ಪೋಸ್ಟ್‌ಗಳು

ಆಗಸ್ಟ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅದ್ಭುತ ವಿಜಯ

ಇಮೇಜ್
ಸ್ಫೂರ್ತಿ: ರಾಬರ್ಟ್ ಸದೇ ಬರೆದ ಬ್ಯಾಟಲ್ ಆಫ್ ಬ್ಲೆನ್ ಹೈಮ್  ಎಂಬ ಇಂಗ್ಲಿಷ್ ಕವಿತೆ  ಸಿ.ಪಿ. ರವಿಕುಮಾರ್  ಬೇಸಗೆಯ ಸಂಜೆ ನಂಜಪ್ಪ ಕುಳಿತಿದ್ದ  ಮನೆ ಹೊರಗೆ  ಕೆಲಸ ಮುಗಿಸಿ  ಮುಸ್ಸಂಜೆ ಬಿಸಿಲಲ್ಲಿ ಆಡುವ ಮೊಮ್ಮಕ್ಕಳು  ನದಿಯ ಬಳಿ ಹರಡಿರುವ  ಮರಳ ರಾಶಿ ರಾಜಣ್ಣನಿಗೆ ಸಿಕ್ಕಿ ಏನೋ ಗುಂಡಗಿನ  ವಸ್ತು  ತಳ್ಳುತ್ತ ಬರುವುದನು ನೋಡಿ  ಏನಜ್ಜ ಎಂದು ಬೆರಳು ಮಾಡಿದಳು ಲಕ್ಷ್ಮಿ  ಅಣ್ಣ ಬರುತಿದ್ದ ಕಡೆಗೆ ಓಡಿ  ಬೆಳ್ಳಗಿನ ನುಣುಪಾದ ಗೋಲವನು ಮೆಲ್ಲಗೆ  ಎತ್ತಿಕೊಂಡನು ಅಜ್ಜ  ಕೈಯಲ್ಲಿ  ನತದೃಷ್ಟ ಯಾರದೋ ತಲೆಬುರುಡೆ! ಎಂದನು ತಲೆ ಕೊಡವಿ ನಿಟ್ಟುಸಿರು ಚೆಲ್ಲಿ  ತೋಟದಲಿ ಗುದ್ದಲಿಗೆ, ಹೊಲದಲ್ಲಿ ನೇಗಿಲಿಗೆ  ಆಗಾಗ ಸಿಗುವಂಥ ವಸ್ತು  ದೊಡ್ಡಕಾಳಗದಲ್ಲಿ ಸತ್ತವರ ಕುರುಹುಗಳು  ಎಷ್ಟು ಜನ ಸತ್ತರೋ, ಯಾರಿಗೆ ಗೊತ್ತು?   ಕೆರಳಿತು ಮಕ್ಕಳ ಕುತೊಹಲ, ಕಥೆಯನ್ನು  ಹೇಳಲೇಬೇಕೆಂದು ಗೋಗರೆದರು  ಯಾರಲ್ಲಿ ನಡೆಯಿತು ಯುದ್ಧ? ಯಾವಾಗ? ಯಾಕೆ ನಡೆಯಿತು? ನಮಗೆ ಹೇಳಲೇಬೇಕು ತಾಳಿಕೋಟೆಯ ಯುದ್ಧ ಕೇಳಿಲ್ಲದವರಾರು  ನೂರಾರು ವರ್ಷಗಳು  ಕಳೆದಿದ್ದರೂ  ವಿಜಯನಗರ ಅರಸರನು ಸೋಲಿಸಿದರಂತೆ  ದಕ್ಷಿಣದ ದೊಡ್ಡ ಸುಲ್ತಾನರು  ನನ್ನ ಮರಿಮುತ್ತಜ್ಜ ಇದ್ದ ಸ್ಥಳ ಗೊತ್ತೇ? ಬಿಜಾಪುರ ಹತ್ತಿರದ ತಾಳಿಕೋಟೆ  ಬೆಂಕಿ ಬಿದ್ದಿತು ಅವನ ಮನೆಗೆ ಕಾಳಗದಲ್ಲಿ  ಓಡಿ ಬಂದನು ಹೆಂಡತಿ-ಮಕ್ಕಳ ಜೊತೆಗೆ  ಹೊತ್ತು ಉರಿಯಿತು ಊರು, ನೆತ್ತರ

