ಪೋಸ್ಟ್‌ಗಳು

ಏಪ್ರಿಲ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಈ ರಾತ್ರಿ ಯಾರೋ ಕದ ತಟ್ಟುತ್ತಾರೆ

ಇಮೇಜ್
ಮೂಲ ಕವಿತೆ: ಬಾತ್ಷೆವಾ ಡೋರಿ-ಕಾರ್ಲಿಯೇ  (ಇಸ್ರೇಲ್) ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಕವಿತೆ ಓದುವ ಮುನ್ನ: ಬಾತ್ಷೆವಾ (1970-) ಇಸ್ರೇಲ್ ದೇಶದ ಪ್ರಮುಖ ಕವಯಿತ್ರಿ.  ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ತನ್ನ ಗತಿಸಿದ ತಂದೆಯನ್ನು ನೆನೆಸುತ್ತಾಳೆ.  ಮಳೆಯಲ್ಲಿ ತಂದೆಯೊಂದಿಗೆ ಕುಳಿತು ಕಳೆದ ಆಪ್ಯಾಯವಾದ ಕ್ಷಣಗಳ ನೆನಪು ಕವಯಿತ್ರಿಯನ್ನು ಕಾಡುತ್ತವೆ. ಕವಿತೆಯಲ್ಲಿ ಉಲ್ಲೇಖಿತನಾದ ಮಫ್ಫೂಜ್ ಈಜಿಪ್ಟಿನ ಒಬ್ಬ ಪ್ರಸಿದ್ಧ ಕತೆಗಾರ.  ಅಪ್ಪ ಹಿಂದಿರುಗುತ್ತಾನೆ, ಮಳೆಯ ಹಾಗೆ, ಇನ್ನೊಂದು ಬದಿಯಿಂದ.  ಊಟದ ಮೇಜಿನ ಮುಂದೊಂದು ಖಾಲಿ ಕುರ್ಚಿ.  ಅದರ ಮುಂದೆ ಮತ್ತೊಂದು ತಟ್ಟೆ-ಬಟ್ಟಲು ಜೋಡಿಸುತ್ತಾ  ಅಂದುಕೊಳ್ಳುತ್ತೇನೆ - ಅವನು ಹೆಚ್ಚು ಹೊತ್ತು ಇರಲಾರನೇನೋ.  ಸತ್ತವರು ಅನ್ನ ಮತ್ತು ತೊವ್ವೆಗಾಗಿ ಹಂಬಲಿಸುವುದಿಲ್ಲವಲ್ಲ.  ಎಂದಿನಂತೆ ಮಳೆಯಲ್ಲಿ ಅವನು ಓದುತ್ತಾನೆ  ನಗರದ ಪುರಾತನ ಭಾಗದಲ್ಲಿ ಬಹಳ ಹಿಂದೆ ಕೊಂಡ  ಮಹ್ಫೂಜನ ಪ್ರೇಮಕಥೆ.  ಮೇಜಿನ ಸುತ್ತಲೂ  ಹರಡಿಕೊಳ್ಳುತ್ತವೆ ನೆನಪುಗಳು ಮನೆ ಅಡುಗೆಯ ಪರಿಮಳದಂತೆ.   ಅಪ್ಪನ ವಿಶಾಲವಾದ ಕೈಗಳು ಬಾಚಿಕೊಳ್ಳುತ್ತವೆ  ನನ್ನ ಮತ್ತು ತಂಗಿಯ ಕೈಗಳನ್ನು, ಜಪಮಣಿ ಸರವನ್ನು, ಪೈಪ್ ಮತ್ತು ಪುಸ್ತಕಗಳನ್ನು. ಬಾಚಿಕೊಳ್ಳುವುದರಲ್ಲಿದೆ ಒಂದು ನಯ ನಾಜೂಕಾದ ವಸ್ತುಗಳನ್ನು ಬಾಚಿಕೊಳ್ಳುವುದರಲ್ಲಿರುವ ನಯ.   

ಸಸ್ಯಮಾನವ

ಇಮೇಜ್
ಮೂಲ ಚೈನೀಸ್ ಕವಿತೆ : ಯಾವೋ ಫೆಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಒಂದು ಕಾಲದ ಜನ ಈ ಭೂಮಿಯ ಮೇಲೆ ನೇರವಾಗಿ ನಿಂತು  ಛಪ್ಪನ್ನೈವತ್ತಾರು ದೇಶಗಳಿಗೂ ಸಸ್ಯಮೃಗಗಳಿಗೂ ಭಾಷೆಯ ಹೆಸರಿಟ್ಟರು ಗುಲಾಬಿ ಅರಳುತ್ತದೆ ಮತ್ತು ಒಣಗಿಹೋಗುತ್ತದೆ  ತನ್ನ ಹೆಸರು 'ಗುಲಾಬಿ' ಎಂದು ತಿಳಿದುಕೊಳ್ಳದೆ  ಪಾಪ! ಕ್ಲೈವಿಯಾ ಹೂವಿಗೆ ಗೊತ್ತೇ ಇಲ್ಲ  ಲೇಡಿ ಚಾರ್ಲಟ್ ಫೊರೆನ್ಷಿಯಾ ಕ್ಲೈವ್ ಜೊತೆಗಿನ ತನ್ನ  ಸಂಬಂಧ  ಸದ್ಯಕ್ಕೆ ಸಸ್ಯ ಮತ್ತು ಪದಗಳ ಅಧ್ಯಯನಕ್ಕೂ ನನಗೂ ಮೈಲಿಗಳ ಅಂತರ  ನಾನು ಕುಳಿತಿದ್ದೇನೆ ನನ್ನ ಹಳೆಯ ಸ್ನೇಹಿತನೊಬ್ಬನ ಮಂಚದ ಹತ್ತಿರ  ಅವನ ದೇಹಕ್ಕೆ ಚುಚ್ಚಿದ್ದಾರೆ ಅದೆಷ್ಟೋ ಟ್ಯೂಬುಗಳು  ಕಾಣುತ್ತಾನೆ ಗೆಣಸಿನ ಗಡ್ಡೆಯಂತೆ ನೋಡಲು  ನಾನು ಕಣ್ತಪ್ಪಿಸಿ ದೃಷ್ಟಿ ಹೊರಳಿಸುತ್ತೇನೆ ಕಿಟಕಿಯ ಕಡೆಗೆ  ಅಲ್ಲೊಂದು ಮರ ತನ್ನ ಛತ್ರಿಯನ್ನು ಹರಡಿದೆ  ಗಾಜಿನ ಮೇಲೆ ಬಿಡಿಸುತ್ತಿದೆ  ಅಸಂಖ್ಯ ಬಿಸಿಲು-ನೆರಳಿನ ಚಿತ್ರ  ಕೊನೆಗೆ ನಾನು ಮತ್ತೊಮ್ಮೆ ಸ್ನೇಹಿತನ ಕಡೆಗೆ ನೋಡುತ್ತೇನೆ  ಅವನು ದೊಡ್ಡದಾಗಿ ಕಣ್ಣುಬಿಡುತ್ತಾನೆ  ಆದರೂ ಅವನ ಕಣ್ಣುಗಳಲ್ಲಿಲ್ಲ ಯಾವುದೇ ಗುರುತಿನ ಚಿಹ್ನೆ  ಕವಿತೆಯ ಸೊಗಸು: ಕವಿಯ ಒಬ್ಬ ಮಿತ್ರ ಅಸ್ವಸ್ಥನಾಗಿ ಆಸ್ಪತ್ರೆಯ ಕೋಣೆಯಲ್ಲಿ ಮಲಗಿದ್ದಾನೆ. ಅವನ ದೇಹಕ್ಕೆ ಹಲವು ಟ್ಯೂಬುಗಳನ್ನು ಚುಚ್ಚಿದ್ದಾರೆ. ಹೇಗೆ ಸಸ್ಯಗಳು ತಮ್ಮ ಬೇರುಗಳಿಂದ ನೀರು-ಆಹಾರಗಳನ್ನು ಎ

