ಪೋಸ್ಟ್‌ಗಳು

Short Story ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನವವಧು

ಇಮೇಜ್
ಅಮ್ಮ ಮನೆಯ ನೆಲವನ್ನು ನೆನ್ನೆ ಸಗಣಿಯಿಂದ ಸಾರಿಸಿದ್ದಾಳೆ. ಇವತ್ತು ಮನೆಯ ಹೊಸಲಿಗೆ ಕೆಮ್ಮಣ್ಣು ಬಳಿಯುವ ಕೆಲಸ ಮಾಡುತ್ತಿದ್ದಾಳೆ. ನಾಳೆ ಮನೆಯ ಗೋಡೆಗೆ ಕೆರೆಯ ಮಣ್ಣನ್ನು ಸಾರಿಸುವ ಕೆಲಸ ಇಟ್ಟುಕೊಂಡಿದ್ದಾಳೆ.  ಮನೆಗೆ ಸೊಸೆಯನ್ನು ಕರೆತರಲು ತಯಾರಿ ನಡೆದಿದೆ. ಮಣ್ಣಿನ ಹಣತೆಗಳು ಅಟ್ಟದ ಡಬ್ಬದಿಂದ ಕೆಳಗಿಳಿದಿವೆ. ಅಮ್ಮನ ಕೆಲಸ ನೋಡುತ್ತಾ ನನ್ನಲ್ಲಿರುವ ಕವಿ ಜಾಗೃತನಾಗುತ್ತಾನೆ.  ಒಂದೆರಡು ಸಾಲುಗಳು ನನ್ನ ಮನಸ್ಸಿನಲ್ಲಿ ಮೂಡುತ್ತವೆ. “ಸೊಸೆಯ ಸ್ವಾಗತಕ್ಕೆ ಅಮ್ಮ ಮಾಡುತ್ತಿದ್ದಾಳೆ ಮನೆಯ ಗತಕಾಲಕ್ಕೆ ಸಾರಣೆ, ವರ್ತಮಾನಕ್ಕೆ ಲೇಪನ ಮತ್ತು ಮನೆಯ ಉಜ್ವಲ ಭವಿಷ್ಯಕ್ಕಾಗಿ ಹಣತೆಗಳ ಪ್ರಕ್ಷಾಲನ”. ಎಷ್ಟೋ ವರ್ಷಗಳ ಹಿಂದೆ ಅಮ್ಮ ಇದೇ ಮನೆಗೆ ಕಾಲಿಟ್ಟಳು. ಅವಳ ಅತ್ತೆ ಅವಳನ್ನು ಬರಮಾಡಿಕೊಳ್ಳಲು ಹೀಗೇ ಮನೆಯನ್ನು ಸಾರಿಸಿ ಬಳಿದು ಸ್ವಚ್ಛಗೊಳಿಸಿ ರಂಗವಲ್ಲಿ ಬಿಡಿಸಿದ್ದಳು. ಎಲ್ಲಿ ಹಜ್ಜೆ ಇಡಲೆಂದು ತೋರದೆ ಅಮ್ಮ ಅಪ್ಪನ ಹಿಂದೆ ಹಿಂದೆ ಒಳಗೊಳಗೇ ಕಂಪಿಸುತ್ತಾ ಹಗುರವಾಗಿ ನಡೆಯುತ್ತಿರುವ ಚಿತ್ರ ನನ್ನ ಮನೋಭಿತ್ತಿಯ ಮೇಲೆ ಮಸುಕಾಗಿ ಮೂಡಿತು. ಅವಳು ಹದಿನಾರು ವರ್ಷದ ಹುಡುಗಿ. ಮನೆಯ ಏಕಮಾತ್ರ ಸೊಸೆ. ಇಡೀ ಮನೆಯ ಜವಾಬ್ದಾರಿಯನ್ನು ಅವಳೇ ಹೊರಬೇಕು. ಅದೆಷ್ಟು ಹೊಸ ಕೆಲಸಗಳನ್ನು ಕಲಿಯಬೇಕು, ಹೊಸ ಅನುಭವಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕು! ಅವಳು ಒಳಗೊಳಗೇ ಕಂಪಿಸಿದ್ದರೆ ಅದರಲ್ಲಿ ಏನು ಆಶ್ಚರ್ಯವಿದೆ? ಅವಳು ಇವನ್ನೆಲ್ಲ ಸಂಭಾಳಿಸಿಕೊಂಡು ಸಾಗಬಲ್...

