ಪೋಸ್ಟ್‌ಗಳು

ಅಕ್ಟೋಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನ ಪ್ರೀತಿಯ ದೇಶವೇ

ಇಮೇಜ್
ಸಿ. ಪಿ. ರವಿಕುಮಾರ್  ಮನ್ನಾ ಡೇ ಹಾಡಿರುವ ಹಾಡುಗಳಲ್ಲಿ ಕಾಬುಲಿವಾಲಾ ಚಿತ್ರದ "ಐ ಮೇರೆ ಪ್ಯಾರೇ ವತನ್" ಬಹಳ ಜನಪ್ರಿಯವಾಗಿದೆ. ಕಾಬುಲಿವಾಲಾ ಬಂಗಾಳಿ ಭಾಷೆಯಲ್ಲಿ ರವೀಂದ್ರನಾಥ ಠಾಕೂರರು ಬರೆದ ಪ್ರಸಿದ್ಧ ಕಥೆ. ಅದನ್ನು ಆಧರಿಸಿ ಬಿಮಲ್ ರಾಯ್ ನಿರ್ದೇಶಿಸಿದ  ಹಿಂದಿ ಚಿತ್ರದಲ್ಲಿ ಬಲರಾಜ್ ಸಾಹನಿ ಕಾಬುಲಿವಾಲನ ಪಾತ್ರ ವಹಿಸಿದ್ದರು. ಕಾಬುಲಿವಾಲಾ ಒಂದು ಹೃದಯಸ್ಪರ್ಶಿ ಕಥೆ. ಒಬ್ಬ ಕಥಾ ಲೇಖಕನ ಐದು ವರ್ಷದ ಪುಟ್ಟ ಮಗಳು ಮಿನ್ನಿ ಮತ್ತು ಕಾಬುಲ್ ನಗರದಿಂದ ಒಣ ಹಣ್ಣು ವ್ಯಾಪಾರ ಮಾಡಲು ಬಂದಿದ್ದ ಒಬ್ಬ ಕಾಬುಲಿವಾಲಾನ  ನಡುವೆ ಒಂದು ಅಪೂರ್ವವಾದ ಪ್ರೇಮಸಂಬಂಧ ಬೆಳೆಯುತ್ತದೆ. ಅವನ ದೈತ್ಯಾಕಾರವನ್ನು ಕಂಡು ಮೊದಲು ಮಿನ್ನಿ ಹೆದರಿಕೊಂಡರೂ ಕ್ರಮೇಣ ಅವರಿಬ್ಬರಲ್ಲಿ ಸ್ನೇಹ ಬೆಳೆಯುತ್ತದೆ. ಅವಳಿಗೆ ಅವನು ಕಥೆ ಹೇಳುತ್ತಾನೆ, ಸವಾರಿ ಮಾಡಿಸುತ್ತಾನೆ, ದ್ರಾಕ್ಷಿ ಹಣ್ಣು ಕೊಟ್ಟು ಒಲಿಸಿಕೊಳ್ಳುತ್ತಾನೆ. ಅವನ ದೊಡ್ಡ ಮೂಟೆಯಲ್ಲಿ ಏನಿದೆ ಎಂದು ಮಿನ್ನಿಗೆ ಕುತೂಹಲ. ಮಕ್ಕಳನ್ನು ಅವನು ಕೊಂಡೊಯ್ಯುತ್ತಾನೆ ಎಂದು ಅವಳ ತಾಯಿ ಹೆದರಿಸಿದ್ದಾಳೆ. ಕಾಬುಲಿವಾಲಾ ತನ್ನ ಮೂಟೆಯಲ್ಲಿ ಅದಿದೆ, ಇದಿದೆ ಎಂದು ಕತೆ ಕಟ್ಟಿ ನಗಿಸುತ್ತಾನೆ. ಅವನಿಗೆ ತನ್ನ ದೇಶದಲ್ಲಿ ಇದೇ ವಯಸ್ಸಿನ ಮಗಳಿದ್ದಾಳೆ. ತನ್ನ ಮಗಳನ್ನೇ ಅವನು ಮಿನ್ನಿಯಲ್ಲಿ ಕಾಣುತ್ತಾನೆ. ಕಾಬುಲಿವಾಲಾ ತುಂಬಾ ಸರಳ ಸ್ವಭಾವದವನು. ಒಮ್ಮೆ ಯಾರೋ ಅವನ ಬಳಿ ಹಣವನ್ನು ಕೇಳಿ ಪಡೆದು ಮೋಸ ಮಾಡಿ

