ಪೋಸ್ಟ್‌ಗಳು

ಫೆಬ್ರವರಿ, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಫೇಸ್ ಬುಕ್ ಮತ್ತು ಕಾಶೀಯಾತ್ರೆ (ಹರಟೆ)

ಇಮೇಜ್
ಫೇಸ್ ಬುಕ್ ಮತ್ತು   ಕಾಶೀಯಾತ್ರೆ   (ಹರಟೆ) ಸಿ. ಪಿ. ರವಿಕುಮಾರ್   ಹೀ ಗೊಂದು ಸುದ್ದಿಯನ್ನು ನನ್ನ ಸ್ನೇಹಿತ ಹಂಚಿಕೊಂಡಿದ್ದಾನೆ - ಒಬ್ಬ ಎನ್ನಾರೈ ಮಹಾಶಯ ಕಾಶೀಯಾತ್ರೆ ಮುಗಿಸಿದ ನಂತರ ಫೇಸ್ ಬುಕ್ ತೊರೆದನಂತೆ. ಈ ಕಾಶೀಯಾತ್ರೆಯು ಮದುವೆಯ ಸಂದರ್ಭದಲ್ಲಿ ನಡೆಯುವ ಯಾತ್ರೆಯೋ ಅಥವಾ ನಿಜವಾಗಲೂ ಕಾಶೀ ವಿಶ್ವನಾಥನ ದರ್ಶನಕ್ಕಾಗಿ ಮಾಡಿದ ಯಾತ್ರೆಯೋ ಎಂಬುದನ್ನು ಸುದ್ದಿಗಾರ ತಿಳಿಸಿಲ್ಲ.  ಮದುವೆಯಲ್ಲಿ ತಾಳಿ ಕಟ್ಟುವ ಮುಂಚೆ ನಡೆಯುವ ಕಾಶೀಯಾತ್ರೆ ನಾವು ಇಂದಿಗೂ ಉಳಿಸಿಕೊಂಡಿರುವ ಒಂದು ಪ್ರಹಸನ. ಇದು ಕನ್ನಡಿಗರ ಹಾಸ್ಯಪ್ರಜ್ಞೆಗೆ ಒಳ್ಳೆಯ ಉದಾಹರಣೆ ಎಂದೇ ನಾನು ವಾದಿಸುತ್ತೇನೆ.  ಮದುವೆಯಾಗಲು ಒಪ್ಪಿಗೆ ಕೊಟ್ಟ ವರನಿಗೆ ಒಮ್ಮೆಲೇ ವರಿ ಉಂಟಾಗಿದೆ. ಅಯ್ಯೋ ನಾನು ಇನ್ನೂ ವಿದ್ಯಾಭ್ಯಾಸ ಮುಗಿಸಿಲ್ಲ! ತಾನು ಕಲಿಯಬೇಕಾದದ್ದು ಇನ್ನೂ ಇದೆ!  ಇಂಥ ಸನ್ನಿವೇಶದಲ್ಲಿ ನಾನು ನಿಮ್ಮ ಕು-ವರಿಯನ್ನು ಕಟ್ಟಿಕೊಳ್ಳಲು ಸಾಧ್ಯವೇ ಎಲ್ಲ ಎಂದು ವಧುವಿನ ಬಡಪಾಯಿ ತಂದೆಗೆ ಖಡಕ್ ಮಾತಾಡಿ  ಈ ಕಲಿ-ಭೀಮನು ಕಲಿಕೆ ಮತ್ತು ಕನ್ನಿಕೆಯರ ನಡುವಿನ ಮೆಟಾಸ್ಟೇಬಲ್ ಸ್ಥಿತಿಯಿಂದ ಕಲಿಕೆಯತ್ತ ವಾಲುತ್ತಿದ್ದಾನೆ. ಇವನು ಹೀಗೆ ಮಾಡೇ ಮಾಡುತ್ತಾನೆ ಎಂದು  ಆ ವಧುವಿಗೆ ನೆನ್ನೆ ಕನಸು ಬಿದ್ದಿದೆ. ಅವಳು ಗೌರಿಗೆ ಮೊರೆ ಹೋಗಿದ್ದಾಳೆ. ಕಾಮನನ್ನು ಕಣ್ಣಿನಿಂದಲೇ ಸುಟ್ಟು ತಪಸ್ಸಿಗೆ ನಿಂತ ಶಿವನನ್ನು ಒಲಿಸಿಕೊಂಡವಳಲ್ಲವೇ ಗೌರಿ! ಅವಳೇ ವರ ಕೊಡಬೇಕು! ಅವಳು ಕೊಟ್ಟ ವರವನ್ನೇ ನ

