ಪೋಸ್ಟ್‌ಗಳು

Bhajan ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಭಜಿಸೋ ಮನುಜ, ರಾಮ ಗೋವಿಂದ ಹರಿ

ಮೂಲ - ಸಂತ ಕಬೀರ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಭಜಿಸು ಮನುಜ, ರಾಮ ಗೋವಿಂದ ಹರಿ ಜಪ ತಪ ಸಾಧನ ಏನೂ ಬೇಡದು, ಬೇಡದು ನಿನ್ನ ಸಿರಿ ಸಂತತಿ ಸಂಪದ ಲೋಲುಪನಾಗಿ ಮರೆತು ಹೋದೆ ಗುರಿ ಸ್ಮರಿಸು ರಾಮನನ್ನು ಬರುವ ಮುನ್ನ ಮೃತ್ಯು ಹಾರಿ ಕೇಳಿ ಹೇಳುತಿಹನು ಸಂತ ಕಬೀರ ಸಾರಿ ಸಾರಿ ರಾಮನಾಮ ಹೇಳದ ನಾಲಗೆಗೆ ಮಣ್ಣುಧೂಳೆ ದಾರಿ

ಶ್ರಾವಣ ಸುರಿಸುವ ಮಳೆಯ ಹನಿ

ಇಮೇಜ್
ಮೂಲ - ಮೀರಾ ಬಾಯಿ  ಕನ್ನಡ ಭಾವಾನುವಾದ - ಸಿ. ಪಿ. ರವಿಕುಮಾರ್  (ಶ್ರಾವಣದ ಮಳೆಯ ಹನಿಗಳು ಮೈಮೇಲೆ ಬಿದ್ದಾಗ ಮೀರಾಬಾಯಿಯ ಮನಸ್ಸು ಕೃಷ್ಣನ ಸ್ಮರಣೆಯಿಂದ ತೊಯ್ಯುತ್ತದೆ.  ಬೇಸಗೆಯ ನಂತರ ತಂಗಾಳಿ ಮಳೆಯನ್ನು ತಂದ ಶ್ರಾವಣ ಅವಳಲ್ಲಿ ಉಲ್ಲಾಸ ತುಂಬುತ್ತದೆ. ಅವಳ ಮನಸ್ಸು ಗಿರಿಧರ ನಾಗರನನ್ನು ನೆನೆದು ಆನಂದದಿಂದ ತುಂಬುತ್ತದೆ.) ನೆನೆಸುತ್ತಿದೆ ಮನಮೋಹನನ  ಶ್ರಾವಣ ಸುರಿಸುವ ಮಳೆಯ ಹನಿ  ಶ್ರಾವಣ ತಂದಿತು  ಹರ್ಷೋಲ್ಲಾಸ   ಕೇಳಿದಂತೆ ಹರಿ ಗೆಜ್ಜೆ ದನಿ  ಕವಿದು ಮುಗಿದು ನಾಲ್ಕೂ ದೆಸೆಯಿಂದ  ಗುಡುಗುಮಿಂಚು ನಡುಗುವ ಅವನಿ ಪುಟ್ಟಪುಟ್ಟ ಹನಿಗಳ ಸುರಿಸುವ ಮೋಡ  ಶೀತಲ ಪವನ ಜೀವ ಸಂಚಯಿನಿ      ಪ್ರಭು ಗಿರಿಧರ ನಾಗರನನು ನೆನೆದು  ಮಂಗಳ ಹಾಡುವ ಮೀರಾ ಉನ್ಮಾದಿನಿ 

