ಪೋಸ್ಟ್‌ಗಳು

ಮೇ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಷ್ಟು ಮೋಹಕವಾಗಿದೆ ಹೊಸಪಲ್ಲವಿ!

ಇಮೇಜ್
ಮೂಲ ಸಾನೆಟ್ : ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಸಂಗ್ರಹದ ಏಳನೇ ಸಾನೆಟ್.  ಇದಕ್ಕೆ ಹಿಂದಿನ ಸಾನೆಟ್ಟುಗಳ  ಅನುವಾದವನ್ನು ನೀವು ಇದೇ ಬ್ಲಾಗಿನಲ್ಲಿ ಓದಬಹುದು. ಪ್ರಸ್ತುತ ಕವಿತೆಯಲ್ಲಿ  ಕವಯಿತ್ರಿಯು  ತನ್ನಲ್ಲಿ ಅಂಕುರಿತವಾದ ಪ್ರೇಮವು ತನ್ನನ್ನು ಸಾವಿನ ಅಂಚಿನಿಂದ ಹೇಗೆ ಕಾಪಾಡಿತು ಎಂಬ ಕೃತಜ್ಞತಾ ಭಾವನೆಯನ್ನು ವ್ಯಕ್ತಗೊಳಿಸುತ್ತಿದ್ದಾಳೆ.  ಇಡಿಯ ವಿಶ್ವದ ರೂಪವೇ ಬದಲಾದಂತೆ ನನಗೆ ತೋರುತ್ತದೆ, ಕೇಳಿದಾಗಿನಿಂದಲೂ ನಿನ್ನಾತ್ಮದ  ಹೆಜ್ಜೆಸಪ್ಪಳ! ಹಗುರ, ಓ ಬಹು ಹಗುರ ನಡೆಯಲ್ಲಿ  ಬಂದು ನಿಂತಿಹುದು ಹತ್ತಿರ, ನನಗೂ ಮತ್ತು ಆ ಭಯಾನಕ ಅಂಚಿಗೂ ನಡುವೆ.  ನಿಸ್ಸಂದೇಹವೂ ಅದು ಸಾವಿನಂಚು, ಮುಳುಗುತ್ತಿದ್ದೆನೇನೋ ನಾನು, ಪ್ರೇಮದ ಸುಳಿಯಲ್ಲಿ ಸಿಲುಕದಿದ್ದರೆ, ನನ್ನ ಜೀವನಕ್ಕೆ  ಪ್ರಾಪ್ತವಾಗದಿದ್ದರೆ ಹೀಗೆ ಹೊಸ ನರ್ತನದ ಹೆಜ್ಜೆ! ಸ್ವೀಕರಿಸುವೆ ದೈವ ನನಗಿತ್ತ ಪ್ರಸಾದರೂಪದ ಜೇನು, ನಿನ್ನ ಸಾನ್ನಿಧ್ಯವು ಅದಕ್ಕೆ ನೀಡುತ್ತಿದೆ ಅಪೂರ್ವ ಸವಿ! ಸ್ವರ್ಗವೆಂಬುದು ನನ್ನ ಹೊಸ ವಿಳಾಸದ ಹೆಸರು, ನೀನಿರುವ ಸ್ಥಾನಕ್ಕೆ ಬೇರೇನೆಂದು ಕರೆಯಬಹುದು? ಕೊಳಲ ದನಿಯಲ್ಲಿ ಎಷ್ಟು ಮೋಹಕವಾಗಿದೆ ಹೊಸಪಲ್ಲವಿ! ಹಾಗೇಕೆಂದು ಹಾಡುವ ಗಂಧರ್ವರಿಗೂ ಗೊತ್ತು- ಅವರ ಗಾನದಲ್ಲಿ ಸೇರಿಕೊಂಡಿರುವೆ ನೀನೆಂಬ ಗುಟ್ಟು. 

ಪ್ರಾಣಿಗಳಿಗೆ ಚಿರಂತನ ಮೃತ್ಯುಕೂಪ

ಇಮೇಜ್
ಮೂಲ: ಲೂಯಿ ಕ್ವಿಂಟಾಯ್ಸ್ (ಪೋರ್ಚುಗಲ್) ಕನ್ನಡಕ್ಕೆ: ಸಿ. ಪಿ. ರವಿಕುಮಾರ್    "ಪ್ರಾಣಿಗಳಿಗೆ ಚಿರಂತನ ಮೃತ್ಯುಕೂಪ." ನನಗೆ ಪ್ರಾಪ್ತವಾದ ನೆನಪಿನಲ್ಲಿ ವ್ಯಾಪಿಸಿದೆ ಬಲಿದಾನ.  ಅಮ್ಮ ನನ್ನ ಕೈ ಹಿಡಿದು ಕರೆದೊಯ್ಯುತ್ತಾಳೆ.  ನಾವು ವಧಾಸ್ಥಾನದ ಅಂಚಿಗೆ ಬಂದಿದ್ದೇವೆ.  ಜೀವನದ ಕೊನೆಯ ಘಳಿಗೆಯನ್ನು ಮುಟ್ಟಿದ ಕೋಳಿಗಳ ಸದ್ದು.  ಮುಗ್ಧತೆಯಿಂದ ಅವು ಕೊಕ್ ಕೊಕ್ ಎನ್ನುತ್ತಿವೆ.  ಅಲ್ಲೇ ಬಿದ್ದಿರುವ ಹೆಣಗಳ ದೃಶ್ಯದಲ್ಲಿ ಹಿಂಸೆ ಮಡುಗಟ್ಟಿದೆ,  ಎಲ್ಲೆಡೆ ಹರಡಿಕೊಂಡಿದೆ ಚೀರುತ್ತಿರುವ ಕರುಳುಗಳ ದುರ್ವಾಸನೆ.  ಕ್ರೋಧ ಮತ್ತು ಶಬ್ದಗಳು ಕುಸಿದುಬಿದ್ದು ಕೊಳೆಯುತ್ತಿವೆ.  ವಧಾಸ್ಥಾನದ ಅಂಚಿನಲ್ಲಿವೆ ಕಟ್ಟೆಗಳು, ಅಲ್ಲಿ ಕೇಳುತ್ತವೆ ಸತ್ಯ ಮತ್ತು ವ್ಯಾಪಾರದ ಕೂಗುಗಳು.  ದೊಡ್ಡ ಉಕ್ಕಿನ ಕೊಕ್ಕೆಗೆ ತೂಗಿಹಾಕಿದ  ದಪ್ಪನೆಯ ಮಾಂಸ ಮೆಲ್ಲನೆ ಅಲ್ಲಾಡುತ್ತದೆ.  ನೆಂದ ಪುಕ್ಕಗಳು ಎಲ್ಲಾ ಕಡೆ ಚೆಲ್ಲಿವೆ.  ಶಿರಚ್ಛೇದವಾದ ಹುಂಜವೊಂದು ಜಗತ್ತನ್ನು ತಬ್ಬಿಕೊಂಡಿದೆ.  ಅಂಚಿನಲ್ಲಿರುವ ಹಳ್ಳದಲ್ಲಿ ಕೂಡಿಕೊಳ್ಳುವ ರಕ್ತ  ಹೋಗಿ ಸೇರಿಕೊಳ್ಳುತ್ತದೆ ಎಲ್ಲೋ ದೂರ - ನನ್ನ ಕಲ್ಪನೆಯಲ್ಲಿ ಬೇರೊಂದು ದೇಶದಷ್ಟು ದೂರ.  ಕರುಳಿನ ವೇದನೆ ಒಂದಷ್ಟು ಕಡಿಮೆಯಾದಂತೆ ತೋರುತ್ತದೆ.  ಮಂದಿ ತಣ್ಣಗೆ ಕೂಡುತ್ತಿದ್ದಾರೆ ಮಧ್ಯಾಹ್ನದ ಊಟಕ್ಕೆ, ಎಳೆದುಕೊಂಡು ಪರದೆ.  ಹಿನ್ನೆಲೆ: ಕವಿತೆಯ ಪ್ರಾರಂಭದ

ಮಹಾಹಸಿವು

ಇಮೇಜ್
ಮೂಲ ಕವಿತೆ: ಸಾಂಗ್ ಕ್ಷಿಯಾವ್ ಕ್ಷಿಯಾನ್  (ಚೈನಾ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಉತ್ತರ ಚೈನಾದ ಮಹಾಮಾರ್ಗಗಳ ಮೇಲೆ  ಓಡಾಡುವ ಟ್ರಕ್ಕುಗಳಲ್ಲಿ   ದಕ್ಷಿಣದ ಗ್ವಾಂಗ್ ಷೌ ಪ್ರಾಂತಕ್ಕೆ ಸಾಗಿಸಲಾಗುತ್ತವೆ - ಹುನಾನ್ ಪ್ರಾಂತದಿಂದ ಬಂದ ಕೋಳಿ, ಜಿಯಾಂಗ್ ಷಿಯಿಂದ ಬಂದ ದನಗಳು,  ಮತ್ತು ಸಿಚುಆನ್ ಪ್ರಾಂತದಿಂದ ಬಂದ ಹಂದಿಗಳನ್ನು.  ಅಲ್ಲಿರುವ ಪರ್ಲ್ ನದಿಯ ತಟವು  ತಳವಿರದ ಪೀಪಾಯಿಯಂತೆ  ಅಲ್ಲಿಂದ ಇಲ್ಲಿಂದ ಬಂದ ಪ್ರಾಣಿಗಳನ್ನು  ನುಂಗಿಬಿಡುತ್ತದೆ ಒಂದೇ ತುತ್ತಿಗೆ.    ನುಂಗುತ್ತಲೇ ಇರುತ್ತದೆ ನಿರಂತರವಾಗಿ  ಬಾಯಿ ಮುಚ್ಚದೇ.  ಮಹಾಮಾರ್ಗಗಳನ್ನೇ ಮಾಡಿಕೊಂಡು ಹೊಟ್ಟೆ.  ಗೊತ್ತಿರುವುದೇ ಒಂದು ಅದಕ್ಕೆ, ನುಂಗು, ನುಂಗು, ನುಂಗು.  ದಟ್ಟ ಹೊಗೆಯ ಹೊದ್ದಿಕೆಯ ಹಿಂದೆ ನಾವು ಜೀರ್ಣಿಸಿಕೊಳ್ಳುತ್ತೇವೆ ಜೀರ್ಣಿಸಿಕೊಳ್ಳುತ್ತಲೇ ಇರುತ್ತೇವೆ, ಕೆಟ್ಟಹಸಿವು ನಮಗೂ.  ಪ್ರಾಣಿಗಳನ್ನೆಲ್ಲಾ ತಿಂದುಹಾಕಿದ ನಂತರ ಮುಂದೇನು? ಆಗ ನಾವು ಕೊಲ್ಲೋಣ ಕಾರುಗಳನ್ನು, ಏಡಿ ಮೀನುಗಳಂತೆ ಅವುಗಳನ್ನು ಗಟ್ಟಿಯಾಗಿ ಹಿಡಿದು, ಅದರ ಬೆಂಬದಿಯ ಚಿಪ್ಪನ್ನು ಕಿತ್ತು  ಹೀರೋಣ ಒಳಗಿರುವ ಘೃತವನ್ನು.  