ಗೋಲಿ ಆಟ

ಇಮೇಜ್
  ಜನವರಿಯ ಒಂದು ಸಂಜೆ. ಮೈ ಮರಗಟ್ಟುವ ಚಳಿ. ಅಮ್ಮ ನನ್ನ ಅತ್ತಿಗೆಯನ್ನು ಕರೆದು “ಎಲ್ಲರಿಗೂ ಶುಂಠಿ ಹಾಕಿ ಚಹಾ ಮಾಡಿಕೊಂಡು ಬಾ”ಎಂದಳು. ಅತ್ತಿಗೆ ಅಡುಗೆಕೋಣೆಗೆ ಹೊರಟರು. ಮದುವೆಯಾಗಿ ಕಳೆದ ವಾರ ನಮ್ಮ ಮನೆಗೆ ಕಾಲಿಟ್ಟಿದ್ದ ನನ್ನ ಹೆಂಡತಿ ಅವರನ್ನು ಹಿಂಬಾಲಿಸಿ ಹೋದಳು. ಸ್ವಲ್ಪ ಹೊತ್ತಿನ ನಂತರ ಇಬ್ಬರೂ ತಲೆಯ ಮೇಲೆ ಸೆರಗು ಹೊದ್ದು ಕೈಯಲ್ಲಿ ಟ್ರೇ ಹಿಡಿದು ಬಂದರು. ಹೊಗೆಯಾಡುವ ಚಹಾ ಜೊತೆಗೆ ತಿನ್ನಲು ಬಿಸ್ಕೆಟ್ ಇಟ್ಟುಕೊಂಡು ಎಲ್ಲರಿಗೂ ಸರಬರಾಜು ಮಾಡಿದರು. ಅಪ್ಪನಿಗೆ, ಅಮ್ಮನಿಗೆ, ಅಣ್ಣನಿಗೆ, ನನಗೆ, ತಂಗಿಗೆ. ನಂತರ ತಾವೂ ಚಹಾ ಕುಡಿಯಲು ಅಡುಗೆ ಮನೆಗೆ ಹೋದರು. ಅಪ್ಪ ಟಿವಿ ಮೇಲೆ ನ್ಯೂಸ್ ನೋಡುತ್ತಾ ಚಹಾ ಕುಡಿಯುತ್ತಿದ್ದರು. ಅಣ್ಣ ಮೊಬೈಲ್ ಮೇಲೆ ಏನೋ ನೋಡುತ್ತಿದ್ದ. ನಾನು ಟೇಬಲ್ ಮುಂದೆ ಕುಳಿತು ಒಂದು ಕವಿತೆಯ ಕೈಯನ್ನು ನಾಜೂಕಾಗಿ ಹಿಡಿದು  ನಡೆಸುವ ಹುನ್ನಾರದಲ್ಲಿದ್ದೆ. ಹೊರಗೆ ಮಕ್ಕಳು ಗೋಲಿ ಆಟ ಆಡುತ್ತಿದ್ದರು. ಅವರ ಗದ್ದಲ ನಮಗೆ ಕೇಳುತ್ತಿತ್ತು. ತಂಗಿ ಮತ್ತು ನನ್ನ ಹೆಂಡತಿ ಬಾಗಿಲಲ್ಲಿ  ಮಕ್ಕಳ ಆಟ ನೋಡುತ್ತಾ ನಿಂತರು. ಒಮ್ಮೆಲೇ ಅಮ್ಮನ ಉದ್ಗಾರ ಕೇಳಿಸಿತು. “ಅಯ್ಯೋ, ನೋಡಿ! ನಮ್ಮ ಸೊಸೆ ಮಕ್ಕಳ ಜೊತೆ ಸೇರಿಕೊಂಡು ಗೋಲಿ ಆಡ್ತಿದ್ದಾಳೆ!” ಅವಳ ಧ್ವನಿಯಲ್ಲಿ ನಗುವಿತ್ತು, ಒಂದು ಬಗೆಯ ಸಂತೋಷವಿತ್ತು. ಆದರೆ ನನ್ನ ಕಡೆ ನೋಡಿ “ನೋಡಿದವರು ಏನೆಂದುಕೊಂಡಾರು, ಹೊಸದಾಗಿ ಮನೆಗೆ ಬಂದ ಸೊಸೆ …” ಎಂದಾಗ ಅವಳನ್ನು ತಡೆ ಎನ್...

