ಪೋಸ್ಟ್‌ಗಳು

Atal Bihari Vajapeyi ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಜಗದ ಶೀರ್ಷದ ಮೇಲೆ ಹೊಳೆವ ಮಕುಟ

ಇಮೇಜ್
ಮೂಲ ಹಿಂದಿ ... ಅಟಲ್ ಬಿಹಾರಿ ವಾಜಪೇಯಿ ಕನ್ನಡಕ್ಕೆ ... ಸಿ.ಪಿ.ರವಿಕುಮಾರ್ ಕೇಳುತ್ತೀಯಲ್ಲ ಜಗತ್ತಿನ ಇತಿಹಾಸ ಎಲ್ಲಿದೆ ಗ್ರೀಸ್, ಹೇಳು, ಎಲ್ಲಿ ರೋಮನ್ನರ ಸಾಹಸ? ಹೋಯಿತೆಲ್ಲಿಗೆ ಹೇಳು ಮನೆಮನೆಯಲ್ಲೂ ಜ್ಯೋತಿ ಸಂಭ್ರಮ ಮೆರೆದ ಇರಾನ್ ದೇಶ? ಪಶ್ಚಿಮ ಗಗನದ ದೀಪಗಳು ನಂದಿದವು. ಕವಿದುಕೊಂಡಿತು ಬರ್ಬರ ಅಂಧಕಾರ ಕತ್ತಲಿನ ಎದೆಯನ್ನು ಸೀಳಿ ಹೊಳೆಯುತ್ತಿಹುದು ಭಾರತ, ಜಗದ ಹೊಸಬೆಳಕಿನ ಹರಿಕಾರ! ಒಂದೇ ಎರಡೇ ಎಷ್ಟು ಕೊಡಲಿಪೆಟ್ಟುಗಳು ಮೌನದಲಿ ಸಹಿಸಿ ಪ್ರತಿಯೊಂದು ಆಘಾತ ಆದರೂ ಜೀವಂತ, ಆದರೂ ಜ್ವಲಂತ ಜಗದ ಶೀರ್ಷದ ಮೇಲೆ ಹೊಳೆವ ಮಕುಟ

ಎದುರಾಯಿತು ಮೃತ್ಯು!

ಇಮೇಜ್
ಮೂಲ ಹಿಂದಿ ಕವಿತೆ - ಅಟಲ್ ಬಿಹಾರಿ ವಾಜಪೇಯಿ  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  (ಕಲೆ-ಮಂಜುನಾಥ್ ಭಂಡಾರಿ) ಎದುರಾಯಿತು! ಎದುರಾಯಿತು  ಮೃತ್ಯು ! ಎದುರಿಸಿ ಸೆಣಸುವ ಇರಾದೆ  ಇರಲಿಲ್ಲ ಯಾವತ್ತೂ  ದಾರಿಯಲ್ಲಿ ಸಿಕ್ಕುವೆನೆಂದು ಕೊಟ್ಟಿರಲಿಲ್ಲ ಮಾತು  ದಾರಿಗೆ ಅಡ್ಡ ಹಾಕಿ ನಿಂತು ಬಿಟ್ಟಿತು ಮೃತ್ಯು  ಬದುಕಿಗಿಂತಲೂ ದೊಡ್ಡವನೆಂದು ಬೀಗುತ್ತಿತ್ತು  ಮೃತ್ಯುವಿನ ಆಯಸ್ಸಾದರೂ ಎಷ್ಟು? ಕೇವಲ ಒಂದೆರಡು ಕ್ಷಣ! ಹೋಲಿಸಿದರೆ ಬದುಕಿನ ಲೆಕ್ಕಾಚಾರಕ್ಕೆ ಯಃಕಶ್ಚಿತ್, ಗೌಣ! ಮುದುಡುವುದೇ ನನ್ನ ಮನ? ಮನದುಂಬಿ ಬದುಕಿರುವೆ - ಹಿಂದಿರುಗಿ ಬರುತ್ತೇನೆ! ನನಗೇ ಮಣ್ಣಿನ ಹೆದರಿಕೆ!   ಹೀಗೆ ಕಳ್ಳಹೆಜ್ಜೆ ಹಾಕಿ ಮರೆಯಲ್ಲಿ ಬಾರದಿರು  ನೇರವಾಗಿ ಎದುರಿಸು!  ಒಂದು ಕೈ ನೋಡು.  ಮೃತ್ಯುವಿನಿಂದ ನಿಶ್ಚಿಂತನಾಗಿದೆ ಬದುಕಿನ ಪ್ರಯಾಣ  ಪ್ರತಿ ಸಂಜೆ ಸ್ವರಮೇಳ, ಪ್ರತಿ ಇರುಳು ಕೊಳಲಿನ ಗಾನ ಹಾಗೆಂದು ಯಾವ ದುಃಖವೂ ಇಲ್ಲವೆಂದಲ್ಲ  ಸ್ವಂತ-ಪರಕೀಯ ನೋವುಗಳಿಗೆ ಬರವಿಲ್ಲ.  ಹೊರಿಸಿದ್ದಾರೆ ಪರರೂ ನನಗೆ ಪ್ರೀತಿಯ ಹೊರೆ  ನನ್ನವರಿಂದಲೂ ನನಗಿಲ್ಲ ಪ್ರೀತಿಯ ಅರೆಕೊರೆ  ಹೋರಾಟಗಳನ್ನು ಬಿಡಲಿಲ್ಲ ನೋಡದೇ ಒಂದು ಕೈ ಕತ್ತಲಿನಲ್ಲೂ ಉರಿಸಿದ್ದೇನೆ ನಂದಿಹೋಗುತ್ತಿದ್ದ  ಹಣತೆ  ಇಂದು ಎದ್ದಿದೆ ಜೋರಾದ ಬಿರುಗಾಳಿ...

