ಪೋಸ್ಟ್‌ಗಳು

ನವೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮುಪಾಸಾ - ಒಂದು ವ್ಯಕ್ತಿ ಚಿತ್ರ

ಇಮೇಜ್
ಮುಪಾಸಾ - ಒಂದು ವ್ಯಕ್ತಿ ಚಿತ್ರ  ಸಿ ಪಿ ರವಿಕುಮಾರ್  ಎ ಮಿಲಿ ಜೋಲಾ ನಂತರ ಫ್ರೆಂಚ್ ಸಾಹಿತ್ಯದಲ್ಲಿ ಪ್ರಸಿದ್ಧಿಯ ತುದಿಯನ್ನೇರಿದವನು ಸಣ್ಣಕತೆಗಾರ ಗಿ ಡಿ ಮುಪಸಾ. ಮುನ್ನೂರಕ್ಕೂ ಹೆಚ್ಚು ಸಣ್ಣಕತೆಗಳನ್ನು ಮುಪಸಾ ಬರೆದ. ಸಣ್ಣಕತೆಗಳ ಸಾಮ್ರಾಜ್ಯದ ಅನಭಿಷಕ್ತ ಸಾಮ್ರಾಟ ಎಂದು ಅವನನ್ನು ಕರೆಯುತ್ತಾರೆ.  ಸಣ್ಣಕತೆಗಳಲ್ಲದೆ ಸುಮಾರು ಇನ್ನೂರು ಲೇಖನಗಳು, ಆರು ಕಾದಂಬರಿಗಳು ಮತ್ತು ಮೂರು ಪ್ರವಾಸಕಥನಗಳು ಇವನ ಲೇಖನಿಯಿಂದ ಹೊರಬಿದ್ದವು. ಮುಪಾಸಾ ಹುಟ್ಟಿದ್ದು ಶ್ರೀಮಂತ ಕುಟುಂಬದಲ್ಲಿ (ಆಗಸ್ಟ್ 5, 1850). ತಾಯಿ ಲಾರಾ ಅಂದಿನ ಪ್ರಸಿದ್ಧ ಲೇಖಕ ಫ್ಲಾಬರ್ಟ್ ನ ಬಾಲ್ಯ ಸ್ನೇಹಿತೆ. ಹೀಗಾಗಿ  ಮನೆಯಲ್ಲಿ ಸಾಹಿತ್ಯಕ ವಾತಾವರಣವಿತ್ತು.  ಆದರೆ ತಂದೆ ಗುಸ್ತಾವ್ ಗೆ ಲೌಕಿಕ ವ್ಯವಹಾರಗಳಲ್ಲಿ  ಹೆಚ್ಚು ಆಸಕ್ತಿ; ಸಾಹಿತ್ಯ-ಸಂಸ್ಕೃತಿಗಳ ಕಡೆ ಅಸಡ್ಡೆ. ಹೀಗಾಗಿ ಮುಪಸಾನ ತಂದೆ-ತಾಯಿ ಕ್ರಮೇಣ ದೂರವಾದರು. ಅವನು ಹದಿಮೂರು ವರ್ಷದ ಬಾಲಕನಾಗಿದ್ದಾಗ ಅವರು ವಿಚ್ಛೇದನ ಪಡೆದರು. ಬೋರ್ಡಿಂಗ್ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆಯಿತು.  ಬುದ್ಧಿವಂತ ಎಂಬ ಹೆಸರು ಗಳಿಸಿದರೂ ಅಸಭ್ಯ ಪದ್ಯ ಬರೆದ ಕಾರಣಕ್ಕೆ ಶಾಲೆಯಿಂದ ಮುಪಸಾನನ್ನು ಉಚ್ಚಾಟನೆ ಮಾಡಲಾಯಿತು.  ಆಗ ಅವನ ತಾಯಿ ರೂವೆನ್ ಪಟ್ಟಣಕ್ಕೆ ಬಂದು ಮಕ್ಕಳನ್ನು ಬೇರೊಂದು ಶಾಲೆಗೆ ದಾಖಲು ಮಾಡಿದಳು. ತಾಯಿಯ ಬಲವಂತದ ಕಾರಣ ಹದಿನೇಳು ವರ್ಷದವನಾಗಿದ್ದಾಗ ಮುಪಸಾ ಲೇಖಕ ಫ್ಲಾಬರ್ಟ್ ನನ್ನು ಭೇಟಿಯಾದ.  ಮುಪಸಾ

