ಪೋಸ್ಟ್‌ಗಳು

ಡಿಸೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಾಜಪೇಯಿ ಅವರ ಎರಡು ಕವಿತೆಗಳು

ಇಮೇಜ್
  ಮೂಲ ಹಿಂದಿ ಕವಿತೆ: ಅಟಲ್ ಬಿಹಾರಿ ವಾಜಪೇಯಿ  ಕನ್ನಡಕ್ಕೆ: ಸಿ ಪಿ ರವಿಕುಮಾರ್   ಕ್ಷಮಾಯಾಚನೆ  ನಮ್ಮನ್ನು ಕ್ಷಮಿಸು ಬಾಪೂ! ನಾವು ವಚನ ಮುರಿದ ಅಪರಾಧಿಗಳು, ರಾಜಘಾಟ್ ನಮ್ಮಿಂದ ಅಪವಿತ್ರವಾಯಿತು, ಯಾತ್ರೆ ಮಧ್ಯದಲ್ಲೇ ಗುರಿಯನ್ನು ಮರೆತೆವು. ಜಯಪ್ರಕಾಶ್ ಜೀ! ನಂಬಿಕೆ ನಮ್ಮಲ್ಲಿರಲಿ, ಭಗ್ನ ಸ್ವಪ್ನಗಳ ಪುನಃ ಜೋಡಿಸಿ ಉರಿದ ಚಿತೆಯ ಭಸ್ಮದ ಕಿಡಿಯಿಂದ ಕತ್ತರಿಸುವೆವು ಕತ್ತಲ ಬಂಧ! ಸ್ವಾತಂತ್ರ್ಯ  ಸ್ವಾತಂತ್ರ್ಯೋತ್ಸವ  ಆಚರಿಸುವೆವು ಹೊಸ ಗುಲಾಮಗಿರಿ ನಡುವೆ; ಒಣಗಿದೆ ನೆಲ, ಅಂಬರ ಬರಿದಾಗಿದೆ, ಮನಸಿನಲ್ಲಿ ಬರಿ ಕೊಚ್ಚೆ; - ಮನಸಿನಲ್ಲಿ ಬರಿ ಕೊಚ್ಚೆ, ಒಣಗಿಹವು ಕೆಂದಾವರೆ ಒಂದೊಂದೂ, ಆರಿಹೋಗಿ ಒಂದೊಂದೇ ದೀಪ, ಎಲ್ಲೆಡೆ ಕತ್ತಲು ಕವಿದು. ಕೈದಿಯಾಗಿರುವ ಕವಿಯ ಉವಾಚ, ಕಳೆದುಕೊಳ್ಳದಿರು ಸ್ಥೈರ್ಯ, ನಿಶಾರಕ್ಕಸಿಯ ಎದೆಯ ಸೀಳಿ ಕಂಗೊಳಿಸಿ ಮಿನುಗುವನು ಸೂರ್ಯ!

ಹಣತೆಯ ಮತ್ತೆ ಬೆಳಗುವ ಬನ್ನಿ!

