ಪೋಸ್ಟ್‌ಗಳು

ಜನವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

೨೧ ಲಿಮರಿಕ್ಸ್

ಇಮೇಜ್
ಸಿ. ಪಿ. ರವಿಕುಮಾರ್  (೧) ದೇವರಲ್ಲಿ ಬೇಡಿದ್ದು  ಇದನ್ನು ಹೇಳಿದ್ದು ಈಮೋ ಫಿಲಿಪ್ಸ್, ಅಮೆರಿಕನ್ ನಗೆಗಾರ ಕೇಳಿಕೊಂಡನಂತೆ ದೇವರಲ್ಲಿ "ಒಂದು ಬೈಕ್ ಕಳಿಸು ಹೇಗಾರಾ" ದೇವರು ಹಾಗೆಲ್ಲಾ ಕಳಿಸುತ್ತಾನೆಯೇ, ಪೆದ್ದು! ಎಂದು ಪಾರ್ಕ್ ಮಾಡಿದ್ದ ಹೊಸ ಬೈಕ್ ಕದ್ದು ದೇವರೇ ಕ್ಷಮಿಸಿಬಿಡು ಎಂದು ಪ್ರಾರ್ಥಿಸಿದನಂತೆ ರವಿವಾರ (೨) ಕಲಹಪ್ರಿಯ  ನಾರದನೆಂಬ ಸೇಜು ಕಳಿಸಿದ ಮೊದಲ ಮೆಸೇಜು ಎಡಬಲಗಳಿಗೂ ಚುಚ್ಚಿ 280 ಬೈಟ್‌ನಲ್ಲಿ ಕಚ್ಚಿ ನೋಡುತ್ತಿದ್ದ ಕಾಮೆಂಟ್ ಕಲಹಗಳ ಮೋಜು (೩) ಪಾಲಿಟಿಕ್ಸ್  "ಲ್ಯಾಟಿನ್ ಭಾಷೆಯಲ್ಲಿ 'ಪಾಲಿ' ಬಹುವಚನ ಸೂಚಿ" -- ನಟ ರಾಬಿನ್ ವಿಲಿಯಮ್ಸ್ ಹೀಗೆ ಚುಚ್ಚಿದನು ಸೂಜಿ: "ಇನ್ನು ಟಿಕ್ಸ್ ಎಂದರೆ ನಿಮಗೆಲ್ಲ ಗೊತ್ತು ರಕ್ತವನ್ನೆಲ್ಲಾ ಹೀರಿಬಿಡುವ ಜಂತು ಪಾಲಿಟಿಕ್ಸ್ ಎಂದರೆ ಗೊತ್ತಾಯಿತೇ ಎಂಥದದು ಬೂಚಿ?" (೪)  ಒಂದೇ ಏಟಿಗೆ ಎರಡು ಹಣ್ಣು  ಹೀಗೆ ಹೇಳಿದನಂತೆ ಜಾನತನ ಸ್ವಿಫ್ಟ (ಸಿದ್ಧವಾಗುತ್ತದೆ ಅವನ ಜಾಣತನ ಸ್ಪಷ್ಟ) "ಏರುತ್ತಿರುವ ಜನಸಂಖ್ಯೆ ಹಾಗೂ ಜಗತ್ತಿನ ಹಸಿವಿನ ಸಮಸ್ಯೆ ಎರಡಕ್ಕೂ ನರಮಾಂಸ ಭಕ್ಷಣೆಯೇ ಉತ್ರ" (೫) ಒಗಟು  ಅದು ಮೇಲೆ ಹೋಗುತ್ತೆ ಕೆಳಗೂ ಬರುತ್ತೆ ಆದರೂ ಕದಲೋದಿಲ್ಲ ಒಂಚೂರೂ ಥಟ್ಟಂತ ಹೇಳು ಏನಿರಬಹುದು ಗೊತ್ತಾಗಲಿಲ್ವಾ? ಬೆಟ್ಟದ್ ರಸ್ತೆ! (೬)  ಫಿಲಾಸಫಿ  ನಿಟ್ಟುಸಿರಿಟ್ಟು ಅವನೆಂದ: &quo