ಗುರುತು

ಇಮೇಜ್
ಸಣ್ಣ ಊರಿನ ಶಾಲೆಯಲ್ಲಿ ಐಡಿ ಕಾರ್ಡ್ ನಿಜಕ್ಕೂ ಬೇಕೋ ಬೇಡವೋ! ಶಾಲೆಯ ಅಧಿಕಾರವರ್ಗದವರು ಎಲ್ಲಾ ಮಕ್ಕಳಿಗೂ ಐಡಿ ಕಾರ್ಡ್ ಕೊಟ್ಟು ಅದರಲ್ಲಿ ಹೆಸರು ಬರೆದು ಪ್ರತಿನಿತ್ಯವೂ ಹಾಕಿಕೊಂಡು ಬರಬೇಕೆಂದು ಮಕ್ಕಳಿಗೆ ಹೇಳಿಕಳಿಸಿದರು.ಮೂರನೇ ಕ್ಲಾಸು ಓದುವ ತಂಗಿಗೆ ನಾನೇ ಅವಳ ಹೆಸರನ್ನು ಬರೆದುಕೊಟ್ಟೆ. ಮಾಲೆಯಂತೆ ಅವಳ ಕೊರಳಿಗೆ ಅವಳ ಗುರುತಿನ ಕಾರ್ಡನ್ನು ಹಾಕಿ  "ಇನ್ನು ಮುಂದೆ ಎಲ್ಲರೂ ನಿನ್ನನ್ನು ಇದೇ ಹೆಸರಿನಿಂದ ಕರೆಯುತ್ತಾರೆ!" ಎಂದು ಅವಳ ಬೆನ್ನು ಚಪ್ಪರಿಸಿದೆ. ಯಾವುದೋ ನಿಧಿ ದೊರೆತಂತೆ ಅವಳು ಬೀಗಿದಳು. ಮಧ್ಯಾಹ್ನ ಹಿಂದಿರುಗಿದವಳು ಐಡಿ ಕಾರ್ಡ್ ತೆಗೆದು ಜೋಪಾನ ಮಾಡಿದಳು. "ನೀನು ಹೇಳಿದ್ದು ನಿಜ, ಅಣ್ಣ! ಇವತ್ತು ನನ್ನ ಗುರುತಿನ ಚೀಟಿ ನೋಡಿ ನೀನು ಪಾಂಡೆ ಅವರ ಮಗಳೇ ಎಂದು ಇಬ್ಬರು ಕೇಳಿದರು!" ಎಂದು ಉತ್ಸಾಹದಿಂದ ಹೇಳಿ ಊಟಕ್ಕೆ ಹೋದಳು.  ನಾನು ಓದಿನಲ್ಲಿ ಮಗ್ನನಾದೆ. ಸ್ವಲ್ಪ ಹೊತ್ತಿನ ಬಳಿಕ ಅವಳು ಮತ್ತೆ ಬಂದು "ಅಣ್ಣಾ!" ಅಂದಳು. ನಾನು ಪುಸ್ತಕದಿಂದ ಕಣ್ಣು ಸರಿಸಿ ಏನೆಂದು ಕೇಳಿದೆ. "ನಿನ್ನ ಹತ್ತಿರವೂ ಗುರುತಿನ ಚೀಟಿ ಇದೆಯಾ ಅಣ್ಣ?" ಎಂದಳು. "ಇಲ್ಲ" ಎಂದು ಸುಮ್ಮನಾದೆ. "ಮತ್ತೆ ನೀನು ಯಾರು ಅಂತ ಹೇಗೆ ಗೊತ್ತಾಗತ್ತೆ ಎಲ್ಲರಿಗೂ?" ನಾನು ಪುಸ್ತಕ ಕೆಳಗಿಟ್ಟು ದೀರ್ಘ ಶ್ವಾಸ ಎಳೆದುಕೊಂಡೆ. "ನಿಜ! ಇವತ್ತು ನನ್ನನ್ನು ಯಾರೂ ಗುರುತಿಸುವುದಿಲ್ಲ" ಎಂದೆ...