ಮೊದಲು

ಇಮೇಜ್
ಮೂಲ ಉರ್ದೂ ಗಜಲ್: ಕಿಶ್ವರ್ ನಾಹೀದ್ (ಪಾಕೀಸ್ತಾನ್) ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ವಿಶ್ವಾಸ ನಂಬಿಕೆಗಳಲ್ಲಿ ಕಳೆದು ಹೋಗಿದ್ದೆ ಮುಂಚೆ ಇಂದಿಗೂ ನಾನಿರುವುದು ಎಲ್ಲಿದ್ದೆನೋ ಮೊದಲು ಆಸೆಗಳು ನೆರಿಗೆಗಳಾಗಿ ಹೊಮ್ಮಿದವು  ಇದ್ದವು ಎದೆಯಲ್ಲಿ ಗಾಯಗಳು ಮೊದಲೇ  ಈಗಂತೂ ಅಳುತ್ತೇನೆ  ಪ್ರತಿಯೊಂದು ಮಾತಿಗೂ  ಲಾಭ ನಷ್ಟಗಳ ಲೆಕ್ಕ ಹಾಕುತ್ತಿದ್ದೆ ಮೊದಲು  ಎದೆಯಿಂದ ಹೊರಗೆ ತೆಗೆದಂತೆ ಯಾವುದೋ ಮುಳ್ಳು  ಕಣ್ಣುಗಳಿಂದ ನೀರು ಹರಿಯುತ್ತಿದ್ದವು ಮೊದಲೇ  ಸಭೆಗೆ ಈಗೇನಿದ್ದರೂ ಹಾಜರಿ ಹಾಕಬೇಕೆಂದು ಅಷ್ಟೇ  ಹೃದಯ  ಕೈಯಲ್ಲಿ ಹಿಡಿದು ಬರುತ್ತಿದ್ದೆ ಮೊದಲು  ಹೆಗಲಿನ ಮೇಲಿರುವುದು ತಲೆಯೋ ಇಲ್ಲ ಹಿಮಗಲ್ಲೋ  ನಾಲಗೆಯಿಂದ ಹೊರಡುತ್ತಿದ್ದವು ಜ್ವಾಲೆಗಳು ಮೊದಲು  ಪ್ರತಿಯೊಂದು ಜುಲುಮೆಗೂ ಈಗ ಮುಕ್ತದ್ವಾರ  ಸಣ್ಣ ಸಂಗತಿಯೂ ನೋವು ನೀಡುತ್ತಿತ್ತು ಮೊದಲು  ನನಗೆ ಒಡಹುಟ್ಟಿದ ಸೋದರಿ ಈ ನನ್ನ ಮೌನ  ಇಂಥ ಸಂಬಂಧಗಳಾದರೂ ಎಲ್ಲಿದ್ದವು ಮೊದಲು?

ವಿಜಯಿಗಳು

ಇಮೇಜ್
ಮೂಲ ಚೈನೀಸ್ : ಯಾವೋ ಫೆಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  (ಟಿಪ್ಪಣಿ: ಎವರೆಸ್ಟ್ ಪರ್ವತಕ್ಕೆ ಚೈನಾದಲ್ಲಿ ಚೋಮೋಲಂಗ್ಮಾ ಎಂಬ ಹೆಸರಿದೆ) ಎವರೆಸ್ಟ್ ಪರ್ವತವನ್ನು ಹತ್ತಿದವರಲ್ಲಿ  ಬಹಳಷ್ಟು ಮಂದಿ ಸಾವನ್ನಪ್ಪಿದರು ಅರ್ಧದಲ್ಲೇ  ಉಳಿದವರು ತುದಿಯನ್ನೇರಿ  ಬಾವುಟ ಬೀಸಿ ನೋಡುತ್ತಾ ಲೆನ್ಸ್ ಕಡೆಗೆ   ಜಾಹೀರು ಮಾಡಿದರು ಜಗತ್ತಿಗೆ  ತುತ್ತತುದಿಯ ಮೇಲೆ ತಮ್ಮ ವಿಜಯ ಸಾಧನೆ ಕಡೆಗಣಿಸಿತು ಕ್ಯಾಮೆರಾ ಕಣ್ಣು  ಮೂಲೆಯಲ್ಲಿ  ಸುಮ್ಮನೇ  ನಿಂತಿದ್ದ ಶೇರ್ಪಾಗಳನ್ನು  ಅವರು ಕೂಲಿಗಳು, ಬರುವುದಿಲ್ಲ ವಿಜಯಿಗಳ ಲೆಕ್ಕದಲ್ಲಿ  ಎರಡು ಸಾವಿರ ಡಾಲರ್ ಇಟ್ಟರೆ ಕೈಯಲ್ಲಿ  ಯಾವುದೇ ವಿಜಯಿಗೆ  ನೀಡುತ್ತಾರೆ ಸಹಾಯ  ಚೋಮೋಲಂಗ್ಮಾ ಮೇಲೆ ಸಾಧಿಸಲು ವಿಜಯ 