ಡೇರೆ ಹೂಗಳು

ಇಮೇಜ್
ಕವಿತೆ ಓದುವ ಮುನ್ನ ...  ವಿಲಿಯಂ ವರ್ಡ್ಸ್ ವರ್ತ್ ಒಬ್ಬ ನಿಸರ್ಗಪ್ರಿಯ ಕವಿ. ಪ್ರಕೃತಿಯ ದೃಶ್ಯದಲ್ಲಿ ಅನಾದೃಶವಾದ ದರ್ಶನವನ್ನು ಕಂಡುಕೊಳ್ಳುವುದು ರೊಮ್ಯಾಂಟಿಕ್ ಕವಿಗಳ ಪ್ರಥೆ. ಕನ್ನಡದಲ್ಲಿ ರೊಮ್ಯಾಂಟಿಕ್ ಕಾವ್ಯ ಮಾರ್ಗದಲ್ಲಿ ಬರೆದ ಕುವೆಂಪು ಬೆಳ್ಳಕ್ಕಿಗಳ ಸಾಲನ್ನು ನೋಡಿ ಅದರಲ್ಲಿ ದೇವರ ರುಜುವನ್ನು ಕಾಣುತ್ತಾರೆ. ವರ್ಡ್ಸ್ ವರ್ತ್ ಕವಿಯ ಡ್ಯಾಫೊಡಿಲ್ಸ್ ಕವಿತೆಯನ್ನು ಮಕ್ಕಳ ಪಠ್ಯಪುಸ್ತಕದಲ್ಲಿ ಸೇರಿಸುವುದು ಸಾಮಾನ್ಯ. ಡ್ಯಾಫೊಡಿಲ್ಸ್ ಎಂದರೆ ಡೇರೆ ಹೂವಲ್ಲ - ಆದರೆ ಅನುವಾದದ ಅನುಕೂಲಕ್ಕೆ ನಾನು ಅದನ್ನು ಡೇರೆ ಹೂವು ಎಂದು ಭಾವಿಸಿದ್ದೇನೆ. ಈ ಕವಿತೆಯಲ್ಲಿ ಕವಿ ನಿಸರ್ಗದ ಸುಂದರ ಸೃಷ್ಟಿ ನಮಗೆ ಹೇಗೆ ಸಾಂತ್ವನ ನೀಡಬಲ್ಲದು ಎಂಬುದನ್ನು ಕುರಿತಾಗಿ ಬರೆದಿದ್ದಾನೆ. ಸೋಷಿಯಲ್ ಮೀಡಿಯಾ ಬಳಸುವ ಎಲ್ಲರೂ ಆಗಾಗ ತಮಗೆ ಕಂಡ ಯಾವುದಾದರೂ ಪ್ರಾಣಿ, ಹೂವು, ಬೆಟ್ಟ, ಗುಡ್ಡ ಮೊದಲಾದ ನೈಸರ್ಗಿಕ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ವರ್ಡ್ಸ್ ವರ್ತ್ ಕಾಲದಲ್ಲಿ ಹೀಗೆ ಚಿತ್ರಗಳನ್ನು ತೆಗೆಯುವುದಾಗಲಿ, ಬೇರೆಯವರೊಂದಿಗೆ ಹಂಚಿಕೊಳ್ಳುವುದಾಗಲಿ ಸಾಧ್ಯವಿರಲಿಲ್ಲ! ತಾನು ಕಂಡ ಸುಂದರ ದೃಶ್ಯವನ್ನು ತನ್ನ ನೆನಪಿನ ಕೋಶದಲ್ಲಿ ಹಿಡಿದಿಟ್ಟುಕೊಳ್ಳುವುದು ಮಾತ್ರ ಸಾಧ್ಯವಾಗಿತ್ತು. ಏಕಾಂತದಲ್ಲಿ ಖಾಲಿತನವನ್ನು ಅನುಭವಿಸುವಾಗ ಇಂಥ ದೃಶ್ಯಗಳೇ ನೆರವಿಗೆ ಬರುತ್ತವೆ ಎಂದು ವರ್ಡ್ಸ್ ವರ್ತ್ ಹೇಳುತ್ತಾನೆ. ಇದೇ ವರ್ಡ್ಸ್ ವರ್ತ್ "ದ ವರ್ಲ

