ಪೋಸ್ಟ್‌ಗಳು

Kannada Literature ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಗ್ರಂಥಾಲಯದಲ್ಲಿ ಕವನವಾಚನ

ಇಮೇಜ್
ಸಿ. ಪಿ. ರವಿಕುಮಾರ್ (17 ನವೆಂಬರ್, 2016) ಗ್ರಂಥಾಲಯ ಸಪ್ತಾಹ ಆಚರಣೆಯ ಪರವಾಗಿ ಒಂದು ಕಾವ್ಯವಚನ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೆಳೆಯ ಅಭಿನವ ರವಿಕುಮಾರ್ ಕರೆ ಮಾಡಿದರು. ಸಾಲದೆಂಬಂತೆ "ತೊಗೊಳ್ಳಿ, ಶ್ರೀನಿವಾಸ್ ಅವರೂ ನಿಮ್ಮ ಜೊತೆ ಮಾತಾಡುತ್ತಾರೆ," ಎಂದು ಫೋನ್ ವರ್ಗಾಯಿಸಿದರು. "ರವಿಕುಮಾರ್, ನೀವು ಖಂಡಿತ ಬರಬೇಕಪ್ಪ." ಎಂದು ಆತ್ಮೀಯವಾಗಿ ಕರೆದವರು "ಶೂದ್ರ" ಶ್ರೀನಿವಾಸ್.  ಅವರು ನನ್ನ ಹಿತೈಷಿಗಳು.   ನ್ಯಾಷನಲ್ ಕಾಲೇಜಿನಲ್ಲಿ ನನಗೆ ಕನ್ನಡ ಪಾಠ ಹೇಳಿದ  ಕೆ.ಎನ್.ಎನ್. ಮತ್ತು ಎಚ್.ಎಸ್.ಎಂ.ಆರ್. ಇವರಿಬ್ಬರೂ ನನ್ನನ್ನು ಕುರಿತು ಆಡಿರಬಹುದಾದ ಒಳ್ಳೆಯ ಮಾತುಗಳು ನನಗೆ ಎಷ್ಟೋ ಜನ ಹಿತೈಷಿಗಳನ್ನು ಸಂಪಾದಿಸಿಕೊಟ್ಟಿದೆ! ಕಾವ್ಯವಾಚನದಲ್ಲಿ ಮುಖ್ಯ ಅತಿಥಿಯಾಗಿ ಬಂದವರು ಪ್ರಸ್ತುತ ಕನ್ನಡ ಕಾವ್ಯ ಸಂದರ್ಭದಲ್ಲಿ ಅತ್ಯಂತ ಮುಖ್ಯ ಕವಿಯೆಂದು ಗುರುತಿಸಲ್ಪಡುವ ಎಚ್.ಎಸ್. ವೆಂಕಟೇಶಮೂರ್ತಿ.  ಎಚ್ಚೆಸ್ವಿ ಅವರ ಕಾವ್ಯದ ಹರಹು ಬಹಳ ದೊಡ್ಡದು. ಮಕ್ಕಳ ಕವಿತೆಯಿಂದ ಹಿಡಿದು ಮಹಾಕಾವ್ಯದವರೆಗೆ. ಅವರನ್ನು ಮತ್ತೊಮ್ಮೆ ನೋಡುವ ಮತ್ತು ಅವರ ಮಾತು ಕೇಳುವ ಅವಕಾಶ ನನಗೆ ಸಿಕ್ಕಿತು. ಜಯನಗರದ ನಗರ ಕೇಂದ್ರ ಗ್ರಂಥಾಲಯದೊಂದಿಗೆ ತಮಗಿರುವ ಸಂಬಂಧವನ್ನು ಎಚ್.ಎಸ್.ವಿ. ನೆನೆಸಿಕೊಂಡರು. "ನಾನು ಬೆಂಗಳೂರಿಗೆ ಬಂದಾಗ ಮೊದಲು ನೆಲೆಸಿದ್ದು ಜಯನಗರದಲ್ಲಿ. ಪಾಠ ಹೇಳಿ ಮನೆಗೆ ಬಂದ ಮೇಲೆ ಸಂಜೆ ವಾಕಿಂಗ್ ಹೊರಟು ಇಲ...

