ಪೋಸ್ಟ್‌ಗಳು

2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಮೀರ್ ಖುಸ್ರೋ ಅವರ ಒಗಟುಗಳು - 2

ಇಮೇಜ್
ಮೂಲ - ಅಮೀರ್ ಖುಸ್ರೋ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಕಪ್ಪು ಮೈಬಣ್ಣ, ಹಲ್ಲುಗಳು ಹಲವು, ಬಳುಕುವಳು ತೆಳ್ಳನೆಯ ನಾರಿ | ಎರಡೂ ಕೈಗಳಿಂದ ಎಳೆಯುತ್ತ ಖುಸ್ರೋ ಬಾ ಎಂದು ಕರೆವ ವೈಯ್ಯಾರಿ  || (ಒಗಟು) ಒಬ್ಬಳು ನಾರಿಗೆ ಇಬ್ಬರು ಮಕ್ಕಳು, ಒಬ್ಬನು ಇನ್ನೊಬ್ಬನ ತದ್ರೂಪು | ಚಲಿಸುವನೊಬ್ಬ, ನಿಂತವನೊಬ್ಬ, ಜೊತೆಗಿರುವರು ಆದರೂ ಇಬ್ಬರೂ || (ಒಗಟು) ನಿಂತಿರುವಳು ಮೂಲೆಯಲ್ಲಿ ಒಂಟಿಕಾಲಿನ ಸುಂದರಿ! ಯಾರು ಏನೆಂದರೆ ನಿಂತಿದ್ದಾಳೆ ಮುದುರಿ! ಒಮ್ಮೆಲೇ ಬದಲಾಯಿತು ಏಕವಳ ಭಾವ? ಎಂಟು ಕೈ ಎತ್ತಿ ಮೇಲೆ ನಗುವಳಲ್ಲ, ಭಾವ! ಯಾರಿವಳು ಹೇಳು ಯಾರಿವಳು ಚೆಲುವೆ? ಎಲ್ಲರಿಗೂ ಬೇಕಾದ ಅರಳು ಮಲ್ಲಿಗೆ ಹೂವೆ! (ಒಗಟು) ಬಾಲಕನಾಗಿದ್ದಾಗ ಎಲ್ಲರ ಕಣ್ಣ ಬೆಳಕಾಗಿದ್ದ , ದೊಡ್ಡವನಾದಾಗ ಯಾವುದಕ್ಕೂ ನಾಲಾಯಕ್ಕು ಬಿಡಿಸು ಖುಸ್ರೋ ಕೇಳುವ ಈ ಒಗಟು ಇಲ್ಲದಿದ್ದರೆ ಎದ್ದು ಊರು ಬಿಡು ಹೊರಟು (ಒಗಟು) ಹೀಗೊಬ್ಬ ಮಾಂತ್ರಿಕನು ಮಾಡಿದನು ಜಾದೂ, ಗಿಳಿಯೊಂದು ಹಾಕಿದನು ಪಂಜರದ ಬಾಯ್ ತೆಗೆದು ಹಸಿರಾಗಿ ಹೋದದ್ದು ಕೆಂಪಾಗಿ ಬಂತು, ರಹಸ್ಯವೇನಿದು ತರಬಲ್ಲೆಯಾ ಅಗೆದು? (ಒಗಟು) ಇಪ್ಪತ್ತು ಜನರ ತಲೆ ಕಡಿದು ಹಾಕಿದರೂ ಕೊಲೆಯೊಂದೂ ಆಗಲಿಲ್ಲ, ಬೀಳಲಿಲ್ಲ ನೆತ್ತರು (ಒಗಟು) ನಲ್ಲನೊಂದಿಗೆ ನಾನು ಹೂಡುವೆನು ಪಂಥ, ಪ್ರೆಮದಾಟವದು ಅಲ್ಲ ಅಂತಿಂಥ | ಗೆದ್ದರೆ ಅವರು ನನ್ನವರು ಮತ್ತು ಸೋತರೆ ನಾನು ಅವರ ಸ್ವತ್ತು ||

