ಪೋಸ್ಟ್‌ಗಳು

ಮಾರ್ಚ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅನೇಕ ಕಾಂಪ್ಲೆಕ್ಸ್ ಗಳ ಬುದ್ಧಿಜೀವಿಗಳು

ಇಮೇಜ್
ಮೂಲ - ಕಾನ್ರಾಡ್ ಎಲ್ಸ್ಟ್  ಕನ್ನಡಕ್ಕೆ - ಸಿ ಪಿ ರವಿಕುಮಾರ್  ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ| ಕಪಿಲ್ ಕಪೂರ್ ಅವರು ಇಂದೋರ್ ನಲ್ಲಿ ಸಮಾವೇಶಗೊಂಡ ಇಂಡಿಯಾ ಇನ್ಸ್-ಪೈರ್ಸ್ ಸಂಸ್ಥಾನದ ಸಭೆಯಲ್ಲಿ ಮಾಡಿದ ಭಾಷಣದಿಂದ ಕೆಲವು ಭಾಗಗಳನ್ನು ಇಲ್ಲಿ ಕೊಡುತ್ತಿದ್ದೇನೆ.  ಅದರಲ್ಲೂ ನಮ್ಮ ಭಾರತೀಯ ಬುದ್ಧಿಜೀವಿಗಳನ್ನು ಕುರಿತು ಅವರ ಅನ್ನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಗ್ರಹಣದಲ್ಲಿ ದೋಷಗಳಿದ್ದರೆ ಅವು ನನ್ನವು ಎಂದು ಮೊದಲೇ ಹೇಳಿಬಿಡುತ್ತೇನೆ. ನಮ್ಮ ಭಾರತೀಯ ಬುದ್ಧಿಜೀವಿಗಳಿಗೂ ಹಿಂದೂ ಪರಂಪರೆಯ ಜ್ಞಾನವಂತ ಋಷಿಗಳಿಗೂ ವ್ಯತ್ಯಾಸವಿದೆ. ಋಷಿಗಳು ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಮುಡಿಪಿಟ್ಟವರು. ಜವಾಬ್ದಾರಿಯುತ ವರ್ತನೆ, ಸ್ವಾವಲಂಬನೆ ಮತ್ತು ಮಾನಸಿಕವಾಗಿ ಗೆಲುವಾಗಿರುವುದರ ಮೇಲೆ ಅವರು ಒಟ್ಟು ಕೊಟ್ಟವರು. ನಮ್ಮ ಇಂದಿನ ಬುದ್ಧಿಜೀವಿಗಳೋ  ತಮ್ಮ ಬುದ್ಧಿಯ ಬಲದಿಂದ ಜೀವನೋಪಾಯ ಹುಡುಕಿಕೊಳ್ಳುತ್ತಿರುವವರು. ಅವರ ವ್ಯಕ್ತಿತ್ವಕ್ಕೆ ಕೆಲವು ಮಗ್ಗಲುಗಳಿವೆ.. ಅವರು ನಿತ್ಯದುಃಖಿಗಳು  - ಅವರ ಮುಖದ ಮೇಲೆ ಸದಾ ಚಿಂತೆಯ ಕಳೆ. ಬಹಳ ಜತನದಿಂದ ಅವರು ತಮ್ಮ ಮುಖದ ಮೇಲೆ ಉಪೇಕ್ಷೆಯ ಭಾವನೆಯನ್ನು ತಂದುಕೊಂಡರೂ ಕೂಡಾ ಅವರು ಚಿಂತಿತರೆಂದು ಗೊತ್ತಾಗುತ್ತದೆ. ಎಲ್ಲವೂ ಕೆಟ್ಟದ್ದೇ ಎಂಬುದು ಅವರ ನಂಬಿಕೆ. ಅದರಲ್ಲೂ ಹಿಂದೂ ಧರ್ಮದಿಂದ ಹುಟ್ಟಿದ ಎಲ್ಲವೂ ಕೆಟ್ಟದ್ದೇ ಆಗಿರಬೇಕು - ಉದಾಹರಣೆಗ

