ಪೋಸ್ಟ್‌ಗಳು

ನಡುಗುವ ಜನರಿಗೆ

ಇಮೇಜ್
ಕವಿಗಳು ಅತ್ಯಂತ ಧೈರ್ಯಶಾಲಿಗಳ ಸಾಲಿನಲ್ಲಿ ನಿಲ್ಲುತ್ತೇವೆ. ಬೇರೆಯವರು ಮುಚ್ಚಿಡುವುದನ್ನು ನಾವು ಬಿಚ್ಚಿ ತೋರುತ್ತೇವೆ ನಾಜೂಕಾದದ್ದನ್ನು ಮೇಲೆತ್ತಿ ಅದರ ಮೇಲೆ ಬೆಳಕು ಚೆಲ್ಲಿ ಪಿಸುಗುಡುತ್ತೇವೆ "ನೋಡಿ, ಅನುಭವಿಸುವುದು ಎಂದರೆ ಇದೇ." ಹೃದಯ ಛಿದ್ರವಾದಾಗಲೂ ಅದಕ್ಕೆ ನೀಡುತ್ತೇವೆ  ಭಾಷೆಯ ಬ್ಯಾಂಡೇಜು ಹತ್ತಿ ಎಷ್ಟೇ ಉರಿಯಾದರೂ ಮಸಿಯು ಔಷಧವೆಂಬ ನಂಬಿಕೆ ಬಿತ್ತಿ  ಬರವಣಿಗೆ ಮುಂದುವರೆಸುತ್ತೇವೆ,  ಏಕೆಂದರೆ ಎಲ್ಲಾದರೂ ಇದ್ದಾರು ಜನ ಯಾರಿಗೆ ಬೇಕೋ ತಮ್ಮಂತೆ ನಡುಗುವವರು ಇನ್ನೂ ಇದ್ದಾರೆಂಬ ಸಾಂತ್ವನ. ಮೂಲ: ತಾಲಿಯಾ ಕ್ಲೆಮ್  ಕನ್ನಡಕ್ಕೆ: ಸಿ ಪಿ ರವಿಕುಮಾರ್

ಪ್ರೇತನರ್ತನ

ಇಮೇಜ್
 ಈಗ ಮಾಧ್ಯಮದಲ್ಲಿ ಪ್ರತಿನಿತ್ಯ ಪ್ರೇತಗಳ ನರ್ತನ ಎಪ್ಸ್ಟೀನ್ ಮಾಡಿದ ಪಾಪಗಳ ಪುನರಾವರ್ತನ ಒಳ್ಳೆಯ ಕಾರ್ಯಗಳನ್ನು ನೆನಪಿಡಲಾರರು ಜನ ಕೆಟ್ಟದ್ದನ್ನು ಕಾಪಾಡುವರು ನೆನೆಯುವರು ಅನುದಿನ ಹೇಗೆ ವೃದ್ಧಿಸುವುದೋ ಬ್ಯಾಂಕಿನಲ್ಲಿಟ್ಟ ಹಣ ಹಾಗೇ ಬಡ್ಡಿ ಗಳಿಸುವುದು ಕೂಡಿಟ್ಟ ಋಣ ನೀವು ದೊಡ್ಡವರೆಂದು ನಂಬಿದ್ದ ವಿದ್ವಜ್ಜನ ಮುಖವಾಡ ಕಳಚಿ ನೈಜದ ಅನಾವರಣ ಕೊಟ್ಟುಬಿಟ್ಟಿದ್ದೇವೆ ಇವರಲ್ಲಿ ಹಲವರಿಗೆ ಪದ್ಮಭೂಷಣ  ಅವಾರ್ಡ್ ವಾಪಸಿಗೆ ಈಗ ಅತ್ಯಂತ ಸೂಕ್ತ ಕ್ಷಣ