ಮೊಗ್ಗಿನ ಮನಸ್ಸು

ಮೊಗ್ಗಿನ ಮನಸ್ಸು ಮೂಲ ಹಿಂದಿ ಕವಿತೆ: ಕೈಫಿ ಆಜ್ಮಿ   ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಏನಾದರೂ ನುಡಿಯಿತೆ ನಿನ್ನ ಹೃದಯ?   ಇಲ್ಲ, ಏನೂ ಇಲ್ಲ.  ನನ್ನ ಹೃದಯಕ್ಕೆ ಏನೋ ಕೇಳಿಸಿತಲ್ಲ? ಇಲ್ಲ, ಏನೂ ಇಲ್ಲವಲ್ಲ! ಹೀಗೂ ನಡೆಯುತ್ತದೆ ಕೆಲವೊಮ್ಮೆ  ಕಿವಿಗೆ ಕೇಳದ ಮೌನ ಸಂಭಾಷಣೆ! ಒಳಗೊಳಗೇ ಮೈಮುರಿಯುವ ಹೃದಯಕ್ಕೆ  ಯಾರು ಹೇಳುವರು  ತಿಳುವಳಿಕೆ? ಕಣ್ತೆರೆದು ಮೇಲೆದ್ದು ಸುಪ್ತ ಬಯಕೆ ದೂಡಿದರೆ  ಪಾಪಕ್ಕೆ ಎಂಬ ಶಂಕೆ! ಕನಸುಗಳೆಂಬ ಅಪ್ಸರೆಯರು ಮಲಗಿರಲಿ ಹಾಗೇ  ತಂಪಾಗಿದೆ ಕಣ್ಣ ರೆಪ್ಪೆಗಳ ಹಾಸಿಗೆ! ಮನಸ್ಸಿಗೆ ಹೇಳುತ್ತದೆ  ಸುಳ್ಳು ಸಮಾಧಾನ ಹೊರಗಿನ  ಶೃಂಗಾರ ಸಾಧನ ಮನದೊಳಗೋ  ಮೌನ; ಮಂದ್ರ ಶಿಶಿರಗಾನ ಜನರಿಗೆ ಭ್ರಮೆಯ ವಸಂತಾಗಮನ! ನಗೆಮುಗುಳನ್ನು ಎಂದಾದರೂ ಕೇಳುವರೇ ಜನ - ನಗುತಿಹೆಯೋ ಅಳುತಿಹೆಯೋ ಎಂಬುದನ್ನ? * * * ಕೈ ಫಿ ಆಜ್ಮಿ ಬರೆದಿರುವ ಈ ಕವಿತೆಯನ್ನು ಒಂದು ಹಿಂದಿಚಿತ್ರದಲ್ಲಿ ಗೀತೆಯಾಗಿ ಬಳಸಿಕೊಳ್ಳಲಾಗಿದೆ.  ಲತಾ ಮಂಗೇಶ್ಕರ್ ಹಾಡಿರುವ ಗೀತೆ. ನಾನು ಓದುತ್ತಿದ್ದಾಗ ರಾತ್ರಿ ಹತ್ತು ಗಂಟೆಗೆ ವಿವಿಧ ಭಾರತಿಯಲ್ಲಿ ಪ್ರಸಾರವಾಗುವ ಛಾಯಾಗೀತ್ ಎಂಬ ಕಾರ್ಯಕ್ರಮ ಬಹಳ ಜನಪ್ರಿಯವಾಗಿತ್ತು.  ಯಾವುದಾದರೂ ಒಂದು ಭಾವನೆಯ ಅಥವಾ ಸಂದರ್ಭದ ಥೀಮ್ ಉಳ್ಳ ಗೀತೆಗಳನ್ನು ಆರಿಸಿ ಮಧ್ಯೆ ಮಧ್ಯೆ ಒಂದಷ್ಟು ವಿವರಣೆಗಳ ಜೊತೆ ಪ್ರಸಾರ ಮಾಡುತ್ತಿದ್ದರು. ಇಂದಿಗೂ ಈ ಕಾರ್ಯಕ್ರಮ ಇರಬಹುದೇನೋ. ಛಾಯಾ

