ. ಯೂನಿಕ್ಸ್ ಬಳಕೆದಾರರಿಗೆ ರೀಡ್ ನ್ಯೂಸ್ ಎಂಬ ಒಂದು ತಂತ್ರಾಂಶ ಇತ್ತು. ಬಳಕೆದಾರರು ನ್ಯೂಸ್ ಗ್ರೂಪ್ಸ್ ಅಥವಾ ಸುದ್ದಿಗುಂಪುಗಳನ್ನು ಸೃಷ್ಟಿಸಿ ಅಲ್ಲಿ ತಮಗೆ ಇಷ್ಟವಾದ ಸಂಗತಿಗಳನ್ನು ಕುರಿತು ಹರಟೆ ಹೊಡೆಯಬಹುದಾಗಿತ್ತು. ಇವು ಇನ್ನೂ ಇವೆ. ಇಲ್ಲಿ ಜಾಹೀರಾತುಗಳ ಕಿರಿಕಿರಿ ಇಲ್ಲ. ಗಂಭೀರ ವಿಷಯಗಳ ಮೇಲೆ ಚರ್ಚೆ ಸಾಧ್ಯವಾಗಿತ್ತು. ಉದಾಹರಣೆಗೆ ಕಂಪ್ಯೂಟರ್ ಸೈನ್ಸ್ ವಿಷಯ ಕುರಿತಾದ ಸುದ್ದಿಗುಂಪಿನಲ್ಲಿ  ಗುಂಪಿಗೆ ಸೇರಿದ ಯಾರೇ ಬೇಕಾದರೂ ಪ್ರಶ್ನೆ ಕೇಳಬಹುದು.ಅದಕ್ಕೆ ಉಳಿದವರು ಉತ್ತರ ಹೇಳಬಹುದು. ಇಂದು ಕೋರಾ ಇದಕ್ಕೆ ಸಮೀಪದ್ದು. ವ್ಯತ್ಯಾಸ ಎಂದರೆ ಆಗ ಬಹಳ ಪ್ರಸಿದ್ಧ ಪ್ರಾಧ್ಯಾಪಕರು ಮತ್ತು ಸಂಶೋಧಕರು ಈ ಗುಂಪುಗಳಲ್ಲಿ ಭಾಗವಹಿಸುತ್ತಿದ್ದರು. ಭಾರತಕ್ಕೆ ಸಂಬಂಧಿಸಿದ ಒಂದು ನ್ಯೂಸ್ ಗ್ರೂಮ್ ಕೂಡಾ ಇತ್ತು. ಅದು ಈಗಲೂ ಅಸ್ತಿತ್ವದಲ್ಲಿ ಇರಬಹುದು. ಆದರೆ ಆಗ ಅದು ಬಹಳ ಸಕ್ರಿಯವಾಗಿತ್ತು. ಅಮೆರಿದಲ್ಲಿ ಓದುತ್ತಿದ್ದ ಬಹಳ ಮಂದಿ ಪಿಎಚ್.ಡಿ. ಮತ್ತು ಎಂ.ಎಸ್. ವಿದ್ಯಾರ್ಥಿಗಳು ಈ ಗುಂಪಿನಲ್ಲಿ ಚರ್ಚೆ ಮಾಡುತ್ತಿದ್ದರು. ನಾನು ಆಗ ಕ್ಯಾಲಫೋರ್ನಿಯಾದಲ್ಲಿ ವಿದ್ಯಾರ್ಥಿ. ಥೀಸಿಸ್ ಬರೆಯುವ ನಡುವೆ ನಾನು ಕೂಡಾ ಈ ಗುಂಪಿನಲ್ಲಿ ಸಕ್ರಿಯನಾಗಿದ್ದೆ. ಕನ್ನಡದ ನೂರಾರು ಕವಿತೆ ಮತ್ತು ಕತೆಗಳನ್ನು ಆಗ ಭಾಷಾಂತರಿಸಿ ಹಂಚಿದ್ದೇನೆ. ಭಾರತದಲ್ಲಿ ಆಗ ಎಲ್ಲರ

