ಪೋಸ್ಟ್‌ಗಳು

Sahir Ludhiyanawi ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಒದ್ದೆಕಣ್ಣಿಂದ ಒರೆಸಿ ಕಣ್ಣೀರು

ಇಮೇಜ್
ಮೂಲ ... ಸಾಹಿರ್‌ ಲೂಧಿಯಾನವಿ ಕನ್ನಡಕ್ಕೆ ... ಸಿ.ಪಿ.ರವಿಕುಮಾರ್ ಒದ್ದೆಕಣ್ಣಿಂದ ಒರೆಸಿ ಕಣ್ಣೀರು ಮುಗುಳುನಗೆಯ ಹರಡು ನೋಡೋಣ ನತಶಿರರಿಂದ ಏನೂ ಸಾಧಿಸದು, ತಲೆಯ ಮೇಲೆತ್ತಿ ನಿಲ್ಲು ನೋಡೋಣ ಸಿಕ್ಕದು ಬಾಳು ಭಿಕ್ಷೆಯಲ್ಲೆಂದೂ, ಕಸಿಯಬೇಕು ಅದನ್ನು ಮುನ್ನುಗ್ಗಿ, ಕ್ರೂರ ಜಗದಿಂದ ನಿನ್ನ ಹಕ್ಕನ್ನು ಕಸಿದುಕೋ ಒಮ್ಮೆ ಮುಂದೆ ನೋಡೋಣ ಬಣ್ಣವು ಜಾತಿ ಕುಲ ಧರ್ಮಗಳು, ಮಾನವತೆ ಎಲ್ಲದಕ್ಕೂ ಮೀರಿದುದು ಸಹಮತ ನನ್ನ ಮಾತಿಗೆ ಇತ್ತು ನನ್ನ ಬಳಿ ಬಂದು ನಿಲ್ಲು ನೋಡೋಣ ದ್ವೇಷವೇ ತುಂಬಿರುವ ವಿಶ್ವದೊಳು ಕಟ್ಟುವಾ ಪ್ರೀತಿ ತುಂಬಿದ ಗೂಡು ಹೆಗ್ಗಳಿಕೆ ಏನು ದೂರ ನಿಲ್ಲುವುದು? ನಿಲ್ಲು ಬಳಿಸಾರಿ, ಆಗ ನೋಡೋಣ

ನಾ ಸಾಗಿದೆನು ಬದುಕಿನ ಜೊತೆ ರಾಜಿಯಾಗುತಾ

ಇಮೇಜ್
ಮೂಲ ... ಸಾಹಿರ್ ಲುಧಿಯಾನವಿ ಕನ್ನಡಕ್ಕೆ ... ಸಿಪಿರವಿಕುಮಾರ್ (ಹಮ್ ದೋನೋ ಚಿತ್ರದಲ್ಲಿ ಬಳಸಿಕೊಳ್ಳಲಾದ ಈ ಗೀತೆಯನ್ನು ಮೊಹಮ್ಮದ್ ರಫಿ ಹಾಡಿದ್ದಾರೆ. ಮೈ ಜಿಂದಗೀ ಕಾ ಸಾಥ್ ನಿಭಾತಾ ಚಲಾ ಗಯಾ ಎಂದು ಪ್ರಾರಂಭವಾಗುವ ಈ ಹಾಡನ್ನು ತೆರೆಯ ಮೇಲೆ ದೇವ್ ಆನಂದ್ ನಿರೂಪಿಸಿದ್ದಾರೆ.) ನಾ ಸಾಗಿದೆನು ಬದುಕಿನ ಜೊತೆ ರಾಜಿಯಾಗುತಾ! ಚಿಂತೆಯನ್ನು ಧೂಮದಲ್ಲಿ ಮಾಯ ಮಾಡುತಾ! ಹಾಳಾದುದಕ್ಕೆ ವ್ಯರ್ಥ ಶೋಕದಾಚರಣೆಗಳು! ಹಾಳಾದುದಕ್ಕೆ ಸಾಗಿದೆ ನಾ ಹಬ್ಬ ಮಾಡುತಾ ಗುರಿಯೆಂದು ಬಗೆದೆ ನಾನು ಕೈಗೆ ಪ್ರಾಪ್ತವಾದುದು ಸಾಗಿದೆ ನಾ ಕಳೆದುಹೋದುದನ್ನು ಮರೆಯುತ ನೋವು ನಲಿವುಗಳಲ್ಲಿ ಎಲ್ಲಿ ಭೇದವಿಲ್ಲವೋ ನಾ ಸಾಗಿದೆ ಮನವನತ್ತ ಕಡೆಗೆ ದೂಡುತ