"ಇಲ್ಲದಿದ್ದರೆ ನಾನು ಬರುವುದಿಲ್ಲ" ಅಥವಾ ಸಾಹಿತಿಯ ಕರಾರು

ಇಮೇಜ್
ಸಿ ಪಿ ರವಿಕುಮಾರ್ ಒಪ್ಪದಿದ್ದರೆ ನೀನು ನನ್ನೈಡಿಯಾಲಜಿಯ ನಿಮ್ಮ ಸಮ್ಮೇಳನಕ್ಕೆ ಬರುವುದಿಲ್ಲ ಇರುವುದೆಲ್ಲೆಡೆ ಎಂದು ಆಕ್ಸಿಜನ್ ಜೊತೆಜೊತೆಗೆ ಅಸಹನೆ ಎಂಬೊಂದು ಹೊಸ ಅನಿಲವೆಂದು ನಾನು ಹೇಳುವ ಮಾತು ಒಪ್ಪದಿದ್ದರೆ ನೀನು ಟೂ! ನಿನ್ನ ಜೊತೆ ಆಟಕ್ಕೆ ಬರುವುದಿಲ್ಲ ಕಪ್ಪು ತೋರಣ ಕಟ್ಟಿ, ಕಪ್ಪು ಕಾಫಿಯ ಕೊಟ್ಟು ಕಪ್ಪು ಪೇಪರ್ ಮೇಲೆ ಮಾತ್ರ ಕರೆಯೋಲೆ, ಎಲ್ಲರೂ ಹೊದ್ದು ಬರಬೇಕು ಕರಿಶಾಲು, ಇಲ್ಲದಿದ್ದರೆ ನಾನು ಬರುವುದಿಲ್ಲ ಬಂದವರ ಮುಖವೆಲ್ಲ ಊದಿಕೊಂಡಿರಬೇಕು ನಗೆ ಯಾಕೆ ಮಂದಸ್ಮಿತವೂ ಇರಕೂಡದು ಮರಳಿಸಬೇಕು ಒಬ್ಬರಾದರೂ ಪದ್ಮಪ್ರಶಸ್ತಿ, ಇಲ್ಲದಿದ್ದರೆ ನಾನು ಬರುವುದಿಲ್ಲ ಕಾರ್ಯಕ್ರಮದ ಮುಂಚೆ ದೀಪ ಆರಿಸಬೇಕು, ಎಲ್ಲರೂ ಮೌನ ಆಚರಿಸಬೇಕು, ಮಲ್ಲಿಗೆಯ ಬದಲು ರಕ್ತ ಕಣಿಗಲೆಯೇ ಇರಬೇಕು, ಇಲ್ಲದಿದ್ದರೆ ನಾನು ಬರುವುದಿಲ್ಲ ಮುಖ್ಯಭಾಷಣದಲ್ಲಿ ಆಸ್ಫೋಟವಿರಬೇಕು, ಚಾರಿತ್ರ್ಯವಧೆಯಾಗಬೇಕು ರಾಮನಿಗೆ, ಗೋಮಾಂಸ ಇರಲೇ ಬೇಕು ಭೋಜನದಲ್ಲಿ ಇಲ್ಲದಿದ್ದರೆ ನಾನು ಬರುವುದಿಲ್ಲ ಮೂಢನಂಬಿಕೆ ವಿರುದ್ಧ ಗಾಢನಂಬಿಕೆಯುಳ್ಳ ಜನರನ್ನೇ ಪ್ಯಾನೆಲ್ ಗೆ ಕರೆಯಬೇಕು, ಮೀಡಿಯಾದಲ್ಲಿ ಮುರಿವ ಸುದ್ದಿ ಬರಲೇಬೇಕು ಇಲ್ಲದಿದ್ದರೆ ನಾನು ಬರುವುದಿಲ್ಲ

