ಪೋಸ್ಟ್‌ಗಳು

Village Industry ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ -೨

ಇಮೇಜ್
ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ -೨ ಮೂಲ: ಮಹಾತ್ಮಾ ಗಾಂಧಿ ಅನುವಾದ - ಡಾ. ಸಿ. ಪಿ. ರವಿಕುಮಾರ್ (ಮೊದಲ ಭಾಗವನ್ನು ಓದಲು ಈ ಕೊಕ್ಕೆಯನ್ನು ಅನುಸರಿಸಿ.) ಖಾದಿ  ಖಾ ದಿ ನನಗೆ ಭಾರತದ ಮಾನವ ಸಮಾಜದ ಐಕ್ಯತೆಯ ಕುರುಹಾಗಿ ಕಾಣುತ್ತದೆ. ಭಾರತದ ಆರ್ಥಿಕ ಸ್ವಾತಂತ್ರ್ಯದ ಕುರುಹಾಗಿ, ಸಮಾನತೆಯ ಕುರುಹಾಗಿ, ಕೊನೆಗೆ ಜವಾಹರಲಾಲ್ ನೆಹರೂ ಅವರ ಕಾವ್ಯಮಯ ಭಾಷೆಯಲ್ಲಿ ಹೇಳುವುದಾದರೆ "ಭಾರತದ ಸ್ವಾತಂತ್ರ್ಯದ ಪೋಷಾಕಿನಂತೆ" ತೋರುತ್ತದೆ.  ಖಾದಿ ಮನೋಭಾವ ಎಂದರೆ ಆವಶ್ಯಕ ವಸ್ತುಗಳ ತಯಾರಿಕೆ ಮತ್ತು ವಿತರಣೆಗಳನ್ನು ವಿಕೆಂದ್ರೀಕರಿಸುವುದು ಎಂದೇ ಅರ್ಥ. ಪ್ರತಿಯೊಂದು ಹಳ್ಳಿಯೂ ತನಗೆ ಅಗತ್ಯವಾದುದಕ್ಕಿಂತ ಸ್ವಲ್ಪ ಹೆಚ್ಚು ಪರಿಮಾಣದಲ್ಲಿ ನಗರಗಳ ಆವಶ್ಯಕತೆಯ ಪೂರೈಕೆಗಾಗಿ ಪದಾರ್ಥಗಳನ್ನು ತಯಾರಿಸಬೇಕು. ದೊಡ್ಡ ಕೈಗಾರಿಕೆಗಳನ್ನು ಕೇಂದ್ರೀಕೃತಗೊಳಿಸಿ ರಾಷ್ಟ್ರದ ಮಟ್ಟದಲ್ಲಿ ನಡೆಸಬೇಕು. ಆದರೆ ಯಾವ ರಾಷ್ಟ್ರದ ಬಹುಪಾಲಿನ ಚಟುವಟಿಕೆಗಳು ಹಳ್ಳಿಗಳಲ್ಲಿ ನಡೆಯುತ್ತವೋ ಅಲ್ಲಿ ಈ ದೊಡ್ಡ ಕೈಗಾರಿಕೆಗಳ ಪಾತ್ರ ಗೌಣವೇ ಆಗಿರುತ್ತದೆ.  ಖಾದಿಯ ತಯಾರಿಕೆ ಎಂದರೆ ಹತ್ತಿಯ ಕೃಷಿ, ಹತ್ತಿಯನ್ನು ಬಿಡಿಸುವುದು, ಹತ್ತಿಯ ಬೀಜಗಳನ್ನು ಬೇರ್ಪಡಿಸುವುದು, ಹತ್ತಿಯನ್ನು ಸ್ವಚ್ಛಗೊಳಿಸುವುದು, ಎಳೆಗಳನ್ನು ಬಿಡಿಸುವುದು, ಎಳೆಗಳ ಆಕಾರದ ಪ್ರಕಾರ ಅವುಗಳನ್ನು ಬೇರೆ ಮಾಡುವುದು, ಬಣ್ಣ ಹಾಕುವುದು, ...

ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ - ಭಾಗ ೧

ಇಮೇಜ್
ಗ್ರಾಮೀಣ ಕೈಗಾರಿಕೆ ಕುರಿತು ಗಾಂಧಿ - ಭಾಗ ೧  ಮೂಲ: ಮಹಾತ್ಮಾ ಗಾಂಧಿ ಕನ್ನಡ ಅನುವಾದ:  ಡಾ. ಸಿ. ಪಿ. ರವಿಕುಮಾರ್ ಇಂದು ಗಾಂಧೀಜಿಯವರ ಪುಣ್ಯತಿಥಿ. ಯಾಂತ್ರೀಕೃತ ಮಗ್ಗಗಳು ಕೈಮಗ್ಗಗಳನ್ನು ನಿರ್ನಾಮಗೊಳಿಸಿ ನಿರುದ್ಯೋಗವನ್ನು ಸೃಷ್ಟಿಸುತ್ತವೆ ಎಂದು ಪ್ರತಿಭಟಿಸಿ ರಂಗ ನಾಟಕ ಕರ್ಮಿ ಮತ್ತು ಗಾಂಧೀವಾದಿ ಪ್ರಸನ್ನ ಇಂದು ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಗಾಂಧೀಜಿ ಗುಡಿ ಕೈಗಾರಿಕೆಗಳನ್ನು ಕುರಿತು ವ್ಯಕ್ತ ಪಡಿಸಿರುವ ಅಭಿಪ್ರಾಯಗಳನ್ನು ನೋಡುವುದು ಸೂಕ್ತ.  ಗ್ರಾ ಮೀಣ ಕೈಗಾರಿಕೆಗಳ ಅಳಿವಿನಿಂದ ಭಾರತದ ಏಳು ಲಕ್ಷ ಗ್ರಾಮಗಳ ನಾಶವಾಗುತ್ತದೆ. ನಾನು ಕೊಟ್ಟ ಸಲಹೆಗಳನ್ನು ಕುರಿತು ಪತ್ರಿಕೆಗಳಲ್ಲಿ ಬಂದ ಟೀಕೆಗಳನ್ನು ಗಮನಿಸಿದ್ದೇನೆ. ನಿಸರ್ಗದ ಯಾವ ಶಕ್ತಿಗಳ ಮೇಲೆ ಮನುಷ್ಯ ವಿಜಯ ಸಾಧಿಸಿದ್ದಾನೋ ಆ ಶಕ್ತಿಗಳ ಬಳಕೆಗೆ ನಾನು ಶರಣಾಗಬೇಕೆಂದು ಕೆಲವರು ನನಗೆ ಸಲಹೆ ಕೊಟ್ಟಿದ್ದಾರೆ.  ನೀರು, ಗಾಳಿ, ತೈಲ ಮತ್ತು ವಿದ್ಯುತ್ - ಇವುಗಳನ್ನು ಪಾಶ್ಚಾತ್ಯರು ಬಳಸಿಕೊಂಡಷ್ಟೇ ಸಂಪೂರ್ಣವಾಗಿ ನಾವೂ ಉಪಯೋಗಿಸಬೇಕು ಎಂದು ನನ್ನ ಟೀಕಾಕಾರ ಅಭಿಪ್ರಾಯ. ನಿಸರ್ಗದ ನಿಗೂಢ ಶಕ್ತಿಗಳ ಮೇಲೆ ಸಾಧಿಸಿದ ಹತೋಟಿಯ ಕಾರಣ ಪ್ರತಿಯೊಬ್ಬ ಅಮೇರಿಕನ್ ಪ್ರಜೆಗೂ ಮೂವತ್ತಮೂರು ಜನ ದಾಸರು ದೊರೆತಿದ್ದಾರಂತೆ. ಇದೇ ಮಾದರಿಯನ್ನು ಭಾರತದಲ್ಲಿ ಅಳವಡಿಸಿದರೆ ಪ್ರತಿಯ...