ಬೆಣ್ಣೆಯ ತಿಂದಿಲ್ಲ ನಾನು

ಇಮೇಜ್
ಮೂಲ ರಚನೆ - ಸೂರದಾಸ  ಕನ್ನಡಕ್ಕೆ - ಸಿ.ಪಿ. ರವಿಕುಮಾರ್  "ಮೈಯ್ಯಾ ಮೋರಿ, ಮೈ ನಹೀಂ ಮಾಖನ್ ಖಾಯೋ" ಎಂಬುದು ಸೂರದಾಸರ ಅತ್ಯಂತ ಜನಪ್ರಿಯ ರಚನೆ ಎಂದರೆ ತಪ್ಪಾಗಲಾರದು. ಕೃಷ್ಣನ ಬಾಲಲೀಲೆಯನ್ನು ಕುರುಡರಾದ ಸೂರದಾಸರು ತಮ್ಮ ಮನೋಚಕ್ಷುಗಳಿಂದ ಕಂಡು ಅವುಗಳನ್ನು ಮನೋಹರವಾಗಿ ಚಿತ್ರಿಸಿದರು. ಈ ಗೀತೆಯಲ್ಲಿ ಕೃಷ್ಣ ತಾನು ಬೆಣ್ಣೆ ಕದ್ದಿಲ್ಲವೆಂದು ಸಾಧಿಸುತ್ತಾ ಅಮ್ಮನಿಗೆ ಲಾ ಪಾಯಿಂಟ್ ಹಾಕುವುದರಲ್ಲಿ ಸುಕುಮಾರವಾದ ಹಾಸ್ಯವಿದೆ.  "ನನ್ನನ್ನು ಬೆಳಗಿನಿಂದ ಸಂಜೆಯವರೆಗೂ ಚಾಕರಿಗೆ ಅಟ್ಟಿರುತ್ತೀ! ನಾನು ಬೆಣ್ಣೆ ಯಾವಾಗ ಕದಿಯಬೇಕು?" ಎಂಬುದು ಒಂದು ಪಟ್ಟು. ಅಷ್ಟು ಗಿಡ್ಡವಾಗಿರುವ ತನಗೆ ಅಟ್ಟದ ಮೇಲಿರುವ ಗಡಿಗೆ ನಿಲುಕುವುದೇ ಎಂಬುದು ಇನ್ನೊಂದು ಪಟ್ಟು. ಗೊಲ್ಲರ ಹುಡುಗರು ತಾವು ತಿಂದು ನನ್ನ ಮೂತಿಗೆ ಬೆಣ್ಣೆ ಬಳಿದರು ಎಂಬ ಆರೋಪ! ಅದನ್ನೂ ನಂಬದಿದ್ದಾಗ "ನಾನು ಎಷ್ಟಾದರೂ ಬೇರೆಯವನಲ್ಲವೇ! ಸರಿ, ಇಗೋ, ನಾನು ಮನೆ ಬಿಟ್ಟು ಹೊರಟೆ" ಎಂಬ ಬ್ರಹ್ಮಾಸ್ತ್ರ!  ಈ ಗೀತೆಯನ್ನು ಅದೆಷ್ಟೋ ಜನ ಗಾಯಕರು ಹಾಡಿದ್ದಾರೆ. ಇಲ್ಲಿ ನಾನು ಲತಾ ಮಂಗೇಶ್ಕರ್ ಅವರು ಅದ್ಭುತವಾಗಿ ಹಾಡಿರುವ ಈ ಧ್ವನಿಮುದ್ರಿಕೆಯನ್ನು ಅನುಸರಿಸಿದ್ದೇನೆ.   

