ಪೋಸ್ಟ್‌ಗಳು

ಹಿಂದಿ ಕವಿತೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹಾಡುವರಾರು ನದೀತಟದಲ್ಲಿ?

ಇಮೇಜ್
ಮೂಲ ಹಿಂದಿ ಕವಿತೆ - ಹರಿವಂಶರಾಯ್ ಬಚ್ಚನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಹಾಡುವರಾರು ನದೀತಟದಲ್ಲಿ? ಭಂಗಗೊಳಿಸುತ್ತ ನಿಶೆಯ ನೀರವ  ಮೇಲೇಳುವ ಈ ಗ್ರಾಮೀಣ ಸ್ವರ  ಹಾಯುತ ಹುರುಳಿಯ ಹೊಲಗಳ ಮೇಲೆ  ಎಬ್ಬಿಸುತಿದೆ ಕಾವೇರಿಯೊಳು ಅಲೆ! ಹಾಡುವರಾರು ನದೀತಟದಲ್ಲಿ? ಬಂಧುಗಳಿರಬಹುದಿಲ್ಲೇ ಸನಿಹದಲಿ, ಧ್ಯಾನಿಸುತ್ತ ಮೌನದಿ ಮನದಲ್ಲಿ, ವ್ಯರ್ಥವಲ್ಲ ತಮ್ಮಯ ಆಲಾಪ,  ಶ್ರವಣಸುಖವ ತರುತಿದೆ ಜನಪದಕೆ! ಹಾಡುವರಾರು ನದೀತಟದಲ್ಲಿ? ವಿಚಲಿತವಾಗಿದೆ ಇಂದೇತಕೆ ಮನ  ಕೇಳುತ ಈ ಏಕಾಂತದ ಗಾಯನ? ಇದನೇ ಕೇಳುತ ನಾ ಮುಂಜರಿವೆ! ಇದನೇ ಹಾಡುವೆ, ಇದನೇ ಬರೆವೆ!  ಹಾಡುವರಾರು ನದೀತಟದಲ್ಲಿ?

ಜೀವನಕ್ಕೇ ವಿಜಯ

ಇಮೇಜ್
ಮೂಲ ಹಿಂದಿ ಕವಿತೆ - ಮೈಥಿಲೀಶರಣ ಗುಪ್ತ  ಅನುವಾದ - ಸಿ. ಪಿ. ರವಿಕುಮಾರ್  ವ್ಯರ್ಥ ಮೃತ್ಯುವಿನ ಭಯ ಜೀವನಕ್ಕೇ ವಿಜಯ ಬೇರನು ಸುದೃಢಗೊಳಿಸುತ ಜೀವ  ನಿತ್ಯ ಗಳಿಸುತಿದೆ ಹೊಸವೈಭವವ ಮರುವುಟ್ಟು ಪಡೆಯುವನು  ಮಗುವಲ್ಲಿ ಮಾನವ  ಈ ಆತ್ಮವು ಅಕ್ಷಯ  ಜೀವನಕ್ಕೇ ವಿಜಯ   ಜಾಗೃತಗೊಳುವುದು ಜೀವನ ಕಣ್ಬಿಚ್ಚಿ   ಮರಣವೋ!  ನಿಶ್ಚೇಷ್ಟಿತ,   ಕಣ್ಮುಚ್ಚಿ!  ಒಂದು ಬೀಜ ನೂರಾಗುವ ಸೃಷ್ಟಿ  ಕರ್ತನು ತುಂಬಾ ಸದಯ! ಜೀವನಕ್ಕೇ ವಿಜಯ ಜೀವನಕ್ಕಾಗಿ ಸಾಯಲೂ ನಾ ಸಿದ್ಧ! ಎಲ್ಲಡಗಿಸಲೀ ಧನವನು ಭದ್ರ?  ತಿಳಿಯದೆ ಬಳಸಿದರಿದರೌಚಿತ್ಯ  ಮಾತ್ರ ಖಂಡಿತ ಪ್ರಳಯ!  ಜೀವನಕ್ಕೇ ವಿಜಯ

ಬರುತಿದೆ ರವಿಯ ಸವಾರಿ!

ಇಮೇಜ್
ಮೂಲ - ಹರಿವಂಶರಾಯ್ ಬಚ್ಚನ್ ಅನುವಾದ - ಸಿ. ಪಿ. ರವಿಕುಮಾರ್ ಬರುತಿದೆ ರವಿಯ ಸವಾರಿ! ನವಕಿರಣದ ಹೊಳೆವ ರಥ ಬಿರಿವ ಮುಗುಳ ಕುಸುಮಪಥ ಸ್ವಾಗತಿಸುವ ಮೇಘಸೈನ್ಯ ಸ್ವರ್ಣವಸ್ತ್ರಧಾರಿ! ಬರುತಿದೆ ರವಿಯ ಸವಾರಿ! ವಿಹಗ, ಭೃಂಗ, ಹೆಜ್ಜೇನು, ಹಾಡುತ್ತಿವೆ ಕೀರ್ತಿಯನು ತ್ಯಜಿಸಿ ರಣವ ತಾರಾಬಲ ಆಗುತಿದೆ ಪರಾರಿ! ಬರುತಿದೆ ರವಿಯ ಸವಾರಿ! ಕುಣಿದು ಜಯವ ಕೂಗಲು ಮನ ಶಂಕಿಸುವುದು ಏಕೆ? ಹೀನ- ನಂತೆ ನಿಂತ ನಿಶೆಯ ನೋಡಿ, ಭಿಕ್ಷುವೇಷಧಾರಿ! ಬರುತಿದೆ ರವಿಯ ಸವಾರಿ!