ನೀಡುವಿರಿ ಶಿಕ್ಷೆ

ಇಮೇಜ್
ಮೂಲ .. ಸಾಹಿರ್‌ ಲುಧಿಯಾನವಿ ಕನ್ನಡಕ್ಕೆ ... ಸಿಪಿರವಿಕುಮಾರ್ "ಜುರ್ಮ್-ಎ-ಉಲ್ಫತ್ ಕಿ ಹಮೇಂ ಲೋಗ್ ಸಜಾ ದೇತೇ ಹೈನ್" ಎಂದು ಪ್ರಾರಂಭವಾಗುವ ಈ ಗೀತೆಯನ್ನು "ತಾಜ್ ಮಹಲ್" ಹಿಂದಿ ಚಿತ್ರದಲ್ಲಿ ಬಳಸಲಾಗಿದೆ. ಇದನ್ನು ಲತಾ ಮಂಗೇಶ್ಕರ್ ಹಾಡಿದ್ದಾರೆ. "ಜಬ್ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ?" ಗೀತೆಗೂ ಇದಕ್ಕೂ ಇರುವ ಸಾಮ್ಯವನ್ನು ಗಮನಿಸಬಹುದು. ನೀಡುವಿರಿ ಶಿಕ್ಷೆ ಪ್ರೇಮಾಂಕುರದ ಪಾಪಕ್ಕೆ ಗಾಳಿ ನೀಡುವಿರಿ ಮಂದಾಗ್ನಿಗೆ, ಮುನ್ನೆಚ್ಚರಿಕೆ! ಭ್ರಮಿತಮತಿಯೇ ನಾವು, ತ್ಯಜಿಸುವೆವೆ ಪರಸ್ಪರರ? ನೀಡುವೆವು ಪ್ರಾಣವನ್ನೇ ಮಾಡಿದ ವಾಗ್ದಾನಕ್ಕೆ ಹೃದಯಗಳ ತೂಗುವಿರಾ ಸ್ವರ್ಣದ ತಕ್ಕಡಿಯಲ್ಲಿ! ನಾವು ನೀಡುವೆವು ಪ್ರತಿಪ್ರೇಮವನೇ ಪ್ರೇಮಕ್ಕೆ ಮಹಲು ಸಿಂಹಾಸನವು ಧನಕನಕಗಳೇನು ಮಹಾ! ಪ್ರೇಮಿಗಳು ಸಿದ್ದ ದಿವ್ಯಾಮೃತದ ತ್ಯಾಗಕ್ಕೆ! ಬೆಸೆದುಕೊಂಡಿವೆ ಹೃದಯ, ಒಂದು ನಮ್ಮ ಪ್ರಾಣಗಳು ಸಿದ್ದರಾಗಿಹೆವು, ಶಿಕ್ಷೆ ನೀಡಿರಿ ಮನಸೋ ಇಚ್ಛೆ ಮೂಲ .. ಸಾಹಿರ್‌ ಲುಧಿಯಾನವಿ ಕನ್ನಡಕ್ಕೆ ... ಸಿಪಿರವಿಕುಮಾರ್

