ಪೋಸ್ಟ್‌ಗಳು

Social Commentary ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ತಿಪ್ಪೆಸಾಂಗ್

ಇಮೇಜ್
ಸಿ ಪಿ ರವಿಕುಮಾರ್              ಭಾಳ trashಆ ಆಗಲಿಕ್ಕೆ ಹತ್ತಿದೆರೀ ಬೆಂಗಳೂರದಾಗs ನಡುವs ನಡಕೋತ ಹೊಂಟೆs ಹಾಕುತ ತಿಪ್ಪರ್ ಲಾಗs ದೀರ್ಘ ಶ್ವಾಸs ಎಳಕೋಬೇಕಂತs ಬಾಬಾ ಪ್ರಾಣಾಯಾಮಾs ತಿಪ್ಪೆ ಗುಂಡಿ ಹತ್ರs ಎಂಥದ್ದೂರೀ ಅಯ್ಯೋ ರಾಮಾs ತಿಪ್ಪೆ, ತಿಪ್ಪೆ, ಎಲ್ಲಾ ಕಡೆಗೂ, ತಿಪ್ಪೆ ತಿಪ್ಪೆ ತಿಪ್ಪೆ! ಬ್ಯಾರೆ ಚಾನಲ್ ಹಾಕಿದರೂನೂ ಅಷ್ಟೇ ತಕ್ಕಡಿ ಬೆಪ್ಪೇ ಓದಲು ಕೂತರs ವಾರ್ತಾ ಪತ್ರಿಕೆ ಟೀವೀ ಬಂದು ಮಾಡಿs ಕೈಯಲ್ಲಿರುವುದು ಪತ್ರಿಕೆಯೋ ಅಥವಾ ಅದು ತಿಪ್ಪೇಗಾಡಿ? ಕನ್ನಡ ಪತ್ರಿಕೆ ಪುಟಪುಟದಲ್ಲೂ ಇಂಗ್ಲಿಷ್ ಜಾಹೀರಾತs ಪುರುಸೊತ್ ಸಿಕ್ರs ಕರೇಂಗೆ ಮಿಲ್ಕೇ ಹಿಂದೀಮೇ ಹಂ ಬಾತs ವಾರ್ತಾ ಪತ್ರಿಕೆ ಅಂತಾರs ತುಂಬಿದೆ ಬರಿಯ ವರಾತs ಯಾವುದು ಇಲ್ಲಿ ವಾರ್ತಾ ತಮ್ಮಾ ಯಾವುದು ಜಾಹೀರಾತs? ನಮ್ ತಿಪ್ಪಾರಳ್ಳಿ ದೂರ ಅಂದ್ರು ಸುಮ್ನೇ ಕೈಲಾಸಮ್ಮೂ ಹತ್ರs ತಂತು ತಿಪ್ಪಾರಳ್ಳಿ ಲೊಟ್ಟೆ-ಲೊಸಕು ಇಸಮ್ಮು