ನಗರದಲ್ಲಿ ಸಂಕ್ರಾಂತಿ

ಸಿ. ಪಿ. ರವಿಕುಮಾರ್ ನನ್ನ ಮೊಬೈಲ್ ತೆರೆ ಮೇಲೆ ಸಗಣಿ ಸಾರಿಸಿಟ್ಟ ರಂಗೋಲೆ ಬೆಳಗಿನ ವೇಳೆ ಯಾರೋ ಕಳಿಸಿದ ಸಂಕ್ರಾಂತಿಯ ಶುಭ ಓಲೆ ಅಲ್ಲೊಂದು ಮಣ್ಣಿನ ಗಡಿಗೆ ಸೌದೆ ಬೆಂಕಿ ಉರಿ ಕೆಳಗೆ ಬೇಯುತ್ತಿದೆ ಒಳಗೆ ಹೊಸ ಅಕ್ಕಿ, ಬೆಲ್ಲ, ಹಾಲು ಏಳುತ್ತಿದೆ ಹೊಗೆ ಮೇಲ್ಗಡೆಗೆ ಜೋಡಿಸಿಟ್ಟ ಕಬ್ಬು ಜಲ್ಲೆ ಲಂಗ ತೊಟ್ಟು ಕುಂಟೆಬಿಲ್ಲೆ ತಟ್ಟೆಯಲ್ಲಿ ಬೆಲ್ಲಕಡಲೆ ಗಾಳಿಪಟವು ಮೀರಿ ಎಲ್ಲೆ ಹಾರುತ್ತಿದೆ ಗಗನದಲ್ಲೇ ಹಚ್ಚಿ ಹುಡುಕಿದರೂ ದೀಪ ಎಲ್ಲೂ ಸಮೀಪ ಕಾಣದ ಅಪರೂಪ ಹಂಚಿದ್ದಾನೆ ಯಾರೋ ಭೂಪ ಲೈಕ್ ಒತ್ತು,  ಪಾಪ

ಕೋಆಲಾ, ಕಾಂಗರೂ ಮತ್ತು ಬೆಂಕಿ (ಸ್ವಂತ ಕವಿತೆ)

ಆಸ್ಟ್ರೇಲಿಯಾದ ಕಾಡುಗಳಲ್ಲಿ ಕಚ್ಚಾಡುತ್ತಿದ್ದ ಕೋಆಲಾ ಕರಡಿಗಳ ಕಣ್ಣುಗಳಲ್ಲಿ ತುಂಬಿಕೊಂಡಿತ್ತು ಪರಸ್ಪರ ದ್ವೇಷದ ಧಗೆ ಹೀಗಾಗಿ ಕಾಣಲೇ ಇಲ್ಲ ಹಬ್ಬಿಕೊಳ್ಳುತ್ತಿರುವ ದಟ್ಟ ಹೊಗೆ ಒಂದು ಇನ್ನೊಂದರ  ವಿರುದ್ಧ ಕಾರುತ್ತಿದ್ದವು ಕಿಡಿ ಮಸೆಯುತ್ತಿದ್ದವು ಮಚ್ಚಿನ ಕಾವು ಒಳಗೊಳಗೇ ಬೇಯುತ್ತಿತ್ತು ಕಿಚ್ಚು ಒಮ್ಮೊಮ್ಮೆ ಕಣ್ಣುಗಳಿಂದ  ಫೂತ್ಕರಿಸುತ್ತಿತ್ತು ಬೆಂಕಿಯ ಜ್ವಾಲೆ ಹೀಗಾಗಿ ಕಾಣಲೇ ಇಲ್ಲ ಹರಡಿಕೊಳ್ಳುತ್ತಿರುವ ಹಳದಿ ಅಲೆ. ತನ್ನ ಮಕ್ಕಳನ್ನು ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡು ನೆಗೆಯುತ್ತಿದ್ದ ಕಾಂಗರೂ ಸಂತತಿಗೆ ಯಥೇಚ್ಛ ಹುಲ್ಲು ತಿಂದು ಹೊಟ್ಟೆ ತುಂಬಿದಾಗ ಕೋಆಲಾ ಕರಡಿಗಳ ದೃಷ್ಟಿಯುದ್ಧವನ್ನೇ ನೋಡುತ್ತಾ ಆನಂದಿಸುತ್ತಿದ್ದವು ಒಳಗೇ ಬೆಚ್ಚಗೆ ಮಲಗಿದ್ದ ಮರಿಗಳೂ ಹೊರಗೆ ಹಾಕಿ ತಲೆ ಕಣ್ಣುಬಿಟ್ಟು ನೋಡುತ್ತಿದ್ದವು ಪಿಳಿಪಿಳಿ ಯಾಕೋ ಅಮ್ಮನ ಮಡಿಲಿನ ಕಾವು ಹೆಚ್ಚಾಗುತ್ತಿದೆ ಎಂಬ ಕಳಕಳಿ ಆಸ್ಟ್ರೇಲಿಯಾದ ನಿಬಿಡಾರಣ್ಯಗಳಲ್ಲಿ ಹೀಗಿದ್ದಾಗ ಸೂಪರ್ ಚಾರ್ಜ್ ವಾತಾವರಣ ಯಾರೋ ಗೀರಿದರು ಬೆಂಕಿಕಡ್ಡಿ ಯಾರೋ ಎಸೆದರು ಸಿಗರೆಟ್ ಕೊನೆ ಯಾರೋ ಮಸೆದರು ಮಚ್ಚಿನ ಮೊನೆ ಕಣ್ತುಂಬಾ ಹೊಗೆ ತುಂಬಿದ್ದ ಕೋಆಲಾ ಕರಡಿಗಳಿಗೆ ಕಾಣಲಿಲ್ಲ ಹೊಟ್ಟೆ ತುಂಬಾ ಕಿಚ್ಚು ತುಂಬಿದ್ದ ಕಾಂಗರೂಗಳಿಗೆ ಕಾಣಲಿಲ್ಲ ಬೆಚ್ಚಗೆ ತಾಯಿಯ ಮಡಿಲಲ್ಲಿ ಮಲಗಿದ ಮರಿಗಳಿಗೆ ಗೊತ್ತಾಗಲೇ ಇಲ್ಲ ಸಿ.ಪಿ. ರವಿಕುಮಾರ್ 

