ಪೋಸ್ಟ್‌ಗಳು

ಅಕ್ಟೋಬರ್, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸೋಪ್ ಆಪರಾ

ಇಮೇಜ್
  ಸೋಪ್ ಆಪರಾ ಎನ್ನುವ ಪದ ಯಾಕೆ ನೆನಪಿಗೆ ಬಂತು ಅಂದರೆ ಸ್ನೇಹಿತರು ಒಬ್ಬರು ಫೇಸ್ಬುಕ್ ಮೇಲೆ ಹಂಚಿಕೊಂಡ ಚಿತ್ರ ನೋಡಿ.  ಮಳೆ ಪ್ರವಾಹ ಮನೆಗೆ ನುಗ್ಗಿ ರೂಮಿನಲ್ಲಿ ಮೊಳಕಾಲುಮಟ್ಟ ಸೇರಿದೆ. ಇಷ್ಟಾದರೂ ಮನೆಯವರು ಕುರ್ಚಿಗಳಲ್ಲಿ ಆಸೀನರಾಗಿ ಸೀರಿಯಲ್ ನೋಡುತ್ತಿದ್ದಾರೆ.  ಈ ಸೀರಿಯಲ್ ಆಕರ್ಷಣೆ ಬರೀ ಭಾರತೀಯರಿಗೆ ಮಾತ್ರ ಎಂದು ಖಂಡಿತಾ ತಿಳಿಯಬೇಡಿ. ಅಮೆರಿಕನ್ ಮಹಿಳೆಯರೂ ಈ ಧಾರಾವಾಹಿಗಳಿಂದ ಅಷ್ಟೇ ಆಕರ್ಷಿತರು.  ಅಮೆರಿಕನ್ ಮನೆಗಳಲ್ಲಿ ನಿತ್ಯಚರಿ ಬೆಳಗ್ಗೆ ಬಹಳ ಬೇಗ ಪ್ರಾರಂಭವಾಗುತ್ತದೆ. ಶಾಲೆಗೆ ಹೋಗುವ ಮಕ್ಕಳು ಮತ್ತು ಕೆಲಸಕ್ಕೆ ಹೋಗುವ ಗಂಡ ಎಲ್ಲರಿಗೂ ಬೆಳಗಿನ ಉಪಾಹಾರ ತಯಾರಿಸಿ ಡಬ್ಬಿಗಳಲ್ಲಿ ಊಟ ತುಂಬಿಸಿ ಗಂಡನನ್ನು ಚುಂಬಿಸಿ ಐ ಲವ್ ಯು ಎಂದು ಬೈಬೈ ಹೇಳಿ (ಇದು ಅಲ್ಲಿಯ ನಿಯಮ) ಉಸ್ ಎಂದು ಸೋಫಾ ಮೇಲೆ ಕುಸಿದ ಗೃಹಿಣಿ ಮುಂದೆ ಹೊತ್ತು ಕಳೆಯುವುದು ಹೇಗೆ? ಕೆಲಸವನ್ನು ಔಟ್ ಸೋರ್ಸ್ ಮಾಡುವ ಪದ್ಧತಿ ಇಲ್ಲಿ ಬಹಳ ಹಿಂದಿನಿಂದಲೇ ಬಂದಿದೆ. . ಬಟ್ಟೆಗಳನ್ನು ವಾಷಿಂಗ್ ಮಶೀನಿಗೆ ಹಾಕಿದರೆ ಮೂವತ್ತು ನಿಮಿಷಗಳಲ್ಲಿ ಒಗೆದು ಪೂರೈಸುತ್ತದೆ.  ಹಿಂಡಿದ ಬಟ್ಟೆಗಳನ್ನು ಡ್ರೈಯರ್ ಯಂತ್ರಕ್ಕೆ ಸಾಗಿಸಿದರೆ ನಲವತ್ತು ನಿಮಿಷಗಳಲ್ಲಿ ಬಟ್ಟೆಗಳು ಮಡಿಸಲು ಸಿದ್ಧ.   ಐರನ್ ಬೇಡದ ಬಟ್ಟೆಗಳನ್ನು ಮಡಿಸಿಟ್ಟರೆ ಸಾಕು. ಉಳಿದ ಬಟ್ಟೆಗಳನ್ನು ಇಸ್ತ್ರಿ ಮಾಡಲೇಬೇಕೆಂದರೆ ನಾನಾ ಬಗೆಯ ತಂತ್ರಜ್ಞಾನಗಳಿವೆ.  ಗಂಡನು ಬಟ್ಟೆ ಧರಿಸಿದ್ದಾಗ ಸ್ಟೀಮ್ ಐರನ್ ಮೂಲಕ ಗರಿಮುರಿ