ಒಬ್ಬಿಬ್ಬರಾದರೆ ತಿಳಿಸಿ ಹೇಳಬಹುದಾಗಿತ್ತು

ಇಮೇಜ್
ಮೂಲ ರಚನೆ : ಮಹಾತ್ಮಾ ಕಬೀರ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಓದುವ ಮುನ್ನ: ಕಬೀರನ ಈ ರಚನೆಯನ್ನು "ಭಜನೆ" ಅಥವಾ "ಕೀರ್ತನೆ" ಎಂದು ಕರೆಯುವುದು ಅಷ್ಟು ಒಪ್ಪುವುದಿಲ್ಲ. ಏಕೆಂದರೆ ಕಬೀರ ಇಲ್ಲಿ ಯಾವುದೇ ದೇವರನ್ನು ಭಜಿಸುತ್ತಿಲ್ಲ, ಯಾರ ಕೀರ್ತಿಯನ್ನೂ ಹೊಗಳುತ್ತಿಲ್ಲ.  ಅವನು ಇಲ್ಲಿ ಹೇಳುತ್ತಿರುವುದು ಜೀವನದ ಕಹಿ ಸತ್ಯಗಳನ್ನು.  ಎಲ್ಲರೂ ಹೊಟ್ಟೆಪಾಡಿನ ಧಂಧೆಯಲ್ಲಿ ತೊಡಗಿಕೊಂಡು ಜೀವನದ ಸತ್ಯಗಳನ್ನು ಮರೆತಿರುವುದು ಅವನಿಗೆ ಸೋಜಿಗ ತರುತ್ತಿದೆ. "ಎಷ್ಟು ಜನರಿಗೆ ತಿಳಿಸಿ ಹೇಳುವುದು, ಒಬ್ಬಿಬ್ಬರಾದರೆ ಎಬ್ಬಿಸಿ  ಹೇಳಬಹುದಾಗಿತ್ತು!" ಎಂದು ಅವನು ಮರುಗುತ್ತಾನೆ. ಅವನು ತಿಳಿಸಿ ಹೇಳಬೇಕಾಗಿರುವುದು ನಮ್ಮ ಬದುಕು ನಶ್ವರ ಎಂಬ ಸತ್ಯ. ನಮ್ಮ ಶರೀರದಲ್ಲಿರುವುದು ನೀರು. ಅದರಲ್ಲಿ ಹರಿಯುತ್ತಿರುವುದು ವಾಯು. ಹೇಗೆ ಮಂಜಿನ ಹನಿಯನ್ನು ಗಾಳಿ ಆರಿಸಿ ಕೊಂಡೊಯ್ಯುವುದೋ ಹಾಗೆ ಒಂದು ದಿನ ನಮ್ಮ ಶರೀರವೂ ನಾಶವಾಗುವುದು ಖಂಡಿತ ಎಂಬುದು ಕಬೀರನ ವಾಣಿ.  ಜೀವನವು ಒಂದು ಅನಾದಿ ಅನಂತ ನದಿ. ಹೊಳೆಯ ಆಳ-ಹರಿವು ಇವುಗಳ ಅರಿವೇ ಇಲ್ಲದೆ ಹೊರಟ ಅಂಬಿಗನಿಗೆ ಮೃತ್ಯು ಕೊರಳಿಗೆ ಕಟ್ಟಿದೆ. ದೋಣಿಗೆ ಹಗ್ಗ ಕಟ್ಟಿದ ಹಾಗೆ ಅಂಬಿಗನ ಕೊರಳಿಗೆ ಹಗ್ಗ ಕಟ್ಟಿದೆ ಎಂಬ ರೂಪಕ ಕೂಡಾ ಸುಂದರವಾಗಿದೆ.   ಒಬ್ಬಿಬ್ಬರಾದರೆ ತಿಳಿಸಿ ಹೇಳಬಹುದಾಗಿತ್ತು  ಎಲ್ಲ   ಮರೆಸಿದೆ  ಹೊಟ್ಟೆಪಾಡು ಎಲ್ಲರಿಗೂ  ನೀರಿನ ಶರೀರದಲ್

ನಾಂಜಿಂಗ್

ಇಮೇಜ್
ಕವಿತೆ ಓದುವ ಮುನ್ನ: ಯಾವೋ ಫೆಂಗ್ ಚೈನಾ ದೇಶದ ಸುಪ್ರಸಿದ್ಧ ಕವಿ. ವಿವಾದಾತ್ಮಕ ಕವಿ ಕೂಡಾ. ಈತನ ಕವಿತೆಗಳ ಭಾಷೆ ಒರಟು ಎನ್ನಿಸಬಹುದು. ಪ್ರಸ್ತುತ ಕವಿತೆಯಲ್ಲಿ ಅವನು ನಾಂಜಿಂಗ್ ಪ್ರಾಂತದ ಬಗ್ಗೆ ಬರೆಯುತ್ತಾನೆ. ಮೊದಲು ಕವಿತೆಯನ್ನು ಒಮ್ಮೆ ಓದಿ. ನಂತರ ಕೆಳಗಿನ ಟಿಪ್ಪಣಿಯನ್ನು ಓದಿ  ಚೈನಾ ಮತ್ತು ಜಪಾನ್ ನಡುವಣ ಯುದ್ಧದಲ್ಲಿ ನಾಂಜಿಂಗ್ ದೇಶದ ಮೇಲೆ ಬಹುದೊಡ್ಡ ಅತ್ಯಾಚಾರವಾಯಿತು. ಜಪಾನ್ ದೇಶದ ಯೋಧರು ಬಹಳ ದೊಡ್ಡ ಪ್ರಮಾಣದಲ್ಲಿ ನಾಂಜಿಂಗ್ ಪ್ರಾಂತದಲ್ಲಿ ಕೊಲೆ, ಅತ್ಯಾಚಾರಗಳಲ್ಲಿ ತೊಡಗಿದ್ದು ಇತಿಹಾಸ.  ಆದರೆ ಕವಿಗೆ ನಾಂಜಿಂಗ್ ಪ್ರಾಂತದ ಮೇಲೆ ನಡೆಯುತ್ತಿರುವ ಇನ್ನೊಂದು ಅತ್ಯಾಚಾರದ ಬಗ್ಗೆ ಮಾತಾಡಬೇಕಾಗಿದೆ.   ಹೇಗೆ ಗ್ಲೋಬಲೀಕರಣದ ಕಾಲಮಾನದಲ್ಲಿ ಬೆಂಗಳೂರು ತನ್ನ ರೂಪವನ್ನು ಕಳೆದುಕೊಂಡಿತೋ ನಾಂಜಿಂಗ್ ಪ್ರಾಂತವೂ ಅದೇ ಬಗೆಯ "ಮಾನಭಂಗ"ವನ್ನು ಅನುಭವಿಸಿತು. ನೂರಾರು ಉದ್ಯಮಗಳಿಗೆ ತವರಾದ ನಾಂಜಿಂಗ್ ಪ್ರಾಂತದಲ್ಲಿ ವಾಯುಮಾಲಿನ್ಯ, ಟ್ರಾಫಿಕ್ ಸಮಸ್ಯೆ ಇವೆಲ್ಲವೂ ಉಲ್ಬಣಿಸಿದವು.  ಅದೆಷ್ಟೋ ಮರಗಳು ಕಡಿಯಲ್ಪಟ್ಟವು.  ಗಗನಚುಂಬಿಗಳು, ಫ್ಲೈ-ಓವರ್ ಗಳು ಎದ್ದುನಿಂತವು.  ಭ್ರಷ್ಟಾಚಾರ ಹೊಗೆಯಾಡಿತು.  ಈ ಹಿನ್ನೆಲೆಯನ್ನು ಇಟ್ಟುಕೊಂಡು ಕವಿತೆಯನ್ನು ಮತ್ತೊಮ್ಮೆ ಓದಿ.  ಮೂಲ : ಯಾವೋ ಫೆಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಸಣ್ಣಗೆ ಮಳೆ ಹೊಯ್ಯುತ್ತಿದೆ  ನಾನು ಮತ್ತೆ ನಾಂಜಿಂಗ್ ಗೆ ಬಂದಿದ್ದೇನೆ 