ಧೂಮದಲ್ಲಿ ಮಾಯ

ಇಮೇಜ್

ದೂರದಲಿ ನಿಂತು ಮಾತನಾದದಿರು

ಇಮೇಜ್
ಮೂಲ... ಸಾಹಿರ್‌ ಲುಧಿಯಾನವಿ ಕನ್ನಡಕ್ಕೆ ... ಸಿ. ಪಿ. ರವಿಕುಮಾರ್ (ದೂರ್ ರೆಹ್ ಕರ್ ನ ಕರೋ ಬಾತ್ ... ಎಂಬ ಈ ಚಿತ್ರಗೀತೆಯನ್ನು ನೀವೂ ಕೇಳಬಹುದು . ಪ್ರೇಮಿಯೊಬ್ಬ ತನ್ನ ಪ್ರೇಮಿಕೆ ಯನ್ನು ಒಲಿಸಿಕೊಳ್ಳುವ ಸನ್ನಿವೇಶಕ್ಕಾಗಿ ಸಾಹಿರ್ ಎಷ್ಟು ಮಾದಕವಾದ ಗೀತೆಯನ್ನು ರಚಿಸಿದ್ದಾರೆ!) ದೂರದಲಿ ನಿಂತು ಮಾತನಾಡದಿರು, ಬಾ ಬಳಿಗೆ ಅವಿಸ್ಮರಣೀಯವಿಗೋ ರಾತ್ರಿ ಇದು, ಬಾ ಬಳಿಗೆ! ನಿನ್ನ ಸ್ಪರ್ಶಕೆ ಕಾದು ಕಳೆದಿರುವೆನು ನಾನೊಂದು ಯುಗ ಇನ್ನು ಕೇಳದು ನನ್ನ ಮಾತನು ಮನ, ಬಾ ಬಳಿಗೆ! ಬೀಸುತಿಹ ಚಳಿಗಾಳಿಗೆ ಭುಗಿಲೇಳುವ ಆಸೆಗಳು ಕೊಂದು ತೀರುವುದು ಮಳೆ ಸಿಂಚನವಿದು, ಬಾ ಬಳಿಗೆ! ಹೀಗೆ ನನ್ನೊಳು ಏಕೆ ನಾಚಿಕೆ, ಸಂಕೋಚಗಳು? ಬಾಳಸಂಗಾತಿಗಳು ನಾವು, ಇಗೋ, ಬಾ ಬಳಿಗೆ!

ಸಂಜೆ ಮನೆಮಾಡುತಿದೆ

ಇಮೇಜ್
ಮೂಲ ... ಸಾಹಿ‌ ಲುಧಿಯಾನವಿ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ (ಪರ್ಬತೋಂಕೆ ಪೇಡೋoಪರ್ ... ಎಂಬ ಈ ಗೀತೆಯನ್ನು ಸುಮನ್ ಕಲ್ಯಾಣ್ ಪುರ್ ಮತ್ತು ಮೊಹಮದ್ ರಫಿ ಅವರ ಕಂಠದಲ್ಲಿ ನೀವೂ ಕೇಳಬಹುದು .) ಸಂಜೆ ಮನೆಮಾಡುತಿದೆ ಪರ್ವತದ ಮರಗಳಲಿ ಕೆಂಪು ಸಂಜೆಯ ಬೆಳಕು, ನೀಲನೇರಳೆ ಇರುಳು ಹೃದಯಗಳೆರಡು ಕ್ಷಣ ಒಂದಾಗುವ ಘಳಿಗೆ ಬಣ್ಣದೋಕುಳಿಯಲ್ಲಿ ಮೀಯಿಸುತಿದೆ ಮುಗಿಲು ನಿಂತ ನೀರೊಳು ಗೀತೆ ಸರಸರ ಹರಿಯುತ್ತಿದೆ ಮಂಜಿನೊಂದಿಗೆ ಗಂಧ ಬೆರೆಸುವ ತಂಬೆಲರು ಬನ್ನಿ ಒಂದಾಗುವ ಈ ಚಿತ್ರಮಯ ಸಂಜೆಯೊಳು ಮುನ್ನಡಿಯ ಬರೆಯುತ್ತಿದೆ ಮುಂಬೆಳಗಿಗೆ ಇರುಳು