ಹತ್ತು ಹನಿಗವನಗಳು

ಇಮೇಜ್
(1) ತೂತಾಗಿ ಸೋರುತ್ತಿದೆಯೇ ನಿನ್ನ ಅಂಬರೆಲ್ಲಾ? ತೂತಾಗಿ ಸೋರುತ್ತಿದೆಯಲ್ಲ ಅಂಬರವೆಲ್ಲಾ! (2) ಪಟಾಕಿ ಹಚ್ಚುವುದು ನಿಷೇಧವಂತೆ ದೆಹಲಿಯಲ್ಲಿ ಕೇಳಿ ನಿಷೇಧಿಸುವರೇ ಉತ್ತರ ಕೊರಿಯಾದಲ್ಲಿ? (3) ಒಬ್ಬನಿಗೆ ಇದ್ದರಂತೆ ಇಬ್ಬರು ಹೆಂಡಿರು ಒಬ್ಬಳ ತಲೆಗೂದಲು ಕಪ್ಪು ಇನ್ನೊಬ್ಬಳದ್ದು ಬಿಳುಪು ಅವಳು ಕಿತ್ತಿದಳಂತೆ ಇವನ ನೆರೆಗೂದಲು ಇವಳು ಕಿತ್ತಿದಳು ಕಪ್ಪು ಎಳೆಗೂದಲು. ಪಟಾಕಿ ಹಚ್ಚಲೇಬೇಕು. ಮಾಂಸ ತಿನ್ನಲೇಬೇಕು. (4) ಶಾಸಕರಿಗೂ ಅನ್ನಭಾಗ್ಯವೇ ಎಂದು ಹುಬ್ಬೇರಿಸಿ ಜನರ ಹಾಹಾಕಾರ ಶಾಸಕರನ್ನು ಏನೂ ಅನ್ನದ ಭಾಗ್ಯವೇ ಎಂದು ಪಬ್ಬಿನಲ್ಲೇರಿಸಿದ ಪತ್ರಿಕಾ ವರದಿಗಾರ (5) ತೋಡಿ ನಿಮ್ಮ ಮನೆಯಲ್ಲಿ ಮಳೆನೀರಿನ ಇಂಗುಗುಂಡಿ ಎಂಗೆ ಅಂದ್ರೆ ರೋಡಲ್ಲಿ ನೋಡಿರಿ  ಎಲ್ಲಾಕಡೆ ನಿಮಗೆ ಸಿಕ್ಕುವುದು ಮಾದರಿ ತೋಡಬಹುದು ಕಣ್ರೀ ಇಂಗೂ ಗುಂಡಿ! (6) ಎಲ್ಲರಿಗಿಂತಲೂ ಜನಪ್ರಿಯ ಐಯ್ಯಂಗಾರ್! ಗೊತ್ತಾ ನಿಮಗೆ ಯಾಕೆ ರೀ? ಎಲ್ಲಿ ನೋಡಿದರೂ ಬೋರ್ಡು ಕಾಣಿಸೋದಿಲ್ಲವಾ? ಐಯ್ಯಂಗಾರ್ ಬೇಕರಿ! (7) ನಡೆಯಲು ಕಲಿತ ಮೇಲೆ ನಮ್ ಬಿಂದು ಹೆಸರು ಬದಿಲಿಸಿದ್ದೇವೆ "ರೇಖಾ" ಎಂದು! ದುಡುದುಡು ಓಡಿ ಹಾಕುತ್ತಾ ಕೇಕೆ ಬರೆಯುವಳು ಅವ್ಯಕ್ತ ವಕ್ರರೇಖೆ! (8) ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೇ ನಾಲ್ಕು ಹನಿಯ ಚೆಲ್ಲಿ ಎಂದೆಲ್ಲಾ ಹಾಡಬಾರದಾಗಿತ್ತು ಲೌಡ್ ಸ್ಪೀಕರ್ನಲ್ಲಿ ಅಥವಾ ಕಟ್ಟಬಾರದಾಗಿತ್ತು ಸಿಟಿಯನ್ನು ಕೆರೆಯಲ್ಲಿ

ಶ್ರೀ ರಸ್ತಾ ಸ್ತೋತ್ರಂ

ಇಮೇಜ್
( ಮಳೆಗಾಲದಲ್ಲಿ ಬೆಂಗಳೂರಿನ ರಸ್ತೆಗಳ ಮೇಲೆ ಓಡಾಡುವ ಅನುಭವದಿಂದ ಪ್ರೇರಿತ) ಎಲೈ ರಸ್ತೆ, ನಾದುರಸ್ತೆ, ನಗರ ಜೀವನಾವ್ಯವಸ್ಥೆ, ನಮೋಸ್ತುತೆ! ಪಾಟ್ ಗುಂಡಿ ವಿರಾಜಿತೆ, ವಾಯುವಜ್ರ ಸಂಪೂಜಿತೆ, ನಮೋಸ್ತುತೆ! ಸಿಮೆಂಟ್ ಟಾರ್‌ ವಂಚಿತೆ ನಿತ್ಯವಾರುಣ ಸಿಂ'ಚಿತೆ, ನಮೋಸ್ತುತೆ! ಹಂಪುಶೈಲವಿಹಾರಿಣಿ, ಅಮೃತಾಂಜನದಾಯಿನಿ, ನಮೋಸ್ತುತೆ! ಕಾಳಮುಖಿಶ್ರೀಭೈರವಿ ಕೈಗಳಂ ಮುಗಿವ ರವಿ, ಕಾಪಾಡು ಶ್ರೀಮಾತೆ, ನಮೋಸ್ತುತೆ! ಸೇಲಿಹುದು ಮಾಲಿನಲಿ, ತಲುಪಿಸೈ ವೇಗದಲಿ, ನೆರೆನಂಬಿ ಬಂದಿಹೆನು, ನಮೋಸ್ತುತೆ! ಇತಿ ಶ್ರೀ ರಸ್ತಾ ಸ್ತೋತ್ರಂ ಸಂಪೂರ್ಣಂ ಸಿ. ಪಿ. ರವಿಕುಮಾರ್

ಉಪವನ

ಇಮೇಜ್
ಮುಳ್ಳಿನಲ್ಲಿ ಎಂದೂ ಸಿಲುಕಿಲ್ಲವೋ ಯಾರ ಸೆರಗು ಉಪವನದ ರಹಸ್ಯವನ್ನು ಅವರೇನು ಬಲ್ಲರು? ಏಕಾಏಕಿ ನೀನು ಬಂದು ಬಿಡಬೇಡ ನನ್ನೆದುರು ನಿಂತು ಹೋದೀತು ಒಮ್ಮೆಲೇ ನನ್ನ ಉಸಿರು ಹೂವು ಹಾಗಿರಲಿ ಮುಳ್ಳುಗಳನ್ನೇ ಆಯ್ದುಕೊಂಡರೂ ತುಂಬಿಲ್ಲ ಇನ್ನೂ ಹೂವಾಡಿಗನ ಸೆರಗು ಹಕ್ಕಿಗೂಡಿಗೆ ಅದೇಕಷ್ಟು ಅಲಂಕಾರ ಬಿದ್ದುಹೋದರೆ ರೆಂಬೆ ತಾಳದೇ ಭಾರ ಉಪವನದ ಚೆಲುವನ್ನು ಬೆಳಗಿತಲ್ಲ ಕೋಲ್ಮಿಂಚು ಬಂಧುವೋ ಶತ್ರುವೋ ಏನು ಹೇಳುವುದು? ಹೂವುಗಳಿಗಿಂತ ಮುಳ್ಳುಗಳೇ ಎಷ್ಟೋ ಮೇಲು ಮುಳ್ಳು ಉಪವನಕ್ಕಿಟ್ಟ ದೃಷ್ಟಿಬೊಟ್ಟು ಮೂಲ: ಫನಾ ನಿಜಾಮಿ ಕಾನ್ಪುರಿ ಅನುವಾದ: ಸಿ. ಪಿ. ರವಿಕುಮಾರ್