ಯಾರು ಕಿವಿ ಮುಚ್ಚಿದರೂ!

ಇಮೇಜ್
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ! ಈ ಸಾಲನ್ನು ಬರೆದ ಕವಿ ಶ್ರೋತೃಗಳಿಗೆ ಬಹಳ ಅನ್ಯಾಯ ಮಾಡಿದ್ದಾರೆ.  "ಎದೆ ತುಂಬಿ ಹಾಡುವೆನು" ಭಾವಗೀತೆಗೆ ಈಗ ಐವತ್ತರ ಸಂಭ್ರಮ ಇರಬಹುದು. ಎಂ. ಎಸ್. ಐ.ಎಲ್. ಗೀತೆಗಳು ಎಂಬ ರೇಡಿಯೋ ಕಾರ್ಯಕ್ರಮದಲ್ಲಿ ಇದು ಮೊದಲು ಪ್ರಸಾರವಾಯಿತು. ಮೈಸೂರು ಅನಂತಸ್ವಾಮಿ ಅವರು ಈ ಕಾರ್ಯಕ್ರಮಕ್ಕೆ ಅನೇಕ ಭಾವಗೀತೆಗಳನ್ನು ಧ್ವನಿಮುದ್ರಿಸಿದರು.  ಆದರೆ ಈ ಗೀತೆ ಮಾತ್ರ ಅತ್ಯಂತ ಜನಪ್ರಿಯವಾಗಿದ್ದಕ್ಕೆ ಕಾರಣ ಮೇಲಿನ ಸಾಲಿನಲ್ಲೇ ಇದೆ. ಗಾಯಕಿ ಬಹಳ ಹೈ ಪಿಚ್ನಲ್ಲಿ ಹಾಡುತ್ತಿದ್ದಾಗ ಶ್ರೋತೃಗಳು  ಕಿವಿ ಮುಚ್ಚಿದರೂ ಐ ಕಾಂಟ್ ಕೇರ್ ಲೆಸ್ ಎನ್ನುವ ಭಾವದಿಂದ ಗೀತೆಯನ್ನು ಕಂಪ್ಲೀಟ್ ಮಾಡಿಯೇ ಬಿಡುವ ಗಾಯಕಿಯರು ಈ ಗೀತೆಗೆ ಅಪಾರ ಜನಪ್ರಿಯತೆ ತಂದುಕೊಟ್ಟರು. ಆಗ ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಎದೆ ತುಂಬಿ ಹಾಡುವೆನು! ಭಾವಗೀತೆ ಸ್ಪರ್ಧೆಯಲ್ಲಿ ಮೂವತ್ತು ಜನ ಭಾಗವಹಿಸಿದರೆ ಕನಿಷ್ಠ ಹತ್ತು ಜನ ಎದೆ ತುಂಬಿ ಹಾಡಿ ಶ್ರೋತೃಗಳ ಕಿವಿ ತುಂಬುತ್ತಿದ್ದರು.  ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ! ಇದೇನು ಅಂಥ ಹೆಮ್ಮೆಯ ವಿಷಯವೇ ಹೇಳಿ! ನಿಮ್ಮ ಮಿತ್ರರ ಮೇಲೆ ನಿಮಗೆ ಕೋಪ ಬಂದಿದೆಯೇ? ಅವರ ಮೂರು ವರ್ಷದ ಮಗುವಿಗೆ ಡ್ರಮ್ಸ್ ಉಡುಗೊರೆ ಕೊಡಿ. ಅದು ಪರಮಸಂತೋಷದಿಂದ ಇಡೀ ದಿನವೆಲ್ಲಾ ಡಿಂಡಿಮ ಡಂಡಮ ಬಾರಿಸುತ್ತದೆ. ನಿಮ್ಮ ಮಿತ್ರರು ಕಿವಿಯಲ್ಲಿ ಹತ್ತಿ ಇಟ್ಟುಕೊಂಡರೇನು, ಬೆಟ್ಟು ಇಟ್ಟುಕೊಂಡರೇನು! ಯಾರು ಕಿವಿ ಮುಚ್ಚಿದರೂ