ಕಾಬುಲ್

ಇಮೇಜ್
ಕವಿತೆ ಓದುವ ಮುನ್ನ: ಶಕೀಲಾ ಅಜೀಜ್ ಜಾದಾ (1964-) ಕಾಬುಲ್ ನಗರದಲ್ಲಿ ಹುಟ್ಟಿಬೆಳೆದರೂ ಅಫ್ಘಾನಿಸ್ತಾನದ ಸಂಘರ್ಷದ ಕಾರಣ ನೆದರ್ಲ್ಯಾಂಡ್ಸ್ ದೇಶಕ್ಕೆ ಹೋಗಿ ನೆಲೆಸಬೇಕಾಯಿತು. ಮೊದಲು ರಷ್ಯಾ, ಅನಂತರ ತಮ್ಮದೇ ದೇಶದ ಉಗ್ರರ ಕೈಗೆ ಸಿಕ್ಕಿ ಅಫ್ಘಾನಿಸ್ತಾನದ ಕ್ರಮಬದ್ಧ ವಿನಾಶವನ್ನು ಅನೇಕ ಕವಿಗಳು, ಕತೆಗಾರರು, ಕಾದಂಬರಿಕಾರರು ಚಿತ್ರಿಸಿದ್ದಾರೆ. ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ಕಾಬುಲ್ ನಗರದಲ್ಲಿ ತಮ್ಮ ಬಾಲ್ಯದ ದಿನಗಳನ್ನು ನೆನೆದಾಗ ತಮಗೆ ಉಂಟಾಗುವ ಸಂಕಟವನ್ನು ತೋಡಿಕೊಳ್ಳುತ್ತಾರೆ. ಬಾಲಾ ಹಿಸ್ಸಾರ್ ಎಂಬುದು ಕಾಬುಲ್ ನಗರದಲ್ಲಿರುವ ಗುಡ್ಡದ ಮೇಲಿರುವ ಕೋಟೆ. ಇದರ  ಬುಡದಲ್ಲಿ ಸ್ಮಶಾನವಿದೆ. ಈ ಕವಿತೆಯಲ್ಲಿ "ಬಲತೋಳಿನ ದೇವತೆ" ಎಂಬುದಕ್ಕೆ ಎರಡು ಅರ್ಥಗಳಿರಬಹುದು. ಇಂಥ ದೇವತೆಗಳು ಭುಜಗಳ ಮೇಲೆ ಸದಾ ಕುಳಿತಿದ್ದು ನಮ್ಮ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು ಗಮನಿಸುತ್ತಿರುತ್ತವೆ ಎಂದು ನಂಬುತ್ತಾರೆ. ಕಾರ್ಟೂನ್ ಚಿತ್ರಗಳಲ್ಲಿ ಇಂಥ ಚಿತ್ರಗಳನ್ನು ಬಳಸುವುದನ್ನು ಕೂಡಾ ನಾವು ನೋಡುತ್ತೇವೆ. ಬೇಸಗೆಯ ರಜೆಗಳಲ್ಲಿ ಮನೆಯಲ್ಲಿದ್ದಾಗ ಮಕ್ಕಳು ಇಂಥ ಕಾರ್ಟೂನ್ ಚಿತ್ರಗಳನ್ನು ನೋಡುವ ಬಗ್ಗೆ ಕೂಡಾ ಲೇಖಕಿ ಉಲ್ಲೇಖಿಸುತ್ತಿರಬಹುದು.  ಮೂಲ : ಶಕೀಲಾ ಅಜೀಜ್ ಜಾದಾ  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕಾಬುಲ್ ಗಾಗಿ ನನ್ನ ಎದೆ ಮಿಡಿಯುವುದು  ಬಾಲಾ ಹಿಸ್ಸಾರ್ ಕೋಟೆಯ ಇಳಿಜಾರುಗಳಿಗಾಗಿ  ಅದರ ಕಾಲಬುಡದಲ್ಲಿ ತಾನೇ

ಬಿತ್ತರ

ಇಮೇಜ್
ಸಿ.ಪಿ. ರವಿಕುಮಾರ್ 'ಫೇಸ್ ಬುಕ್ ಮೇಲೆ ಈ ಚರ್ಚೆಗಳು ಅತಿಯಾದವು!' ಎಂದು ಗೋಪಿ ಉದ್ಗರಿಸಿದ. ಅವನಿಗೆ ಸ್ವಲ್ಪ ಸಿಟ್ಟು ಬಂದಹಾಗಿತ್ತು. ಅವನ ನೆಚ್ಚಿನ ರಾಜಕಾರಣಿಯನ್ನು ಯಾರೋ ಹಂಗಿಸಿ ಮೀಮ್ ಮಾಡಿದ್ದರು. ಅವನ ಮಿತ್ರ ಶ್ರೀರಾಮ್ ಕೂಡಾ ಗೋಪಿಯ ಮಾತಿಗೆ ಸಹಮತಿ ಸೂಚಿಸಿದ. 'ಗಾಂಧಿಯಾಗಲಿ ರಾಧಾಕೃಷ್ಣನ್ ಆಗಲಿ ಇವರ ಹಲ್ಲಿಗೆ ಸಿಕ್ಕದವರೇ ಇಲ್ಲ. ಯಾರೋ ವಾಂತಿ ಮಾಡಿಕೊಂಡಿದ್ದನ್ನೆಲ್ಲಾ ನಮಗೆ ಇವರು ಹಂಚುವವರು' ಎಂದು ಸಿಡಿದ. ಅವತ್ತು ಇದೇ ಚರ್ಚೆಯ ವಿಷಯವಾಯಿತು. ಆಗ ಮೂರ್ತಿ ಒಂದು ಕಥೆ ಹೇಳಿದರು. ಗುರು ನಾನಕ್ ಮತ್ತು ಅವರ ಶಿಷ್ಯoದಿರು ಆ ಹಳ್ಳಿಗೆ ಆಗಮಿಸಿದಾಗ ಹಳ್ಳಿಯ ಜನ ಅವರನ್ನು ಆದರದಿಂದ ಬರಮಾಡಿಕೊಂಡರು. ಆಯಾಸ ಪರಿಹಾರಕ್ಕಾಗಿ ಪಾನಕ ಮತ್ತು ಮಜ್ಜಿಗೆ ಕೊಟ್ಟರು. ಬೀಸಣಿಕೆಯಿಂದ ಗಾಳಿ ಹಾಕಿದರು. 'ನಮ್ಮ ಊರಿನಲ್ಲಿ ಸ್ವಲ್ಪ ದಿನಗಳ ಕಾಲ ಇದ್ದುಹೋಗಬೇಕು. ಪ್ರವಚನ ಮಾಡಬೇಕು. ನಿಮ್ಮ ಆತಿಥ್ಯದ ಹೊಣೆ ನಮ್ಮದು' ಎಂದು ಉಪಚರಿಸಿದರು. ಆದರೆ ಗುರುಗಳು ಸಂಜೆಯ ಪ್ರವಚನದ ನಂತರ ಹೊರಡುವ ನಿರ್ಧಾರ ಪ್ರಕಟಿಸಿದರು. ಊರಿನ ಜನ ಪ್ರವಚನವನ್ನು ಶಾಂತವಾಗಿ ಕುಳಿತು ಕಿವಿಗೊಟ್ಟು ಕೇಳಿದರು. ನಂತರ ಗುರುಶಿಷ್ಯರ ಭೋಜನದ ವ್ಯವಸ್ಥೆ ಮಾಡಿದರು. ಹೊರಡುವಾಗ ಗುರುಗಳ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಬೇಡಿದರು. ಗುರುಗಳು 'ನೀವು ಹರಡಿಹೋಗುವಂತಾಗಲಿ' ಎಂದು ಆಶೀರ್ವಚನ ನುಡಿದುಬಿಟ್ಟರು! ಊರಿನವರು ಸುಮ್ಮನಿದ್ದರು