ಒಟ್ಟಿನಲ್ಲಿ

ಇಮೇಜ್
ಮೂಲ: ಮಾರ್ಕೋ ವೆಸೋವಿಚ್ (ಬಾಸ್ನಿಯಾ ದೇಶ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಹಿನ್ನೆಲೆ: ಬಾಸ್ನಿಯಾ ದೇಶದ ರಾಜಧಾನಿ ಸರಯೇವೋ ನಗರದಲ್ಲಿ ಕವಿ ಮಾರ್ಕೋ ವೆಸೋವಿಎಚ್  (1945-) ವಾಸವಾಗಿದ್ದಾರೆ.  1992ರಲ್ಲಿ ಯುಗೋಸ್ಲಾವಿಯಾ ಸಂಯುಕ್ತ ರಾಷ್ಟ್ರದಿಂದ ಬಾಸ್ನಿಯಾ ಮುಕ್ತಿ ಘೋಷಿಸಿಕೊಂಡಿತು. ಆಗ  ಮೂರು ವರ್ಷಗಳ ಕಾಲ ನಿರಂತರ ಯುದ್ಧ ನಡೆಯಿತು. ಯುಗೋಸ್ಲಾವಿಯಾದ ಭಾಗವೇ ಆಗಿರಬೇಕು ಎಂದು ಬಯಸುವವರು ಮತ್ತು ಅದು ಮುಕ್ತ ದೇಶವಾಗಿರಬೇಕೆಂದು ಬಯಸುವವರ ನಡುವೆ ನಡೆದ ಯುದ್ಧದಲ್ಲಿ ಸಾಕಷ್ಟು ಹಿಂಸಾಚಾರ ನಡೆಯಿತು.  "ಸಂಜಾತಿ ಪರಿಶುದ್ಧಿ" ಎಂಬ ಹೆಸರಿನಲ್ಲಿ ಸಾವಿರಾರು ಬಾಸ್ನಿಯಾ ವಾಸಿಗಳ ಕೊಲೆ ನಡೆಯಿತು. ಮಾರ್ಕೋ ವೆಸೋವಿಎಚ್ ಈ ಮೂರೂ ವರ್ಷಗಳ ಕಾಲ ಸರಯೇವೋ ನಗರದಲ್ಲೇ ಇದ್ದು ಲೇಖನಗಳ ಮೂಲಕ "ಸಂಜಾತಿ ಪರಿಶುದ್ಧಿ"ಯ ವಿರುದ್ಧ ಮತ್ತು ಸಂಜಾತಿ ವೈವಿಧ್ಯದ ಪರವಾಗಿ ಬರೆದ ಲೇಖಕ. ಪ್ರಸ್ತುತ ಕವಿತೆಯನ್ನು ಈ ಹಿನ್ನೆಲೆಯಲ್ಲಿ ನೋಡಿ. ಕವಿತೆಯ ಪ್ರಾರಂಭದಲ್ಲಿ ಸ್ಮಶಾನದ ಉಲ್ಲೇಖವಿದೆ. ಬಹುಶಃ ಒಬ್ಬ ಬಾಸ್ನಿಯನ್ ಯೋಧನನ್ನು ದಫನದ ಉಲ್ಲೇಖವಿರಬಹುದು.  ಬಾರ್ಲಿಯ ತೆನೆಗಳು ಮತ್ತೆ ಬಲಿಯುತ್ತವೆ ಎಂಬ ಸಾಲಿನಲ್ಲಿ ಮನುಷ್ಯನ ಪುನರ್ಜನ್ಮದ ಬಗ್ಗೆ ಕವಿ ಹೇಳುತ್ತಿರಬಹುದು. ಆಗಿನ್ನೂ ಬಾಸ್ನಿಯಾ ದೇಶಕ್ಕೆ ಯಾವುದೇ ಚರಿತ್ರೆ ಇರಲಿಲ್ಲ.   ಆಕಾಶದ ಉಲ್ಲೇಖ ಇಲ್ಲಿ ಬಂದಿರುವುದಕ್ಕೆ ಬಹುಶಃ ಸತ್ತ ಯೋಧನ ಆತ್ಮವು ಆಕಾಶಕ್ಕೆ ಹೋಗಿ ಸೇರು

ನನ್ನ ಗೆಳೆಯ

ಇಮೇಜ್
ಮೂಲ: ವಿಲಿಯಮ್ ಆಗ್ಯುದೆಲೋ (ಕೊಲಂಬಿಯಾ ದೇಶ, ದಕ್ಷಿಣ ಅಮೆರಿಕಾ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಹಿನ್ನೆಲೆ: ಮಾದಕವಸ್ತುಗಳನ್ನು ರಫ್ತು ಮಾಡುವ ಧಂದೆಯೇ  ದೊಡ್ಡದಾಗಿರುವ ಕೊಲಂಬಿಯಾ ರಾಷ್ಟ್ರದಲ್ಲಿ "ಡ್ರಗ್ ಲಾರ್ಡ್" ಗಳದ್ದೇ ರಾಜ್ಯ. ಇಂಥ ಕಡೆ ನಡೆದ ಒಂದು ಮಾನವೀಯ ದುರಂತವನ್ನು ಈ ಕವಿತೆ ಹೇಳುತ್ತದೆ. ಹುಟ್ಟಾ ಕೃಷಿಕನಾದ ಒಬ್ಬ ಸಾಮಾನ್ಯ ರೈತನ ಜೀವನ ಹೇಗೆ ಬದಲಾಗಿಹೋಯಿತು ಎಂಬುದರ ಉಲ್ಲೇಖ ಈ ಕವಿತೆಯಲ್ಲಿದೆ.  ಟೊಮಾಸ್ ಆರ್ಗ್ವೆಲ್ಲೋ ಸ್ಯಾಂಡೋವಾಲ್, ಅಧ್ಯಕ್ಷರ ಸೋದರಳಿಯ, ನೋಡಲು ಒಳ್ಳೆ ಪುರಾತನ ಗ್ರೀಕ್ ಮೂರ್ತಿಯ ಹಾಗಿದ್ದಾನೆ, ಮನೆಯ ಬಾಗಿಲಷ್ಟೇ ಎತ್ತರ, ಎದೆಯ ಮೇಲೆ ಹೊರೆ ರೋಮ, ತೊಟ್ಟ ಒಣಹುಲ್ಲಿನ  ಟೊಪ್ಪಿಗೆಯ ಕೆಳಗೆ ಹೊಂಬಣ್ಣದ ಹೆಲ್ಮೆಟ್,  ಗದ್ದದ ತುಂಬಾ ಹರಡಿದ ಬೆಳ್ಳಿಬಣ್ಣದ ಒತ್ತಾದ ಗಡ್ಡ, ಬೆಕ್ಕಿನ ಕಣ್ಣುಗಳಲ್ಲಿಲ್ಲ ಕಿಂಚಿತ್ತೂ ಭಯ. ಇವನ ಪಳಗಿದ ಕಣ್ಣು ನೋಡಿದ ಕೂಡಲೇ  ಲೆಕ್ಕ ಹಾಕುತ್ತದೆ ಆಕಳಿನ ಪೃಷ್ಠದ ಅಗಲ.  ಹುಲ್ಲಿನಲ್ಲಿ ಗುರುತಿಸುತ್ತಾನೆ ಜಿಂಕೆಯ ಹೆಜ್ಜೆ , ಅದು ಎಳೆಹುಲ್ಲಿಗೆ ಬಾಯಿ ಹಾಕಿದ ಸ್ಥಾನ, ಆರ್ಮಾಡಿಯೋ ವಾಸಿಸುವ ಗುಹೆ, ಶಾಡ್ ಮೀನಿನ ಸಂಚಾರವನ್ನು ದೂರದಿಂದಲೇ ಗುರುತಿಸಬಲ್ಲ,  ರೈಫಲ್ ಹಿಡಿದ ರೀತಿಯಿಂದಲೇ  ಗುರಿ ಹೇಳಬಲ್ಲ, ಮಚ್ಚಿನ ಹೊಡೆತವನ್ನು ವಿಮರ್ಶಿಸಬಲ್ಲ. ಹೆಣ್ಣು ಕುದುರೆಮರಿಯ ಕಾಲು ನೀವುತ್ತಾ ಪ್ರೀತಿಯಿಂದ  ಪಳಗಿಸುತ್ತಾನೆ. ನಡುನ

