ಪೋಸ್ಟ್‌ಗಳು

Kedarnath Singh ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನೇಯ್ಗೆಯ ಹಾಡು

ನೇಯ್ಗೆಯ ಹಾಡು  ಮೂಲ ಹಿಂದಿ ಕವಿತೆ: ಕೇದಾರನಾಥ್ ಸಿಂಗ್  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ಎದ್ದೇಳಿ  ಮಲಗಿರುವ ದಾರಗಳೇ  ಎದ್ದೇಳಿ  ಎದ್ದೇಳಿ, ಚಕಚಕಿಸುತ್ತಿದೆ ಆಗಲೇ  ದರ್ಜಿಯ ಯಂತ್ರ   ಎದ್ದೇಳಿ, ಕೆರೆಯ ಕಟ್ಟೆಗೆ ಬಂದಾಗಿದೆ ಮಡಿವಾಳ ಎದ್ದೇಳಿ, ಶಾಲೆಗೆ ಹೊರಟುನಿಂತಿದ್ದಾರೆ  ಮಕ್ಕಳು ಬೆತ್ತಲೆ ಎದ್ದೇಳಿ, ನನ್ನ ಬೆಳಗಿನ ದಾರಗಳೇ   ಮತ್ತು ನನ್ನ ಸಂಜೆಯ ದಾರಗಳೇ ಎದ್ದೇಳಿ  ಎದ್ದೇಳಿ, ಎಲ್ಲೋ ಸಿಕ್ಕಿಹಾಕಿಕೊಳ್ಳುತ್ತಿದೆ ಎಳೆ  ಎದ್ದೇಳಿ, ಗಂಟಾಗಿದೆ ಎಲ್ಲೋ ಏನೋ  ಎದ್ದೇಳಿ, ಎಳೆದು ಕಟ್ಟಲು  ಕೊಂಚ ಕಡಿಮೆಯಾಗಿದೆ ಯಂತ್ರದಲ್ಲಿ ಸೂತ್ರ ಏಳಿ  ಅಂಗಿಗಳಲ್ಲಿ ಕಾಲುಚೀಲಗಳಲ್ಲಿ ಜೋಳಿಗೆಗಳಲ್ಲಿ ಹಾಸಿಗೆಗಳಲ್ಲಿ ಅದುಮಿಟ್ಟ ದಾರಗಳೇ ಏಳಿ ಏಳಿ, ಏಕೆಂದರೆ ಏನೋ ತಪ್ಪಾಗಿಹೋಗಿದೆ ಏಳಿ, ಏಕೆಂದರೆ  ನೇಯಬೇಕಾಗಿದೆ ಈ ಪ್ರಪಂಚದ ಎಲ್ಲಾ ಬಟ್ಟೆ ಮತ್ತೆ ಹೊಸದಾಗಿ ಏಳಿ ನನ್ನ ತುಂಡಾದ ದಾರಗಳೇ ನನ್ನ ಗೋಜಲಾದ ದಾರಗಳೇ ಏಳಿ ಏಳಿ ಏಕೆಂದರೆ ಆಗುತ್ತಿದೆ ನೇಯ್ಗೆಯ ಸಮಯ

ನಗರದಲ್ಲಿ ರಾತ್ರಿ

ಇಮೇಜ್
ಹಿಂದಿ ಕವಿತೆ - ಕೇದಾರನಾಥ್ ಸಿಂಗ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಮಿಂಚುತ್ತಿದೆ ನಭದಲ್ಲಿ, ಇನ್ನೇನು ಸುರಿಯಬಹುದು ಮಳೆ ಮನೆಯಿದ್ದ ಜನರೂ ಓಡುತ್ತಿಹರು ಹೀಗೇಕೆ? ಭಾಷೆ ಗೊತ್ತಿದ್ದವರು ಮೌನ ಧರಿಸಿಹರೇಕೆ? ಏನದು ಕಾಣುತ್ತಿದೆ ಧೂಮ್ರದಲ್ಲಿ ಬರೆದಂಥ ರೇಖೆ? ಹಸಿರು ಹಸಿರಾಗಿ ಅಲ್ಲೇನೋ ಕಾಣುತ್ತಿದೆ ನೋಡು - ಜೀವನ ಸೂತ್ರಗಳೆಲ್ಲ ಗಂಟಾಗಿವೆ ಸಿಕ್ಕಿಹಾಕಿಕೊಂಡು   ಇದು ನಗರವೋ ಅಣ್ಣ! ಇಲ್ಲಿ ವಾಸವಾಗಿವೆ ಆಸೆಗಳು ಬೊಗಳುತ್ತವೆ ನಾಯಿ ಮನುಷ್ಯರು ಹಾಡುತ್ತವೆ ಅಳಿಲು ಇದು ನಗರವೋ ಅಣ್ಣ! ಇದರದ್ದು ಒಂದೇ ಸರಳ ಬೇಡಿಕೆ ಬೇಕು ಸ್ವಾತಂತ್ರ್ಯ ಸಾಧ್ಯವಾದಷ್ಟೂ ಸುಖಾನುಭವಕ್ಕೆ ಹೊತ್ತುರಿಯುವಾಗ ನೀನು ಇದನ್ನು ನೋಡಬೇಕು ಬೇರೆ ಬೇರೆ ಕನ್ನಡಿಗಳಲ್ಲಿ ತೋರುವುದು ಬೇರೆ ಬೇರೆ ಝಲಕ್ಕು ರಾತ್ರಿಯಾಗುತ್ತಿದೆ ಗೆಳೆಯಾ - ಇನ್ನು ಹೋಗಿಬರುತ್ತೇನೆ ನನಗೆ ಸಂಬಳ ಕೊಡುತ್ತಾರೆ ನೋಡು ಹೀಗೆ ಹೋಗಿಬರುವುದಕ್ಕೇ ಕೇಳು ನೀರವದಲ್ಲಿ ಕಣ್ಣಿಗೆ ಹತ್ತಿದಾಗ ಜೊಂಪು ರಾತ್ರಿಯೆಲ್ಲಾ ಕೇಳುವುದು ಶೃಂಖಲೆಗಳ ಸದ್ದು == Translation of a Hindi poem by Kedarnath Singh (c) 2014, C.P. Ravikumar

