ಪೋಸ್ಟ್‌ಗಳು

ನವೆಂಬರ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರೆಡ್ ಇಂಡಿಯನ್ ಜನಾಂಗದ ಥ್ಯಾಂಕ್ಸ್ ಗಿವಿಂಗ್ ಪ್ರಾರ್ಥನೆ.

ಇಮೇಜ್
 ಇದು ರೆಡ್ ಇಂಡಿಯನ್ ಜನಾಂಗದ ಥ್ಯಾಂಕ್ಸ್ ಗಿವಿಂಗ್ ಪ್ರಾರ್ಥನೆ. ಭೂಮಿತಾಯಿಗೆ ನಮ್ಮ ವಂದನೆಗಳು ಕೊಡುವಳು ನಮಗೆ ಬೇಕಾದುದೆಲ್ಲ ನದಿತೊರೆಗಳಿಗೆ ನಮ್ಮ ಧನ್ಯವಾದ ನೀಡುತ್ತವೆ ನಮಗೆ ಜೀವಜಲ ಗಿಡಮೂಲಿಕೆಗಳಿಗೆ ನಮ್ಮ ಧನ್ಯವಾದ ನಮ್ಮ ರೋಗರುಜಿನಗಳಿಗೆ ನೀಡುತ್ತವೆ ಔಷಧ ಚಂದ್ರತಾರೆಗಳಿಗೆ ನಮ್ಮ ಧನ್ಯವಾದ ಸೂರ್ಯ ಮುಳುಗಿದ ಮೇಲೂ ಬೆಳಗುತ್ತವೆ ಪಥ ಸೂರ್ಯನಿಗೆ ನಮ್ಮ ಧನ್ಯವಾದಗಳು ಭೂಮಿಯ ಕಡೆಗೆ ಬೀರುವನು ಶುಭದೃಷ್ಟಿ ಕಟ್ಟಕಡೆಗೆ ಮಹಾನ್ ಆತ್ಮಕ್ಕೆ ನಮ್ಮ ವಂದನೆ ಎಲ್ಲ ಒಳ್ಳೆಯದನ್ನೂ ತನ್ನೊಳಗೆ ಬಂಧಿಸಿ ಸಮಷ್ಟಿ ತನ್ನ ಮಕ್ಕಳ ಒಳ್ಳೆಯದಕ್ಕಾಗಿ ಸದಾ ನಿಗ್ರಹಿಸುವನು ತನ್ನ ಪ್ರತಿಯೊಂದೂ ಸೃಷ್ಟಿ. (ಅನುವಾದ: ಸಿ ಪಿ ರವಿಕುಮಾರ್)

ಕವಿತಾವಾಚನಗಳು (ಚಾರ್ಲ್ಸ್ ಬ್ಯುಕೋವ್ಸ್ಕಿ)

ಇಮೇಜ್
 ಕವಿತಾವಾಚನಗಳು ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ಕವಿತಾವಾಚನಗಳಿಗಿಂತಲೂ ಹ್ಯಾಪಮೋರೆಯ ವಸ್ತುಗಳು ಇಲ್ಲವೇನೋ. ಗುಂಪಣ್ಣ ಮತ್ತು ಗುಂಪಕ್ಕಗಳು ಒಂದೆಡೆ ಸೇರಿ ವಾರವಾರವೂ ತಿಂಗಳು ತಿಂಗಳೂ ವರ್ಷವರ್ಷವೂ ವಯಸ್ಸಿನಲ್ಲಿ ದೊಡ್ಡವರಾಗುತ್ತಾ ಸಣ್ಣ ಸಭಿಕಸಮೂಹಕ್ಕೆ ಓದುತ್ತಾ ತಮ್ಮ ಮೇಧಾವೀ ವ್ಯಕ್ತಿತ್ವವನ್ನು ಒಂದುದಿನ  ಗುರುತಿಸಲಾಗುವುದೆಂದು ಇನ್ನೂ ಆಸೆ ಇಟ್ಟುಕೊಂಡವರು ಧ್ವನಿಮುದ್ರಿಕೆ ಕ್ಯಾಸೆಟ್ ಇತ್ಯಾದಿ ಮಾಡುತ್ತಾ ಚಪ್ಪಾಳೆಗಾಗಿ ಕಾಯುತ್ತಾ ಇವರು ಓದುವುದು ಪರಸ್ಪರರಿಗಾಗಿ ಇವರು ಯಾರಿಗೂ ಸಿಕ್ಕಿಲ್ಲ ನ್ಯೂಯಾರ್ಕಿನ ಯಾವ ಪ್ರಕಾಶಕ ಅಥವಾ ಮೈಲುಗಳ ದೂರದಲ್ಲೂ ಬೇರೊಬ್ಬ. ಆದರೂ ಅವರು ಓದಿದ್ದೂ ಓದಿದ್ದೇ ಅಮೆರಿಕದ ಕಾವ್ಯಬಿಲಗಳಲ್ಲಿ ಎಂದೂ ಧೃತಿಗೆಡದೆ. ಅವರಿಗೆ ಎಂದೂ ಸಂದೇಹ ಬಂದಿಲ್ಲ ತಮ್ಮ ಪ್ರತಿಭೆ ತೀರಾ ತೆಳುವಿರಬಹುದು ಕಣ್ಣಿಗೆ ಕಾಣಿಸದಷ್ಟು ಎಂದು. ಓದಿಯೇ ಓದುವರು ಅಮ್ಮಂದಿರ ಮುಂದೆ ಅಕ್ಕಂದಿರ ಮುಂದೆ ಗಂಡಂದಿರ ಮುಂದೆ ಹೆಂಡತಿಯರ ಮುಂದೆ ಗೆಳೆಯಗೆಳತಿಯರ ಮುಂದೆ ಒಡನಾಡಿ ಕವಿಗಳ ಮುಂದೆ ಮತ್ತು ಎಲ್ಲಿಂದಲೋ ಹೇಗೋ ಇತ್ತ ಅಡ್ಡಾಡುತ್ತಾ ಬಂದ ಒಂದಿಬ್ಬರು ಅಡನಾಡಿಗಳ ಮುಂದೆ. ನನಗೆ ನಾಚಿಕೆಯಾಗುತ್ತದೆ ಇವರನ್ನು ಕಂಡು ಇವರು ಒಬ್ಬರಿನ್ನೊಬ್ಬರ ಬೆನ್ನು ತಟ್ಟುವುದನ್ನು ಕಂಡು ಇವರ ತೊದಲುವ ಅಸ್ಮಿತೆಯನ್ನು ಕಂಡು ಇವರ ಧೈರ್ಯಗೇಡಿತನವನ್ನು ಕಂಡು. ಇವರು ನಮ್ಮ ಸೃಜನಶೀಲರಾದರೆ ದಯವಿಟ್ಟು ಬೇರೆ ಯಾರಾದರನ್ನೂ ಕೊಡಿ:

ಬರೆಯುವುದು (ಚಾರ್ಲ್ಸ್ ಬ್ಯುಕೋವ್ಸ್ಕಿ)

ಇಮೇಜ್
 ಬರೆಯುವುದು ಮೂಲ: ಚಾರ್ಲ್ಸ್ ಬ್ಯುಕೋವ್ಸ್ಕಿ ಅನುವಾದ: ಸಿ ಪಿ ರವಿಕುಮಾರ್ ಬಹಳ ಸಲ ಅದು ನಿನಗೂ ಮತ್ತು ಅಸಾಧ್ಯಕ್ಕೂ ನಡುವೆ ಇರುವ ವಸ್ತು. ಯಾವ ಮದಿರೆಯೂ ಹೆಣ್ಣಿನ ಪ್ರೀತಿಯೂ ಅದಕ್ಕೆ ಆಗಲಾರದು ಸಾಟಿ. ಬೇರೆ ಏನೂ ನಿನ್ನನ್ನು ಕಾಪಾಡಲಾರದು ಬರವಣಿಗೆಯ ವಿನಾ. ಗೋಡೆಗಳು ಕುಸಿಯವುದನ್ನು ಗುಂಪುಗಳು ಬಂದು ಸುತ್ತುವರೆಯುವುದನ್ನು ತಡೆಯಬಲ್ಲದಾದರೆ ಅದೇ. ಅದು ಕತ್ತಲನ್ನು ಸೀಳಬಲ್ಲದು. ಬರವಣಿಗೆಯು ಅತ್ಯುಚ್ಚ ಮನೋವೈದ್ಯ. ದೈವಗಳಲ್ಲಿ ಅತ್ಯಂತ ದಯಾಮಯಿ ದೈವ. ಸಾವನ್ನು ಹಿಂಬಾಲಿಸುತ್ತದೆ ಬರವಣಿಗೆ ಸೋತು ಕೈಚೆಲ್ಲದೆ ಎಂದೂ. ಮತ್ತು  ತನ್ನಕಡೆ ನೋಡುತ್ತಾ ನೋವನ್ನು ನೋಡುತ್ತಾ ಬರವಣಿಗೆ ನಗುತ್ತದೆ. ಅದು ಕೊಟ್ಟಕೊನೆಯ ಅಪೇಕ್ಷೆ ಮತ್ತು ಕಟ್ಟಕಡೆಯ ವಿವರಣೆ.  ಬರವಣಿಗೆ ಎಂದರೆ ಅದೇ.

ಓ ಬರಹಗಾರನಾಗಲು ಬಯಸುತ್ತೀಯೋ?