ಬೆಲೆ

ಇಮೇಜ್
ಕಥೆ - ಸಿ. ಪಿ. ರವಿಕುಮಾರ್  ಸಿಯರಾ ಲಿಯೋನಿ ಎಂಬುದು ಪಶ್ಚಿಮ ಆಫ್ರಿಕಾದಲ್ಲಿರುವ ಪುಟ್ಟ ದೇಶ. ಅಲ್ಲಿ ಒಬ್ಬ ಕ್ರಿಶ್ಚಿಯನ್ ಪಾದ್ರಿಯ ಮನೆ. ಉಬ್ಬುಸ ಪಡುತ್ತಾ ಇಬ್ಬರು ಕೆಲಸಗಾರರು ಓಡಿ ಬಂದು ಬಾಗಿಲು ತಟ್ಟಿದರು. ಅವರು ತಂದ ಸುದ್ದಿ ಕೇಳಿದರೆ ಯಾರಿಗಾದರೂ ಒಂದು ಕ್ಷಣ ಉಸಿರು ಸಿಕ್ಕಿಹಾಕಿಕೊಳ್ಳುತ್ತದೆ. ಪಾದ್ರಿ ಕೂಡಲೇ ಕೋಟ್ ಮತ್ತು ಹ್ಯಾಟ್ ಧರಿಸಿ ಬೂಟು ಹಾಕಿಕೊಂಡು ಅವರ ಜೊತೆಗೆ ಹೊರಟ. ಅವನಿಗೆ ಸೇರಿದ ಭೂಮಿಯಲ್ಲಿ ಅಗೆಯುವ ತಂಡಕ್ಕೆ ದೊಡ್ಡದೊಂದು ವಜ್ರ ಸಿಕ್ಕಿತ್ತು. 'ಏನಿಲ್ಲ ಅಂದರೂ ಐನೂರು ಕ್ಯಾರಟ್ ಇದ್ದೀತು ಒಡೆಯಾ' ಎಂದು ಒಬ್ಬ ಆಳು ಹೆಮ್ಮೆಯಿಂದ ಹೇಳಿದ. ಒಡೆಯ ಮಾತಾಡಲಿಲ್ಲ. 'ಇದರ ಬೆಲೆ ಎಷ್ಟಿದ್ದೀತು ಒಡೆಯಾ?' ಇನ್ನೊಬ್ಬ ಕೇಳಿದ. ಪಾದ್ರಿ ಇದಕ್ಕೂ ಉತ್ತರಿಸದೆ ಸುಮ್ಮನಿದ್ದ. ಅವನ ಮನಸ್ಸಿನಲ್ಲಿ ಅದೇನೋ ಹೊಯ್ದಾಟ ನಡೆದಿತ್ತು. ಅವರು ಅಗೆತ ನಡೆಯುತ್ತಿದ್ದ ಸ್ಥಳಕ್ಕೆ ಬಂದಾಗ ಆಳುಗಳೆಲ್ಲಾ ಚಪ್ಪಾಳೆ ತಟ್ಟಿ ಹೋ ಎಂದು ಹರ್ಷೋದ್ಗಾರ ಮಾಡಿದರು. ಅವರೆಲ್ಲರೂ ಹಿಂದೆ ಸರಿದು ನಿಂತರು. ಆಳುಗಳ ಸರದಾರ ಮುಂದೆ ಬಂದು ಒಡೆಯನಿಗೆ ವಜ್ರವನ್ನು ಮುಷ್ಟಿಯಲ್ಲಿ ಇಟ್ಟುಕೊಂಡೇ ತೋರಿಸಿದ. ಪಾದ್ರಿ ಅದನ್ನು ಕೈಗೆತ್ತಿಕೊಂಡು ಒಮ್ಮೆ ನೋಡಿ ಅನಂತರ ಆಕಾಶದ ಕಡೆಗೆ ನೋಡಿದ. ತನ್ನ ಎದೆಯ ಮೇಲೆ ಕ್ರಾಸ್ ಮಾಡಿದ. 'ಓಬೂಟಾ, ಮಿ. ಕಾನೋಗೆ ಫೋನ್ ಮಾಡಿ ನಾಳೆ ಬೆಳಗ್ಗೆ ಭೇಟಿ ಮಾಡಲು ಅವಕಾಶ ಕೇಳು.' ಒಂದು ಕ್ಷ