ಯಾರೊಡನೆ ಆಡಲಿ ಹೋಳಿ

ಇಮೇಜ್
ತನ್ನ ಕಡೆಯ ದಿನಗಳನ್ನು ಮೀರಾಬಾಯಿ ವೃಂದಾವನ ಮತ್ತು ದ್ವಾರಕಾ ಕ್ಷೇತ್ರಗಳಲ್ಲಿ ಕಳೆದಳು ಎನ್ನುತ್ತಾರೆ. ಕೃಷ್ಣನಿಗಾಗಿ ಪರಿತಪಿಸುತ್ತಾ ಅವಳು ಇಡೀ ಜೀವಮಾನವನ್ನೇ ಕಳೆದಳು. ವೃಂದಾವನದಲ್ಲಿ ಹೋಳಿಯ ಉತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಕೃಷ್ಣ ತನ್ನ ಸಂಗಡಿಗರೊಂದಿಗೆ ಸೇರಿಕೊಂಡು ಆಡುತ್ತಿದ್ದ  ರಾಸಲೀಲೆಯನ್ನು ಮರುಸೃಷ್ಟಿಸಲಾಗುತ್ತದೆ.  ಈ ಸಂಭ್ರಮವನ್ನು ನೋಡಿದಾಗ ಮೀರಾಳ ಮನಸ್ಸು ಕುಗ್ಗುತ್ತದೆ. ತಾನು ಯಾರೊಂದಿಗೆ ಹೋಳಿ ಆಚರಿಸಲಿ? ತಾನು ನಂಬಿದವನು ಒಂಟಿ ಬಿಟ್ಟು ಹೊರಟುಹೋದನಲ್ಲ ಎಂಬ ಅಧೈರ್ಯ ಮೂಡುತ್ತದೆ.  ಆದರೆ ತನ್ನ ದೈನ್ಯವನ್ನು ತೋಡಿಕೊಳ್ಳುವಾಗಲೂ  ಅವಳಿಗೆ ಶ್ಯಾಮನ ದರ್ಶನದ  ಆಸೆ ಬತ್ತಿಹೋಗಿಲ್ಲ.   ಮೂಲ ರಚನೆ - ಮೀರಾಬಾಯಿ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ಯಾರೊಡನೆ ಆಡಲಿ ಹೋಳಿ ನನಗೇನು ಗೊತ್ತು ಪ್ರಿಯನು ಒಬ್ಬಂಟಿ ಹೋಗಿಹನು ಬಿಟ್ಟು ಮಾಣಿಕ್ಯ ಮುತ್ತು ಎಲ್ಲವನೂ ಬಿಟ್ಟು, ತುಳಸೀಮಣಿ ಕೊರಳಲ್ಲಿ ತೊಟ್ಟು ಊಟದೊಳು ರುಚಿಯಿಲ್ಲ ಮನೆಯಲ್ಲಿ ಮನಸಿಲ್ಲ, ಹೇಳಲೇನಿದರ ಗುಟ್ಟು ಪ್ರಿಯಕರನ ಕಾಯುತ್ತ ಉರುಳುತ್ತಿದೆ ಹೊತ್ತು ... ನಿನ್ನೊಲವು ಈಗ ಬೇರಾರದೋ ಸೊತ್ತು! ನನ್ನೊಂದಿಗೇತಕ್ಕೆ ಆಡಬೇಕಿತ್ತು?  ಇಂದೂ ಬರಲಿಲ್ಲ, ಎಷ್ಟು ದಿನವಾಯಿತು, ನನ್ನನ್ನು ಹೀಗೆ ಒಬ್ಬಳನ್ನೇ ಬಿಟ್ಟು! ಏಳುತ್ತಿದೆ ಮನದೊಳಗೆ ತಲ್ಲಣದ ಸುತ್ತು ...    ಶ್ಯಾ...

ಮನಸು ನಿಲ್ಲಿಸದೆ ಆಗದು, ನಿರ್ಮೋಹಿ!

ಇಮೇಜ್
ಮೂಲ: ಮಹಾತ್ಮಾ ಕಬೀರ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಅಶ್ವಿನಿ ಭಿಡೆ ಅವರು ಅದ್ಭುತವಾಗಿ ಹಾಡಿರುವ ಕಬೀರನ ಈ ಭಜನೆಯನ್ನು (ಶಬದ್) ನೀವು ಇಲ್ಲಿ ಕೇಳಬಹುದು .    ಇದೇ ಭಜನೆಯನ್ನು ಅಶ್ವಿನಿ ಅಂಬೇಡ್ಕರ್ ಎಂಬ ಗಾಯಕಿ ಕೂಡಾ ಅದ್ಭುತವಾಗಿ ಹಾಡಿದ್ದಾರೆ .  ಭಕ್ತಿಯಿಲ್ಲದ ಪೂಜೆಯನ್ನು ಕುರಿತು ನಮ್ಮ ಹರಿದಾಸರು ಮತ್ತು ವಚನಕಾರರು ಕೂಡಾ ಹಾಡಿದ್ದಾರೆ.  ಕಬೀರನು ಹೇಳುವುದೂ ಅದೇ - ಮೋಹ (ಭಕ್ತಿ) ಇಲ್ಲದೆ ಮನಸು ನಿಲ್ಲಿಸದೆ  ಪೂಜಿಸಿದರೆ ಅದರಿಂದ ಏನೂ ಸಿದ್ಧಿಸದು! ಇಷ್ಟಾಗಿ ಏನಾದರೂ ದೇವರ ಇಷ್ಟದಲ್ಲಿದ್ದಂತೆಯೇ ಆಗುತ್ತದೆ!  ದೇವನ ಕೃಪೆಯಿದ್ದರೆ ನಿನಗೆ ಸದ್ಗುರು ದೊರಕುತ್ತಾನೆ. ಗುರುವಿನಿಂದ ಮುಕ್ತಿ ದೊರಕುತ್ತದೆ, ಇಲ್ಲದಿದ್ದರೆ ಇಲ್ಲ! ಮನಸು ನಿಲ್ಲಿಸದೆ ಆಗದು, ನಿರ್ಮೋಹಿ! ಮನಸು ನಿಲ್ಲಿಸದ ಪ್ರೀತಿಯು ಹುಚ್ಚ, ಇಬ್ಬನಿಯಿಂದ ಮೈ ತೊಳೆದಂತೆ! ನಂಬಿ  ರಾಮನನ್ನು ನಡೆಸುವ ಈ ಬದುಕು  ನಡೆವುದು ಅವನ ಮನದೊಳಿರುವಂತೆ! ಕೃಪೆಯಿಲ್ಲದೆ ಸಿಗುವನೇ  ಸದ್ಗುರು, ಎಷ್ಟು ಪ್ರಯತ್ನಿಸಿದರೆ ಏನಂತೆ! ಹೇಳುವನು ಕಬೀರ ಕೇಳಿ ಸಂತರೇ,  ಮುಕ್ತಿ  ದೊರೆಯದು   ಗುರುವಿಲ್ಲದೆ!