ಒಂದೆರಡೇ ಕ್ಷಣಗಳ ಕವಿ

ಇಮೇಜ್
ಮೂಲ ... ಸಾಹಿರ್ ಲೂಧಿಯಾನವಿ ಕನ್ನಡಕ್ಕೆ ... ಸಿ.ಪಿ. ರವಿಕುಮಾರ್ (ಕಭೀಕಭೀ ಚಿತ್ರದಲ್ಲಿ ಸಾಹಿರ್ ಲೂಧಿಯಾನವಿ ಅವರ ಈ ಗೀತೆಯನ್ನು ಬಳಸಿಕೊಳ್ಳಲಾಗಿದೆ.) ಒಂದೆರಡೇ ಕ್ಷಣಗಳ ಕವಿ ನಾನು, ಒಂದೆರಡೇ ಕ್ಷಣಗಳು ನನ್ನ ಕಥೆ ಒಂದೆರೆಡೇ ಕ್ಷಣ ನನ್ನಯ ರೂಪ, ಒಂದೆರಡೇ ಕ್ಷಣ ಯೌವ್ವನಚರಿತೆ ನನಗಿಂತಲೂ ಮೊದಲು ಸಹಸ್ರಾರು ಕವಿಗಳು ಬಂದರು ನಿರ್ಗಮಿಸಿದರು ನಿಡುಸುಯ್ದರು ಕೆಲವರು ಕಬ್ಬಿಗರು, ಕೆಲವರು ಪದ ಹಾಡಿ ಹೊರಟವರು ಅವರದ್ದೂ ಕ್ಷಣಗಳ ಕಥೆಯಷ್ಟೆ, ನನ್ನದೂ ಕೂಡಾ ಕ್ಷಣಗಳದೇ ಕಥೆ ಇಂದಿರುವೆನು ನಿಮ್ಮೊಂದಿಗೆ ನಾಳೆ ಕೈಬೀಸಿ ಇಗೋ ನಾನೂ ಹೊರಟೆ ಏನೋ ಎರಡು ಮಾತುಗಳನ್ನು ಹೇಳಿದೆನಲ್ಲ ಅಷ್ಟೇ ಪುಣ್ಯ ನೀವೂ ಕಿವಿಗೊಟ್ಟು ಕೇಳಿದಿರಿ, ನಿಮ್ಮಯ ವಿಶ್ವಾಸಕ್ಕೆ ಧನ್ಯ ಬರುವರು ಮುಂದೆ ಬೇಕಾದಷ್ಟು ಹಾಡಿನ ಮೊಗ್ಗುಗಳನ್ನು ಬಿಡಿಸುವರು ನನಗಿಂತಲೂ ಒಳ್ಳೆಯ ಕಬ್ಬಿಗರು, ನಿಮಗಿಂತಲೂ ಒಳ್ಳೆಯ ಕೇಳುಗರು ಫಸಲಿನ ಹಾಗೆ ನಾನೂನೀವೂ, ಬೆಳೆಯುವುದೇ ಕತ್ತರಿಸಲು ಕೊನೆಗೆ ಜೀವನವೆಂಬುದು ಅಮೃತ ದ್ರವ್ಯ, ಸಾಧಿಸು ತೃಪ್ತಿ ಒಂದೇ ಹನಿಗೆ ಸಾಗರದೊಳು ಉಕ್ಕಿದ ತೆರೆ ನಾನು, ಸಾಗರದಲ್ಲೇ ಮರೆಯಾಗುವೆನು ಮಣ್ಣಿನ ಆತ್ಮದ ಕನಸು ನಾನು, ಕೊನೆಗೂ ಮಣ್ಣಲ್ಲೇ ಮಲಗುವೆನು ನೆನೆಯುವರೇ ನಾಳೆಗೆ ನನ್ನನ್ನು ನೆನೆಯುವರೇಕೆ ನನ್ನನು ನಾಳೆ? ಹಾಳೇತಕೆ ಕಾಲವ ಮಾಡುವರು ಓದಲು ಪುನಃ ನನ್ನಯ ಹಾಳೆ?