ನಾನು ತುಳಿಯದ ಹಾದಿ

ಇಮೇಜ್
ಮೂಲ ಇಂಗ್ಲಿಷ್ ಕವಿತೆ: ರಾಬರ್ಟ್ ಫ್ರಾಸ್ಟ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  (ಕವಿತೆ ಓದುವ ಮುನ್ನ ಒಂದು ಪೀಠಿಕೆ: ನಮ್ಮ ಮುಂದೆ ಎಷ್ಟೋ ಸಂದರ್ಭಗಳಲ್ಲಿ ಕವಲು ಹಾದಿಗಳು ಎದುರಾಗುತ್ತವೆ.  ಎರಡೂ ಕವಲುಗಳಲ್ಲಿ ಒಮ್ಮೆಲೇ ಸಂಚರಿಸಲು ಸಾಧ್ಯವೇ? ಇನ್ನೂ ನಮ್ಮನ್ನು ನಾವೇ ಕ್ಲೋನ್ ಮಾಡಿಕೊಳ್ಳುವ ತಂತ್ರಜ್ಞಾನ ಸಿದ್ಧವಾಗಿಲ್ಲ! ನಿರ್ವಾಹವಿಲ್ಲದೆ ಯಾವುದಾದರೊಂದು ಹಾದಿಯನ್ನು ಹಿಡಿಯಲೇ ಬೇಕು. ಹಾಗೆ ಹಿಡಿದ ಕವಲು ದಾರಿ ನಮಗೆ ಸಿದ್ಧಿಸದೆ ನಾವು ಬ್ಯಾಕ್ ಟ್ರ್ಯಾಕ್ ಮಾಡಬೇಕಾಗಬಹುದು. ಆಗ ಮತ್ತೆ ಅದೇ ಕವಲಿಗೆ ಹಿಂದಿರುಗಬಹುದು - ಇದರ ಪ್ರಾಬಬಿಲಿಟಿ ಬಹಳ ಕಡಿಮೆ! ನಾವು ಏನು ಆಗುತ್ತೇವೊ  ಅದು ನಮ್ಮ ನಿರ್ಧಾರಗಳ ಮೇಲೆ ಅವಲಂಬಿಸುತ್ತದೆ. ರಾಬರ್ಟ್ ಫ್ರಾಸ್ಟ್ ಕವಿ ತನ್ನ ಜೀವನದಲ್ಲಿ ಇಂಥ ಕವಲನ್ನು ಎದುರಿಸಿರಬಹುದು.  ಆಗ ಅವನು ನಿರ್ಧಾರ ಕೈಗೊಳ್ಳಲು ಯಾವ ಮಾನದಂಡವನ್ನು ಉಪಯೋಗಿಸಿದ? ಬೇರೆಯವರು ಹೆಚ್ಚಾಗಿ ಬಳಸದ ಹಾದಿಯಲ್ಲಿ ಹೋಗವುದೇ ಒಳ್ಳೆಯದೆಂಬ ಹ್ಯೂರಿಸ್ಟಿಕ್ ಬಳಸಿ ನಿರ್ಧಾರವನ್ನು ಕೈಗೊಂಡೆ ಎಂದು ಕವಿ ನಮಗೆ ಹೇಳುತ್ತಾನೆ. ಈ ನಿರ್ಧಾರ ತನ್ನ ಜೀವನಪಥದ ವಿನ್ಯಾಸವನ್ನು ಬದಲಿಸಿತು ಎಂಬ ನಿರ್ಧಾರಕ್ಕೆ ಕವಿ ಬರುತ್ತಾನೆ.  ನೀವೂ ನಿಮ್ಮ ನಿರ್ಧಾರಗಳನ್ನು ಕುರಿತು ಆತ್ಮಾವಲೋಕನ ಮಾಡಿಕೊಳ್ಳಿ!  ರಾಬರ್ಟ್ ಫ್ರಾಸ್ಟ್ ಹೇಳುವುದನ್ನು ನೀವು ಒಪ್ಪುತ್ತೀರಾ?) ಕವಲಾಗಿದೆ ಕಾಡಿನಲ್ಲಿ ನಾನು ನಡೆದು ಬಂದ ದಾರಿ  ಬಯಸಿದರೂ

