ಪೋಸ್ಟ್‌ಗಳು

ಏಪ್ರಿಲ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಲ್ಲಿಗೆ ಹೊರಟಿರುವೆ ಯಾತ್ರಿಕ?

ಇಮೇಜ್
ಸಿ. ಪಿ. ರವಿಕುಮಾರ್  "ವ ಹಾಂನ್ ಕೌನ್ ಹೈ ತೇರಾ ಮುಸಾಫಿರ್ ಜಾಯೇಗಾ ಕಹಾಂನ್? "ಅಲ್ಲಿ ಯಾರಿದ್ದಾರೆ ನಿನ್ನವರೆಂದು? ಎಲ್ಲಿಗೆ ಹೊರಟಿರುವೆ ಯಾತ್ರಿಕ?" ಈ ಗೀತೆಯಿಂದ ಪ್ರಾರಂಭವಾಗುತ್ತದೆ ಹಿಂದಿ ಚಲನಚಿತ್ರ ಗೈಡ್ . ಅದೇ ಶೀರ್ಷಿಕೆಯ ಆರ್. ಕೆ. ನಾರಾಯಣ್  ಬರೆದ ಕಾದಂಬರಿಯನ್ನು ಸ್ಥೂಲವಾಗಿ ಆಧರಿಸಿ ತಯಾರಿಸಿದ ಚಿತ್ರಕಥೆಯನ್ನು ವಿಜಯ್ ಆನಂದ್ ತೆರೆಯ ಮೇಲೆ ಮೋಹಕವಾಗಿ ಬಿಡಿಸಿದ್ದಾರೆ. ಅವರ ಚಿತ್ರನಿರ್ದೇಶನಕ್ಕೆ ಪೂರಕವಾಗಿದೆ  ಎಸ್. ಡಿ. ಬರ್ಮನ್  ಅವರ ಸಂಗೀತ, ದೇವ್ ಆನಂದ್ ಮತ್ತು ವಹೀದಾ ರಹಮಾನ್ ಅವರ ಅಭಿನಯ. ಚಿತ್ರದ ಒಂದೊಂದೂ ಹಾಡುಗಳು ಇಂದಿಗೂ ಜನಪ್ರಿಯವಾಗಿವೆ. ಇವುಗಳಲ್ಲಿ ಸ್ವತಃ ಎಸ್ ಡಿ ಬರ್ಮನ್ ಹಾಡಿರುವ "ವಹಾಂನ್ ಕೌನ್ ಹೈ ತೇರಾ ... " ಹಾಡು ನಮ್ಮನ್ನು ವಿಭಿನ್ನ ಲೋಕಕ್ಕೆ ಕರೆದೊಯ್ಯುತ್ತದೆ.     ಚಿತ್ರದ ನಾಯಕ ರಾಜೂ ಒಬ್ಬ ರೊಮ್ಯಾಂಟಿಕ್ ಸ್ವಭಾವದ ತರುಣ. ಇವನು ಒಂದು ಪಾಳು ದೇವಾಲಯದಲ್ಲಿ ಗೈಡ್ ಆಗಿ ಹೊಟ್ಟೆ ಹೊರೆಯುತ್ತಿದ್ದರೂ ದೊಡ್ಡ ದೊಡ್ಡ ಕನಸುಗಳನ್ನು ಕಾಣುತ್ತಾನೆ. ದೇವಾಲಯಕ್ಕೆ ಒಮ್ಮೆ ಒಬ್ಬ ಪ್ರಸಿದ್ಧ ಪುರಾತತ್ತ್ವ ವಿಜ್ಞಾನಿ (ಆರ್ಕಿಯಾಲಜಿಸ್ಟ್)  ಮತ್ತು ಅವನ ಹೆಂಡತಿ ರೋಸಿ ಬರುತ್ತಾರೆ. ವಿಜ್ಞಾನಿಗೆ ಹಳೆಯ ಅವಶೇಷಗಳಲ್ಲಿ ಆಸಕ್ತಿ. ತನ್ನ ನವವಿವಾಹಿತೆ ಪತ್ನಿಯೊಂದಿಗೆ ಅವನದು ಔಪಚಾರಿಕ ಎಂಬಂಥ ಸಂಬಂಧ. ರೋಸಿ ಚೆಲುವೆ, ನರ್ತಕಿ, ಜೀವನೋಲ್ಲಾಸ ತುಂಬಿ ತುಳುಕ