ಕಣ್ಣುಗಳು ಸಾವಿರಾರು ಮನದ ಕನ್ನಡಿಗೆ

ಇಮೇಜ್
ಮೂಲ - ಸಾಹಿರ್ ಲುಧಿಯಾನ್ವಿ  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಇದೊಂದು ಭಕ್ತಿಗೀತೆ. ಕಾಜಲ್ ಎಂಬ ಹಿಂದಿ ಚಿತ್ರದಲ್ಲಿ ಇದನ್ನು ಬಳಸಿಕೊಳ್ಳಲಾಗಿದೆ.  ಮುಸಲ್ಮಾನ ಧರ್ಮೀಯರಾದ ಸಾಹಿರ್ ಲುಧಿಯಾನ್ವಿ ಈ ಭಕ್ತಿಗೀತೆಯನ್ನು ಬರೆದಿರುವುದು ವಿಶೇಷ.  "ರವಿ" ಎಂಬ ಸಂಗೀತ ನಿರ್ದೇಶಕರ ಮಾರ್ಗದರ್ಶನದಲ್ಲಿ ಈ ಗೀತೆಯನ್ನು ಆಶಾ ಭೋಂಸ್ಲೆ ಹಾಡಿದ್ದಾರೆ. ಈ ಗೀತೆಯಲ್ಲಿ ಮನುಷ್ಯ ಮತ್ತು ಭಗವಂತನ ನಡುವೆ ನಡೆದ ಒಂದು ಸಂವಾದವನ್ನು ಕುರಿತು ಕವಿ ಬರೆದಿದ್ದಾರೆ.  "ಪ್ರಭೂ, ನಿನ್ನನ್ನು ನಾನು ಪಡೆಯುವುದು ಹೇಗೆ?" ಎಂದು ಮನುಷ್ಯ ಭಗವಂತನನ್ನು ಕೇಳಿದಾಗ ಭಗವಂತನು "ನಿನ್ನ ಮನಸ್ಸಿನಲ್ಲಿ ಹುಡುಕಿದರೆ ಸಿಕ್ಕುತ್ತೇನೆ" ಎಂದು ಉತ್ತರಿಸುತ್ತಾನೆ. "ನನ್ನನೆಲ್ಲಿ ಅರಸುವೆ?" ಎಂಬ ಕಬೀರನ ಒಂದು ಭಕ್ತಿಗೀತೆ ನೆನಪಾಗುತ್ತದೆ.  "ತೋರಾ ಮನ್ ದರ್ಪಣ್ ಕಹಲಾಯೇ" ಎಂದು ಪ್ರಾರಂಭವಾಗುವ ಈ ಗೀತೆಯ ಧ್ವನಿಮುದ್ರಿಕೆ ನಿಮಗೆ ಅಂತರಜಾಲದಲ್ಲಿ ಸಿಕ್ಕುತ್ತದೆ. ಈಗ ಕವಿತೆಯ ಅನುವಾದವನ್ನು ಓದಿ.    ಹೇಗೆ ಪಡೆಯಲಿ ನಿನ್ನನ್ನು ಪ್ರಭುವೇ ಎಂದು ಅವಲತ್ತುಕೊಂಡಾಗ ಪ್ರಾಣಿ ನಿನ್ನ ಮನದಲ್ಲಿ ಹುಡುಕಿದರೆ ಸಿಕ್ಕುವೆನು ಎಂದು ಮಾರ್ನುಡಿಯಿತು ಪ್ರಭುವಾಣಿ  ಅರಿತುಕೋ ನಿನ್ನ ಮನಸ್ಸನ್ನು ಸೃಷ್ಟಿಸಿದ್ದೇನೆ ಕನ್ನಡಿಯ ಹಾಗೆ ಒಳ್ಳೆಯದು ಕೆಟ್ಟದ್ದು ಎಲ್ಲವನ್ನೂ  ನೋಡುತ್ತದ...