ಕೊಟ್ಟ ಭಾಷೆ, ಪ್ರೀತಿ, ಪ್ರೇಮ

ಇಮೇಜ್
ಮನ್ನಾ ಡೇ ಅವರ ಗೀತೆಗಳನ್ನು ಕೇಳುತ್ತಾ ಬೆಳೆದವನು ನಾನು. ಅವರ ಭಾವಪೂರ್ಣ ಗಾಯನ ಮತ್ತು ಅರ್ಥಪೂರ್ಣ ಗೀತೆಗಳು ಯಾರ ಹೃದಯವನ್ನಾದರೂ ಕಲಕುತ್ತವೆ. ಅವರು ನಿಧನರಾದರೆಂಬ ಸುದ್ದಿ ಬಂದಿದೆ; ಆದರೆ ಅಂಥವರಿಗೆ ಸಾವಿಲ್ಲ.  ಅವರು ಹಾಡಿರುವ ಒಂದು ಗೀತೆಯ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ. ಚಲನಚಿತ್ರ: ಉಪಕಾರ್  ಗೀತೆ: ಕಸ್ಮೇ ವಾದೇ ಪ್ಯಾರ್ ವಫಾ  ಕವಿ: ಇಂದೀವರ್  ಗಾಯಕ: ಮನ್ನಾ ಡೇ  ಅನುವಾದ: ಸಿ.ಪಿ. ರವಿಕುಮಾರ್  ಕೊಟ್ಟ ಭಾಷೆ, ಪ್ರೀತಿ, ಪ್ರೇಮ ಮಾತುಗಳು, ಮಾತಿಗೆ ಬೆಲೆಯೇ? ಯಾರಿಗೆ ಯಾರೂ ಆಗರು ನೆರವು ನಂಟುಗಳು, ನಂಟಿಗೆ ಬೆಲೆಯೇ? ದೇವನ ದೂತ ಎದುರಿಗೆ ಬಂದರೂ ಸಾವಿನಿಂದ ಸಿಗುವುದೇ ಮುಕ್ತಿ? ನಿನ್ನ ಹೊಟ್ಟೆಯಲಿ ಹುಟ್ಟಿದ ಮಗನೇ ಸುಡಲು ಕೊಡುವುದಿಲ್ಲವೆ ಬೆಂಕಿ? ಮುಗಿಲಿನಲ್ಲಿ ತೇಲಾಡುವ ನೀನು ಮಣ್ಣನು ಸೇರುವೆ ಮಣ್ಣಾಗಿ ಸುಖದಲಿ ಎಲ್ಲಾ ಹಿಂಬಾಲಿಸುವರು ದುಃಖದಲ್ಲಿ ಬೇರಾಗುವರು ನಿನ್ನವರೇ ಬೆನ್ನೊಳಗಿರಿಯುವರು ನಿನ್ನೆದೆ ವಿಛಿದ್ರಗೊಳಿಸುವರು ದೇವರಿಗೇ ದ್ರೋಹವ ಮಾಡುವರು ಮನುಜರನ್ನು ಗಣಿಸುವರೇನು?