ಇಮೇಜ್
 ಓ ಬರಹಗಾರನಾಗಲು ಬಯಸುತ್ತೀಯೋ? ಮೂಲ ಕವಿತೆ: ಚಾರ್ಲ್ಸ್ ಬ್ಯುಕೋವ್ಸ್ಕಿ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನಿನ್ನೊಳಗಿನಿಂದ ಅದು ಒದ್ದುಕೊಂಡು ಹೊರಕ್ಕೆ ಬರದಿದ್ದರೆ ಬೇಡ, ಬಿಟ್ಟುಬಿಡು. ನಿನ್ನ ಹೃದಯ, ಮನಸ್ಸು, ಬಾಯಿ, ಕರುಳುಗಳ ಮೂಲಕ ಹಾದು ಮುಖವಾಡ ತೊಡದೆ ಹೊರಬರದಿದ್ದರೆ ಬೇಡ, ಬಿಟ್ಟುಬಿಡು. ಕಂಪ್ಯೂಟರ್ ತೆರೆಯ ಮುಂದೆ  ಅಥವಾ ಟೈಪ್ ರೈಟರ್ ಮುಂದೆ ಬೆನ್ನು ಬಗ್ಗಿಸಿ ಪದಗಳಾಗಿ ಹುಡುಕುತ್ತಾ ಗಂಟೆಗಟ್ಟಲೆ ಕೂಡಬೇಕೆಂದಾದರೆ  ಬೇಡ, ಬಿಟ್ಟುಬಿಡು. ಪ್ರಸಿದ್ಧಿಗಾಗಿ ಅಥವಾ ಹಣಕ್ಕಾಗಿ ಬರೆಯುತ್ತಿರುವೆಯಾದರೆ ಬೇಡ, ಬಿಟ್ಟುಬಿಡು. ಹೆಣ್ಣನ್ನು ಒಲಿಸಿಕೊಳ್ಳಲು ಬರೆಯುತ್ತಿರುವೆಯಾದರೆ ಬೇಡ, ಬಿಟ್ಟುಬಿಡು. ಬರೆದದ್ದನ್ನು ಮತ್ತೆ ಮತ್ತೆ ತಿದ್ದಬೇಕಾದರೆ ಬೇಡ, ಬಿಟ್ಟುಬಿಡು. ಬರೆಯುವ ಆಲೋಚನೆಯೇ ಕಷ್ಟ ಎನ್ನುವುದಾದರೆ ಬೇಡ, ಬಿಟ್ಟುಬಿಡು. ಬೇರೆ ಯಾರನ್ನೋ ಅನುಕರಿಸಿ ಬರೆಯಲು ಹೊರಟಿದ್ದರೆ ಬೇಡ, ಮರೆತುಬಿಡು. ನಿನ್ನೊಳಗಿನಿಂದ ಗರ್ಜಿಸುತ್ತಾ ಹೊರಬರಲು ಇನ್ನೂ ಕಾಯಬೇಕೆಂದಾದರೆ ತಾಳ್ಮೆಯಿಂದ ಕಾಯಿ. ಅದು ಗರ್ಜಿಸುತ್ತಾ ಎಂದೂ ಹೊರಬರಲೇ ಇಲ್ಲವೇ? ಬೇರೆ ಏನಾದರೂ ಮಾಡು ಬರೆದದ್ದನ್ನು ನಿನ್ನ ಹೆಂಡತಿಗೋ ಗೆಳತಿಗೋ ಗೆಳೆಯನಿಗೋ ಅಪ್ಪನಿಗೋ ಅಮ್ಮನಿಗೋ ಅಥವಾ ಬೇರೆ ಯಾರಿಗೋ ಓದಿ ಹೇಳಬೇಕೆಂದು ಅನ್ನಿಸಿದರೆ ನೀನಿನ್ನೂ ಸಿದ್ಧನಾಗಿಲ್ಲ. ಎಷ್ಟೋ ಜನ ಲೇಖಕರ ಹಾಗೆ ಆಗಬೇಡ. ತಮ್ಮನ್ನು ಲೇಖಕರು ಎಂದು ಕರೆದುಕೊಳ್ಳುವ ಎಷ್ಟೋ ಸಾವಿರಾರು ಜನರ ಹಾಗೆ ಆಗಬೇಡ, ಹೊಳಪಿ

ಅನ್ವೇಷಕರು (ಅನುವಾದಿತ ಕವಿತೆ)