ಒಂದೇ ಒಂದು ಪೌಂಡ್ (ಹೀಗೇ ಸುಮ್ಮನೆ)

ಇಮೇಜ್
ಬೆ ಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ ಎಲ್ಲಿಗೆ ಹೋಗಿದ್ದೆ? ನಕ್ಕು ನುಡಿಯಿತು ಬೆಕ್ಕು, "ಲಂಡನ್ ನಗರಕ್ಕೆ!" ಬೆಕ್ಕಸ ಬೆರಗಾಗಿ ಕೇಳಿದಳು ಅಕ್ಕ, "ಅಲ್ಲಿಗೆ ಯಾತಕ್ಕೆ?" "ರೊಕ್ಕ ಬೇಡಲು ಹೋಗಿದ್ದೆ ರಾಣಿ ಅರಮನೆಗೆ!" "ಸಿಕ್ಕಿರಬಹುದು ಕೈತುಂಬಾ! ರಾಣಿ ಬಲು ಉದಾರಿ!" "ಅಕ್ಕಾ! ಅಲ್ಲಿ ಗಂಭೀರವಾಗಿದೆ ಪರಿಸ್ಥಿತಿ!  ಬೊಕ್ಕಸವು ಬರಿದಾಗಿದೆಯಂತೆ ಹೆಚ್ಚೂಕಮ್ಮಿ! (ಬಿಕ್ಕಿ) ಬರಬಾರದಕ್ಕಾ ಯಾರಿಗೂ ಇಂಥ ಗತಿ! "ಲೆಕ್ಕ ಹಾಕುತ್ತಿದ್ದಾರೆ ಮನೆಮಂದಿಯೆಲ್ಲಾ ಮಿಕ್ಕಿದೆಯಂತೆ ಕೇವಲ ಒಂದು ದಶಲಕ್ಷ! ಬಕ್ಕಿಂಗ್ ಹ್ಯಾಮ್ ಅರಮನೆಗೆ (ಮತ್ತೆ ಬಿಕ್ಕುತ್ತ) ಅಕ್ಕಾ ರಿಪೇರಿಗೂ ರೊಕ್ಕ ಇಲ್ಲವಂತಲ್ಲ! "ನಿಕ್ಕಾಹ್ ಮಾಡಿದರಲ್ಲ ಮೊಮ್ಮಗನಿಗೆ ಸಿಕ್ಕಾಪಟ್ಟೆ ಖರ್ಚಾಯಿತು ಬಟ್ಟೆಬರೆಗೆ ಸಕ್ಕರೆ ಹಂಚಿದರಂತೆ ಮನೆಮನೆಗೆ! ಅರಸರ ಮಕ್ಕಳ ಮದುವೆ ಎಂದರೆ ಸುಮ್ಮನೇನೇ! "ಚಿಕ್ಕ ಮಗು ಬೇರೆ ಹುಟ್ಟಿತಲ್ಲ ವಿಲ್-ಗೆ  ಚೆಕ್ಕು ಬರೆದರು ರಾಣಿ ಪ್ರತಿಯೊಂದು ಬಿಲ್-ಗೆ  ಲಕ್ಷವೇನು ಲೆಕ್ಕ ಅರಸರಿಗೆ ಅಕ್ಕಾ?  ಖರ್ಚಾದೀತು ಅಷ್ಟು ಕುಲಾವಿ ಮಕಮಲ್ ಗೆ  "ಹೇಗಿತ್ತು ಇಂಗ್ಲೆಂಡ್ ರಾಣಿಯರ ಜರ್ಬು!   ಬಾಗುತ್ತಿತ್ತು ಕೈಮುಗಿದು ಇಡೀ ಜಗತ್ತು!   ಆಗಸದಲ್ಲಿ ಮುಳುಗುತ್ತಲೇ ಇರಲಿಲ್ಲ ಸೂರ್ಯ   ಸಾಗುತ್ತಿತ್ತು ನಿರಾತಂಕ ಕಲೆಕ್ಷನ್ ಕಾರ್ಯ  "ನೆರೆರಾಷ್ಟ್ರ ಫ್ರಾನ್ಸ