ರಕ್ತಸಂಬಂಧ (ಒಂದು ಗಜಲ್)

ಇಮೇಜ್
ಸುರಿದರೂ ನಾನು ನಿನ್ನ ಕಿವಿಯೊಳಗೇ ನಾದಸುಧೆ ಸರಿ ಸರಿ ಎಂದು ಕೈ ಝಾಡಿಸುವೆ ಓ ನಿಷ್ಕರುಣಿ! ನಿನ್ನ ಸಭೆಯೊಳಗೆ ನನಗೆ ಕೊಡದಿದ್ದರೂ ಆಹ್ವಾನ ನನ್ನ ಅಭಿಮಾನ ಮರೆತು ಹಾಡುವೆ ನಾ ತೆರೆದು ದನಿ ಅತಿಥಿಗಳ ಸ್ವಾಗತಕ್ಕೆ ಉರಿಸುವರು ಅಗರುಹೊಗೆ ನಿನ್ನ ಹೊಗೆಯಿಂದೇಕೋ ಸುರಿಯುತ್ತಿದೆ ಕಣ್ಣಲ್ಲಿ ಹನಿ ನೆತ್ತರಿನ ಬಂಧು ನಾನು, ಬೇಡೆನು ನಾ ಬೇರೇನೂ ತಟ್ಟಿ ಕೈಯೊಳು ಹೊಸಕಿ ಹಾಕುವೆಯಾ ಹೃದಯ-ದಣಿ! ಸಿ.ಪಿ. ರವಿಕುಮಾರ್

ಅಮೀರ್ ಖುಸ್ರೋನ ಒಗಟುಗಳು

ಇಮೇಜ್
ಮೂಲ - ಅಮೀರ್ ಖುಸ್ರೋ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ रात समय वह मेरे आवे। भोर भये वह घर उठि जावे॥ यह अचरज है सबसे न्यारा। ऐ सखि साजन? ना सखि तारा॥ ಸರಿರಾತ್ರಿ ನನ್ನ ಮನೆಗೆ ಬರುತಾರೆ | ಬೆಳಗಾಗ ಮೇಲೆದ್ದು ಹೊರಟುಬಿಡುತಾರೆ || ಜಾಣರಾದವರು ಈ ರಹಸ್ಯ ಬಿಡಿಸುತಾರೆ  | ಗೆಳೆಯನೇನೇ ಸಖೀ? ಅಲ್ಲವೇ, ತಾರೆ|| नंगे पाँव फिरन नहिं देत। पाँव से मिट्टी लगन नहिं देत॥ पाँव का चूमा लेत निपूता। ऐ सखि साजन? ना सखि जूता॥ ಬರಿಗಾಲಿನಲ್ಲಿ ನಡೆಯಲು ಬಿಡುವುದಿಲ್ಲ | ಮಣ್ಣು ಕಾಲಿಗೆ ಹತ್ತಲು ಬಿಡುವುದಿಲ್ಲ || ಮಾತುಮಾತಿಗೆ ಪಾದ ಚುಂಬಿಸುವ ಮತ್ತು | ಗೆಳೆಯನೇನೇ ಸಖೀ? ಅಲ್ಲ, ಮುಳ್ಳೊತ್ತು || वह आवे तब शादी होय। उस बिन दूजा और न कोय॥ मीठे लागें वाके बोल। ऐ सखि साजन? ना सखि ढोल॥ ಬರುವನು   ಅವನು ಮದುವೆಯ ದಿವಸ |  ಅಂದಿಲ್ಲ  ಬೇರಾರಿಗೂ ಒಳಗೆ  ಪ್ರವೇಶ || ಅವನು ನುಡಿದರೆ ಎಷ್ಟು ಸುಖಿಸುವನು ಕೇಳುಗ | ಗೆಳೆಯನೇನೇ ಸಖಿ? ಅಲ್ಲವೇ, ಓಲಗ || जब माँगू तब जल भरि लावे। मेरे मन की तपन बुझावे॥ मन का भारी तन का छोटा। ऐ सखि साजन? ना सखि लोटा॥ ಕೇಳಿದಾಗ ನೀರು ತುಂಬಿ ತರುತಾರೆ | ಮನದ ಬೇಗೆಗೆ ತಂಪೆರೆಯುತಾರೆ || ಮನಸು ದೊಡ್ಡದು, ಅವರ ಮೂರ್ತಿಯಷ್ಟೆ ಚಿಕ್ಕದು  | ಗೆಳೆಯನೇನೇ ಸಖಿ? ಅಲ್ಲ, ಬಟ್ಟಲು|| बेर-बे