ಗಾಂಧೀಜಿಯ ಸಾಬೂನು ಕಲ್ಲು

ಇಮೇಜ್
ಮೂಲ - ರೀಟಾ ರಾಯ್ ಕನ್ನಡ ಅನುವಾದ - ಸಿ ಪಿ ರವಿಕುಮಾರ್ ಸಾಬೂನಿನ ಬದಲು ಮೈ ಉಜ್ಜಿ ತೊಳೆಯಲು ಗಾಂಧೀಜಿ ಒಂದು ಕಲ್ಲನ್ನು ಬಳಸುತ್ತಿದ್ದರು. ಗಾಂಧೀಜಿಗೆ ಮೀರಾ ಬೆನ್ ಒಂದು ನುಣುಪಾದ ಕಲ್ಲು ಕೊಟ್ಟಿದ್ದರು.  ಇದನ್ನು ತಾವು ಹೋದ ಕಡೆಗೆಲ್ಲಾ ಗಾಂಧೀಜಿ ಕೊಂಡೊಯ್ಯುತ್ತಿದ್ದರು. ನೌಖಾಲಿಯಲ್ಲಿ ಗಾಂಧೀಜಿ ಪಾದಯಾತ್ರೆ ಮಾಡಲು ಹೊರಟ ದಿನಗಳು. ನಾರಾಯಣಪುರ ಎಂಬ ಗ್ರಾಮದಲ್ಲಿ ಗಾಂಧೀಜಿ ಮತ್ತು ಜೊತೆಗಾರರು ರಾತ್ರಿ ತಂಗಿದರು.  ಗಾಂಧೀಜಿಯ ವಸ್ತುಗಳನ್ನು ಜೋಪಾನ ಮಾಡುವ ಹೊಣೆ ಹೊತ್ತಿದ್ದ ಮನು ಬೆನ್ ಅವರ ಸಾಬೂನು ಕಲ್ಲನ್ನು ಹಿಂದೆ ತಂಗಿದ ಸ್ಥಳದಲ್ಲೇ ಮರೆತುಬಂದಿದ್ದರು. "ನೀನು ಈಗ ವಾಪಸು ಹೋಗಿ ಕಲ್ಲನ್ನು ಹುಡುಕಿ ತರಬೇಕು. ಆಗ ನೀನು ಮತ್ತೊಮ್ಮೆ ಮರೆಯುವುದಿಲ್ಲ," ಎಂದು ಗಾಂಧೀಜಿ ನುಡಿದುಬಿಟ್ಟರು. "ನನ್ನ ಜೊತೆ ಒಬ್ಬ ಸ್ವಯಂಸೇವಕನನ್ನು ಕರೆದುಕೊಂಡು ಹೋಗಲೇ?" "ಯಾಕೆ?" ಪಾಪ, ಮನು ಬೆನ್! ತಾವು ಬಂದ ದಾರಿಯುದ್ದಕ್ಕೂ ಅಡಕೆ ಮತ್ತು ತೆಂಗಿನ ಮರಗಳ ದಟ್ಟವಾದ ಕಾಡುಗಳಿದ್ದದ್ದನ್ನು ನೆನೆದು ಅವರಿಗೆ ದಿಗಿಲಾಯಿತು. ಅಲ್ಲಿ ಅಪರಿಚಿತರು ದಾರಿ ಕಳೆದುಕೊಂಡರೆ! ಆಗ ದಂಗೆಗಳು ನಡೆಯುತ್ತಿದ್ದ ದಿನಗಳು ಬೇರೆ! ಅಂತೂ ಮನು ಬೆನ್ ಬೆಳಗ್ಗೆ ಒಂಬತ್ತೂವರೆಗೆ ಕಲ್ಲನ್ನು ಹುಡುಕಿಕೊಂಡು ನಾರಾಯಣಪುರದಿಂದ ಒಬ್ಬರೇ  ಹೊರಟರು.  ಬಾಯಲ್ಲಿ ರಾಮನ ಹೆಸರು ಹೇಳುತ್ತಾ ಕಾಡಿನ ರಸ್ತೆಯಲ್ಲಿ ನಡೆದು ಹೋದರು.  ತಾವು ತಂಗಿದ...

ಗ್ಯಾಲರಿ (ಅತಿಸಣ್ಣಕತೆ)

