ಪೋಸ್ಟ್‌ಗಳು

ಜುಲೈ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರವಾಸ ಪ್ರಯಾಸ

 ನಾನು ದೆಹಲಿ ಐಐಟಿ ಸೇರಿದ ಹೊಸತು. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಇಂದೂಲ್ಕರ್ ನನ್ನನ್ನು ಕರೆದು "ನೋಡಿ, ಪ್ರತಿವರ್ಷ ಬಿ.ಟೆಕ್ ವಿದ್ಯಾರ್ಥಿಗಳು ಬೇಸಗೆ ತರಬೇತಿಗಾಗಿ ಯಾವುದಾದರೂ ಕಂಪನಿಗೆ ಹೋಗುತ್ತಾರೆ. ಅವರ ಪ್ರಾಜೆಕ್ಟ್ ನೋಡಿ ಅವರಿಗೆ ಸಲಹೆ ಕೊಡಲು ನಮ್ಮ ಕಡೆಯಿಂದ ಒಬ್ಬ ಉಪಾಧ್ಯಾಯರು ಹೋಗಬೇಕು. ಇಲ್ಲಿ ಲಿಸ್ಟ್ ಇದೆ. ನಿಮಗೆ ಇಷ್ಟವಾದದ್ದು ಯಾವುದಾದರೂ ಕಂಪನಿ ಇದ್ದರೆ ಆರಿಸಿಕೊಳ್ಳಿ" ಎಂದರು. ಈಗಾಗಲೇ ಬೆಂಗಳೂರು, ಬಾಂಬೆ, ಮದ್ರಾಸ್ ಮುಂತಾದ ಸಿಟಿಗಳಲ್ಲಿರುವ ಕಂಪನಿಗಳನ್ನು ಯಾರೋ ಆರಿಸಿಕೊಂಡುಬಿಟ್ಟಿದ್ದರು. ನನಗೆ ಆಗಿನ್ನೂ "ಸಾರಿ ಸರ್, ಇವು ಯಾವುದೂ ನನಗಿಷ್ಟವಿಲ್ಲ" ಎನ್ನುವಷ್ಟು ತಿಳಿವಳಿಕೆ ಇರಲಿಲ್ಲ.  ನನಗೆ ಆಗ ಇನ್ನೂ ಮದುವೆ ಆಗಿರಲಿಲ್ಲ. ಹೀಗಾಗಿ ಇವನು ಎಲ್ಲಿಗಾದರೂ ಹೋಗಲು ತಯಾರಾಗುತ್ತಾನೆ ಎಂದು ಅವರಿಗೆ ಅನ್ನಿಸಿರಬಹುದು! ನನಗೆ ಸಿಕ್ಕ ಎರಡು ಇಂಡಸ್ಟ್ರಿಗಳಲ್ಲಿ ಒಂದು ಉತ್ತರಪ್ರದೇಶದ ಗೊಂಡಾ ಎಂಬ ಕಡೆ ಇರುವ ಐಟಿಐ ಮತ್ತು ಇನ್ನೊಂದು ಅಲಾಹಾಬಾದಿನ ಹತ್ತಿರ ಇರುವ ನೈನಿ ಎಂಬಲ್ಲಿರುವ ಐಟಿಐ!  ಗೊಂಡಾ ಎಂಬ ಹೆಸರೇ ನಾನು ಕೇಳಿರಲಿಲ್ಲ. ಇದಾವುದೋ ಗೊಂಡಾರಣ್ಯದ ಅವಶೇಷವೇನೋ ಎಂದು ನನಗೆ ಅನ್ನಿಸಿತು. ನೈನಿ ಎಂಬ ಹೆಸರು ಕೇಳಿದ್ದು ಮಸುಕಾಗಿ ನೆನಪಿತ್ತು. ಆಗ ಇಂಟರ್ನೆಟ್ ಇರಲಿಲ್ಲ. ಅನಂತರ ನೈನಿ ಪ್ರಸಿದ್ಧವಾಗಿರುವುದು ಅಲ್ಲಿಯ ಜೈಲಿಗೆ ಎಂದು ತಿಳಿಯಿತು. ಅಲಾಹಾಬಾದಿನಲ್ಲ

ಒಂಟಿ ಪಯಣ

  ಮೂಲ ಹಿಂದಿ ಕವಿತೆ: ಮಜರೂಹ್ ಸುಲ್ತಾನ್ ಪುರಿ ಅನುವಾದ: ಸಿ.ಪಿ. ರವಿಕುಮಾರ್ ಗುರಿಯಿಲ್ಲ ಜೊತೆ ಯಾರಿಲ್ಲ ಬಾ ಎಂದು ಕರೆವವರಿಲ್ಲ ಒಂಟಿ ಒಬ್ಬನೇ ಹೊರಟಿರುವೆ, ತಿಳಿಯದೆಲ್ಲಿಗೆ! ವಿರಹವಿದು ಕ್ರೂರ ವೇದನೆ ಬರೆದಿಹನು ಭಾಗ್ಯ ದೇವನೇ ಕೈಗೆ ನಿಲುಕದಾಗಿದೆ ಮುಗಿಲ ಮಲ್ಲಿಗೆ! ನನ್ನೂರ ಹಾದಿ ಆದರೂ ಗುರುತಿಸದೆ ದೂರ ನಿಂತವು ದೂರು ಹೇಳಲೇನು ಈ ಮೈಲುಗಲ್ಲಿಗೆ! ಎಲ್ಲರದೂ ಇಲ್ಲಿ ಕಲ್ಲೆದೆ! ಗುಡಿಯಲ್ಲೂ ಕಲ್ಲಿನ ಶಿಲೆ! ಗಾಜು ಹೃದಯ ನನ್ನದು, ಚೂರಾಗದೆ?

