ಪೋಸ್ಟ್‌ಗಳು

ಮಾರ್ಚ್, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾಡುವರಾರು ನದೀತಟದಲ್ಲಿ?

ಇಮೇಜ್
ಮೂಲ ಹಿಂದಿ ಕವಿತೆ - ಹರಿವಂಶರಾಯ್ ಬಚ್ಚನ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಹಾಡುವರಾರು ನದೀತಟದಲ್ಲಿ? ಭಂಗಗೊಳಿಸುತ್ತ ನಿಶೆಯ ನೀರವ  ಮೇಲೇಳುವ ಈ ಗ್ರಾಮೀಣ ಸ್ವರ  ಹಾಯುತ ಹುರುಳಿಯ ಹೊಲಗಳ ಮೇಲೆ  ಎಬ್ಬಿಸುತಿದೆ ಕಾವೇರಿಯೊಳು ಅಲೆ! ಹಾಡುವರಾರು ನದೀತಟದಲ್ಲಿ? ಬಂಧುಗಳಿರಬಹುದಿಲ್ಲೇ ಸನಿಹದಲಿ, ಧ್ಯಾನಿಸುತ್ತ ಮೌನದಿ ಮನದಲ್ಲಿ, ವ್ಯರ್ಥವಲ್ಲ ತಮ್ಮಯ ಆಲಾಪ,  ಶ್ರವಣಸುಖವ ತರುತಿದೆ ಜನಪದಕೆ! ಹಾಡುವರಾರು ನದೀತಟದಲ್ಲಿ? ವಿಚಲಿತವಾಗಿದೆ ಇಂದೇತಕೆ ಮನ  ಕೇಳುತ ಈ ಏಕಾಂತದ ಗಾಯನ? ಇದನೇ ಕೇಳುತ ನಾ ಮುಂಜರಿವೆ! ಇದನೇ ಹಾಡುವೆ, ಇದನೇ ಬರೆವೆ!  ಹಾಡುವರಾರು ನದೀತಟದಲ್ಲಿ?

ಕೊರೋನಾ ಕೊರೋನಾ - ಭಾಗ ೨ (ಚುಟುಕಗಳು)

ಇಮೇಜ್
ಕನಕಾ  ********* ಪ್ರತಿ ರಾಮನವಮಿಗೆ ಪಾನಕ ತಪ್ಪದೆ ಹಂಚುವಳು ಮಿಸ್ ಕನಕಾ ಈ ಸಲ ಯುಗಾದಿಗೇ ಏನು ಸ್ಫೂರ್ತಿ ಇವಳಿಗೆ ಹಂಚುತಿಹಳು ನೆಟ್ ಮೇಲೆ ಕೊರೋನಾ ಪ್ಯಾನಿಕ ಶಾರ್ವರಿ  ******* ಓ ಸಂವತ್ಸರ ಶಾರ್ವರಿ! ಎಷ್ಟಂತಾ ಮಾಡೋದು ವರಿ? ಕೊರೊನಾ ಕೋವಿಡ್ ಮೂರನೇ ಹಂತ ಮುಗಿಯುವ ಮುನ್ನವೇ ಬಂತೇ ಹಂತಾ ತಿಳಿಸವರಿಗೆ, ವೀ ಆರ್ ಇನ್ ನೋ ಹರಿ! ಬೋರಸ್  ********** ಬಂತು  ಕರೋನಾ ವೈರಸ್ ಮನೇಲಿರಿ ಅಂತ ಕೋರಸ್ ಲಾಕ್ ಡೌನ್ ಅಂತೆ ಕ್ಯಾನ್ಸಲ್ ಸಂತೆ ನ್ಯೂಸ್ ಚಾನೆಲ್ಸ್ ಡೋಂಟ್ ಬೋರಸ್ ಇಳಿಮುಖ  *********** ಎಲ್ಲದರಲ್ಲೂ ಈಗ ಇಳಿಮುಖ ಎಂದು ಬೇಸರಿಸಿದರು ಶ್ರೀಮತಿ ರೇಖಾ ಹಾಕೋದು ಕೇಳಿದ್ದೆ ಲಾಕಪ್ನಲ್ಲಿ ಕೈದಿಗಳ್ನ ಅದಕ್ಕೂ ಸಂಚಕಾರ ತಂತು ಕರೋನಾ ಲಾಕಪ್ ಹೋಗಿ ಲಾಕ್ ಡೌನ್ ಬರಬೇಕಾ? ಮಾರ್ಚ್ ೨೨ - ಸಂಜೆ  *********************** ಸಂಜೆ ಕೇಳಿದೆ  ಇವಳನ್ನು "ಏನು, ತಿಂಡಿ ಮಾಡಿದ್ಯಾ?" ಪಾತ್ರೆ ಕುಕ್ಕುವ ಸದ್ದು! "ಏನೂ ಆಗಲಿಲ್ಲ ತಾನೇ ಸದ್ಯ?" ಮುಂದುವರೆಯಿತು ತಾಲಿ, ಜೊತೆಗೆ ಢಣಢಣಾ ಸದ್ದು ಅಬ್ಬಾ ಏನೋ ವಿಶೇಷವೇ ಇರಬಹುದೆಂದು ಖುದ್ದು ಹೋಗಿ ನೋಡಿದರೆ ಥಾಲೀ ಪೀಟ್ ಎಂಬ ರುಚಿಕರ ಖಾದ್ಯ! ಸಂಕಷ್ಟಿ  ********* ಹೊರಗೆ ಹೋಗಲು ಸಂಕಷ್ಟ ಎದುರಾಗಿ ಮನೆಯಲ್ಲೇ ಗಣಪತಿಯ ಫೋಟೋಗೆ ಎರಗಿ ಅದೂ ಇಲ್ಲದಿದ್ದರೂ ಚಿಂತೆ ಇಲ್ಲ ಎಲ್ಲದಕ್ಕೂ ವಾಟ್ಸಾಪ್ ಇದೆಯಲ್ಲ ಭಜೇಹಂ ಶ್ರೀ ಗಣಪತಿಂ ವಾಟ್ಸಾಪಿ!