ಫೇನ್ ಮನ್ ಹೇಳಿದ ಕಥೆ

ಇಮೇಜ್
  ಆ ಹುಡುಗ ನನ್ನನ್ನು ಕೇಳಿದ ಸ್ವಲ್ಪ ಸೊಕ್ಕಿ, ಅಲ್ಲಿ ಬೊಡ್ಡೆಯ ಮೇಲೆ ಕೂತಿದೆಯಲ್ಲ ಹಕ್ಕಿ - ಅದರ ಹೆಸರೇನು ಗೊತ್ತಾ? ಊಹೂಂ ಗೊತ್ತಿಲ್ಲ ಎಂದೆ ಅನುಮಾನಿಸುತ್ತ. ಅದು ಕಂದು ಕತ್ತಿನ ಕಾಜಾಣ! ನಿಮ್ಮಪ್ಪ  ಏನೂ ಹೇಳಿಕೊಟ್ಟೇ ಇಲ್ಲ ,ವಿಜ್ಞಾನ! ನಾನು ನನ್ನಷ್ಟಕ್ಕೆ ನಕ್ಕೆ ಒಳಗೊಳಗೇ ಏಕೆಂದರೆ ಅಪ್ಪ ನನಗೆ ಕೊಟ್ಟಿದ್ದ ತಿಳಿವಳಿಕೆ ಏನೂ ತಿಳಿಸದು ನಮಗೆ ಹಕ್ಕಿಯ ಹೆಸರು ಅದೋ ಅಲ್ಲಿ ಹಕ್ಕಿ ಕಾಣುತ್ತಿದೆಯಲ್ಲ ನೋಡು ಕಂದು ಕತ್ತಿನ ಕಾಜಾಣ ಎನ್ನುವರು ಇಲ್ಲಿ ಹಾಲ್ಸೆನ್ಫ್ಲ್ಯೂಜೆಲ್ ಎನ್ನುವರು ಜರ್ಮನಿಯಲ್ಲಿ ಚೈನಾ ಭಾಷೆಯಲ್ಲಿ ಚಂಗ್ ಲಿಂಗ್ ಎನ್ನುವರು ಈ ಎಲ್ಲಾ ಹೆಸರು ತಿಳಿದುಕೊಂಡಿದ್ದರೂ ತಿಳಿಯದು ಹಕ್ಕಿಯ ವಿಷಯ ಒಂದು ಚೂರೂ ತಿಳಿಯುವುದು ಏನಿದ್ದರೂ ಹಕ್ಕಿಗೆ ಜನರಿಟ್ಟ ಹೆಸರು ಕಾಜಾಣ ಹಾಡುತ್ತದೆ, ಹಾರುವುದನ್ನು ಕಲಿಸುತ್ತದೆ ಮರಿಗೆ ಮೈಲುಗಟ್ಟಲೆ ಹಾರಿ ಬರುತ್ತದೆ ಬಂದಾಗ ಬೇಸಗೆ ಹೇಗೆ ಕಂಡು ಹಿಡಿಯುವುದೋ ದಾರಿ, ಕಾಜಾಣ - ಅರ್ಥೈಸಿಕೊಂಡಿಲ್ಲ ಯಾವ ಜಾಣ! ಇಟ್ಟ ಹೆಸರಿಗೂ ಮತ್ತು ವಾಸ್ತವಕ್ಕೂ ಅಂತರ ಇರುವುದನ್ನು ಅಪ್ಪ ಹೇಳಿಕೊಟ್ಟ ಈ ಥರ.