ಹಾದಿ ತಪ್ಪಿದವರು

ಸಿ ಪಿ ರವಿಕುಮಾರ್  ಸಮಾಜದ ಬಿರುಕುಗಳನ್ನು ಮುಚ್ಚಬೇಕಾದ ಸಾಹಿತಿಗಳು ಕೂಡಾ ಇಂದು ಸಮಯಸಾಧಕರಾಗಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿರುವುದು ಶೋಚನೀಯ.  ಏನಾದರೂ ಅಸಂಬದ್ಧ ಹೇಳಿಕೆ ಕೊಟ್ಟು ಪ್ರಚಾರ ಗಿಟ್ಟಿಸುವುದು ಈನಡುವೆ ನಾವು ಕಾಣುತ್ತಿರುವ ಟ್ರೆಂಡ್. ಪ್ರಸ್ತುತ ಕವಿತೆ ಇಂಥವರನ್ನು ಕುರಿತದ್ದು.  ದೀಪಾವಳಿಯ ಹಬ್ಬಕ್ಕೆ ಬೆಳಗಬೇಕಾದವರು ಜ್ಞಾನದ ಹಣತೆ ಯಾಕೆ ಅಗೆದು ತೆಗೆಯುತ್ತಿದ್ದಾರೆ ಅಂಧಕಾರ? ಯಾಕಿವರಿಗೆ ಅದಮ್ಯವಾಗಿದೆ ಬಾಂಬ್ ಸಿಡಿಸುವ ಆಸೆ? ಲೆಕ್ಕಿಸದೆ ಜನಜೀವನಕ್ಕೆ ಸಂಚಕಾರ - ಭೂತವನ್ನು ಬಡಿದೆಚ್ಚರಿಸಿ ಕೂಗುತ್ತಾರೆ ಕೈಯಲ್ಲಿ ಡಮರುಗ ಹಿಡಿದು ಬಡಿಯುತ್ತಾ ಡಮಡಮ - ಕೇಳುವವರಿದ್ದಾರೆ ಇವರ ಒಡಕುದನಿ ಹಾಡನ್ನು ಎನ್ನುವುದೇ ಇವರಿಗೆ ಸಂತೋಷ-ಚರಮ ಇಂಥವರಿಗೇ ಸಿಕ್ಕುತ್ತದೆ ಇಂದು ಮನ್ನಣೆ ಪುರಸ್ಕಾರ ದೊಡ್ಡಕ್ಷರದ ವರದಿ ಮೊದಲ ಪುಟದಲ್ಲಿ ಇವರ ಕೀರ್ತಿದಾಹಕ್ಕೆ ಎಷ್ಟೊಂದು ಬಲಿದಾನ ಇವರು ಬಾಯ್ತೆರೆಯುತ್ತಾರೆ ಕೆಟ್ಟ ಹಟದಲ್ಲಿ ಕಾರುತ್ತಾರೆ ನಂಜು ಬಿಟ್ಟಾಗಲೆಲ್ಲಾ ಬಾಯಿ ಇವರ ಲೇಖನಿಯಲ್ಲಿ ತುಂಬಿಹುದು ರಕ್ತಶಾಯಿ