ಯಾವೊಬ್ಬ ಮಾನವನೂ ದ್ವೀಪವಲ್ಲ

ಇಮೇಜ್
ಮೂಲ ಇಂಗ್ಲಿಷ್ ಕವಿತೆ - ಜಾನ್ ಡನ್  ಅನುವಾದ - ಸಿ. ಪಿ. ರವಿಕುಮಾರ್  ಯಾವೊಬ್ಬ ಮಾನವನೂ ದ್ವೀಪವಲ್ಲ  ಯಾರೊಬ್ಬನೂ ತಾನೇ ಪೂರ್ಣನಾಗ.    ಪ್ರತಿಯೊಂದೂ ಭೂಖಂಡದ ಅಂಶ, ಮೂಲವೊಂದರ ಪುಟ್ಟ ಭಾಗ.  ಕಿನಾರೆಯಿಂದ ಒಂದೇ ಒಂದು ಭೂಮಿಯ ಚೂರು  ಕೊಚ್ಚಿ  ಕೊಂಡೊಯ್ದರೆ    ಕಡಲು   ಉಂಟಾಗುವುದು ಅಷ್ಟೇ  ಚ್ಯುತಿ ಮೂಲಭೂಖಂಡಕ್ಕೆ  ಕಳೆದುಕೊಂಡಂತೆ ಇಡೀ ಭೂಶಿರವನ್ನು ಒಡಲು; ಕಳೆದು ಹೋದರೆ ಹೇಗಿದ್ದೀತು   ನಿನ್ನ ಗೆಳೆಯನಿಗೋ ನಿನಗೋ  ಸೇರಿದ ಜಹಗೀರು.  ಪ್ರತಿಯೊಬ್ಬ ಮಾನವನ ಸಾವೂ  ಕುಂದಿಸುತ್ತದೆ ನನ್ನನ್ನು  ಏಕೆಂದರೆ  ನಾನು ಮಾನವತೆಯ ಅಂಗ.   ಪ್ರಶ್ನಿಸದಿರು  ಯಾರಿಗಾಗಿ ಬಾಜಿಸುತ್ತಿದೆ ಗಂಟೆ  ಎಂದು!  ಬಾಜಿಸುತ್ತಿದೆ  ನಿನಗಾಗಿ   ಮೃದಂಗ. 