ಇಮೇಜ್
ಮೂಲ ಹಿಂದಿ ಕವಿತೆ : ಅಟಲ್ ಬಿಹಾರಿ ವಾಜಪೇಯಿ  ಅನುವಾದ: ಸಿ ಪಿ ರವಿಕುಮಾರ್  ಕವಿತೆಯನ್ನು ಕುರಿತು   ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ನಮ್ಮ ದೇಶದ ಪ್ರಧಾನಿಯಾಗಿದ್ದವರು. ಅವರು ಹಿಂದಿಯಲ್ಲಿ ಎಂಟು ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಈ ಕವಿತೆಯಲ್ಲಿ ಕವಿಗೆ ದೇಶ ಹಾದಿ ತಪ್ಪುತ್ತಿದೆ ಎನ್ನುವ ತಲ್ಲಣವಿದೆ. ಸುತ್ತಲೂ ತಮ (ಕತ್ತಲು) ಕವಿದಂತೆ ಭಾಸವಾಗುತ್ತಿದೆ. ಕತ್ತಲೆ ಇರುವುದು ನಮ್ಮ ಮನಸ್ಸಿನ ಒಳಗೆ; ಅದನ್ನು ಹೋಗಲಾಡಿಸಲು ನಮಗೆ ಬೇಕಾಗಿರುವುದು ವಿದ್ಯೆ ಮತ್ತು ಇಚ್ಛಾಶಕ್ತಿ. ಇಂದಿನ ಮೋಹದಲ್ಲಿ ನಾವು ನಾಳೆಯನ್ನೇ ಮರೆತು ಬಿಡುತ್ತಿದ್ದೇವೆಯೇ ಎಂದು ಕವಿಗೆ ಭಯವಾಗುತ್ತದೆ. ನಮ್ಮ ದೇಶ ಇನ್ನೂ ಪ್ರಗತಿಪಥದಲ್ಲಿ ಸಾಕಷ್ಟು ಮುಂದೆ ಹೋಗಬೇಕಾಗಿದೆ. ಈ ಪ್ರಗತಿಯಲ್ಲಿ ನಮ್ಮ ಒಳಜಗಳಗಳೇ ನಮಗೆ ವಿಘ್ನಗಳು. ದೇವ-ದಾನವರ ಕಾಳಗದಲ್ಲಿ ಬೇಕಾದ ವಜ್ರಾಯುಧವನ್ನು ದಧೀಚಿ ಎಂಬ ಮಹರ್ಷಿಯ ಬೆನ್ನುಮೂಳೆಯಿಂದ ತಯಾರಿಸಲಾಯಿತಂತೆ. ಇಂದಿನ ಯುವಕರು ತಮ್ಮ ಪ್ರಯಾಸದಿಂದ ವಿಘ್ನಗಳನ್ನು ಪಾರು ಮಾಡಿ ದೇಶವನ್ನು ಮುಂದಕ್ಕೆ ಕರೆದೊಯ್ಯಬೇಕು ಎಂಬುದು ಕವಿಯ ಆಶಯ.  ನಡುಹಗಲಲ್ಲೂ  ತಮಾಂಧಕಾರ ನೆರಳಿಗೆ ಸೋತಿರುವನು ದಿವಾಕರ ಒಳಗಿನ ತಮಸ್ಸಿಗೆ ನೀಡು ತಿಲಾಂಜಲಿ ಮನಸಿನಾಳಕ್ಕೆ ಬೆಳಕು ಹರಿಯಲಿ!               ಹಣತೆಯ ಮತ್ತೆ ಬೆಳಗುವ ಬನ್ನಿ! ಬಳಸನ್ನೇ ಗುರಿಯೆಂದು ನಂಬಿದೆವು ಧ್ಯೇಯವೇ ಮರೆಯಾಗಿ ಹೋಯಿತು ವರ್ತಮಾನ-ಮೋಹದ ಸುಳಿಯಲ್ಲಿ ಸಿಕ್ಕಿ ಮರ