ಮನದ ಗಂಟುಗಳ ಬಿಡಿಸುವ ಬನ್ನಿ

ಇಮೇಜ್

ವಾಜಪೇಯಿ ಅವರ ಎರಡು ಕವಿತೆಗಳು

ಇಮೇಜ್
  ಮೂಲ ಹಿಂದಿ ಕವಿತೆ: ಅಟಲ್ ಬಿಹಾರಿ ವಾಜಪೇಯಿ  ಕನ್ನಡಕ್ಕೆ: ಸಿ ಪಿ ರವಿಕುಮಾರ್   ಕ್ಷಮಾಯಾಚನೆ  ನಮ್ಮನ್ನು ಕ್ಷಮಿಸು ಬಾಪೂ! ನಾವು ವಚನ ಮುರಿದ ಅಪರಾಧಿಗಳು, ರಾಜಘಾಟ್ ನಮ್ಮಿಂದ ಅಪವಿತ್ರವಾಯಿತು, ಯಾತ್ರೆ ಮಧ್ಯದಲ್ಲೇ ಗುರಿಯನ್ನು ಮರೆತೆವು. ಜಯಪ್ರಕಾಶ್ ಜೀ! ನಂಬಿಕೆ ನಮ್ಮಲ್ಲಿರಲಿ, ಭಗ್ನ ಸ್ವಪ್ನಗಳ ಪುನಃ ಜೋಡಿಸಿ ಉರಿದ ಚಿತೆಯ ಭಸ್ಮದ ಕಿಡಿಯಿಂದ ಕತ್ತರಿಸುವೆವು ಕತ್ತಲ ಬಂಧ! ಸ್ವಾತಂತ್ರ್ಯ  ಸ್ವಾತಂತ್ರ್ಯೋತ್ಸವ  ಆಚರಿಸುವೆವು ಹೊಸ ಗುಲಾಮಗಿರಿ ನಡುವೆ; ಒಣಗಿದೆ ನೆಲ, ಅಂಬರ ಬರಿದಾಗಿದೆ, ಮನಸಿನಲ್ಲಿ ಬರಿ ಕೊಚ್ಚೆ; - ಮನಸಿನಲ್ಲಿ ಬರಿ ಕೊಚ್ಚೆ, ಒಣಗಿಹವು ಕೆಂದಾವರೆ ಒಂದೊಂದೂ, ಆರಿಹೋಗಿ ಒಂದೊಂದೇ ದೀಪ, ಎಲ್ಲೆಡೆ ಕತ್ತಲು ಕವಿದು. ಕೈದಿಯಾಗಿರುವ ಕವಿಯ ಉವಾಚ, ಕಳೆದುಕೊಳ್ಳದಿರು ಸ್ಥೈರ್ಯ, ನಿಶಾರಕ್ಕಸಿಯ ಎದೆಯ ಸೀಳಿ ಕಂಗೊಳಿಸಿ ಮಿನುಗುವನು ಸೂರ್ಯ!