ಜಯಾ ಬಚ್ಚನ್ ಕೋ ಗುಸ್ಸಾ ಕ್ಯೋನ್ ಆತಾ.ಹೈ

ಇಮೇಜ್
  ಶಾಪಿಂಗ್ ಮಾಲಿನ ಮೇಲಿನ ಶಾಪಿಂಗ್ ಮಾಲಿಗೆ ಹೋಗಿ ಬಂದಿರಬಹುದಾದ ಕಾರಣ ಜಯಾ ಅವರು ಶಾಪದ ಮೇಲೆ ಶಾಪ ಹಾಕುತ್ತಿದ್ದಾರೆ. ಹಿಂದೊಮ್ಮೆ ಅವರ ಪತಿ ಅಮಿತಾಭ್ ಬಚ್ಚನ್ ಆಂಗ್ರಿ ಯಂಗ್ ಮ್ಯಾನ್ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಆಗ ಜಯಾ ಬಚ್ಚನ್ ಅವರಿಗೆ ಕ್ತೈಯಿಂಗ್ ಯಂಗ್ ವುಮನ್ ಎಂಬ ಹೆಸರನ್ನು ಯಾರೂ ಕೊಡಲಿಲ್ಲ ಎಂದು ಆಕೆಗೆ ಸಹಜವಾಗಿ ಕೋಪ ಬಂತು. ಎಲ್ಲ ಸಿನಿಮಾಗಳಲ್ಲೂ ಆಕೆ ಅಳುವುದು ಸಾಮಾನ್ಯವಾಗಿತ್ತು.  ಈ ಕೋಪವೇ ಈಗ ಭುಗಿಲ್ ಎಂದು ಮೇಲೆದ್ದು ಆಕೆ ಆಂಗ್ರಿ ಓಲ್ಡ್ ವುಮನ್ ಉಪಾಧಿ ಪಡೆಯಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.  ಎಲ್ಲರ ಮೇಲೂ ಕೋಪ. ಕಭೀ ಜ್ಯಾದಾ ಕಭೀ ಕಮ್.  ಕೆಲವು ತಿಂಗಳ ಕೆಳಗೆ ಪಾರ್ಲಿಮೆಂಟಲ್ಲಿ ಕೋಪಿಸಿಕೊಂಡು ಶಾಪ ಹಾಕಿದ್ದು ಬಹಳ ಚರ್ಚೆಗೆ ಕಾರಣವಾಯಿತು. ಈಗ ಫೋಟೋ ತೊಗೊಳ್ಳುವ ಪಾಪರಾಟ್ಜಿಗೆ ಶಾಪ ಹಾಕಿದ್ದಾರೆ ಎಂದು ಪಾಪ ಅವರೆಲ್ಲ ಕೋಪಗೊಂಡು ಸೇಡು ತೀರಿಸಿಕೊಳ್ಳುವ ಪಣ ತೊಟ್ಟಿದ್ದಾರೆ.  ಈಗ ಯಾರು ಬೇಕಾದರೂ ಪತ್ರಕರ್ತರಾಗಬಹುದು. ಹಿಂದೊಮ್ಮೆ ಫೋಟೋ ತೆಗೆಯಲು ಫೋಟೋಗ್ರಾಫರ್ ಬೇಕಿತ್ತು. ಬರೆಯಲು ಟೈಪ್ ರೈಟರ್ ಬೇಕಿತ್ತು. ಅಚ್ಚು ಮಾಡಲು ಪತ್ರಿಕೆ ಬೇಕಿತ್ತು. ಈಗ ಮೊಬೈಲ್ ಇದ್ದರೆ ಇವು ಎಲ್ಲವೂ  ಬೆರಳ ತುದಿಯಲ್ಲೇ.  "ಅಯ್ಯೋ, ಇದು ಇದ್ದರೆ ಸಾಕೇ? ಬರೆಯೋಕ್ಕೆ ಬರಬೇಡವೆ?" ಎಂದು ಕೇಳಿದರೆ ನೀವು ಬಹಳ ಹಳೇ ಕಾಲದವರು. ಬರೆಯಲು ಈಗ ಏನೇನೂ ಕಷ್ಟವಿಲ್ಲ. ಗೂಗಲ್ ಹುಡುಕಾಡಿದರೆ ಹಳೆಯ ಫೋಟೋ ಸಿಕ್ಕೀತು. ಅದನ