ಕೆಲವಂ ಬಲ್ಲವರಿಂದ && ಬಲ್ಲೆವೆಂದು ಬಲ್ಲವರಿಂದ ಕಲ್ತು

ಇಮೇಜ್
ಬಹಳ ಹಿಂದೆ ನಾನು  ಇಂಗ್ಲಿಷ್ ಭಾಷಾಂತರದಲ್ಲಿ ಓದಿದ ಒಂದು ಅರೇಬಿಯನ್ ಗಾದೆ ಹೀಗಿದೆ: ಯಾರಿಗೆ ಗೊತ್ತಿದೆಯೋ ಮತ್ತು ತಮಗೆ ಗೊತ್ತು ಎಂದು ಗೊತ್ತಿದೆಯೋ ಅವನು ಜ್ಞಾನಿ, ಅವನನ್ನು ಗುರುವಾಗಿ ಸ್ವೀಕರಿಸು. ಯಾರಿಗೆ ಗೊತ್ತಿದೆಯೋ, ಆದರೆ   ತಮಗೆ ಗೊತ್ತಿದೆ ಎಂದು ಗೊತ್ತಿಲ್ಲವೋ ಅವರನ್ನು ನಿದ್ರೆಯಿಂದ ಎಚ್ಚರಿಸು.  ಯಾರಿಗೆ ಗೊತ್ತಿಲ್ಲವೋ ಮತ್ತು ತಮಗೆ ಗೊತ್ತಿಲ್ಲವೆಂದು ಗೊತ್ತಿದೆಯೋ ಅವರು ಮುಗ್ಧರು, ಅವರಿಗೆ ತಿಳುವಳಿಕೆ ನೀಡು. ಯಾರಿಗೆ ಗೊತ್ತಿಲ್ಲವೋ ಮತ್ತು ತಮಗೆ ಗೊತ್ತಿಲ್ಲವೆಂದೂ   ಗೊತ್ತಿಲ್ಲವೋ ಅವರು ಮೂರ್ಖರು, ಅವರಿಂದ ದೂರವಿರು. ನೀವು ಯಾವುದೋ ವಿಷಯವನ್ನು ಕುರಿತು ವಿಷಯ ಸಂಗ್ರಹಣೆ ಮಾಡಬೇಕು ಎಂದುಕೊಳ್ಳಿ. ಈಗಂತೂ ಗೂಗಲ್ಲಿಗೆ ಹೋಗಿ ಏನೇ ಹುಡುಕಿದರೂ ಅದು ಪುಟಗಟ್ಟಲೆ ಮಾಹಿತಿ ಕಕ್ಕಿಬಿಡುತ್ತದೆ! ಇವುಗಳಲ್ಲಿ ಯಾವುದನ್ನು ನಂಬುವುದು? ಯಾವುದನ್ನು ಸ್ವೀಕರಿಸುವುದು? ಅರೇಬಿಯನ್ ಗಾದೆ ನಮಗೆ ಸಹಾಯ ಮಾಡುತ್ತದೆ.  ಕೆಲವರಿಗೆ ವಿಷಯ ಗೊತ್ತಿರುತ್ತದೆ; ಅಷ್ಟೇ ಅಲ್ಲ, ತಮಗೆ ಅದು ಗೊತ್ತು ಎಂಬುದರ ಅರಿವೂ ಇರುತ್ತದೆ. ಹೀಗಾಗಿ ಅವರನ್ನು ಕೇಳಿದರೆ ಅವರು ಆತ್ಮವಿಶ್ವಾಸದಿಂದ ನಿಮಗೆ ವಿಷಯವನ್ನು ಹೇಳಿಕೊಡುತ್ತಾರೆ. ಇಂಥ ಗುರುಗಳು ಸಿಕ್ಕುವುದು ಅಪರೂಪ. ಕುಮಾರವ್ಯಾಸ "ಗುರುವರಿಯದವನೆ ಮರುಳ" ಎಂದಿದ್ದಾನೆ. ಇಂಥ ಗುರುಗಳು ಸಿಕ್ಕಾಗ ಗುರುತಿಸದೇ ಹೋದವನು ಮರುಳ ಎನ್ನುವುದು ಈ ಮಾತಿನ ಅರ್ಥ.   ಕೆಲವರಿಗೆ ವಿಷಯ ಗೊತ್ತಿ