ಇಮೇಜ್
ಸ್ವಾಮೀಜಿ ಬಹಳ ಬೇಸರ ಮಾಡಿಕೊಂಡಿದ್ದರು. "ಯಾಕೆ ಸ್ವಾಮೀಜಿ? ಏನಾಯಿತು?" ಎಂದು ಶಿಷ್ಯರು ಪ್ರಶ್ನಿಸಿದರು. ಸ್ವಾಮೀಜಿ ಅವರ ಕಡೆಗೆ ಬೇಸರದಿಂದ ನೋಡಿದರೇ ಹೊರತು ಮಾತಾಡಲಿಲ್ಲ. ಕೊನೆಗೂ ಒಬ್ಬ ಜಾಣ ಅವರ ಬೇಸರದ ಕಾರಣವನ್ನು ಹುಡುಕಿಯೇ ಬಿಟ್ಟ. ಸ್ವಾಮೀಜಿ ತೆರೆಯಬೇಕೆಂದು ಉದ್ದೇಶಿಸಿದ್ದ ದೇವರ ಚಿತ್ರಪಟಗಳ ಗ್ಯಾಲರಿಗೆ ಅವರು "ಡಿವೈನ್ ಗ್ಯಾಲರಿ" ಎಂದು ಹೆಸರಿಡಲು ಇಚ್ಛಿಸಿದ್ದರು. ಅಂದೇ ಬೆಳಗ್ಗೆ ಶಿಷ್ಯರು ಸೇರಿ ಬೋರ್ಡ್ ಬರೆಸಿ ತಾವೇ ಖುದ್ದಾಗಿ ನಿಂತು ಅದನ್ನು ಏರಿಸಿ ಬಂದಿದ್ದರು. ತಮ್ಮ ಕೆಲಸಕ್ಕೆ ಸ್ವಾಮೀಜಿ ಸಂತುಷ್ಟರಾಗಿ ಏನಾದರೂ ಬಹುಮಾನ ನೀಡಬಹುದು ಎಂದು ಕಾಯುತ್ತಿದ್ದರು. ಸ್ವಾಮೀಜಿ ಬಂದರು. ಬೋರ್ಡ್ ನೋಡಿದರು. ತುಂಬಾ ಆಘಾತವಾದವರಂತೆ ಕಂಡರು. ಸ್ವಾಮೀಜಿಯನ್ನು ಏನು ಕೇಳಿದರೂ ಮೌನ. ಕೊನೆಗೂ ಸ್ವಾಮೀಜಿಯವರ ದುಃಖದ ಕಾರಣ ಬೆಳಕಿಗೆ ಬಂತು. ಅವರ ಚಿತ್ರಪಟ ಗ್ಯಾಲರಿಗೆ ಹಾಕಿದ ಬೋರ್ಡಿನ ಮೇಲೆ ದೊಡ್ಡ ಅಕ್ಷರಗಳಲ್ಲಿ "ದಿ ವೈನ್ ಗ್ಯಾಲರಿ" ಎಂದು ಬರೆಯಲಾಗಿತ್ತು.

ಅಶ್ವತ್ಥ ಮತ್ತು ಅಸ್ವಸ್ಥ (ಒಂದು ಅತಿಸಣ್ಣಕತೆ)

ಇಮೇಜ್
"ಅಶ್ವತ್ಥ ಮರಕ್ಕೆ ಐದು ರಂಧ್ರ ಕೊರೆದು ವಿಷ ತುಂಬಿದರಂತೆ." ಎಂದು ಮೂಕಜ್ಜಿ ಪೇಪರ್ ಓದಿ ಹೇಳಿದಳು. "ಅಯ್ಯೋ! ಯಾಕಂತೆ?" ಎಂದು ಮೊಮ್ಮಗ ಸುಬ್ಬರಾಯ ಕೇಳಿದ. "ಅದನ್ನು ಬೀಳಿಸುವ ಪ್ರಯತ್ನ. ಒಳಗಿಂದ ಒಳಗೇ ನಾಶವಾಗಿ ಒಣಗಿಹೋದಾಗ ಅದನ್ನು ಬೀಳಿಸಬಹುದು." "ಯಾಕೆ?" "ಕೆಲವರಿಗೆ ಅದರ ಕಟ್ಟಿಗೆಯ ಮೇಲೆ ಕಣ್ಣು. ಕೆಲವರಿಗೆ ಅದು ಬೆಳೆದ ಸ್ಥಳದ ಮೇಲೆ ಕಣ್ಣು. ಕೆಲವರಿಗೆ ಅವರಿಗೇ ಅರ್ಥವಾಗದ ಅಸಹನೆ. ಕೆಲವರಿಗೆ ಯಾವುದೋ ಹಳೆಯ ಸೇಡು. ಕೆಲವರಿಗೆ ಅದರಲ್ಲಿ ನೆಲೆಸಿರುವ ಮಂಗಗಳನ್ನು ಓಡಿಸುವ ಹುಮ್ಮಸ್ಸು." "ಆಯಿತಲ್ಲ, ಈ ಐದು ವಿಷಗಳೇ ಸಾಕಿತ್ತು." "ಇಲ್ಲ, ಸುಬ್ಬ. ಅಶ್ವತ್ಥದ ಮರ ಹಾಗೆಲ್ಲಾ ಸಾಯುವುದಿಲ್ಲ. ನೀನು ನೋಡಿರಬಹುದು. ಅದು ಅಸಾಧ್ಯವೆನ್ನಿಸುವ ಕಡೆಯಲ್ಲೂ ಕುಡಿಯೊಡೆಯುತ್ತದೆ. ಕಟ್ಟಡದ ಆರನೇ ಮಹಡಿಯ ಗೋಡೆಯಲ್ಲೂ ಬೆಳೆಯಲು ಹವಣಿಸುತ್ತದೆ. ಇವರಿಗೆ ಅದನ್ನು ಕೊಲ್ಲುವ ಒತ್ತಾಸೆ ಎಷ್ಟಿದೆಯೋ ಅದರ ಎರಡು ಪಟ್ಟು ಬದುಕುವ ಆಸೆ ಅಶ್ವತ್ಥದ ಮರಕ್ಕಿದೆ. ಅದು ನೂರಾರು ಕಾಲ ಬದುಕುತ್ತದಂತೆ. ಅಶ್ವತ್ಥದ ಮರದ ಕೆಳಗೆ ಹಗಲಲ್ಲಿ ಕುಳಿತರೆ ನಿನಗೆ ಆಕ್ಸಿಜನ್ ಸಿಕ್ಕುತ್ತದೆ. ನಿನ್ನ ಮನಸ್ಸು ನಿರಾಳವಾಗುತ್ತದೆ. ರಾತ್ರಿ ಅದರ ಕೆಳಗೆ ಮಲಗಿದರೆ ಅಲ್ಲಿ ಆಕ್ಸಿಜನ್ ಸಿಕ್ಕದೆ ಭೂತಪ್ರೇತಗಳೂ ಕಂಡಾವು." "ಇದಕ್ಕೇ ಕೆಲವರು ಈ ಮರದಲ್ಲಿ ಭೂತವಿದೆ ಎ...