ದೂರವಾಗಿರು ನನ್ನಿಂದ ಎಂದು ನಿನ್ನಲ್ಲಿ ಪ್ರಾರ್ಥಿಸಿದರೂ

ಇಮೇಜ್
ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಸಾನೆಟ್ - 6 ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಸಂಗ್ರಹದಲ್ಲಿ ಆರನೇ ಸಾನೆಟ್. ಹಿಂದಿನ ಸಾನೆಟ್ಟುಗಳ ಅನುವಾದವನ್ನು ಇದೇ ಬ್ಲಾಗಿನಲ್ಲಿ ಓದಬಹುದು. ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ತನ್ನಲ್ಲಿ ಉಂಟಾದ ಬದಲಾವಣೆಯನ್ನು ತೋಡಿಕೊಳ್ಳುತ್ತಾಳೆ. ಅವಳಲ್ಲಿ ರಾಬರ್ಟ್ ಬ್ರೌನಿಂಗ್ ಅನುರಕ್ತನಾದಾಗ ಅವಳಿಗೆ ಮೊದಲು ಭಯವುಂಟಾಗುತ್ತದೆ. ತನ್ನ ಖಿನ್ನ ಜಗತ್ತಿನಲ್ಲಿ ಅವನಿಗೂ ಹಾನಿಯಾದರೆ ಎಂಬ ಭೀತಿ ಅವಳನ್ನು ಕಾಡುತ್ತದೆ. "ನನ್ನಿಂದ ದೂರವಿರು" ಎಂದು ಅವನಿಗೆ ಹೇಳಿದರೂ ತಾನು ಅವನಿಂದ ದೂರವಿರಬಲ್ಲೆನೇ ಎಂಬ ಅನುಮಾನ ಅವಳನ್ನು ಈಗ ಕಾಡುತ್ತಿದೆ. ತನ್ನ ಸರ್ವಸ್ವವೂ ಈಗ ಅವನಿಂದಲೇ ಎಂಬ ಸಮರ್ಪಣ ಭಾವವನ್ನು ಈ ಕವಿತೆಯಲ್ಲಿ ನೋಡಬಹುದು.  ದೂರವಾಗಿರು ನನ್ನಿಂದ   ಎಂದು ನಿನ್ನಲ್ಲಿ ಪ್ರಾರ್ಥಿಸಿದರೂ  ಇರಬೇಕಾಗಬಹುದೇನೋ ಮುಂದೆ ನಿನ್ನ ನೆರಳಿನಲ್ಲೇ.  ನನ್ನ ಆತ್ಮಕ್ಕೀಗ ನನ್ನ ಬಳಿ ಕೆಲಸವಿಲ್ಲ ಯಾವುದೇ, ಸ್ವಂತ  ಬಾಳೆಂಬುದು ನನಗಿನ್ನು ಮುಚ್ಚಿದ ಬಾಗಿಲು.  ಶಾಂತಿ ಎಂಬುದು ಇನ್ನು ಸಿಕ್ಕಲಾರದು ನೀನಿಲ್ಲದೆ, ಎತ್ತಲಾರೆನೇನೋ ನನ್ನ ಇಚ್ಛೆಯಿಂದ ನನ್ನ ಕಿರುಬೆರಳು, ನಿನ್ನ ಕೈಬೆರಳಿನ ಸ್ಪರ್ಶಕ್ಕೆ  ಅದು ಹಾತೊರೆಯಬಹುದು.  ಬಾಯ್ಬಿಡುವಂತೆ ತೋರುತ್ತಿದ

ಮೇಲೆತ್ತಿದಂತೆ ಎಲೆಕ್ಟ್ರಾ ಚಿತಾಭಸ್ಮಕರಂಡಕವನ್ನು

ಇಮೇಜ್
ಸಾಣೆಟ್ಸ್ ಫ್ರಂ ದ ಪೋರ್ಚುಗೀಸ್ - ಸಾನೆಟ್ 5  ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ:  ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಎಂಬ ಸಂಗ್ರಹದ ಐದನೇ ಸಾನೆಟ್.  ಹಿಂದಿನ ಸಾನೆಟ್ಟುಗಳ ಅನುವಾದ ಇದೇ ಬ್ಲಾಗಿನಲ್ಲಿ  ಓದಬಹುದು. ಈ  ಸಾನೆಟ್ಟಿನಲ್ಲೂ ಕವಯಿತ್ರಿಯು ತನ್ನ ಅಳುಕನ್ನು ಹೊರಗೆಡಹುತ್ತಾಳೆ. ರಾಬರ್ಟ್ ಬ್ರೌನಿಂಗ್ ಅವಳಲ್ಲಿ ತನ್ನ ಪ್ರೇಮವನ್ನು ತೋಡಿಕೊಂಡಿದ್ದಾನೆ. ಆದರೆ ತನ್ನೊಳಗಿನ ದುಃಖವು ಅವನಿಗೆ ಹಾನಿ ಮಾಡಬಹುದೆಂಬ ಭೀತಿ ಕವಯಿತ್ರಿಯನ್ನು ಕಾಡುತ್ತದೆ. ಚಿತಾಭಸ್ಮವನ್ನು ಹೊತ್ತ ಹೆಣ್ಣೊಬ್ಬಳ ಚಿತ್ರವನ್ನು ಈ ಸಾನೆಟ್ಟಿನಲ್ಲಿ ಬಳಸಲಾಗಿದೆ. ಗ್ರೀಕ್ ನಾಟಕವೊಂದರ ನಾಯಕಿ ಎಲೆಕ್ಟ್ರಾ ತನ್ನ ತಂದೆಯ ಚಿತಾಭಸ್ಮವನ್ನು ಕರಂಡಕದಲ್ಲಿ ಹೊತ್ತಳಂತೆ. ಕವಯಿತ್ರಿಯೂ ತನ್ನ ಹೃದಯದಲ್ಲಿ ಇಂಥದ್ದೇ ಯಾವುದೋ ನೋವನ್ನು ಹೊತ್ತಿದ್ದಾಳೆ.   ಹಿಂದೊಮ್ಮೆ  ಎಲೆಕ್ಟ್ರಾ  ಮೇಲೆತ್ತಿದಂತೆ  ಚಿತಾಭಸ್ಮಕರಂಡಕವನ್ನು  ನನ್ನ ಹೃದಯದ ಭಾರವನ್ನು ತುಟಿಕಚ್ಚಿ ಮೇಲೆತ್ತಿ   ಸುರಿಯುವೆನು ನಿನ್ನ ಪಾದಗಳಲ್ಲಿ ಹೊಗೆಯಾಡುವ ಬೂದಿ  ನಿನ್ನ ಕಣ್ಣುಗಳಲ್ಲಿ ನೆಟ್ಟು ನನ್ನ ಕಣ್ಣು  ಇದೋ ನೋಡು ನನ್ನೊಳಗೆ ಹುದುಗಿದ್ದ ದುಃಖ   ಹೇಗೆ ಮಿನುಗುತ್ತಿವೆ ನೋಡು ಹಾರಾಡುವ ಕೆಂಪುಕಿಡಿ ಕಂದುಬಣ್ಣದ ಬೂದಿಯ ಹಿನ್ನೆಲೆಯಲ್ಲಿ; ನಿನ್ನ ಕಾಲಿನ ಹಿಮ್ಮಡಿ  ತುಳಿದು ನಂದಿಸುತ್ತಾ ಸಾಗ

ಬೀಜಗಳು

ಇಮೇಜ್
ಮೂಲ ಇಂಗ್ಲಿಷ್ ಕವಿತೆ : ವಾಲ್ಟರ್ ಡಿ ಲ ಮೇರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ವಾರಗಟ್ಟಲೆ ಮಾಯವಾಗಿದ್ದವು ನಾನು ಬಿತ್ತಿದ ಬೀಜಗಳು  ಈಗ ನೆಲದಿಂದೆದ್ದಿವೆ ಗಿಡ್ಡನೆಯ  ಹಸಿರು ಕಡ್ಡಿಗಳಾಗಿ -  ಮಣ್ಣು ಹೆಂಟೆಯಿದ್ದರೂ ಮೇಲೇಳಲಾರವು, ಅಷ್ಟು ದುರ್ಬಲವಾಗಿವೆ ಪುಟ್ಟ ಸಸಿ! ಆದರೆ ವಾಸ್ತವ  ಹಾಗಿಲ್ಲ; ಅಲ್ಲೇ ಬಳಿಯಲ್ಲಿ ಬಿದ್ದಿದೆ  ಒಂದು ಕಲ್ಲು,  ಗಜ್ಜುಗದಷ್ಟಿದೆ ಗಾತ್ರದಲ್ಲಿ.  ಬಿಸಿಲಿಗೆ ಮೈಯೊಡ್ಡಿ, ದಿವಸವನ್ನು ನೋಡಲೆಂದು   ಯಃಕಶ್ಚಿತ್ ಸಸಿ ಕತ್ತೆತ್ತಿದೆ ಕಲ್ಲನ್ನು ದೂರ ಸರಿಸಿ!

ಗುಡಿಸಿಲಿನಲ್ಲಿ ಒಪ್ಪುವುದೇ ನಿನ್ನಪೂರ್ವ ಗಾನಧನ?