ಜೀವನಕ್ಕೇ ವಿಜಯ

ಇಮೇಜ್
ಮೂಲ ಹಿಂದಿ ಕವಿತೆ - ಮೈಥಿಲೀಶರಣ ಗುಪ್ತ  ಅನುವಾದ - ಸಿ. ಪಿ. ರವಿಕುಮಾರ್  ವ್ಯರ್ಥ ಮೃತ್ಯುವಿನ ಭಯ ಜೀವನಕ್ಕೇ ವಿಜಯ ಬೇರನು ಸುದೃಢಗೊಳಿಸುತ ಜೀವ  ನಿತ್ಯ ಗಳಿಸುತಿದೆ ಹೊಸವೈಭವವ ಮರುವುಟ್ಟು ಪಡೆಯುವನು  ಮಗುವಲ್ಲಿ ಮಾನವ  ಈ ಆತ್ಮವು ಅಕ್ಷಯ  ಜೀವನಕ್ಕೇ ವಿಜಯ   ಜಾಗೃತಗೊಳುವುದು ಜೀವನ ಕಣ್ಬಿಚ್ಚಿ   ಮರಣವೋ!  ನಿಶ್ಚೇಷ್ಟಿತ,   ಕಣ್ಮುಚ್ಚಿ!  ಒಂದು ಬೀಜ ನೂರಾಗುವ ಸೃಷ್ಟಿ  ಕರ್ತನು ತುಂಬಾ ಸದಯ! ಜೀವನಕ್ಕೇ ವಿಜಯ ಜೀವನಕ್ಕಾಗಿ ಸಾಯಲೂ ನಾ ಸಿದ್ಧ! ಎಲ್ಲಡಗಿಸಲೀ ಧನವನು ಭದ್ರ?  ತಿಳಿಯದೆ ಬಳಸಿದರಿದರೌಚಿತ್ಯ  ಮಾತ್ರ ಖಂಡಿತ ಪ್ರಳಯ!  ಜೀವನಕ್ಕೇ ವಿಜಯ

ಬರುತಿದೆ ರವಿಯ ಸವಾರಿ!

ಇಮೇಜ್
ಮೂಲ - ಹರಿವಂಶರಾಯ್ ಬಚ್ಚನ್ ಅನುವಾದ - ಸಿ. ಪಿ. ರವಿಕುಮಾರ್ ಬರುತಿದೆ ರವಿಯ ಸವಾರಿ! ನವಕಿರಣದ ಹೊಳೆವ ರಥ ಬಿರಿವ ಮುಗುಳ ಕುಸುಮಪಥ ಸ್ವಾಗತಿಸುವ ಮೇಘಸೈನ್ಯ ಸ್ವರ್ಣವಸ್ತ್ರಧಾರಿ! ಬರುತಿದೆ ರವಿಯ ಸವಾರಿ! ವಿಹಗ, ಭೃಂಗ, ಹೆಜ್ಜೇನು, ಹಾಡುತ್ತಿವೆ ಕೀರ್ತಿಯನು ತ್ಯಜಿಸಿ ರಣವ ತಾರಾಬಲ ಆಗುತಿದೆ ಪರಾರಿ! ಬರುತಿದೆ ರವಿಯ ಸವಾರಿ! ಕುಣಿದು ಜಯವ ಕೂಗಲು ಮನ ಶಂಕಿಸುವುದು ಏಕೆ? ಹೀನ- ನಂತೆ ನಿಂತ ನಿಶೆಯ ನೋಡಿ, ಭಿಕ್ಷುವೇಷಧಾರಿ! ಬರುತಿದೆ ರವಿಯ ಸವಾರಿ!

ಕರೋನಾ ಕರೋನಾ (ಚುಟುಕಗಳು)