ಶಶಿ ಕಪೂರ್ ಅವರ ಎರಡು ಚಿತ್ರಗಳು

ಇಮೇಜ್
ಸಿ ಪಿ ರವಿಕುಮಾರ್  ಶಶಿ ಕಪೂರ್ ಅವರಿಗೆ ಫಾಲ್ಕೆ ಪ್ರಶಸ್ತಿ ಬಂದಿದ್ದು ಸಂತೋಷದ ವಿಷಯ. ಅವರ ಚಿತ್ರಗಳಲ್ಲಿ ನನಗೆ ಥಟ್ಟನೆ ನೆನಪಿಗೆ ಬರುವುದು "ಜುನೂನ್.". ಜುನೂನ್ ಎಂಬ ಉರ್ದು ಪದದ ಅರ್ಥ "ಭಾವತೀವ್ರತೆ" ಅಥವಾ "ಭಾವೋನ್ಮಾದ." ಈ ಚಿತ್ರದ ಕಥೆ 1857ರಲ್ಲಿ ನಡೆದ ಸಿಪಾಯಿದಂಗೆಯ ಸಮಯದಲ್ಲಿ ನಡೆದ ಒಂದು ಘಟನೆಯನ್ನು ಕುರಿತದ್ದು. ಭಾರತೀಯ ಕಾದಂಬರಿಕಾರ ರಸ್ಕಿನ್ ಬಾಂಡ್ ಅವರ ಕಾದಂಬರಿಯನ್ನು ಆಧರಿಸಿ ಚಿತ್ರಕಥೆಯನ್ನು ಹೆಣೆಯಲಾಗಿದೆ. ನಾನು ವಿದ್ಯಾರ್ಥಿಯಾಗಿದ್ದಾಗ  ಈ ಚಿತ್ರ ನೋಡಿದ್ದು ನೆನಪಾಗುತ್ತಿದೆ. ಸಿಪಾಯಿದಂಗೆ ನಡೆದಾಗ ಉತ್ತರಭಾರತದಲ್ಲಿ ನೆಲೆಸಿದ್ದ ಬ್ರಿಟಿಷ್ ಪ್ರಜೆಗಳ ಜೀವನ ಅಲ್ಲೋಲಕಲ್ಲೋಲವಾಯಿತು.  ಒಮ್ಮೆಲೇ ಅವರು ಅಲ್ಪಸಂಖ್ಯಾತರಾಗಿ ಭಾರತೀಯರ ಕೈಗೆ ಸಿಕ್ಕ ಪಾರಿವಾಳಗಳಾಗಿಹೋದರು. ಇಂಥ ಒಂದು ಕುಟುಂಬದಲ್ಲಿ ರೂಥ್ ಎಂಬ ಚೆಲುವೆಯೊಬ್ಬಳಿದ್ದಾಳೆ. ಅವಳ ತಂದೆ ಸಿಪಾಯಿದಂಗೆಯಲ್ಲಿ ಕೊಲೆಯಾಗುತ್ತಾನೆ. ಜಾವೇದ್ ಖಾನ್ ಎಂಬ ಒಬ್ಬ ಮುಸ್ಲಿಂ ಯುವಕನಿಗೆ ರೂಥ್ ಕುರಿತು ಜುನೂನ್ ಭಾವನೆ ಇದೆ. ಅವಳ ತಂದೆಯ ಕೊಲೆಗಡುಕರಲ್ಲಿ ಅವನೂ ಒಬ್ಬ. ಅವನು ರೂಥ್ ಳನ್ನು ಕೊಲೆ ಮಾಡದೆ ಉಳಿಸುತ್ತಾನೆ. ರೂಥ್ ಳ ತಾಯಿ ತಮ್ಮ ಕುಟುಂಬಕ್ಕೆ ಹತ್ತಿರದವನಾಗಿದ್ದ ಒಂದು ಹಿಂದೂ ಶ್ರೀಮಂತನ ಮನೆಯಲ್ಲಿ ಆಶ್ರಯ ಬೇಡುತ್ತಾಳೆ. ಈ ಶ್ರೀಮಂತನಿಗೆ ಧರ್ಮ ಸಂಕಟ. ಬ್ರಿಟಿಷರನ್ನು ಬಚ್ಚಿಟ್ಟುಕೊಂಡಿದ್ದಾನೆ ಎಂದು ತಿಳಿದರೆ ಅವನ ಕುಟ

ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು -7

ಇಮೇಜ್
ಮೂಲ : ವಿಲಿಯಂ ಡ್ಯಾಲ್ ರಿಂಪಲ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್   ಇಂದು ಪರಿಸ್ಥಿತಿ ಪುನರಾವರ್ತನೆಗೊಂಡು ಸರ್ ಥಾಮಸ್ ರೋ ಅವರ ಕಾಲದಂತಾಗಿದೆ.  ರೋಮನ್ನರ ಕಾಲದಿಂದ ಈಸ್ಟ್ ಇಂಡಿಯಾ ಕಂಪನಿಯ ಕಾಲದವರೆಗೆ ಹರಿಯುತ್ತಿದ್ದಂತೆ ಹಣವು ಮತ್ತೆ ಪಶ್ಚಿಮದಿಂದ  ಪೂರ್ವದಿಕ್ಕಿಗೆ ಹರಿಯುತ್ತಿದೆ.  ಇಂದು ಬ್ರಿಟನ್ನಿನ ಪ್ರಧಾನಮಂತ್ರಿಯೋ ಫ್ರಾನ್ಸಿನ ಅಧ್ಯಕ್ಷರೋ ಭಾರತಕ್ಕೆ ಭೇಟಿ ಕೊಟ್ಟಾಗ ಅವರು ರಾಬರ್ಟ್ ಕ್ಲೈವ್ ಬಂದಂತೆ  ತಮ್ಮ ನಿರ್ಧಾರಗಳನ್ನು ಹೇರಲು ಬರುವುದಿಲ್ಲ.  ಯಾವುದೇ ಬಗೆಯ ಒಪ್ಪಂದಗಳೂ ಈ ಭೇಟಿಗಳ ಉದ್ದೇಶವಾಗಿರುವುದಿಲ್ಲ. ಅವರು ಬರುವುದು ಸರ್ ಥಾಮಸ್ ರೋ ಹಾಗೆ, ವ್ಯಾಪಾರಕ್ಕಾಗಿ ಯಾಚನೆ ಮಾಡುವ ಸಲುವಾಗಿ. ಅವರೊಂದಿಗೆ ಬರುವವರು  ದೇಶದ ಅತಿದೊಡ್ಡ ಕಾರ್ಪೊರೇಷನ್ ಗಳ ಮುಖ್ಯಾಧಿಕಾರಿಗಳು.  ಯೂರೋಪ್ ದೇಶಗಳು ಕಾಲೋನಿಗಳನ್ನು ಸ್ಥಾಪಿಸಲು ಹೊರಟಾಗಲೇ ಕಾರ್ಪೊರೇಷನ್ ಎಂಬ ವ್ಯವಸ್ಥೆ ಜಾರಿಗೆ ಬಂದಿದ್ದು.  ಯೂರೋಪಿಗೆ ವ್ಯಾಪಾರದಲ್ಲಿ ಸ್ಪರ್ಧಿಸುವ ಹುಮ್ಮಸ್ಸನ್ನು ತಂದುಕೊಟ್ಟಿದ್ದೇ ಕಾರ್ಪೊರೇಷನ್ ಗಳು. ಯೂರೋಪಿನ ರಾಜಾಧಿಕಾರಗಳು ಉರುಳಿದರೂ ಕಾರ್ಪೊರೇಷನ್ ಗಳು ಇನ್ನೂ ಉಳಿದುಕೊಂಡಿವೆ. ಭಾರತಕ್ಕೆ ಬ್ರಿಟಿಷರ ಬಳುವಳಿ ಏನೆಂದು ಚರಿತ್ರಕಾರರು ಬರೆಯುವಾಗ ಪ್ರಜಾಪ್ರಭುತ್ವ, ನ್ಯಾಯಬದ್ಧ ಆಳ್ವಿಕೆ, ರೈಲ್ವೆ, ಚಹಾ ಮತ್ತು ಕ್ರಿಕೆಟ್ ಗಳನ್ನು ಹೆಸರಿಸುತ್ತಾರೆ. ಆದರೆ ಅನೇಕ ಹೂಡಿಕೆದಾರರು ಒಟ್ಟಾಗಿ ನಡೆಸಬಲ್ಲ ಕಂಪನಿಯ ಕಲ್ಪನೆಯನ್ನು ಭಾರತಕ್ಕ

ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು -6

ಇಮೇಜ್
ಮೂಲ - ವಿಲಿಯಂ ಡ್ಯಾಲ್ ರಿಂಪಲ್ ಕನ್ನಡಕ್ಕೆ - ಸಿ ಪಿ ರವಿಕುಮಾರ್ ಅಲಾಹಾಬಾದ್ ಕೋಟೆಯ ಬಳಿ ನಾನೊಂದು ಚಿಕ್ಕ ದೋಣಿಯನ್ನು ಬಾಡಿಗೆಗೆ ಪಡೆದು ನನ್ನನ್ನು ವಿಹಾರಕ್ಕೆ ಕರೆದೊಯ್ಯಲು ಅಂಬಿಗನಿಗೆ ಸೂಚಿಸಿದೆ. ಗೋಧೂಳಿಯ ಸಮಯವಾಗಿತ್ತು. ಇಳಿಯುವ ಸಂಜೆಯ ಬೆಳಕಿನಲ್ಲಿ ಯಮುನಾ ನದಿಯ ನೀರು ಪೋವಿಸ್ ಅರಮನೆಯಲ್ಲಿರುವ ರತ್ನಗಳ ಉಪಾದಿಯಲ್ಲಿ ಹೊಳೆಯುತ್ತಿತ್ತು.    ಯಮುನಾ ಮತ್ತು ಗಂಗಾ ಸೇರುವ ಸಂಗಮಸ್ಥಾನದಲ್ಲಿ ಜನ ಮುಳುಗೇಳುತ್ತಿದ್ದರು.  ಪ್ರವಾಸಿಗರು ಮತ್ತು ಸಂನ್ಯಾಸಿಗಳ ನಡುವೆಯೇ ಕೆಲವು ಹುಡುಗರು ಕೈಯಲ್ಲಿ ಬಿದಿರಿನ ಗಾಳ ಇಟ್ಟುಕೊಂಡು ಮೀನು ಹಿಡಿಯಲು ಕುಳಿತಿದ್ದರು. ಕೊಕ್ಕರೆಗಳು ದಡದ ಬಳಿ ನೀರಿನಲ್ಲಿ ನಿಂತಿದ್ದವು.  ಗಿಳಿಗಳು ಮತ್ತು ಮೈನಾ ಹಕ್ಕಿಗಳು ಹಾರಾಡುತ್ತಿದ್ದವು. ನಲವತ್ತು ನಿಮಿಷಗಳ ಕಾಲ ನಮ್ಮ ಪ್ರಯಾಣ ಮುಂದುವರೆಯಿತು.  ನೀರಿನ ಅಲೆಗಳು ನಮ್ಮ ದೋಣಿಯ ಪಕ್ಕಗಳಿಗೆ ಬಂದು ಬಡಿಯುತ್ತಿದ್ದವು. ಮೈಲಿಯುದ್ದದ ಕೋಟೆಯನ್ನೂ ಅದರ ಸುತ್ತುಬಳಸುಗಳನ್ನೂ ದಾಟಿದೆವು. ಕೋಟೆಯ ಗೋಡೆಗಳಲ್ಲಿ ಕಾಣುವ ಮುಘಲ್ ವಾಸ್ತುಶಾಸ್ತ್ರವನ್ನು ಗಮನಿಸುತ್ತಾ ನಾನು ಯೋಚಿಸಿದೆ. ಲಂಡನ್ನಿನ ಕೇವಲ ಒಂದು ಕಂಪನಿ ಇಲ್ಲಿಗೆ ಬಂದು ಇಲ್ಲಿಯ ಇಡೀ ಸಾಮ್ರಾಜ್ಯವನ್ನು ವಶ ಪಡಿಸಿಕೊಂಡಿತೇ? ಇಂಥ ಅದ್ಭುತವಾದ, ಬಲಿಷ್ಠವಾದ, ಸುಂದರವಾದ ಕೋಟೆಯನ್ನು ಕಟ್ಟಿದ ಚಾಣಾಕ್ಷರನ್ನು ಸೋಲಿಸಿತೆ? ಈ ವಿಪರ್ಯಾಸಕ್ಕೆ ಚರಿತ್ರಕಾರರು ಅನೇಕ ಕಾರಣಗಳನ್ನು ಕೊಡುತ್ತಾರೆ. ಮುಘಲ್ ಆಳ್ವಿಕೆ

ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು - 5

ಇಮೇಜ್
ಮೂಲ: ವಿಲಿಯಂ ಡ್ಯಾಲ್ ರಿಂಪಲ್  ಕನ್ನಡಕ್ಕೆ : ಸಿ ಪಿ ರವಿಕುಮಾರ್  ಭಾಗ 5  ಈಸ್ಟ್ ಇಂಡಿಯಾ ಕಂಪನಿ ಅಷ್ಟು ತೀವ್ರವಾಗಿ ಮೇಲೆ ಬರಲು ಹದಿನೆಂಟನೇ ಶತಮಾನದಲ್ಲಿ ಮುಘಲ್ ಸಾಮ್ರಾಜ್ಯದ ತೀವ್ರ ಪತನವೂ ಕಾರಣ. 1739ನೇ ಇಸವಿಯಲ್ಲೂ, ಕ್ಲೈವ್ ಗೆ 14 ವರ್ಷವಾಗುವವರೆಗೂ, ಮುಘಲರು ಕಾಬೂಲಿನಿಂದ ಮದ್ರಾಸಿನವರೆಗೆ ಹರಡಿದ ದೊಡ್ಡ ಸಾಮ್ರಾಜ್ಯವನ್ನು ಆಳುತ್ತಿದ್ದರು. ಆ ವರ್ಷ ಪರ್ಷಿಯಾ ದೇಶದಿಂದ ನಾದಿರ್ ಷಾ ಎಂಬ ಸಾಹಸಿ ತನ್ನ 150,000 ಸಂಖ್ಯೆಯ ಅಶ್ವಸೇನೆಯೊಂದಿಗೆ ಖೈಬರ್ ಪಾಸ್ ದಾಟಿ ಭಾರತಕ್ಕೆ ನುಗ್ಗಿದ. ಹದಿನೈದು ಲಕ್ಷ ಸಂಖ್ಯೆಯ ಮುಘಲ್ ಸೈನ್ಯವನ್ನು ಸೋಲಿಸಿದ. ಮೂರು ತಿಂಗಳ ದಾಳಿಯ ನಂತರ ನಾದಿರ್ ಷಾ ಪರ್ಷಿಯಾ ದೇಶಕ್ಕೆ ಮರಳಿದಾಗ ಮುಘಲರು 200 ವರ್ಷಗಳ ಆಳ್ವಿಕೆಯಲ್ಲಿ ಒಗ್ಗೂಡಿಸಿದ ಅತ್ಯಮೂಲ್ಯ ಐಶ್ವರ್ಯಗಳನ್ನು ಕೊಳ್ಳೆ ಹೊಡೆದು ಕೊಂಡೊಯ್ದ.  ಷಾಹ್ ಜಹಾನನ ಅಮೋಘವಾದ ಮಯೂರ ಸಿಂಹಾಸನ, ಜಗತ್ತಿನ ಅತ್ಯಂತ ದೊಡ್ಡ ವಜ್ರ ಕೋಹ್-ಇ-ನೂರ್, ಅದರ "ಸೋದರಿ" ಎಂದೇ ಪ್ರಸಿದ್ಧವಾದ ಇನ್ನೊಂದು ವಜ್ರ "ದರಿಯಾ ನೂರ್," ಚಿನ್ನ ಬೆಳ್ಳಿ ವಜ್ರವೈಡೂರ್ಯಗಳನ್ನು ಪೇರಿಸಿದ  ಗಾಡಿಗಳನ್ನು ಎಳೆಯುವ 700 ಆನೆಗಳು, 4000 ಒಂಟೆಗಳು, 12,000 ಕುದುರೆಗಳು. ಅಂದಿನ ದಿನಾಂಕದಲ್ಲಿ ಈ ಸಂಪತ್ತಿನ ಮೌಲ್ಯ 875 ದಶಲಕ್ಷ ಪೌಂಡ್ ಗಳು.  ಕ್ಲೈವ್ ಬಂಗಾಳದಿಂದ ಹೀರಿದ ಸಂಪತ್ತಿನ ಮೌಲ್ಯಕ್ಕೆ ಹೋಲಿಸಿದರೆ ಇದು ಅನೇಕ ಪಟ್ಟು ದೊಡ್ಡದು. ನಾದಿರ್ ಷಾ  ಅ