ಬೀದಿಗೆ ಚಂದ್ರಮ ಮತ್ತಿತರ ಹನಿಗವನಗಳು

ನೋಟ ಚುನಾವಣಾ ಕಣದಲ್ಲಿ ಇಳಿದಿದ್ದರು ಆತ ಏಟೀಎಮ್ಮಿನಂತೆ ಹಂಚಿದರು ತಲಾ ಸಾವಿರದ ನೋಟ ಜಾಣ ಮತದಾರನ ಕಣ್ಣಿಗೆ ಇಂಪಾದ ನೋಟ ಈವೀಎಮ್ಮಿನಲಿ ಆದರೂ ಒತ್ತಿದನು ನೋಟಾ. ನ್ಯಾನ್ಸಿ ಹಿಂದೊಮ್ಮೆ ಅವನೊಬ್ಬ ಪ್ರೇಮರೋಗಿ ಒದ್ದಾಡುತ್ತಿದ್ದ ಮಿಸ್. ನ್ಯಾನ್ಸಿಗಾಗಿ ಓಕೆ ಎಂದಳು ನ್ಯಾನ್ಸಿ ಮದುವೆಯೋ ಬಹು ಫ್ಯಾನ್ಸಿ ಈಗ ಒದ್ದಾಡುತ್ತಾನೆ ಫೈ-ನ್ಯಾನ್ಸಿಗಾಗಿ ವಿವೇಕ ಅರೈಸ್ ಅವೇಕ್ ಎಂದು ಎಬ್ಬಿಸಿದಂತೆ ಹಿಂದೊಮ್ಮೆ ಶ್ರೀ ವಿವೇಕಾನಂದ ಹಾಸ್ಟೆಲ್ ಹುಡುಗರನ್ನು ಎಬ್ಬಿಸುವ ವಾರ್ಡನ್ ಹುಡುಗರ ಬಾಯಲ್ಲಿ ಅವೇಕಾನಂದ ಬೀದಿಗೆ ಚಂದ್ರಮ "ಬಿದಿಗೆ ಚಂದ್ರಮ ಡೊಂಕು" ಎಂದು ಬರೆದರು ಅಂಬಿಕಾತನಯದತ್ತ ಬೀದಿಗೆ ಚಂದ್ರಮ ಡೊಂಕು ಎಂದು ಟೈಪಿಸಿದನು ಟೈಪಿಸ್ಟನು ಇತ್ತ ಬಿದ್ದಾಗ ಚಂದ್ರಮ ಬಾನಿಂದ ಬೀದಿಗೇ ಯಾರಪ್ಪಾ ವಾಪಸ್ ಏರಿಸೋರು ಬಾನಿಗೆ? ಕ.ಬು. ಹಿಂದೆ ಕವಿಗೂ ಸಂಪಾದಕನಿಗೂ ಇರುತ್ತಿತ್ತು ಕನಿಷ್ಠ ವಿಷಾದಪತ್ರದ ಕನೆಕ್ಷನ್ನು ಇದು ಅದೂ ಇಲ್ಲವಾಗಿದೆ ಇರುವುದೊಂದೇ ರೀಸೈಕಲ್ ಬಿನ್ನು

ಜಗದೋದ್ಧಾರ ಮತ್ತಿತರ ಹನಿಗವನಗಳು

ಜಗದೋದ್ಧಾರ ಕಂಡ್ ಮುದ್ದೆ ಬೆಣ್ಣೆ ತಿಂತಿದ್ದಾಗ ಒಬ್ನೇ ಯಾರೋ ಬಂದ್ ಹಾಗ್ ಸದ್ದು! ಗಾಬ್ರಿಗ್ ಮುದ್ದೆ ಬಿದ್ದು ಎಳ್ಕೊಂಡ್ ತಿಂತಿದ್ನಂತೆ ಮಣ್ಣೆ! ಪೂರ್ಣಚಂದ್ರ ಅಮ್ಮಾ ಚಂದ್ರನ ತೋರುತ್ತಾ ತಿನಿಸುವೆಯಲ್ಲ ಮೊಸರನ್ನ ಹುಣ್ಣಿಮೆ ಚಂದ್ರನ ನೋಡುತ್ತಾ ಪೀಟ್ಸಾ ನೆನಪಾಗುವುದಮ್ಮ! ಯಾದವ ನೀ ಬಾ ಯಾದವನೊಬ್ಬ ಕದಿಯುತ್ತಿದ್ದನಂತೆ ಅಮ್ಮ ಕಡೆದಿಟ್ಟ ಹಸಿಬೆಣ್ಣೆ ಎಂಥಾ ಕಾಲ ಬಂತು ಮಾರಾಯ ಮುಂದೊಬ್ಬ ಯಾದವರಾಯ ಕದ್ದ ಹಸುವಿಗಿಟ್ಟ ಹುಲ್ಲನ್ನೇ! ಕಾಲಾಯ ತಸ್ಮೈ ನಮಃ ಎದ್ದಾಗ ಬೆಳಗ್ಗೆ ಆರುಗಂಟೆಗೆ ಅಲಾರಂ ಸದ್ದಿಗೆ ನಿದ್ರಿಸುತ್ತೇನೆಂದು ಕಣ್ಮುಚ್ಚಿದರೆ ಎರಡು ನಿಮಿಷ ಮತ್ತೆ ಕಣ್ ಬಿಟ್ಟಾಗ ಗಡಿಯಾರ ನುಡಿಯುವುದು ಆರೂ ಮುಕ್ಕಾಲೆಂಬ ಸತ್ಯ! ಮಧ್ಯಾಹ್ನ ಆಫೀಸಿನಲ್ಲಿ ಎರಡೂವರೆಗೆ ಸುಸ್ತಾಗಿ ಕದ್ದುಮುಚ್ಚಿದರೆ ಕಣ್ಣು ಐದು ನಿಮಿಷ ಎದ್ದಾಗ ಗಡಿಯಾರ ನುಡಿಯುತ್ತದೆ 'ಇನ್ನೂ ಎರಡೂ ಮೂವತ್ತೊಂದು' ಎಂಬ ಮಿಥ್ಯ! ಕಿವಿಕಣ್ಣುಬಾಯಿ ಮುಚ್ಚಿಕೋ ಎಂದು ಬಾಪೂಜಿ ಮೂಗುಮುಚ್ಚಿ ಉಸಿರಾಡು ಎಂದು ಬಾಬಾಜಿ