ಬೆಂಗಳೂರಲ್ಲಿ ಹ್ಯಾಲೋವೀನ್

 ಕೆಲವು ವರ್ಷಗಳ ಹಿಂದೆ ಹ್ಯಾಲೋವೀನ್ ಸಂಜೆ ನಾನು ಮನೆಯಲ್ಲಿ ಒಬ್ಬನೇ ಇದ್ದಾಗ ಕರೆಗಂಟೆ ಬಾಜಿಸಿತು. ತೆರೆದರೆ ಅಲ್ಲೊಬ್ಬಳು ಮರಿ ಮಾಯಾವಿನಿ ಮತ್ತು ಮರಿ ಡ್ರಾಕುಲಾ ನಿಂತಿದ್ದರು. ಟ್ರಿಕ್ ಆರ್ ಟ್ರೀಟ್ ಎಂದು ಬಾಯಲ್ಲಿ ಹೇಳಿದರೂ ಟ್ರೀಟ್ ಪಡೆದುಕೊಳ್ಳಲು ಕೈಯಲ್ಲಿ ಹಿಡಿದಿದ್ದ ಡಬ್ಬವನ್ನು ಮುಂದೆ ಮಾಡಿದರು. ಓಹೋ! ಭಾರತದಲ್ಲಿ ಹೀಗೆ ಟ್ರಿಕ್ ಆರ್ ಟ್ರೀಟ್ ಅಂತ ಬರುವುದು ಯಾವಾಗಿನಿಂದ ಪ್ರಾರಂಭವಾಯಿತು ಎಂದು ಯೋಚಿಸಲು ನನಗೆ ಸಮಯವಿರಲಿಲ್ಲ. ಮಾಯಾವಿನಿ ಮತ್ತು ಡ್ರಾಕುಲಾಗೆ ಅರ್ಜೆಂಟಾಗಿ ಏನಾದರೂ ಟ್ರೀಟ್ ಹೊಂದಿಸಲೇ ಬೇಕಾಗಿತ್ತು.  ಏನಾದರೂ ಟ್ರಿಕ್ ತೋರಿಸಿಬಿಡಲಾ ಎಂದರೆ ಅಂಥ ಹೇಳಿಕೊಳ್ಳುವಂಥ ಟ್ರಿಕ್ ನನಗೇನೂ ಬರದು. ನಾನು ಅವರಿಗೆ ಜೋಕ್ ಏನಾದರೂ ಹೇಳಿ ನಗುಬಂತಾ ಎಂದು ಕೇಳಿಬಿಡೋಣವೇ ಎಂದು ಚಿಂತಿಸಿದೆ. ನನ್ನ ಮಕ್ಕಳು ಇಂಥದಕ್ಕೆ ಹೇಗೆ ಪ್ರತಿಕ್ರಿಯಿಸಬಹುದೆಂದು ಯೋಚಿಸಿದಾಗ ಅಂಥ ಸಾಹಸಕ್ಕೆ ಕೈ ಹಾಕದಿರುವುದೇ ಮೇಲೆಂದು ಅಡಿಗೆಮನೆಗೆ ನುಗ್ಗಿ ಹುಡುಕಿದೆ. ನಮ್ಮ ಮನೆಯಲ್ಲಿ ಚಾಕೊಲೇಟ್ ಇಟ್ಟುಕೊಳ್ಳುವುದಿಲ್ಲ. ಬಿಸ್ಕೆಟ್ ನೀಡೋಣವೆಂದರೆ ಯಃಕಶ್ಚಿತ್ ಮಾರಿ ಬಿಸ್ಕೆಟ್ಟಿಗೆ ಯಾವ ಮಾಯಾವಿನಿಯೂ ಯಾಮಾರಿ ಹೋಗುವುದಿಲ್ಲವೆಂದು ತೋರಿತು.  ಸೇಬಿನ ಹಣ್ಣು ಕಣ್ಣಿಗೆ ಬಿತ್ತು.  ಸ್ನೋವೈಟ್ ಎಂಬ ರಾಜಕುಮಾರಿಗೆ ಹಿಂದೊಮ್ಮೆ ಮಾಯಾವಿನಿ ಮಲತಾಯಿ ಸೇಬನ್ನು ಕೊಟ್ಟಿದ್ದು ನೆನಪಾಗಿ ಯುರೇಕಾ ಎಂದು ಕೂಗುತ್ತಾ ಹೊರಗೆ ಬಂದೆ. ಅಂಕಲ್ ನನ್ನ ಹೆಸರು ರೇಖಾ ಅಲ್ಲ, ಅದು ನ