ಬೆಣ್ಣೆ ಮುದ್ದೆ - ಭಾಗ ೯

ಇಮೇಜ್
ಬೆಣ್ಣೆ ಮುದ್ದೆ - ಭಾಗ ೯ ಫ್ರೆಂಚ್ ಕತೆ - ಗಿ ಡಿ ಮುಪಸಾ  ಕನ್ನಡಕ್ಕೆ - ಸಿ ಪಿ ರವಿಕುಮಾರ್  (ಇದು ಕಡೆಯ ಭಾಗ -  ಎಂಟನೇ ಭಾಗವನ್ನು ಇಲ್ಲಿ ಓದಿ )  ಅ ವರು ಇಡೀ ಮಧ್ಯಾಹ್ನ ಅವಳಿಗೆ ಯೋಚಿಸಲು ಅವಕಾಶ ಮಾಡಿಕೊಟ್ಟರು. ಆದರೆ ಅವಳನ್ನು "ಮದಾಂ"   ಎಂದು ಸಂಬೋಧಿಸುವ ಬದಲು "ಮದಮೊಸೆಲ್" ಎಂದು ಸಂಬೋಧಿಸಿದರು. ತಮ್ಮ ದೃಷ್ಟಿಯಲ್ಲಿ ಅವಳು ಒಂದು ಅಂಗುಲ ಗಾತ್ರ  ಕೆಳಕ್ಕಿಳಿದಿದ್ದಾಳೆ ಎಂದು ಸೂಕ್ಷ್ಮವಾಗಿ ಬೊಟ್ಟು ಮಾಡಿದಂತೆ ತೋರಿತು. ಸಂಜೆಯ ಉಪಾಹಾರ ಬಡಿಸಿದ ನಂತರ ವಸತಿಗೃಹದ ಮಾಲೀಕ ಪ್ರತ್ಯಕ್ಷನಾಗಿ ಮತ್ತೆ ಅದೇ ಹಾಡು ಹಾಡಿದ - "ಮಿಸ್ ಎಲಿಜಬೇತ್ ರೂಸೋ ತಮ್ಮ ನಿಲುವು ಬದಲಾಯಿಸಿದ್ದಾರೆಯೇ ಎಂದು ಕೇಳಲು ಪ್ರಷ್ಯನ್ ಅಧಿಕಾರಿ ನನ್ನನ್ನು ಕಳಿಸಿದ್ದಾರೆ." ಬೆಣ್ಣೆಮುದ್ದೆ ಅಷ್ಟೇ ಒಣಕಲು ಸ್ವರದಲ್ಲಿ "ಇಲ್ಲ," ಎಂದಳು. ರಾತ್ರಿಯ ಊಟದ ವೇಳೆ ಪ್ರಯಾಣಿಕರ ಮೈತ್ರಿಕೂಟ ಸ್ವಲ್ಪ ಬಡವಾದಂತೆ ಕಂಡಿತು. ಲುಸೆವೂ ಒಂದಲ್ಲ ಮೂರು ಸಲ ಕಹಿಯಾಗಿ ಮಾತಾಡಿದ. ಪ್ರತಿಯೊಬ್ಬರೂ ಹೆಣ್ಣಿನ ತ್ಯಾಗದ ಹೊಸ ನಿದರ್ಶನಕ್ಕಾಗಿ ತಮ್ಮ ಸ್ಮೃತಿಪಟಲಗಳಲ್ಲಿ ವ್ಯರ್ಥವಾಗಿ ಹುಡುಕಾಡಿದರು. ಕೌಂಟೆಸ್ ಗೆ ಒಮ್ಮೆಲೇ ಅದೇಕೋ ಧರ್ಮವನ್ನು ಕುರಿತು ಸ್ವಲ್ಪ ಜಿಜ್ಞಾಸೆ ಮಾಡುವ ಹಂಬಲ ಉಂಟಾಗಿ ಸಾಧ್ವಿಗಳನ್ನು "ಸಂತರು ಮಾಡಿದ ಯಾವುದಾದರೂ ಕಾರ್ಯಗಳ ವಿಷಯ ಹೇಳಿ" ಎಂದು ಕೇಳಿಕೊಂಡಳು. ಅವರು ಹೇಳಿದ ಕತೆಗಳನ್ನು ಕೇಳಿ