ವೃತ್ತಪತ್ರಿಕೆ ಮತ್ತಿತರ ಹನಿಗವಿತೆಗಳು

ವೃತ್ತಪತ್ರಿಕೆ  ವೃತ್ತಪತ್ರಿಕೆಯೇ ನೀನು ಆಯತಾಕಾರವೇಕೆ? ಗುಂಡಗಿನ ಭೂಮಿಯ ಸ್ತುತ್ತಮುತ್ತಲಿಂದ ಗ್ರಹಿಸಿರುವೆ ಸುದ್ದಿ ನಮ್ಮ ತಲೆ ತಿನ್ನುತ್ತಾ ಸಾಕಷ್ಟು ಬೆಳೆದಿರಬೇಕು ನಿನ್ನ ಬುದ್ಧಿ ನಿನಗೆ ಜಾಮೆಟ್ರೀ ಹೇಳಿಕೊಡಬೇಕೆ? ವೃತ್ತಪತ್ರಿಕೆಯೇ ನೀನು ಆಯತಾಕಾರವೇಕೆ? ನಿರ್ಮಮ     ನಾ, ಮಮ ಎಲ್ಲವನ್ನೂ ಬಿಟ್ಟು ಬಿಡಿ ಎಂದು  ಗುರುಗಳು ಉಪನ್ಯಾಸ ನೀಡಿದರು ಎಂದು  ಅವರ ಶಿಷ್ಯರೆಲ್ಲರೂ ಯೋಚಿಸಿ ತ್ಯಜಿಸಿದ್ದಾರೆ  'ನಾ'ಚಿಕೆ 'ಮಾ'ನ  ಹಾಗೂ 'ಮ'ರ್ಯಾದೆ  ಹೊರಗೆ   ಹಿಂದೊಮ್ಮೆ  ಗುಡಿಚರ್ಚುಮಸೀದಿಗಳನ್ನು  ಹೊರಗಿಟ್ಟು ಬನ್ನಿ! ಇಂದು  ಗುಡಿಚರ್ಚುಮಸೀದಿಗಳ ಹೊರಗೆ : "ಚಪ್ಪಲಿ  ಹೊರಗಿಟ್ಟು ಬನ್ನಿ" ಬಂಗಾರದ ಮನುಷ್ಯ  ಹಾಲಿವುಡ್ "ಐರನ್ ಮ್ಯಾನ್" ತಯಾರಿಸುವ ಮುನ್ನ ಕನ್ನಡದಲ್ಲಿ ತಯಾರಿಸಿಬಿಟ್ಟಿದ್ದರು ಬಂಗಾರದ ಮನುಷ್ಯನ್ನ ಕಿಣಿ  ಮದುವೆಯಾದಳು ಎಂಬಿಬಿಎಸ್ ಪಡೆದು ಮಿಸ್. ಮಂದಾಕಿನಿ, ಡಾ. ಕಿಣಿಯನ್ನು ಹಿಡಿದು ನಡೆಸುತ್ತಾರೆ ಕ್ಲಿನಿಕ್ ದಂಪತಿಗಳು ಇಬ್ಬರೂ  ಸೇರಿ ಬೋರ್ಡ್ ಬರೆದವನು ಹೀಗೆ ಬರೆಯಬಹುದೆನ್ರೀ ಅವಳ ಹೆಸರಿನ ಕೆಳಗೆ  "ಶ್ರೀಮತಿ ಡಾ.ಕಿಣಿ" ವಿಲ್ಲಾ  ಹಸಿದಾಗ ಕಾಣಿಸಿದ ರೆಸ್ತೊರಾಂ ಹೆಸರು "ಆಹಾರ್ ವಿಲ್ಲಾ" "ಸಾರ್ ಇಂದು ಕರೆಂಟ್ ಇಲ್ಲ, ಗೊತ್ತಾತ್ರಾ? ಮೆನುನಲ್ಲಿ ಬರೀ ಹಸಿ