ಮುಳುಗುತ್ತಿದೆ ವ್ರಜ ...

ಇಮೇಜ್
ಮುಳುಗುತ್ತಿದೆ ವ್ರಜ ...  ಮೂಲ : ಸೂರದಾಸ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಇದು ಸೂರದಾಸರು ಬರೆದ ಒಂದು ಗೀತೆಯ ಅನುವಾದ. ಇದನ್ನು ಲತಾ ಮಂಗೇಶ್ಕರ್ ಅವರ ಸುಮಧುರ ಕಂಠದಲ್ಲಿ ನೀವು ಇಲ್ಲಿ   ಕೇಳಬಹುದು .  ಕೃಷ್ಣನು ಮಥುರಾ-ಬೃಂದಾವನಗಳನ್ನು ತೊರೆದು ದ್ವಾರಕೆಗೆ ತೆರಳಿದಾಗ ದುಃಖ ತಡೆಯಲಾರದೇ ಅತ್ತ ಜೀವವೊಂದರ ಅಳಲು ಈ ಗೀತೆಯಲ್ಲಿದೆ.  ತನ್ನ ಕಣ್ಣುಗಳಿಂದ ಸದಾ ಕಾಲ ಹರಿಯುವ ಕಂಬನಿಧಾರೆಯನ್ನು ತಡೆಯುವುದು ಈ ದುಃಖಿಗೆ ಸಾಧ್ಯವಾಗುತ್ತಿಲ್ಲ. ಕಣ್ಣೀರು ಕಾಡಿಗೆಯನ್ನು ಕೆಡಿಸುತ್ತಿದೆ. ಒರೆಸಿಕೊಂಡಾಗ ಮುಖ-ಕೈಗಳೆಲ್ಲ ಕಪ್ಪಾಗುತ್ತಿವೆ. ಸೆರಗಿನ ತುದಿ ಒಣಗುವುದೇ ಇಲ್ಲ.  ಸುರಿದ ಕಂಬನಿ ಕಡಲಾಗಿದೆ. ಕಾಲು ಅಧೈರ್ಯದಿಂದ ಕುಸಿಯುತ್ತಿದೆ. ದಿಕ್ಕುತೋರುವ ತಾರೆಯೇ ಹರಿದುಹೋಗುತ್ತಿದೆ. ಇಡೀ ವ್ರಜಭೂಮಿಯಲ್ಲಿ ಪ್ರಳಯವಾದಂತಿದೆ. ತಮ್ಮನ್ನು  ಕಾಪಾಡಬಲ್ಲವನು ಕೃಷ್ಣ ಮಾತ್ರ - ಅವನೇಕೆ ಇನ್ನೂ ಬಂದಿಲ್ಲ?  ಹಗಲೂ ಇರುಳೂ ಕಂಬನಿಧಾರೆ   | ಸದಾ ಕವಿದ ಕಾರ್ಮೋಡವು ಕಣ್ಣಲ್ಲಿ  ಶ್ಯಾಮನು ತ್ಯಜಿಸಿದ ಮೇಲೆ | ಕಾಡಿಗೆ ನಿಲ್ಲದು ಕಣ್ಣಾಲಿಯಲಿ,  ಕೆನ್ನೆ ಕೈಗಳೆಲ್ಲವು ಕಲೆಯಾಗಿ  ಒಣಗದು ಸೆರಗಿನ ತುದಿ ಎಂದೂ, ಎದೆಗಿಳಿವುದು ಅಸುಧಾರೆ|| ಕಂಬನಿ ಕಡಲು, ಕುಸಿಯುವ ಕಾಲು, ಕಳೆದುಹೋದ ಧ್ರುವತಾರೆ|   ಸೂರದಾಸ! ವ್ರಜ ಮುಳುಗುತ್ತಲಿದೆ! ಪೊರೆಯದೆ...