ಚಾರ್ಲಿ ಉವಾಚ

ಇಮೇಜ್
ಸಿ. ಪಿ. ರವಿಕುಮಾರ್ ಏಪ್ರಿಲ್ ೧೬, ೨೦೧೪ - ಚಾರ್ಲಿ ಚಾಪ್ಲಿನ್ನನ ನೂರಾ ಇಪ್ಪತ್ತೈದನೇ ಹುಟ್ಟುಹಬ್ಬ. ದುಂಡು ಮೇಜಿನ ಪರಿಷತ್ತಿಗೆ ಗಾಂಧೀಜಿ ಲಂಡನ್ನಿಗೆ ಭೇಟಿಯಿತ್ತಾಗ ಅಲ್ಲಿ ಅವರು ಸಂಧಿಸಿ ಮಾತಾಡಿಸಿದ ಕೆಲವೇ ಗಣ್ಯರ ಪೈಕಿ ಚಾರ್ಲಿ ಚಾಪ್ಲಿನ್ನನೂ ಒಬ್ಬ. ಅವನ ಜೀವನ ಚರಿತ್ರೆಯನ್ನು ನಮ್ಮ ತಂದೆ ಬ್ರಿಟಿಷ್ ಕೌನ್ಸಿಲ್ ಲೈಬ್ರರಿಯಿಂದ ತಂದು ಓದುತ್ತಿದ್ದಾಗ ನಾನೂ ಅದರ ಮೇಲೆ ಕಣ್ಣಾಡಿಸಿದ ನೆನಪಿದೆ. ಒಬ್ಬ ರಂಗ ಅಭಿನೇತ್ರಿಯ ಮಗನಾಗಿ ಹುಟ್ಟಿದ ಚಾರ್ಲಿಯ ಬಾಲ್ಯ ಬಡತನ ಮತ್ತು ಒಂಟಿತನದಲ್ಲಿ ಕಳೆಯಿತು. ಒಮ್ಮೆ ಅವನ ತಾಯಿ ಪುಟ್ಟ ಚಾರ್ಲಿಯನ್ನು ಯಾರ ಸುಪರ್ದಿನಲ್ಲೂ ಬಿಟ್ಟಿರಲಾಗದೆ ಅವನನ್ನು ನಿರ್ವಾಹವಿಲ್ಲದೆ ರಂಗದ ಮೇಲೆ ಕರೆದೊಯ್ಯುತ್ತಾಳೆ. ಪುಟ್ಟ ಬಾಲಕ ರಂಗದ ಮೇಲೆ ಹೋ ಎಂದು ಅಳಲು ಪ್ರಾರಂಭಿಸುತ್ತಾನೆ! ಇದನ್ನು ನೋಡಿ ಸಭಿಕರು ಹೋ ಎಂದು ನಕ್ಕು ಕರತಾಡನ ಮಾಡುತ್ತಾರೆ!  ತನ್ನ ನೋವಿನಿಂದ ಜಗತ್ತಿಗೆ ನಗೆಯನ್ನು ಹಂಚುವ ಪ್ರವೃತ್ತಿ ಹೀಗೆ ಪ್ರಾರಂಭವಾಯಿತು! ಉದ್ದಕ್ಕೂ ಕ್ಲೌನ್ (ನಕಲಿ ವೇಷಧಾರಿ) ಪಾತ್ರಗಳಲ್ಲಿ ಕಾಣಿಸಿಕೊಂಡ ಚಾರ್ಲಿ ಚಾಪ್ಲಿನ್ ನಿಜಕ್ಕೂ ಒಬ್ಬ ಅಪೂರ್ವ ಪ್ರತಿಭೆಯ ಸಾಹಿತಿ, ಚಿತ್ರ ನಿರ್ದೇಶಕ, ನಟ. ಅವನ ಕೆಲವು ಜಾಣ್ನುಡಿಗಳನ್ನು ಇಲ್ಲಿ ಕನ್ನಡಿಸಿದ್ದೇನೆ. ನಮ್ಮ ಮೆಚ್ಚಿನ ಕಲಾವಿದನಿಗೆ ಇದೊಂದು ಬಗೆಯ ಶ್ರದ್ಧಾಂಜಲಿ! "ಜೀವನವು ಸುಂದರ ಮತ್ತು ವಿರಾಟ್ ಸ್ವರೂಪದ್ದು -  ನೀರಿನಲ್ಲಿ ತೇಲುವ ಜೆಲಿ ಫಿಶ್ ಗೂ ಕೂಡಾ&q

