ಪೋಸ್ಟ್‌ಗಳು

ಡಿಸೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರವಿಕುಮಾರ್ ಚೌಚೌಪದಿ - 3

ಇಮೇಜ್

ಎಸ್. ಕೃಷ್ಣಮೂರ್ತಿ ಅವರ ನೆನಪು

ಇಮೇಜ್
ಶ್ರೀ ಎಸ್. ಕೃಷ್ಣಮೂರ್ತಿ ಅವರ ನಿಧನದ ಸುದ್ದಿ ಬಂದಿದೆ. ನನ್ನ ತಂದೆಗೆ ಇವರು ಆಪ್ತ ಮಿತ್ರರಾಗಿದ್ದರು. ಶ್ರೀ ಕೃಷ್ಣಮೂರ್ತಿ ಆಲ್ ಇಂಡಿಯಾ ರೇಡಿಯೋ ಬೆಂಗಳೂರಿಗೆ ನಿರ್ದೇಶಕರಾಗಿದ್ದರು. ಕವಿ ಕೆ. ಎಸ್. ನರಸಿಂಹಸ್ವಾಮಿ ಏಜೀಸ್ ಆಫೀಸಿನಲ್ಲಿ ಗುಮಾಸ್ತರಾಗಿದ್ದರು. ಇವರೆಲ್ಲರೂ ಒಂದೇ ಬಸ್ಸಿನಲ್ಲಿ ತಮ್ಮ ಕಚೇರಿಗಳಿಗೆ ಹೋಗಿಬರುತ್ತಿದ್ದರು. ಯಾವ ತಾರತಮ್ಯವೂ ಆಗ ಇರಲಿಲ್ಲ. ನಮ್ಮ ತಂದೆಯವರಿದ್ದಾಗ ಮನೆಗೆ ಆಗಾಗ ಬರುತ್ತಿದ್ದರು. ನಮ್ಮ ತಾಯಿ ಕೊಟ್ಟ ಕಾಫಿಯನ್ನು ಹೊಗಳುತ್ತಿದ್ದರು. ಶ್ರೀ ಕೃಷ್ಣಮೂರ್ತಿ ಅವರು ಪ್ರಸಿದ್ಧ ಸಂಗೀತ ವಿದ್ವಾಂಸ ವಾಸುದೇವಾಚಾರ್ಯ ಅವರ ಮೊಮ್ಮಗ. ತಮ್ಮ ತಾತನ ಮತ್ತು ಅವರ ಸಹ-ಸಂಗೀತಜ್ಞರನ್ನು ಕುರಿತು ನೆನಪುಗಳನ್ನು ಅನೇಕ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಇವು ತುಂಬಾ ಸ್ವಾರಸ್ಯವಾಗಿವೆ. ಸಂಗೀತ ಗೊತ್ತಿಲ್ಲದ ನಾನೂ ಕೂಡಾ ಇವುಗಳನ್ನು ಆಸ್ವಾದಿಸಿದ್ದೇನೆ. ಉದಾಹರಣೆಗೆ ವಾಸುದೇವಾಚಾರ್ಯ ಅವರು ಸಂಗೀತ ಕಲಿಯಲು ತಮಿಳುನಾಡಿಗೆ ಹೋದಾಗ ಅಲ್ಲಿ ಅವರ ಗುರುಗಳು ಮತ್ತು ಅವರ ನೆರೆಯವರೇ ಆದ ಇನ್ನೊಬ್ಬ ಸಂಗೀತ ವಿದ್ವಾಂಸರ ನಡುವೆ ಪೈಪೋಟಿಯ ವಿಷಯ ಓದಿದ ನೆನಪು ಇನ್ನೂ ಹಸಿರಾಗಿದೆ. ಅನೇಕ ಸಂಗೀತ ದಿಗ್ಗಜರ ನಡುವೆ ಬೆಳೆದ ಶ್ರೀ ಎಸ್. ಕೃಷ್ಣಮೂರ್ತಿ ಅವರನ್ನೆಲ್ಲಾ ಬಹಳ ಹತ್ತಿರದಿಂದ ಕಂಡವರು. ಅವರ ಸಂಗೀತದ ಉಪಾಸನೆಯ ಬಗ್ಗೆ ಬಹಳ ಸ್ವಾರಸ್ಯವಾಗಿ ಬರೆದಿದ್ದಾರೆ. ಅವರು ಕೂಡಾ ಸಂಗೀತದಲ್ಲಿ ಉತ್ತಮ ಸಾಧನೆ ಮಾಡಿದ್ದರು. ಸುಬ್ಬಾಶಾಸ್ತ್