ಈಸ್ಟ್ ಇಂಡಿಯಾ ಕಂಪನಿ : ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು - 4

ಇಮೇಜ್
ಮೂಲ ಲೇಖನ: ವಿಲಿಯಂ ಡ್ಯಾಲ್ ರಿಂಪಲ್ ಕನ್ನಡಕ್ಕೆ : ಸಿ ಪಿ ರವಿಕುಮಾರ್ ಭಾಗ 4 ವಿಕ್ಟೋರಿಯಾ ರಾಣಿಯ ಆಳ್ವಿಕೆಯ ಉತ್ತುಂಗದ ಕಾಲದಲ್ಲಿ  ಬ್ರಿಟಿಷರು ವ್ಯಾಪಾರಕ್ಕೆಂದು ಭಾರತಕ್ಕೆ ಬಂದು ಅಲ್ಲಿ ತಮ್ಮ ಸಾಮ್ರಾಜ್ಯವನ್ನು ಹರಡಿದ ವಿಧಾನದ ಬಗ್ಗೆ ತೀವ್ರ ಕಸಿವಿಸಿ ಇತ್ತು. ವಿಕ್ಟೋರಿಯನ್ ಮುಂದಾಳುಗಳಿಗೆ ದೇಶದ ರಾಜಕಾರಣ ಮುಖ್ಯವಾದುದು. ವೈಜ್ಞಾನಿಕವಾಗಿ ತಮ್ಮ ದೇಶ ಮುಂದುವರೆದ ದೇಶ; ನಾಗರೀಕತೆಯಲ್ಲಿ ತಾವು ಮುಂದುವರೆದವರು. ಪಶ್ಚಿಮದಿಂದ ಪೂರ್ವದತ್ತ ಜ್ಞಾನ ಹರಡಲಿ, ರೈಲ್ವೆ ಮೊದಲಾದ ವೈಜ್ಞಾನಿಕ ಆವಿಷ್ಕಾರಗಳು ಹಿಂದುಳಿದ ದೇಶಗಳಿಗೂ ತಲುಪಲಿ, ಕಲೆ-ನಾಗರೀಕತೆಗಳು ಪೂರ್ವಿ ದೇಶಗಳಿಗೂ ದೊರೆಯಲಿ ಎಂಬುದು ಅವರ ಆದರ್ಶವಾಗಿತ್ತು.  ತಮ್ಮ ದೇಶದ ಭ್ರಷ್ಟ ಕಾರ್ಪೊರೇಷನ್ ಒಂದು ಈ ಲೆಕ್ಕಾಚಾರದಲ್ಲಿ ಅದು ಹೇಗೆ ಬಂದುಸೇರಿತು? ಈಸ್ಟ್ ಇಂಡಿಯಾ ಕಂಪನಿ ಭಾರತದಲ್ಲಿ ಕೊಳ್ಳೆ ಹೊಡೆಯುತ್ತಿದೆ ಎಂಬುದರ ಬಗ್ಗೆ ವಿಕ್ಟೋರಿಯನ್ನರು "ಜಾಣಕುರುಡು"  ಮನೋಭಾವವನ್ನು ಧರಿಸಿದರು.  ಬ್ರಿಟನ್ನಿನ "ಹೌಸ್ ಆಫ್ ಕಾಮನ್ಸ್" (ನಮ್ಮ ಲೋಕಸಭೆಯ ಸಮಾನ ಸಂಸ್ಥೆ) ಇನ್ನೊಂದು ಚಿತ್ರವನ್ನು ಬರೆಸಿ ಸೆಂಟ್ ಸ್ಟೀಫನ್ಸ್ ಹಾಲ್ ನಲ್ಲಿ ಸ್ಥಾಪಿಸಿದೆ.  ಕಳೆದ ವರ್ಷ ನಾನು ಒಬ್ಬ ಪಾರ್ಲಿಮೆಂಟ್ ಸದಸ್ಯರನ್ನು ಭೇಟಿಯಾಗಲು ಹೋದಾಗ ಚಿತ್ರ ಕಣ್ಣಿಗೆ ಬಿತ್ತು. ಒಪ್ಪಂದದ ಘಟನೆಯನ್ನು ಹೇಗೆ ತಿರುಚಿ ಅದನ್ನು ವಿಭಿನ್ನ ರೀತಿಯಲ್ಲಿ ಬಿಂಬಿಸಲಾಗಿದೆ ಎಂಬುದಕ್ಕೆ ಇದೂ

ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು - ಭಾಗ 3

ಇಮೇಜ್
ಮೂಲ : ವಿಲಿಯಮ್ ಡ್ಯಾಲ್ ರಿಂಪಲ್   ಕನ್ನಡಕ್ಕೆ - ಸಿ ಪಿ ರವಿಕುಮಾರ್  ( ಭಾಗ 1 ಮತ್ತು ಭಾಗ 2  ಓದಿದ ನಂತರ ಮೂರನೇ ಭಾಗವನ್ನು ಮುಂದೆ ಓದಿ) ಬೆಂಜಮಿನ್ ವೆಸ್ಟ್ (ಚಿತ್ರಕಾರ. 1738-1820) ಪೋವಿಸ್ ಅರಮನೆಯಲ್ಲಿರುವ ಚಿತ್ರದಲ್ಲಿ ಸೂಕ್ಷ್ಮವಾಗಿ ಮೋಸವಿದೆ. ಇದನ್ನು ಬರೆದ ಚಿತ್ರಕಾರ ಬೆಂಜಮಿನ್ ವೆಸ್ಟ್ ಎಂದೂ ಭಾರತಕ್ಕೆ ಕಾಲಿಟ್ಟವನಲ್ಲ. ಚಿತ್ರದ ಹಿನ್ನೆಲೆಯಲ್ಲಿ ಕಾಣುವ ಮಸೀದಿ ನಮ್ಮ ಸೆಂಟ್ ಪಾಲ್ ಚರ್ಚನ್ನು ಹೋಲುತ್ತಿದೆಯಲ್ಲ ಎಂದು ಆ ಕಾಲದಲ್ಲೇ ಒಬ್ಬ ಕಲಾವಿಮರ್ಶಕ ಹೇಳಿದ್ದ.  ದಿಟವೆಂದರೆ ದಿವಾನಿಯನ್ನು ಒಪ್ಪಿಸಲು ಯಾವ ವಿಶೇಷ ಸಮಾರಂಭವೂ ಇರಲೇ ಇಲ್ಲ. ಈ ಒಪ್ಪಂದ ನಡೆದದ್ದು ಕ್ಲೈವ್ ನ ಡೇರೆಯಲ್ಲಿ. ಈಚೆಗೆ ವಶಪಡಿಸಿಕೊಂಡ ಮುಘಲ್ ಕೋಟೆಯ ಹೊರಗೆ ಕ್ಲೈವ್ ನ ಡೇರೆ ಹಾಕಲಾಗಿತ್ತು. ಷಾಹ್ ಆಲಂ ಕುಳಿತಿದ್ದುದು ಯಾವ ರಾಜಗದ್ದುಗೆಯ ಮೇಲೋ ಅಲ್ಲ. ಕ್ಲೈವ್ ಮಹಾಶಯನ ಡೇರೆಯಲ್ಲಿದ್ದ ಒಂದು ಆಸನದ ಮೇಲೆ.  ಈ ಆಸನವನ್ನು ಒಂದು ಊಟದ ಮೇಜಿನ ಮೇಲಿಟ್ಟು ಅದರ ಮೇಲೊಂದು ಚಾದರವನ್ನು ಹೊದಿಸಲಾಗಿತ್ತು.  ಮುಂದೆ ಈ ಪತ್ರಕ್ಕೆ "ಅಲಾಹಾಬಾದ್ ಒಪ್ಪಂದ" ಎಂಬ ಹೆಸರನ್ನು ಕೊಟ್ಟು ಬ್ರಿಟಿಷರು ಅದಕ್ಕೆ ಔನ್ನತ್ಯ ತಂದುಕೊಟ್ಟರು. ಈ ಒಪ್ಪಂದದಲ್ಲಿ ಇದ್ದ ಒಪ್ಪಿಗೆಯ ಅಂದ ಹೇಗಿತ್ತೆಂದರೆ ಅದು ಕ್ಲೈವ್ ಹೇಳಿ ಬರೆಸಿದ ಉಕ್ತಲೇಖನವಾಗಿತ್ತು. ಹೆದರಿದ್ದ ಷಾಹ್ ಆಲಂ ಅವುಗಳಿಗೆಲ್ಲಾ ತಲೆ ಅಲ್ಲಾಡಿಸಿದ್ದ. ಅಂದಿನ ಮುಘಲ್ ಇತಿಹಾಸಕಾರ ಸಯೀದ್ ಗುಲ

ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು - 2

ಇಮೇಜ್
(ಭಾಗ 1 ಇಲ್ಲಿ ಓದಬಹುದು) ಮೂಲ ಲೇಖನ - ವಿಲಿಯಂ ಡ್ಯಾಲ್ ರಿಂಪಲ್ ಕನ್ನಡಕ್ಕೆ - ಸಿ ಪಿ ರವಿಕುಮಾರ್ ಭಾರತವನ್ನು ಬ್ರಿಟಿಷರು ಗೆದ್ದ ಬಗ್ಗೆ ನಾವು ಮಾತಾಡುವಾಗ ಅದರ ಹಿಂದಿರುವ ಒಂದು ಭಯಾನಕ ಸತ್ಯವನ್ನು ಮರೆತುಬಿಡುತ್ತೇವೆ. ಹದಿನೆಂಟನೇ ಶತಮಾನದ ಕೊನೆಯಲ್ಲಿ ಭಾರತವನ್ನು ಆಕ್ರಮಿಸಿಕೊಂಡಿದ್ದು ಬ್ರಿಟಿಷ್ ಸರಕಾರವಲ್ಲ - ಲಂಡನ್ ನಗರದಲ್ಲಿ ಮುಖ್ಯಕಚೇರಿ ಹೊಂದಿದ, ಯಾವುದೇ ಹತೋಟಿಗೆ ಒಳಪಡದ ಒಂದು ಖಾಸಗೀ ಕಂಪನಿ. ಈ ಕಚೇರಿಯೂ ಬಹಳ ದೊಡ್ಡದೇನಲ್ಲ, ಐದು ಕಿಟಕಿಗಳುಳ್ಳ ಒಂದು ಚಿಕ್ಕ ಕೋಣೆ. ಭಾರತದಲ್ಲಿ ಈ ಕಂಪನಿಯ ಮುಂದಾಳುವಾಗಿದ್ದವನು ರಾಬರ್ಟ್ ಕ್ಲೈವ್ ಎಂಬ ಒಬ್ಬ ತಲೆತಿರುಕ ಸಮಾಜದ್ವೇಷಿ. ಈಸ್ಟ್ ಇಂಡಿಯಾ ಕಂಪನಿ ಅನೇಕ ದೃಷ್ಟಿಕೋನಗಳಿಂದ ಕಾರ್ಪೊರೇಟ್ ದಕ್ಷತೆಗೆ ಮಾದರಿ. ನೂರು ವರ್ಷಗಳ ಇತಿಹಾಸವುಳ್ಳ ಕಂಪನಿಯ ಮುಖ್ಯ ಕಚೇರಿಯಲ್ಲಿದ್ದ ಕಾಯಂ ನೌಕರರ ಸಂಖ್ಯೆ 35. ಈ ಬೆರಳೆಣಿಕೆಯಷ್ಟು ನೌಕರರು ನಡೆಸಿದ ಕಾರ್ಪೊರೇಟ್ ಪಿತೂರಿಗೆ ಸಮಾನವಾದುದು ಇತಿಹಾಸದಲ್ಲಿ ಬೇರೊಂದಿಲ್ಲ.  ದಕ್ಷಿಣ ಏಷ್ಯಾ ಖಂಡದ ಬಹಳಷ್ಟು ಪ್ರದೇಶವನ್ನು ಸೈನ್ಯಾಚರಣೆಯಲ್ಲಿ ಗೆದ್ದು ವಶಪಡಿಸಿಕೊಂಡು ಲೂಟಿ ಹೊಡೆದರು.  ಕಾರ್ಪೊರೇಟ್ ಹಿಂಸೆಯ ದೃಷ್ಟಿಯಿಂದ ನೋಡಿದರೆ ಈ ಕಂಪನಿ ಅದ್ವಿತೀಯ ಸ್ಥಾನ ಪಡೆದುಕೊಳ್ಳುತ್ತದೆ. ಇದಕ್ಕೆ ಹೋಲಿಸಿದರೆ ಇಂದಿನ ಅತಿದೊಡ್ಡ ಕಂಪನಿಗಳೆಂದು ಕರೆಸಿಕೊಳ್ಳುವ ಎಕ್ಸಾನ್, ಮೋಬಿಲ್, ವಾಲ್ ಮಾರ್ಟ್, ಗೂಗಲ್ ಮೊದಲಾದವು ಪಾಪದ ಪ್ರಾಣಿಗಳು. ಚರಿತ್ರೆ

