ಪೋಸ್ಟ್‌ಗಳು

ಬೇಜಾನ್ ಹರಟೆ

ಇಮೇಜ್
  ಬೇಜಾನ್ ಅಂದರೆ ಸಮೃದ್ಧ ಎಂಬ ಅರ್ಥ ಬಂದಿದ್ದು ಹೇಗೋ ತಿಳಿಯದು. ಉದಾಹರಣೆಗೆ "ನಮ್ಮ ಮನೆಯಲ್ಲಿ ಗೋಕುಲಾಷ್ಟಮಿ ಹಬ್ಬಕ್ಕೆ ಬೇಜಾನ್ ತಿಂಡಿ ಮಾಡಿದ್ದಾರೆ" ಎಂದು ಶ್ರೀ ರಾಮಸ್ವಾಮಿ ಅಯ್ಯಂಗಾರ್ ಅವರು ಹೇಳಿದರೆ ಅವರ ಮನೆಯಲ್ಲಿ ಯಥೇಚ್ಛವಾಗಿ ಮಾಡಿದ ಚಕ್ಕುಲಿ, ಕೋಡುಬಳೆ, ತೇಂಗೊಳಲು, ಮುಚ್ಚ್ಚೋರೆ, ಕರಿಗಡುಬು, ಇದೆಲ್ಲವನ್ನೂ ನೀವು ಕಲ್ಪಿಸಿಕೊಳ್ಳಬಹುದು. ಬೇಜಾನ್ ಎಂಬುದು ಇಮಾಮ್ ಸಾಹೇಬರು ಕನ್ನಡಕ್ಕೆ ತಂದಿರಬಹುದಾದ ಪದವಾದ್ದರಿಂದ ಗೋಕುಲಾಷ್ಟಮಿಗೂ ಇಮಾಮ್ ಸಾಬಿಗೂ ನೇರವಾದ ಸಂಬಂಧ ಇಲ್ಲಿ ಸ್ಥಾಪಿತವಾಗಿದ್ದನ್ನೂ ನೀವು ಮನಗಾಣಬಹುದು.  ಜಾನ್ ಎಂದರೆ ಉರ್ದುವಿನಲ್ಲಿ ಪ್ರಾಣ. ಹಾಗೆಂದು ಜಾನೀ ಎಂದು ಒಬ್ಬ ಉರ್ದು ಭಾಷಿಗನು ನಿಮ್ಮನ್ನು ಕರೆದರೆ ಅವನು ನಿಮ್ಮನ್ನು ಪ್ರಾಣಿ ಎಂದು ಮೂದಲಿಸುತ್ತಿಲ್ಲ.  ನೀನು ನನಗೆ ಪ್ರಾಣದಷ್ಟೇ ಪ್ರಿಯ ಎಂದು ಆದರ ಪ್ರಕಟಿಸುತ್ತಿದ್ದಾನೆ.  ರಾಮನು ಸೀತೆಯನ್ನು ಜಾನ್ ಕೀ ಎಂದು ಕರೆಯುತ್ತಿದ್ದದ್ದು ಇದಕ್ಕೇನಾ ಎನ್ನಬೇಡಿ. ಜನಕನ ಮಗಳಾದ್ದರಿಂದ ಅವಳಿಗೆ ಬಂದ ಹೆಸರದು.  ಜಾನ್ವರ್ ಅಂದರೆ ಪ್ರಾಣ ಉಳ್ಳದ್ದು.  ಆದರೆ "ಜಾನ್ ಗಯಾ" ಎಂದರೆ ಪ್ರಾಣ ಹೋಯಿತು ಅನ್ನುವ ಅರ್ಥವಲ್ಲ. ಅವನಿಗೆ ತಿಳಿದು ಹೋಯಿತು ಎನ್ನುವಾಗ ವೋ ಜಾನ್ ಗಯಾ ಎನ್ನಬಹುದು.   ಬೇ ಎಂದರೆ ಉರ್ದುವಿನಲ್ಲಿ ರಹಿತ ಎಂಬ ಅರ್ಥ.  ಉದಾಹಣೆಗಾಗಿ ಬೇಜುಬಾನ್ (ನಾಲಗೆ ಇಲ್ಲದ), ಬೇಕಸೂರ್ (ತಪ್ಪು ಮಾಡಿಲ್ಲದ), ಬೇಶರಮ್ (ನಾಚಿಕೆ ಇಲ್ಲದ) ಇತ್ಯ