ಬೆಣ್ಣೆಮುದ್ದೆ - ಭಾಗ ೮

ಇಮೇಜ್
ಬೆಣ್ಣೆಮುದ್ದೆ - ಭಾಗ  ೮  ಮೂಲ ಫ್ರೆಂಚ್ ಕತೆ - ಗಿ ಡಿ ಮುಪಸಾ  ಕನ್ನಡಕ್ಕೆ - ಸಿ ಪಿ ರವಿಕುಮಾರ್   ( ಏಳನೇ ಭಾಗ ಇಲ್ಲಿ ಓದಿ ) ಈ ಗ ಶ್ರೀಮತಿ ಲುಸೆವೂ ತನ್ನ ನಾಲಿಗೆ ಹರಿಯಬಿಟ್ಟಳು. "ನಾವೇನು ಇಲ್ಲಿ ಮುದುಕರಾಗುವ ತನಕ ಇರಬೇಕಂತೇನು! ಈ ಹಲ್ಕಾ ಹೆಣ್ಣು ಎಂತೆಂಥವರ ಜೊತೆಗೋ ಹೋಗಿದ್ದಾಳೆ. ಇವನ ಜೊತೆ ಹೋಗೋದಕ್ಕೆ ಏನು ಬಿನ್ನಾಣವೋ ಕಾಣೆ! ರೂವೆನ್ ಪಟ್ಟಣದಲ್ಲಿ ಫ್ರೆಂಚ್ ಅಧಿಕಾರಿಗಳು ಹಾಗಿರಲಿ ಅವರ ಗಾಡಿ ಓಡಿಸುವವರ ಜೊತೆ ಕೂಡಾ ಇವಳ ಧಂಧೆ ನಡೆದಿದೆ! ಹೂಂ, ಯಾಕೆ ಹೇಳ್ತೀರಿ! ಪ್ರಿಫೆಕ್ಟ್ ನ ಗಾಡಿ ಓಡಿಸುವವನು! ಅವನ ಪರಿಚಯ ನನಗೆ ಚೆನ್ನಾಗಿದೆ. ಅವನು ವೈನ್ ಕೊಳ್ಳುವುದೇ ನನ್ನ ಮನೆಯಿಂದ! ಅಂಥಾ ಹಲ್ಕಾಹೆಣ್ಣಿನ ಕಾರಣ ನಾವು ಇಂಥಾ ಹೇಯ ಪರಿಸ್ಥಿತಿಗೆ ಸಿಕ್ಕಿಹಾಕಿಕೊಳ್ಳುವುದೇ! ನನ್ನ ಮಾತು ಕೇಳಿದರೆ ಈ ಆಫೀಸರ್ ನಡತೆ ಚೆನ್ನಾಗೇ ಇದೆ. ಅವನು ಬೇಕಾದರೆ ನಮ್ಮಲ್ಲಿ ಯಾರನ್ನಾದರೂ ಒಬ್ಬರನ್ನು ಕೇಳಬಹುದಾಗಿತ್ತು. ಆದರೆ ಅವನಿಗೂ ನಿಯತ್ತು ಅನ್ನೋದು ಒಂದು ಇದೆ ನೋಡಿ. ಮದುವೆ ಆದವರು, ಮರ್ಯಾದಸ್ಥರು ಅಂತ ನಮ್ಮ ತಂಟೆಗೆ ಬರಲಿಲ್ಲ. ಅವಳ ಹತ್ತಿರ ಹೋದ. ಅವನೇ ಇಲ್ಲಿಗೆ ಸರದಾರ ಅನ್ನೋದನ್ನು ನಾವು ಮರೆಯೋಕಾಗುತ್ಯೆ? ಅವನು ಒಂದು ಮಾತು ಅಂದರೆ ಅವನ ಸೈನಿಕರು ಬಂದು ನಮ್ಮನ್ನು ದರದರ ಅಂತ ಎಳೆದು ಕರೆದುಕೊಂಡು  ಹೋಗಿ ಅವನ ಮುಂದೆ ನಿಲ್ಲಿಸುತ್ತಾರೆ!" ಇದನ್ನು ಕೇಳಿ ಇನ್ನಿಬ್ಬರು ಮಹಿಳೆಯರಿಗೆ ನಡುಕ ಹುಟ್ಟಿತು. ಚೆಲುವೆಯಾಗಿದ್ದ ಶ