ಇಮೇಜ್
 ಅನ್ವೇಷಕರು ಮೂಲ: ಪಾಬ್ಲೋ ನೆರುಡಾ  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಉತ್ತರದಿಂದ ತಂದನು ಅಲ್ಮಾಗ್ರೋ ಗುಡುಗು ಮಿಂಚಿನ ವಂಕಿ. ಮತ್ತು ಭೂಪಟದ ಮೇಲೆ ಬಾಗಿದಂತೆ ಕುಳಿತನು ಹಗಲೂರಾತ್ರಿ ಅತ್ತ ಹಿನ್ನೆಲೆಯಲ್ಲಿ ಬೆಳಗುತ್ತಿದ್ದಾಗ ಆಗಸವನ್ನು ವಿಸ್ಫೋಟಗಳು. ದತ್ತೂರಿಯ ನೆರಳು ಅವನು, ಮುಳ್ಳುಗಿಡದ ಅಂಟಿನ ನೆರಳು ಐತಂದು ಸ್ಪೇನ್ ದೇಶದಿಂದ ಐಕ್ಯನಾದನು ಒಣಕಲು ಆಕೃತಿಯಲ್ಲಿ ಕತ್ತು ಬಾಗಿಸಿ ಗಮನಿಸುತ್ತಾ ಭೂಮಿಯ ವ್ರಣಿತ ಹುನ್ನಾರಗಳನ್ನು. ಕತ್ತಲರಾತ್ರಿ, ಹಿಮ ಮತ್ತು ಉಸುಕು ಇವುಗಳಿಂದ ಆದದ್ದು  ನನ್ನ ತೆಳ್ಳನೆಯ ಪಿತೃಭೂಮಿ,  ಮೌನ ಆವರಿಸಿದೆ ಅದರ ಉದ್ದನೆಯ ಅಂಚನ್ನು. ಅದರ  ಕಡಲಗಡ್ಡದಿಂದ ಉಕ್ಕುತ್ತದೆ ನೊರೆ ಅದರ ಒಡಲನ್ನು ತುಂಬಿದೆ ಇದ್ದಲು ರಹಸ್ಯಮಯ ಮುತ್ತುಗಳಂತೆ. ಚಿನ್ನ ಉರಿಯುವುದು ಅದರ ಕೈಬೆರಳಲ್ಲಿ ಕೆಂಡದಂತೆ. ಬೆಳ್ಳಿ ಬೀರುವುದು ನಸುಬೆಳಕು  ಹಸಿರುಚಂದ್ರಮನಂತೆ ಈ ಸ್ಮಶಾನಭೂಮಿಯ ನೆರಳ ಮೇಲೆ. ಸ್ಪೇನ್ ದೇಶದಿಂದ ಬಂದು  ಗುಲಾಬಿಯ ಬಳಿಯಲ್ಲಿ ತೈಲದ ಬಳಿಯಲ್ಲಿ, ದ್ರಾಕ್ಷಾರಸದ ಬಳಿಯಲ್ಲಿ,  ವೃದ್ಧ ಆಕಾಶದ ಬಳಿಯಲ್ಲಿ  ಕೂತವನಿಗೆ  ಅರಿವಿಲ್ಲ ಒಂದು  ದಿನ  ಕಡಲಹದ್ದಿನ ಲದ್ದಿಯಿಂದ ಮೇಲೆದ್ದು ಬರಬಹುದು ಇಂಥದ್ದೊಂದು ಕೋಪಾವಿಷ್ಟ ಶಿಲೆ ಎಂದು.

ಹೆಣ್ಣು ಜಾತಿ (ಅನುವಾದಿತ ಕವಿತೆ)

ಇಮೇಜ್
  ಕೆಲವೊಮ್ಮೆ ನಿನಗೆ ಮಾತಾಡಬೇಕು ಎನ್ನಿಸುವುದು ಪ್ರೀತಿಯ ಕುರಿತು ಮತ್ತು ಹತಾಶೆಯ ಬಗ್ಗೆ ಹಾಗೂ ಮಕ್ಕಳ ಕೃತಘ್ನತೆಯ ವಿಷಯ. ಆಗ ಗಂಡಸರು ಏನೂ ಪ್ರಯೋಜನವಿಲ್ಲ. ನಿಮಗೆ ಬೇಕಾದದ್ದು ನಿಮ್ಮ ತಾಯಿ ಅಥವಾ ಸೋದರಿ ಅಥವಾ ಸ್ಕೂಲಿನಲ್ಲಿ ನಿಮ್ಮೊಂದಿಗೆ ಓದಿದ ಹುಡುಗಿ ನೀವು ಮೊದಲಸಲ ನಿಮ್ಮ ಹೃದಯವನ್ನು ಕೊಟ್ಟವಳು ಮತ್ತು ಅವಳ ಮೊದಲ ಮಗು - ಹೆಣ್ಣು - ಹಾಗೂ ನಿಮ್ಮ ಎರಡನೆಯದು. ಅವರೊಂದಿಗೆ ಕುಳಿತು ಮಾತಾಡುವಾಗ ಅವಳು ಹೊಲಿಗೆ ಹಾಕುವಾಗ ನೀವು ಕುಳಿತು ಗುಟುಕರಿಸುತ್ತಾ ಕೆದಕುವಿರಿ ಅಕ್ಕಿಯ ಧಾರಣೆ ಬಗ್ಗೆ ಚಹಾ ಬೆಲೆ ಕುರಿತು ಮತ್ತು ಗಿಣ್ಣು ಎಷ್ಟು ದುರ್ಲಭವೆಂಬ ವಿಷಯ. ನಿಮ್ಮಿಬ್ಬರಿಗೂ ಗೊತ್ತು ನಿಮ್ಮಿಬ್ಬರ ಈ  ಮಾತುಕತೆ ಪ್ರೇಮ ಮತ್ತು ಹತಾಶೆ ಕುರಿತು ಹಾಗೂ ಮಕ್ಕಳ ಕೃತಘ್ನತೆ.  ಮೂಲ: ಗೌರಿ ದೇಶಪಾಂಡೆ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್