ಏನು ಹಾಡುತ್ತಿವೆ ಹಕ್ಕಿ?

ಸಂತ ಕಬೀರನ  ಈ ಭಜನೆಯನ್ನು ಅನೇಕ ಗಾಯಕರು ಹಾಡಿದ್ದಾರೆ. ವೀಣಾ ಸಹಸ್ರಬುದ್ಧೆ ಎಂಬ ಗಾಯಕಿಯ ದನಿಯಲ್ಲಿ ನೀವು ಇಲ್ಲಿ ಕೇಳಬಹುದು.  ಈ ಕವಿತೆಯಲ್ಲಿ ಭಗವಂತನು ಎಲ್ಲೆಡೆ ಕಾಣುವುದನ್ನು ಕವಿ ವಿವರಿಸುತ್ತಾನೆ. "ತಾನೇ ಮಾಲಿ, ಉಪವನವೂ ತಾನೇ, ತಾನೇ ಬಿಡಿಸುವನು ಹೂವು" ಎಂಬ ಸಾಲುಗಳಲ್ಲಿ ಸೃಷ್ಟಿ, ಸ್ಥಿತಿ ಮತ್ತು ಸಾವು  ಈ ಮೂರರಲ್ಲೂ ಭಗವಂತನ ಸಾಕ್ಷಾತ್ಕಾರವನ್ನು  ಕವಿ ನಮಗೆ ತೋರಿಸುತ್ತಾನೆ.  ಮೂಲ : ಮಹಾತ್ಮಾ ಕಬೀರ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಏನು ಹಾಡುತ್ತಿವೆ ಹಕ್ಕಿ  ಪ್ರತಿಯೊಂದು ಕಾಯದಲ್ಲಿ ಕೇಳಿಸಿಕೋ ಎರಡು ಕ್ಷಣ ಮೌನವಾಗಿ ತಾನೇ ಕೋಲಾಗಿ ತಾನೇ ತಕ್ಕಡಿಯಾಗಿ  ತಾನೇ ಕುಳಿತು ತೂಗುತ್ತಿಹನು ನೋಡಲ್ಲಿ  ತಾನೇ ಮಾಲಿ, ಉಪವನವೂ ತಾನೇ  ತಾನೇ ಬಿಡಿಸುವನು ಹೂವು ನೋಡಲ್ಲಿ  ವನದಲ್ಲಿ ಎಲ್ಲೆಡೆಗೂ ತಾನೇ ತಾನಾಗಿ  ಮೆರೆಯುವನು ಜಡದಲ್ಲಿ ಚೈತನ್ಯದಲ್ಲಿ  ಸಾಧುಗಳೇ ಕೇಳಿ, ಹೇಳುವನು ಕಬೀರ  ಮನಸ್ಸಿನ ಗಂಟು ಬಿಡಿಸುವ ಈ ವಾಣಿ  