ಮೂರು ವ್ಯಾಲೆಂಟೈನ್ ಗುಲಾಬಿಗಳು

ಇಮೇಜ್
  ಮೂರು ವ್ಯಾಲೆಂಟೈನ್ ಗುಲಾಬಿಗಳು (೧) "ಕಾಸಿಮಿರ್! ಕಾಸಿಮೀರ್! ಎಲ್ಲಿ ಹೋದ ಈ ಹುಡುಗ!"  ತಾಯಿ ತನ್ನ ಮಗನನ್ನು ಜೋರಾಗಿ ಕರೆಯುತ್ತಾ ತಲೆಬಾಗಿಲಿನ ಹತ್ತಿರ ಬಂದಳು. ಅವರದ್ದು ದೊಡ್ಡ ಮನೆ. ಮಹಡಿಯ ಮೂರು ಕೋಣೆಗಳಲ್ಲದೆ ಕೆಳಗೆ ನಾಲ್ಕು ಕೋಣೆಗಳು, ದೊಡ್ಡ ಬೈಠಕ್ ಖಾನೆ. ಆರು ಮಕ್ಕಳ ದೊಡ್ಡ ಸಂಸಾರ. ಕಾಸಿಮಿರ್ ಹಿರಿಯ ಮಗ. ತಂದೆತಾಯಿಯ ಅಚ್ಚುಮೆಚ್ಚು. ಗಣಿತದಲ್ಲಿ ಅವನು ತುಂಬಾ ಪ್ರತಿಭಾಶಾಲಿ ಎಂದು ಅವನ ಶಾಲೆಯ ಉಪಾಧ್ಯಾಯರು ಮನೆಗೇ ಬಂದು ತಿಳಿಸಿದ್ದರು. "ನಿಮ್ಮ ಹುಡುಗ ಮುಂದೆ ಖಂಡಿತಾ ದೊಡ್ಡ ಗಣಿತಶಾಸ್ತ್ರಜ್ಞ ಆಗುತ್ತಾನೆ, ನೋಡುತ್ತಿರಿ! ಅವನನ್ನು ಮುಂದೆ ಓದಿಸಿ. ಕಾಲೇಜಿಗೆ ಹೋಗಿ ಪಿಎಚ್. ಡಿ. ಮಾಡಲಿ. ನಾನು ಈ ಮಾತನ್ನು ಎಲ್ಲಾ ಪೋಷಕರಿಗೂ ಹೇಳುವುದಿಲ್ಲ!" ಎಂದು ಪ್ರೊ. ಕಮಿನ್ಸ್ಕಿ ಹೇಳುತ್ತಿದ್ದಾಗ ತಾಯಿಯ ಎದೆ ಹೆಮ್ಮೆಯಿಂದ ಉಬ್ಬಿತು. ಅವಳು ತಟ್ಟೆಯಲ್ಲಿ ಎಲೆಕೋಸಿನ ಖಾದ್ಯಗಳನ್ನು ತಂದಿಟ್ಟಳು. ಬಟ್ಟಲಿಗೆ ಬಿಸಿ ಚಹಾ ಸುರಿದು "ದಯವಿಟ್ಟು ಸ್ವೀಕರಿಸಿ" ಎಂದಳು. ಪ್ರೊ. ಕಮಿನ್ಸ್ಕಿ ತೆರಳಿದ ಮೇಲೆ ಅವಳು ಪತಿಯ ಕಡೆ ನೋಡಿ "ನಮ್ಮ ಕಾಸಿಮಿರ್ ಖಂಡಿತಾ ಪೋಲೆಂಡ್ ದೇಶಕ್ಕೆ ಹೆಸರು ತರುತ್ತಾನೆ!" ಎಂದಳು. ಹಳೆಯದನ್ನೆಲ್ಲ ನೆನೆದು ಅವಳ ಕಂಠ ಗದ್ಗದವಾಯಿತು. ಕ್ಯಾಸಿಮಿರಾ ಮನೆಯ ಬಾಗಿಲಿನಲ್ಲಿ ನಿಂತು ಸುತ್ತಲೂ ನೋಡಿದಳು. ದೂರದಲ್ಲಿ ಕ್ಯಾಸಿಮಿರ್ ಬರುತ್ತಿದ್ದುದು ಕಾಣಿಸಿತು. ಅವನ ಕೈಯಲ್ಲಿ ಪುಸ...