ನಿನ್ನ ಚರಣದ ಧೂಳಿ ನನ್ನ ಮಸ್ತಕದ ಮೇಲಿರಲಿ

ಮೂಲ: ರಬೀಂದ್ರನಾಥ ಟ್ಯಾಗೋರ್  ಕನ್ನಡಕ್ಕೆ : ಸಿ.ಪಿ. ರವಿಕುಮಾರ್  ನಿನ್ನ ಚರಣದ ಧೂಳಿ ನನ್ನ ಮಸ್ತಕದ ಮೇಲಿರಲಿ ಕೊಚ್ಚಿ ಹೋಗಲಿ ನನ್ನ ಅಹಂಕಾರ ಕಣ್ಣೀರಿನಲ್ಲಿ ಇಲ್ಲಸಲ್ಲದ ಗೌರವವ ರಕ್ಷಿಸುವ ಭರದಲ್ಲಿ ನನ್ನ ಅಪಮಾನಕ್ಕೆ ನಾನೇ ಕಾರಣನಾದೆ ನನ್ನ ವಿಶ್ವದ ಸುತ್ತ ನಾನೇ ಹಾಕುತ್ತ ಪ್ರದಕ್ಷಿಣೆ ಪ್ರತಿಕ್ಷಣವೂ  ವ್ಯಾಕುಲತಾ-ಚಾರಣನಾದೆ ಬರಿಯ ಕರ್ತನು ನಾನು, ನನ್ನ ಕೆಲಸಗಳಲ್ಲಿ ನನ್ನ ಹೆಸರಿನ ಮೇಲ್ಮೆ ಕಾಣದಿರಲಿ ನನ್ನ ಜೀವನದಲ್ಲಿ ನನ್ನ ಕೆಲಸಗಳಲ್ಲಿ ಓ ಪೂರ್ಣ! ನಿನ್ನ ಇಚ್ಛಾಪುಷ್ಪ ಹಣ್ಣಾಗಲಿ ಯಾಚಿಸುವೆನು ದೀನನಾಗಿ ನಿನ್ನ ಚರಮ ಶಾಂತಿಯನ್ನು ಯಾಚಿಸುವೆನು ಪ್ರಾಣದಲ್ಲಿ ನಿನ್ನ ಪರಮ ಕಾಂತಿಯನ್ನು ಜಲಬಿಂದು ನಾನಾಗಿ ನಿನ್ನ ಹೃದಯಕಮಲದಲ್ಲಿ ಕೊಚ್ಚಿ ಹೋಗಲಿ ನನ್ನ ಅಹಂಕಾರ ಕಣ್ಣೀರಿನಲ್ಲಿ [ಮೂಲ: ಗೀತಾಂಜಲಿ] Kannada Translation by C.P. Ravikumar of a poem from Geetanjali by Rabindranath Tagore