ಬೇಕಾಗಿದೆ - ಸಾಹಿತ್ಯದ ಪುನರಾವಲೋಕನ

ಇಮೇಜ್
ಸಿ ಪಿ ರವಿಕುಮಾರ್  ನನ್ನ ಮಿತ್ರರೊಬ್ಬರು ಇಂದು ಹಂಚಿಕೊಂಡ ಬ್ಲಾಗ್ ಬರಹ ವನ್ನು ಓದಿದ ನಂತರ ಇದನ್ನು ಬರೆಯಬೇಕು ಎನ್ನಿಸುತ್ತಿದೆ. ಬರೆಯುವ ಮುನ್ನ ಈ ಬರಹದ ಲೇಖಕ (ರೋಹಿತ್ ಚಕ್ರತೀರ್ಥ) ಅವರು ನನಗೆ ಪರಿಚಿತರಲ್ಲ ಎಂದು ಮೊದಲೇ ಹೇಳಿಬಿಡುತ್ತೇನೆ.   ಅವರ ಲೇಖನವನ್ನು ನಾನು ಪೂರ್ವಾಗ್ರಹವಿಲ್ಲದೆ ಓದಿದ್ದೇನೆ. "ಬುದ್ಧಿಜೀವಿ"ಗಳ ಬಗ್ಗೆ ಅವರ ಸಿಟ್ಟು ನನಗೆ ಅರ್ಥವಾಗುತ್ತದೆ. ಅವರ ಸಿಟ್ಟನ್ನು ನಾವು ಇನ್ನೊಂದು ಬಗೆಯಲ್ಲಿ ಅರ್ಥ ಮಾಡಿಕೊಳ್ಳಬಹುದು - ಈಚಿನ ದಿನಗಳಲ್ಲಿ ಯಾವ ಮೂಲಾಧಾರವೂ ಇಲ್ಲದೇ ಏನನ್ನು ಬೇಕಾದರೂ ಮಾರಬಹುದು ಎಂಬ ಕಲ್ಪನೆ ಗಟ್ಟಿಯಾಗಿಹೋಗಿದೆ. ಜೋರಾಗಿ ಕಿರುಚಾಡಿದರೆ ನಂಬದವನ ಮನಸ್ಸಿನಲ್ಲೂ ಸಂಶಯ ಬಿತ್ತಬಹುದೆಂಬುದರ ಮೇಲೆ ಮಾರ್ಕೆಟಿಂಗ್ ಸಂಸ್ಕೃತಿ ನಿಂತಿದೆ. ಇದನ್ನು ಬ್ರೇನ್ ವಾಷಿಂಗ್ ಎಂದು ಕೂಡಾ ಕರೆಯುತ್ತಾರೆ. ಪ್ರತಿದಿನವೂ ನಮ್ಮ ಮಸ್ತಿಷ್ಕವನ್ನು ತೊಳೆಯುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆಧಾರವಿಲ್ಲದೆ ಸಮಾಜದಲ್ಲಿ ಒಂದು ಜನಾಂಗದ ಮೇಲೆ ಗೂಬೆ ಕೂಡಿಸುವ  ಪ್ರಯತ್ನಗಳು ಇತಿಹಾಸದ ಉದ್ದಕ್ಕೂ ನಡೆದಿವೆ ಮತ್ತು ಇಂದಿಗೂ ನಡೆಯುತ್ತಿವೆ.  ಸಾಮಾಜಿಕ ತಾಣಗಳಲ್ಲಿ ಒಂದು ರಾಜಕೀಯ ಪಕ್ಷದವರು ಇನ್ನೊಂದನ್ನು ಕೀಳಾಗಿ ತೋರಿಸಲು ಅದೆಷ್ಟು ಬಗೆಯ ಮೀಮ್ ಗಳನ್ನು ಪ್ರತಿನಿತ್ಯ ತೇಲಿ ಬಿಡುತ್ತಾರೆ!  ಅದೆಷ್ಟು ಟ್ವೀಟ್ ಗಳು, ಅದೆಷ್ಟು ಕಾಮೆಂಟುಗಳು! ಜನಾಂಗೀಯ ದ್ವೇಷಗಳು ಒಂದೇ ಎರಡೇ? ಉತ್ತರ-ದಕ್ಷಿಣ ಭಾ...