ಹಣತೆಯ ಮತ್ತೆ ಬೆಳಗುವ ಬನ್ನಿ!

ಇಮೇಜ್
ಮೂಲ ಹಿಂದಿ ಕವಿತೆ : ಅಟಲ್ ಬಿಹಾರಿ ವಾಜಪೇಯಿ  ಅನುವಾದ: ಸಿ ಪಿ ರವಿಕುಮಾರ್  ಕವಿತೆಯನ್ನು ಕುರಿತು   ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ನಮ್ಮ ದೇಶದ ಪ್ರಧಾನಿಯಾಗಿದ್ದವರು. ಅವರು ಹಿಂದಿಯಲ್ಲಿ ಎಂಟು ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಈ ಕವಿತೆಯಲ್ಲಿ ಕವಿಗೆ ದೇಶ ಹಾದಿ ತಪ್ಪುತ್ತಿದೆ ಎನ್ನುವ ತಲ್ಲಣವಿದೆ. ಸುತ್ತಲೂ ತಮ (ಕತ್ತಲು) ಕವಿದಂತೆ ಭಾಸವಾಗುತ್ತಿದೆ. ಕತ್ತಲೆ ಇರುವುದು ನಮ್ಮ ಮನಸ್ಸಿನ ಒಳಗೆ; ಅದನ್ನು ಹೋಗಲಾಡಿಸಲು ನಮಗೆ ಬೇಕಾಗಿರುವುದು ವಿದ್ಯೆ ಮತ್ತು ಇಚ್ಛಾಶಕ್ತಿ. ಇಂದಿನ ಮೋಹದಲ್ಲಿ ನಾವು ನಾಳೆಯನ್ನೇ ಮರೆತು ಬಿಡುತ್ತಿದ್ದೇವೆಯೇ ಎಂದು ಕವಿಗೆ ಭಯವಾಗುತ್ತದೆ. ನಮ್ಮ ದೇಶ ಇನ್ನೂ ಪ್ರಗತಿಪಥದಲ್ಲಿ ಸಾಕಷ್ಟು ಮುಂದೆ ಹೋಗಬೇಕಾಗಿದೆ. ಈ ಪ್ರಗತಿಯಲ್ಲಿ ನಮ್ಮ ಒಳಜಗಳಗಳೇ ನಮಗೆ ವಿಘ್ನಗಳು. ದೇವ-ದಾನವರ ಕಾಳಗದಲ್ಲಿ ಬೇಕಾದ ವಜ್ರಾಯುಧವನ್ನು ದಧೀಚಿ ಎಂಬ ಮಹರ್ಷಿಯ ಬೆನ್ನುಮೂಳೆಯಿಂದ ತಯಾರಿಸಲಾಯಿತಂತೆ. ಇಂದಿನ ಯುವಕರು ತಮ್ಮ ಪ್ರಯಾಸದಿಂದ ವಿಘ್ನಗಳನ್ನು ಪಾರು ಮಾಡಿ ದೇಶವನ್ನು ಮುಂದಕ್ಕೆ ಕರೆದೊಯ್ಯಬೇಕು ಎಂಬುದು ಕವಿಯ ಆಶಯ.  ನಡುಹಗಲಲ್ಲೂ  ತಮಾಂಧಕಾರ ನೆರಳಿಗೆ ಸೋತಿರುವನು ದಿವಾಕರ ಒಳಗಿನ ತಮಸ್ಸಿಗೆ ನೀಡು ತಿಲಾಂಜಲಿ ಮನಸಿನಾಳಕ್ಕೆ ಬೆಳಕು ಹರಿಯಲಿ!               ಹಣತೆಯ ಮತ್ತೆ ಬೆಳಗುವ ಬನ್ನಿ! ಬಳಸನ್ನೇ ಗುರಿಯೆಂದು ನಂಬಿದೆವು...