ಇಮೇಜ್
 ಮಜಾ ಕರೋನಾ  ***************** ನಾಳೆಯಿಂದ ಒಂದು ವಾರ ಜರ್ಬೇ ಜರ್ಬು ರಜಾ ಬಂತೆಂದು ಕುಣಿದಾಡಿದನು ಸುಬ್ಬು ಎದುರಾಯ್ತು ಸುಬ್ಬುವಿಗೆ ಮರುದಿವಸ ಪೇಚು ಬಿಟ್ಟುಬಿಟ್ಟಂತಾಯ್ತು ಕೈಗೇ ಬಂದಿದ್ದ ಕ್ಯಾಚು ಬಂದಾಗಿದ್ದವು ಎಲ್ಲಾ ಮಾಲು ಥೇಟರು ಪಬ್ಬು ಥಿಯರಿ ********  ಕೊರೊನಾ ಹೇಗೆ ಬಂತು ರೀ ಎಲ್ಲರಿಗೂ ಇದೆ ಅವರವರ ಥಿಯರಿ ಒಬ್ಬರಿಗೆ ಕಾಣುತ್ತದೆ ಚೈನಾದ ಬಾವಲಿ ಇನ್ನೊಬ್ಬರಿಗೆ ಬಯಲಾಜಿಕಲ್ ವೆಪನರಿ ಮೋದಿ ಅಪ್ಪುಗೆಯಿಂದ ಎಂದು ಕೆಲವರಿಗೆ ಭಯ ರೀ ಟೆರರಿಸ್ಟ್  ********* ಡೋಂಟ್ ಪ್ಯಾನಿಕ್ ಎಂಬ ದೊಡ್ಡ ತಲೆಬರಹ ಕೆಳಗೇಕಿದೆ ಕೊರೊನಾಸುರನ ಚಿತ್ರ ಉಹಹಹಾ? ಕೈತೊಳೆಯಬೇಕೆಂಬ ಸರಳ ಸಂದೇಶ ಎಲ್ಲೋ ಮರೆಯಾಗಿದೆ ಈ ಮುಗ್ಧ ಉದ್ದೇಶ ಹೆದರಿಸುತ್ತಾರೇಕೆ ಜನರು ಈ ತರಹ! ಸೀನಿ  ***** ಸೀನಿ, ಸೀನು, ಸೀನಣ್ಣ ಎಲ್ಲರೂ ಬದಲಾಯಿಸಿಕೊಳ್ಳಿ ಬೇಗನೇ ಹೆಸರು ಯಾರಾದರೂ ಬಂಗಾಳಿ ಪ್ರಭೃತಿ "ಸೀನಿ ದಾ" ಅಂದರೇನು ಗತಿ ಜನರು ಎಷ್ಟು ಹೊತ್ತು ಹಿಡಿದಾರು ಉಸಿರು? ಹೋಮ  ********* ಎಲ್ಲೆಲ್ಲೂ ಕೇಳುತ್ತಿದೆ ಕರೋನಾ ಕರೋನಾ  ಪುರೋಹಿತರನ್ನು ಕರೆದು ಹೋಮ ಮಾಡಿಸೋಣ  ತಾಳ್ಮೆಯಿಂದ ಕೇಳಿದ ಮೇಲೆ ಕಾಲರ್ ಟ್ಯೂನು  "ಸ್ವಾಮೀ ನಿಮ್ಮ ಹಾಗೆಯೇ ನಾನೂ ಕ್ವಾರಂಟೀನು  ಬೇಕಾದರೆ ಮಾಡೋಣ ಹೋಮ ವರ್ಕ್ ಫ್ರಮ್ ಹೋಮ"  ಸರಸ  ****** ಟಿವಿಯಲ್ಲಿ ನೋಡಿನೋಡಿ  ಅತ್ತೆ ಸೊಸೆ Vರಸ  ಬೋರಾಗಿತ್ತು ಎಂದಳು ಪಕ

ಒಂದು ಡಜನ್ ಲಿಮರಿಕ್ (ಹಾಸ್ಯ)