ಮತ್ತೆ ಬೆಳಗಾಗುವುದು

ಇಮೇಜ್
ಸಾ ಹಿರ್ ಲುಧಿಯಾನವಿ ಅವರ ಲೇಖನಿಯಲ್ಲಿ ಮೂಡಿದ "ವೋ ಸುಬಹ್ ಕಭೀ ತೋ ಆಯೇಗೀ" ಯಾರ ಮನಸ್ಸನ್ನಾದರೂ ಕಲಕುವ ಗೀತೆ. ಫಿರ್ ಸುಬಹ್  ಹೋಗೀ ಎಂಬ ಚಿತ್ರಕ್ಕೆ ಬರೆದ ಗೀತೆಯನ್ನು ಖಯ್ಯಾಮ್ ಸಂಗೀತಕ್ಕೆ ಅಳವಡಿಸಿದ್ದಾರೆ ಮತ್ತು ಮುಖೇಶ್ ಹಾಡಿದ್ದಾರೆ.  ಇಲ್ಲವೇ ಇಲ್ಲವೋ ಎಂಬಷ್ಟು ಹಿನ್ನೆಲೆ ವಾದ್ಯವನ್ನು ಬಳಸಿ ಸಾಹಿತ್ಯಕ್ಕೆ ಒತ್ತು ಕೊಟ್ಟಿರುವುದು ಈ ಗೀತೆಯ ವಿಶೇಷ.  ತಮ್ಮ ಮಾಮೂಲು ಶೈಲಿಯಲ್ಲಿ ಕಠಿಣ ಉರ್ದೂ ಶಬ್ದಗಳನ್ನು ಬಳಸುವ ಸಾಹಿರ್ ಈ ಗೀತೆಯಲ್ಲಿ ವಿಭಿನ್ನವಾದ ಶೈಲಿಯನ್ನು ಅನುಸರಿಸಿದ್ದಾರೆ ಎಂಬುದು ಕೂಡಾ ಈ ಹಾಡಿನ ವಿಶೇಷ. ಒಂ ಬತ್ತು ತಿಂಗಳು ತುಂಬುವ ಮೊದಲೇ ಹುಟ್ಟಿದ ನನ್ನ ಮಗಳು ಹತ್ತು ದಿನ  ತೀವ್ರ ನಿಗಾ ಘಟಕದಲ್ಲಿ ಇದ್ದ ಸಮಯ. ಮಗು ಹುಟ್ಟಿದ ಸಂಭ್ರಮ ಇರಬೇಕಾಗಿದ್ದ ಕಡೆ ಆತಂಕ. ಪ್ರತಿ ದಿವಸ ಮನೆಯಿಂದ ವಾರ್ಡಿಗೆ, ವಾರ್ಡಿನಿಂದ ಐಸಿಯೂ, ಐಸಿಯೂನಿಂದ ಡಾಕ್ಟರ್ ಕೋಣೆಗೆ ತಿರುಗುವುದು. ಡಾಕ್ಟರ್ ಏನಾದರೂ ಶುಭಸೂಚನೆ ನೀಡುತ್ತಾರೋ ಎಂದು ಅವರ ಕಡೆ ನೋಡುವುದು.  ಯಾವ ಭರವಸೆಯನ್ನೂ ಕೊಡಲು ಸಾಧ್ಯವಿಲ್ಲ ಎಂಬ ವೈದ್ಯರ ಮಾತುಗಳನ್ನು ಕೇಳಿಸಿಕೊಂಡರೂ ಮನೆಯ ಹಿರಿಯರಿಗೆ "ಎಲ್ಲಾ ಚೆನ್ನಾಗಿದೆ" ಎಂದೇ  ಹೇಳುವುದು. ಈ ದಿನಗಳು ಎಂದು ಕೊನೆಗೊಳ್ಳುವುವೋ ಎಂದು ಅಧೀರರಾಗುವುದು ... ಒಂದು ದಿನ ಐಸಿಯೂಗೆ ಹೋಗಿದ್ದಾಗ ಹೊರಗೆ ಏನೋ ಸ್ವಲ್ಪ ಗಲಾಟೆ ಕೇಳಿಸಿತು. ಒಬ್ಬ ವೈದ್ಯೆ...