ಗುಲ್ಜಾರ್ ಅವರಿಗೆ ಪುಷ್ಪಗುಚ್ಛ

ಸಿ. ಪಿ. ರವಿಕುಮಾರ್  ಗು ಲ್ಜಾರ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವುದು ಗುಣಕ್ಕೆ ನಮ್ಮಲ್ಲಿ ಇನ್ನೂ ಪುರಸ್ಕಾರವಿದೆ ಎಂಬ ಸಮಾಧಾನವನ್ನು ತಂದುಕೊಟ್ಟಿದೆ. ಗುಲ್ಜಾರ್ ಒಬ್ಬ ಅಸಾಮಾನ್ಯ ಕವಿ, ಕತೆಗಾರ, ಚಲನಚಿತ್ರ ನಿರ್ದೇಶಕ.  ೧೯೩೪ ರಲ್ಲಿ ಅವಿಭಾಜಿತ ಭಾರತದ ಪಂಜಾಬ್ ಪ್ರಾಂತದಲ್ಲಿ ಹುಟ್ಟಿದವರು. ಅವರ ನಿಜವಾದ ಹೆಸರು ಸಂಪೂರನ್ ಸಿಂಗ್ ಕಾಲ್ರಾ; ಮೂಲತಃ ಸಿಖ್ ಧರ್ಮಿಗಳು. ಪಂಜಾಬಿನ ವಿಭಜನೆಯ ಸಮಯದಲ್ಲಿ ಇನ್ನೂ ಹದಿಹರೆಯದ ಹುಡುಗನಾಗಿದ್ದ ಗುಲ್ಜಾರ್ ಮನಸ್ಸಿನ ಮೇಲೆ ಆ ಕಾಲದ ಘಟನೆಗಳು ಆಳವಾದ ಮುದ್ರೆಯನ್ನೊತ್ತಿದವು. ಮುಂದೆ ತಮ್ಮ ತಂದೆಯ ಇಚ್ಛೆಯ ವಿರುದ್ಧವಾಗಿ ಸಿನಿಮಾ ಪ್ರಪಂಚವನ್ನು ಪ್ರವೇಶಿಸಿದರು. ತಮ್ಮ ಹಲವಾರು ಕತೆಗಳಲ್ಲಿ ಅವರು ಭಾರತದ ವಿಭಜನೆಯನ್ನು ವಸ್ತುವನ್ನಾಗಿ ಆರಿಸಿಕೊಂಡಿದ್ದಾರೆ. ಮುಂದೆ ಪಂಜಾಬ್ ಪ್ರಾಂತದಲ್ಲಿ ಉಗ್ರವಾದಿ ಗುಂಪುಗಳು ಪ್ರತ್ಯೇಕ ಖಾಲಿಸ್ತಾನ್ ದೇಶಕ್ಕೆ ಆಗ್ರಹಿಸಿ ಹೋರಾಟ ಪ್ರಾರಂಭಿಸಿದಾಗ ಉಗ್ರರ ವ್ಯಥೆಗೆ ಕಾರಣಗಳನ್ನು ಹುಡುಕುವ ಮಾಚಿಸ್ ಎಂಬ ಚಿತ್ರವನ್ನು ನಿರ್ದೇಶಿಸಿದರು.  ಗುಲ್ಜಾರ್ ಅವರು ಪ್ರಸಿದ್ಧ ನಿರ್ದೇಶಕರಾದ ಬಿಮಲ್ ರಾಯ್ ಅವರೊಂದಿಗೆ ಸಹನಿರ್ದೇಶಕರಾಗಿ ಪಳಗಿದವರು.  ಮುಂದೆ ಸ್ವತಂತ್ರವಾಗಿ ನಿರ್ದೇಶಿಸುವ ಅವಕಾಶಗಳು ಸಿಕ್ಕಾಗ ಅನೇಕ ಕಾಲ ನೆನಪಿನಲ್ಲಿಟ್ಟುಕೊಳ್ಳುವ ಚಿತ್ರಗಳನ್ನು ನಮಗೆ ಕೊಟ್ಟರು.  ಒಬ್ಬ ಮೂಕ ಇನ್ನೊಬ್ಬ ಮೂಕಿಯನ್ನು  ಪರಸ್ಪರ ಪ್ರೀತಿಸಿ ಜೀವನದಲ್ಲಿ ಮು