ವಚನ ನ ಜಾಯೇ

ಇಮೇಜ್
ಸಿ ಪಿ ರವಿಕುಮಾರ್   ನಾನು ಸಭಾಗೃಹದ ಸುತ್ತ ಕಣ್ಣು ಹಾಯಿಸಿದೆ. ಸೇರಿದ ಸುಮಾರು ಐವತ್ತು ಮಂದಿ ಜನರಲ್ಲಿ ಬಹುತೇಕರು ವಯಸ್ಸಾದವರೇ. ಇದನ್ನೇ ಮುಂದೆ ಭಾಷಣಕಾರರು ಕೂಡಾ ಬೊಟ್ಟು ಮಾಡಿ ತೋರಿಸಿದರು. ಸಂದರ್ಭ: ಸಂವಾದ ಟ್ರಸ್ಟ್ ನಡೆಸಿದ ಕಾರ್ಯಕ್ರಮದಲ್ಲಿ ಪ್ರೊ| ಓ.ಎಲ್. ನಾಗಭೂಷಣಸ್ವಾಮಿ ಅವರ ಉಪನ್ಯಾಸ. ವಿಷಯ: ಇಂದು ವಚನಗಳು ಪ್ರಸ್ತುತವೇ? ಕಾರ್ಯಕ್ರಮದ ಕೊನೆಯಲ್ಲಿ ನಡೆದ ಚರ್ಚೆಯಲ್ಲಿ ವಚನಗಳಲ್ಲಿ ಬಳಕೆಯಾದ ಕನ್ನಡ ಪದಗಳ ನಿಘಂಟನ್ನು ತಯಾರಿಸಿ ಅವುಗಳಿಗೆ ವ್ಯಾಖ್ಯಾನ ಬರೆಯುವ ಕೆಲಸ ಆಗಬೇಕೆಂಬ ಮಾತು ಬಂತು. ಅದನ್ನು ಯಾರು ಮಾಡಬೇಕೆಂಬ ಜಿಜ್ಞಾಸೆಗೆ ಭಾಷಣಕಾರರು ಉತ್ತರಿಸುತ್ತಾ ವಿಷಾದದಿಂದ "ಈ ಕೆಲಸವನ್ನು ಯಾರೂ ಮಾಡಲಾರರು" ಎಂಬ ಅನುಮಾನ ವ್ಯಕ್ತಪಡಿಸಿದರು.  ಕಾರ್ಯಕ್ರಮಕ್ಕೆ ಬಂದವರೆಲ್ಲಾ ಐವತ್ತರ ಗಡಿ ದಾಟಿದವರೆಂಬುದನ್ನು ಆಗಲೇ ಅವರು ನಮಗೆ ಮನವರಿಕೆ ಮಾಡಿಕೊಟ್ಟಿದ್ದು. ಇದು ಬಹುತೇಕ ಇಂದಿನ ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ನಾವು ನೋಡಬಹುದಾದ ವಿಷಯವೇ. ವಚನಗಳನ್ನು ಆನ್ ಲೈನ್ ಸಂಗ್ರಹಿಸಿ ಅವುಗಳನ್ನು ಹುಡುಕುವ ಸಾಮರ್ಥ್ಯವನ್ನು ಇಂದು ಸೃಷ್ಟಿಸಲಾಗಿದೆ. ಇದರಿಂದ ಸಂಶೋಧಕರಿಗೆ ಉಪಯೋಗವಾಗಿದೆಯೇ ಎಂಬುದನ್ನು  ಪ್ರೊ| ನಾಗಭೂಷಣಸ್ವಾಮಿ ಪ್ರಶ್ನಿಸುತ್ತಾ "ಒಂದು ಕಾಲದಲ್ಲಿ ವಚನಗಳು ಸಿಕ್ಕುವುದೇ ಕಷ್ಟವಾಗಿತ್ತು. ಒಂದು ಪದವನ್ನು 25,000 ವಚನಗಳಲ್ಲಿ ಹುಡುಕುವುದು ದುಸ್ಸಾಧ್ಯವಾಗಿತ್ತು. ಇಂದು ಅದನ್ನು ಸೆಕೆಂಡುಗಳಲ್ಲಿ ಮಾಡ...