ಬೆಣ್ಣೆ ಮುದ್ದೆ - ಭಾಗ ೭

ಇಮೇಜ್
ಬೆಣ್ಣೆಮುದ್ದೆ - ಭಾಗ ೭ ಮೂಲ ಫ್ರೆಂಚ್ ಕತೆ - ಗಿ ಡಿ ಮುಪಸಾ  ಕನ್ನಡಕ್ಕೆ - ಸಿ ಪಿ ರವಿಕುಮಾರ್  ( ಆರನೇ ಭಾಗ ಇಲ್ಲಿ ಓದಿ ) ಈಗ ಎಲ್ಲರ ಬಾಯಿ ಕಟ್ಟಿಹೋಯಿತು. ಅಪಮಾನದ ಚಾಟಿ ಏಟು ಜೋರಾಗಿತ್ತು. ಕಾನ್ವುಡೇ ತನ್ನ ಮುಷ್ಟಿಯನ್ನು ಮೇಜಿಗೆ ಕೋಪದಿಂದ ಗುದ್ದಿದ. ಆ ರಭಸಕ್ಕೆ ಅವನ ಗಾಜಿನ ಲೋಟ ಕೆಳಗುರುಳಿ ಚೂರುಚೂರಾಯಿತು. ಎಲ್ಲರೂ ಜರ್ಮನ್ ಅಧಿಕಾರಿಗೆ ಶಾಪ ಹಾಕಿದರು. ಕೋಪದಲ್ಲಿ ಅವರು ಒಗ್ಗಟ್ಟಾದರು. ಜರ್ಮನ್ ಅಧಿಕಾರಿ ತಮ್ಮನ್ನೇ ವ್ಯಭಿಚಾರಕ್ಕೆ ಆಹ್ವಾನಿಸಿದಂತೆ ಅವರಿಗೆ ಅನ್ನಿಸಿತು. ಇದೆಂಥ ಬರ್ಬರ ಪದ್ಧತಿ ಎಂದು ಕೌಂಟ್ ಹರಿಹಾಯ್ದ. ಹೆಂಗಸರು ಅವಳನ್ನು ಸಮಾಧಾನ ಪಡಿಸಿ ಅವಳೊಂದಿಗೆ ಕರುಣೆ-ಸಹಾನುಭೂತಿಗಳೊಂದಿಗೆ ನಡೆದುಕೊಂಡರು. ಊಟದ ಸಮಯದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಸಾಧ್ವಿಗಳು ಮುಖ ಕೆಳಕ್ಕೆ ಹಾಕಿ ಮೌನವಾಗಿ ಕುಳಿತರು. ಕೋಪದ ಅಲೆ ಶಮನವಾದ ನಂತರ ಅವರು ಊಟಕ್ಕೆ ಕುಳಿತರು. ಯಾರೂ ಹೆಚ್ಚು ಮಾತಾಡಲಿಲ್ಲ. ಎಲ್ಲರೂ ಆಲೋಚನೆಯಲ್ಲಿ ಮಗ್ನರಾಗಿದ್ದರು. ಊಟವಾದ ನಂತರ ಹೆಂಗಸರು ಕೋಣೆಗಳಿಗೆ ತೆರಳಿದರು. ಗಂಡಸರು ಹೊಗೆಸೊಪ್ಪು ಸೇದುತ್ತಾ ಅಲ್ಲೇ ಇಸ್ಪೀಟ್ ಆಟಕ್ಕೆ ಕುಳಿತು ವಸತಿಗೃಹದ ಮಾಲೀಕನನ್ನೂ ಕೂಡಿಸಿಕೊಂಡರು. ಜರ್ಮನ್ ಅಧಿಕಾರಿಯನ್ನು ಗೆಲ್ಲುವುದು ಹೇಗೆ ಎಂಬ ಬಗ್ಗೆ  ಅವನಿಂದ ಏನಾದರೂ  ಸುಳಿವು ಸಿಕ್ಕಬಹುದೇ ಎಂಬುದು ಅವರ ಆಶಯ. ಆದರೆ ಅವನಿಗೆ ಮಾತಾಡುವುದಕ್ಕಿಂತ ಆಟದಲ್ಲಿ ಆಸಕ್ತಿ. ಅವರ ಪ್ರಶ್ನೆಗಳನ್ನು ಕಿವಿಗೇ ಹಾಕಿಕೊ