ಉನ್ಮಾದ

ಉನ್ಮಾದ (ಹಿಸ್ಟೀರಿಯಾ) ಕವಿತೆ ಓದುವ ಮುನ್ನ  ಟಿ. ಎಸ್. ಈಲಿಯಟ್ ಕನ್ನಡಕ್ಕೆ ಮುಖ್ಯನಾದ ಕವಿ; ಏಕೆಂದರೆ ಕನ್ನಡದ ನವ್ಯ ಕವಿಗಳು ಅವನ ಕಾವ್ಯದಿಂದ ಪ್ರಭಾವಿತರಾದವರು. ಪ್ರಸ್ತುತ ಕವಿತೆ "ಹಿಸ್ಟೀರಿಯಾ" ಎಂಬ ಅವನ ಮೂಲ ಕವಿತೆಯ ಅನುವಾದ.  ಇಲ್ಲಿ ಒಂದು ಸಂದರ್ಭದ ವಿವರಣೆ ಇದೆ. ಅದರ ಹಿನ್ನೆಲೆ ಏನು ಮೊದಲಾದ ವಿವರಗಳನ್ನು ಕವಿ ನಮಗೆ ನೀಡುವುದಿಲ್ಲ. ಒಬ್ಬ ಯುವಕ ಮತ್ತು ಅವನ ಹೆಣ್ಣು ಸಂಗಾತಿ ಇಬ್ಬರೂ ಮಧ್ಯಾಹ್ನದ ಊಟಕ್ಕೆ ಯಾವುದೋ ರೆಸ್ತರಾಂಗೆ ಹೋಗಿದ್ದಾರೆ. ಊಟದ ನಂತರ ಚಹಾ ಬರಲು ಕಾಯುತ್ತಿದ್ದಾರೆ. ಆಗ ಯಾವುದೋ ಕಾರಣಕ್ಕಾಗಿ ಹೆಣ್ಣು ಸಂಗಾತಿ ನಗಲು ಪ್ರಾರಂಭಿಸುತ್ತಾಳೆ. ಅದೊಂದು ಉನ್ಮಾದದ ನಗೆ. ಕವಿತೆಯಲ್ಲಿ ಈ ನಗೆಯಿಂದ ಯುವಕ ಸಂಗಾತಿಯ ಮೇಲೆ ಯಾವ ಪರಿಣಾಮ ಉಂಟಾಯಿತು ಎಂಬ ವಿವರಗಳು ಬರುತ್ತವೆ.  ಆ ಯುವತಿ ಯಾಕೆ ನಕ್ಕಳು? ಅವಳ ನಗೆಯ ಹಿಂದೆ ಏನಾದರೂ ದುಃಖ ಅಡಗಿದೆಯೇ? ಅವರಿಬ್ಬರ ನಡುವೆ ಇದ್ದ ಸಂಬಂಧವೇನು? ಅವರ ನಡುವೆ ನಡೆದ ಸಂಭಾಷಣೆ ಏನು? ಇದ್ದಕ್ಕಿದ್ದ ಹಾಗೆ ಅವಳ ಹಾಗೆ ನಗಲು ಏನು ಕಾರಣ? ಒಂದು ವಿಲಕ್ಷಣವಾದ ರೀತಿಯಿಂದ ಕವಿತೆ ನಮ್ಮನ್ನು ಕಾಡುತ್ತದೆ.  ಇಂಥ ಮುಜುಗರದ ಸಂದರ್ಭಗಳನ್ನು ನಾವೂ ಯಾವಾಗಲಾದರೂ ಅನುಭವಿಸಿರುತ್ತೇವೆ; ಕವಿ ನಮ್ಮನ್ನು ಅಂತಹ ಅನುಭವ ಪ್ರಪಂಚಕ್ಕೆ ಹೇಗೆ ಕರೆದೊಯ್ಯುತ್ತಾನೆ!  ಮೂಲ ಇಂಗ್ಲಿಷ್ ಕವಿತೆ: ಟಿ. ಎಸ್. ಎಲಿಯಟ್   ಕನ್ನಡ ಭಾಷಾಂತರ: ಸಿ. ಪಿ. ರವಿಕುಮಾರ್  ಅ ವಳು ನಗುತ್ತಿದ

ತಪ್ಪು ಹೆಜ್ಜೆ ಇಟ್ಟು ನಡೆದ ಬಾಲ ರಾಮಚಂದ್ರ!