ಅಮೃತವಿಶ್ವ

ಇಮೇಜ್
ಅಮೃತಾಳನ್ನು ಕಾಲೇಜಿನಲ್ಲಿ ನೋಡಿದ ಕೂಡಲೇ ವಿಶ್ವ ಪೂರಾ ಬೋಲ್ಡ್ ಆಗಿಹೋದ. ಅವನ ಅದೃಷ್ಟ ಹೇಗಿತ್ತೆಂದರೆ ಅಮೃತಾ ಕೂಡಾ ಅವನನ್ನು ಇಷ್ಟ ಪಟ್ಟಳು. ಮನೆಗೆ ಕರೆದುಕೊಂಡು ಹೋಗಿ ತನ್ನ ತಂದೆತಾಯಿಗೆ ಪರಿಚಯ ಮಾಡಿಸಿದಳು. ಇದು ಫಿಲ್ಮ್ ಕತೆಯಾಗಿದ್ದರೆ ನೀವು ಅವರಿಬ್ಬರೂ ಹಾಡು ಹೇಳುತ್ತಾ ಮರಗಳ ಸುತ್ತಲೂ ಓಡುವುದನ್ನು ಕಲ್ಪಿಸಿಕೊಳ್ಳಬಹುದು. ಅಷ್ಟರಲ್ಲಿ ಇಂಟರ್ವಲ್. ನೀವು ಪಾಪ್ ಕಾರ್ನ್ ಐಸ್ ಕ್ರೀಮ್ ಕೋಡುಬಳೆ ಎಲ್ಲಾ ತಿಂದು ಮತ್ತೆ ವಾಪಸ್ ಬಂದಾಗ ವಿಶ್ವ ಅಮೃತಾಳನ್ನು ಕಾಲೇಜ್ ಟ್ರಿಪ್ ಗೆ ಕರೆಯಲು ಬಂದಿದ್ದಾನೆ. ಅಮೃತಾ ಕಪ್ಪು ಡ್ರೆಸ್ ಹಾಕಿಕೊಂಡಿದ್ದಾಳೆ. ಅವಳು ಹಾಲಿನಲ್ಲಿ ಕೂತು ಒಂದು ಕೈಯಲ್ಲಿ ಮೊಬೈಲ್  ಹಿಡಿದು ಇನ್ನೊಂದು ಕೈಯಿಂದ ಬಾಳೆಹಣ್ಣು ತಿನ್ನುತ್ತಿದ್ದಾಳೆ. ಅಮ್ಮೂ ಎಂದು ವಿಶ್ವ ಕರೆದಾಗ ಅವಳು ತಿರುಗಿ ಕೂಡಾ ನೋಡುತ್ತಿಲ್ಲ. ಅವಳು ಮೊಬೈಲಿನಲ್ಲಿ ಮಾತಾಡುತ್ತಾ ನಗುತ್ತಾ ತನ್ನದೇ ಲೋಕದಲ್ಲಿದ್ದದ್ದು ನೋಡಿ ವಿಶ್ವನಿಗೆ ಶಾಕ್, ಕೋಪ, ದುಃಖಎಲ್ಲಾ ಒಟ್ಟಿಗೆ ಆಗಿ ಅವನು ಕುಸಿಯುವುದೊಂದು ಬಾಕಿ. ಆದರೂ ಹೇಗೋ ಶಕ್ತಿ ತಂದುಕೊಂಡು ಅವಳ ಮುಂದೆ ಹೋಗಿ ನಿಲ್ಲುತ್ತಾನೆ. ಅವಳು ಕೂಲಾಗಿ ವಾಟ್ ಎಂದು ಹುಬ್ಬೇರಿಸಿ ನೋಡುತ್ತಾಳೆ. ಅಮ್ಮೂ! ಯಾರ ಜೊತೆ ಮಾತಾಡ್ತಿದೀಯ! ಮೈಂಡ್ ಯುವರ್ ಓನ್ ಬಿಸಿನೆಸ್! ಹೂ ಆರ್ ಯೂ ಎನಿ ವೇ? ವಿಶ್ವನಿಗೆ ಈಗ ನಿಲ್ಲಲೂ ಶಕ್ತಿಯಿಲ್ಲ. ಇದೇನು ಹುಡುಗಾಟ! ಅಮ್ಮೂ! ನಿನಗೇನಾಯಿತು? ನನ್ನ ನ...