ನೆನಪು - ಮಿಸೆಸ್ ಮಂಗಳಂ

 ನನಗೆ ಕಲಿಸಿದ ಅನೇಕ ಗುರುಗಳಲ್ಲಿ ಒಬ್ಬರು ಮಿಸೆಸ್ ಮಂಗಳಂ. ಆರನೇ ಕ್ಲಾಸಿನಲ್ಲಿ ನಮಗೆ ಜಾಗ್ರಫಿ ಮತ್ತು ಏಳನೇ ಕ್ಲಾಸಿನಲ್ಲಿ ಇಂಗ್ಲಿಷ್ ಹೇಳಿಕೊಟ್ಟರು. ಜಾಗ್ರಫಿಯನ್ನು ಬಹಳ ಸ್ವಾರಸ್ಯಕರವಾಗಿ ಪಾಠ ಮಾಡುತ್ತಿದ್ದರು. ಇಂಗ್ಲಿಷ್ ಪಾಠ ಮಾಡುವಾಗ ಅವರು ಆಕ್ಟಿವ್ ಮತ್ತು ಪ್ಯಾಸಿವ್ ವಾಯ್ಸ್ ನಮಗೆ ಹೇಳಿಕೊಟ್ಟ ರೀತಿಯನ್ನು ಎಂದೂ ಮರೆಯಲು ಸಾಧ್ಯವಿಲ್ಲ.   ಬಹಳ ಸ್ಟ್ರಿಕ್ಟ್ ಟೀಚರ್ ಎಂದು ಹೆಸರು ತೆಗೆದುಕೊಂಡಿದ್ದರು.  ನಾನು ಟೆಸ್ಟ್ ಒಂದರಲ್ಲಿ ಬರೆದ ಎಸ್ಸೆ ಅವರಿಗೆ ಇಷ್ಟವಾಗಿಬಿಟ್ಟಿತು.  ಅದನ್ನು ಇತರ ಟೀಚರರ ಮುಂದೆಯೂ ಹೊಗಳಿ ನನ್ನಲ್ಲಿ ಆತ್ಮವಿಶ್ವಾಸ ತುಂಬಿದರು. ದೆಹಲಿಯ ಶಾಲೆಯಾದ್ದರಿಂದ ನಾವು ವಿದ್ಯಾರ್ಥಿಗಳು ಪರಸ್ಪರ ಹಿಂದಿಯಲ್ಲಿ ಮಾತಾಡುವುದು ರೂಢಿಯಾಗಿತ್ತು.  ನಮಗೆ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಲು  ಮಿಸೆಸ್ ಮಂಗಳಂ ನಾನಾ ಬಗೆಯ ಪ್ರೇರಣೆ ಕೊಡುತ್ತಿದ್ದರು. "ತಪ್ಪು ಮಾತಾಡಿದರೂ ಪರವಾಗಿಲ್ಲ, ನಾನು ತಿದ್ದುತ್ತೇನೆ" ಎಂದು ತಿದ್ದುತ್ತಿದ್ದರು. ಇಂಗ್ಲಿಷ್ನಲ್ಲಿ ಮಾತಾಡಿದರೆ ಪಾಯಿಂಟ್ಸ್ ಕೊಡುತ್ತಿದ್ದರು. ಅವರ ಕ್ಲಾಸಿನಲ್ಲಿ ಹಿಂದಿಯಲ್ಲಿ ಮಾತಾಡಿದರೆ ನೆಗೆಟಿವ್ ಪಾಯಿಂಟ್ಸ್ ಕೊಡುತ್ತಿದ್ದರು. ನನಗೆ ಮತ್ತು ಉಷಾ ಎನ್ನುವ ಸಹ ವಿದ್ಯಾರ್ಥಿನಿಗೆ ಕಾಂಪಿಟಿಷನ್ ಇರುತ್ತಿತ್ತು! ಒಮ್ಮೆ ನನಗೆ ತಿಳಿಯದಂತೆ ನಾನು ಹಿಂದಿಯಲ್ಲಿ ಮಾತಾಡಿದ್ದಕ್ಕೆ ನೆಗೆಟಿವ್ ಪಾಯಿಂಟ್ಸ್ ಕೊಟ್ಟರು. ನಾನು ಪ್ರತಿಭಟಿಸಲು ಹೋಗಿ ಮತ್ತೆ ಹಿಂದಿಯಲ್ಲಿ ಮಾ