ಹೇ ಮಾ! ಮಾಲಿನೀ

ಹೇ ಮಾ! ಮಾಲಿನೀ  (ಹರಟೆ) ಸಿ.ಪಿ. ರವಿಕುಮಾರ್  (ಈ ಹರಟೆ "ಪ್ರಜಾವಾಣಿ" ಸಾಪ್ತಾಹಿಕ ಪುರವಣಿ, ಅಕ್ಟೋಬರ್ ೨೦, ೨೦೧೩ ರಲ್ಲಿ ಪ್ರಕಟವಾಗಿದೆ. ಹರಟೆಯ ಪೂರ್ಣಪಾಠವನ್ನು ಕೆಳಗೆ ಓದಿ. ) ನಾನು  ಪಿಯೂಸಿ ಎರಡನೇ ವರ್ಷ ಓದುತ್ತಿದ್ದಾಗ ನಮಗೆ ರಬೀಂದ್ರನಾಥ ಟ್ಯಾಗೋರ್ ಬರೆದ "ನೌಕಾಘಾತ" ಎಂಬ ಕಾದಂಬರಿಯ ಇಂಗ್ಲಿಷ್ ಭಾಷಾಂತರವನ್ನು ಪಠ್ಯವಾಗಿ ಓದುವ ಅವಕಾಶ ಒದಗಿತ್ತು.  ಅದೊಂದು ರೊಮ್ಯಾಂಟಿಕ್ ಕಥೆ. ಇಂದಿನ ಸೀರಿಯಲ್  ನಿರ್ಮಾಪಕರ ಕಣ್ಣಿಗೆ ಯಾಕೋ ಈ ಕಥೆ ಬಿದ್ದಿಲ್ಲ.  ಈ ಕಾದಂಬರಿಯಲ್ಲಿ ಬರುವ ಒಂದು ಪಾತ್ರದ ಹೆಸರು ಹೇಮನಳಿನಿ. ಅದನ್ನು ಇಂಗ್ಲಿಷ್ ಭಾಷೆಯಲ್ಲಿ ಬರೆದಾಗ ಗಮನವಿಟ್ಟು ಓದದೇ ಹೋದರೆ ಯಾರಾದರೂ "ಹೇಮಮಾಲಿನಿ" ಎಂದು ಓದುವುದು ಸ್ವಾಭಾವಿಕ. ಅದರಲ್ಲೂ ಆಗ ಹೇಮಮಾಲಿನಿ ಬಾಲಿವುಡ್ ನಲ್ಲಿ ತಮ್ಮ ಅಭಿನೇತ್ರಿ  ವೃತ್ತಿಜೀವನದ ಶಿಖರದಲ್ಲಿದ್ದರು. ಬೇರೊಂದು ಸೆಕ್ಷನ್ ನಲ್ಲಿ ಇಂಗ್ಲಿಷ್ ಪಾಠ ಮಾಡುತ್ತಿದ್ದ ಅಧ್ಯಾಪಕರು ಸುಮಾರು ಅರ್ಧ ವರ್ಷ "ಹೇಮಮಾಲಿನಿ" ಎಂದೇ ಓದುತ್ತಾ ಪಾಠ ಮಾಡಿದರು. ಒಂದು ದಿನ ಒಬ್ಬ ವಿದ್ಯಾರ್ಥಿ ಅವರಿಗೆ ತಪ್ಪನ್ನು ತೋರಿಸಿಕೊಟ್ಟಾಗ ಐವತ್ತರ ಹರೆಯದ ಅಧ್ಯಾಪಕರು ಕೂಡಾ ನಾಚಿದರು! ಹೇಮಮಾಲಿನಿ ಅವರ ಹೆಸರನ್ನು ಉತ್ತರ ಭಾರತೀಯರು "ಹೇಮಾ ಮಾಲಿನಿ" ಎಂದು ಸ್ವಲ್ಪ ತಿರುಚಿದ್ದಾರೆ. ಅದನ್ನು ಕೇಳಿದಾಗ "ಹೇ ಮಾ! ಮಾಲಿನಿ!" ಅಥವಾ "ತಾಯೇ ಮಾಲ