ಕಳಚಬಹುದಾದದ್ದೆಲ್ಲಾ ಕಳಚಿದ ಮೇಲೆ

ಇಮೇಜ್
ಮೂಲ: ಯಾವೋ ಫೆಂಗ್ (ಚೈನಾ) ಕನ್ನಡಕ್ಕೆ - ಸಿ. ಪಿ. ರವಿಕುಮಾರ್ ರವಿಕುಮಾರ್  ಕಳಚಬಹುದಾದದ್ದೆಲ್ಲಾ ಕಳಚಿದ ಮೇಲೆ  ನನ್ನ ತೂಕ ಎಪ್ಪತ್ತು ಕಿಲೋ  ಇದು ಕೇವಲ ದೇಹದ ತೂಕ  ಆತ್ಮದ್ದು ಸೇರಿಲ್ಲ  ಆತ್ಮಕ್ಕೆ ಒಟ್ಟಾರೆ ಇಷ್ಟೆಂದು ತೂಕವಿಲ್ಲ  ಅದರ ಹಕ್ಕಿ ಗರಿಯ ತೂಕಕ್ಕೆ  ನೀವು ಸೇರಿಸಬೇಕು ಕತ್ತಲೆಯ ತೂಕ  ಮತ್ತು ಸೇರಿಸಬೇಕು ಪಾಳುಗಳ ತೂಕ 

ಟಿಪ್ಪಣಿ 1

ಇಮೇಜ್
ಕವಿತೆ ಓದುವ ಮುನ್ನ: ಈ ಕವಿತೆಯನ್ನು ಬರೆದವನು ಪ್ರಸಿದ್ಧ ಕ್ಯೂಬನ್ ಕವಿ ಆಸ್ಕರ್ ಕ್ರೂಜ್ (೧೯೭೯-). ಹತ್ತು ಸಲ ಸತತವಾಗಿ ಕ್ಯೂಬನ್ ಸಾಹಿತ್ಯ ಪ್ರಶಸ್ತಿಯನ್ನು ಗೆದ್ದುಕೊಂಡ ಕೀರ್ತಿ ಇವನದ್ದು. ಈತನ ಭಾಷೆ ಒರಟು ಮತ್ತು 'ಸುಸಂಸ್ಕೃತ'ರಿಗೆ ಆಘಾತಕಾರಿ. ಪ್ರಸ್ತುತ ಕವಿತೆಯಲ್ಲಿ ಈತ ಕಾವ್ಯದ ಬಗ್ಗೆ ಮತ್ತು ಕಾವ್ಯರಚನೆಯ ಬಗ್ಗೆ ಬರೆದಿದ್ದಾನೆ. ಕಾವ್ಯ ಬರೆಯುವ (ಮತ್ತು ಓದುವ) ಪ್ರಕ್ರಿಯೆಗೆ ಈತ ನೀಡುವ  ನೈಸರ್ಗಿಕ ಕ್ರಿಯೆಯ ಉಪಮೆ ಯಾರಿಗಾದರೂ ಒಂದು ಕ್ಷಣ ಅಸಹ್ಯ ಎನ್ನಿಸಬಹುದು. ಕವಿತೆ ಓದಿದ ನಂತರ ಈ ಟಿಪ್ಪಣಿ ಮತ್ತೊಮ್ಮೆ ಓದಿ ಅನಂತರ ಕವಿತೆಗೆ ಮತ್ತೊಮ್ಮೆ ಹಿಂದಿರುಗಿ. (ಈಗಿನ) ಬಹುತೇಕ ಕಾವ್ಯ ಕೆಟ್ಟ ಕಾವ್ಯ ಎಂದೂ ಕವಿ ಹೇಳುತ್ತಿರಬಹುದು! ಬಹುತೇಕ ಕೆಟ್ಟ ಕಾವ್ಯವನ್ನೇ ಓದುತ್ತಾ ಬದುಕವವರಿಗೆ (ಉದಾ. ವಿಮರ್ಶಕ)  ಕೊನೆಗೆ ಈ ಕಾವ್ಯದ ದುರ್ನಾತ ಹತ್ತಿಕೊಳ್ಳುತ್ತದೆ ಎಂಬ ಕವಿಯ ಅನ್ನಿಸಿಕೆ ಅತಿಶಯೋಕ್ತಿಯೇನಲ್ಲ! ಕವಿತೆಯ ಕೆಲಸ ಒಂದು ವಿಧದಲ್ಲಿ ನೋಡಿದರೆ  ಕರುಳಿನ ಹಾಗೆ  ತಿಂದದ್ದರಲ್ಲಿ ರಸವನ್ನು  ಹೀರಿಕೊಳ್ಳುವುದು  ಅಷ್ಟೇ ಅಲ್ಲ  ಉಳಿದಿದ್ದನ್ನು ಹೊರಗೆಸೆಯುವುದೂ ಕೂಡಾ.  ಹೀಗಾಗಿ ಭಾವನೆಗಳು  ಗುದದ್ವಾರದ ಹಾಗೆ  ಅರಳುತ್ತವೆ ಮತ್ತು ಸಂಕುಚಿತಗೊಳ್ಳುತ್ತವೆ.  ಕೆಟ್ಟ ಕಾವ್ಯ ಅತಿಯಾದರೆ  ಗುದದ್ವಾರ ವಿಫಲವಾಗುತ್ತದೆ.  ಕಾವ್ಯಕ್ಕೇ ಜೀವನ ಮುಡುಪಾಗಿಟ್ಟು ಬದುಕ