ಇಮೇಜ್
ಖೇಚರ  ~~~~~  ಆಕಾಶದಲ್ಲಿ ಚಲಿಸುವುದೇ "ಖೇಚರ" ಅರ್ಥಾತ್ ಹಕ್ಕಿ ಎಂದ ಕನ್ನಡ ಟೀಚರ ಮಾತು ಕೇಳಿ ಯೋಚಿಸಿದ ಭಾನು ವಾಟ್ ಅಬೌಟ್ ಪ್ಲೇನು ವಾಟ್ ಅಬೌಟ್ ಡ್ರೋನು ಹೀಗೆ ಕನ್ಫ್ಯೂಸ್ ಆಗೋದೇ ಅವನ ನೇಚರ ಮಾರೀಚ  ~~~~~ ~~  ಬ್ರದರ್ಸ್ ಮಾರೀಚ ಮತ್ತು ಸುಬಾಹು ರಾಮನ ಕೈಯಲ್ಲಿ ಅಪ್ಪಿದರು ಸಾವು ಇನ್ನಿಬ್ಬರು ಇದ್ದರಲ್ಲ ಏನಾದರೋ ಅವರು ಗಣಿತದ ಮೇಷ್ಟ್ರು ಹೇಳ್ತಿದ್ರು ಹೆಸರು ಬ್ರದರ್ಸ್ ಸಮಬಾಹು ಮತ್ತು ವಿಷಮಬಾಹು ದೀರ್ಘ ~~~~~  ಧೂಮ್ರಪಾನದಿಂದ ಆರೋಗ್ಯಹಾನಿ ಎಂದು ನುಡಿದನು ಒಬ್ಬ ದೊಡ್ಡ ವಿಜ್ಞಾನಿ "ಇನ್ನುಮೇಲೆ ಎಲ್ಲರೂ ಸಿಗರೇಟ್ ಬೀಡಿ" ದೊಡ್ಡಕ್ಷರದಲ್ಲಿ ಟೈಪಿಂಗ್ ದೋಷ ನೋಡಿ ಸುದೀರ್ಘವಾಗಿ ಎಳೆದುಕೊಂಡರು ಶ್ವಾಸ ನೆರೆದಿದ್ದ ಮೇಕೆ  ~~~~  ಮೇ ಮೇ ಅಂತಿತ್ತು ಕನ್ನಡ ಮೇಕೆ ಪ್ರಯತ್ನಿಸಿದೆ ಇಂಗ್ಲಿಷ್ ಕಲಿಸೋಕೆ Me Me ಅಂತ ಬರೆದೆ ಪಕ್ ಪಕ್ಕ ನಗೋಕೆ ಶುರು ಮಾಡ್ತು ಮೇಕೆ ಪಕ್ ಪಕಾ ಚೆನ್ನಾಗಿದೆ ನಿನ್ನ MeMe ಅಂತ ಅನ್ಬೇಕಾ, ಪಕ್ಕಾ! ದೇವಕಣ  ~~~~~~  ದೇವಕಣ ಕಂಡು ಹಿಡಿದ ಕೀರ್ತಿ ಕುವೆಂಪು ಅವರಿಗೇ ಸಲ್ಲಬೇಕಿತ್ರೀ ಓದಿದರೆ ಅವರ ಕವಿತೆ ಹೇಳಿ ಸಿಕ್ಕದೇ ಇದ್ದೀತೇ ಮಂತ್ರಕಣಾ ಶಕ್ತಿಕಣಾ ದೇವಕಣಾ ಆಲ್ ತ್ರೀ ಜಲಚರ  ~~~~~~~  "ಜಲದಲ್ಲಿ ಚಲಿಸಿದ್ದು ಜಲಚರ" ಎಂದು ವಿವರಿಸುವಾಗ ಕನ್ನಡ ಟೀಚರ ಭಾನುವಿನ ಕಣ್ಮುಂದೆ ಮೂಡಿತೊಂದು ಚಿತ್ರ ಹೊಟೆಲಿನಲ್ಲಿ ಅಂದು ತ