"ಇಲ್ಲದಿದ್ದರೆ ನಾನು ಬರುವುದಿಲ್ಲ" ಅಥವಾ ಸಾಹಿತಿಯ ಕರಾರು

ಇಮೇಜ್
ಸಿ ಪಿ ರವಿಕುಮಾರ್ ಒಪ್ಪದಿದ್ದರೆ ನೀನು ನನ್ನೈಡಿಯಾಲಜಿಯ ನಿಮ್ಮ ಸಮ್ಮೇಳನಕ್ಕೆ ಬರುವುದಿಲ್ಲ ಇರುವುದೆಲ್ಲೆಡೆ ಎಂದು ಆಕ್ಸಿಜನ್ ಜೊತೆಜೊತೆಗೆ ಅಸಹನೆ ಎಂಬೊಂದು ಹೊಸ ಅನಿಲವೆಂದು ನಾನು ಹೇಳುವ ಮಾತು ಒಪ್ಪದಿದ್ದರೆ ನೀನು ಟೂ! ನಿನ್ನ ಜೊತೆ ಆಟಕ್ಕೆ ಬರುವುದಿಲ್ಲ ಕಪ್ಪು ತೋರಣ ಕಟ್ಟಿ, ಕಪ್ಪು ಕಾಫಿಯ ಕೊಟ್ಟು ಕಪ್ಪು ಪೇಪರ್ ಮೇಲೆ ಮಾತ್ರ ಕರೆಯೋಲೆ, ಎಲ್ಲರೂ ಹೊದ್ದು ಬರಬೇಕು ಕರಿಶಾಲು, ಇಲ್ಲದಿದ್ದರೆ ನಾನು ಬರುವುದಿಲ್ಲ ಬಂದವರ ಮುಖವೆಲ್ಲ ಊದಿಕೊಂಡಿರಬೇಕು ನಗೆ ಯಾಕೆ ಮಂದಸ್ಮಿತವೂ ಇರಕೂಡದು ಮರಳಿಸಬೇಕು ಒಬ್ಬರಾದರೂ ಪದ್ಮಪ್ರಶಸ್ತಿ, ಇಲ್ಲದಿದ್ದರೆ ನಾನು ಬರುವುದಿಲ್ಲ ಕಾರ್ಯಕ್ರಮದ ಮುಂಚೆ ದೀಪ ಆರಿಸಬೇಕು, ಎಲ್ಲರೂ ಮೌನ ಆಚರಿಸಬೇಕು, ಮಲ್ಲಿಗೆಯ ಬದಲು ರಕ್ತ ಕಣಿಗಲೆಯೇ ಇರಬೇಕು, ಇಲ್ಲದಿದ್ದರೆ ನಾನು ಬರುವುದಿಲ್ಲ ಮುಖ್ಯಭಾಷಣದಲ್ಲಿ ಆಸ್ಫೋಟವಿರಬೇಕು, ಚಾರಿತ್ರ್ಯವಧೆಯಾಗಬೇಕು ರಾಮನಿಗೆ, ಗೋಮಾಂಸ ಇರಲೇ ಬೇಕು ಭೋಜನದಲ್ಲಿ ಇಲ್ಲದಿದ್ದರೆ ನಾನು ಬರುವುದಿಲ್ಲ ಮೂಢನಂಬಿಕೆ ವಿರುದ್ಧ ಗಾಢನಂಬಿಕೆಯುಳ್ಳ ಜನರನ್ನೇ ಪ್ಯಾನೆಲ್ ಗೆ ಕರೆಯಬೇಕು, ಮೀಡಿಯಾದಲ್ಲಿ ಮುರಿವ ಸುದ್ದಿ ಬರಲೇಬೇಕು ಇಲ್ಲದಿದ್ದರೆ ನಾನು ಬರುವುದಿಲ್ಲ

ಹಾದಿ ತಪ್ಪಿದವರು

ಸಿ ಪಿ ರವಿಕುಮಾರ್  ಸಮಾಜದ ಬಿರುಕುಗಳನ್ನು ಮುಚ್ಚಬೇಕಾದ ಸಾಹಿತಿಗಳು ಕೂಡಾ ಇಂದು ಸಮಯಸಾಧಕರಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವುದು ಶೋಚನೀಯ.  ಏನಾದರೂ ಅಸಂಬದ್ಧ ಹೇಳಿಕೆ ಕೊಟ್ಟು ಪ್ರಚಾರ ಗಿಟ್ಟಿಸುವುದು ಈನಡುವೆ ನಾವು ಕಾಣುತ್ತಿರುವ ಟ್ರೆಂಡ್. ಪ್ರಸ್ತುತ ಕವಿತೆ ಇಂಥವರನ್ನು ಕುರಿತದ್ದು.  ದೀಪಾವಳಿಯ ಹಬ್ಬಕ್ಕೆ ಬೆಳಗಬೇಕಾದವರು ಜ್ಞಾನದ ಹಣತೆ ಯಾಕೆ ಅಗೆದು ತೆಗೆಯುತ್ತಿದ್ದಾರೆ ಅಂಧಕಾರ? ಯಾಕಿವರಿಗೆ ಅದಮ್ಯವಾಗಿದೆ ಬಾಂಬ್ ಸಿಡಿಸುವ ಆಸೆ? ಲೆಕ್ಕಿಸದೆ ಜನಜೀವನಕ್ಕೆ ಸಂಚಕಾರ - ಭೂತವನ್ನು ಬಡಿದೆಚ್ಚರಿಸಿ ಕೂಗುತ್ತಾರೆ ಕೈಯಲ್ಲಿ ಡಮರುಗ ಹಿಡಿದು ಬಡಿಯುತ್ತಾ ಡಮಡಮ - ಕೇಳುವವರಿದ್ದಾರೆ ಇವರ ಒಡಕುದನಿ ಹಾಡನ್ನು ಎನ್ನುವುದೇ ಇವರಿಗೆ ಸಂತೋಷ-ಚರಮ ಇಂಥವರಿಗೇ ಸಿಕ್ಕುತ್ತದೆ ಇಂದು ಮನ್ನಣೆ ಪುರಸ್ಕಾರ ದೊಡ್ಡಕ್ಷರದ ವರದಿ ಮೊದಲ ಪುಟದಲ್ಲಿ ಇವರ ಕೀರ್ತಿದಾಹಕ್ಕೆ ಎಷ್ಟೊಂದು ಬಲಿದಾನ ಇವರು ಬಾಯ್ತೆರೆಯುತ್ತಾರೆ ಕೆಟ್ಟ ಹಟದಲ್ಲಿ ಕಾರುತ್ತಾರೆ ನಂಜು ಬಿಟ್ಟಾಗಲೆಲ್ಲಾ ಬಾಯಿ ಇವರ ಲೇಖನಿಯಲ್ಲಿ ತುಂಬಿಹುದು ರಕ್ತಶಾಯಿ

