ಪೋಸ್ಟ್‌ಗಳು

ಜನವರಿ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಿನ್ನದ ಕಟ್ಟು - ಸಣ್ಣಕಥೆ - ಭಾಗ - 1

ಇಮೇಜ್
ಮೂಲ ಕಥೆ: ಆರ್. ಕೆ. ಲಕ್ಷ್ಮಣ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಭಾಗ - 1 “ ಮಾಡರ್ನ್ ಫ್ರೇಮ್ ವರ್ಕ್ಸ್” ಎಂಬ ಬರಹವುಳ್ಳ ಬೋರ್ಡು ನಿಜಕ್ಕೂ ಒಂದು ದೊಡ್ಡ ಮರದ ಪೆಟ್ಟಿಗೆ ; ಅದರ ಮೇಲೆ ಹೆಸರನ್ನು ಬರೆದು ಔಷಧಾಲಯ ಮತ್ತು ರೇಡಿಯೋ ರಿಪೇರಿ ಅಂಗಡಿಗಳ ನಡುವಿನ ಸಣ್ಣ ಜಾಗದ ಮುಂದೆ ಲಡಕಲಡಕ ಅಲ್ಲಾಡುತ್ತಿದ್ದ ಕಾಲುಗಳ ಮೇಲೆ ನಿಲ್ಲಿಸಲಾಗಿತ್ತು. ಅಂಗಡಿಯ ಮಾಲೀಕ ದತ್ತ ಈ ಅಂಗಡಿಯಲ್ಲಿ ಹೇಳಿ ಮಾಡಿಸಿದ ಬಿಡಿ ಭಾಗದ ಹಾಗೆ ಕೂತಿದ್ದ. ಅವನ ಹೊಟ್ಟೆ ಮುಂದೆ ಬಂದಿತ್ತು. ಕಣ್ಣುಗಳ ಮುಂದೆ ಬೆಳ್ಳಿಯ ಕಟ್ಟಿನ ಕನ್ನಡಕ ಕೂತಿತ್ತು. ಮೈಕಾಂತಿಯೋ ಒಳ್ಳೆ ಚೆನ್ನಾಗಿ ಎಣ್ಣೆ ಹಾಕಿ ಪಾಲಿಷ್ ಮಾಡಿದ ಮರದ ಹಾಗಿತ್ತು. ಅವನು ಮೌನಿ. ಕಷ್ಟ ಪಟ್ಟು ದುಡಿಯುವ ವ್ಯಕ್ತಿ. ಗಿರಾಕಿಗಳು ಕೇಳಿದ ಪ್ರಶ್ನೆಗಳಿಗೆ ಚುಟುಕಾದ ಉತ್ತರ ಕೊಡುತ್ತಾನೆ. ತನ್ನ ಮೌನವೃತಕ್ಕೆ ಭಂಗ ಉಂಟುಮಾಡಬಲ್ಲ ಕಾಡುಹರಟೆ ಕೊಚ್ಚುವ ಗೆಳೆಯರನ್ನು ಅವನು ಆದಷ್ಟೂ ದೂರವಿಡುತ್ತಾನೆ.  ಅವನನ್ನು ನೋಡಿದಾಗಲೆಲ್ಲ ಸುತ್ತಲೂ ಕಾರ್ಡ್ ಬೋರ್ಡ್ ಚೂರುಗಳು , ಮರದ ಪಟ್ಟಿಗಳು , ಮೊಳೆಗಳಿದ್ದ ಪೆಟ್ಟಿಗೆ , ಗೋಂದಿನ ಬಾಟಲಿ ,   ಪೈಂಟ್ ಡಬ್ಬಗಳು ಮೊದಲಾದವುಗಳನ್ನು ಸುತ್ತಲೂ ಹರಡಿಕೊಂಡು ಬೆನ್ನು ಬಾಗಿಸಿಕೊಂಡು ಕೂತಿರುತ್ತಾನೆ. ಈ ಅವ್ಯವಸ್ಥೆಯಲ್ಲಿ  ಒಮ್ಮೊಮ್ಮೆ ಅವನ ಮೋಟುದ್ದದ ಪೆನ್ಸಿಲ್ಲೋ ಅಥವಾ ಗಾಜನ್ನು ಕತ್ತರಿಸುವ ಸಾಧನವೋ ಕಳೆದುಹೋಗುತ್ತದೆ . ಆಗ ಮಾತ್ರ ಅವನು ತನ್ನ ತಪಸ್ಸಿನ