ಸರೋವರ ತ್ಯಜಿಸಿದ ಮೀನು ಮಕರಮಿಲನಕ್ಕೆ ಬಂದಂತೆ

ಇಮೇಜ್
ಸಿ. ಪಿ. ರವಿಕುಮಾರ್  "ನಂದನಂದನ ದಿಠು ಪಡೆಯಾ ಮಾಯಿ ..." ಎಂಬ ಮೀರಾ ಭಜನೆಯನ್ನು ನೀವು ಕೇಳಿರಬಹುದು. ಲತಾ ಮಂಗೇಶ್ಕರ್ ಇದನ್ನು ಹಾಡಿದ್ದಾರೆ. ನಿಮಗೆ ಅಂತರ್ಜಾಲದ ಮೇಲೆ ರೆಕಾರ್ಡಿಂಗ್ ಸಿಕ್ಕುತ್ತದೆ.   ಈ ಭಜನೆಯಲ್ಲಿ ಮೀರಾಬಾಯಿ ಕೃಷ್ಣನನ್ನು ಕುರಿತು ತನಗಿರುವ ಅಪೂರ್ವ ಆಕರ್ಷಣೆಯ ಕಾರಣವನ್ನು ತಿಳಿಸುತ್ತಾಳೆ. ನಂದನಂದನ ಕೃಷ್ಣನ ಮೈಬಣ್ಣ ಕಪ್ಪು.  ತಲೆಯ ಮೇಲೆ  ಓರೆಯಾಗಿಟ್ಟ  ನವಿಲುಗರಿಯ ಚಂದ್ರಕಿರೀಟ! ಹಣೆಯ ಮೇಲೆ ಕೇಸರಿ ತಿಲಕ.  ಅವನನ್ನು ಕಂಡಾಗಿನಿಂದ ತಾನು ಅವನಿಗೆ ಆಕರ್ಷಿತಳಾಗಿ ಲೋಕದ ಲಜ್ಜೆಯನ್ನು ಕಿತ್ತೆಸೆದಿದ್ದೇನೆ ಎಂದು ಮೀರಾ ತನ್ನ ತಾಯಿಯಲ್ಲಿ ತೋಡಿಕೊಳ್ಳುತ್ತಿದ್ದಾಳೆ.  ಇಲ್ಲಿ "ತಾಯಿ" ಎಂದರೆ ಅವಳ ಸ್ವಂತ ತಾಯಿಯೇ ಇರಬೇಕಾಗಿಲ್ಲ, ಅವಳನ್ನು ಕರುಣೆಯಿಂದ ಮಾತಾಡಿಸಿದ ಬೇರೆ ಯಾರೇ ಆಗಿರಬಹುದು.   ಕೃಷ್ಣನ ಕಿವಿಯಲ್ಲಿರುವ ಕುಂಡಲದ ಬೆಳಕು ಅವನ ಕೆನ್ನೆಯ ಮೇಲೆ ಪ್ರತಿಫಲಿಸಿದಾಗ ತಾನು ಸರೋವರವನ್ನು ತ್ಯಜಿಸಿ ಮೊಸಳೆಯನ್ನು ಸಂಧಿಸಲು  ಬಂದ ಮೀನಿನಂತೆ ಎಂಬ ಮೀರಾಬಾಯಿಯ ಉಪಮೆ ತುಂಬಾ ಸುಂದರವಾಗಿದೆ.  ತನಗೆ ಯಾರನ್ನು ಕೊಟ್ಟು ಮದುವೆ ಮಾಡಿದರೋ ಅವನೊಂದಿಗೆ ಬಾಳ್ವೆ ಮಾಡುವುದು ಮೀನು ಸರೋವರದಲ್ಲಿ ಈಜಿದಷ್ಟೇ ಸಹಜ.  ಆದರೆ ತಾನು ಅದೆಲ್ಲವನ್ನೂ ಬಿಟ್ಟು ಕೃಷ್ಣನಲ್ಲಿ ಅನುರಕ್ತಿ ಹೊಂದಿದ್ದೇನೆ! ಇದರಿಂದ ತನಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಅರಿವಿದ್ದರೂ...