ಬೆಣ್ಣೆ ಮುದ್ದೆ - ಭಾಗ ೬

ಇಮೇಜ್
ಬೆಣ್ಣೆ ಮುದ್ದೆ - ಭಾಗ ೬  ಫ್ರೆಂಚ್ ಕತೆ - ಗಿ ಡಿ ಮುಪಸಾ  ಕನ್ನಡಕ್ಕೆ - ಸಿ ಪಿ ರವಿಕುಮಾರ್  ( ಐದನೇ ಭಾಗ ಇಲ್ಲಿ ಓದಿ ) ಮ ರುದಿನ ಬೆಳಗ್ಗೆ ಎಂಟುಗಂಟೆಗೆ ಹೊರಡುವ ನಿರ್ಧಾರವಾಗಿತ್ತು. ಎಲ್ಲರೂ ಹಜಾರದಲ್ಲಿ ಸೇರಿದರು. ಆದರೆ ಮೇಲೆಲ್ಲಾ ಮಂಜಿನಿಂದ ಆವೃತವಾಗಿದ್ದ ಗಾಡಿಗೆ ಇನ್ನೂ ಕುದುರೆಗಳನ್ನು ಕಟ್ಟಿರಲಿಲ್ಲ. ಗಾಡಿಯ ಚಾಲಕನ ಸುಳಿವೇ ಇರಲಿಲ್ಲ. ಮನೆಯಲ್ಲಿ ಎಲ್ಲಿ ಹುಡುಕಿದರೂ ಅವನ ಪತ್ತೆ ಇಲ್ಲ. ಅವನನ್ನು ಹುಡುಕಿಕೊಂಡು ಅವರು ಪಟ್ಟಣದ ಒಳಗೆ ಹೋದರು. ಅದೊಂದು ಚಿಕ್ಕ ಊರು. ಊರಿನ ನಡುವಿನ ಚೌಕದ ಒಂದು ಕಡೆ ಚರ್ಚ್ ಇತ್ತು. ಉಳಿದ ಮೂರೂ ಕಡೆ ಪುಟ್ಟ ಮನೆಗಳಿದ್ದವು.  ಅಲ್ಲಿ ಕೆಲವು ಪ್ರ್ಯಷ್ಯನ್ ಸೈನಿಕರು ಕಾಣಿಸಿದರು. ಒಬ್ಬ ಆಲೂಗಡ್ಡೆಗಳ ಸಿಪ್ಪೆ ತೆಗೆಯುತ್ತಿದ್ದ. ಇನ್ನೊಬ್ಬ ಕ್ಷೌರದಂಗಡಿಯನ್ನು ಶುಚಿ ಮಾಡುತ್ತಿದ್ದ. ಮೂರನೆಯವನೊಬ್ಬ ಕಂಕುಳಲ್ಲಿ ಅಳುವ ಮಗುವನ್ನು ಎತ್ತಿಕೊಂಡು ಸಮಾಧಾನ ಮಾಡುತ್ತಿದ್ದ.  ಯುದ್ಧಕ್ಕೆ ಹೋಗಿದ್ದ ತಮ್ಮ ಗಂಡಂದಿರು ಮಾಡಬೇಕಾದ ಕೆಲಸಗಳನ್ನು ಹಳ್ಳಿಯ ಹೆಂಗಸರು ಈ ವಿಧೇಯ ಸೈನಿಕರಿಗೆ ಹಚ್ಚಿದ್ದರು.  ಸೌದೆ ಕಡಿಯುವುದು, ಸೂಪ್ ತಯಾರಿಸುವುದು, ಕಾಫಿಬೀಜ ಪುಡಿಮಾಡುವುದು, ಇತ್ಯಾದಿ ಇತ್ಯಾದಿ. ಒಬ್ಬನಂತೂ ಕೈಲಾಗದ ವಯಸ್ಸಾದ ಮನೆಯೊಡತಿಯ ಬಟ್ಟೆಗಳನ್ನೂ ಒಗೆಯುತ್ತಿದ್ದ. ಕೌಂಟ್ ಇದನ್ನೆಲ್ಲಾ ನೋಡಿ ಆಶ್ಚರ್ಯಚಕಿತನಾಗಿ ಚರ್ಚಿನ ಬಳಿ ಎದುರಾದ ಒಬ್ಬ ಅರ್ಚಕನನ್ನು ಪ್ರಶ್ನಿಸಿದ. ವಯಸ್ಸಾಗಿದ್ದ ಅರ್ಚಕ, "ಓ