ಇಮೇಜ್
ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ - 4  ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ:    ಇದು  ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಎಂಬ ಸಂಗ್ರಹದ ನಾಲ್ಕನೇ ಸಾನೆಟ್.  ಹಿಂದಿನ ಸಾನೆಟ್ಟುಗಳ ಅನುವಾದ ಇದೇ ಬ್ಲಾಗಿನಲ್ಲಿ  ಓದಬಹುದು.  ತನ್ನ ಪ್ರೇಮವನ್ನು ಬಯಸಿ ಬಂದ ಪ್ರಿಯಕರನ ನಡೆ ಕವಯಿತ್ರಿಯನ್ನು ಚಕಿತಗೊಳಿಸುತ್ತದೆ. ರಾಬರ್ಟ್ ಬ್ರೌನಿಂಗ್ ವಿಕ್ಟೋರಿಯಾ ಮಹಾರಾಣಿಯ ಕಾಲದ ಒಬ್ಬ ಅಗ್ರಮಾನ್ಯ ಕವಿ ಮತ್ತು ನಾಟಕಕಾರ. ಅವನ ಸ್ಥಾನಮಾನವೇನು, ತನ್ನ ಸ್ಥಾನಮಾನವೇನು ಎಂಬ ಚಿಂತೆ ಕವಯಿತ್ರಿಯನ್ನು ಆವರಿಸಿದೆ.  ತನ್ನ ಮನಸ್ಸಿನಲ್ಲಿರುವ ಖಿನ್ನತೆಯನ್ನು ಕುರಿತು ಕೂಡಾ ಅವಳಿಗೆ ಅರಿವಿದೆ. ತನ್ನನ್ನು ಬಯಸಿಬಂದ ಪ್ರಿಯಕರನಿಗೆ ನಿಜಸ್ಥಿತಿಯ ಅರಿವು ಮಾಡಿಕೊಡುವುದು ಕವಯಿತ್ರಿಯ ಆಶಯ.  ಅರಮನೆಯ ಭವ್ಯ ಸಭಾಗೃಹಗಳು ನಿನಗೆ ಉಚಿತ ಸ್ಥಾನ! ಎಲ್ಲಿ ಹರಿಯುವುದೋ ನಿನ್ನ ಉತ್ಕೃಷ್ಟ ಕಾವ್ಯವಾಚನದ ಹೊಳೆ  ನರ್ತಿಸುವ ಜೋಡಿಗಳು  ನಿಲ್ಲಿಸಿ ತಮ್ಮ ನರ್ತನ ಅರ್ಧದಲ್ಲೇ ಆಸ್ವಾದಿಸುತ್ತವಲ್ಲ ನಿನ್ನ ತುಟಿಗಳಿಂದ ಹೊಮ್ಮುವ ದಿವ್ಯಗಾನ!  ನಾಚುತ್ತಿದೆ ನೀನೀಗ ತಟ್ಟುತ್ತಿರುವ ನನ್ನ ಮನೆಬಾಗಿಲಿನ ಚಿಲಕ   ನಿನ್ನ ಕೈಸ್ಪರ್ಶಕ್ಕೆ ಅನರ್ಹವೆಂದು ತಾನು! ಯೋಚಿಸು ಒಂದು ಕ್ಷಣ  ಈ ಗುಡಿಸಿಲಿನಲ್ಲಿ ಒಪ್ಪುವುದೇ ನಿನ್ನಪೂರ್ವ ಗಾನಧನ?  ಇಲ್ಲಿ ಮನೆ ಮಾಡಿಹುದು ಕತ್ತಲಿನಲ್ಲಿ

ಭಿನ್ನರು ನಾವಿಬ್ಬರೂ ಎಂಬುದರಲ್ಲಿ ಇನ್ನೂ ಸಂದೇಹವೇ

ಇಮೇಜ್
ಸಾನೆಟ್ಸ್ ಫ್ರಮ್ ದ ಪೋರ್ಚುಗೀಸ್ - 3  ಮೂಲ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ:   ಇದು  ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಎಂಬ ಸಂಗ್ರಹದ ಮೂರನೇ  ಸಾನೆಟ್.  ಹಿಂದಿನ ಸಾನೆಟ್ಟುಗಳ ಅನುವಾದ ಇದೇ ಬ್ಲಾಗಿನಲ್ಲಿ  ಓದಬಹುದು.  ಪ್ರಿಯಕರನು ಪ್ರೇಮ ನಿವೇದನೆ ಮಾಡಿದಾಗ ಕವಿತೆಯ ನಾಯಕಿಗಯ ಮನದಲ್ಲಿ ತನ್ನ ಮತ್ತು ತನ್ನ ಪ್ರಿಯಕರನ ನಡುವೆ ತಾಳೆಯಾಗುವುದೇ ಎಂಬ ಆಲೋಚನೆ ಮೂಡುತ್ತದೆ. ತಮ್ಮ ಜೀವನ ಎಷ್ಟು ವಿಭಿನ್ನ  ಎಂದು ಅವಳು ಚಿಂತಿಸುತ್ತಾಳೆ. ತಮ್ಮ ನಕ್ಷತ್ರದೇವತೆಗಳು ಕೂಡಾ ವಿರುದ್ಧ ದಿಕ್ಕುಗಳಲ್ಲಿ ಹಾರಾಡುತ್ತಿದ್ದವು! ಒಂದರ ರೆಕ್ಕೆ ಇನ್ನೊಂದಕ್ಕೆ ಅಕಸ್ಮಾತ್ ಬಡಿದಾಗ ಅವುಗಳೂ ಆಶ್ಚರ್ಯಚಕಿತವಾಗಿವೆ! ಈ ಮಿಲನ ಸಾಧ್ಯ ಎಂಬುದು ದೇವತೆಗಳಿಗೂ ಊಹಿಸಲು ಸಾಧ್ಯವಾಗಿರಲಿಲ್ಲ! ತನ್ನ ಪ್ರಿಯಕರನೋ ಒಬ್ಬ ರಸಿಕ. ಅವನ ಒಡನಾಟ ಐಶ್ವರ್ಯವಂತರೊಂದಿಗೆ. ಅಲ್ಲಿಯ ಜಗಮಗ ಬೆಳಕಿನಲ್ಲಿ ಅವನನ್ನು ದಿಟ್ಟಿಸಿನೋಡುವ ಅದೆಷ್ಟು ತೇಜಃಪೂರ್ಣ ಕಣ್ಣುಗಳಿವೆ! ಇವರೆಲ್ಲರನ್ನೂ ಬಿಟ್ಟು ಅವನೇಕೆ ತನ್ನಲ್ಲಿ ಅನುರಕ್ತನಾಗಿದ್ದಾನೆ? ಸಾವಿನಲ್ಲಿ ಮಾತ್ರ ತಮ್ಮ ಮಿಲನ ಸಾಧ್ಯವೆಂಬ ಆಲೋಚನೆ ಅವಳನ್ನು ಅಧೀರಳನ್ನಾಗಿ ಮಾಡುತ್ತದೆ. ಭಿನ್ನರು ನಾವಿಬ್ಬರೂ ಎಂಬುದರಲ್ಲಿ ಇನ್ನೂ ಸಂದೇಹವೇ ನಿನ್ನ  ರಾಜಸೀ ಹೃದಯಕ್ಕೆ? ನಮ್ಮ ಧ್ಯೇಯೋದ್ದೇಶಗಳು ಕೂಡಾ ಭಿನ್ನ!  ಚಕಿತವಾಗಿವೆ ನಮ್ಮ ನಕ್ಷತ್ರದೇವತೆಗಳು ಕೂಡಾ ಒಂದು

ನೀನೀಗ ನನಗೆ ಹೇಳಿದ ಮಾತು ಕೇಳಿಸಿಕೊಂಡವರು

ಇಮೇಜ್
ಸಾಣೆಟ್ಸ್ ಫ್ರಂ ದ ಪೋರ್ಚುಗೀಸ್ - 2 ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  Add caption ಕವಿತಾಸ್ವಾದನೆ:  ಇದು  ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಎಂಬ ಸಂಗ್ರಹದ ಎರಡನೇ ಸಾನೆಟ್.  ಮೊದಲ ಸಾನೆಟ್ಟಿನ ಅನುವಾದವನ್ನು ಇದೇ ಬ್ಲಾಗಿನಲ್ಲಿ  ಓದಬಹುದು.  ಮೊದಲ ಸಾನೆಟ್ಟಿನಲ್ಲಿ ಕವಯಿತ್ರಿಗೆ ಅವಳ ಪ್ರೇಮಿಯು ತನ್ನ ಪ್ರೇಮವನ್ನು ನಿವೇದಿಸಿಕೊಂಡಿದ್ದಾನೆ. ಇದನ್ನು ಕೇಳಿದಾಗ ಕವಯಿತ್ರಿಯ ಮನಸ್ಸಿನಲ್ಲಿ  ಮೂಡುವ ಭಾವನೆಗಳು ಈ ಸಾನೆಟ್ಟಿನಲ್ಲಿ ಚಿತ್ರಿತವಾಗಿವೆ.  ಪ್ರಿಯಕರನ ಪ್ರೇಮನಿವೇದನೆಯಿಂದ ಅವಳಿಗೆ ಜೀವನದಲ್ಲಿ ಮತ್ತೊಮ್ಮೆ ಉತ್ಸಾಹ ಮೂಡಿದೆ. ಅವಳಿಗೆ ದೇವರೇ ಬಂದು (ಜೀವನ)ಪ್ರೇಮವನ್ನು ಬೋಧಿಸಿದಂತೆ ತೋರುತ್ತದೆ.  ದೈಹಿಕ ನೋವುಗಳನ್ನು ಕುರಿತು ಅವಳಿಗೆ ನೆನಪಾಗುತ್ತದೆ. ಅದು ಅವಳಿಗೆ ತಗುಲಿದ್ದ ಶಾಪವೆಂದು ಕವಯಿತ್ರಿಗೆ ಅನ್ನಿಸುತ್ತದೆ. ಇದೇ ಕಾರಣ ತನ್ನ ಪ್ರಿಯಕರನನ್ನು ನೋಡಲು ಕೂಡಾ ಆವಳಿಗೆ ಸಾಧ್ಯವಾಗಿರಲಿಲ್ಲ. ಈ ದೈಹಿಕ ಬಾಧೆಗಳ ಕಾರಣ ತನ್ನ ಪ್ರಾಣವೇ ಹೋಗಿದ್ದರೂ ಪ್ರಿಯಕರನನ್ನು ನೋಡದ ಬಾಧೆಗಿಂತ ಅದು ಹೆಚ್ಚಲ್ಲ ಎಂದು ಕವಯಿತ್ರಿಗೆ ಅನ್ನಿಸುತ್ತದೆ. ಇದುವರೆಗೆ ದೈವವೇ ತನಗೆ ಪ್ರೇಮವನ್ನು ನಿರಾಕರಿಸಿತ್ತೇ? ಈಗ ತನಗೆ ಅದು ಸಿಕ್ಕಿದ ಮೇಲೆ ಯಾವುದೇ ಶಕ್ತಿಯೂ ಪ್ರಿಯಕರನಿಂದ ತನ್ನನ್ನು ಬೇರೆ ಮಾಡಲಾಗದು! ಕೊನೆಗೊಮ್ಮೆ ಸ್ವರ್ಗವೇ ಇಬ್ಬರ ನಡುವೆ ಬಂದರೂ ಅವಸರದಲ್ಲಿ ಮಂತ್