ಕಣ್ಣುಗಳು ಸಾವಿರಾರು ಮನದ ಕನ್ನಡಿಗೆ

ಇಮೇಜ್
ಮೂಲ - ಸಾಹಿರ್ ಲುಧಿಯಾನ್ವಿ  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಇದೊಂದು ಭಕ್ತಿಗೀತೆ. ಕಾಜಲ್ ಎಂಬ ಹಿಂದಿ ಚಿತ್ರದಲ್ಲಿ ಇದನ್ನು ಬಳಸಿಕೊಳ್ಳಲಾಗಿದೆ.  ಮುಸಲ್ಮಾನ ಧರ್ಮೀಯರಾದ ಸಾಹಿರ್ ಲುಧಿಯಾನ್ವಿ ಈ ಭಕ್ತಿಗೀತೆಯನ್ನು ಬರೆದಿರುವುದು ವಿಶೇಷ.  "ರವಿ" ಎಂಬ ಸಂಗೀತ ನಿರ್ದೇಶಕರ ಮಾರ್ಗದರ್ಶನದಲ್ಲಿ ಈ ಗೀತೆಯನ್ನು ಆಶಾ ಭೋಂಸ್ಲೆ ಹಾಡಿದ್ದಾರೆ. ಈ ಗೀತೆಯಲ್ಲಿ ಮನುಷ್ಯ ಮತ್ತು ಭಗವಂತನ ನಡುವೆ ನಡೆದ ಒಂದು ಸಂವಾದವನ್ನು ಕುರಿತು ಕವಿ ಬರೆದಿದ್ದಾರೆ.  "ಪ್ರಭೂ, ನಿನ್ನನ್ನು ನಾನು ಪಡೆಯುವುದು ಹೇಗೆ?" ಎಂದು ಮನುಷ್ಯ ಭಗವಂತನನ್ನು ಕೇಳಿದಾಗ ಭಗವಂತನು "ನಿನ್ನ ಮನಸ್ಸಿನಲ್ಲಿ ಹುಡುಕಿದರೆ ಸಿಕ್ಕುತ್ತೇನೆ" ಎಂದು ಉತ್ತರಿಸುತ್ತಾನೆ. "ನನ್ನನೆಲ್ಲಿ ಅರಸುವೆ?" ಎಂಬ ಕಬೀರನ ಒಂದು ಭಕ್ತಿಗೀತೆ ನೆನಪಾಗುತ್ತದೆ.  "ತೋರಾ ಮನ್ ದರ್ಪಣ್ ಕಹಲಾಯೇ" ಎಂದು ಪ್ರಾರಂಭವಾಗುವ ಈ ಗೀತೆಯ ಧ್ವನಿಮುದ್ರಿಕೆ ನಿಮಗೆ ಅಂತರಜಾಲದಲ್ಲಿ ಸಿಕ್ಕುತ್ತದೆ. ಈಗ ಕವಿತೆಯ ಅನುವಾದವನ್ನು ಓದಿ.    ಹೇಗೆ ಪಡೆಯಲಿ ನಿನ್ನನ್ನು ಪ್ರಭುವೇ ಎಂದು ಅವಲತ್ತುಕೊಂಡಾಗ ಪ್ರಾಣಿ ನಿನ್ನ ಮನದಲ್ಲಿ ಹುಡುಕಿದರೆ ಸಿಕ್ಕುವೆನು ಎಂದು ಮಾರ್ನುಡಿಯಿತು ಪ್ರಭುವಾಣಿ  ಅರಿತುಕೋ ನಿನ್ನ ಮನಸ್ಸನ್ನು ಸೃಷ್ಟಿಸಿದ್ದೇನೆ ಕನ್ನಡಿಯ ಹಾಗೆ ಒಳ್ಳೆಯದು ಕೆಟ್ಟದ್ದು ಎಲ್ಲವನ್ನೂ  ನೋಡುತ್ತದ...

ವಿಚಿತ್ರ ವಿಡಂಬನೆ ವಿಧಿಯು ಬರೆದ ಹಣೆಬರಹ!

ಮೂಲ ಭೋಜಪುರಿ - ಮೀರಾಬಾಯಿ  ಕನ್ನಡಕ್ಕೆ - ಸಿ ಪಿ ರವಿಕುಮಾರ್   "ಕರಮ್ ಕೀ ಗತಿ ನ್ಯಾರೀ ಸಂತೋ ..." ಎಂಬ ಮೀರಾ ಭಜನೆಯನ್ನು ನೀವು ಕೇಳಿರಬಹುದು.  ಹೃದಯನಾಥ್ ಮಂಗೇಶ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್  ಈ ಭಜನೆಯನ್ನು  ಹಾಡಿದ್ದಾರೆ.  ಅಂತರ್ಜಾಲದಲ್ಲಿ ಲಭ್ಯವಾಗಿದೆ, ನೀವೂ ಕೇಳಬಹುದು. ಈ ಭಜನೆಯಲ್ಲಿ ಮೀರಾಬಾಯಿ ವಿಧಿಯ ವಿಪರ್ಯಾಸವನ್ನು ಕುರಿತು ಹೇಳುತ್ತಿದ್ದಾಳೆ. ದೊಡ್ಡ ದೊಡ್ಡ ಕಣ್ಣುಗಳನ್ನು ಪಡೆದ ಜಿಂಕೆಯ ಕರ್ಮ ಒಣಕಲು ಕಾಡಿನಲ್ಲಿ ಅಲೆದಾಡುವುದು! ಮೀರಾಬಾಯಿಗೆ ತನ್ನ ಜೀವನದ ಬಗ್ಗೆ ಕೂಡಾ ಹೀಗೇ ಅನ್ನಿಸಿರಬಹುದು. ತಾನು ಹುಟ್ಟಿದ್ದು ಗಿರಿಧರ ಗೋಪಾಲನಿಗಾಗಿ - ಆದರೆ  ರಾಜನೊಬ್ಬ ತನ್ನನ್ನು ಬಲವಂತದಿಂದ ಮದುವೆಯಾಗಿದ್ದಾನೆ.  ಇದೂ ಕರ್ಮದ ಆಟವೆಂದೇ ಅವಳಿಗೆ ತೋರುತ್ತದೆ.    ವಿಚಿತ್ರ ವಿಡಂಬನೆ ವಿಧಿಯು ಬರೆದ ಹಣೆಬರಹ! ಸಂತರೇ ಹೇಳುವೆ ಕೇಳಿ, ನಾ ಕಂಡ ತರಹ ಮೃಗಕ್ಕೆ ಕೊಟ್ಟದ್ದೇಕೆ ದೊಡ್ಡ ಬಟ್ಟಲುಗಣ್ಣು ? ಅಲೆಯುತ್ತದೆ ನೋಡುತ್ತ ಒಣಕಲು ಕಾಡನ್ನು! ಕೊಕ್ಕರೆಗೆ ಕೊಟ್ಟದ್ದೇಕೆ ಉಜ್ವಲ ಬಿಳಿ ಬಣ್ಣ? ಕೋಗಿಲೆಗೆ ಬಳಿದು ಬರಿಯ ಕಪ್ಪನ್ನ! ಸಿಹಿನೀರು ತುಂಬಿ ಪುಟ್ಟ ನದಿಗಳೊಡಲಲ್ಲಿ  ತುಂಬಿದ್ದೇಕೆ  ಉಪ್ಪುನೀರು  ಕಡಲಲ್ಲಿ! ಮೂರ್ಖನ ಕೈಯಲ್ಲಿ ರಾಜ್ಯಭಾರವನಿತ್ತು ಪಂಡಿತನನ್ನಲಸುವೆ ಭಿಕ...