ಸಂಪೂರ್ಣ ಆಹಾರ

ಇಮೇಜ್
ಈ ಕವಿತೆಯನ್ನು ಬರೆದವಳು ಲೆಗ್ನಾ ರಾಡ್ರಿಗ್ಸ್ ಎಂಬ ಕ್ಯೂಬನ್ ಕವಯಿತ್ರಿ (೧೯೮೪-). ಅಮೆರಿಕಾ ದೇಶಕ್ಕೆ ಹೋದಾಗ ತನ್ನ ಅನುಭವಗಳನ್ನು ದಾಖಲಿಸಿ ಈಕೆ ಕವಿತೆಗಳನ್ನು ರಚಿಸಿದ್ದಾಳೆ. ಅಮೆರಿಕಾದಲ್ಲಿ ಸಾವಯವ ಆಹಾರ, ಸಂಪೂರ್ಣ ಆಹಾರ ಇವೆಲ್ಲಾ ಜನಪ್ರಿಯವಾಗಿವೆ. ಇಂಥದೊಂದು ಸಂಪೂರ್ಣ ಆಹಾರ ಮಳಿಗೆಗೆ ಹೋದಾಗ ಕವಯಿತ್ರಿಗೆ ಅವೆಲ್ಲಾ  ಎಷ್ಟು "ಸಹಜ" ಅಥವಾ ನೈಸರ್ಗಿಕವೋ ಅಷ್ಟೇ ಕೃತಕವೂ ಎಂಬಂತೆ ತೋರುತ್ತವೆ. ಹೂಕೋಸಿನಲ್ಲಿ  ಹುಳುಗಳು ಇರುವುದು ಸಹಜ ತಾನೇ! "ನೈಸರ್ಗಿಕ' ಜೋಳದ ಕಾಳು ತಿಂದಾಗ ಮುಖದ ಮೇಲೆ ಕಾಂತಿ ಬರುವುದೆಂಬ ಜಾಹೀರಾತು ನೋಡಿದಾಗ ಕವಯಿತ್ರಿಯ ಮುಖದಲ್ಲಿ ವ್ಯಂಗ್ಯದ ನಗುವೊಂದು ಬೆಳಗುತ್ತದೆ. ಹಸಿವನ್ನು ನೀಗುವ ಆಹಾರವನ್ನು ಇಷ್ಟೊಂದು ಗಂಭೀರವಾಗಿ ಇಷ್ಟೊಂದು ಗೋಜಲು ಮಾಡುವುದು ಕವಯಿತ್ರಿಗೆ ಸೋಜಿಗವೆನ್ನಿಸುತ್ತದೆ.  ಮೂಲ ಸ್ಪಾನಿಷ್ ಕವಿತೆ: ಲೆಗ್ನಾ ರಾಡ್ರಿಗ್ಸ್ ಇಗ್ಲೇಸಿಯಾಸ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಸರಿಯಪ್ಪ. ಬೀಜವೆಂದರೆ ಬೀಜ.  ನಡುವೆ  ಅಣಬೆ, ಕಡಲಜೊಂಡು, ಕ್ರಿಸ್ಟಿಯಾನ್ ಡಿಯೋರ್ ಅತ್ತರು.   ಸಾವಿವೆ ಎಣ್ಣೆಯೂ ಇದೆ ಸ್ವಾಮೀ  ತವಾ ಮೇಲೆ ಮೀನು ಹುರಿಯಲು.   ಇಲ್ಲಿ ಸಿಕ್ಕದೆ ಇರುವುದೇ ಇಲ್ಲ. ಕೀನ್ವಾ ರೊಟ್ಟಿ, ಹಣ್ಣು, ಗಿಣ್ಣು. ಹೂಕೋಸಿನಲ್ಲಿ ವಿಲವಿಲ ಹುಳು.  ಎಲ್ಲವೂ ಸ್ವಾದದಲ್ಲಿ ಪರಿಶುದ್ಧ;  ನನ್ನ ಚಹರೆ  ಬೆಳಗುವುದು  ಬೆಳಗಿದಾಗ ಒಳಗೆ ಜೋಳದ ಕಾಳು. 

ಅಮ್ಮಾ ನಾನು ಬಚಾವಾದೆ

ಇಮೇಜ್
ಕವಿತೆ ಓದುವ ಮುನ್ನ:  ಈ ಕವಿತೆಯನ್ನು ಬರೆದ ಜೆಹ್ರಾ ನಿಗಾಹ್ ಪಾಕೀಸ್ತಾನದ ಖ್ಯಾತ ಕವಯಿತ್ರಿ.  ಉರ್ದೂ ಕಾವ್ಯ ಪರಂಪರೆಯಲ್ಲಿ ಮಹಿಳೆಯರ ಪರವಾಗಿ ಧ್ವನಿ ಎತ್ತಿದ ಕವಯಿತ್ರಿಯರ ಸಾಲಿನಲ್ಲಿ ಇವರದ್ದು ಮುಂಚೂಣಿಯ ಸ್ಥಾನ.  ಭಾರತದ ಹೈದರಾಬಾದಿನಲ್ಲಿ ಹುಟ್ಟಿದ ಜೆಹ್ರಾ ೧೯೪೭ರ ವಿಭಜನೆಯಾದಾಗ ಪಾಕೀಸ್ತಾನಕ್ಕೆ ವಲಸೆ ಹೋಗಬೇಕಾಯಿತು. ಪ್ರಸ್ತುತ ಕವಿತೆಯಲ್ಲಿ ಒಂದು ಹೆಣ್ಣು ಭ್ರೂಣವು ತಾಯಿಯೊಂದಿಗೆ ಮಾತನಾಡುತ್ತಾ "ನಾನು ಹುಟ್ಟದೇ ಇದ್ದದ್ದೇ ಒಳ್ಳೆಯದಾಯಿತು, ಬಚಾವಾದೆ" ಎಂದು ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರಗಳತ್ತ ಗಮನ ಸೆಳೆಯುತ್ತದೆ. ಮೂಲ ಉರ್ದೂ ಕವಯಿತ್ರಿ: ಜೆಹ್ರಾ ನಿಗಾಹ್ (ಪಾಕೀಸ್ತಾನ್)  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ನಾನು ಬಚಾವಾದೆನಮ್ಮ, ಅಮ್ಮಾ ನಾನು ಬಚಾವಾದೆ  ನಿನ್ನ ನೆತ್ತರ ಗೋರಂಟಿಯಲ್ಲಿ ಮಿಂದು  ಕೆಂಪಾಗಿದೆ ನನ್ನ ಕಣವು  ಪ್ರತಿಯೊಂದೂ  ನನಗೆ ದೊರಕಿದ್ದರೂ ಒಂದು ರೂಪ-ಆಕಾರ  ರಕ್ತ ಹರಿಯುತ್ತಿತ್ತು ನರಮಾಂಸಗಳ ಗೂಡಿಗೆ   ಹೊಕ್ಕಿದ್ದರೆ ನನ್ನ ಕಣ್ಣುಗಳಲ್ಲಿ ಬೆಳಕು  ಶೃಂಗಾರಕ್ಕೆ ದೊರಕುತ್ತಿತ್ತು ಆಸಿಡ್ ಕಾಡಿಗೆ ಮಾರಿಬಿಡುತ್ತಿದ್ದರು ನನ್ನನ್ನು ಸಟ್ಟಾ ಬಜಾರಿನಲ್ಲಿ ಎಕ್ಸ್ಚೇಂಜ್ ಆಫರಿಗೆ  ಅಥವಾ ಉಪಯುಕ್ತಳಾಗುತ್ತಿದ್ದೆನೇನೋ  ಮರ್ಯಾದಾ ಹತ್ಯೆಗೆ  ನನ್ನ ಎಲ್ಲಾ ಕನಸುಗಳೂ ಅಪೂರ್ಣವಾಗೇ ಉಳಿದು  ಖಂಡಿತಾ ತಗ್ಗುತ್ತಿತ್ತು ಅಪ್ಪನ ಸ್ಥಾನ ಮರ್ಯಾದೆ  ತ