ಬಾಪೂ ಮತ್ತು ನಯಾ ದೌರ್

ಇಮೇಜ್
ಬಾಪೂ ಮತ್ತು ನಯಾ ದೌರ್  ಸಿ. ಪಿ. ರವಿಕುಮಾರ್  ಇ ತ್ತೀಚೆಗೆ ಕೈಮಗ್ಗದ ಕೆಲಸಗಾರರ ಪರವಾಗಿ ನಾಟಕಕಾರ ಪ್ರಸನ್ನ ಉಪವಾಸ ಸತ್ಯಾಗ್ರಹ ಹೂಡಿದ್ದಾರೆ. ಇದರ ಬಗ್ಗೆ ಓದುವಾಗ ನನಗೆ ಕನ್ನಡ ಕತೆಗಾರರಾದ ಬಾಗಲೋಡಿ ದೇವರಾಯ ಅವರ "ಮಗ್ಗದ ಸಾಹೇಬ" ಕತೆ ನೆನಪಾಗಿ ಅದನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ನನ್ನ ಬ್ಲಾಗ್ ನಲ್ಲಿ ಪ್ರಕಟಿಸಿದೆ. ಮಹಾತ್ಮಾ ಗಾಂಧಿ ಬೃಹತ್ ಕೈಗಾರಿಕೀಕರಣದ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲದಿಂದ ಅವರ ಕೆಲವು ಲೇಖನಗಳನ್ನು ಓದಿದೆ; ಅವುಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಪ್ರಕಟಿಸಿದೆ. ಈ ಹುಡುಕಾಟದಲ್ಲಿ ನನ್ನ ಕಣ್ಣಿಗೆ ಬಿದ್ದ ಕವಿತೆ "ಬಾಪೂ." ಹಿಂದಿಯ ಪ್ರಸಿದ್ಧ ಕವಿ ಸುಮಿತ್ರಾನಂದನ್ ಪಂತ್  ಈ ಕವಿತೆಯನ್ನು ಸ್ವಾತಂತ್ರ್ಯಪೂರ್ವದಲ್ಲಿ (೧೯೩೯) ರಚಿಸಿದರು. ಇಲ್ಲಿ "ಬಾಪೂ" ಎಂದು ಅವರು ಸಂಬೋಧಿಸುವುದು ಮಹಾತ್ಮಾಗಾಂಧಿಯವರನ್ನು; ಆದರೆ "ಬಾಪೂ" ಎಂದರೆ ತಂದೆ ಎಂಬ ಅರ್ಥ ಬರುವುದರಿಂದ ರಬೀಂದ್ರನಾಥ್ ಟ್ಯಾಗೋರ್  ಗೀತಾಂಜಲಿಯಲ್ಲಿ "ತಂದೆ" ಎಂದು ಸಂಬೋಧಿಸಿದ ಭಗವಂತನ ಸ್ವರೂಪವನ್ನು ಉದ್ದೇಶಿಸಿ ಮಾತಾಡುತ್ತಿದ್ದಾರೆ ಎಂದು ಕೂಡಾ ಅರ್ಥೈಸಬಹುದು.  ಈ ಕವಿತೆಯನ್ನು ಬರೆದಾಗ ಕೈಗಾರಿಕಾ ಕ್ರಾಂತಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇಂಗ್ಲೆಂಡ್ ನಲ್ಲಿ ಮಿಲ್ ಗಳು ಸ್ಥಾಪಿತವಾಗಿದ್ದವು; ಈ ಮಿಲ್ ಬಟ್ಟೆಗಳಿಗೆ ಭಾರತವು ಒಂದು ಮಾರುಕಟ್ಟೆಯಾಯಿತು. ನಮ್ಮ ಖಾದಿ ಗ್ರ

ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ -೨

ಇಮೇಜ್
ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ -೨ ಮೂಲ: ಮಹಾತ್ಮಾ ಗಾಂಧಿ ಅನುವಾದ - ಡಾ. ಸಿ. ಪಿ. ರವಿಕುಮಾರ್ (ಮೊದಲ ಭಾಗವನ್ನು ಓದಲು ಈ ಕೊಕ್ಕೆಯನ್ನು ಅನುಸರಿಸಿ.) ಖಾದಿ  ಖಾ ದಿ ನನಗೆ ಭಾರತದ ಮಾನವ ಸಮಾಜದ ಐಕ್ಯತೆಯ ಕುರುಹಾಗಿ ಕಾಣುತ್ತದೆ. ಭಾರತದ ಆರ್ಥಿಕ ಸ್ವಾತಂತ್ರ್ಯದ ಕುರುಹಾಗಿ, ಸಮಾನತೆಯ ಕುರುಹಾಗಿ, ಕೊನೆಗೆ ಜವಾಹರಲಾಲ್ ನೆಹರೂ ಅವರ ಕಾವ್ಯಮಯ ಭಾಷೆಯಲ್ಲಿ ಹೇಳುವುದಾದರೆ "ಭಾರತದ ಸ್ವಾತಂತ್ರ್ಯದ ಪೋಷಾಕಿನಂತೆ" ತೋರುತ್ತದೆ.  ಖಾದಿ ಮನೋಭಾವ ಎಂದರೆ ಆವಶ್ಯಕ ವಸ್ತುಗಳ ತಯಾರಿಕೆ ಮತ್ತು ವಿತರಣೆಗಳನ್ನು ವಿಕೆಂದ್ರೀಕರಿಸುವುದು ಎಂದೇ ಅರ್ಥ. ಪ್ರತಿಯೊಂದು ಹಳ್ಳಿಯೂ ತನಗೆ ಅಗತ್ಯವಾದುದಕ್ಕಿಂತ ಸ್ವಲ್ಪ ಹೆಚ್ಚು ಪರಿಮಾಣದಲ್ಲಿ ನಗರಗಳ ಆವಶ್ಯಕತೆಯ ಪೂರೈಕೆಗಾಗಿ ಪದಾರ್ಥಗಳನ್ನು ತಯಾರಿಸಬೇಕು. ದೊಡ್ಡ ಕೈಗಾರಿಕೆಗಳನ್ನು ಕೇಂದ್ರೀಕೃತಗೊಳಿಸಿ ರಾಷ್ಟ್ರದ ಮಟ್ಟದಲ್ಲಿ ನಡೆಸಬೇಕು. ಆದರೆ ಯಾವ ರಾಷ್ಟ್ರದ ಬಹುಪಾಲಿನ ಚಟುವಟಿಕೆಗಳು ಹಳ್ಳಿಗಳಲ್ಲಿ ನಡೆಯುತ್ತವೋ ಅಲ್ಲಿ ಈ ದೊಡ್ಡ ಕೈಗಾರಿಕೆಗಳ ಪಾತ್ರ ಗೌಣವೇ ಆಗಿರುತ್ತದೆ.  ಖಾದಿಯ ತಯಾರಿಕೆ ಎಂದರೆ ಹತ್ತಿಯ ಕೃಷಿ, ಹತ್ತಿಯನ್ನು ಬಿಡಿಸುವುದು, ಹತ್ತಿಯ ಬೀಜಗಳನ್ನು ಬೇರ್ಪಡಿಸುವುದು, ಹತ್ತಿಯನ್ನು ಸ್ವಚ್ಛಗೊಳಿಸುವುದು, ಎಳೆಗಳನ್ನು ಬಿಡಿಸುವುದು, ಎಳೆಗಳ ಆಕಾರದ ಪ್ರಕಾರ ಅವುಗಳನ್ನು ಬೇರೆ ಮಾಡುವುದು, ಬಣ್ಣ ಹಾಕುವುದು, ನೂಲು ತೆಗೆಯುವುದು, ನೇಯ್ಗೆ, ಮತ್ತ