ಕೃಷ್ಣಪಕ್ಷದ ಚಂದ್ರ

ಇಮೇಜ್
ಮೂಲ ಹಿಂದಿ ಕವಿತೆ - ಕೇದಾರನಾಥ್ ಸಿಂಗ್ ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಕಾರಾಗೃಹದಲ್ಲಿ ತೂಗುಬಿಟ್ಟ  ಚಿಮಣಿದೀಪದ ಹಾಗೆ  ಚಂದ್ರ ತೂಗಿಬಿದ್ದಾಗ  ಮರದ ಬೆತ್ತಲು ರೆಂಬೆಗೆ ನಾವು   ಅರ್ಥಾತ್ ಭೂಮಿಯ ಮೇಲಿನ ಸಕಲ ಸೆರೆವಾಸಿಗಳು ಸಂಭ್ರಮಿಸುತ್ತಿದ್ದೇವೆ  ಸರಿ, ಒಂದಾದರೂ ಅಂಥದ್ದು ಇದೆಯಲ್ಲಪ್ಪ  ನೋಡಿಕೊಳ್ಳಲು ನಮ್ಮ ಚೆಹರೆಗಳು ಪರಸ್ಪರ  Translation of a Hindi poem by Kedarnath Singh (c) 2014, C.P. Ravikumar

ಹೊಸದಿನದೊಂದಿಗೆ

ಇಮೇಜ್
ಕವಿತೆ ಓದುವ ಮುನ್ನ .... ಈ ಸಲದ ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೀ ಕೇದಾರನಾಥ್ ಸಿಂಗ್ (೧೯೨೪-) ಹಿಂದಿಯ ಪ್ರಮುಖ ಕವಿ, ಸಾಹಿತ್ಯ ವಿಮರ್ಶಕ ಮತ್ತು ಪ್ರಬಂಧಕಾರ. ಅವರ ಒಂದು ಕವಿತೆಯ ಕನ್ನಡ ಭಾಷಾಂತರವನ್ನು ಓದಿ. ಪ್ರತಿದಿನವೂ ನಮ್ಮ ಬಾಳಿನಲ್ಲಿ ಒಂದು ಹೊಸಪುಟವನ್ನು ತೆರೆಯುತ್ತದೆ. ಅದನ್ನು "ಪ್ರೇಮದ ಪುಟ" ಎಂದು ಕವಿ ಸ್ವಾಗತಿಸುತ್ತಾನೆ. ಹಿಂದೆ ಹೀಗೇ ಪ್ರಾರಂಭವಾದ ಎಷ್ಟೋ ಪುಟಗಳಲ್ಲಿ ಕಹಿನೆನಪುಗಳು ದಾಖಲಾಗಿರಬಹುದು.  ಆದರೇನು? ಕವಿ ಆಶಾವಾದಿ - ಇಂದಿನ ಪುಟವು ಅಂತಹ ಅನಿಷ್ಟವಾದ ಪುಟಗಳ ನಡುವೆ ಹುದುಗಿಸಿಟ್ಟ ನವಿಲುಗರಿಯಂತೆ ಮೂಡಲಿ ಎಂಬುದು ಅವನ ಆಸೆ!  ಮೂಲ ಹಿಂದಿ ಕವಿತೆ - ಕೇದಾರನಾಥ್ ಸಿಂಗ್  ಕನ್ನಡಕ್ಕೆ - ಸಿ ಪಿ ರವಿಕುಮಾರ್  ಹೊಸದಿನದೊಂದಿಗೆ  ನಮ್ಮ ಪ್ರೀತಿಯ  ಮತ್ತೊಂದು ಖಾಲೀಪುಟ ಮಗುಚಿದೆ  ಓ ಬೆಳಗೇ, ಇದರ ಮೇಲೆ ಎಲ್ಲಾದರೂ  ನಿನ್ನ ಹೆಸರನ್ನು ಬರೆದುಹೋಗಬಾರದೆ? ಅನೇಕ ಅನಿಷ್ಟ ಪುಟಗಳ ನಡುವೆ  ಅದನ್ನೂ ಇಟ್ಟುಬಿಡುತ್ತೇನೆ.  ಬೀಸಿದ ಗಾಳಿ    ಏಕಾಏಕಿ ಕೆದರಿದಾಗ ಒಳಗೆ ನವಿಲುಗರಿಯಂತೆ  ಬಚ್ಚಿಟ್ಟ ಆ ಹೆಸರನ್ನು  ಓದಿಕೊಳ್ಳುತ್ತೇನೆ ಪ್ರತಿಸಲವೂ  Kannada Translation of a Hindi poem by Kedarnath Singh (c) 2014, C.P. Ravikuma...