ನನ್ನನ್ನಗಲಿ ಹೋಗದಿರು

ಇಮೇಜ್
 ಮೂಲ: ಪಾಬ್ಲೋ ನೆರುಡಾ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ದೂರವೆಲ್ಲೂ ಹೋಗದಿರು ಒಂದೇ ದಿನವಾದರೂ ಏಕೆಂದರೆ ಹೇಗೆ ಹೇಳಲಿ ನಾನು ದಿನವೊಂದು ಸುದೀರ್ಘ ಕಾಲಮಾನ ನಾನು ಕಾಯುತ್ತಿರುವೆ ನಿನಗಾಗಿ, ಬೋಗಿಗಳು ಎಲ್ಲೋ ದೂರದಲ್ಲಿ ಮಲಗಿರುವ ಜನರಹಿತ ರೇಲ್ವೆ ನಿಲ್ದಾಣದಲ್ಲಿ  ಕಾದಂತೆ ದೂರವೆಲ್ಲೂ ಹೋಗದಿರು ಒಂದೇ ತಾಸಾದರೂ ಏಕೆಂದರೆ ಆತಂಕದ ಸಣ್ಣ.ಹನಿಗಳು ಒಗ್ಗೂಡಿ ಬಿಡುವುವು ಆಗ ಇರಲೊಂದು ಮನೆಗಾಗಿ ಅರಸುತ್ತಾ ಅಲೆಯುವ ಹೊಗೆ ಹೊಕ್ಕು ನನ್ನೊಳಗೆ, ಕಳೆದುಹೋದ ಹೃದಯ ಉಸಿರುಗಟ್ಟುವುದು ನಿನ್ನ ನೆರಳು ಎಂದೂ ಮರೆಯಾಗದಿ ರಲಿ ಕಡಲ ಕಿನಾರೆಯಲ್ಲಿ ಮೀಟದಿರಲಿ ನಿನ್ನ ಕಣ್ಣೆವೆ  ದೂರದ ಶೂನ್ಯದೊಳಗೆಂದೂ. ನನ್ನ ಪ್ರಿಯತಮೆಯೇ ಒಂದು ಕ್ಷಣವೂ ನನ್ನನ್ನು ಅಗಲದಿರು ಏಕೆಂದರೆ ಆ ಕ್ಷಣ ನೀನು ದಾಟಿಬಿಡುವೆ ಅದೆಷ್ಟು ದೂರ ಗೊತ್ತೇ, ನಾನು ನಿನ್ನನ್ನು ಅರಸುತ್ತಾ ಭೂಮಿಯ ಚಕ್ರವ್ಯೂಹದಲ್ಲಿ ಅಡ್ಡಾಡುತ್ತೇನೆ, ನೀನು ಮರಳಿ ಬರುವೆಯೋ ಇಲ್ಲ ನನ್ನನ್ನು ಸಾಯಲು ಬಿಟ್ಟು ಹೋದೆಯೋ ಎಂದು ಪ್ರಶ್ನಿಸಿಕೊಳ್ಳುತ್ತಾ.

ನಿನ್ನ ಕೈಗಳು ಇರಲಿ ನನ್ನ ಕಂಗಳ ಮೇಲೆ (ಪಾಬ್ಲೋ ನೆರುಡಾ)