ಹೀಗೇ ಒಮ್ಮೆ ಮೆಲುಕು ಹಾಕುತ್ತಿದ್ದೆ ಥಿಯೋಕ್ರಿಟಸ್ ಹಾಡಿದ ಪಂಕ್ತಿ

ಇಮೇಜ್
ಸಾನೆಟ್ಸ್  ಫ್ರಂ ದ ಪೋರ್ಚುಗೀಸ್ - 1  ಮೂಲ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ:   ಮುಂದೆ ರಾಬರ್ಟ್ ಬ್ರೌನಿಂಗ್ ಕವಿಯ ಪತ್ನಿಯಾದ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ 1845-1846 ಅವಧಿಯಲ್ಲಿ ಬರೆದ 44 ಸಾನೆಟ್ಟುಗಳ ಸಂಗ್ರಹದ ಮೊದಲ ಸಾನೆಟ್ ಇದು. ಈ ಸಾನೆಟ್ಟುಗಳು ತೀರಾ ವೈಯಕ್ತಿಕವೆಂಬ ಕಾರಣ ಅವುಗಳನ್ನು ಅಚ್ಚು ಮಾಡಲು ಎಲಿಜಬೆತ್ ಅನುಮಾನಿಸಿದಳಂತೆ. ಆಗ ರಾಬರ್ಟ್ ಬ್ರೌನಿಂಗ್ "ಇವು ಶೇಕ್ಸ್ ಪಿಯರ್ ಕವಿಯ ಸಾನೆಟ್ಟುಗಳ ತರುವಾಯ ಬರೆಯಲಾದ ಅತ್ಯಂತ ಶ್ರೇಷ್ಠ ಸಾನೆಟ್ಟುಗಳು" ಎಂದು ಹುರುದುಂಬಿಸಿ ಅಚ್ಚು ಹಾಕಿಸಿದನಂತೆ.  ಸ್ವಲ್ಪವಾದರೂ ಮುಚ್ಚುಮರೆ ಇರಲೆಂದು ಆಕೆ ಅವುಗಳನ್ನು ಬೇರೆ ಭಾಷೆಯಿಂದ ಅನುವಾದಿಸಿದ ಸಾನೆಟ್ಟುಗಳೆಂದು ಬಿಂಬಿಸಿದಳಂತೆ. ಹೀಗಾಗಿ "ಪೋರ್ಚುಗೀಸ್ ಸಾನೆಟ್ಟುಗಳು" ಎಂಬ ಹೆಸರು ಕೊಡಲಾಯಿತಂತೆ. "ನನ್ನ ಪುಟ್ಟ ಪೋರ್ಚುಗೀಸ್" ಎಂಬುದು  ರಾಬರ್ಟ್ ಬ್ರೌನಿಂಗ್ ಅವಳನ್ನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು ಕೂಡಾ. ಪ್ರಸ್ತುತ ಕವಿತೆಯಲ್ಲಿ ಒಂದು ಹೆಣ್ಣು ತನ್ನ ಜೀವನದ ಕಳೆದ ವರ್ಷಗಳನ್ನು ಪರಾಮರ್ಶಿಸುತ್ತಾ ಅವುಗಳಲ್ಲಿ ತುಂಬಿರುವ ದುಃಖವನ್ನು ನೆನೆದು ಕಣ್ಣೀರು ಹಾಕುತ್ತಾಳೆ. ಆಗ ಅವಳಿಗೊಂದು ಆಶ್ಚರ್ಯ ಕಾದಿದೆ.  ಹೀಗೇ ಒಮ್ಮೆ ಮೆಲುಕು ಹಾಕುತ್ತಿದ್ದೆ ಥಿಯೋಕ್ರಿಟಸ್ ಹಾಡಿದ ಪಂಕ್ತಿಗಳು  ಎಲ್ಲರೂ ಹಂಬಲಿಸುವ, ಮ

ಮುಗುಳ್ನಕ್ಕು ಅದೆಷ್ಟು ಕಾಲವಾಯ್ತೆಂದು

ಇಮೇಜ್
ಮೂಲ ಉರ್ದೂ : ಕೈಫಿ ಆಜ್ಮಿ ಕನ್ನಡಕ್ಕೆ : ಸಿ. ಪಿ. ರವಿಕುಮಾರ್ ಮುಗುಳ್ನಕ್ಕು ಅದೆಷ್ಟು ಕಾಲವಾಯ್ತೆಂದು ನೆನಪಾದಾಗ ಕಣ್ಣಲ್ಲಿ ಕೂಡಿದವು ಬಿಂದು ಅವರ ಸಂಗ ಬಿಟ್ಟು ಬಂದದ್ದು ನಿಜವಾದರೂ ತಿರುಗಿ ನೋಡಿದೆ ಅತ್ತ ಪ್ರತಿಯೊಂದು ಹೆಜ್ಜೆಗೂ ಒಂದು ನೋವಾಗಿ ಉಳಿದುಕೊಂಡಿತು ಬಾಳು  ನೋವನ್ನು ಎದೆಯಲ್ಲಿ ಬಚ್ಚಿಟ್ಟು ಬಚ್ಚಿಟ್ಟು ಹರಿಯುತ್ತಿವೆ ಹೃದಯದ ನಾಜೂಕು ಎಳೆಗಳು ಇಷ್ಟೊಂದು ಯಾರೂ ನೆನಪಾಗಕೂಡದು

ಜ್ಯೋತಿರ್ಗಮಯ

ಇಮೇಜ್
ಮೂಲ ಕವಿತೆ: ಯಾವೋ ಫೆಂಗ್  ಕನ್ನಡಕ್ಕೆ:  ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಮೊದಲು ಕವಿತೆಯನ್ನು ಓದಿ ಅನಂತರ ಈ ಟಿಪ್ಪಣಿ ಓದಿ. ದೀಪದ ಹುಳುವನ್ನು ಕಂಡಾಗ ಬಹುತೇಕ ಕವಿಗಳಿಗೆ ಹೊಳೆಯುವುದು ಬೆಂಕಿಯ ಆಕರ್ಷಣೆಗೆ ಒಳಗಾಗಿ ತನ್ನ ನಾಶಕ್ಕೆ ತಾನೇ ಕಾರಣವಾಗುವ ವ್ಯಕ್ತಿತ್ವ.  ಆದರೆ ಪ್ರಸ್ತುತ ಕವಿತೆಯಲ್ಲಿ ಇದಕ್ಕಿಂತ ಭಿನ್ನವಾದ ಕಲ್ಪನೆಯಿದೆ.   ಪತಂಗವು ಕತ್ತಲಿನ ಮರಿಯೂ ಆಗಿರಬಹುದು. ದೀಪದೊಂದಿಗೆ ಹೋರಾಡಿ ಬೆಳಕನ್ನು ನಂದಿಸಿ ಮತ್ತೆ ಕತ್ತಲು ಮಾಡಲು ಕೂಡಾ ಅದು ಪ್ರಯತ್ನಿಸುತ್ತಿರಬಹುದು! ಈ ಪತಂಗದಲ್ಲಿ ನಿಮಗೆ ಮನುಷ್ಯನ ವ್ಯಸನಗಳೂ  ಗೋಚರಿಸಬಹುದು.  ದೀಪದ ಮರೆಗೆ ಬೆಳಕನ್ನು ಹಿಂದಿರುಗಿಸಿದಾಗ   ಆವರಿಸಿಕೊಳ್ಳುತ್ತದೆ ಕತ್ತಲು.  ದೀಪದ ಹುಳುವನ್ನು ಕತ್ತಲಿಗೆ ಹಿಂದಿರುಗಿಸಿ  ಕತ್ತಲಲ್ಲೇ ಇರುವಂತೆ ಯಾರು ತರಬೇತಿ ಕೊಟ್ಟವರು? ಕೊನೆಯಿಲ್ಲದ ತರಬೇತಿಯ ನಂತರವೂ  ರೆಕ್ಕೆ ಮೊಳೆತ ನಂತರ   ಹಾರಲಾಗದ  ಹುಳ ತನ್ನೊಂದಿಗೆ  ಜಗ್ಗಿಕೊಂಡು ಮುಸ್ಸಂಜೆಯನ್ನು  ದೇಕುತ್ತದೆ ಬಹು ನಿ-ಧಾ-ನ-ವಾ-ಗಿ   ಬೆಳಕಿನ ಕಡೆಗೆ. 

