ಪೋಸ್ಟ್‌ಗಳು

ಏಪ್ರಿಲ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗೂಗೆ

ಇಮೇಜ್
ಚಿತ್ರ: ಪ್ರಕಾಶ್ ಆಡುವಳ್ಳಿ ನನ್ನ ಫೇಸ್ ಬುಕ್ ಮಿತ್ರ ಪ್ರಸನ್ನ ಆಡುವಳ್ಳಿ ಅವರ ವನ್ಯ ಛಾಯಾಚಿತ್ರಗಳು ಸ್ಫೂರ್ತಿದಾಯಕವಾಗಿವೆ. ಗೂಬೆಯ ಈ ಚಿತ್ರ ನೋಡಿದಾಗ ಎಡ್ವರ್ಡ್ ಥಾಮಸ್ ಬರೆದ ಕವಿತೆಯ ನೆನಪಾಯಿತು. ಇವನು ಇಂಗ್ಲೆಂಡ್ ದೇಶದಲ್ಲಿ 1878-1917 ಕಾಲದಲ್ಲಿ ಜೀವಿಸಿದ್ದ ಕವಿ. ಅವನ ಕವಿತೆಗಳಲ್ಲಿ ಯುದ್ಧ ವೇ ಪ್ರಮುಖ ವಸ್ತು. "ದ ಔಲ್" (ಗೂಗೆ) ಸುಮಾರು ನೂರುವರ್ಷಗಳ ಹಿಂದೆ ಬರೆದ ಕವಿತೆ.  ರಾತ್ರಿ ಒಳ್ಳೆಯ ಊಟ ಮಾಡಿ ಸುಖವಾಗಿ ಮಲಗಿದವನನ್ನು ಗೂಗೆಯ ಸದ್ದು ನಡುನಡುವೆ ಎಚ್ಚರಿಸುತ್ತದೆ,  ಕವಿಗೆ ಗೂಗೆಯ ಸದ್ದಿನಲ್ಲೂ ಒಂದು ಸಂದೇಶ ಕೇಳಿಸುತ್ತದೆ.  ಮೂಲ ಕವಿತೆ - ಎಡ್ವರ್ಡ್ ಥಾಮಸ್ (1917) ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಬೆಟ್ಟವಿಳಿದು ಬಂದಾಗ ಹಸಿದಿದ್ದರೂ ಹಪಹಪಿಯಿರಲಿಲ್ಲ ಕಾವಿತ್ತು ಮೈಯಲ್ಲಿ ಹೊರಗೆ ಚಳಿಯಿದ್ದರೂ. ಕಸುವಿತ್ತು ಕೊರೆವ ಚಳಿಗಾಳಿ ಎದುರಿಸಲು, ಬೇಡುತ್ತಿತ್ತು ದಣಿದ ಮೈ ಸ್ವಲ್ಪ ವಿಶ್ರಾಂತಿಯನ್ನು ಬೆಚ್ಚನೆಯ ಬೆಂಕಿಗೂಡು ವಿಶ್ರಾಂತಿಧಾಮದಲ್ಲಿ, ಬಿಸಿಯೂಟ, ಮಂಚ, ಮೆತ್ತನೆಯ ಹಾಸುಗೆ. ನಿದ್ರಿಸಿದೆ ಒರಗಿ ಕಣ್ಮುಚ್ಚಿದ ಕೂಡಲೇ ಹೊರಗೆ ನಿಶ್ಶಬ್ದ, ಹೊರತೊಂದು ಗೂಗೆ.  ಯಾವ ಉಲಿವಿರಲಿಲ್ಲ ಗೂಗೆಯ ನಿನಾದದಲ್ಲಿ ನೋವಿನಲ್ಲಿ ಊಳಿಟ್ಟಂತೆ, ದೀರ್ಘ ಗೋಗರೆತ; ಬಣ್ಣಿಸಿದ ಹಾಗಿತ್ತು ಎಷ್ಟೋ ಜನರ ಪಾಡನ್ನು, ನಾನು ತಪ್ಪಿಸಿಕೊಂಡ ಸನ್ನಿವೇಶ.   ಉಪ್ಪಿತ್ತು ನನ್ನ ಊಟದಲ್ಲಿ, ನನ್ನ ವಿಶ್ರಾಂತಿಯಲ್ಲೂ