ತಂದೂರ್ ರೊಟ್ಟಿ

 ಹಾಸ್ಟಲ್ ವಾರ್ಡನ್ ಜವಾಬ್ದಾರಿಯನ್ನು ವಹಿಸಿಕೊಂಡು ನಾನು ವಾರ್ಡನ್ ಮನೆಯ ಗೃಹಪ್ರವೇಶ ಮಾಡಿ ಒಂದೆರಡು ವಾರಗಳಾಗಿದ್ದವು. ಗೃಹಪ್ರವೇಶ ಎಂದರೆ ಹಾಲು ಉಕ್ಕಿಸುವುದು, ಅಷ್ಟೇ. ಹಾಸ್ಟಲ್ ಕೆಲಸಗಳು ಹೇಗೆ ನಡೆಯುತ್ತವೆ ಎಂದು ಕ್ರಮೇಣವಾಗಿ ಅರ್ಥಮಾಡಿಕೊಳ್ಳುತ್ತಾ ಸಾಗುತ್ತಿದ್ದೆ. ಏನೂ ತೊಂದರೆಯಾಗದಿದ್ದರೆ ಅಷ್ಟೇ ಪುಣ್ಯ ಎಂಬ ಮನೋಭಾವನೆಯನ್ನು ನಾನು ತಳೆದಿದ್ದೆ. ನನಗೆ ಕೇಳಿಬರುತ್ತಿದ್ದ ದೂರುಗಳಲ್ಲಿ ಪ್ರಮುಖವಾದದ್ದು ಮೆಸ್ ಆಹಾರದ ಬಗ್ಗೆ. ಒಂದು ದಿನ ಸಂಜೆ ಒಬ್ಬ ಹುಡುಗ ತನ್ನ ಊಟದ ತಟ್ಟೆಯನ್ನೇ ಹಿಡಿದು ನಮ್ಮ ಮನೆಯ ಬಾಗಿಲು ಬಡಿದ. ಅವನ ಹಿಂದೆ ಇನ್ನಷ್ಟು ಜನ ಹುಡುಗರು ನಿಂತಿದ್ದರು. ಅಸಿಸ್ಟೆಂಟ್ ಮೆಸ್ ಸೂಪರ್ವೈಸರ್ ಬಿಷ್ಟ್  ಕೂಡಾ ಇದ್ದ. ನಾನು: ಏನಾಯಿತು? ತಟ್ಟೆ ಹಿಡಿದ ಹುಡುಗ: ಸರ್ ನೋಡಿ ನಿಮ್ಮ ಹಾಸ್ಟೆಲಿನಲ್ಲಿ ಕೊಡಲಾಗುತ್ತಿರುವ ರೋಟಿ ಹೇಗಿದೆ! ನಾನು: ಯಾಕೆ, ಏನಾಗಿದೆ? ತಹಿಹು: ಸರ್ ಇದು ತಿನ್ನಲು ಲಾಯಕ್ಕಾಗಿದೆಯೇ! ಅಡಿಯೆಲ್ಲ ಕಪ್ಪಾಗಿದೆ. ಎಷ್ಟು ದಪ್ಪ ಇದೆ. ಹಲ್ಲಿನಿಂದ ಕಚ್ಚಲೂ ಆಗದ ಹಾಗಿದೆ ... ನಾನು: ಏನು ಬಿಷ್ಟ್ ಜೀ, ನಿಮ್ಮ ಅಭಿಪ್ರಾಯ ಏನು? ಬಿಷ್ಟ್: ಸರ್, ನನ್ನ ಮಾತು ಕೇಳಿ. ಇವರು ಊಟಕ್ಕೆ ಬಂದಿದ್ದು ತಡವಾಗಿ. ಈಗ ನೋಡಿ ಗಂಟೆ ಎಂಟೂಮುಕ್ಕಾಲು ಚಳಿಗಾಲದಲ್ಲಿ ಏಳು ಗಂಟೆಗೇ ಡಿನ್ನರ್ ಪ್ರಾರಂಭ. ತಂದೂರಿ ರೋಟಿ ಬಿಸಿಯಾಗಿ ತಿಂದರೆ ತಾನೇ ಚೆನ್ನ! ನ್ಯಾಯವಾಗಿ ಇವರು ತಡವಾಗಿ ಬಂದವರು, ಮೆಸ್ ಮುಚ್ಚಿದ ಮೇಲೆ ಹಿಂಬದಿಯ ಬಾಗಿಲಿನ

ಹಾಲನು ಮಾರಲು.ಹೋಗುವ ಬಾರೇ ಬೇಗ ಸಖೀ