ನೆನಪು - ಮಿಸೆಸ್ ಶೆಣೈ

 ನನ್ನ ಸ್ಕೂಲ್ ಟೀಚರ್ ಮಿಸೆಸ್ ಶೆಣೈ ನನ್ನನ್ನು ಬಹಳ ಪ್ರೀತಿಯಿಂದ ಕಂಡವರು.  ದೆಹಲಿಯ ಕನ್ನಡ ಶಾಲೆಯಲ್ಲಿದ್ದ ಕೆಲವೇ ಕನ್ನಡ ಶಿಕ್ಷಕರಲ್ಲಿ ಮಿಸೆಸ್ ಮಾಯಾ ಶೆಣೈ ಕೂಡಾ  ಒಬ್ಬರು. ಅವರಿಗೆ ಆಗ ಐವತ್ತರ ವಯಸ್ಸೆಂದು ತೋರುತ್ತದೆ. ಕೂದಲು ಬೆಳ್ಳಗಾಗಿತ್ತು. ಅವರು ಧರಿಸುತ್ತಿದ್ದ ಕನ್ನಡಕದ ಹಿಂದೆ ಕಣ್ಣುಗಳು ಮಿಂಚುತ್ತಿದ್ದವು. ಅವರನ್ನು ಕಂಡರೆ ಎಲ್ಲರೂ ಸ್ವಲ್ಪ ಹೆದರುತ್ತಿದ್ದರು. ಶಿಕ್ಷಕರೂ ಅವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಧ್ವನಿ ಜೋರು. ಸ್ವಾಭಿಮಾನ ಅವರ ಧ್ವನಿಯಲ್ಲಿ ಇಣುಕುತ್ತಿತ್ತು. ನಾನು ಗುಂಡುಗುಂಡಾಗಿದ್ದೇನೆಂಬ ಕಾರಣ ನನ್ನ ಗಲ್ಲದ ಮೇಲೆ ಅವರಿಗೆ ಬಹಳ ಪ್ರೀತಿ. ಗಲ್ಲಗಳನ್ನು ಹಿಂಡಿಯೇ ನನ್ನನ್ನು ಮಾತಾಡಿಸುತ್ತಿದ್ದುದು. ನಮಗೆ ಕನ್ನಡ ಒಂದು ಸಬ್ಜೆಕ್ಟ್ ಇತ್ತು. ಅದನ್ನು ಮಿಸೆಸ್ ಶೆಣೈ ತೆಗೆದುಕೊಳ್ಳುತ್ತಿದ್ದರು. ಇದಲ್ಲದೆ ಆರನೇ ತರಗತಿಯಲ್ಲಿ ನಮಗೆ ಸೋಷಿಯಲ್ ಸ್ಟಡೀಸ್ ಪಾಠ ಮಾಡಿದರು ಎಂದು ನೆನಪು.  ಕನ್ನಡ ಕ್ಲಾಸಿನಲ್ಲಿ ನಾವು ಐದೋ ಆರೋ ಮಕ್ಕಳು ಇರುತ್ತಿದ್ದೆವು, ಅಷ್ಟೇ. ನಮ್ಮನ್ನು ಲೈಬ್ರರಿಯಲ್ಲಿ ಕೂಡಿಸಿಕೊಂಡು ಪಾಠ ಮಾಡುತ್ತಿದ್ದರು.  ಪಾಠದ ಬದಲು ಹರಟೆ, ಕಥೆ ಎಲ್ಲವೂ ನಡೆಯುತ್ತಿತ್ತು! ಲೈಬ್ರರಿಯ ಪುಸ್ತಕಗಳ ಮೇಲೆ ಕಣ್ಣಾಡಿಸಲೂ ನಮಗೆ ಅನುಮತಿ ಇತ್ತು. ನಮಗೆ ಅವರು ಸಾಕಷ್ಟು ಸಲಿಗೆ ಕೊಟ್ಟುಬಿಟ್ಟಿದ್ದರು! ಉಷಾ, ಸಂಧ್ಯಾ ಎನ್ನುವ ಹುಡುಗಿಯರು ಇದ್ದರು. ಅವರು ಮಿಸೆಸ್ ಶೆಣೈ ಅವರ ಸೀರೆ ಬಹಳ ಚೆನ್ನಾಗಿದೆ ಎಂದರೆ ಅವರ