ಇಮೇಜ್
 ಮೂಲ ಕವಿತೆ: ಪಾಬ್ಲೋ ನೆರುಡಾ ಅನುವಾದ: ಸಿ. ಪಿ. ರವಿಕುಮಾರ್ ನಿನ್ನ ಕೈಗಳು ಇರಲಿ ನನ್ನ ಕಂಗಳ ಮೇಲೆ ನನ್ನ ಮೃತ್ಯುವಿನ ಸಮಯದಲ್ಲಿ.   ನಿನ್ನ ಕೈಗಳ ಬೆಳಕು, ಗೋಧಿ ತೆನೆಯ ನವೋಲ್ಲಾಸ  ಇನ್ನೊಮ್ಮೆ ಹರಿದು ಬರಲಿ ನನ್ನತ್ತ.  ಮತ್ತೊಮ್ಮೆ ಅನುಭವಿಸುವೆನು ನನ್ನ ವಿಧಿಯನ್ನು ಬದಲಿಸಿದ ಅವುಗಳ ಮೃದುತ್ವ. ನಾನು ನಿದ್ರಿಸುವಾಗ ನಿನ್ನ ನಿರೀಕ್ಷೆಯಲ್ಲಿ  ನೀನು ಬದುಕಬೇಕೆಂದು ನನ್ನಾಸೆ.  ನಿನ್ನ ಕಿವಿಗಳಲ್ಲಿ ಮೊರೆಯುತ್ತಿರಲಿ ಸಮುದ್ರದ ಗಾಳಿ, ತೀಡುತ್ತಿರಲಿ ನಿನ್ನ ಬಳಿ ನಮಗಿಬ್ಬರಿಗೂ ಆಪ್ಯಾಯವಾಗಿದ್ದ ಕಡಲಿನ ಗಂಧ ನಾವಿಬ್ಬರೂ ನಡೆಯುತ್ತಿದ್ದ ಕಡಲತೀರದಲ್ಲಿ ಅಡ್ಡಾಡು ಎಂದಿನಂತೆ ಅನಂತಕಾಲವೂ ಜೀವಿಸಲಿ ನಾನು ಪ್ರೀತಿಸಿದ್ದೆಲ್ಲವೂ ಇನ್ನು ನೀನೋ ನನಗೆ ಪ್ರಿಯತಮ ನಿನ್ನನ್ನು ಪ್ರೀತಿಸಿದೆ ಎಲ್ಲಕ್ಕಿಂತಲೂ ಉತ್ಕಟವಾಗಿ ನಿನ್ನನ್ನು ಹಾಡಿದೆ ಅತ್ಯುಚ್ಚ ಕಂಠದಲ್ಲಿ ಹೀಗಾಗಿ ಸದಾ ಕುಸುಮಿಸುತ್ತಿರು ಓ ನನ್ನ ಕುಸುಮ! ನನ್ನ ಪ್ರೀತಿಯು ಆದೇಶಿಸಿದ್ದೆಲ್ಲವೂ ದೊರಕಲಿ ನಿನಗೆ ನನ್ನ ನೆರಳು ಹಾಯುತ್ತಿರಲಿ ನಿನ್ನ ಕುರುಳೊಳಗೆ ನನ್ನ ಹಾಡಿಗೆ ಕಾರಣ ತಿಳಿಯಲಿ ಅವರಿಗೆ ಹೀಗೆ.

ಮರೆಯದಿರು ನನ್ನನ್ನು (ಪಾಬ್ಲೋ ನೆರುಡಾ)

ಇಮೇಜ್
ಮರೆಯದಿರು ನನ್ನನ್ನು ಮೂಲ: ಪಾಬ್ಲೋ ನೆರುಡಾ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನನ್ನದೊಂದು ಅರಿಕೆ ಇದೆ ನಿನ್ನೊಳಗೆ. ನಿನಗೆ ಗೊತ್ತೇ ಇದೆ: ನಾನು  ದಿಟ್ಟಿಸಿದಾಗ ಸ್ಫಟಿಕಚಂದ್ರನನ್ನು ಅಥವಾ ನನ್ನ ಕಿಟಕಿಯ ಸರಕುಗಳ ಹೊರಗೆ ತೆವಳುವ ಶಿಶಿರದ ಕೆಂಪು ಟೊಂಗೆಯನ್ನು, ಮುಟ್ಟಿದಾಗ ಬೆಂಕಿಯ ಬಳಿ ಉದುರಿ  ಬೆರಳಿಗೆ ಸಿಕ್ಕಿದರೂ ಸಿಕ್ಕದ ಬೂದಿಯನ್ನು  ಅಥವಾ ನೇವರಿಸಿದಾಗ ಸುಕ್ಕುಗಟ್ಟಿದ ಮರದ ಕಾಂಡ, ಇವೆಲ್ಲವೂ  ಕರೆದೊಯ್ಯುವುದು ನನ್ನನ್ನು ನಿನ್ನ ಬಳಿಗೇ. ಸೃಷ್ಟಿಯ ಎಲ್ಲ ವಾಸನೆಗಳು, ಬೆಳಕು, ಲೋಹಗಳು,  ಎಲ್ಲವೂ ಪುಟ್ಟ ದೋಣಿಗಳಾಗಿ ಚಲಿಸುತ್ತವೆ  ನನಗಾಗಿ ಕಾದಿರುವ ನಿನ್ನ ದ್ವೀಪಗಳ ಕಡೆಗೆ.  ಆದರೆ  ಬತ್ತಿಹೋದರೆ ನನ್ನ ಕುರಿತಾದ  ನಿನ್ನ ಪ್ರೀತಿಯ ಒರತೆ ನಿಧಾನವಾಗಿ ಬತ್ತಿ ಹೋಗುವುದು ನನ್ನ ಪ್ರೀತಿಯ ಸೆಲೆ. ಮರೆತೆಯಾದರೆ ನನ್ನನ್ನು ಅರಸದಿರು ನನ್ನನ್ನು  ಮರೆತರೆ ನನ್ನನ್ನು ಅರಸಲು ಹೋಗದಿರು ಏಕೆಂದರೆ  ನಾನು ಆಗಲೇ ಮರೆತುಬಿಟ್ಟಿರುತ್ತೇನೆ ನಿನ್ನನ್ನು.  ನೀನು ದೀರ್ಘವಾಗಿ ಯೋಚಿಸಿ ನೋಡು : ಬಾವುಟಗಳನ್ನು ಹಾದು ಬಂದು ನನ್ನ ಬಾಳಲ್ಲಿ ಬೀಸುವ ಗಾಳಿಯೇ ತ್ಯಜಿಸುವೆಯಾದರೆ ನನ್ನನ್ನು  ನನ್ನ ಬೇರುಗಳಿರುವ ಹೃದಯದ ತೀರದಲ್ಲಿ ನೆನಪಿರಲಿ, ಅಂದೇ ಅದೇ ಘಳಿಗೆ ನಾನು ಮೇಲೆತ್ತುವೆನು ನನ್ನ ತೋಳುಗಳನ್ನು ಮತ್ತು ನನ್ನ ಬೇರುಗಳು ವಲಸೆ ಹೊರಡುತ್ತವೆ  ಬೇರೊಂದು ನಾಡನ್ನು ಅರಸಿ. ಆದರೆ ಪ್ರತಿದಿವಸವೂ  ನಾನೇ ನಿನ್ನ ವಿಧಿಯೆಂದು  ಯಾವುದೋ ಹೇಳಲರಿಯದ ಮಾಧುರ್