ಈಸ್ಟ್ ಇಂಡಿಯಾ ಕಂಪನಿ - ಪ್ರಪ್ರಥಮ ಕಾರ್ಪೊರೇಟ್ ದಾಳಿಕೋರರು - 1

ಇಮೇಜ್
ಮೂಲ ಲೇಖನ - ವಿಲಿಯಂ ಡ್ಯಾಲ್ ರಿಂಪಲ್  ಕನ್ನಡಕ್ಕೆ - ಸಿ ಪಿ ರವಿಕುಮಾರ್   ಭಾಗ 1  "ಲೂಟ್" ಎಂಬ ಪದ ಹಿಂದೂಸ್ತಾನಿ ಭಾಷೆಗಳಿಂದ  ಇಂಗ್ಲಿಷ್ ಭಾಷೆಗೆ ಬಂದ ಮೊದಲ ಪದಗಳಲ್ಲಿ ಒಂದು. ಹದಿನೆಂಟನೇ ಶತಮಾನದ ಕೊನೆಯವರೆಗೂ ಉತ್ತರಭಾರತದ ಸಮತಟ್ಟು ಪ್ರದೇಶಗಳನ್ನು ಬಿಟ್ಟರೆ ಬೇರೆಲ್ಲೂ ಬಳಕೆಯಾಗದ ಈ ಪದ ಒಮ್ಮೆಲೇ ಬ್ರಿಟನ್ನಿನಲ್ಲಿ ಜನಪ್ರಿಯವಾಗಿ ಹೋಯಿತು. ಈ ಪದ ಅಷ್ಟು ದೂರ ಹೋಗಿ ನೆಲೆಸಿ ಅಲ್ಲಿ ಮನೆಮಾತಾದದ್ದು ಹೇಗೆ ಎಂಬುದನ್ನು ಅರಿಯಲು ಪೋವಿಸ್ ಅರಮನೆಗೆ ಒಮ್ಮೆ ಭೇಟಿ ಕೊಟ್ಟರೆ ಸಾಕು.  ಆನುವಂಶಿಕವಾಗಿ ವೇಲ್ಸ್ ನ ಕೊನೆಯ ರಾಜಕುಮಾರನಾಗಿದ್ದ ಒವೇನ್ ಗ್ರುಫ್ಫಿಡ್ಡ್ ಅಪ್ ಗ್ವೆನ್ವಿನ್ವಿನ್ ಎಂಬುವನು ಹದಿಮೂರನೇ ಶತಮಾನದಲ್ಲಿ ಕಟ್ಟಿಸಿದ "ಪೋವಿಸ್ ಅರಮನೆ" ಮೊದಲು ಒಂದು ಅಂಕುಡೊಂಕಾದ ಕೋಟೆಯಾಗಿತ್ತು. ಇಂಗ್ಲಿಷ್ ದೊರೆಗಳ ಸ್ವಾಮ್ಯವನ್ನು ಒಪ್ಪಿಕೊಂಡು ವೇಲ್ಸ್ ಆಧಿಪತ್ಯವನ್ನು ಬಿಟ್ಟುಕೊಟ್ಟಿದ್ದಕ್ಕೆ ತನಗೆ ಉಡುಗೊರೆಯ ರೂಪದಲ್ಲಿ ಸಿಕ್ಕ ಭೂಮಿಯಲ್ಲಿ ಅವನು ಈ ಕೋಟೆಯನ್ನು ಕಟ್ಟಿಸಿದ. ಆದರೆ ಈಗ ಅಲ್ಲಿರುವ ಅತ್ಯಂತ ಬೆಲೆ ಬಾಳುವ ವಸ್ತುಗಳ ಆಗಮನವಾಗಿದ್ದು  ಸಾಕಷ್ಟು ವರ್ಷಗಳ ನಂತರ. ಈಸ್ಟ್ ಇಂಡಿಯಾ ಕಂಪನಿ ಭಾರತದಿಂದ ಲೂಟಿ ಮಾಡಿ ತಂದ ವಸ್ತುವಿಶೇಷಗಳಿಂದ ಈ ಅರಮನೆಯ ಕೋಣೆಗಳು ತುಂಬಿಹೋಗಿವೆ.  ಹದಿನೆಂಟನೇ ಶತಮಾನದಲ್ಲಿ ಕಂಪನಿಯಿಂದ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.   ವೇಲ್ಸ್ ಹಳ್ಳಿಗಾಡು ಪ್ರದೇಶದ