ನಡೆ ಮುಂದೆ ನೀನೊಬ್ಬನೇ!

ಮೂಲ ಕವಿತೆ: ರಬೀಂದ್ರನಾಥ  ಟ್ಯಾಗೋರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ನೀನು ಕರೆದಾಗ ಯಾರೂ ಓ ಎನ್ನಲಿಲ್ಲವೇ? ಮೇಲೆದ್ದು ನಡೆ ಮುಂದೆ ನೀನೊಬ್ಬನೇ! ಒಂಟಿಯಾದರೇನಂತೆ, ನಡೆ ಮುಂದೆ ಒಬ್ಬನೇ, ಮೇಲೆದ್ದು ನಡೆ ಮುಂದೆ ನೀನೊಬ್ಬನೇ! ನಿನ್ನ ಮಾತಿಗೆ ಯಾರೂ ಉತ್ತರಿಸಲಿಲ್ಲವೇ? ಅವರು ತಳೆದರೆ ಮೌನ? ಬಾಯ್ಬಿಡಲು ಹೆದರಿದರೆ? ಮುಕ್ತಕಂಠದಿಂದ ನೀನು ಮಾತಾಡಲು ಬಾಯ್ತೆರೆ! ಮೌನದಲ್ಲಿ ನಿನಗೆ ನಿನ್ನ ದನಿಯೇ ಆಸರೆ! ಕಾಡುದಾರಿಯಲ್ಲಿ ಎಲ್ಲ ನಿನ್ನ ಬಿಟ್ಟು ಅಗಲಿದರೆ? ಕಗ್ಗತ್ತಲಿನಲ್ಲಿ ನಿನ್ನ ಒಂಟಿ ಬಿಟ್ಟು ನಡೆದರೆ? ಮುಳ್ಳುಹಾದಿಯಲ್ಲಿ ಪಾದರಕ್ಷೆ ಇಲ್ಲದಿದ್ದರೆ  ರಕ್ತಸಿಕ್ತ ಪಾದದಿಂದ ತುಳಿದು ಮುಳ್ಳು ನಡೆ! ಸುರಿವ ಮಳೆಯ ಕಾಳರಾತ್ರಿ, ದೀಪವಿಲ್ಲ, ಕತ್ತಲೆ! ಸುಸ್ವಾಗತ ಕೋರದಂತೆ ಬಾಗಿಲುಗಳು ಮುಚ್ಚಿವೆ! ನಿನ್ನ ನೋವು ಸಿಡಿಲಿನಂತೆ, ಅದರೊಳಗಡೆ ಕಿಚ್ಚಿದೆ! ಹಚ್ಚಿ ನಿನ್ನ ಹೃದಯ-ದೊಂದಿ ಬೆಳಕಿನಲ್ಲಿ ನಡೆ! ನೀನು ಕರೆದಾಗ ಯಾರೂ ಓ ಎನ್ನಲಿಲ್ಲವೇ? ಮೇಲೆದ್ದು ನಡೆ ಮುಂದೆ ನೀನೊಬ್ಬನೇ! ಒಂಟಿಯಾದರೇನಂತೆ, ನಡೆ ಮುಂದೆ ಒಬ್ಬನೇ, ಮೇಲೆದ್ದು ನಡೆ ಮುಂದೆ ನೀನೊಬ್ಬನೇ!