ಭಾರತ ರಾಷ್ಟ್ರಪುರುಷ

 ಮೂಲ ಕವಿತೆ: ಅಟಲ್ ಬಿಹಾರಿ ವಾಜಪೇಯಿ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಭೂಮಿಯ ಒಂದು ಖಂಡವಲ್ಲ ಭಾರತ, ಜೀವಂತ ರಾಷ್ಟ್ರಪುರುಷ ಹಿಮಾಲಯವು ಮಸ್ತಕ, ಕಾಶ್ಮೀರವು ಮುಕುಟ, ಪಂಜಾಬ್ ಮತ್ತು ಬಂಗಾಳ ವಿಶಾಲ ಭುಜದ್ವಯಗಳು ಪೂರ್ವ ಪಶ್ಚಿಮದ ಘಟ್ಟಗಳು ವಿಶಾಲ ತೊಡೆಗಳು ಕನ್ಯಾಕುಮಾರಿ ಈ ಪುರುಷನ ಪಾದಗಳು ಸಾಗರವೇ ಮುಂದಾಗುತ್ತದೆ ತೊಳೆಯಲು ಕಾಲು. ಇಂದು ಚಂದನದ ಭೂಮಿ, ಅಭಿನಂದನದ ಭೂಮಿ. ಇದು ತರ್ಪಣದ ಭೂಮಿ, ಇದು ಅರ್ಪಣದ ಭೂಮಿ. ಇಲ್ಲಿಯ ಒಂದೊಂದು ಕಲ್ಲೂ ಶಂಕರ, ಒಂದೊಂದು ಜಲಬಿಂದುವೂ ಗಂಗಾಜಲ. ನಾವು ಬದುಕಿದರೂ ಇದಕ್ಕಾಗಿ ಸತ್ತರೂ ಇದಕ್ಕಾಗಿ.

