ಪೋಸ್ಟ್‌ಗಳು

Saraswati ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನೀಡೌ, ವೀಣಾವಾದಿನಿ, ವರವ!

ಇಮೇಜ್
ಮೂಲ - ಸೂರ್ಯಕಾಂತ ತ್ರಿಪಾಠಿ "ನಿರಾಲಾ" ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ನೀಡೌ, ವೀಣಾವಾದಿನಿ, ವರವ! ನವ ಸ್ವಾತಂತ್ರ್ಯದ  ಅಮೃತಮಂತ್ರವು  ತುಂಬುವಂತೆ ಭಾರತವ! ಸೀಳಿ ಅಂಧಕಾರದ ಎದೆಯನ್ನು  ಹರಿಸು ತಾಯೆ ಜ್ಯೋತಿರ್ಮಯವನ್ನು  ಭೇದವೆಂಬ ತಮವನು ಕತ್ತರಿಸಿ  ಎಲ್ಲೆಡೆ ಜ್ಞಾನಪ್ರಕಾಶವ ಹರಿಸಿ ಬೆಳಗು ನಮ್ಮ ಮಾನಸವ! ಹೊಸ ತಾಳ-ಸ್ವರ-ರಾಗ-ಲಯಗಳು  ಕಂಠವು ಮರಿಮೋಡದ ಗುಡುಗಿನೊಲು, ನೀಡೌ ಆಕಾಶದ ತುದಿಯೊಳಗೆ   ರೆಕ್ಕೆಯೊಡೆದು ಹಾರುವ ಖಗಗಳಿಗೆ  ಮಾಡಲಿ ಶುಭ ಕಲರವವ!  ನೀಡೌ, ವೀಣಾವಾದಿನಿ, ವರವ! (ಹಿಂದಿಯ ಪ್ರಸಿದ್ಧ ಕವಿ "ನಿರಾಲಾ" ಅವರು ಬರೆದ ಈ ಸರಸ್ವತಿವಂದನೆಯನ್ನು  ಅನೇಕ ಕಲಾವಿದರು ಹಾಡಿದ್ದಾರೆ. ನಿಮಗೆ ಯೂಟ್ಯೂಬಿನಲ್ಲಿ ಧ್ವನಿಮುದ್ರಿಕೆಗಳು ಸಿಕ್ಕುತ್ತವೆ. ಭಾರತಕ್ಕೆ ಸ್ವಾತಂತ್ರ್ಯಪ್ರಾಪ್ತಿಯಾದಾಗ ಬರೆದ ಈ ಕವಿತೆಯಲ್ಲಿ ಭಾರತವನ್ನು ಕುರಿತು ಕವಿಯ ಕನಸುಗಳಿವೆ.) 

ಕುವೆಂಪು ಅವರ ವೀಣಾವಂದನೆ

ಇಮೇಜ್
ಸಿ ಪಿ ರವಿಕುಮಾರ್  ಕುವೆಂಪು ಅವರ ಶ್ರೀರಾಮಾಯಣದರ್ಶನಂ ಪ್ರಾರಂಭದಲ್ಲಿ ಬರುವ ಸರಸ್ವತೀ ವಂದನೆಯನ್ನು ಕೆಳಗೆ ಕೊಟ್ಟಿದ್ದೇನೆ, ಓದಿ. ಮಹಾಕಾವ್ಯದ ರಚನೆಗೆ ಮುಂಚೆ ಕವಿಗಳು ಸರಸ್ವತಿಯನ್ನು, ಗಣೇಶನನ್ನು ಪ್ರಾರ್ಥಿಸುವುದು ಒಂದು ಸಂಪ್ರದಾಯ. ಮಹಾಕಾವ್ಯ ರಚಿಸಲು ಅನೇಕ ವರ್ಷಗಳೇ ಬೇಕಾಗಬಹುದು. ಈ ಅವಧಿಯಲ್ಲಿ ಕಾವ್ಯಸ್ಫೂರ್ತಿ ನಿರಂತರವಾಗಿ ಹರಿಯಬೇಕು. ಬೇರೆ ಯಾವ ಕಾರಣಕ್ಕಾಗಿಯೂ ಕಾವ್ಯರಚನೆಯಲ್ಲಿ ಬಾಧೆಯಾಗಬಾರದು. ಏಳು, ವೀಣೆಯೆ; ಏಳು, ವಾಕ್ಸುಂದರಿಯ ಕಯ್ಯ ತ್ರೈಭುವನ ಸಮ್ಮೋಹಿನಿಯೆ, ಕವನ ಕಮನೀಯೆ! ಮಂತ್ರದಕ್ಷಿಗಳಿಂದೆ ನೋಳ್ಪ ನೀಂ ಸರ್ವಕ್ಕೆ ಸಾಕ್ಷಿ. ಕಂಡುದನೆಮಗೆ ಗಾನಗೆಯ್ ಶ್ರೀಕಂಠದಿಂ ಶತತಂತ್ರಿಯಾ. ಪ್ರತಿಭೆ ತಾಂ ಪ್ರಜ್ವಲಿಸುಗೆಮ್ಮೆರ್ದೆಗೆ ನಿನ್ನ ದರ್ಶನವೆಮ್ಮ ದರ್ಶನಂ ತಾನಪ್ಪವೋಲ್ ! ನಾರಣಪ್ಪಂಗಂತೆ ರನ್ನಂಗೆ ಮೇಣ್ ಪಂಪರಿಗೆ, ನಾಗವರ್ಮಗೆ ರಾಘವಾಂಕಗೆ ಲಕುಮಿಪತಿಗೆ, ವಾಲ್ಮೀಕಿ ವ್ಯಾಸರಿಗೆ ಹೋಮರಗೆ ಮಿಲ್ಟನಗೆ ದಾಂತೆ ಮೊದಲಹ ಮಹಾಕವಿಗಳಿಗೆ ನೀನೊಸೆದು                      ೧೦ ಕೃಪೆಗೈದ ವೈದ್ಯುತಪ್ರತಿಭೆಯಂ, ಹೇ ದೇವಿ, ಕಲ್ಪನಾಶಕ್ತಿಯಂ ವಾಙ್ಮಂತ್ರದುಕ್ತಿಯಂ ಆಯುರಾರೋಗ್ಯಮಂ ಶಾಂತಿ ಸೌಭಾಗ್ಯಮಂ ದಯಪಾಲಿಸೌ ನಿನ್ನ ಕನ್ನಡ ಕಂದನೀತಂಗೆ, ಸುರುಳಿಗುರುಳಂದಮೆಸೆವಾತ್ಮಸೌಂದರ್ಯಮಂ ಮುಡಿಪನರ್ಚಿಸಿ ಮಣಿಯುವೀ ಕವಿ ಕುವೆಂಪುವಿಗೆ ! ...