ಭಾವಗೀತೆಯ ಗುಂಗು

ಇಮೇಜ್
ಸಿ  ಪಿ ರವಿಕುಮಾರ್  "ಸಂವಾದ" ಟ್ರಸ್ಟ್ ಪ್ರತಿ ತಿಂಗಳು ಆಯೋಜಿಸುವ 'ಸಂವಾದ' ಕಾರ್ಯಕ್ರಮದಲ್ಲಿ ಭಾಗವಹಿಸಿ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಮಾತುಗಳನ್ನು ಕೇಳುವ ಅವಕಾಶ ಇವತ್ತು ಸಿಕ್ಕಿತು. ಬಿ ಆರ್ ಲಕ್ಷ್ಮಣರಾವ್ ತಮ್ಮ ಕಾವ್ಯದ ಬಗ್ಗೆ ಸಂಕ್ಷಿಪ್ತವಾಗಿ ಆದರೆ ಸ್ವಾರಸ್ಯವಾಗಿ ಮಾತಾಡಿದರು. ಕೇವಲ ಒಂದೂವರೆ ಗಂಟೆಯ ಕಾರ್ಯಕ್ರಮದಲ್ಲಿ ಸಮಯ ಪಾಲನೆ ಬಹಳ ಮುಖ್ಯ. ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಪ್ರಶ್ನೆ ಕೇಳಬಹುದು - ಹೀಗಾಗಿ ಸಮಯ ನಿಯಂತ್ರಿಸುವುದು ಒಂದು ಕಲೆ. ಇದನ್ನು ಕವಿ ಲಕ್ಷ್ಮಣರಾವ್ ಚೆನ್ನಾಗಿ ಮಾಡಿದರು ಎನ್ನಿಸಿತು. ಅನೌಪಚಾರಿಕವಾಗಿದ್ದರೂ ಕಾರ್ಯಕ್ರಮದಲ್ಲಿ ಆಯೋಜಕರು ಒಂದು ರೂಪರೇಷೆಯನ್ನು ಇಟ್ಟುಕೊಂಡಿದ್ದರು.  ಮೊದಲು ಕವಿ ತಾವು ಕಾವ್ಯಜೀವನಕ್ಕೆ ಹೇಗೆ ಬಂದರು ಎಂಬ ಬಗ್ಗೆ ಮಾತಾಡಿದರು. ಅವರ ಕೆಲವು ಗೀತೆಗಳನ್ನು ಉಪಾಸನಾ ಮೋಹನ್ ಮತ್ತು ವರ್ಷಾ ಎಂಬ ಕಲಾವಿದರು ಸುಶ್ರಾವ್ಯವಾಗಿ ಹಾಡಿದರು. ಕವಿ ತಮ್ಮ ಕೆಲವು ಕವಿತೆಗಳನ್ನು ಓದಿದರು. ಪ್ರಶ್ನೋತ್ತರಕ್ಕೂ ಅವಕಾಶವಿತ್ತು. ಪೂರ್ವನಿಯೋಜಿತವಲ್ಲದ ಒಂದು ದಿಢೀರ್ ವಿಮರ್ಶೆ ಕೂಡಾ ನಡೆಯಿತು - ಪ್ರೊ ಸಿ ಎನ್ ರಾಮಚಂದ್ರನ್ ಅವರನ್ನು ಕವಿ ಕೆಲವು ಮಾತುಗಳನ್ನು ಆಡಬೇಕೆಂದು ಕೇಳಿಕೊಂಡಿದ್ದು ಒಂದಿಷ್ಟು ಒಳ್ಳೆಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಹೀಗೆ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸುವುದು ಮತ್ತು ನಿರ್ವಹಣೆ ಮಾಡುವುದು ಕೂಡಾ ಅಪರೂಪದ ಕಲೆ. 'ಸಂ...