ನೀ ಕೊಡೆ ನಾ ಬಿಡೆ

ಇಮೇಜ್
 ನೀ ಕೊಡೆ ನಾ ಬಿಡೆ ಕೊಡೆ ಎಂಬ ಪದ ಹೇಗೆ ಸೃಷ್ಟಿಯಾಗಿರಬಹುದು ಎಂದು ಯೋಚಿಸಿದಾಗ ಉತ್ತರ ಹೊಳೆದೇ ಬಿಡ್ತು. ಮನೆಗೆ ಬಂದ ಅತಿಥಿ ಮಳೆ ಬರುತ್ತಿದೆ ಎಂಬ ಕಾರಣದಿಂದ  ಹೊರಡುವ ಸೂಚನೆಯೇ ಇಲ್ಲ. ಆತಿಥೇಯನ ಹೆಂಡತಿ ಬಿಸಿ ಬೋಂಡಾ, ಕಾಫಿ ಎಲ್ಲ ಮಾಡಿಕೊಟ್ಟದ್ದಾಯಿತು. ಹಾಳಾದ ಜಿಟಿಜಿಟಿ ಮಳೆಯೋ ಟಿವಿ ಧಾರಾವಾಹಿಯ ಹಾಗೆ ನಿಲ್ಲುತ್ತಲೇ ಇಲ್ಲ.  ಆಕೆ ಗಂಡನನ್ನು ಕರೆದು "ಅವರಿಗೆ ಛತ್ರಿ ಕೊಟ್ಟು ಕಳಿಸಿ" ಎಂದಳು. "ನಾ ಕೊಡೆ" ಎಂದು ಗಂಡ ಹಠ ಹಿಡಿದ. ಅವನಿಗೆ ಕಾಶೀಯಾತೆಯ ಸಮಯದಲ್ಲಿ ಮಾವನು ತಲೆಯ ಮೇಲೆ ಹಿಡಿದ ಛತ್ರಿ.  "ನೋಡಪ್ಪಾ ಈ ಛತ್ರಿ ಕೆಲಸ ಮಾಡಿದ್ದಕ್ಕೆ ಕ್ಷಮಿಸು!" ಎಂದು ಅವರು ಹಾಸ್ಯ ಮಾಡಿ ಆಶೀರ್ವದಿಸಿ ಕೊಟ್ಟ ಛತ್ರಿ. ಅದನ್ನು ಹಾಗೆಲ್ಲ ಬೇರೆಯವರಿಗೆ ಕೊಡಲಾಗದು.  ಆಕೆ "ಛತ್ರಿ ಕೊಟ್ಟು ಕಳಿಸಿ" ಎಂದೂ ಇವನು "ಛತ್ರಿ ಕೊಡೆ" ಎಂದೂ ವಾಗ್ವಾದ ಮಾಡುತ್ತಿರುವಾಗ ಅತಿಥಿಗೆ ಅದು ಕೇಳಿಸಿ ಅವನು ಅಲ್ಲಿಂದ  ಹೊರಟು ನಿಂತ ಪ್ರಸಂಗ "ಛತ್ರಿ = ಕೊಡೆ" ಎಂಬ ಸಮೀಕರಣವನ್ನು ಹುಟ್ಟುಹಾಕಿತು.  ಕೊಡೆಯು ಎಷ್ಟು ಪ್ರಮುಖ ಸ್ಥಾನ ವಹಿಸಿತ್ತು ಗೊತ್ತೇ? ಮಹಾರಾಜನಿಗೆ ಬಿಳಿ ಬಣ್ಣದ ಕೊಡೆ ಹಿಡಿಯುತ್ತಿದ್ದರಂತೆ. ಇದನ್ನು ಬೆಳ್ಗೊಡೆ ಅಥವಾ ಶ್ವೇತಛತ್ರ ಎಂದು ಕರೆಯುತ್ತಿದ್ದರು. ಸಾಮಾನ್ಯರು ಬಿಳಿ ಬಣ್ಣದ ಛತ್ರಿ ಬಳಸುವುದು ನಿಷೇಧವಾಗಿತ್ತು. ಕರಿ ಬಣ್ಣದ ಛತ್ರಿ ಅಥವಾ ಕರ್ಗೊಡೆ ಹೀಗೆ ರೂಢಿಗೆ ಬ