ಇಲ್ಲವೋ ಎಲ್ಲಿ ಮನದೊಳಗೆ ಭೀತಿ

ಮೂಲ ಕವಿತೆ: ರಬೀಂದ್ರನಾಥ ಟ್ಯಾಗೋರ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  ಇಲ್ಲವೋ ಎಲ್ಲಿ  ಮನದೊಳಗೆ ಭೀತಿ, ಎಲ್ಲಿ ನಡೆಯಬಲ್ಲೆವೋ ತಲೆಯೆತ್ತಿ,  ಜ್ಞಾನವಾಹಿನಿ  ಎಲ್ಲಿ  ಹರಿವುದೋ ಮುಕ್ತ - ಮನೆಮಠಗಳ ಕಿರುಗೋಡೆಗಳಿಂದ  ಎಲ್ಲಿ   ವಿಶ್ವ   ಉಳಿದುಕೊಂಡಿದೆಯೋ ಇನ್ನೂ  ಆಗದೆ  ವಿಛಿದ್ರ   -  ಎಲ್ಲಿ   ಆಡುವ ಮಾತು ಬರುವುದೋ ಸತ್ಯದ ಆಳದಿಂದ, ಎಲ್ಲಿ     ಪೂರ್ಣತೆಗಾಗಿ  ಕೈಚಾಚಿ   ಶ್ರಮಿಸುವುದೋ  ಅವಿರತ ಪ್ರಯತ್ನ, ಎಲ್ಲಿ ಅಭ್ಯಾಸಬಲವೆಂಬ ಮರಳುಗಾಡಿನಲ್ಲಿ  ಲುಪ್ತವಾಗಿಲ್ಲವೋ  ವಿವೇಕದ ತಿಳಿಗೊಳ, ಕಲ್ಪನಾ-ಕೃತಿಗಳ ಬೆಳೆಯುತ್ತಲೇ ಇರುವ ವೈಶಾಲ್ಯದತ್ತ  ಎಲ್ಲಿ ಮುನ್ನಡೆವುದೋ  ನಿನ್ನ ಸಾರಥ್ಯದಲ್ಲಿ    ಮನೋರಥ, ಅಂಥ  ಸ್ವತಂತ್ರ ಸ್ವರ್ಗದಲ್ಲಿ  ಹೇ ಪ್ರಭೂ ಕಣ್ತೆರೆಯಲಿ ನನ್ನ ದೇಶ  Kannada translation by C.P. Ravikumar of "Where the mind is without fear" by Rabindranath Tagore 