ಸೋನಾ ಮೇಡಂ

 ಮೂಲ: ಗೌರವ್ ಪಾಂಡೆ (ಹಿಂದಿ) ಬಹಳ ಒಳ್ಳೆಯವರು ಸೋನಾ ಮೇಡಂ! ಸದಾ ಮುಗುಳ್ನಗುತ್ತ ಮುಗುಳ್ನಗೆಗೆ ಉಪಮೆ. ವಿದ್ಯಾರ್ಥಿಗಳ ಅಚ್ಚುಮೆಚ್ಚು ಅವರ ಸರಳತೆ ಅವರ ಆತ್ಮೀಯತೆ ಮತ್ತು ಸ್ನೇಹ ಸೂಸುವ ಮುಗುಳ್ನಗೆ. ನಿಮ್ಮ ಮುಗುಳ್ನಗೆಯ ರಹಸ್ಯ ಏನೆಂದು ಕೇಳುತ್ತಾರೆ ಸಹ ಅಧ್ಯಾಪಕರು. ಮುಗುಳ್ನಗೆಯ ಉತ್ತರ ನೀಡಿ  ಸುಮ್ಮನಾಗುತ್ತಾರೆ ಸೋನಾ ಮೇಡಂ! ಮಕ್ಕಳಿಗೆ ಪ್ರೀತಿಯಿಂದ ಕಲಿಸುತ್ರಾರೆ  ಸೋನಾ ಮೇಡಂ  ಎಂದೂ ಹೊಡೆದಿಲ್ಲ ಒಂದು ಏಟು. ಮನೆಗೆ ಮರಳುವಾಗ ಹೊಡೆತದ ವಿಷಯ ಯೋಚಿಸಿಯೇ  ನಡುಗುತ್ತಾರೆ ಸೋನಾ ಮೇಡಂ.

