ಪೋಸ್ಟ್‌ಗಳು

ಆಗಸ್ಟ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಬ್ಭಾಗ (ಅನುವಾದಿತ ಕವಿತೆ

ಇಮೇಜ್
ಮೂಲ ಕವಿತೆ - ಡಬ್ಲ್ಯೂ ಎಚ್. ಆಡೆನ್ ಕನ್ನಡಕ್ಕೆ - ಸಿ. ಪಿ. ರವಿಕುಮಾರ್  (ಮೂಲ ಕವಿತೆಯನ್ನು ನನ್ನೊಂದಿಗೆ ಹಂಚಿಕೊಂಡ ಶ್ರೀ ಸೀತಾರಾಮ್ ಅವರಿಗೆ ಈ ಅನುವಾದ ಅರ್ಪಣೆ) ಬಂದಿಳಿದಾಗ ಅವನು ಲಂಡನ್ನಿನಿಂದ ತನ್ನ ಕಾರ್ಯ ಈಡೇರಿಸಲು  ಬಂಡೆಯಂತಿದ್ದ ಯಾವ   ಪೂರ್ವಗ್ರಹವಿಲ್ಲದೆ; ಅವನೆಂದೂ ಕಣ್ಣಾರೆ ಕಂಡಿರಲಿಲ್ಲ ತಾನು ಇಬ್ಭಾಗ ಮಾಡಲು ಬಂದ ಭೂಮಿಯನ್ನು ಅಂಧಕೋಪದಿಂದ ಪರಸ್ಪರ ದ್ವೇಷಿಸುವ ಜನರ ನಡುವೆ. ನೋಡಲು  ಒಂದೇ ರೀತಿ ಕಂಡರೂ ವಿಭಿನ್ನ ಆಹಾರ ಪದ್ಧತಿಯ ಪಂಗಡಗಳು, ಹೊಂದಾಣಿಕೆಯಿಲ್ಲ ಅವರಿಬ್ಬರ ದೇವತೆಗಳಲ್ಲಿ.  "ಸಮಯವೇನೂ  ಧಂಡಿಯಾಗಿಲ್ಲ!" ಎಚ್ಚರಿಕೆ ಸಿಕ್ಕಿತ್ತು ಲಂಡನ್ ನಗರದಲ್ಲಿ, "ರಮಿಸಿ  ಒಂದಾಗಿಸಲು   ಅಥವಾ ಎರಡೂ ಪಕ್ಷಗಳ ಅಹವಾಲು ಆಲಿಸಲು.    ತುಂಡಾಗಿಸುವುದೇ ಉಳಿದ ಏಕೈಕ ಮಾರ್ಗ; ವೈಸರಾಯ್ ಜೊತೆಗೆ  ಕಂಡುಬರದೇ ಇರುವುದೇ ಮೇಲು - ಅವನ ಪತ್ರ ಬಂದಿದೆ ನೋಡು.  ಒಂದೇ ಮನೆಯಲ್ಲಿ ವಾಸ್ತವ್ಯ ಬೇಡ, ಪ್ರತ್ಯೇಕವಾಗಿರಲು ಮಾಡಿದ್ದೇವೆ  ಬಂದೋಬಸ್ತು; ನಾಲ್ವರು ನ್ಯಾಯಾಧೀಶರ ನೆರವು ನಿನಗಿರುವುದು, ಹಿಂದೂಗಳು ಇಬ್ಬರು, ಇಬ್ಬರು ಮುಸ್ಲಿಮರು. ಅವರ ಸಲಹೆ ಕೇಳಿದರೂ  ಸಂದಿಗ್ಧವಿಲ್ಲದ ಕೊನೆಯ ನಿರ್ಧಾರ ನಿನ್ನದೇ, ನೆನಪಿಡು."  ಸುಂದರ ಬಂಗಲೆಯಲ್ಲಿ ವಾಸ, ಹಗಲಿರುಳೂ ರಕ್ಷೆಗೆ ಪೊಲೀಸ್  ಸಿ ಬ್ಬಂದಿಯ  ಕಾವಲಿನಲ್ಲಿ ಅವನು ಕಾರ್ಯತತ್ಪರನಾದ; ಲಕ್ಷಾಂತರ    ಮಂದಿಯ ಹಣೆಬರಹ ಬರೆಯುವ ಹೊಣೆಗಾರಿಕ