ಏನೋ ತಪ್ಪಾಗಿದೆ ಎಂದೇ ಅರ್ಥ

ಇಮೇಜ್
(ಪೇಶಾವರ್ ಹುತಾತ್ಮರಿಗೆ  ಶ್ರದ್ಧಾಂಜಲಿ) ಮೂಲ ಹಿಂದಿ ಕವಿತೆ - ಪ್ರಸೂನ್ ಜೋಷಿ  ಕನ್ನಡಕ್ಕೆ - ಸಿ ಪಿ ರವಿಕುಮಾರ್  ನಿ ನ್ನ ತೋಳುಗಳಲ್ಲಿ ಬಾಲ್ಯ ಯಾವಾಗ ಬರಲು ಹಿಂಜರಿಯುವುದೋ ತಾಯ ಗರ್ಭದಿಂದ ಇಣುಕಿದ ಜೀವ ಯಾವಾಗ ಹೊರಬರಲು ಅಳುಕುವುದೋ ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ. ಖಡ್ಗಗಳು ಯಾವಾಗ ಹೂಗಳ ಮೇಲೆ ಪ್ರಹಾರ ಮಾಡುತ್ತವೋ ಮುಗ್ಧ ಕಣ್ಣುಗಳಲ್ಲಿ ಯಾವಾಗ ಭೀತಿ ಇಣುಕುತ್ತದೋ ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ. ಕೋಮಲ ಹಿಮಬಿಂದುಗಳ ಧಾರೆ ಅಂಗೈ ಮೇಲಲ್ಲದೆ  ಶಸ್ತ್ರಗಳ ಅಲುಗಿನಲ್ಲಿ ಹರಿದಾಗ  ಹಾದುಹೋಗಬೇಕಾದಾಗ ಪುಟ್ಟ ಪುಟ್ಟ ಹೆಜ್ಜೆಗಳು ಬೆಂಕಿಯ ನಡುವೆ  ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ. ಹೆದರಿಕೆಗೆ ಒಮ್ಮೆಲೇ ನಿಂತುಹೋದಾಗ ನಗು-ಕೇಕೆ ಸ್ಮಶಾನಮೌನದಲ್ಲಿ ಕರಗಿಹೋದಾಗ ತೊದಲು ನುಡಿ ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ. ಅಂತಿಂಥ ತಪ್ಪಲ್ಲ, ತೀರಾ ದೊಡ್ಡದೇ ನಡೆದುಹೋಗಿದೆ. ಜೋರಾಗಿ ಮಳೆಯಾಗಬೇಕಾಗಿತ್ತು ಇಡೀ ಜಗತ್ತಿನಲ್ಲಿ. ಎಲ್ಲಾ ಕಡೆ ಹನಿಯಬೇಕಾಗಿತ್ತು ಕಣ್ಣೀರು. ಮೇಲಿರುವವನು ಬಿಕ್ಕಿಬಿಕ್ಕಿ ಅಳಬೇಕಾಗಿತ್ತು ಆಕಾಶದಲ್ಲಿ. ನಾಚಿಕೆಯಿಂದ ತಗ್ಗಬೇಕಾಗಿತ್ತು ಮನುಷ್ಯನ ಸಭ್ಯತೆಯ ಕುತ್ತಿಗೆ. ಶೋಚನೀಯ ಕಾಲವಲ್ಲ ಇದು, ಯೋಚನೆಯ ಕಾಲ; ಅಂತ್ಯಕ್ರಿಯೆಯ ಕಾಲವಲ್ಲ ಇದು, ಪ್ರಶ್ನೆಗಳ ಕಾಲ; ಇಷ್ಟಾದ ಮೇಲೂ ಮಾನವ ತಲೆ ಎತ್ತಿ ನಿಲ್ಲಬಲ್ಲವನೇ ಆದರೆ ತಿಳಿದುಕೋ, ಏನೋ ತಪ್ಪಾಗಿದೆ ಎಂದೇ ಅರ್ಥ.

ಕನ್ನಡ ಡಿಂಡಿಮ

ಇಮೇಜ್
ಬೆಂಗಳೂರಿನಲ್ಲಿ ನಡೆದ ಕೆಲವು ಘಟನೆಗಳು. ಘಟನೆ ಒಂದು. ಸ್ಥಳ - ಕ್ಷೌರದ ಅಂಗಡಿ. ಈಗ ಅದನ್ನು ಯಾರೂ ಈ ಹೆಸರಿನಿಂದ ಕರೆಯುವುದಿಲ್ಲ. "ಸಲೂನ್", "ಹೇರ್ ಡ್ರೆಸಿಂಗ್ ಸಲೂನ್", ಇತ್ಯಾದಿ ಹೆಸರುಗಳಿಂದ ಕರೆಯುವುದು ರೂಢಿಯಾಗಿದೆ. ಮಾತಾಡುವಾಗ ಕೆಲವರು "ಬಾರ್ಬರ್ ಶಾಪ್" ಅಂತಲೂ ಕರೆಯಬಹುದು.  ನಾನು ನನ್ನ ತಲೆಯನ್ನು ಬಾರ್ಬರನಿಗೆ ಒಪ್ಪಿಸಿ ಕುಳಿತಿದ್ದೇನೆ.  ಗಿರಾಕಿಗಳು ಕಾಯಲು ಕೂಡುವ ಬೆಂಚಿನ ಮೇಲೆ ಒಬ್ಬ ಪುಟ್ಟ ಹುಡುಗ ತಾಯಿಯ ಜೊತೆ ಕುಳಿತಿದ್ದಾನೆ. ಪುಟ್ಟ ಹುಡುಗನ ತಮ್ಮ ತಾಯಿಯ ತೊಡೆಯ ಮೇಲೆ ಕುಳಿತಿದ್ದಾನೆ. ಬೆಂಚ್ ಮೇಲೆ ಕುಳಿತ ಹುಡುಗ ಅರಳು ಹುರಿದ ಹಾಗೆ ತಮ್ಮ ಮತ್ತು ತಾಯಿಯ ಜೊತೆ ಕನ್ನಡದಲ್ಲಿ ಹರಟೆ ಹೊಡೆಯುತ್ತಿದ್ದಾನೆ. ಅವನ ಭಾಷೆ ಕೇಳಲು ನಿಜಕ್ಕೂ ಚೆನ್ನಾಗಿದೆ.  ಅವನು ಹೇಳಿದ್ದಕ್ಕೆಲ್ಲಾ ಅವನ ತಾಯಿ ಮುರುಕಲು ಇಂಗ್ಲಿಷ್ ನಲ್ಲಿ ಉತ್ತರ ಕೊಡುತ್ತಿದ್ದಾಳೆ. ಈಕೆ ಬಾಬ್ ಕಟ್ ಮಾಡಿಸಿಕೊಂಡಿರುವುದನ್ನು ನಾನು ಕನ್ನಡಿಯಲ್ಲಿ ಗಮನಿಸುತ್ತೇನೆ. ಘಟನೆ ಎರಡು. ಒಂದು ಕಾಲೇಜಿನಲ್ಲಿ ನನ್ನನ್ನು ಮೀಟಿಂಗ್ ಗಾಗಿ ಕರೆದಿದ್ದಾರೆ. ಗೇಟ್ ನಲ್ಲಿ ಆರಕ್ಷಕ ಸಿಪಾಯಿ (ಸೆಕ್ಯೂರಿಟಿ ಗಾರ್ಡ್) ನಮ್ಮ ಕಾರನ್ನು ಒಂದು ಕ್ಷಣ ನಿಲ್ಲಿಸಿ ಎಲ್ಲಿಗೆ ಹೋಗಬೇಕು ಎಂದು ಕೇಳುತ್ತಾನೆ. ನನ್ನನ್ನು ಕರೆದುಕೊಂಡು ಹೋದ ಡ್ರೈವರ್ ಗೆ ಇದು ಗೊತ್ತಿದೆ - ಅವನು ಅದನ್ನು ತಿಳಿಸುತ್ತಾನೆ. (ಟ್ಯಾಕ್ಸಿ ಡ್ರೈವರ್ ಕನ್ನಡ ಬಲ್ಲವನು