ವಿಲಿಯಂ ಹರ್ಷಲ್

ವಿಲಿಯಂ ಹರ್ಷಲ್ ಮೂಲತಃ ಒಬ್ಬ ಸಂಗೀತಗಾರ.  ೧೭೩೮ರಲ್ಲಿ ಜರ್ಮನಿಯ ಹ್ಯಾನೋವರ್ ನಗರದಲ್ಲಿ ಹುಟ್ಟಿದ. ಹತ್ತೊಂಬತ್ತರ ವರ್ಷದಲ್ಲಿ ಅವನಿಗೆ ಮಿಲಿಟರಿ ಸೇವೆಗೆ ಕರೆ ಬಂತು. ಅದನ್ನು ತಪ್ಪಿಸಿಕೊಂಡು ಇಂಗ್ಲೆಂಡ್ ದೇಶಕ್ಕೆ ಓಡಿಹೋದ.  ಈಗಾಗಲೇ ಅವನು ಜರ್ಮನಿಯಲ್ಲಿ ಉತ್ತಮ ಸಂಗೀತಗಾರ ಎನ್ನಿಸಿಸಿಕೊಂಡಿದ್ದ. ತನ್ನ ಸಂಗೀತ ವೃತ್ತಿಯನ್ನು ಇಂಗ್ಲೆಂಡ್ ದೇಶದಲ್ಲಿ ಮುಂದುವರೆಸಿದ. ಇಪ್ಪತ್ತೆಂಟನೇ ವರ್ಷದಲ್ಲಿ ಅವನಿಗೆ ಬಾತ್ ಚರ್ಚಿನಲ್ಲಿ ಸಂಗೀತ ನುಡಿಸುವ ಕೆಲಸ ಸಿಕ್ಕಿತು.  ಇಲ್ಲಿ ಅವನಿಗೆ ಒಳ್ಳೆಯ ಸಂಬಳ ಕೂಡಾ ಸಿಕ್ಕುತ್ತಿತ್ತು. ಹೀಗಾಗಿ ಖಗೋಳ ಶಾಸ್ತ್ರದಲ್ಲಿ ತನಗಿದ್ದ ಆಸಕ್ತಿಯನ್ನು ಮುಂದುವರೆಸಲು ಅನುಕೂಲವಾಯಿತು.  ಅವನ ಸಹೋದರಿ ಕ್ಯಾರೊಲಿನ್ ೧೭೭೨ರಲ್ಲಿ ಅವನ ಜೊತೆ ವಾಸ ಮಾಡಲು ಬಂದಳು. ಖಗೋಳ ಶಾಸ್ತ್ರ, ಗಣಿತ, ಮತ್ತು ದೃಷ್ಟಿವಿದ್ಯೆಯ ಬಗ್ಗೆ ನೂರಾರು ಪುಸ್ತಕಗಳನ್ನು ವಿಲಿಯಂ ಈಗಾಗಲೇ ಓದಿದ್ದ.  ಒಂದು ಟೆಲಿಸ್ಕೋಪ್ ಕೊಂಡುಕೊಂಡಿದ್ದ. ರಾತ್ರಿಯ ಹೊತ್ತು ಆಕಾಶವನ್ನು ನೋಡುತ್ತಾ ಬಹಳ ಹೊತ್ತು ಕುಳಿತುಕೊಳ್ಳುತ್ತಿದ್ದ.  ಖಗೋಳದಲ್ಲಿ ತನ್ನ ಅಣ್ಣನ ಆಸಕ್ತಿಯನ್ನು ಕಂಡ ಕ್ಯಾರೊಲಿನ್ ತಾನೂ ಅದೇ ಕ್ಷೇತ್ರದ ಬಗ್ಗೆ ಉತ್ಸಾಹ ತಳೆದಳು.  ಅವಳೂ ಸಂಗೀತದಲ್ಲಿ ಪರಿಣತಿ ಹೊಂದಿದ್ದವಳು. ಅಣ್ಣನಿಗೆ ಚರ್ಚಿನಲ್ಲಿ ಸಹಾಯ ಮಾಡಲು ಅವಳು ಮುಂದಾದಳು.  ಅವನು ಆರ್ಕೆಸ್ಟ್ರಾ ರಚಿಸಿದಾಗ ಸಂಗೀತವನ್ನು ಬರೆದಿಡುವುದು ಮುಂತಾದ ಕೆಲಸಗಳಲ್ಲಿ ಅವಳು ನೆರವಾಗುತ್ತಿದ್ದಳು. ಕ್ಯಾ