ಮೃದುವಾಗಿಡು ಹೆಜ್ಜೆ

ಇಮೇಜ್
ಮೂಲ: ಡಬ್ಲ್ಯೂ ಬಿ ಯೇಟ್ಸ್ ಕನ್ನಡ ಅನುವಾದ : ಸಿ.ಪಿ. ರವಿಕುಮಾರ್ ಇದ್ದಿದ್ದರೆ ನನ್ನ ಬಳಿ ಸ್ವರ್ಗಲೋಕದ ಕಸೂತಿಯ ಬಟ್ಟೆಬರೆ, ಅದ್ದಿತೆಗೆದವು ಹೊಂಬಣ್ಣ ಮತ್ತು ಬೆಳ್ಳಿಬಣ್ಣಗಳಲ್ಲಿ, ಶುದ್ಧ ನೀಲಿಯಾದರೂ ಸರಿ, ತಿಳಿಯೋ ಗಾಢವೋ, ಮಧ್ಯರಾತ್ರಿಯ ಕಪ್ಪು ರೇಷ್ಮೆಯೋ ದಿವಸದ ಧವಲವರ್ಣವೋ, ಉದ್ದಕ್ಕೂ ಹಾಸುತ್ತಿದ್ದೆ ನೀನು ನಡೆದುಬರುವ ಹಾದಿಯಲ್ಲಿ! ನಿರ್ಧನ ನಾನು! ಏನಿದೆ ನನ್ನಲ್ಲಿ ಕನಸುಗಳ ವಿನಾ? ಹೊದ್ದ ಕನಸುಗಳನ್ನೇ ಹಾಸಿದ್ದೇನೆ ನಿನ್ನ ಕಾಲುಗಳ ಅಡಿಯಲ್ಲಿ ಮೃದುವಾಗಿಡು ಹೆಜ್ಜೆ, ನನ್ನ ಕನಸುಗಳ ಮೇಲ್ನಡೆವೆ, ನೆನಪಿರಲಿ

ಸತ್ಯಮೇವ ಜಯತೇ

ಇಮೇಜ್
(ಜಯದೇವ್ ಅವರ ಸಂಗೀತ ನಿರ್ದೇಶನದಲ್ಲಿ ಲತಾ ಮಂಗೇಶ್ಕರ್ ಅವರು ಅನನ್ಯವಾಗಿ ಹಾಡಿರುವ ದೇಶಭಕ್ತಿ ಗೀತೆಯ ಅನುವಾದ. ಹಾಡನ್ನು ನೀವು ಇಲ್ಲಿ ಕೇಳಬಹುದು.) ಮೂಲ: ಕೆ. ಮಹಾವೀರ್ ಕನ್ನಡ ಅನುವಾದ: ಸಿ.ಪಿ. ರವಿಕುಮಾರ್ ಜಯತೇ ಜಯತೇ ಜಯತೇ ಸತ್ಯಮೇವ ಜಯತೇ ಸತ್ಯವೆಂಬ ದೊಂದಿ ಇಂದು ದಾರಿಯನ್ನು ಬೆಳಗಿದೆ ಸತ್ಯವೆಂಬ ಗುಡುಗು ಕೇಳಿ ವೈರಿ ಎದೆಯು ನಡುಗಿದೆ ಮುನ್ನಡೆಯಿರಿ ವೀರರೇ, ವಿಜಯ ಕೂಗಿ ಕರೆದಿದೆ ಸಾಗುತ್ತಿರಿ ಮುಂದೆ, ಸತ್ಯಮೇವ ಜಯತೆ! ಕ್ಲೇಶಗಳನು ಅಳಿಸಿ ಮುಂದೆ ಸಾಗಿ, ಸತ್ಯ ಜೊತೆಗಿದೆ! ದೇಶವನ್ನು ಕಾಪಾಡುವ ಹೊಣೆಯು ನಿಮ್ಮ ಮೇಲಿದೆ! ದೇಶಕಾಗಿ ಎಲ್ಲರ ತ್ಯಾಗವು ಬೇಕಾಗಿದೆ ಸಾಗುತ್ತಿರಿ ಮುಂದೆ, ಸತ್ಯಮೇವ ಜಯತೆ! ಈ ದೇಶದ ಘನತೆ ನೀವು ಈ ದೇಶದ ಗೌರವ, ಸಾಹಸಿಗಳೆ, ನೀವು ದೇಶಕುಸುಮದಲ್ಲಿ ಸೌರಭ! ನೀವೆ ನಮ್ಮ ದೇಶದ ಗೆಲುವಿನ ಹೇಷಾರವ! ಸಾಗುತ್ತಿರಿ ಮುಂದೆ, ಸತ್ಯಮೇವ ಜಯತೆ!