 ನಸುಕಿನಲ್ಲೇ ವಾರ್ಡನ್ ಮನೆಯ ಬಾಗಿಲನ್ನು ಯಾರೋ ಬಡಿದರು. ಆಗ ದೆಹಲಿಯಲ್ಲಿ ಚಳಿಗಾಲ. ದೆಹಲಿಯ ಚಳಿಯ ಪ್ರಕೋಪವನ್ನು ಅನುಭವಿಸಿದವರೇ ಬಲ್ಲರು. ಅದರಲ್ಲೂ ಪುಟ್ಟ ಮಕ್ಕಳು ಮನೆಯಲ್ಲಿದ್ದರೆ ಕಿರುಕುಳಕ್ಕೆ ಮತ್ತೊಂದು ಆಯಾಮ ಸಿಕ್ಕಂತೆ.  ಮಗಳು ಆಗಿನ್ನೂ ವರ್ಷ ತುಂಬಿದ ಮಗು. ಅವಳು ಮಗುವಾಗಿದ್ದಾಗಲೂ ರಾತ್ರಿ ಜಾಗರಣೆ ಮಾಡಿ ಬೆಳಗ್ಗೆ ನಿದ್ರಿಸುವ ಅಭ್ಯಾಸ ಮಾಡಿಕೊಂಡಿದ್ದಳು. ವಾರ್ಡನ್ ಜವಾಬ್ದಾರಿ ಸ್ವೀಕರಿಸುವ ಮುನ್ನ ನಾವು ಆಗ ವೈಶಾಲಿ ಅಪಾರ್ಟ್ಮೆಂಟ್ಸ್ ಎಂಬ ಸಮುಚ್ಚಯ ವಸತಿಯಲ್ಲಿದ್ದೆವು. ಆ ಮನೆಯಲ್ಲಿ  ಹಜಾರದಿಂದ ಒಳಕೋಣೆಯವರೆಗೂ ಉದ್ದದ ಓಣಿಯಂತಹ ದ್ವಾರವಿತ್ತು. ನನ್ನ ಹೆಂಡತಿ ಅದಕ್ಕೆ ಹೊಂದುವ ಕಾರ್ಪೆಟ್ ಮಾಡಿಸಿ ಹಾಕಿದ್ದಳು. ರಾತ್ರಿ ಹತ್ತು ಗಂಟೆಗೆ ಮಲಗುವ ಸಮಯವೆಂದರೆ ಮಗಳು ಅತ್ಯಂತ ಚೈತನ್ಯದಿಂದ ಆಡಲು ಸಿದ್ಧಳಾಗಿರುತ್ತಿದ್ದಳು! ಅವಳ ತಾಯಿಗೆ ಇಡೀ ದಿನ ಅವಳನ್ನು ನೋಡಿಕೊಂಡು ಸುಸ್ತಾಗಿಹೋಗಿರುತ್ತಿತ್ತು. ಆಟಕ್ಕೆ ನಾನೇ ಸಿಕ್ಕುತ್ತಿದ್ದೆ. ಒಂದು ಗಂಟೆ ಹಾಗೂ ಹೀಗೂ ಆಟದಲ್ಲಿ ಕಳೆಯುತ್ತಿತ್ತು. ಹನ್ನೊಂದು ಸಮೀಪಿಸಿದಾಗ ನನಗೂ ತೂಕಡಿಕೆ ಪ್ರಾರಂಭವಾಗುತ್ತಿತ್ತು. ಅವಳನ್ನು ಉದ್ದದ ಕಾರ್ಪೆಟ್ ಮೇಲೆ ಮಲಗಿಸುತ್ತಿದ್ದೆ. ಆಗ ಅವಳಿಗೆ ಒಂದು ಕಡೆಗೆ ಮಾತ್ರ ಬೋರಲಾಗಲು ಬರುತ್ತಿತ್ತು. ತೆಂಗಿನಕಾಯಂತೆ ಉರುಳುತ್ತಾ ಓಣಿಯ ಇನ್ನೊಂದು ತುದಿ ತಲುಪುವಳು. ಅಲ್ಲಿ ಕೋಣೆಯ ಬಾಗಿಲು ಸಿಕ್ಕುತ್ತಿತ್ತು. ಉರುಳುವುದು ಅಸಾಧ್ಯವೆಂದಾಗ ಅವಳು ಪ್ರತಿಭಟಿಸುತ್ತಿದ

ಭುವನೇಶ್ವರಿಯ ನೆನೆ ಮಾನಸವೆ!