ಕಲ್ಲು

ಇಮೇಜ್
ಸಣ್ಣಕತೆ -  ಸಿ. ಪಿ. ರವಿಕುಮಾರ್  (ಅಮೆರಿಕಾದ ಕೆಂಟಕಿ ರಾಜ್ಯದಲ್ಲಿ ಅಕ್ಟೋಬರ್ 6, 2018 ನಡೆದ ನಿಜಘಟನೆಯನ್ನು ಆಧರಿಸಿದ್ದು. ಪಾತ್ರಗಳು ಕಾಲ್ಪನಿಕ.) ಜಿಮ್ ಬಾಗಿಲು ತೆರೆದು ಒಳಗೆ ಬಂದಾಗ ಸ್ಟೆಲ್ಲಾ ಟೆಲಿವಿಷನ್ ನೋಡುತ್ತಾ ರಾತ್ರಿಯ ಅಡುಗೆಗೆಂದು ಹುರುಳಿಕಾಯಿಯನ್ನು ಕತ್ತರಿಯಿಂದ ಕತ್ತರಿಸುತ್ತಾ ಕೂತಿದ್ದಳು. "ಮಕ್ಕಳು ಇನ್ನೂ ಶಾಲೆಯಿಂದ ಬಂದಿಲ್ಲವಾ?" ಎಂದು ಜಿಮ್ ಕೇಳಿದ. ಅವಳು ತಲೆ ಎತ್ತಿ ನೋಡಿ. "ಓ ಹಾಯ್ ಡಿಯರ್! ಮೆಲ್ ಬಂದು ಅವಳ ರೂಮಿನಲ್ಲಿದ್ದಾಳೆ. ರಯಾನ್ ಇನ್ನೂ ಬಂದಿಲ್ಲ. ಬರೋ ಹೊತ್ತಾಯಿತು. ಅಗೋ, ಬಂದನಲ್ಲ! ಹಾಯ್ ರಯಾನ್ ಮರಿ, ಯಾಕೆ, ಸುಸ್ತಾದ ಹಾಗೆ ಕಾಣುತ್ತಿದೀಯಲ್ಲ!" ಕೈಯಲ್ಲಿದ್ದ ಭಾರದ ಬ್ಯಾಗ್ ಕೆಳಗಿಟ್ಟು ರಯಾನ್ "ಫ್ಯೂ! ಇದನ್ನು ಹೊತ್ತುಕೊಂಡು ಬರುವಷ್ಟು ಹೊತ್ತಿಗೆ ಸಾಕಾಯಿತು. ಡಿನ್ನರ್ ಯಾವಾಗ ಮಾಮ್! ನನಗೆ ಹೊಟ್ಟೆ ತಾಳ ಹಾಕ್ತಿದೆ!" ಎಂದ. "ಸ್ಪೆಗೆಟಿ ರೆಡಿಯಾಗಿದೆ.  ಈ ಬೀನ್ಸ್ ಆವಿಯಲ್ಲಿ ಬೇಯಿಸಿದರೆ ಆಯಿತು. ನೀನು ಮುಖ ತೊಳೆದು ಬಾ. ಜಿಮ್ ನೀನೂ ಅಷ್ಟೆ. ಇವತ್ತು ಸಿಹಿಗೆ ಬ್ಲೂಬೆರೀ ಕಾಬ್ಲರ್" ಎಂದು ಸ್ಟೆಲ್ಲಾ ಮೇಲೆದ್ದಳು. ಸಿಹಿಯ ಹೆಸರು ಕೇಳಿ ರಯಾನ್ ಮುಖ ಅರಳಿತು.   "ಕಿಮ್! ಇವತ್ತು ಬ್ಲೂಬೆರಿ ಕಾಬ್ಲರ್! ನಿನಗೆ ತುಂಬಾ ಇಷ್ಟ ಅಲ್ಲವಾ!" ಎಂದು ರಯಾನ್ ಹಿರಿಯ ಅಕ್ಕನನ್ನು ಕೂಗಿದ. ಅವಳು ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಬಂದಾಗ ಮಗು...