ದೀಪಾವಳಿ ಮೈನಸ್ ಪಟಾಕಿ

ಇಮೇಜ್
"ಪಟಾಕಿ ಇಲ್ಲದೆ ದೀಪಾವಳಿ ಸಾಧ್ಯವೇ ಇಲ್ಲ," ಎಂದು ಸ್ನೇಹಿತರು ವಾದಿಸಿದರು. "ನಮ್ಮ ಸಂಪ್ರದಾಯಗಳನ್ನು ನಾವು ಯಾಕೆ ಬಿಡಬೇಕು? ಮಾಲಿನ್ಯ ಉಂಟಾಗುತ್ತದೆ ಎನ್ನುವ ಹೆದರಿಕೆ ಇದ್ದರೆ ನಾವು ಮೋಟಾರ್ ಕಾರ್ ಯಾಕೆ ಓಡಿಸಬೇಕು?" ನನ್ನ ಸ್ನೇಹಿತರು ನಾನು ಬಲ್ಲ ಮೇಧಾವಿಗಳಲ್ಲಿ ಒಬ್ಬರು.  ಅವರು ಫೇಸ್ ಬುಕ್ ಮೇಲೆ ನನ್ನ ಬರಹಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದರು. ಪಟಾಕಿಯಿಂದ ಏನೇನು ಅನರ್ಥಗಳಾಗುತ್ತವೆ ಎನ್ನುವುದನ್ನು ನಾನು ಪಟ್ಟಿ ಮಾಡಿದ್ದೆ - ಬಾಲಕಾರ್ಮಿಕರನ್ನು ಪಟಾಕಿ ಮಾಡಲು ಬಳಸಲಾಗುತ್ತದೆ ಎನ್ನುವುದು ಈಗ ಸರ್ವವಿದಿತ  ಈಗಾಗಲೇ ವಾಯುಮಾಲಿನ್ಯದಿಂದ ದುಸ್ತರವಾದ ನಗರಜೀವನ - ಆಸ್ತಮಾ ಮೊದಲಾದ ಕಾಯಿಲೆಗಳಿಂದ ನರಳುವ ಜನ  ಪಟಾಕಿ ಸುಡಲು ಹೋಗಿ ಅಪಘಾತಗಳಿಗೆ ತುತ್ತಾದ ಜನ  ಪಟಾಕಿ ಸದ್ದಿಗೆ ಶ್ರವಣಶಕ್ತಿ  ಕಳೆದುಕೊಂಡವರು  ಪಟಾಕಿ ಸದ್ದಿಗೆ ಕಂಗಾಲಾಗುವ ಎಳೆಯ ಮಕ್ಕಳು, ಸಾಕುಪ್ರಾಣಿಗಳು  ಇವೆಲ್ಲಾ ಹಾಗಿರಲಿ, ನಮ್ಮ ಸಂಪ್ರದಾಯ ನಮಗೆ ಮುಖ್ಯ ಎನ್ನುವವರಿಗೆ ಕೆಲವು ಪ್ರಶ್ನೆಗಳ ಮೂಲಕವೇ ಉತ್ತರಿಸಬೇಕಾಗುತ್ತಿದೆ.  ಪಟಾಕಿ ದೀಪಾವಳಿಯ ಸಂಪ್ರದಾಯ ಎಂದು ಎಲ್ಲಿ ಹೇಳಿದೆ? ದೀಪಾವಳಿ ಎನ್ನುವ ಶಬ್ದದಲ್ಲಿ ದೀಪಗಳ ಸಾಲಿದೆ. ರಾಮನು ಅಯೋಧ್ಯೆಗೆ ಮರಳಿದಾಗ ಅಮಾವಾಸ್ಯೆಯ ದಿನವಾದ್ದರಿಂದ ನಗರದ ಜನ ದೀಪಗಳ ಸಾಲನ್ನು ಹಚ್ಚಿಟ್ಟು ರಾಮನಿಗೆ ಸ್ವಾಗತ ಕೋರಿದರು ಎನ್ನುವ ಕಥೆ ಇದೆ.  ಅಮಾವಾಸ್ಯ...