ರಾಜ್ ಕಪೂರ್ ನೆನಪು

ಇಮೇಜ್
ಸಿ ಪಿ ರವಿಕುಮಾರ್ ಈ ನವೆಂಬರ್ ತಿಂಗಳಲ್ಲಿ ನಾನು ವಿಮಾನದಲ್ಲಿ ಬೆಂಗಳೂರಿನಿಂದ ಅಮೆರಿಕಾಗೆ ಪ್ರಯಾಣ ಮಾಡಿದಾಗ ಭಾರತೀಯ ಭಾಷೆಗಳ ಅನೇಕ ಚಲನಚಿತ್ರಗಳು ಮನರಂಜನೆಯ ಮೆನುವಿನಲ್ಲಿದ್ದವು. ಬಾಲಿವುಡ್ ಚಿತ್ರಗಳಲ್ಲದೆ ಕನ್ನಡ, ತಮಿಳು, ತೆಲುಗು ಚಿತ್ರಗಳೂ ಇವುಗಳಲ್ಲಿ ಸೇರಿದ್ದವು. ಕೇವಲ ಐದು ವರ್ಷಗಳ ಹಿಂದೆ ಈ ಸ್ಥಿತಿ ಇರಲಿಲ್ಲ. ಮನರಂಜನೆ ಎಂದರೆ ಹಾಲಿವುಡ್ ಚಿತ್ರಗಳು ಮಾತ್ರ ಎನ್ನುವ ಪರಿಸ್ಥಿತಿ ಇತ್ತು. ಇವತ್ತು ಭಾರತದಲ್ಲಿ ತಯಾರಾದ ಚಲನಚಿತ್ರಗಳಿಗೆ ವಿದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ಬಹುಶಃ ಮೊಟ್ಟಮೊದಲು ಭಾರತೀಯ ಚಿತ್ರಗಳನ್ನು ನಮ್ಮ ದೇಶದಿಂದ ಹೊರಗೆ ಜನಪ್ರಿಯಗೊಳಿಸಿದ ಕೀರ್ತಿ ರಾಜ್ ಕಪೂರ್ ಅವರಿಗೆ ಸಲ್ಲುತ್ತದೆ. ಐವತ್ತು ಮತ್ತು ಅರವತ್ತರ ದಶಕಗಳಲ್ಲಿ ಅವರು ತಯಾರಿಸಿದ ಕಪ್ಪು-ಬಿಳುಪು ಚಿತ್ರಗಳು ರಷ್ಯಾ ಮತ್ತು ಜಪಾನ್ ದೇಶಗಳಲ್ಲಿ ಜನಪ್ರಿಯವಾದವು. ಆವಾರಾ ಚಿತ್ರವಂತೂ ಅದ್ಭುತ ಯಶಸ್ಸು ಗಳಿಸಿತು. ನೆಹರೂ ಅವರ ಸರ್ಕಾರ ರಷ್ಯನ್ ದೇಶದೊಂದಿಗೆ ವಿಶೇಷ ಸಂಬಂಧ ಹೊದಿದ್ದು ಕೂಡಾ ಇದಕ್ಕೆ ಕಾರಣವಾಗಿರಬಹುದು. ರಷ್ಯನ್ ಮತ್ತು ಜಪಾನ್ ದೇಶದ ಜನರಿಗೆ ರಾಜ್ ಕಪೂರ್ ಅವರ ಮುಗ್ಧ ಪಾತ್ರಗಳ ಅಭಿನಯ ಹಿಡಿಸಿತು. ಮುಂದೆ "ಮೇರಾ ನಾಮ್ ಜೋಕರ್" ಎಂಬ ರಾಜ್ ಕಪೂರ್ ಚಿತ್ರದಲ್ಲಿ ಒಬ್ಬ ರಷ್ಯನ್ ನಟಿ ನಟಿಸಿದರು ಕೂಡಾ. ಸಮಾಜದ ಅನ್ಯಾಯಗಳಿಗೆ ಸಿಕ್ಕಿ ಹಾಕಿಕೊಳ್ಳುವ ಒಬ್ಬ ಮುಗ್ಧ ಯುವಕನ ಪಾತ್ರಗಳಲ್ಲಿ  ರಾಜ್ ಕಪೂರ್ ಎಲ್ಲರ ಸಹಾನುಭೂತಿ