ಹೊಸ ಅನುಭವ

ಇಮೇಜ್
ಮೂಲ ಕವಿತೆ - ಹರಿವಂಶರಾಯ್ ಬಚ್ಚನ್ ಕನ್ನಡಕ್ಕೆ - ಸಿ ಪಿ ರವಿಕುಮಾರ್ ಹಕ್ಕಿಯಲ್ಲಿ ನಾನು ತೋಡಿಕೊಂಡೆ ಬಯಕೆ: ಬರೆಯಬೇಕಾಗಿದೆ ನಿನ್ನ ಬಗ್ಗೆ ಕವಿತೆ. ಹಕ್ಕಿ ಕೇಳಿತು -"ನನ್ನ ರೆಕ್ಕೆಯ ಬಣ್ಣಗಳು ನಿನ್ನ ಶಬ್ದಗಳಲ್ಲಿದೆಯೇ?" "ಇಲ್ಲ" ಎಂದೆ ನಾನು. "ನಿನ್ನ ಶಬ್ದಗಳಲ್ಲಿದೆಯೇ ನನ್ನ ಕಂಠದಲ್ಲಿರುವ ಸಂಗೀತ?" "ಇಲ್ಲ" "ನನ್ನ ಹಾಗೆ ಹಾರಬಲ್ಲವೇ ನಿನ್ನ ಶಬ್ದಗಳು?" "ಇಲ್ಲ" "ಜೀವವಿದೆಯೇ ನಿನ್ನ ಶಬ್ದಗಳಲ್ಲಿ?" "ಇಲ್ಲ" "ಮತ್ತೆ, ಕವಿತೆ ಏನು ಬರೆಯುತ್ತೀ?" "ನಿನ್ನಲ್ಲಿ ನನಗಿರುವ ಪ್ರೇಮ ವ್ಯಕ್ತಗೊಳಿಸಲೇ ಬೇಕು, ಕವಿಯ ಕರ್ಮ" "ಪ್ರೇಮಕ್ಕೂ ಶಬ್ದಗಳಿಗೂ ಸಂಬಂಧವೆಲ್ಲಿದೆ?' ಹೊಳೆದು ಹೊಸದೇನೋ ಶರಣಾದೆ  ಮೌನಕ್ಕೆ.

ಮಕ್ಕಳಿಗೊಂದು ಬೇಸಗೆ ತರಬೇತಿ ಶಿಬಿರ

ಇಮೇಜ್
 ಸಿ   ಪಿ ರವಿಕುಮಾರ್ ಬೇಸಗೆ ರಜೆಯಲ್ಲಿ ಈ ವರ್ಷ ಮಕ್ಕಳಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು “ಟೆಕ್ಸಾಸ್ ಇನ್ಸ್ ಟ್ರುಮೆಂಟ್ಸ್” ಸಂಸ್ಥೆ ಆಯೋಜಿಸಿತ್ತು.  1985ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡ ಸಂಸ್ಥೆಯ ಭಾರತೀಯ ಕಚೇರಿಗೆ ಮೂವತ್ತು ವರ್ಷಗಳು ತುಂಬಿರುವ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಏಪ್ರಿಲ್ 6-7 ನಡೆದ ಈ ಬೇಸಗೆ ಶಿಬಿರದಲ್ಲಿ ಸಂಸ್ಥೆಯ ಆಧಾರ ಸೇವೆಗಳನ್ನು ಒದಗಿಸುವ ಉದ್ಯೋಗಿಗಳ ಮಕ್ಕಳಿಗಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ 11ರಿಂದ 18 ವರ್ಷದ ಮೂವತ್ತೈದು ಮಕ್ಕಳು ಪಾಲ್ಗೊಂಡರು.  “ಡಿಜಿಟಲ್ ಡಿವೈಡ್” ಎಂಬುದು ಇಂದಿನ ಬಹುದೊಡ್ಡ ಸಮಸ್ಯೆ. ಮನೆಗಳಲ್ಲಿ ಕಂಪ್ಯೂಟರ್  ಮತ್ತು ಇಂಟರ್ ನೆಟ್ ಉಳ್ಳ ಮಕ್ಕಳಿಗೆ ಜ್ಞಾನದ ದೊಡ್ಡ ಭಂಡಾರವೇ ಲಭ್ಯವಾಗುತ್ತದೆ.  ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಮಕ್ಕಳಿಗೆ ಶಾಲೆಗಳಲ್ಲೂ ಕಂಪ್ಯೂಟರ್ ಮತ್ತು ಇಂಟರ್ ನೆಟ್ ಬಳಕೆ ದುರ್ಲಭವಾಗಿರುತ್ತದೆ.  ಎರಡು ದಿನಗಳ ಕಾರ್ಯಕ್ರಮದಲ್ಲಿ ಶಾಲಾಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡಲಾಯಿತು.   ಮೊದಲ ದಿವಸ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮದ ಮೂಲಕ ಕಂಪ್ಯೂಟರ್ ಕುರಿತು ಮೂಲಭೂತ ವಿಷಯಗಳನ್ನು ಹೇಳಿಕೊಡಲಾಯಿತು.  ಪ್ರಶ್ನೆಗಳನ್ನು ಉತ್ತರಿಸಲು ಉತ್ತೇಜನ ನೀಡಿ ಎಲ್ಲರ ಮುಂದೆ ಆತ್ಮವಿಶ್ವಾಸದಿಂದ ಮಾತಾಡುವುದರ ಮೇಲೆ ಒತ್ತು ನೀಡಲಾಯಿತು. ಕಂಪ್ಯೂಟರ್ ಬಳಸಿ ಡ್ರಾಯಿಂಗ್ ತಯಾರಿಕೆ , ಪ್ರಾದರ್ಶಿಕೆಗಳ ತಯಾರಿಕೆ , ಲೇಖನಗಳನ್ನು ಟ

ಮನದ ಗಂಟುಗಳ ಬಿಡಿಸುವ ಬನ್ನಿ

ಇಮೇಜ್