ಪ್ರೇಮವೇ ನಿನ್ನ ಈ ಪರಿಣಾಮಕೆ ಕಂಬನಿ ಮಿಡಿದೆ

ಇಮೇಜ್
ಮೂಲ - ಶಕೀಲ್ ಬದಾಯೂನಿ ಕನ್ನಡಕ್ಕೆ - ಸಿ. ಪಿ. ರವಿಕುಮಾರ್ (ಐ ಮುಹಬ್ಬತ್ ತೇರೇ ಅಂಜಾಮ್ ಪೇ ರೋನಾ ಆಯಾ ಎಂದು ಪ್ರಾರಂಭವಾಗುವ ಈ ಗಜಲ್ ತುಂಬಾ ಪ್ರಸಿದ್ಧ. ಇದನ್ನು ಬೇಗಂ ಅಖ್ತರ್ ಅವರ ಧ್ವನಿಯಲ್ಲಿ ನೀವು ಕೇಳಬಹುದು ) ಪ್ರೇಮವೇ ನಿನ್ನ ಈ ಪರಿಣಾಮಕೆ ಕಂಬನಿ ಮಿಡಿದೆ ಯಾವುದೋ ಮಾತಿಗೆ ನೋವಾಯಿತು, ಕಂಬನಿ ಮಿಡಿದೆ ಹೇಗೋ ಭರವಸೆಯಲ್ಲಿ ಕಳೆಯುತಿತ್ತು ಪ್ರತಿಸಂಜೆ ಇಂದು ಸಂಜೆ ಅದೇನಾಯಿತೋ ಕಂಬನಿ ಮಿಡಿದೆ ಇತ್ತ ಒಲಿಯದ ಭಾಗ್ಯ, ಅತ್ತ ಜನರಿಂದ ಕಡುಟೀಕೆ, ಪ್ರೇಮಪಥದ ಪ್ರತಿ ಹೆಜ್ಜೆಗೂ ಕಂಬನಿ ಮಿಡಿದೆ ಬಂದಿತೇತಕೆ ನನ್ನದೇ ಮಡಿಲಿಗೆ ಪ್ರತಿ ವೇದನೆಯೂ ಹಾ ವಿಧಿಯೇ! ನಿನ್ನ ಅಟ್ಟಹಾಸಕೆ ಕಂಬನಿ ಮಿಡಿದೆ ತೆಗೆಯುವೆ ಏತಕೆ ಪ್ರೀತಿಪ್ರೇಮಗಳ ಮಾತು ನನ್ನೆದೆಯ ಸೋಲನ್ನು ನೆನೆದು ಕಂಬನಿ ಮಿಡಿದೆ

ಆರು ಹಿತವರು ನಿನಗೆ

ಇಮೇಜ್
ಧರ್ಮ, ರಾಜಕಾರಣ ಮತ್ತು ಸಾಹಿತ್ಯ ಬೆರೆಸಿ ಯಾವುದೇ ಎರಡನ್ನು ತಯಾರಿಸಬಹುದು ವ್ಯಂಜನ ಆರು - ಧರ್ಮಸಾಹಿತ್ಯ ಸಾಹಿತ್ಯಧರ್ಮ ಧರ್ಮರಾಜಕಾರಣ ರಾಜಕಾರಣಧರ್ಮ ಸಾಹಿತ್ಯರಾಜಕಾರಣ ರಾಜಕಾರಣಸಾಹಿತ್ಯ ಕೆಲವು ಸಿಹಿ, ಕೆಲವು ಹುಳಿ ಕೆಲವು ವಿಷಕಾರಿ, ಹುಷಾರು! ಇನ್ನು ಬೆರೆಸಿ ಮೂರನ್ನೂ ಸಿಕ್ಕುವ ಆರು ಅವುಗಳಿಂದ ನಮ್ಮನ್ನು ರಕ್ಷಿಸುವವರಾರು! ಸಿ. ಪಿ. ರವಿಕುಮಾರ್

ವ್ಯವಸ್ಥೆ ಬದಲಾಯಿಸುವುದು

ಇಮೇಜ್
ಈ ವ್ಯವಸ್ಥೆಯನ್ನು ಶಾಸಕ ಬದಲಾಯಿಸುವನೆ? ಅವನು ನನ್ನ ವೋಟಿನಿಂದಲೇ ಗೆದ್ದು ಬಂದು ನನ್ನ ಕನಸುಗಳಿಗೇ ತೆರಿಗೆ ಹಾಕುತ್ತಾನೆ. ಬಂಡವಾಳಕೋರ ಬದಲಾಯಿಸುವನೆ ಈ ವ್ಯವಸ್ಥೆ ? ಅವನು ನನ್ನಿಂದ ಹನ್ನೆರಡು ಗಂಟೆ ದುಡಿಸಿ ಎಂಟು ಗಂಟೆಯ ಸಂಬಳದಲ್ಲೂ ಕಡಿತ ಮಾಡುವವನು. ಬುದ್ದಿಜೀವಿ ಬದಲಾಯಿಸಬಲ್ಲನೇ? ಅವನು ಒಂದು ಸೈಟು ಅಥವಾ ವಿದೇಶಪ್ರವಾಸಕ್ಕಾಗಿ ಆಡಳಿತದಲ್ಲಿರುವವರ ಗುಣಗಾನ ಮಾಡಲು ಶಬ್ದಗಳನ್ನು ಸಂಗ್ರಹಿಸುತ್ತಿರುತ್ತಾನೆ. ವ್ಯವಸ್ಥೆಯನ್ನು ವರ್ತಕ ಹೇಗೆ ಬದಲಾಯಿಸಬಲ್ಲ? ಬಜೆಟ್ ಬಂದ ಕೂಡಲೇ ಅದರ ರಿಯಾಯಿತಿಯೆಲ್ಲಾ ತಾನು ಕಬಳಿಸಿ ನನ್ನ ಖಾತೆಗೆ ಬೆಲೆಯೇರಿಕೆಯನ್ನು ಜಮೆ ಮಾಡುವವನು? ಇನ್ನು ಪುಡಾರಿ ವ್ಯವಸ್ಥೆಯನ್ನು ಕಾಪಾಡದೆ ಏನು ಮಾಡಿಯಾನು? ಅದರ ಕೃಪೆಯಿಂದಲ್ಲವೇ ಅವನು ಸರಕಾರಿ ಶಾಲೆ ಡಿಸ್ಪೆನ್ಸರಿಗಳಲ್ಲಿ ತನ್ನ ಆಕಳು ಎಮ್ಮೆ ಕಟ್ಟಿ ಸರ್ಕಾರದ್ದಲ್ಲದ ಮರದ ನೆರಳಲ್ಲಿ ಪಾಠ ಹೇಳುವ ಹಠಮಾರಿ ಶಿಕ್ಷಕನಿಗೆ ಜೀಪ್ ಹಿಂದಕ್ಕೆ ಕಟ್ಟಿ ಎಳೆದೊಯ್ಯುವ ಬೆದರಿಕೆ ಹಾಕಬಲ್ಲ? ನಾನು ಪತ್ರಕರ್ತನನ್ನು ವ್ಯವಸ್ಥೆ ಬದಲಾಯಿಸಲು ಕೋರಿದೆ. ಅವನು ಗುಮಾಸ್ತೆಯ ಜೊತೆ ಕುಳಿತು ಚಹಾ ಹೀರುವುದರಲ್ಲೇ ಮಗ್ನನಾಗಿದ್ದ. ಇದೆಲ್ಲಾ ತಿಳಿದೇ ನಾನು ನನ್ನ ಚಹರೆಯನ್ನು ಮುಂದಿನ ಐದು ವರ್ಷಗಳವರೆಗೆ ಗ್ರಾಮಲೆಕ್ಕಿಗನಿಗೆ ಕೊಟ್ಟುಬಿಡುತ್ತೇನೆ. ಅವನು ಅದನ್ನು ಚಿತ್ರಪುಸ್ತಕದಲ್ಲಿ ಸುತ್ತಿಟ್ಟುಕೊಂಡು ವೋಟಿನ ಚೀಟಿಯಲ್ಲಿ ನನ್ನ ಹೆಬ್ಬೆರಳಿನ