ಇಮೇಜ್
ಕವಿತೆ ಓದುವ ಮುನ್ನ ... ಕನ್ನಡದಲ್ಲಿ ಪುರಂದರದಾಸರು ಹೇಗೆ ಕೃಷ್ಣನ ಬಾಲ್ಯವನ್ನು ನವಿರು ಹಾಸ್ಯದಿಂದ ಚಿತ್ರಿಸಿದ್ದಾರೋ ಅದೇ ಬಗೆಯ ನವಿರು ಹಾಸ್ಯವನ್ನು ತುಲಸೀದಾಸರ ಈ ಗೀತೆಯಲ್ಲಿ ಕಾಣಬಹುದು. ರಾಮನ ಬಾಲ್ಯವನ್ನು ಕವಿ ವರ್ಣಿಸುತ್ತಿದ್ದಾನೆ. ಕವಿಯ ಒಳಗಣ್ಣಿಗೆ ಮಗು ಶ್ರೀರಾಮನು ತಪ್ಪು ಹೆಜ್ಜೆ ಇಡುತ್ತಾ ನಡೆಯಲು ಕಲಿಯುವ ಚಿತ್ರ ಗೋಚರಿಸುತ್ತಿದೆ. ಹಾಗೆ ನಡೆಯುವಾಗ ಅವನ ಪುಟ್ಟ ಕಾಲಿಗೆ ಕಟ್ಟಿದ ಗೆಜ್ಜೆಯ ಘಲ್ ಘಲ್ ಸದ್ದು ಕವಿಯ ಕಿವಿಗೆ ಕೇಳುತ್ತಿದೆ. ನಡೆಯುವ ರಭಸದಲ್ಲಿ ರಾಮ ಧೊಪ್ಪನೆ ಬಿದ್ದಾಗ ಅವನತ್ತ ತಾಯಿ-ತಂದೆಯರು ಧಾವಿಸಿ ಬರುತ್ತಾರೆ. ರಾಮನು ಪುತ್ರಕಾಮೇಷ್ಟಿ ಯಾಗವನ್ನೇ ಮಾಡಿ ಪಡೆದ ಪುತ್ರ! ಅಯ್ಯೋ, ಮಗುವಿಗೆ ಏನಾಯಿತೋ ಎಂದು ದಶರಥ ಪರಿತಪಿಸುತ್ತಾನೆ! ತಂದೆ ತಾಯಿ ಹೀಗೆ ಕಂಗಾಲಾದಾಗ ಮಗುವೂ ಪೆಚ್ಚಾಗಿ ಅಳುತ್ತದೆ! ಕವಿಯ ಕಲ್ಪನೆಯಲ್ಲಿ ಸಾಕ್ಷಾತ್ ಶ್ರೀರಾಮಚಂದ್ರನೇ ಅಳುತ್ತಿದ್ದಾನೆ! ತಂದೆ ತನ್ನ ಉತ್ತರೀಯದ ಸೆರಗಿನಿಂದಲೇ ಧೂಳನ್ನು ಝಾಡಿಸಿ ಒರೆಸಿ ಮಗುವಿಗೆ ಪರಿಪರಿಯಾಗಿ ಸಮಾಧಾನ ಮಾಡುತ್ತಿದ್ದಾನೆ! ಗಲ್ಲ ನೇವರಿಸಿ ಕೂದಲು ಸರಿಮಾಡಿ ಅಳಬಾರದೆಂದು ಗೋಗರೆಯುತ್ತಿದ್ದಾನೆ! ಈ ಬಗೆಯ ಕಕ್ಕುಲತೆಯಿಂದ ಸಮಾಧಾನಗೊಂಡ ಮಗುವಿನ ತುಟಿಯಲ್ಲಿ ಕೊನೆಗೂ ನಗು ಅರಳುತ್ತದೆ. ಜೇನು ಸುರಿಯುವಂತೆ ತೋರುವ ಹವಳದಂಥ ತುಟಿಗಳಿಂದ ಜೇನಿನಷ್ಟೇ ಸವಿಯಾದ ತೊದಲು ಮಾತುಗಳನ್ನು ಕೇಳಿ ದಶರಥ-ಕೌಸಲ್ಯೆ ಮುಗ್ಧರಾಗಿದ್ದಾರೆ! ಕೆಳಗೆ ಬಿದ್ದು ಅತ್ತು ರಂಪ