ನಿಸರ್ಗ

ಇಮೇಜ್
ಕವಿತೆ ಓದುವ ಮುನ್ನ: ಎಚ್. ಡಬ್ಲ್ಯೂ. ಲಾಂಗ್ ಫೆಲೋ ಒಬ್ಬ ಪ್ರತಿಷ್ಠಿತ ಅಮೆರಿಕನ್ ಕವಿ (1809-1882).  ಪ್ರಸ್ತುತ ಸಾನೆಟ್ಟಿನಲ್ಲಿ ಅವನು ನಿಸರ್ಗಕ್ಕೂ ಮಾನವನಿಗೂ ಇರುವ ತಾಯಿ-ಮಗುವಿನ ಸಂಬಂಧವನ್ನು ಚಿತ್ರಿಸಿದ್ದಾನೆ.  ರಾತ್ರಿಯಾದಾಗ  ದಣಿದಿದ್ದರೂ ನಿದ್ರಿಸದೇ ರಚ್ಚೆ ಮಾಡುವ ಮಗುವನ್ನು ರಮಿಸಿ ನಿದ್ದೆ ಮಾಡಿಸುವ ಅನುಭವವುಳ್ಳವರಿಗೆ ಈ ಕವಿತೆಯ ಧ್ವನಿ ಆಪ್ಯಾಯವಾಗುತ್ತದೆ.  ಎಲ್ಲವನ್ನೂ ಇಂದೇ ಅನುಭವಿಸಬೇಕೆಂಬ ಮಗುವಿನ ಹಠಕ್ಕೆ ಪ್ರೀತಿಯಿಂದ ಸಾಂತ್ವನ ನೀಡುವುದರ ಜೊತೆಗೇ ಮಗುವಿನ ಕೈಯಲ್ಲಿರುವ ಆಟಿಕೆಗಳನ್ನು ಜಾಣ್ಮೆಯಿಂದ ಪಡೆದುಕೊಳ್ಳುವ ತಾಯಿಯ ತಾಳ್ಮೆಯನ್ನು ಕಂಡಾಗ ಕವಿಗೆ  ಮನುಷ್ಯನನ್ನು ಹೀಗೇ ಒಂದೊಂದೇ ಹೆಜ್ಜೆ ಮುನ್ನಡೆಸುವ ಪ್ರಕ್ರಿಯೆಯ ದರ್ಶನವಾಗುತ್ತದೆ. ಬಹಳ ಸುಂದರವಾದ ಸಾನೆಟ್ಟಿನ ಕನ್ನಡ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ. ಮೂಲ ಸಾನೆಟ್ : ಎಚ್. ಡಬ್ಲ್ಯೂ ಲಾಂಗ್ ಫೆಲೋ  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಮುಗಿದು ಹಗಲಿನ ಸಂಭ್ರಮ ಇಳಿದಾಗ ಇರುಳು ತಾಯಿ ಮೆಲ್ಲನೆ ಹಿಡಿದು ಮಗುವಿನ ಕೈಬೆರಳು ರಮಿಸಿ ಕರೆದೊಯ್ಯುವಳು ಹಾಸಿಗೆಯ ಕಡೆಗೆ. ಅನುಮಾನದ ಛಾಪಿದೆ ಎಳೆಮಗುವಿನ ನಡೆಗೆ - ಮುರುಕು ಆಟಿಗೆಗಳು ಹರಡಿಕೊಂಡಿವೆ ಸುತ್ತ ಅವುಗಳ ಕಡೆ ಹಿಂದಕ್ಕೆ ತಿರುಗಿ ನೋಡುತ್ತ ಅಳುವ ಮಗುವಿಗೆ "ಕೊಡಿಸುವೆನು ಇನ್ನಷ್ಟು ನಾಳೆ" ಎಂಬ ಸಾಂತ್ವನದಲ್ಲೂ ಕಾಣುವುದು  ಅನುಮಾನದ ಎಳೆ! ಹೀಗೇ ನಮ್ಮೊಂದಿಗೆ ನಿಸರ

ಬೈರನ್! ನಿನ್ನ ಕಾವ್ಯದಲ್ಲಿರುವ ನೋವದೆಷ್ಟು ಮಧುರ!

ಇಮೇಜ್
ಸಮಕಾಲೀನ ಕವಿ ಜಾರ್ಜ್ ಬೈರನ್ (1788-1824) ಕುರಿತು ಇನ್ನೊಬ್ಬ ಕವಿ ಜಾನ್ ಕೀಟ್ಸ್ (1795-1821) ರಚಿಸಿದ ಸಾನೆಟ್ಟಿನ ಅನುವಾದ.  ಮೂಲ ಸಾನೆಟ್ : ಜಾನ್ ಕೀಟ್ಸ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್    ಬೈರನ್! ನಿನ್ನ ಕಾವ್ಯದಲ್ಲಿರುವ ನೋವದೆಷ್ಟು ಮಧುರ! ಆತ್ಮವನು ಇನ್ನಷ್ಟು ಮಿದುಗೊಳಿಸಲು  ಸುಮಕೋಮಲ ಕರುಣೆ ನಡುಗುವ ಕೈಯಲ್ಲೆತ್ತಿಕೊಂಡು ತನ್ನೆದೆಗಿಂತ ಭಾರ ರುದ್ರವೀಣೆ   ಶಕ್ತಿಮೀರಿ ಮೀಟಿದಾಗ ಉಂಟಾದ ಆರ್ತ ಸ್ವರಸಂಚಾರ  ಸನಿಹದಲ್ಲಿದ್ದ ನೀನು ಹಿಡಿದಿಟ್ಟುಕೊಂಡಂತಿದೆ ಲಯವಾಗದಂತೆ.  ಬಿದ್ದಿದ್ದರೂ ನಿನ್ನ ಕಾವ್ಯದ ಮೇಲೆ ಗಾಢ ದುಃಖದ ನೆರಳು  ಕ್ಷತವಾಗದು ಅದರ ಹರ್ಷಗುಣ: ನಿನ್ನ ಶೋಕಗಳೂ  ದೇದೀಪ್ಯಮಾನವಾಗಿವೆ, ಪ್ರಜ್ವಲಿಸುತ್ತಿದೆ ಮೇಲೊಂದು ಪ್ರಭೆ! ಚಂದ್ರಮನ ಆವರಿಸಿಕೊಂಡರೂ ಕಾರ್ಮುಗಿಲ ಸೆರಗು  ಮುಗಿಲಂಚು ಕಂಗೊಳಿಸುವಂತೆ ಜರಿಯಂಚಿನ ಹಾಗೆ  ಅಮೃತಶಿಲೆಯಲ್ಲಿ ಹಾಸುಹೊಕ್ಕಾದ ಗೆರೆಗಳು ಹೇಗೆ  ಹಾಡುತ್ತವೋ ಕ್ಷೀಣದನಿಯಲ್ಲಿ ಸಂಗೀತ ಕೊನೆವರೆಗೂ  ಹೇಗೆ ಹಂಸೆಯು ಹಾಡುವುದೋ ಕೊನೆಯುಸಿರೆಳೆಯುವ ಮುನ್ನ  ಉಲಿಯುತ್ತಿದೆ ಹಾಗೆ ನಿನ್ನ ಸಾಲುಗಳು ಶೋಕಕಥೆಯ ಸವಿಯನ್ನ! (c) 2017, ಸಿ.ಪಿ. ರವಿಕುಮಾರ್