ಆದದ್ದಾಯಿತು, ಮರೆತು ನಡೆ ಮುಂದೆ!

ಆದದ್ದಾಯಿತು, ಮರೆತು ನಡೆ ಮುಂದೆ!  ಜೀವನದಲ್ಲೊಂದಿದ್ದಿತು ತಾರೆ  ಸುರಿಸುತ್ತಿದ್ದಿತು ಚೆಲುವಿನ ಧಾರೆ  ಅಸ್ತಂಗತವಾಯಿತೆ? ಹೋದರೆ ಹೋಯ್ತು, ಬಡವಾಯಿತೆ  ಅಂಬರದ ಕಲಾಪತ್ತು?  ಎಷ್ಟು ಉರುಳುವುವೋ ಮಣಿ-ತಾರೆ!  ಜಗಮಗಿಸುವುದಾದರೂ ಜರಿಸೀರೆ ಮರಳಿ ಸಿಗುವುದೇ ಕೆಳಗುರುಳಿದ ತಾರೆ? ಅದಕಳುವುದೇ ಅಂಬರ ಎಂದಾರೆ? ಆದದ್ದಾಯಿತು, ಮರೆತು ನಡೆ ಮುಂದೆ! ಜೀವನದಲ್ಲಿತ್ತೊಂದು ಸುಕುಮಾರ ಕುಸುಮ  ಸಮರ್ಪಿಸಿಕೊಂಡೆಯಲ್ಲ ಅದಕ್ಕೆ ಹೃದಯ  ಒಣಗಿ ಹೋಯಿತು ಆ ಹೂವು ಒಂದು ದಿನ  ಅದರಿಂದ ಬರಿದಾಯಿತೇ ಹೇಳು, ಮಧುವನ?  ಒಣಗುತ್ತವೆ ನಿತ್ಯವೂ ಮಧುವನದಲ್ಲಿ  ಅದೆಷ್ಟು ಹೂವು, ಅದೆಷ್ಟು  ಬಳ್ಳಿ? ಒಣಗಿ ಉರುಳಿದ ಹೂವು  ಅರಳುವುದೇ ಮರಳಿ? ಮಿಡಿವುದೇ ವನವು ಒಂದಾದರೂ ಕಂಬನಿ? ಆದದ್ದಾಯಿತು, ಮರೆತು  ನಡೆ ಮುಂದೆ! ಜೀವನದಲ್ಲಿತ್ತೊಂದು  ಮಧು ಹೀರುವ ಬಟ್ಟಲು  ಸುತ್ತುತ್ತಿತ್ತು ನಿನ್ನ ಬದುಕು ಅದರ ಸುತ್ತಲೂ   ಒಂದು ದಿನ ಕೆಳಗೆ ಬಿದ್ದು ಚೂರಾಯಿತು  ಚೂರಾಗಲೇ ಬೇಕಲ್ಲ ಯಾವುದೇ ಗಾಜು? ಮದಿರಾಲಯದ ಅಂಗಳದಲ್ಲಿ ನಿತ್ಯವೂ ಹೀಗೆ  ಅಲ್ಲಾಡಿ ಕೆಳಬಿದ್ದು ಮುರಿಯುವ  ಮಧುಪಾತ್ರೆ ಮಣ್ಣಾಗಿ ಹೋಗುವುವು ಮಣ್ಣಲ್ಲಿ ಬೆರೆತು  ಶೋಕಿಸದು ಮದಿರಾಲಯವು ಒಂದಿನಿತೂ ಆದದ್ದಾಯಿತು, ಮರೆತು  ನಡೆ ಮುಂದೆ! ಮೃದುವಾದ ಮಣ್ಣಿಂದ ಮಾಡಿರುವ  ಮಡಕೆ ಒಡೆಯುವುದು ಒಂದು ದಿನ  ಬಂದಾಗ ಘಳಿಗೆ  ಮಣ್ಣಿನ ಕುಡಿಕೆಯದು ಕೂಡಾ ಅಲ್ಪಾಯುಷ್ಯ   ಬಿದ್ದು ಚೂರಾಗುವುದೆಂದು ಬರೆದಿಹುದು ಭಾಷ್ಯ  ಆದರೂ ಬರಿದಾಗಿಲ್ಲ

ಚಂದ್ರಹಾಸ

  ವಿಷಮಯ ಗಾಳಿಯನ್ನು ಉಸಿರಾಡುತ್ತ ವಿಷಮಯ ಆಹಾರ ಸೇವಿಸುತ್ತ  ಹೇಗೋ ಬದುಕಿದ್ದವನು  ವಿಷಮಯ  ವಿಚಾರ  ಓದಿ ಕೇಳಿ  ತುಂಬಿಕೊಂಡಾಗ ತಲೆಯಲ್ಲಿ  ಕಚ್ಚಿದ ತಳೆದು ಅವತಾರ ನಾಗ  ಅದಕ್ಕೇ ನೋಡಿ ಚಂದ್ರಹಾಸನಿಗೆ  ವಿಷ ಕೊಟ್ಟರೂ ಓಕೆ  ವಿಷಪೂರ್ಣ ವಿಷಯ  ಎಲ್ಲಾದರೂ  ಸಿಕ್ಕೀತು ಜೋಕೆ  ಸಿ ಪಿ ರವಿಕುಮಾರ್