ಸ್ಥಳೀಯ ಉತ್ಪನ್ನ ಮತ್ತು ಗ್ರಾಮೀಣ ಬದುಕು ಕುರಿತು ಟೈಲರ್ ಬ್ರೂಲೆ

ಇಮೇಜ್
ಸಿ ಪಿ ರವಿಕುಮಾರ್  ಟೈಲರ್ ಬ್ರೂಲೆ ಎಂಬ ಕೆನಡಾ ದೇಶದ ಬರಹಗಾರ ಫೈನಾನ್ಷಿಯಲ್ ಟೈಮ್ಸ್ ಎಂಬ ಪತ್ರಿಕೆಗೆ ಅಂಕಣಕಾರ. ಆತನ ಇತ್ತೀಚಿನ ಅಂಕಣವನ್ನು ಓದುವ ಅವಕಾಶ ಪ್ರವಾಸದ ಸಮಯದಲ್ಲಿ ಸಿಕ್ಕಿತು. ಅದರಿಂದ ಕೆಲವು ಭಾಗಗಳನ್ನು ಇಲ್ಲಿ ಅನುವಾದಿಸಿ ಕೊಟ್ಟಿದ್ದೇನೆ. ನಿರುದ್ಯೋಗ: ಸ್ವಿಟ್ಜರ್ಲೆಂಡ್ ದೇಶದಲ್ಲಿ ನಿರುದ್ಯೋಗ ಬಹಳ ಕಡಮೆ. ನಿರುದ್ಯೋಗಿಗಳಿಗೆ ಆ ದೇಶದಲ್ಲಿ ಸಿಕ್ಕುವ ಭತ್ಯೆ ಕೂಡಾ ಕಡಿಮೆ. ಈ ಸಮಸ್ಯೆಗಳನ್ನು ಆ ದೇಶದವರು ಸ್ಥಳೀಯ ಮಟ್ಟದಲ್ಲಿ ಪರಿಗಣಿಸಿದ್ದಾರೆ.  ಸ್ಥಳೀಯ ಮಟ್ಟದಲ್ಲಿ ನಮ್ಮ ತೇರನ್ನು ಯಾರು ಎಳೆಯುತ್ತಿದ್ದಾರೆ ಎನ್ನುವುದನ್ನು ಗಮನಿಸುವುದು ಸುಲಭ.  ಡಿಗ್ರಿ ಬೇಕೆ ಬೇಡವೇ? : ಬೆಟ್ಟಗಳ ಮೇಲೆ ಹೈ-ಸ್ಪೀಡ್ ಕೇಬಲ್ ಎಳೆಯಲು ಅಥವಾ ಒಳ್ಳೆಯ ಹೋಟೆಲ್ ಮ್ಯಾನೇಜರ್ ಆಗಲು ಡಿಗ್ರಿಯೇ ಬೇಕು ಎಂದು ಯಾರು ಹೇಳಿದರು?  ಸ್ವಿಟ್ಜರ್ಲೆಂಡ್ ನಲ್ಲಿ ಅಂತೂ ಬೇಕಾಗಿಲ್ಲ. ಅಲ್ಲಿ ತರಬೇತಿಗೆ ಮಹತ್ವ ಕೊಡಲಾಗುತ್ತದೆ. ಇದರಿಂದ ಕೆಲಸ ಚೆನ್ನಾಗಿ ಗೊತ್ತಿರುವ ಕುಶಲಕರ್ಮಿಗಳ ನಿರ್ಮಾಣವಾಗುತ್ತದೆ. ಕೆಲಸಕ್ಕೆ ಬಾರದ ಡಿಗ್ರಿ ಪಡೆದ ಸಾವಿರಾರು ನಿರುದ್ಯೋಗಿಗಳನ್ನು ಸೃಷ್ಟಿಸುವುದಕ್ಕಿಂತ ಇದು ವಾಸಿ.  ಸ್ಥಳೀಯರಿಗೆ ಪ್ರೋತ್ಸಾಹ ನೀಡಿ.  ಸ್ಥಳೀಯವಾಗಿ ಬೆಳೆದದ್ದಕ್ಕೆ, ಸ್ಥಳೀಯವಾಗಿ ತಯಾರಾದದ್ದಕ್ಕೆ ಸ್ವಿಟ್ಜರ್ಲೆಂಡ್ ದೇಶದಲ್ಲಿ ಮಹತ್ವ ಕೊಡಲಾಗುತ್ತದೆ. ಇದರಿಂದ ದೇಶದಲ್ಲಿರುವ ಸಣ್ಣ-ಪುಟ್ಟ ಕೈಗಾರಿಕೆಗಳು/ಉದ್ಯಮಗಳನ್ನು ರಕ್ಷಿಸಬ