ಬೆಣ್ಣೆ ಮುದ್ದೆ - ಭಾಗ ೫

ಇಮೇಜ್
ಬೆಣ್ಣೆ ಮುದ್ದೆ - ಭಾಗ ೫ ಫ್ರೆಂಚ್ ಕತೆ  - ಗಿ ಡಿ ಮುಪಸಾ  ಕನ್ನಡಕ್ಕೆ  - ಸಿ ಪಿ ರವಿಕುಮಾರ್  (ನಾಲ್ಕನೇ ಭಾಗ ಇಲ್ಲಿ ಓದಿ) ಅ ವರು ಹೋಟೆಲಿನ ವಿಶಾಲ  ಹಜಾರಕ್ಕೆ ಬಂದರು. ಜರ್ಮನ್ ಅಧಿಕಾರಿ ಅವರೆಲ್ಲರಿಂದ ಪ್ರಯಾಣ ಪತ್ರಗಳನ್ನು ಕೇಳಿ ಪಡೆದು ಕೂಲಂಕಷವಾಗಿ ನೋಡಿದ. ಪ್ರತಿಯೊಂದರಲ್ಲೂ ಮಹಾ ದಂಡನಾಯಕನ ರುಜು ಇದೆಯೇ,  ಹೆಸರು ಮತ್ತು  ವೃತ್ತಿ  ನಮೂದಿಸಲಾಗಿದೆಯೇ ಎಂದು ಖಾತರಿ ಮಾಡಿಕೊಂಡು "ಹೂಂ, ಅಡ್ಡಿಯಿಲ್ಲ" ಎಂದು ಹೊರಟ. ಈಗ ಎಲ್ಲರೂ ಮುಕ್ತವಾಗಿ ಉಸಿರಾಡಿದರು.  ಅವರಿಗೆ ಇನ್ನೂ ಹಸಿವು ಇಂಗಿರಲಿಲ್ಲ. ಎಲ್ಲರೂ ರಾತ್ರಿಯ ಊಟಕ್ಕೆ ಕುಳಿತರು. ಅಡಿಗೆ ತಯಾರಾಗಲು ಇನ್ನೂ ಅರ್ಧ ಗಂಟೆ ಬೇಕಾಗುತ್ತದೆ ಎಂಬ  ಸುಳಿವು ಸಿಕ್ಕಿ ಅವರು ತಮ್ಮ ತಮ್ಮ ಕೋಣೆಗಳಿಗೆ ತೆರಳಿದರು. ಕೊನೆಗೂ ಅವರು ಊಟಕ್ಕೆಂದು ಮೇಜಿನ ಎದುರು ಕುಳಿತಾಗ ಹೋಟೆಲ್ ಮಾಲೀಕನೇ ಅವರನ್ನು ಕಾಣಲು ಆಗಮಿಸಿದ. ಮಿ। ಫೋಯೆನ್ವೀ ಒಂದು ಕಾಲದಲ್ಲಿ ಕುದುರೆಗಳ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿ. ಅವನಿಗೆ ಆಸ್ತಮಾ ಕಾಯಿಲೆ. ಉಸಿರಾಡಿದರೆ ಸೊಂಯ್ ಸೊಂಯ್ ಸದ್ದು ಕೇಳಿಸುತ್ತಿತ್ತು. ಅವನು "ಇಲ್ಲಿ ಮಿಸ್ ಎಲಿಜಬೆತ್ ರೂಸೋ ಯಾರು?" ಎಂದು ಪ್ರಶ್ನಿಸಿದ. ಬೆಣ್ಣೆಮುದ್ದೆ ಬೆಚ್ಚಿ "ನಾನು - ಯಾಕೆ?" ಎಂದು ಕೇಳಿದಳು. "ಪ್ರಷ್ಯನ್ ಅಧಿಕಾರಿ ನಿಮ್ಮ ಜೊತೆ ಮಾತಾಡಬೇಕಂತೆ - ಕೂಡಲೇ ಬರಹೇಳಿದ್ದಾರೆ." "ನನ್ನ ಜೊತೆಗಾ?" &quo