ಗಾಂಧಿ

ಮೂಲ ಹಿಂದಿ ರಚನೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ದೇಶದಲ್ಲಿ ಎಲ್ಲೇ ಹೋದರೂ ಕಿವಿಗೆ ಕೇಳುತ್ತದೆ ಅದೇ ಆಹ್ವಾನ: ಜಡತ್ವ ಹೊಡೆದೋಡಿಸಲು  ಸೃಷ್ಟಿಸು ಯಾವುದಾದರೂ ಭೂಕಂಪ!  ಕವಿದಿರುವ ಕತ್ತಲಿನಲ್ಲಿ  ನಿನ್ನ ದೊಂದಿ ಮತ್ತೆ ಹಚ್ಚು! ಇಡೀ ಬೆಟ್ಟವನ್ನು ಕೈಯಲ್ಲಿ ಹೊತ್ತು ಹನುಮಂತನ ಉಪಾದಿಯಲ್ಲಿ ಲಂಘಿಸು! ಬಿರುಗಾಳಿ ಎಬ್ಬಿಸು, ಕವಿ! ಗರ್ಜಿಸು! ಗರ್ಜಿಸು! ಗರ್ಜಿಸು! ನಾನು ತಣ್ಣಗೆ ಕುಳಿತು ಯೋಚಿಸುತ್ತೇನೆ - ನಾನೆಂದು ಗರ್ಜಿಸಿದೆ? ನನ್ನ ಗರ್ಜನೆಯೆಂದು ಜನರು ಭ್ರಮಿಸಿದರಲ್ಲ ಅದು ನಿಜಕ್ಕೂ ಗಾಂಧಿಯ ಗರ್ಜನೆಯಾಗಿತ್ತು ನಮಗೆ ಜನ್ಮ ಕೊಟ್ಟರಲ್ಲ ಆ ಗಾಂಧಿಯ ಗರ್ಜನೆ. ಆಗಲೂ ನಾವು ನೋಡಿದ್ದು ಬಿರುಗಾಳಿಯನ್ನು, ಗಾಂಧಿಯನ್ನಲ್ಲ ಬಿರುಗಾಳಿ ಮತ್ತು ಗರ್ಜನೆಗಳ ನೇಪಥ್ಯದಲ್ಲಿ  ಅವರು ಇರುತ್ತಿದ್ದರು. ನಿಜವೆಂದರೆ ತಮ್ಮ ಲೀಲೆಯಲ್ಲಿ ಬಿರುಗಾಳಿ ಗರ್ಜನೆಗಳು ಸೇರಿಕೊಳ್ಳುವುದನ್ನು ಕಂಡು ಅವರು ನಗುತ್ತಿದ್ದರು. ಗರ್ಜನೆ ಹೊರಡುವುದು ದೊಡ್ಡ ಧ್ವನಿಯಿಂದಲ್ಲ ಮೆಲುದನಿಯಿಂದ ಒಂಟಿ ಉರಿಯುವ ಮೋಂಬತ್ತಿಯಂಥ ಧ್ವನಿ ಹದ್ದಿನಂತಲ್ಲ ಪಾರಿವಾಳದ ನಡೆ ನಡೆಯುವ ಧ್ವನಿ ಗಾಂಧಿ ಹದ್ದನ್ನೂ ಮೀರಿಸಿದ ಹದ್ದಾಗಿದ್ದರು ಏಕೆಂದರೆ ಅವರು ನೀರವತೆಯ ಸದ್ದಾಗಿದ್ದರು --- [ಈ ಕವಿತೆಯನ್ನು ಬರೆದ ರಾಮಧಾರಿ ಸಿಂಹ್ "ದಿನಕರ್" ಸ್ವಾತಂತ್ರ್ಯ ಸಂಗ್ರಾಮದಲ್ಲಿ

ಬೇಕಾದಷ್ಟು ಪಿನ್ನು

ಬೇಕಾದಷ್ಟು ಪಿನ್ನು  ಮೂಲ ಹಿಂದಿ ಕವಿತೆ: ಕುಂವರ್ ಬೇಚೈನ್ ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  ಬದುಕಿನ ಅರ್ಥ  ಸಾಯುವುದೆಂದೇ ಆಗಿಬಿಟ್ಟಿದೆ ಹಾಗೂ  ಬದುಕಲು ದಿನಗಳು  ಬೇಕಾದಷ್ಟಿವೆ ಇನ್ನೂ  ಕಾಲದ ಮೇಜಿನ ಮೇಲೆ  ಸೂಜಿ ಚುಚ್ಚಲು ಇಟ್ಟ  ದಿಂಬಿನಂತಿದೆ ಬದುಕು;  ಸ್ನೇಹದ ಅರ್ಥ  ಚುಚ್ಚುವುದೆಂದೇ ಆಗಿಬಿಟ್ಟಿದೆ  ಹಾಗೂ  ಚುಚ್ಚಲು ಇವೆ  ಬೇಕಾದಷ್ಟು  ಪಿನ್ನು ಕೆಳ ಮಧ್ಯಮ ವರ್ಗದ   ಅಲ್ಪ ಮಾಸಿಕ ವೇತನದಂತಿದೆ ಬದುಕು;  ವೇತನದ ಅರ್ಥ  ತೀರಿಸುವುದೆಂದೇ ಆಗಿಬಿಟ್ಟಿದೆ ಹಾಗೂ  ತೀರದಷ್ಟಿವೆ ಎಣಿಸಿದರೆ ಋಣಗಳನ್ನು  Kannada Translation by C.P. Ravikumar of a Hindi Poem by Kunwar Bechain

ಮೊಬೈಲಿಣಿ!