ಸಾಲದಲ್ಲಿ ಸ್ವರ್ಗ

ಇಮೇಜ್
ಮೂಲ .. ನಂದ್ ಸಾರಸ್ವತ್ ಹೇಮಾಸರ್‌ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ ನಡೆಯುತ್ತಿದೆ ಅಪ್ಪನ ಹನ್ನೆರಡನೇ ದಿನದ ಕಾರ್ಯ ನಡೆಯುತ್ತಿದೆ ಸ್ವರ್ಗದ ಬಾಗಿಲು ತೆರೆಸುವ ಕಾರ್ಯ ಇನ್ನಷ್ಟು ದಿನ ಬದುಕಿರುತ್ತಿದ್ದನೇನೋ ನಡೆಸಿದ್ದರೆ ಚಿಕಿತ್ಸೆ ಹಿತ್ತಲಲ್ಲಿ ನಡೆಯುತ್ತಿದೆ ವಡೆ ಪಾಯಸ ಕಾರ್ಯ ಚಳಿಗೆ ನಡುಗುತ್ತಿದ್ದ ಅಪ್ಪ ನಿದ್ದೆ ಹತ್ತದೆ ಕಣ್ಣಿಗೆ ಅವನ ನೆನಪಿನಲ್ಲೀಗ ಶಾಲು ವಿತರಿಸುವ ಕಾರ್ಯ ಮಾತಾಡುತ್ತಿರಲಿಲ್ಲ ಅವನ ಮುಖಕ್ಕೆ ಮುಖಕೊಟ್ಟು ಈಗ ಅವನ ಗುಣಗಾನ ಗುಣುಗುಣಿಸುವ ಕಾರ್ಯ ವಿಚಿತ್ರವಾದವು ನೋಡಿ ಈ ಜಗದ ರೀತಿನೀತಿಗಳು ಸಾಲ ಮಾಡಿ ಋಣದ ಭಾರ ಇಳಿಸುವ ಕಾರ್ಯ ಸ್ವರ್ಗ ಪಡೆಯಲು ಅದೆಷ್ಟೋ ವಸ್ತು ವಿಶೇಷಗಳು ಗೋದಾನ ಮಾಡಿ ಗಂಗೆಯನು ದಾಟಿಸುವ ಕಾರ್ಯ

ನಡುಕ ಹುಟ್ಟಿಸುವ ಚಳಿ ಇಂದಿನ ಬೆಳಗು

ಇಮೇಜ್
ಅಬ್ಬಾ ನಡುಕ ಹುಟ್ಟಿಸುವ ಚಳಿ ಇಂದಿನ ಬೆಳಗು ಇಬ್ಬನಿಯು ಮಂಜುಗಲ್ಲಾಗಿದೆ ಈ ಬೆಳಗು ಬಿಸಿಕಾಫಿ ಚಹಾ ನೆನೆದು ಪರಿತಪಿಸುವ ಬೆಳಗು ರಸಿಕರೂ ಬಿಸಿಗಾಗಿ ಕಾಫಿಟೀ ಹೀರುವ ಬೆಳಗು! ಹಳೆಯ ಸಂಗ್ರಹದಿಂದ ಸೈಟರ್‌ ಹುಡುಕುವ ಬೆಳಗು ಬೆಳಕಾಗದಿದ್ದರೂ ಗಡಿಯಾರ ಕೋರುತ್ತಿದೆ ಬೆಳಗು | ಪುಟ್ಟಣ್ಣ ಕಣಗಾಲ್ ಕೊಡಗು ನೆನಪಿಸುವ ಬೆಳಗು ಬಿತ್ತಿ ಕನಸುಗಳನ್ನು ಬೆಳಗಿಸುವ ಬೆಳಗು ಮುಗಿಯಿತು ನವೆಂಬರ್ ರಾಜ್ಯೋತ್ಸವ ಮಾಸ ನಗುನಗುತ ಕನ್ನಡಕ್ಕೆ ಕೈಬೀಸುವೆ ಬೆಳಗು! ಸಿ.ಪಿ. ರವಿಕುಮಾರ್