ಕಟ್ಟಿ ಕಾಲಿಗೆ ಗೆಜ್ಜೆ

ಇಮೇಜ್
ಮೂಲ : ಮೀರಾ ಬಾಯಿ  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕಟ್ಟಿ ಕಾಲಿಗೆ ಗೆಜ್ಜೆ ಹಾಕಿ ಕುಣಿತದ ಹೆಜ್ಜೆ ಮತ್ತೆ ಮಾಡುವೆ ನಾನು ನರ್ತನದ ಪೂಜೆ || ನನ್ನ ನಾರಾಯಣನಿಗೆ ದಾಸಿಯಾದೆನು ನಾನು ಅನ್ಯರಾರದು ಅಲ್ಲ, ಇದು ನನ್ನದೇ  ಇಚ್ಛೆ || ಇಷ್ಟನೆಂಟರು ಮೀರಾ ಕುಲನಾಶಿನಿ ಎಂದರು ಎಷ್ಟೋ ಜನ ಚುಚ್ಚಿದರು ಮೀರಾಳಿಗೆ ಹುಚ್ಚೆ? || ನಗುನಗುತ ಕುಡಿಯುವೆನು ನೋಡಿ ರಾಣಾಜೀ ನೀವು ಕಳಿಸಿದ ವಿಷದ ಬಟ್ಟಲಿನ ಭಿಕ್ಷೆ || ನನ್ನ ಪ್ರಭು ಗಿರಿಧರನಾಗರನ ನಂಬಿರುವೆ ತನ್ನವರಿಗೆ ನೀಡುವನು ಸಹಜ ಶ್ರೀರಕ್ಷೆ  || ಹದಿನಾರನೇ ಶತಮಾನದಷ್ಟು ಹಿಂದೆ ಸಮಾಜವನ್ನು ಎದುರು ಹಾಕಿಕೊಂಡು ತನ್ನ ನಂಬಿಕೆಯ ಮೇಲೆ ಬದುಕಿದವಳು  ಮೀರಾ ಬಾಯಿ. ಸಾಧುಸಂತರೊಂದಿಗೆ ಅಲೆದಾಡುತ್ತಾ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ನರ್ತಿಸುತ್ತಾ ಕಾಲ ಕಳೆದವಳನ್ನು ಸಮಾಜ ಎಷ್ಟು ನಿಂದಿಸಿರಬಹುದು! ಮೀರಾ ಬಗ್ಗೆ ಹುಟ್ಟಿಕೊಂಡಿರುವ ದಂತಕತೆಯಲ್ಲಿ ಅವಳನ್ನು ಮದುವೆಯಾಗಿದ್ದ ರಾಣಾ (ಚಿತ್ತೌಢದ ರಾಜ ರಾಣಾ ಸಾಂಗಾ ಎಂಬುವನ ಮಗ ರಾಜಾ ಭೋಜರಾಜ) ತನ್ನನ್ನು ತೊರೆದು ತನಗೆ ಅಪಮಾನ ಮಾಡಿದಳೆಂಬ ಕ್ರೋಧದಲ್ಲಿ ಮೀರಾ ಬಾಯಿಗೆ ವಿಷದ ಬಟ್ಟಲನು ಕಳಿಸುತ್ತಾನೆ; ವಿಷವನ್ನು ಕುಡಿದರೂ ಮೀರಾ ಬದುಕಿ ಉಳಿಯುತ್ತಾಳೆ.  ಇಲ್ಲಿ "ವಿಷ" ಎಂಬುವುದನ್ನು ನಾವು ಸಾಂಕೇತಿಕವಾಗಿ ಸ್ವೀಕರಿಸಬಹುದೆಂಬುದಕ್ಕೆ  ಮೀರಾಳ ಈ ಪದದಲ್ಲಿ ಸುಳಿವು ಸಿಕ್ಕುತ್ತದೆ. ಸುತ್ತಲಿನ ಸಮಾಜ ಅವಳನ್ನು "