ಕಾವ್ಯದಲ್ಲಿ ಮಹಿಳೆಯ ದನಿ

ಇಮೇಜ್
ಮ ಹಿಳಾದಿವಸದಂದು ಹಿಂದಿನ ಕೆಲವು ಬ್ಲಾಗ್ ಬರಹಗಳನ್ನು ಒಟ್ಟಿಗೆ ಕ್ರೋಢೀಕರಿಸಿ ಕೊಡುತ್ತಿದ್ದೇನೆ.  ಇವೆಲ್ಲವೂ ವಿವಿಧ ಕವಯಿತ್ರಿಯರ ರಚನೆಗಳ ಅನುವಾದಗಳು.  ಇವರು ವಿವಿಧ ದೇಶಗಳ ಕವಯಿತ್ರಿಯರು. ಇವರ ದೃಷ್ಟಿಕೋಣಗಳು ವಿಭಿನ್ನ.  ನಿಮಗೆ ಇವುಗಳಲ್ಲಿ ಬೇರೆ ಹೊಳಹುಗಳು ಕಾಣಬಹುದು.  ಅವಿವಾಹಿತೆಯರು - ಅನಾಮಿಕಾ ಅವರ ಒಂದು ಹಿಂದಿ ಕವಿತೆಯ ಅನುವಾದ  ಅಮ್ಮಾ ನಾನು ಬಚಾವಾದೆ - ಜೆಹ್ರಾ ನಿಗಾಹ್ ಅವರ ಒಂದು ಉರ್ದು ಕವಿತೆಯ ಅನುವಾದ  ಕನ್ನಡಿ - ಸಿಲ್ವಿಯಾ ಪ್ಲಾತ್ ಅವರ ಇಂಗ್ಲಿಷ್ ಕವಿತೆಯ ಅನುವಾದ  ಒಬ್ಬಂಟಿ - ಮಾಯಾ ಆಂಜೆಲೋ ಅವರ ಇಂಗ್ಲಿಷ್ ಕವಿತೆಯ ಅನುವಾದ  ಅವಳ ಹಾಡು - ವರ್ಡ್ಸ್ ವರ್ತ್ ಅವರ ಇಂಗ್ಲಿಷ್ ಕವಿತೆಯ ಅನುವಾದ  ಉನ್ಮಾದ - ಟಿ.ಎಸ್. ಈಲಿಯಟ್ ಅವರ ಕವಿತೆಯ ಅನುವಾದ  ಸ್ತ್ರೀಯರು - ಅನಾಮಿಕಾ ಅವರ ಹಿಂದಿ ಕವಿತೆಯ ಅನುವಾದ  ಹೆಣ್ಣು ಕೆಲಸ - ಮಾಯಾ ಆಂಜೆಲೋ ಅವರ ಇಂಗ್ಲಿಷ್ ಕವಿತೆಯ ಅನುವಾದ   ಕಟ್ಟಿ ಕಾಲಿಗೆ ಗೆಜ್ಜೆ - ಮೀರಾ ಬಾಯಿಯ ರಚನೆಯ ಅನುವಾದ  ಒಂದು ದುಃಖದಂತ(ಹ) ಕಥೆ - ಡೊರೊತಿ ಪಾರ್ಕರ್ ಅವರ ಕವಿತೆಯ ಅನುವಾದ  ಹೀಗೇ ಮೆಲುಕು ಹಾಕುತ್ತಿದ್ದೆ ಥಿಯೋಕ್ರೆಟಿಸ್ ಹಾಡಿದ ಪಂಕ್ತಿ  ನಿನಗಾಗಿ ತಂದಿರುವೆ ಈ ವೈಶಾಖ - ಕುಟ್ಟಿ ರೇವತಿ ಅವರ ಒಂದು ಕವಿತೆಯ ಅನುವಾದ  ಕಾಬುಲ್   - ಶಕೀಲಾ ಅಜಿಜಾದಾ ಅವರ ಕವಿತೆಯ ಅನುವಾದ  ಬೆಳಕಿನ ಕಾವಲುಗಾರ್ತಿ -

ಹೆದರಬೇಕೇ ಕೊರೊನಾವೈರಸಕ್ಕೆ (ಗಜಲ್)

ಸಿ.ಪಿ. ರವಿಕುಮಾರ್ ಯೋಚಿಸುತ್ತೇನೆ, ಹೆದರಬೇಕೇ  ಕೊರೊನಾ ವೈರಸಕ್ಕೆ ಹೆದರಬೇಕಾಗಿರುವುದು ಕಾರಣವಿಲ್ಲದ ವಿರಸಕ್ಕೆ ಬಂದೀತು ಇಂದಲ್ಲ ನಾಳೆ ಒಂದು ಆಂಟಿಬಯಾಟಿಕ್ ಯಾವ ಮದ್ದಿದೆ ಹೇಳಿ ಕಾರಣವಿಲ್ಲದ ವಿರಸಕ್ಕೆ ಯಾರು ಹರಡಿ ಹಂಚಬೇಕೋ ಪ್ರೀತಿಯ ರಸವನ್ನು ಧರ್ಮಗುರುಗಳು ಬೆರೆಸುತ್ತಾರೆ ಆಸಿಡ್ ರಸಕ್ಕೆ ಹೆದರಿಸುತ್ತೀ ನೀನು ಹಣದ ಉಬ್ಬರ ನಿರುದ್ಯೋಗಗಳ ಬಗ್ಗೆ ಒಳಗೆ ಟೊಳ್ಳಾದ ಬಳ್ಳಿಯೇ ಬೀಳುವುದು ಗಾಳಿಯ ರಭಸಕ್ಕೆ ಹೆದರುತ್ತೀ ನೀನು ಭೂತಪಿಶಾಚಿಗಳಿಗೆ, ದುಷ್ಟಗ್ರಹಗಳಿಗೆ ಒಪ್ಪಿಸಿಕೊಳ್ಳುವೆ ನಿನ್ನನ್ನೇ ಒಡೆದು ಆಳುವ ಅಂಕುಶಕ್ಕೆ ಎಷ್ಟು ಸುಲಭ ದ್ವೇಷಿಸುವುದು ನಿನ್ನವರನ್ನು ನೀನು ಹೆದರುತ್ತೇನೆ ನಾನು ಕಾರಣವಿಲ್ಲದ ಈ ದ್ವೇಷಕ್ಕೆ #ಗಜಲ್