ನಮ್ಮ ಆಸ್ತಿಯ ಬೆಲೆ

ಇಮೇಜ್
ಸಿ ಪಿ ರವಿಕುಮಾರ್  ಜೂ ನ್ 6 "ಕನ್ನಡದ ಆಸ್ತಿ" ಎಂದೇ ಪ್ರಸಿದ್ಧರಾದ ದಿವಂಗತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಜನ್ಮದಿನ.  ಮಾಸ್ತಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ್ದು "ಚಿಕವೀರ ರಾಜೇಂದ್ರ" ಕಾದಂಬರಿಗಾದರೂ ಅವರು ತಮ್ಮ ಸಣ್ಣ ಕತೆಗಳಿಗಾಗಿ ಪ್ರಸಿದ್ಧರು.  ನಾನು ಹತ್ತನೇ ತರಗತಿ ಓದುತ್ತಿದ್ದಾಗ ನಮಗೆ ಅವರ ಕತೆ "ನಿಜಗಲ್ಲಿನ ರಾಣಿ" ಪಾಠವಾಗಿತ್ತು.  ಇದೊಂದು ಐತಿಹಾಸಿಕ ಕತೆ. ಕತೆಯಲ್ಲಿ ಬರುವ ರಾಮರಸ ನಾಯಕ, ಲಕುಮವ್ವೆ, ಗಿರಿಜವ್ವೆ, ಕಸ್ತೂರಿ - ಈ ಪಾತ್ರಗಳು ಎಂದಿಗೂ ನೆನಪಿನಲ್ಲಿ ಉಳಿಯುವಂಥವು. ಈ ಕತೆಯನ್ನು ನಾನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ್ದು ನನ್ನ ಬ್ಲಾಗ್ ನಲ್ಲಿ ಲಭ್ಯವಾಗಿದೆ ( ಇಲ್ಲಿ ಓದಿ ). ಮಾಸ್ತಿ ಅವರನ್ನು ಭೇಟಿ ಮಾಡಿದ ಸುಸಂದರ್ಭ ನನ್ನ ಜೀವನದಲ್ಲೂ ಬಂದಿತ್ತು! ನಾನು ನವಕರ್ನಾಟಕ ಪಬ್ಲಿಕೇಷನ್ಸ್ ಅವರು ಹೊರತಂದ ವಿಶ್ವಕಥಾಕೋಶ ಎಂಬ ದೊಡ್ಡ ಪ್ರಾಜೆಕ್ಟ್ ನಲ್ಲಿ "ಕಾಡಿನಲ್ಲಿ ಬೆಳದಿಂಗಳು" ಎಂಬ ವಿಯೆಟ್ನಾಮ್ ಕಥೆಗಳ ಸಂಕಲನವನ್ನು ಕನ್ನಡಕ್ಕೆ ಭಾಷಾಂತರಿಸಿದೆ. ಈ ಪ್ರಾಜೆಕ್ಟ್ ನನಗೆ ಕೊಟ್ಟವರು ದಿವಂಗತ ನಿರಂಜನ. ಆಗ ನಾನು ಇಂಜಿನಿಯರಿಂಗ್ ಕಾಲೇಜಿನ ಮೆಟ್ಟಿಲು ಹತ್ತಿದ ಹೊಸದು. "ಕುರಿ" ನಾಟಕವನ್ನು ಹಿಂದಿಯಿಂದ ಕನ್ನಡಕ್ಕೆ ಭಾಷಾಂತರಿಸಿದ ವಿಷಯ ನಿರಂಜನ ಅವರಿಗೆ ತಿಳಿದಿತ್ತು. ಹೀಗಾಗಿ ಅವರಿಗೆ ನಾನು ಈ ಕೆಲಸ ಮಾಡಬಲ್ಲೆ ಎಂಬ ವಿಶ್ವಾಸ ಬಂದಿ...