ಪ್ರೀತಿ (ಪಾಬ್ಲೊ ನೆರೂಡಾ)

ಇಮೇಜ್
 ಪ್ರೀತಿ ಪಾಬ್ಲೋ ನೆರೂಡಾ ಅನುವಾದ: ಸಿ. ಪಿ. ರವಿಕುಮಾರ್ ನೀನೊಂದು ಉಪ್ಪಿನ ಗುಲಾಬಿಯೋ, ನೀಲಮಣಿಯೋ  ಬೆಂಕಿ ಪ್ರವಹಿಸುವ ಕಾರ್ನೇಷನ್ ಹೂಗಳ ಬಾಣವೋ ಎಂಬಂತೆ ನಿನ್ನನ್ನು ಪ್ರೀತಿಸುವುದಿಲ್ಲ ನಾನು.  ಹೇಗೆಂದರೆ ನಿನ್ನ ಕುರಿತಾದ ನನ್ನ ಪ್ರೀತಿ ನೆರಳು ಮತ್ತು ಆತ್ಮಗಳಂತೆ ಅಮೂರ್ತವಾದದ್ದನ್ನು ನಾವು ಗುಪ್ತವಾಗಿ ಪ್ರೀತಿಸುವುದಿಲ್ಲವೇ ಹಾಗೆ. ತಾನೇ ಅರಳದಿದ್ದರೂ ಗಿಡವು ಹೊರುವುದಿಲ್ಲವೇ ತನ್ನಲ್ಲಿ ಬಚ್ಚಿಟ್ಟುಕೊಂಡ ಹೂವುಗಳ ಬೆಳಕನ್ನು ಹಾಗಿದೆ ನಿನ್ನನ್ನು ಕುರಿತಾದ ನನ್ನ ಪ್ರೀತಿ. ಮಣ್ಣಿನಿಂದ ಎದ್ದ ಗಾಢ ಸುಗಂಧ ನನ್ನೊಳಗೆ ಎಲ್ಲೋ ಮಂಕಾಗಿ ಮನೆಮಾಡಿರಲು ಕಾರಣವೇ ನಿನ್ನ ಪ್ರೀತಿ. ನಿನ್ನನ್ನು ಕುರಿತಾದ ನನ್ನ ಪ್ರೀತಿ ಅರಿಯದು  ಹೇಗೆ ಯಾವಾಗ ಎಲ್ಲಿಂದ ಎಂಬ ಪ್ರಶ್ನೆಗಳ ಉತ್ತರ. ಗರ್ವವಿಲ್ಲ ಅದರಲ್ಲಿ ,ತೊಡಕಿಲ್ಲ, ಏನಿದ್ದರೂ ನೇರ ಪ್ರೀತಿ ಮಾತ್ರ. ಹೀಗೇಕೆ ಪ್ರೀತಿಸುವೆ ನಾನೆಂದು ಕೇಳಿದರೆ ಅರಿಯೆ ನಾನು ಬೇರಾವ ರೀತಿ. ಪ್ರೇಮದ ಈ ರೂಪದಲ್ಲಿ ಮಾತ್ರವೇ ನಾನು ಮತ್ತು ನೀನೂ ಕೂಡಾ ಇರಬಲ್ಲೆವು ತೀರಾ ಸನಿಹಕ್ಕೆ ಬಾರದಂತೆ ಎಷ್ಟು ಸನಿಹವೆಂದರೆ ನಿನ್ನ ಕೈಯಿದೆ ನನ್ನೆದೆಯ ಮೇಲೆ ಮತ್ತು ನನ್ನ ಕನಸುಗಳನ್ನು ಹೊತ್ತು ಮುಚ್ಚುವುವು ನಿನ್ನ ಕಣ್ಣೆವೆ.