ಪತ್ರಿಕೋದ್ಯಮವನ್ನು ಕುರಿತು ಗಾಂಧಿ

ಇಮೇಜ್
ಅನುವಾದ: ಸಿ.ಪಿ. ರವಿಕುಮಾರ್ ಗಾಂಧಿ ಪ್ರೆಸ್ ಬಗ್ಗೆ ಹೀಗೆ ಬರೆಯುತ್ತಾರೆ: (೧) ಸೇವೆಯೇ ಪತ್ರಿಕೋದ್ಯಮದ ಏಕಮಾತ್ರ ಗುರಿಯಾಗಿರಬೇಕು ಎಂಬುದು ನನ್ನ ಭಾವನೆ. ಪತ್ರಿಕೆಗಳು ಒಂದು ಮಹಾನ್ ಶಕ್ತಿಯೇನೋ ನಿಜ, ಆದರೆ ನಿಗ್ರಹವಿಲ್ಲದ ನೀರಿನ ತೊರೆಯು ಹೇಗೆ  ಇಡೀ ಹಳ್ಳಿಗಳನ್ನು ಮುಳುಗಿಸಿ ಬೆಳೆಯನ್ನು ನಾಶ ಮಾಡುತ್ತದೋ, ನಿಗ್ರಹವಿಲ್ಲದ ಲೇಖನಿಯೂ ನಾಶಕ್ಕೆ ಕಾರಣವಾಗುತ್ತದೆ. ಆದರೆ ಬರವಣಿಗೆಗೆ ನಿಗ್ರಹವು ಹೊರಗಡೆಯಿಂದ ಬಂದರೆ ಅದು ನಿಗ್ರಹವಿಲ್ಲದೇ ಇರುವ ಬರವಣಿಗೆಗಿಂಗಲೂ ಹೆಚ್ಚು ವಿಷಮಯವಾಗಬಲ್ಲದು. ಬರವಣಿಗೆಗೆ ಸ್ವಯಂನಿಗ್ರಹವಿದ್ದಾಗ ಮಾತ್ರ ಅದು ಪ್ರಯೋಜನಕಾರಿ. ನನ್ನ ಈ ವಿಚಾರಧಾರೆ ಸರಿಯಾಗಿದ್ದರೆ ಜಗತ್ತಿನ ಎಷ್ಟು ನಿಯತಕಾಲಿಕೆಗಳು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತವೆಯೋ? ನಿಷ್ಪ್ರಯೋಜಕವಾದ ಪತ್ರಿಕೆಗಳನ್ನು ತಡೆಯುವವರು ಯಾರು? ಯಾವುದು ನಿಷ್ಪ್ರಯೋಜಕ ಎಂಬುದನ್ನು ನಿರ್ಧರಿಸುವುದು ಯಾರು? ಜಗತ್ತಿನಲ್ಲಿ ಹೇಗೆ ಒಳ್ಳೆಯದೂ ಮತ್ತು ಕೆಟ್ಟದ್ದೂ ಒಟ್ಟಿಗೆ ಬಾಳುತ್ತವೆಯೋ ಹಾಗೇ ಪ್ರಯೋಜನವುಳ್ಳದ್ದೂ ಮತ್ತು ನಿಷ್ಪ್ರಯೋಜಕವಾದದ್ದೂ ಜೊತೆಜೊತೆಗೇ ಬಾಳಬೇಕಾಗುತ್ತದೆ; ಯಾವುದನ್ನು ಸ್ವೀಕರಿಸಬೇಕು ಎಂಬುದು  ಮನುಷ್ಯನಿಗೆ  ಬಿಟ್ಟದ್ದು. (ಆತ್ಮ ಚರಿತ್ರೆ)  (೨) ಬರಿಯ ತೋರಿಕೆ,  ಏಕಪಕ್ಷೀಯತೆ, ಅನಿಖರತೆ, ಮತ್ತು ಸ್ವಲ್ಪ ಮಟ್ಟಿಗೆ ಅಪ್ರಾಮಾಣಿಕತೆ, ಇವೆಲ್ಲಾ ಆಧುನಿಕ ಪತ್ರಿಕೋದ್ಯಮದಲ್ಲಿ ನುಸುಳಿವೆ. ಯಾರಿಗೆ ನ್ಯಾಯದ ಹೊರತು ಇನ್ನೇನೂ