ಕೆಟ್ಟವರು

ಇಮೇಜ್
ಕೆಟ್ಟವರು  ಮೂಲ: ಯಾವೋ ಫೆಂಗ್ (ಚೈನಾ) ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಕೆಲವರನ್ನು ಕುರಿತು ಅವರು ಕೆಟ್ಟವರೆಂದು ಅನುಮಾನ ಬಂದರೂ  ಒಳ್ಳೆಯವರೆಂದೇ ನಂಬುತ್ತಾ  ಅವರೊಂದಿಗೆ ವ್ಯವಹರಿಸುತ್ತೇನೆ  ಹೇಗೆ ನ್ಯಾಯವು ತೀರ್ಪು ನೀಡುವ ಮುನ್ನ  ಆಪಾದಿತರನ್ನು ಮುಗ್ಧರೆಂದೇ ನಂಬುತ್ತದಲ್ಲ, ಹಾಗೆ.  ಹಿಂದೊಮ್ಮೆ ಕೆಟ್ಟವರೆಂದರೆ  ಕ್ರಿಕೆಟ್ ಕ್ಯಾಪ್ ಹಾಕಿಕೊಳ್ಳುತ್ತಿದ್ದರು,  ಅವರ ತುಟಿಗಳ ತುದಿಯಲ್ಲಿ ವಕ್ರವಾದ ಸಿಗರೆಟ್ ತುಂಡು ನನ್ನ ಬಾಲ್ಯದ ಬೆಳ್ಳಿತೆರೆಯ ಮೇಲೆ  ಇವರೆಲ್ಲರೂ ದುಷ್ಟತನದ ಅಪರಾವತಾರಗಳು.   ಈಗ ನನಗೆ ಜ್ಞಾನೋದಯವಾಗಿದೆ.  ನನ್ನ ಬಾಲ್ಯದ ಬಾಲವನ್ನು ಶಾಶ್ವತವಾಗಿ ಕತ್ತರಿಸಿದ್ದೇನೆ, ಹಾಗೇ ಮುಗ್ಧತೆಯ ಕುರುಡು ಕರುಳನ್ನು  ಕೂಡಾ.  ಆದರೆ ಇದರಿಂದ ನನಗೆ ಸಿಕ್ಕಿದಾದರೂ ಏನು, ಇನ್ನಷ್ಟು ದುಃಖ.  ನನ್ನದೇ ಪುಟ್ಟ ಪ್ರಪಂಚದಲ್ಲಿ ನನಗೆ ಇನ್ನೂ ಕಂಡೇ ಇಲ್ಲ  ಕ್ರಿಕೆಟ್ ಕ್ಯಾಪ್ ತೊಟ್ಟ ಮುಖ. 

ಶಾಂತಿ

ಇಮೇಜ್
ಕವಿತಾಸ್ವಾದನೆ: ಬೇಕೆಂದರೆ ಮೊದಲು ಕವಿತೆಯನ್ನು ಓದಿ ಆನಂತರ ಈ ಟಿಪ್ಪಣಿಯನ್ನು ಓದಿ.  ಡಯಾನಾ ಆನ್ಫಿಮಿಯಾಡಿ ಜಾರ್ಜಿಯಾ ದೇಶದ ಕವಯಿತ್ರಿ.  ಈ ಕವಿತೆಯನ್ನು ಎರಡು ಸ್ತರಗಳಲ್ಲಿ ನೋಡಬಹುದು.  ಮೊದಲನೆಯದು ವ್ಯಕ್ತಿಗತ ಸ್ತರ. ನಮ್ಮ ಬದುಕಿನಲ್ಲಿ ಶಾಂತಿಯನ್ನು ನಾವು ಅನುಭವಿಸಬೇಕಾದರೂ ನೋವು ಮತ್ತು ಭೀತಿಗಳ ನಡುವೆಯೇ ಎಂಬುದು ಒಂದು ಧ್ವನಿ. ನಾಳೆ ಏನಾಗುತ್ತದೋ ಎಂಬ ಭೀತಿಯಲ್ಲೇ ಇಂದು ಎಲ್ಲರೂ ಬದುಕುತ್ತಿದ್ದೇವೆ. ಇನ್ನೊಂದು ಸ್ತರದಲ್ಲಿಯೂ ಕವಿತೆಯನ್ನು ನೋಡಬಹುದು. ಇದಕ್ಕಾಗಿ ಜಾರ್ಜಿಯಾ ದೇಶದ ಬಗ್ಗೆ ಸ್ವಲ್ಪ ತಿಳಿದುಕೊಳ್ಳಬೇಕು. ಟರ್ಕಿ, ಆರ್ಮೀನಿಯಾ, ರಷ್ಯಾ ಇವುಗಳನ್ನು ಹೊಂದಿಕೊಂಡಿದೆ ಜಾರ್ಜಿಯಾ.  ಹಿಂದೊಮ್ಮೆ ರಷ್ಯಾ ದೇಶದೊಂದಿಗೆ ಯುದ್ಧದಲ್ಲಿ ಪಾಲ್ಗೊಂಡಿದ್ದ ಜಾರ್ಜಿಯಾಗೆ ಸದಾ ರಷ್ಯಾ ದೇಶದ ಭಯ ಕಾಡುತ್ತಲೇ ಇರುತ್ತದೆ.  ಪೂರ್ವ ಯೂರೋಪಿನಲ್ಲಿದ್ದರೂ ಪಾಶ್ಚಿಮಾತ್ಯ ದೇಶಗಳ ಧೋರಣೆಯನ್ನು ಒಪ್ಪಿಕೊಂಡ ಜಾರ್ಜಿಯಾ ದೇಶದ ಶಾಂತಿಯನ್ನು ಕುರಿತೂ ಲೇಖಕಿ ಬರೆದಿರಬಹುದು.  ಶಾಂತಿ  ಮೂಲ: ಡಯಾನಾ ಆನ್ಫಿಮಿಯಾಡಿ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಶಾಂತಿ ಎಂಬ ಪದವನ್ನು ನನಗೆ ನಾನೇ  ಹೇಗೆ ಒಗ್ಗಿಸಿಕೊಂಡೆ ಎಂಬುದೇ ಒಂದು ಸೋಜಿಗ ನನಗೆ.  ಕೈಗವಸಿನ ಹಾಗೆ ಎಳೆದುಕೊಂಡೆ ನನ್ನತ್ತ.  ಸ್ಕಾರ್ಫ್ ಹಾಗೆ ಹೊದ್ದು ಸರಿಪಡಿಸಿಕೊಂಡೆ.  ನನ್ನ ಹಾಸಿಗೆಯ ಚಾದರ ಮಾಡಿಕೊಂಡೆ ಅದನ್ನು.  ದಿಂಬನ್ನು ಕೊಡವಿ ಡುಮ್ಮ ಮಾಡುವಂತೆ ಹಿ

ಆಲ್ಬಂ

ಇಮೇಜ್
ಕಂಡಹಾರ್ ನಗರದಲ್ಲಿ ಹುಟ್ಟಿದ ಕವಿ ರೆಜಾ ಮೊಹಮ್ಮದಿ (1979-) ಇಂದಿನ ಪರ್ಷಿಯನ್ ಯುವಕವಿಗಳಲ್ಲಿ ಒಂದು ಪ್ರಮುಖ ಹೆಸರು. ಇರಾನ್ ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಪಡೆದ ಮೊಹಮ್ಮದಿ ಪ್ರಸ್ತುತ ಕಾಬೂಲ್ ನಗರದಲ್ಲಿ ನೆಲೆಸಿದ್ದಾರೆ.  ಬಿಬಿಸಿ, ದ ಗಾರ್ಡಿಯನ್ ಮೊದಲಾದ ಮಾಧ್ಯಮಗಳಿಗೆ ಅವರು ಹವ್ಯಾಸಿ ವರದಿಗಾರರಾಗಿ ಬರೆಯುತ್ತಾರೆ.  ಈ ಕವಿತೆ ಮೊದಲ ನೋಟಕ್ಕೆ ಒಂದು ಪ್ರೇಮಕವಿತೆಯಂತೆ ತೋರುತ್ತದೆ. ಕವಿತೆಯನ್ನು ಹಾಗೂ ಅರ್ಥೈಸಿಕೊಳ್ಳಬಹುದು. ಆದರೆ ಇಲ್ಲಿ ಬರುವ ಸಖ ಮತ್ತು ಸಖಿ ಅಫ್ಘಾನಿಸ್ತಾನ್ ದೇಶವಾಸಿ ಮತ್ತು ಅಫ್ಘಾನಿಸ್ತಾನ್ ದೇಶ ಕೂಡಾ ಆಗಿರಬಹುದು. ಅಫ್ಘಾನಿಸ್ಥಾನವು ಮೊದಲು ರಷ್ಯಾ ಆನಂತರ ತನ್ನದೇ ದೇಶದ ಉಗ್ರರ ಕೈಯಲ್ಲಿ ಸಿಲುಕಿ ನಲುಗಿದ ದೇಶ.  ಇಂದು ಸ್ವತಂತ್ರ ದೇಶವೆಂಬ ಮೊಹರು ಹೊಂದಿದ್ದರೂ ಅಲ್ಲಿ ಉಗ್ರರ ಕೈವಾಡ ಇಂದಿಗೂ ಗಾಢವಾಗಿದೆ.   ಅನೇಕ ಲೇಖಕರು ಅಫ್ಘಾನಿಸ್ತಾನದ ದುರದೃಷ್ಟದ ಕಥೆಯನ್ನು ಕುರಿತು ಬರೆದಿದ್ದಾರೆ.  ಆಲ್ಬಂ ಮೂಲ:  ರೆಜಾ ಮೊಹಮ್ಮದಿ  (ಅಫ್ಘಾನಿಸ್ತಾನ್)  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಚಿತ್ರದಲ್ಲಿ ನಿನ್ನ ಕೈ ನಿನ್ನ ಕೇಶಗಳಲ್ಲಿ ಆಡುತ್ತಿದೆ  ನಿನ್ನ ಕೇಶಗಳು ನಿನ್ನ ಮುಖದ ಮೇಲೆ ಆಡುತ್ತಿವೆ  ಮಧು ತುಂಬಿದ ಎರಡು ಬಟ್ಟಲುಗಳು ನಿನ್ನ ಕಣ್ಣುಗಳು  ಮಧುಪಾನ ಮಾಡಲು ನನ್ನೆದೆ ಹಾತೊರೆಯುತ್ತದೆ  ಮುಂದಿನ ಚಿತ್ರದಲ್ಲಿ ನೀನು ನನ್ನ ಜೊತೆ ಕುಳಿತಿರುವೆ  ಮಕ್ಕಳ