ಕರಗುತ್ತಿದೆ ಕರದಲಿ ನವನೀತ

ಸೂರದಾಸ್ ಉತ್ತರಭಾರತದ ಸಂತಕವಿ. ಕೃಷ್ಣ ಇವನ ಇಷ್ಟದೈವ. ಕುರುಡನಾಗಿದ್ದರೂ ಇವನ ಒಳಗಣ್ಣಿಗೆ ಕೃಷ್ಣನ ಬಾಲಲೀಲೆಗಳು ವೇದ್ಯವಾಗಿದ್ದು  ತನ್ನ ರಚನೆಗಳಲ್ಲಿ ಗ್ರಾಮ್ಯ ಭಾಷೆಯ ಮಾಧುರ್ಯದಲ್ಲಿ ಅದ್ಭುತವಾಗಿ ವರ್ಣಿಸುತ್ತಾನೆ. ಅವನ "ಶೋಭಿತ ಕರ್ ನವನೀತ್ ಲಿಯೇ" ಎಂಬ ಭಜನೆಯ ಭಾವಾನುವಾದವನ್ನು ಇಲ್ಲಿ ಓದಿ. ಮೂಲ ರಚನೆ: ಸಂತ ಸೂರದಾಸ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಕರಗುತ್ತಿದೆ ಕರದಲಿ ನವನೀತ ಕರಗುತ್ತಿದೆ  ಹೃದಯವು ನೋಡುತ್ತಾ ಧೂಳು ಮಣ್ಣಿನಲ್ಲಿ ಅಂಬೆಗಾಲಿಡುತ್ತ ಹಾಲುಗಲ್ಲದ ಮೆಲುನಗೆ ಚೆಲ್ಲುತ್ತ   ॥ ೧ ॥ ತುದಿಬಾಯೊಳು ಮೊಸರಿನ ಅವಶೇಷ ದಧಿಯೊಲು ಸಿಹಿನಗೆ ಕಳೆವುದು ಕ್ಲೇಶ || ೨ ॥ ಹೊಳೆವುದು ಹಣೆಯಲಿ ಗೋರೋಚನ ತಿಲಕ ಸುಳಿಗಲ್ಲದ ನಗೆ ಕಿವಿಗಳ ತನಕ  ॥ ೩ ॥ ಗುಂಗುರು ಕೇಶದ ರಾಶಿಯ ನೋಟ ಭೃಂಗಾವಳಿ ಮಧುವನದಲಿ  ಹಾರಾಟ ॥ ೪ ॥ ಪದಕ ವಜ್ರ ಹೊಳೆವುದು ಕೊರಳಲ್ಲಿ ಸಿಂಹನಖವು ತರುವುದು ಶುಭದೃಷ್ಟಿ   ॥ ೫ ॥ ಕ್ಷಣವೊಂದರ ಈ ದರುಶನ ಭಾಗ್ಯ ಏಳುಕಲ್ಪಗಳ ಸುಖ ಸಾಮ್ರಾಜ್ಯ   ॥ ೬ ॥ ------ A bhajan by Surdas (Shobhit Kar Navneet Liye), translated into Kannada by C.P. Ravikumar