ಸಾಹಿರ್ ಲುಧಿಯಾನವಿ ಅವರ ಗಜಲ್

ಗಜಲ್ - ಸಾಹಿರ್ ಲುಧಿಯಾನವಿ  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಭಾಷಾಂತರಕಾರನಿಗೆ ಅತ್ಯಂತ ಕಷ್ಟದ ಕೆಲಸವೆಂದರೆ ಗಜಲ್ ಅನುವಾದ! ಉರ್ದುವಿನ ಹೆಸರಾಂತ ಕವಿ ಸಾಹಿರ್ ಲುಧಿಯಾನವಿ ಅವರ ಕೆಲವು ಗಜಲ್ ಗಳ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ. ಹಿಂದಿ ಚಿತ್ರಗೀತೆಗಳಿಗೆ ಸಾಹಿರ್ ಅವರ ಕೊಡುಗೆ ಅಪಾರವಾದದ್ದು. ಅವರ ಹೆಸರೇ ಹೇಳುವಂತೆ ಅವರು ಪಂಜಾಬಿನ ಲುಧಿಯಾನಾ ಪ್ರಾಂತದವರು (ಜನನ - ೮ ಮಾರ್ಚ್ ೧೯೨೧). ಸಾಹಿರ್ ಹದಿಮೂರು ವರ್ಷದ ಹುಡುಗನಾಗಿದ್ದಾಗ ಅವರ ತಂದೆ ಎರಡನೇ ಮದುವೆ ಮಾಡಿಕೊಂಡರು. ಈ ಪ್ರಕರಣಕ್ಕೆ ಆಗಿನ ಕಾಲಕ್ಕೆ ಸಾಹಿರ್ ನ ತಾಯಿಯ ಪ್ರತಿಕ್ರಿಯೆ ತೀಕ್ಷ್ಣವಾದುದಾಗಿತ್ತು. ಅವರು ತಮ್ಮ ಪತಿಯನ್ನು ಬಿಟ್ಟು ಬೇರೆ  ಮನೆ ಮಾಡಿದರು. ಮಗು ಸಾಹಿರ್ ತಾಯಿಯ ಜೊತೆ ಇರಲು ಇಷ್ಟ ಪಟ್ಟ. ಶ್ರೀಮಂತ ತಂದೆಯ ಆಸ್ತಿಯನ್ನು ತೊರೆಯಬೇಕಾಯಿತು. ಅಷ್ಟೇ ಅಲ್ಲ, ಸೇಡಿನ ಮನೋಭಾವದ ತಂದೆಯ ಕ್ರೌರ್ಯವನ್ನೂ ಎದುರಿಸಬೇಕಾಯಿತು.  ತಾಯಿಯನ್ನು ಹೀಗೆ ಹಚ್ಚಿಕೊಂಡ ಸಾಹಿರ್ ಮುಂದೆ ವಿವಾಹ ಕೂಡಾ ಮಾಡಿಕೊಳ್ಳಲಿಲ್ಲ. ಬಡತನದಲ್ಲಿ ಬಾಲ್ಯ ಕಳೆಯಿತು. ಯುವಕ ಸಾಹಿರ್ ತನ್ನನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡ. ಅವನ ಬರಹಗಳು ಪ್ರಚೋದನಕಾರಿ ಎಂಬ ಕಾರಣಕ್ಕೆ ಬ್ರಿಟಿಷ್ ಸರಕಾರ ಅವನ ಮೇಲೆ ನಿಗಾ ಇಟ್ಟಿತು.  ಹೀಗಾಗಿ ಸಾಹಿರ್ ದೆಹಲಿಗೆ ಓಡಿ ಹೋಗಬೇಕಾಯಿತು. ಮುಂಬೈ ನಗರಿಯಲ್ಲಿ ಚಲನಚಿತ್ರಗಳಿಗೆ ಬರೆಯುವು...