ಆತ್ಮ ಉಳ್ಳವರಿಗಾಗಿ ಸೂಚನೆಗಳು
ಮೂಲ : ಜೋಸೆಫ್ ಫಸಾನೋ ಕನ್ನಡ ಅನುವಾದ: ಸಿ ಪಿ ರವಿಕುಮಾರ್ ಅದನ್ನು ಆಗಾಗ ಹೊರಗೆ ಮಳೆಯಲ್ಲಿ ಕೊಂಡೊಯ್ದು ತೊಯ್ಯಿಸಿ ತೊಳೆಯಿರಿ ಅದರ ಅಗಾಧ ರೆಕ್ಕೆಗಳ ಮೇಲೆ ಕೂಡುವ ಮಣ್ಣುಮಸಿ ಅದು ನಿಮ್ಮನ್ನು ಕೊಲ್ಲಲು ಬಂದಿತಾದರೆ ಅದಕ್ಕೆ ಒಂದೇ ಕಾರಣ ನೀವು ಒಂದು ನಿಮಿಷಕ್ಕಿಂತ ಹೆಚ್ಚು ಕಣ್ಣಲ್ಲಿ ಕಣ್ಣಿಟ್ಟು ನೋಡಲಿಲ್ಲ ಇನ್ನೊಬ್ಬರನ್ನ. ಈ ದೃಷ್ಟಿಗಳ ಮಿಲನ ಅದಕ್ಕೆ ಎಷ್ಟು ಅಗತ್ಯವೆಂದರೆ ದುಂಬಿಗೆ ಅಗತ್ಯವಿದ್ದಷ್ಟು ಹೂತುಟಿಯ ಇಬ್ಬನಿಯ ಸುರೆ. ಆಗಾಗ ಕರೆದೊಯ್ಯಿರಿ ಅದನ್ನು ಪ್ರವಾಸಕ್ಕೆ. ಕಠಿಣವೆನ್ನಿಸುವ ಹೊತ್ತಿಗೆಗಳನ್ನು ಓದಲು ಪ್ರೇರೇಪಿಸಿ. ನೋಡಗೊಡಿ ಕಣ್ಣಲ್ಲಿ ಕಣ್ಣಿಟ್ಟು ಕಡಲಾಳ. ಕೊಡಬಹುದು ಚಿಪ್ಸ್, ಮತ್ತು ನೀರಿಗೆ ವಿಸ್ಕಿ ಬೆರೆಸಿ. ಆದರೆ ಆಗಾಗ ಪವಿತ್ರ ಸ್ಥಾನದ ಮುಂದೆ ಅಡ್ಡ ಬೀಳಲಿ. ಬೇರೇನಿಲ್ಲ ಅದಕ್ಕೆ ಜೀವಿಸುವ ಆಸೆ ಮತ್ತು ಸುಂದರವಾಗುವ ಖಯಾಲಿ. ಬೇರು ಬಿಟ್ಟು ಅರಳುತ್ತದೆ ಅದನ್ನು ಪೋಷಿಸಿದರೆ ತನುಮನಗಳು ಬತ್ತುತ್ತವೆ ಅದನ್ನುಉಪವಾಸ ಕೆಡವಿದರೆ. ಕಿತ್ತು ಬರುತ್ತದೆ ಜಗತ್ತು. ಸ್ತಬ್ಧವಾಗುತ್ತವೆ ಸಂಗೀತ, ನೃತ್ಯ ಪದಗತಿ. ಬೀಳುತ್ತದೆ ಮೇಲಿಂದ ರಾಕೆಟ್. ಅಗ್ನಿಗೆ ಮಕ್ಕಳ ಆಹುತಿ. ಇಲ್ಲಿ ಕೇಳು, ಇನ್ನೂ ಕಾಲ ಮಿಂಚಿಲ್ಲ ಅದನ್ನು ಎಬ್ಬಿಸಲು. ಕೂಗಿ ಕರೆ ಮರೆತುಹೋದ ಹೆಸರುಗಳನ್ನು ಈಗಲೂ: ಕಾಜಾಣ, ಗೊರವಂಕ, ಗುಬ್ಬಿ, ಮುತ್ತುಗ, ಮಂದಾರ ಉಳಿಸಲಾರೆ ಜಗತ್ತನ್ನು ಆದರೆ ತೆರೆದು ನೆಲಮಾಳಿಗೆಯ ದ್ವ...