ರಾಮರತ್ನವೆಂಬ ನಿಕ್ಷೇಪ

ಇಮೇಜ್
ಮೂಲ ಭೋಜಪುರಿ ಗೀತೆ - ಮೀರಾ ಬಾಯಿ  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಈ ಮೀರಾ-ಭಜನೆಯನ್ನು ನೀವೆಲ್ಲರೂ ಕೇಳಿರುತ್ತೀರಿ. "ಪಾಯೋ ಜೀ ಮೈನೆ ರಾಮ್ ರತನ್ ಧನ್ ಪಾಯೋ!" ... ಅನೇಕಾನೇಕ ಗಾಯಕ/ಗಾಯಕಿಯರು ಹಾಡಿರುವ ಭಜನೆ. ಯೂ ಟ್ಯೂಬಿನಲ್ಲಿ ಹುಡುಕಿದರೆ ರೆಕಾರ್ಡಿಂಗ್ ಸಿಕ್ಕುತ್ತದೆ, ಕೇಳಿ. ಈ ಭಜನೆಯನ್ನು ಕುರಿತು ಯೋಚಿಸುತ್ತಿದ್ದೆ. ಜನರಿಗೆ ಎಲ್ಲಾ ಕಾಲದಲ್ಲೂ ನಾಳೆಯ ಚಿಂತೆ ಇದ್ದೇ ಇತ್ತೆಂದು ತೋರುತ್ತದೆ. ಈಗಂತೂ ಕೆಲವರು ಇನ್ಷೂರೆನ್ಸ್, ಇನ್ವೆಸ್ಟ್ ಮೆಂಟ್, ರಿಯಲ್ ಎಸ್ಟೇಟ್ ಇವನ್ನು ಬಿಟ್ಟರೆ ಬೇರೆ ಮಾತೇ ಆಡುವುದಿಲ್ಲ ಎನ್ನುವುದನ್ನು ನೀವೂ ಗಮನಿಸಿರುತ್ತೀರಿ. ಈ ಕವಿತೆಯನ್ನು ರಚಿಸಿದಾಗ ಮೀರಾಬಾಯಿಗೂ ಭವಿಷ್ಯದ ಯೋಚನೆಯಾಗಿರಬಹುದು - "ನಾಳೆಯ ಗತಿ ಏನು?" ಎಂದು ಯಾರಾದರೂ ಅವಳನ್ನು ಚುಚ್ಚಿರಬಹುದು. ಅವರಿಗೆ ಉತ್ತರದ ರೂಪದಲ್ಲಿ ಮೀರಾಬಾಯಿ ಈ ಕವಿತೆ ಬರೆದಿದ್ದಾಳೆ. "ನನ್ನಲ್ಲಿ ಅಪಾರವಾದ ಧನವಿದೆ -ರಾಮನಾಮವೆಂಬ ಧನ!" ಎಂದು ಅವಳು ತನ್ನ ಶ್ರೀಮಂತ್ರಿಕೆಯನ್ನು ಮೆರೆಯುತ್ತಿದ್ದಾಳೆ. "ಭವಸಾಗರವನ್ನು ಹೇಗಪ್ಪಾ ದಾಟುವುದು?" ಎಂದು ಹಲುಬುವವರಿಗೆ ಅವಳ ಉತ್ತರ - "ಸತ್ಯವೆಂಬ ದೋಣಿ ಇದೆ, ಸದ್ಗುರುಗಳೇ ಅಂಬಿಗರಾಗಿದ್ದಾರೆ, ದಾಟಿಸುತ್ತಾರೆ, ಸಂತೋಷವಾಗಿರು!" ಈಗ ಅನುವಾದವನ್ನು ಓದಿ. ಸಿಕ್ಕಿಬಿಟ್ಟಿತು ನನಗೆ ರಾಮರತ್ನವೆಂಬ ನಿಕ್ಷೇಪ ಅಪಾರ - ದಾನವಿತ್ತರು ಸದ್ಗುರ