ಖಂಡಿತ ಖಡಾಖಂಡಿತ

ಇಮೇಜ್
ಖಂಡಿತ ಎಂದರೆ ಯಾವುದನ್ನು ಖಂಡಗಳಲ್ಲಿ ವಿಭಜಿಸಲಾಗಿದೆಯೋ ಅದು.  ಅವರು ಖಂಡಿತವಾದಿ ಎಂದರೆ ಅವರ ಮಾತು ಏಕ್ ಮಾರ್ ದೋ ಟುಕಡಾ  ರೀತಿಯದು ಎಂದೇ ಅರ್ಥ.  ವಾದ ಮಂಡನೆ ಮಾಡುವವರು ಕೆಲವರು. ವಾದವನ್ನು ಖಂಡನೆ ಮಾಡುವವರು ಹಲವರು.  ಇಂಥವರನ್ನು ಟಿವಿ ವಾದವಿವಾದ ಕಾರ್ಯಕ್ರಮಗಳಲ್ಲಿ ಪ್ರತಿದಿನ ನೋಡಿ ನಮಗೆ ಈಗ ಅಭ್ಯಾಸ ಆಗಿಹೋಗಿದೆ.  ಮಂಡನೆ ಮಾಡುವ ಮುಂಚೆಯೇ ಖಂಡನೆ ಮಾಡುವವರು, ವಾದಗಳ ಮುಂಡನ ಮಾಡುವವರು, ಪ್ರತಿವಾದಿಗಳನ್ನು ಚಂಡಾಡುವವರು,  ಭಂಡ ವಾದಗಳನ್ನು ಮಾಡುವವರು, ಚಂಡಿ ಹಿಡಿದು ಕೂಡುವವರು, ಹೀಗೆ ವಾದಿಗಳಲ್ಲಿ ಅನೇಕಾನೇಕ ಪ್ರಕಾರಗಳು. ಕೆಲವರಂತೂ ಡಿಬೇಟಿಗೆ ದಬ್ಬೇಟು ತಿನ್ನಲೆಂದೇ ಬರುತ್ತಾರೆ ಎನ್ನುವ ಅನುಮಾನ ನನಗೆ ಬರುತ್ತದೆ. ಇಂಥವರನ್ನು ಕರೆಸಿ ಎಲ್ಲರ ಎದುರು ಮುಂಡನ ಮಾಡಿಸಿ ಮನರಂಜನೆ ನೀಡುವುದು ಟಿವಿ ಆಂಕರ್ ಉದ್ದೇಶ.   ಸರಿ, ಖಂಡಿತ ಎಂದರೇನು ಎಂದು ನಿಮಗೆ ಖಂಡಿತಾ ಅರ್ಥವಾಗಿದೆಯಲ್ಲ, "ಖಡಾಖಂಡಿತ" ಎಂದರೆ ಏನು ಅರ್ಥವೋ! ಖಡಾ ಎಂದರೆ  ಹಿಂದಿಯಲ್ಲಿ ನಿಂತಿರುವ ಎಂದು ಅರ್ಥ.  ಖಡಕ್ ಚಾಯ್ ಎಂದರೆ ಯಾವ ಚಹಾ ಬಟ್ಟಲಲ್ಲಿ ಚಮಚ ನಿಲ್ಲಬಲ್ಲದೋ ಅಂತಹ ಸ್ಟ್ರಾಂಗ್ ಚಹಾ. ಲಕ್ಕಿ ರೆಸ್ಟೋರಾಂ ಎಂಬಲ್ಲಿ ನಾನು ಹಿಂದೆ ಕುಡಿಯುತ್ತಿದ್ದ ಚಾಯ್ ಇಂಥದ್ದು. ಇಂಥ ಧಾಬಾ ಶೈಲಿಯ ಖಾನಾವಳಿಗಳಲ್ಲಿ ಬೆಳಗ್ಗೆ ಚಹಾ ಪಾತ್ರೆಗೆ ಸೊಪ್ಪು ಹಾಕಿದರೆ ಅದು ಇಡೀ ದಿನ ಕುದಿಯುತ್ತದೆ. ಚಹಾ ಬಣ್ಣ ಸ್ವಲ್ಪ ಪೇಲವ ಎನ್ನಿಸಿದರೆ ಮೇಲೆ ಇನ್ನೂ ಒಂದಿಷ್ಟು ಸೊಪ್