ಮೂರನೆಯ ಜಾವ

ಇಮೇಜ್
ಕವಿತೆಯ ಸ್ವಾರಸ್ಯ: ಪ್ರಶ್ನೆಗಳನ್ನು ಕೇಳುವುದು ಮನುಷ್ಯನ ಸ್ವಭಾವ. ವಿಜ್ಞಾನಕ್ಕೆ ಪ್ರತಿಯೊಂದು ವಿಷಯವನ್ನೂ ಕುರಿತು ಅದಮ್ಯ ಕುತೂಹಲ. ತಾರೆಗಳಿಂದ ಬಂದ ಬೆಳಕು ಅದೆಷ್ಟೋ ಕೋಟಿ ವರ್ಷಗಳ ಹಿಂದೆ ಹುಟ್ಟಿದ್ದು ಎನ್ನುತ್ತದೆ ವಿಜ್ಞಾನ. ಈಗ ನಮಗೆ ಕಾಣುವುದು ಹಿಂದೆಂದೋ ನಡೆದದ್ದರ ಪ್ರತಿಫಲನ.  ಒಂದು ರಾತ್ರಿ ಕವಿಗೆ ಮೂರನೆಯ ಜಾವದಲ್ಲಿ ಎಚ್ಚರವಾದಾಗ ಕಿಟಕಿಯಿಂದ ತಾರೆಗಳನ್ನು ನೋಡುತ್ತಾನೆ. ಅವನಿಗೆ ತಾರೆಗಳ ಬೆಳಕಿನ ಕುರಿತಂತೆ ಪ್ರಶ್ನೆಯೊಂದು ಹೊಳೆಯುತ್ತದೆ.  ತಾನೂ ಜೀವಿಸುತ್ತಿರುವುದು ಯಾವುದೋ  ಹಳೆಯದನ್ನೇ ಎಂಬ ಆಲೋಚನೆ ಅವನಿಗೆ ಬರುತ್ತದೆ ("ಪುನರಪಿ ಜನನಂ").  ಪ್ರಶ್ನೆಗಳನ್ನು ಕೇಳುತ್ತಾ ವಸ್ತುವಿನ ತೀರಾ ಹತ್ತಿರಕ್ಕೆ ಬಂದಾಗ ಉತ್ತರ ನಮಗೆ ದಕ್ಕುವುದೇ? ಎಲ್ಲವೂ ಗೋಜಲಾಗಿ "ಅಳಿಸಿಹೋಗುತ್ತಲೇ ಇದ್ದವು ಚಹರೆಯಿಂದ ಪದಗಳು."   ಮೂರನೆಯ ಜಾವ  ಮೂಲ ಹಿಂದಿ ಕವಿತೆ: ಮೋಹನ್ ರಾಣಾ  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ನಾನು ತಾರೆಗಳನ್ನು ನೋಡಿದಾಗ ದೂರದಲ್ಲಿ  ನನ್ನ ಮತ್ತು ಅವುಗಳ ನಡುವಿನ ದೂರದಿಂದ  ಅವು ನನಗೆ ಕಂಡದ್ದು ಈ ಕ್ಷಣದಲ್ಲಿ  ಮಿನುಗುವ ಕಳೆದುಹೋದ ಕ್ಷಣಗಳಂತೆ  ಕತ್ತಲಿನ ಅನಂತತೆಯಲ್ಲಿ  ಬೆಳಗಿನ ಬೆನ್ನು ಹತ್ತಿದ ರಾತ್ರಿಯಲ್ಲಿ  ಈ ಮೂರನೆಯ ಜಾವ  ನನಗೆ ನಿರ್ಧರಿಸಲು ಸಾಧ್ಯವಾಗದು   ಜೀವನವನ್ನು ಜೀವಿಸುತ್ತಿದ್ದೇನೋ ಇದೇ ಮೊದಲ ಸಲ  ಅಥವಾ ಇದನ್ನು ಮರೆ

ಬಲೂನುಗಳು

ಇಮೇಜ್
ಮೂಲ ಕವಿತೆ: ಮೊಸ್ತಫಾ ಇಬ್ರಾಹಿಂ (ಈಜಿಪ್ಟ್)  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ವಸ್ತು ಎಷ್ಟು ಗಟ್ಟಿಯಿದೆ ಎಂದು ಪರೀಕ್ಷಿಸಲು  ಕೆಲವೊಮ್ಮೆ ಅದನ್ನು ಮುರಿಯಬೇಕಾಗುತ್ತದೆ.  ನಮಗೆ ಅದು ಬೇಕಾದುದೋ ಎಂದು ಪರೀಕ್ಷಿಸಲು  ಕೆಲವೊಮ್ಮೆ ವಸ್ತುವನ್ನು ತ್ಯಜಿಸಬೇಕಾಗುತ್ತದೆ.  ನಂಬಿಕೆಗಾಗಿ ಪರಿತಪಿಸಿ ಅದೆಷ್ಟು ಜನ ಮಿತ್ರರ ಮೇಲೆ  ಹೊದಿಸಿದೆ  ನೀನು ಸುಳ್ಳುಗಾರರೆಂಬ ಆರೋಪ? ನಂಬಿಕೆಯನ್ನೇನೋ ಗಳಿಸಿಕೊಂಡೆ,  ಆದರೆ ಮಿತ್ರರನ್ನು ಕಳೆದುಕೊಂಡೆ ಪಾಪ! ಶಕ್ತಿ ಮೀರಿ  ಊದುತ್ತಾ ಅದೆಷ್ಟು ಬಲೂನುಗಳನ್ನು ಒಡೆದಿರಬಹುದು ನೀನು? ಅದರ ಶಕ್ತಿಯ ಮಿತಿಯೇನೋ ಗೊತ್ತಾಯಿತು,  ಆದರೆ ನಿನ್ನ ಬಳಿ ಉಳಿದದ್ದೇನು ವ್ಯಥೆಯನ್ನು ಹೊರತು? ನಾನು ಬಲೂನುಗಳನ್ನೇಕೆ ಊದುತ್ತೇನೆ ಎಂದು ನನಗೀಗ ಗೊತ್ತು.  ನಾನು ಹಂಬಲಿಸುತ್ತಿದ್ದೆ: ಸಿಕ್ಕುವುದೇ ಕೊನೆಯೇ ಇಲ್ಲದ  ವಸ್ತು, ನನಗೆಂದೂ ಮುಟ್ಟಲಾಗದ ತುದಿಯುಳ್ಳ ವಸ್ತು, ಒರಗಿಕೊಂಡು ತಳ್ಳಿ ಬೀಳಿಸಿದರೂ ನಿಂತೇ ಇರುವ ಗೋಡೆಗಳು, ಶಾಶ್ವತವಾದದ್ದು, ನಾನು ಪರೀಕ್ಷಿಸಿದರೂ ಒಡೆಯದ ವಸ್ತು. 