ಇಮೇಜ್
ಹರಟೆ: ಸಿ.ಪಿ. ರವಿಕುಮಾರ್  ಇಂಥವರನ್ನು ನೀವು ಖಂಡಿತಾ ನೋಡಿರುತ್ತೀರ. ಬಸ್ ನಲ್ಲಿ ಪ್ರಯಾಣ ಮಾಡುವಾಗ ನಿಮ್ಮ ಪಕ್ಕದಲ್ಲಿ ಕುಳಿತು ಕೊಳ್ಳುತ್ತಾರೆ. ಟಿಕೆಟ್ ಕೊಳ್ಳಲು ಹಣ ಹೊರತೆಗೆಯುವ ಮುಂಚೆ ಮೊಬೈಲ್ ಫೋನ್ ಕೈಗೆತ್ತಿಕೊಳ್ಳುತ್ತಾರೆ.  ಚಕಚಕ ಸ್ಪೀಡ್ ಡಯಲ್ ಮಾಡಿ ಸುಖಾಸೀನರಾಗುತ್ತಾರೆ. ಮುಖದ ತುಂಬಾ ನಗೆ. ತಮ್ಮ ಸ್ನೇಹಿತನೋ ಸ್ನೇಹಿತೆಯೋ ಎದುರಿಗೇ ಇರುವಂತೆ ಕಲ್ಪನೆ.  ಅಕ್ಕಪಕ್ಕ ಇರುವವರ ಪರಿವೆ ಇಲ್ಲ. ಸಂಭಾಷಣೆ ಪ್ರಾರಂಭವಾದರೆ ಮುಗಿಯುವ ಸೂಚನೆಯೇ ತೋರುವುದಿಲ್ಲ.  ಇವರ ಸಂಭಾಷಣೆಗೆ ಇಂಥದೇ ಒಂದು ವಿಷಯ ಬೇಕು ಎಂದೂ ಇಲ್ಲ. ಒಮ್ಮೆ ನನ್ನ ಪಕ್ಕದಲ್ಲೇ ಕುಳಿತಿದ್ದ ಒಬ್ಬ ಮೊಬೈಲಿಣಿ ತಾನು ತನ್ನ ಮದುವೆಗೆ ಕೊಂಡ ಸೀರೆಗಳನ್ನು ಕುರಿತು ಇಡೀ ಪ್ರಯಾಣದ ಉದ್ದಕ್ಕೂ ಮಾತಾಡಿದಳು. "ಅಲ್ಲ, ಆ ಕಲರ್ ಅಲ್ಲ, ಒಂದು ಥರಾ ಹನಿ ಕಲರ್." "..." "ಉಹೂಂ. ಅದು ತೀರಾ ಡಾರ್ಕ್ ಆಯಿತು. ಇನ್ನೂ ಲೈಟಾಗಿದೆ. ಗೊತ್ತಾಯಿತಾ?" "..." ಬಣ್ಣದ ವಿವರವನ್ನೂ ಮಾತಿನ ಮಾಧ್ಯಮದಲ್ಲಿ ಬಿತ್ತರಿಸಬಹುದು ಎಂಬುದು ನನಗೆ ಆಗಲೇ ಗೊತ್ತಾಗಿದ್ದು. ಯಾವ ಕವಿಯೂ ಲೇಖಕನೂ  ಇಂಥದ್ದನ್ನು ಸಾಧಿಸಿರಲಾರ. ಮುಂದೆ ಸೀರೆಯ ಮೇಲಿರುವ ಜರಿ ಅಲಂಕಾರಗಳ ವಿವರಣೆ ನಡೆಯಿತು. ಮದುವೆಗೆ ಸುಮಾರು ಹತ್ತು ಸೀರೆಗಳನ್ನಾದರೂ ಆಕೆ ಖರೀದಿ ಮಾಡಿದ್ದಳೆಂದು ತೋರುತ್ತದೆ. ಮೊದಮೊದಲು ನಾನು ನನ್ನ ಕೈಯಲ್ಲಿದ್ದ ಪುಸ್ತಕವನ್ನು ಓದಲು ಪ್