ಪೂಜೆ (ಕಥನ ಕವನ)

ಇಮೇಜ್
ಮೂಲ - ರವೀಂದ್ರನಾಥ ಠಾಕುರ್  ಕನ್ನಡಕ್ಕೆ - ಸಿ. ಪಿ. ರವಿಕುಮಾರ್  ಆಗಮಿಸಿದನು ರಾಜ ತನ್ನ ಒಡ್ಡೋಲಗದೊಂದಿಗೆ  ಬೀಗುತ್ತಾ ಒಳಗೊಳಗೇ ತನ್ನ ಅಪ್ರತಿಮ ಸಾಧನೆಗೆ ದೇಗುಲದ ಮುಂದೆ ನಿಂತು ನೋಡಿದನು ಕಣ್ತುಂಬಾ ಬಾಗಿಲ ಮೇಲೆ ಕೆತ್ತಿರುವ ಚಿತ್ತಾರದ ಬಿಂಬ ಮೇಲ್ಗಡೆಗೆ ಹರಿಸಿದನು ಅರಸ ಕಣ್ ದೃಷ್ಟಿ ಮೇಘ ಉದುರಿಸಿದಂತೆ ಸ್ವರ್ಣಪುಷ್ಪವೃಷ್ಟಿ ಝಗಝಗಿಸಿ ಕನಕಲೇಪಿತ ಮೇಲ್ಛಾವಣಿಯ ಕುಂಭ ನಗೆಮುಗುಳಿನೊಳು ಬೆರೆತು ಸಾಧನೆಯ ಜಂಬ ಬಾಗಿಸದೆ ತಲೆಯನ್ನು ಒಳಹೊಕ್ಕ ನೃಪತಿ ಸಾಗುವಾನಿಯ ಮಹಾದ್ವಾರವನು ದಾಟಿ ಆಘ್ರಾಣಿಸಿದ ಕಣ್ಮುಚ್ಚಿ ತೇಲಿಬಂದ ಸುಗಂಧ ನಾಗಚಂಪಕ,ಮಲ್ಲಿಗೆ, ಪನ್ನೀರೆಲೆ, ಶ್ರೀಗಂಧ ಜಾಗಟೆ, ನಾದಸ್ವರ, ಇನಿದನಿಯ ಘಂಟಾರವ ರಾಗಬದ್ಧವಾಗಿ ಹಾಡುತ್ತಿದ್ದಾರೆ   ಯಾರೋ ದೇವೀಸ್ತವ ಭೋಗಕ್ಕೆ ಸಿದ್ಧವಾಗಿವೆ ಬಗೆಬಗೆಯ ಪಕ್ವಾನ್ನ ಹೂಗಳು ಹಣ್ಣುಗಳಿಂದ ತುಂಬಿ ತುಳುಕುತ್ತಿವೆ ಹರಿವಾಣ... ಆಗ ದೇಗುಲದ ಪಾರುಪತ್ತೆಗಾರನು ಬಂದು ಮೊಗದಲ್ಲಿ ಚಿಂತೆಯ ಹೊತ್ತು ಬಿನ್ನೈಸಿದನು ಇಂತು ಪ್ರಮಾದವಾಗಿದೆ ಪ್ರಭೂ! ನೀಡಬೇಕು ಕ್ಷಮೆ! ಸಮಾಧಾನ ಚಿತ್ತದಿಂದ ಕೇಳಬೇಕು ಒಮ್ಮೆ... ಪ್ರಧಾನ ಅರ್ಚಕರು ಬಂದಿಲ್ಲ ಪೂಜಾರ್ಪಣೆಗೆ! ವಿಧಿಯಾಟವೆನ್ನುತ್ತ ಮೇಲ್ವಿಚಾರಕ ಕೈಯಿಟ್ಟ ಹಣೆಗೆ ನರೋತ್ತಮದಾಸರ ಆರೋಗ್ಯ ಸರಿಯಾಗಿದೆ ತಾನೇ? ಧರಣೀಂದ್ರನು ಕೂಡಲೇ ಕೇಳಿದನು ಪ್ರಶ್ನೆ ಸ್ವಸ್ಥರಾಗೇ ಕಂಡರು ಸ್ವಾಮೀ ಪ್ರಧಾನ ಅರ್ಚಕರ