ನಿಮ್ಮ ಪಿನ್ ಬದಲಾಯಿಸಿ

ಇಮೇಜ್
  ಇವತ್ತೊಂದು ಭಯಾನಕ ಅನುಭವ. ಒಂದೆರಡು ದಿನಗಳ ಹಿಂದೆ ನನ್ನ ಫೋನ್ "ನಿಮ್ಮ ಪಿನ್ ಬದಲಾಯಿಸಿ" ಅಂತ ಒಂದೇ ಸಮನೆ ಹೊಡಕೋತಿತ್ತು.  ಪಿನ್ನು ಪಿನ್ನೆಂದೇಕೆ ಗೋಳುಗರೆವರು ನನ್ನ ಪಾಡಿಗೆ ನನ್ನ ಬಿಡದ ಕಾವಲರು ಎಂದು ನಾನು ಕುಪಿತನಾದೆ. ಎಲ್ಲೆಡೆ ಈ ಕಾವಲರ ಅಥವಾ ಸೆಕ್ಯೂರಿಟಿಯವರದ್ದೆ ರಾಜ್ಯ.  ಪಿನ್ನು ಪಾಸ್ವರ್ಡ್ ಬಯೋಮೆಟ್ರಿಕ್ಸ್  ಕಾಪ್ಚ ನನ್ನದೇ ಫೋನ್ ಬಳಸಲು ನನಗೆಷ್ಟು ಕಷ್ಟ  ಎಂದು ನಾನು ದಾಸರ ಶೈಲಿಯಲ್ಲಿ  ಹಾಡುವ ಮುನ್ನ ಹಾಳಾಗಿ ಹೋಗಲಿ ಎಂದು ಪಿನ್ ಬದಲಾಯಿಸಿದೆ. ಹಳೆಯ ಪಿನ್ನನ್ನೇ ಏನೋ ಒಂದಿಷ್ಟು ಅದಲು ಬದಲು ಮಾಡಿ ಹೊಸ ಪಿನ್ ತಯಾರಿಸಿ ಪಿನ್ ಪೀಡೆಯಿಂದ ಪಾರಾದೆ.   ನನ್ನ  ಹೆಬ್ಬೆಟ್ಟು ಗುರುತಿನಿಂದ ಖುಲ್ ಜಾ ಸಿಮ್ ಸಿಮ್ ಎಂದು ಅಣತಿ ಮಾಡುತ್ತಿದ್ದ ನನಗೆ ಇವತ್ತು ಬೆಳಗ್ಗೆ ಫೋನ್ ಪಿನ್ ಹೇಳೆಂದು ಕೇಳಿತು. ಆಲಿಬಾಬಾನ ತಮ್ಮನಿಗೂ ಇಂಥದ್ದೇ ಏನೋ ಆಗಿರಬಹುದು. ನಿಮಗೆ ಈ ಆಲಿಬಾಬಾ ಕಥೆ ಗೊತ್ತು ತಾನೇ? ಕಳ್ಳರಿಂದ ಕಳ್ಳತನದ ಮಾಲನ್ನು ಕಳ್ಳತನ ಮಾಡಿದವನಿಗೆ ಬಾಬಾ ಎಂಬ ಹೆಸರು ಯಾಕೆ ಬಂತೋ ಎಂದು ನಾನು ಹಿಂದೆ ಯೋಚಿಸುತ್ತಿದ್ದೆ.  ನಮ್ಮ ಜೀವಮಾನದಲ್ಲಿ ಅದೆಷ್ಟೋ ಬಾಬಾಗಳು ಸ್ವಾಮಿಗಳು ಇಂಥದ್ದೇ ಸಾಧನೆಗಳನ್ನು ಮೆರೆದು ನನ್ನ ಅನುಮಾನ ಪರಿಹಾರವಾಗಿದೆ. ಈ ಆಲಿಬಾಬಾನ ತಮ್ಮನ ಹೆಂಡತಿಗೆ ತನ್ನ ಓರಗಿತ್ತಿ ಒಮ್ಮೆಲೇ ಒಳ್ಳೊಳ್ಳೆಯ ಉಡುಗೆ ತೊಟ್ಟು ಒಳ್ಳೊಳ್ಳೆಯ ಅಡುಗೆ ಮಾಡುವುದು ಇವೆಲ್ಲ ಕಣ್ಣು ಕುಕ್ಕಿತು.  ಅವಳು ತನ್ನ ತನಿಖೆ ಮುಂದುವರ