ನಿಶಾ ಭಿಕಾರಿಣಿ

ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  ಒಂಟಿ ಬರುವಳು ನಿತ್ಯ ನಿಶಾ ಭಿಕಾರಿಣಿ ಪಾಪ! ಒಬ್ಬಂಟಿಯಾಗಿ ತೆರಳುವಳು ಚಳಿಗೆ ನಡುಗುವ ಕಪ್ಪು ಕೈಗಳಲಿ ಹಿಡಿದು ಹೊಳೆವ ತಿಂಗಳ ಬಟ್ಟಲು ಲಕ್ಷ ನಕ್ಷತ್ರಗಳ ವಜ್ರ ವೈಡೂರ್ಯ ತುಂಬಿರುವ ಕಪ್ಪು ಸೆರಗು ಇಷ್ಟೆಲ್ಲ ಇದ್ದರೂ ಏನು ಬೇಡುತ್ತಿಹಳು, ಏನಿವಳ  ಕಷ್ಟ  ಕೊರಗು? ಜೋಗಿಣಿಯ ಹಾಗೆ ಕಾಣುವಳು ಯಾರೋ, ಕಣ್ಣಲ್ಲಿ ಅರೆ ನಿದ್ರೆ ಎಚ್ಚರ ಗಲ್ಲಿ ಗಲ್ಲಿಗಳಲ್ಲೂ ತಿರುಗುವಳು ಒಬ್ಬಂಟಿ, ಹೊದ್ದು ಕಪ್ಪಾದ ಹಚ್ಚಡ ಬೇಡುತ್ತಾ ನಿತ್ಯ ಬರುವಳು , ಪಾಪ,  ಒಳಗಿದೆಯೇ ನೋಡಿ  ಪುಟ್ಟ  ಮರಿ ಹಗಲು ಹಾಕಿ ಬಿಡಿ ಇವಳ ಮಡಿಲಿಗೆ, ಸುಮ್ಮನೆ ತೊಂದರೆ ಕೊಡುವುದು ಮಲಗಲು Kannada translation by C.P. Ravikumar of a Hindi Poem by Gulzar ಈ ಕವಿತೆಯನ್ನು ಒಂದು ಹಿಂದಿ ಚಿತ್ರದಲ್ಲಿ ಜೋಗುಳದ ರೊಪದಲ್ಲಿ ಬಳಸಿಕೊಳ್ಳಲಾಗಿದೆ. ಲತಾ ಮಂಗೇಶ್ಕರ್ ಅಧ್ಭುತವಾಗಿ ಹಾಡಿದ್ದಾರೆ. ರಾತ್ರಿಯನ್ನು ಒಬ್ಬ ಭಿಕಾರಿಣಿಗೆ ಹೋಲಿಸಿರುವ  ಕವಿಯ ಕಲ್ಪನೆ ಅನನ್ಯವಾದುದು. ಚಂದ್ರ ಭಿಕಾರಿಣಿಯ ಬಟ್ಟಲಿನಂತೆ ಕವಿಗೆ ಗೋಚರವಾಗುತ್ತದೆ. ಲಕ್ಷಾಂತರ ವಜ್ರಗಳಿದ್ದರೂ ಬೇಡುವ ಸ್ಥಿತಿಯಲ್ಲಿರುವ ನಿಶಾ ಭಿಕಾರಿಣಿಯ ಬಗ್ಗೆ ನಮಗೆ ಅನುಕಂಪ ಮೂಡುತ್ತದೆ.  ಎಷ್ಟೋ ಬಂಧುಗಳಿದ್ದರೂ ಇದ್ದರೂ ಒಬ್ಬಂಟಿಯಾಗಿ ಬದುಕಬೇಕಾದ ಎಷ್ಟು ಜನರಿಲ್ಲ? ಜೋಗುಳದ ಕೊನೆಯಲ್ಲಿ ಕವಿಯ ತುಂಟತನ ಕಾಣಿಸಿಕೊಂಡು ಕವಿತೆಗೆ ಒಂ