ನವವಧು

ಇಮೇಜ್
ಅಮ್ಮ ಮನೆಯ ನೆಲವನ್ನು ನೆನ್ನೆ ಸಗಣಿಯಿಂದ ಸಾರಿಸಿದ್ದಾಳೆ. ಇವತ್ತು ಮನೆಯ ಹೊಸಲಿಗೆ ಕೆಮ್ಮಣ್ಣು ಬಳಿಯುವ ಕೆಲಸ ಮಾಡುತ್ತಿದ್ದಾಳೆ. ನಾಳೆ ಮನೆಯ ಗೋಡೆಗೆ ಕೆರೆಯ ಮಣ್ಣನ್ನು ಸಾರಿಸುವ ಕೆಲಸ ಇಟ್ಟುಕೊಂಡಿದ್ದಾಳೆ.  ಮನೆಗೆ ಸೊಸೆಯನ್ನು ಕರೆತರಲು ತಯಾರಿ ನಡೆದಿದೆ. ಮಣ್ಣಿನ ಹಣತೆಗಳು ಅಟ್ಟದ ಡಬ್ಬದಿಂದ ಕೆಳಗಿಳಿದಿವೆ. ಅಮ್ಮನ ಕೆಲಸ ನೋಡುತ್ತಾ ನನ್ನಲ್ಲಿರುವ ಕವಿ ಜಾಗೃತನಾಗುತ್ತಾನೆ.  ಒಂದೆರಡು ಸಾಲುಗಳು ನನ್ನ ಮನಸ್ಸಿನಲ್ಲಿ ಮೂಡುತ್ತವೆ. “ಸೊಸೆಯ ಸ್ವಾಗತಕ್ಕೆ ಅಮ್ಮ ಮಾಡುತ್ತಿದ್ದಾಳೆ ಮನೆಯ ಗತಕಾಲಕ್ಕೆ ಸಾರಣೆ, ವರ್ತಮಾನಕ್ಕೆ ಲೇಪನ ಮತ್ತು ಮನೆಯ ಉಜ್ವಲ ಭವಿಷ್ಯಕ್ಕಾಗಿ ಹಣತೆಗಳ ಪ್ರಕ್ಷಾಲನ”. ಎಷ್ಟೋ ವರ್ಷಗಳ ಹಿಂದೆ ಅಮ್ಮ ಇದೇ ಮನೆಗೆ ಕಾಲಿಟ್ಟಳು. ಅವಳ ಅತ್ತೆ ಅವಳನ್ನು ಬರಮಾಡಿಕೊಳ್ಳಲು ಹೀಗೇ ಮನೆಯನ್ನು ಸಾರಿಸಿ ಬಳಿದು ಸ್ವಚ್ಛಗೊಳಿಸಿ ರಂಗವಲ್ಲಿ ಬಿಡಿಸಿದ್ದಳು. ಎಲ್ಲಿ ಹಜ್ಜೆ ಇಡಲೆಂದು ತೋರದೆ ಅಮ್ಮ ಅಪ್ಪನ ಹಿಂದೆ ಹಿಂದೆ ಒಳಗೊಳಗೇ ಕಂಪಿಸುತ್ತಾ ಹಗುರವಾಗಿ ನಡೆಯುತ್ತಿರುವ ಚಿತ್ರ ನನ್ನ ಮನೋಭಿತ್ತಿಯ ಮೇಲೆ ಮಸುಕಾಗಿ ಮೂಡಿತು. ಅವಳು ಹದಿನಾರು ವರ್ಷದ ಹುಡುಗಿ. ಮನೆಯ ಏಕಮಾತ್ರ ಸೊಸೆ. ಇಡೀ ಮನೆಯ ಜವಾಬ್ದಾರಿಯನ್ನು ಅವಳೇ ಹೊರಬೇಕು. ಅದೆಷ್ಟು ಹೊಸ ಕೆಲಸಗಳನ್ನು ಕಲಿಯಬೇಕು, ಹೊಸ ಅನುಭವಗಳಿಗೆ ತನ್ನನ್ನು ಒಡ್ಡಿಕೊಳ್ಳಬೇಕು! ಅವಳು ಒಳಗೊಳಗೇ ಕಂಪಿಸಿದ್ದರೆ ಅದರಲ್ಲಿ ಏನು ಆಶ್ಚರ್ಯವಿದೆ? ಅವಳು ಇವನ್ನೆಲ್ಲ ಸಂಭಾಳಿಸಿಕೊಂಡು ಸಾಗಬಲ್ಲಳೇ? ಬಿದ್