ಬಾಪುವನ್ನು ಕಂಡ ಹುಡುಗ

ಇಮೇಜ್
ಮೂಲ - ರಾಮ್ ಪ್ರದೇಶ್ ಶಾಸ್ತ್ರಿ  ಕನ್ನಡಕ್ಕೆ -  ಸಿ ಪಿ ರವಿಕುಮಾರ್  ಒಮ್ಮೆ ದೆಹಲಿಯಲ್ಲಿರುವ ಒಂದು ಹರಿಜನ ಆಶ್ರಮಕ್ಕೆ ಗಾಂಧೀಜಿ ಭೇಟಿ ಕೊಟ್ಟರು. ಆಶ್ರಮದಲ್ಲಿದ್ದ ಕಾರ್ಯಾಗಾರದಲ್ಲಿ ಹುಡುಗರಿಗೆ ಯಾವುದಾದರೂ ಉದ್ಯೋಗದಲ್ಲಿ ತರಬೇತಿ ನೀಡಲಾಗುತ್ತಿತ್ತು.   ಗಾಂಧೀಜಿ ಕಾರ್ಯಾಗಾರವನ್ನು ಹೊಕ್ಕು ಸುತ್ತಲೂ ಸಮೀಕ್ಷೆ ನಡೆಸುತ್ತಿರುವಾಗ ಹುಡುಗರು ತಾವು  ಮಾಡುತ್ತಿದ್ದ ಕೆಲಸ ನಿಲ್ಲಿಸಿ ತಮ್ಮನ್ನು ನೋಡಲು ಬಂದ  ಹಿರಿಯ ನೇತಾರನ ಕಡೆ ನಿಬ್ಬೆರಗಿನಿಂದ ನೋಡುತ್ತಿದ್ದರು. ಅಲ್ಲೊಬ್ಬ ಹುಡುಗ ಅಗ್ಗಿಷ್ಟಿಕೆಯ ಮೇಲೆ ರೊಟ್ಟಿಗಳನ್ನು ಸುಡುತ್ತಿದ್ದ. ಅವನು ತನ್ನ ಕೆಲಸದಲ್ಲಿ ಸಂಪೂರ್ಣ ತಲ್ಲೀನನಾಗಿದ್ದರಿಂದ ಗಾಂಧೀಜಿ ಬಂದಿದ್ದನ್ನು ಅವನು ಗಮನಿಸಲಿಲ್ಲ. ಗಾಂಧೀಜಿ ಅವನನ್ನು  ಗಮನಿಸಿ ಮುಂದೆ ಸಾಗಿದರು.  ಕಾರ್ಯಾಗಾರದಿಂದ  ಹೊರಗೆ ಬಂದಾಗ ಒಬ್ಬ ಹುಡುಗ "ಅಯ್ಯೋ! ರಾಜು ರೊಟ್ಟಿ ಮಾಡೋದರಲ್ಲಿ ಮುಳುಗಿಹೋಗಿದ್ದಾನೆ - ಅವನು ಬಾಪೂಜಿಯನ್ನು ನೋಡಲೇ ಇಲ್ಲ!" ಎಂದು ಪೇಚಾಡಿದ. ಬಾಪು ತಕ್ಷಣ " ಇವತ್ತು ಇಲ್ಲಿ ನನ್ನನ್ನು ನಿಜವಾಗಲೂ ಯಾರಾದರೂ ನೋಡಿದ್ದರೆ ಅದು ರೊಟ್ಟಿ ಮಾಡುವ ರಾಜು ಮಾತ್ರ!" ಎಂದರು.