ನೀರಿನ ಬಣ್ಣ

ಇಮೇಜ್
ಮೂಲ ಹಿಂದಿ ಕವಿತೆ: ಮೋಹನ್ ರಾಣಾ  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ದಿನ ಬೆಳಗಾದರೆ ಸುರಿಯುವ ಮಳೆ   ತೊಳೆಯಲು ಬಂದಂತಿದೆ ನಮ್ಮೆಲ್ಲ ಶಾಶ್ವತ ಕಲೆ  ಆದರೆ ಅದಕ್ಕೆ ಸಾಧ್ಯವಾದದ್ದು   ಈ ಹಳೇ  ಶರ್ಟಿನ ಬಣ್ಣವನ್ನು ಮಾಸಲು ಮಾಡಿದ್ದು ಮತ್ತು ಗೋಡೆಗಳಿಂದ  ಕಳೆದ ಋತುಮಾನಗಳ ನೆನಪುಗಳನ್ನು  ತೊಳೆದು ಹಾಕಿದ್ದು, ಅಷ್ಟೇ.  ಇದು ಬೇಸಗೆಯಲ್ಲ,  ಶರತ್ಕಾಲವಲ್ಲ, ಚಳಿಗಾಲವೂ ಅಲ್ಲ:  ನಾನೇ ಕೆಲವೊಮ್ಮೆ ಗುರುತಿಸಿದರೂ  ಮರೆತುಬಿಡುತ್ತೇನೆ ಬೇಗ.  ಇಷ್ಟೊಂದು ಮಳೆಯ ನಂತರ  ನನ್ನ ಶರ್ಟಿನ ಎಲ್ಲಾ ಬಣ್ಣಗಳೂ ಹೋಗಿ  ಕೊನೆಗೆ ಉಳಿಯುತ್ತದೇನೋ  ನೀರಿನ ಬಣ್ಣ.  ಕವಿತೆಯ ಸ್ವಾರಸ್ಯ:   ಮಳೆ ಬಂದಾಗ ಶರ್ಟಿನ ಬಣ್ಣ ಮಾಸುವುದು ಸಹಜ.  ಮೊದಲು ಈ ಕವಿತೆಯನ್ನು ಅದರ ಸಾಧಾರಣ ಅರ್ಥದಲ್ಲಿ ಓದಿ. ನಂತರ ಮಳೆ ಮತ್ತು ಬಣ್ಣ ಇವುಗಳಿಗೆ ಯಾವುದಾದರೂ ವಿಶೇಷ ಅರ್ಥವಿದೆಯೇ ಎಂದು ಯೋಚಿಸಿ. ಪ್ರತಿನಿತ್ಯ ನಾವು ಅನೇಕ ಬಗೆಯ "ಮಳೆ"ಗಳನ್ನು ಎದುರಿಸುತ್ತೇವೆ - ಉದಾಹರಣೆಗೆ ನಮ್ಮ ಮೇಲೆ ಸುರಿಯುವ ಅಭಿಪ್ರಾಯಗಳ ಮಳೆ. ಇವು ನಮ್ಮಿಂದ ನಮ್ಮತನವನ್ನು ಸ್ವಲ್ಪಸ್ವಲ್ಪವೇ ಅಳಿಸುತ್ತಿವೆ ಎಂದು ನಿಮಗೂ ಅನ್ನಿಸಿರಬಹುದು. ಕವಿತೆಯನ್ನು ಈ ಬೆಳಕಿನಲ್ಲಿ ಹಿಡಿದು ನೋಡಿ. ಕವಿ ತಾನು ಋತುಮಾನಗಳನ್ನು ಮರೆತು ಬಿಡುತ್ತೇನೆ ಎಂದು ಹೇಳುತ್ತಿರುವುದು ಯಾಕೆ? ಋತುಮಾನಗಳನ್ನು ಗುರುತಿಸುವುದು ಕಷ್ಟವೇಕೆ ಆಗುತ್ತಿದೆ? ಬೇಸಗೆಯಲ್ಲಿ ಎ

ನಿಂತನಿಂತಲ್ಲೇ ನಿದ್ರೆ

ಇಮೇಜ್
ಮೂಲ: ಕ್ಸು ಲಿಷೀ (ಚೈನಾ) ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಕಣ್ಣಮುಂದಿನ  ಪೇಲವ ಹಳದಿ ಕಾಗದದ  ಮೇಲೆ  ಸ್ಟೀಲ್ ಕಡ್ಡಿಯಿಂದ  ಕಪ್ಪು ಬಣ್ಣದಲ್ಲಿ ಬರೆಯುತ್ತೇನೆ  ಉದ್ಯೋಗಕ್ಕೆ ಸಂಬಂಧಿಸಿದ  ಪದಗಳನ್ನು: ವರ್ಕ್ ಶಾಪ್, ಅಸೆಂಬ್ಲಿ  ಲೈನ್, ಮಷೀನ್,  ವರ್ಕ್ ಕಾರ್ಡ್, ವೇಜಸ್,  ಓವರ್ ಟೈಮ್, ...  ನನಗೆ ಅವರು ನೀಡಿದ್ದಾರೆ ವಿಧೇಯತೆಯ ತರಬೇತಿ  ಕೂಗಾಡಲು, ಪ್ರತಿಭಟಿಸಲು ನನಗೆ ತಿಳಿಯದು  ದೂರಲು, ಬೇಡವೆನ್ನಲು ಬಾರದು  ಬರುವುದೇನಿದ್ದರೂ ಮೌನವಾಗಿ ಸಹಿಸಿಕೊಳ್ಳುವುದು ಸುಸ್ತನ್ನು  ಈ ಜಾಗಕ್ಕೆ ಮೊದಲಸಲ ಬಂದಾಗ ಪ್ರತಿತಿಂಗಳೂ ಹತ್ತನೇ ತಾರೀಕಿಗಾಗಿ ಹಾತೊರೆಯುತ್ತಿದ್ದೆ  ಪಗಾರದ ಕಂದು ಬಣ್ಣದ ಚೀಟಿಯ ಸಾಂತ್ವನದ ಬದಲಾಗಿ  ನಾನು ಅರೆದು ನುಣುಪು ಮಾಡುತ್ತಿದ್ದೆ  ನನ್ನ ಮತ್ತು ನನ್ನ ಪದಗಳ ಚೂಪುಗಳನ್ನು  ಕೆಲಸಕ್ಕೆ ತಪ್ಪಿಸಿಕೊಳ್ಳಲು ನಿರಾಕರಿಸುತ್ತಿದ್ದೆ  ಅನಾರೋಗ್ಯ ರಜೆಯನ್ನು ನಿರಾಕರಿಸುತ್ತಿದ್ದೆ, ಖಾಸಗೀ ಕೆಲಸಕ್ಕಾಗಿರುವ ರಜೆಯನ್ನು ನಿರಾಕರಿಸುತ್ತಿದ್ದೆ, ತಡವಾಗಿ ಬರಲು ನಿರಾಕರಿಸುತ್ತಿದ್ದೆ,  ಬೇಗ ಹೊರಡಲು ನಿರಾಕರಿಸುತ್ತಿದ್ದೆ.  ಅಸೆಂಬ್ಲಿ ಲೈನ್ ಬದಿಗೆ ನಿಂತಿರುತ್ತಿದ್ದೆ ನಾನು  ನೇರವಾಗಿ ಕಬ್ಬಿಣದ ಸಲಾಕೆಯ ಹಾಗೆ  ಕೈಗಳು ಹಾರಾಟದಲ್ಲಿದ್ದಂತೆ  ಅದೆಷ್ಟು ದಿವಸ, ಅದೆಷ್ಟು ರಾತ್ರಿ ನಾನು ಹಾಗೇ ನಿಂತನಿಂತಲ್ಲೇ ನಿದ್ರಿಸಿದ್ದೆ?

ಕ್ಸು ಲಿಷೀ - ಮೂರು ಕವಿತೆಗಳು

ಇಮೇಜ್
ಮೂಲ: ಕ್ಸು ಲಿಷೀ (ಚೈನೀಸ್)  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕವಿತೆ ಓದುವ ಮುನ್ನ:   ಫಾಕ್ಸ್ ಕಾನ್ ಕಂಪನಿಯ ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿದ್ದ ಕ್ಸು ಲಿಷೀ (೧೯೯೦-೨೦೧೪) ಎಂಬ ತರುಣ ತನ್ನ ೨೪ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಈತನ ಹಾಗೇ ಶೆನ್ ಜೆನ್ ಪ್ರಾಂತದಲ್ಲಿ ಫಾಕ್ಸ್ ಕಾನ್ ಫ್ಯಾಕ್ಟರಿಗಳಲ್ಲಿ ಅನೇಕ ಕಾರ್ಮಿಕರು ತಮ್ಮ ದುರ್ಭರ ಜೀವನ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಾಗ ಪಾಶ್ಚಿಮಾತ್ಯ ಮಾಧ್ಯಮಗಳ ಗಮನ ಅತ್ತ ಹರಿಯಿತು.   ಒಟ್ಟು ಹದಿನೆಂಟು ಜನ ಫ್ಯಾಕ್ಟರಿಗಳ ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆಗೆ ಪ್ರಯತ್ನಿಸಿದರು. ಇವರಲ್ಲಿ ೧೪ ಮಂದಿ ಸಾವನ್ನಪ್ಪಿದರು. ಇವರಲ್ಲಿ ಕ್ಸು ಲಿಷೀ ಕೂಡಾ ಒಬ್ಬ. ಮರಣದ ನಂತರ ಈತನ ಸ್ನೇಹಿತರು ಇವನ ಕವಿತೆಗಳನ್ನು ಅಚ್ಚುಮಾಡಿದರು. ಇವನ ಕವಿತೆಗಳಲ್ಲಿ ಫ್ಯಾಕ್ಟರಿ ಕಾರ್ಮಿಕರ ಕರಾಳ ಬದುಕಿನ ನೆರಳು ಗಾಢವಾಗಿದೆ. ಕವಿತೆಗಳಲ್ಲಿರುವ ಸೂಕ್ಷ್ಮತೆ ಮತ್ತು ಜಾಣ್ಮೆ ನಮ್ಮ ಮನಸ್ಸನ್ನು ಮಿಡಿಯುತ್ತವೆ.  ಈತನ ಮೂರು ಕವಿತೆಗಳ ಭಾಷಾಂತರ ಕೆಳಗೆ ಕೊಟ್ಟಿದೆ.  ಕೆಳಕ್ಕೆ ಬಿದ್ದಾಗ  ಸ್ಕ್ರೂಮೊಳೆ   ಓವರ್ ಟೈಮ್ ರಾತ್ರಿಯಲ್ಲಿ ಒಂದು ಸ್ಕ್ರೂಮೊಳೆ ಕೆಳಗೆ ಬಿದ್ದುಹೋಯಿತು ಒಂದು ಸಣ್ಣ ಕಿಂಕಿಣಿ ಸದ್ದು, ಅಷ್ಟೆ. ಯಾರೂ ಗಮನಿಸುವುದಿಲ್ಲ. ಇಂಥದ್ದು ಹಿಂದೆಯೂ ಆಗಿದೆ. ಇಂಥದೇ ರಾತ್ರಿಯಲ್ಲಿ ಯಾರೋ ಒಬ್ಬರು ನೆಲಕ್ಕೆ ಬಿದ್ದಾಗ. ಭವಿಷ್ಯವಾಣಿ  ಹಳ್ಳಿಯ ಹಿರೀಕರು ಹೇಳುತ್ತಾರೆ, ನಾ