ಬೆಂಗಳೂರಿಗೆ ಸಿಕ್ಕಿದೆಯಂತೆ ಮತ್ತೊಂದು ಗರಿ

ಇಮೇಜ್
ಬೆಂಗಳೂರಿಗೆ ಸಿಕ್ಕಿದೆಯಂತೆ ಮತ್ತೊಂದು ಗರಿ ನಮ್ಮ ಬೆಂಗಳೂರು ಈಗ ಅಪರಾಧ ನಗರಿ ಇತ್ತು ನಿವೃತ್ತರ ಸ್ವರ್ಗವೆಂಬ ಬಿರುದು ಹಿಂದೊಮ್ಮೆ ರಸ್ತೆ ದಾಟುವ ನಿವೃತ್ತರಿಗೆ ಸ್ವರ್ಗ ಕಾಣಿಸುವ ನಗರಿ ಬೆಂದಕಾಳೂರೆಂಬ ಕಥೆ ಹೇಳುವರು ಮಂದಿ ಯಾರ ಬೇಳೆ ಕಾಳೂ ಪೂರ್ತಿ ಬೇಯದ ನಗರಿ ನೂರಾರು ಕೆರೆಗಳು ಇದ್ದವಂತೆ ಹಿಂದೊಮ್ಮೆ ಎಕರೆಗಳಾಗಿ ಎಲ್ಲವನ್ನೂ ಪರಿವರ್ತಿಸಿದ ನಗರಿ ಉಪವನಗಳ ನಗರವೆಂಬ ಅಡ್ಡ ಹೆಸರಿತ್ತು. ಅಪವನ, ಕಲುಷಿತ ಪವನಗಳ ನಗರಿ ಅಂದು ಸಿಲಿಕಾನ್ ಸಿಟಿ, ಐಟಿ ಬಿಟಿ ಮುನ್ನಡೆಗಳ ನಗರಿ ಇಂದು ಕಾರ್ಬನ್ ಸಿಟಿ, ಟ್ರಾಫಿಕ್ ತಡೆಗಳ ನಗರಿ ಸಿ.ಪಿ. ರವಿಕುಮಾರ್

ವಿವಾದ ಸೃಷ್ಟಿಸುವ ಕೆಲಸ

ಇಮೇಜ್
ಕೆಲವರಿಗೆ ವಿವಾದ ಸೃಷ್ಟಿಸುವ ಕೆಲಸ ಕೆಲಸವಿಲ್ಲದವರಿಗೆ ಇನ್ನೇನು ಹುಟ್ಟಿಸುವ ಕೆಲಸ ಸೋಮಾರಿ ಕಟ್ಟೆಯ ಮೇಲೆ ಹೂಡಿ ಪಟ್ಟಾಂಗ ಅತ್ತಿತ್ತ ಎಲ್ಲಕಡೆ ದಿಟ್ಟಿಸುವ ಕೆಲಸ ಸ್ವಂತ ಆಲೋಚನೆಯನ್ನು ಕಲಿಯಲೇ ಇಲ್ಲ ಅಲ್ಲಿಯದನ್ನಿಲ್ಲಿ ಮುಟ್ಟಿಸುವ ಕೆಲಸ ನೇರವಾದ ಉತ್ತರಕ್ಕೆ ಬೆಲೆಯಿಲ್ಲವೆಂದು ಕಂಬದಿಂದ ಕಂಬಕ್ಕೆ ಸುತ್ತಿಸುವ ಕೆಲಸ ಯಾರೋ ಹೇಳಿಕೊಟ್ಟರು ಒಂದು ಹಳೆಯ ರಾಗ ಅದನ್ನೇ ಹಾರ್ಮೋನಿಯಂ ಕುಟ್ಟಿಸುವ ಕೆಲಸ ಸಿ.ಪಿ. ರವಿಕುಮಾರ್

ನಡೆಯಿತಂತೆ ಹೀಗೊಂದು ಮದುವೆ

ಇಮೇಜ್
ಬಿಹಾರದಲ್ಲಿ ನಡೆಯಿತಂತೆ ಹೀಗೊಂದು ಮದುವೆ ಹೌಹಾರಿ ಹುಬ್ಬೇರಿಸಿ ತಲೆದೂಗುವ ಮದುವೆ ಮದುವೆ ಏನೂ ಸರಳ ಸಾಮಾನ್ಯರದಲ್ಲ ಪದವಿಯಲ್ಲಿರುವವರ ಸ್ಥಿತಿವಂತರ ಮದುವೆ ಸಾಲು ಸಾಲಾಗಿ ಬಂದರಂತೆ ಅತಿಥಿಗಳು ಲಾಲು ಇತ್ಯಾದಿಗಳೂ ಆಗಮಿಸಿದ ಮದುವೆ ಮಜವೇನೆಂದು ನೀವು ಕೇಳುವುದು ಸಾಧುವೇ ಭೋಜನಕೂಟವೇ ಆಯೋಜಿಸದ ಮದುವೆ ಲಡು ಸಿಕ್ಕಿತು ಎಲ್ಲರಿಗೂ ಒಂದಲ್ಲ ನಾಲ್ಕು ಬಡ್ಡಿ ಸಾಲಗಳನ್ನು ಹೊರದೂಡಿದ ಮದುವೆ ವಧುವರರಿಗೆ ಬೇಕು ಜನರ ಆಶೀರ್ವಾದ ಅದು ಹೀಗೂ ಸಿಕ್ಕದೇ ಎಂದು ಪ್ರಶ್ನಿಸಿದ ಮದುವೆ ಸುದ್ದಿಯಾಗಿದೆ ಮಾರಾಟ ಸಂಸ್ಕೃತಿಯ ನಡುವೆ ಬುದ್ಧನ ನಾಡಿನಲ್ಲೊಂದು ಬುದ್ಧಿವಂತರ ಮದುವೆ ಸಿ.ಪಿ. ರವಿಕುಮಾರ್