ಓಜಿಮಾಂಡಿಯಾಸ್

ಇಮೇಜ್
ಓಜಿಮಾಂಡಿಯಾಸ್  ಮೂಲ ಕವಿತೆ - ಪಿ ಬಿ ಷೆಲ್ಲಿ ಕನ್ನಡಕ್ಕೆ - ಸಿ ಪಿ ರವಿಕುಮಾರ್  ದೂ ರದಾವುದೋ ಪುರಾತನ ನೆಲದಿಂದ ಊರುತ್ತಾ ಕೋಲನ್ನು ಬಂದ ಯಾತ್ರಿಕನೊಬ್ಬ ಅರುಹಿದನು - ಮುಂಡವಿಲ್ಲದ ಕಲ್ಲಿನ ದೊಡ್ಡ ಕಾಲುಗ- ಳೆರಡು ನಿಂತಿವೆ ಮರಳುಗಾಡಲ್ಲಿ; ಬದಿಯಲ್ಲಿ ಅರೆಬರೆ ಹೂತುಹೋದ ಭಗ್ನ ಮುಖದಲ್ಲಿ ಕೆರಳಿದೆ ಮುಂಗೋಪ, ತಿರುಚಿದ ತುಟಿಯಲ್ಲಿ ಮರಗಟ್ಟಿದೆ ಯಾವುದೋ ಆದೇಶ; ಶಿಲ್ಪಿ ಯಾರೋ ಗ್ರಹಿಸಿ ಸೆರೆ ಹಿಡಿದಿದ್ದಾನೆ ಕ್ರೂರ ಹೃದಯದ ಸೊಕ್ಕು; ಪೀಠದ ಮೇಲೆ ಬರೆದಿದೆ - "ಓ ನೋಡಿ, ನನ್ನ ಹೆಸರು ಓಜಿಮಾಂಡಿಯಾಸ್, ಅರಸರ ಅರಸ, ಇಗೋ ನಾನು ಸೃಷ್ಟಿಸಿದ ಸಾಮ್ರಾಜ್ಯ, ಹಿರಿಯರಸರೆಲ್ಲಾ ನೋಡಿ ಹಲುಬಿ!" ಬೇರೇನೂ ಉಳಿದಿಲ್ಲ ಮುರುಕಲು ಕಲ್ಲುಶಿಲೆ ಬಿಟ್ಟರೆ, ಮರಳು ಹರಡಿದೆ ಕಣ್ ದೃಷ್ಟಿ ಹರಿವವರೆಗೆ. (c) C.P. Ravikumar, 2014 Kannada Translation of 'Ozymandias' - English poem by P.B. Shelley