ಇಮೇಜ್
  ಭುವನೇಶ್ವರಿ ನಮ್ಮ ರಾಜ್ಯೋತ್ಸವಕ್ಕೆ ಬಂದದ್ದು ನಿಮಗೆ ಗೊತ್ತೇ? ಹೌದು, ಸಾಕ್ಷಾತ್ ಭುವನೇಶ್ವರಿ!  ಇಲ್ಲ, ಭುವನೇಶ್ವರಿಯ ಕೈಯಲ್ಲಿ ಯಾವ ಆಯುಧಗಳೂ ಇರಲಿಲ್ಲ. ಹಳದಿ ಕೆಂಪು ಧ್ವಜವೂ ಇರಲಿಲ್ಲ.  ನಮಗೆಲ್ಲ ಸ್ವಲ್ಪ ನಿರಾಸೆ ಆಯಿತು. ಭುವನೇಶ್ವರಿಯ ಜೊತೆ ಸೆಲ್ಫೀ ತೊಗೊಂಡು ಸೋಷಿಯಲ್ ಮೀಡಿಯಾ ಮೇಲೆ ನಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಲ್ಲುವ  (ಅಲ್ಲ ಹೆಚ್ಚಿಸಿಕೊಳ್ಳುವ) "ಸೆಲ್ಫೀಷ್" ಮೋಟೋ ಹೊಂದಿದ್ದ ಸೆಲ್ಫೀಶ್ ಹಾಗೂ ಸೆಲ್ಫೀಷಿನಿಯರು ಸಪ್ಪೆ ಮುಖ ಹಾಕಿಕೊಂಡು ಕೂತರು. ಆದರೆ ಕೆಲವೇ ನಿಮಿಷಗಳಲ್ಲಿ  ಎಲ್ಲರ ಮೈಯಲ್ಲಿವಿದ್ಯುತ್ ಸಂಚಾರ ಆಯಿತು. ಇಲ್ಲ, ಯಾವ ಶಾರ್ಟ್ ಸರ್ಕ್ಯುಟ್ ಆಗಲಿಲ್ಲ! ಭುವನೇಶ್ವರಿಯ ಮಾತುಗಳಿಂದ ಎಲ್ಲರ ಮೈಯಲ್ಲಿ ವಿದ್ಯುತ್ ಸಂಚಾರ ಆಯಿತು, ಅಷ್ಟೇ. ಕಾಳಿಯನ್ನು ಪ್ರಾರ್ಥಿಸಿದ ತೆನಾಲಿ ಅವಳನ್ನು ನೋಡಿ ನಕ್ಕನಂತೆ. ಕುಪಿತಗೊಂಡ ಕಾಳಿ ಇವನು ನಕ್ಕಿದ್ದಕ್ಕೆ ಏನು ಕಾರಣ ಎಂದು ಕೇಳಿದಳು. "ತಾಯಿ! ನನಗೆ  ಇರುವುದು ಒಂದು ಮುಖ, ಆದರೂ ನೆಗಡಿ ಬಂದಾಗ ಎಷ್ಟು ಕಷ್ಟ ಪಡುತ್ತೇನೆ! ನಿನಗೆ ಅಷ್ಟೊಂದು ಮುಖಗಳು! ನಿನಗೆ ನೆಗಡಿ ಆದರೆ ನೀನೆಷ್ಟು ಫಜೀತಿ ಪಡುತ್ತೀ ಎಂದು ನೆನೆದು ನಗು ಬಂತು!" ಎಂಬ ಉತ್ತರ ಕೇಳಿ ಕಾಳಿಗೂ ನಗುಬಂತು. (ತೆನಾಲಿಗೆ  #ನಗುಬಂತಾ ಎಂದು ಟ್ಯಾಗ್ ಮಾಡುವ ಕಷ್ಟ ಎಂದೂ ಬರಲಿಲ್ಲ.)  ಕಾಳಿಯು ಅವನಿಗೆ ವಿಕಟಕವಿ ಎಂಬ ಬಿರುದು ಕೊಟ್ಟಳು. ವಿಕಟಕವಿ ಎಂಬುದು ಕನ್ನಡದಲ್ಲಿ ಪ್ಯಾಲಿನ್ಡ್ರೋಮವೆಂಬುದು ವ