ಆತ್ಮ ಉಳ್ಳವರಿಗಾಗಿ ಸೂಚನೆಗಳು

ಇಮೇಜ್
  ಮೂಲ : ಜೋಸೆಫ್ ಫಸಾನೋ  ಕನ್ನಡ ಅನುವಾದ: ಸಿ ಪಿ ರವಿಕುಮಾರ್  ಅದನ್ನು ಆಗಾಗ ಹೊರಗೆ ಮಳೆಯಲ್ಲಿ ಕೊಂಡೊಯ್ದು ತೊಯ್ಯಿಸಿ  ತೊಳೆಯಿರಿ ಅದರ ಅಗಾಧ ರೆಕ್ಕೆಗಳ ಮೇಲೆ ಕೂಡುವ ಮಣ್ಣುಮಸಿ  ಅದು ನಿಮ್ಮನ್ನು ಕೊಲ್ಲಲು ಬಂದಿತಾದರೆ ಅದಕ್ಕೆ ಒಂದೇ ಕಾರಣ ನೀವು ಒಂದು ನಿಮಿಷಕ್ಕಿಂತ ಹೆಚ್ಚು ಕಣ್ಣಲ್ಲಿ ಕಣ್ಣಿಟ್ಟು ನೋಡಲಿಲ್ಲ ಇನ್ನೊಬ್ಬರನ್ನ. ಈ ದೃಷ್ಟಿಗಳ ಮಿಲನ ಅದಕ್ಕೆ ಎಷ್ಟು ಅಗತ್ಯವೆಂದರೆ ದುಂಬಿಗೆ ಅಗತ್ಯವಿದ್ದಷ್ಟು ಹೂತುಟಿಯ ಇಬ್ಬನಿಯ ಸುರೆ. ಆಗಾಗ ಕರೆದೊಯ್ಯಿರಿ ಅದನ್ನು ಪ್ರವಾಸಕ್ಕೆ.  ಕಠಿಣವೆನ್ನಿಸುವ ಹೊತ್ತಿಗೆಗಳನ್ನು ಓದಲು ಪ್ರೇರೇಪಿಸಿ. ನೋಡಗೊಡಿ ಕಣ್ಣಲ್ಲಿ ಕಣ್ಣಿಟ್ಟು ಕಡಲಾಳ. ಕೊಡಬಹುದು ಚಿಪ್ಸ್, ಮತ್ತು ನೀರಿಗೆ ವಿಸ್ಕಿ ಬೆರೆಸಿ. ಆದರೆ ಆಗಾಗ ಪವಿತ್ರ ಸ್ಥಾನದ ಮುಂದೆ ಅಡ್ಡ ಬೀಳಲಿ. ಬೇರೇನಿಲ್ಲ ಅದಕ್ಕೆ ಜೀವಿಸುವ ಆಸೆ ಮತ್ತು ಸುಂದರವಾಗುವ ಖಯಾಲಿ. ಬೇರು ಬಿಟ್ಟು ಅರಳುತ್ತದೆ ಅದನ್ನು ಪೋಷಿಸಿದರೆ ತನುಮನಗಳು ಬತ್ತುತ್ತವೆ ಅದನ್ನುಉಪವಾಸ ಕೆಡವಿದರೆ. ಕಿತ್ತು ಬರುತ್ತದೆ ಜಗತ್ತು. ಸ್ತಬ್ಧವಾಗುತ್ತವೆ ಸಂಗೀತ, ನೃತ್ಯ ಪದಗತಿ. ಬೀಳುತ್ತದೆ ಮೇಲಿಂದ ರಾಕೆಟ್. ಅಗ್ನಿಗೆ ಮಕ್ಕಳ ಆಹುತಿ. ಇಲ್ಲಿ ಕೇಳು, ಇನ್ನೂ ಕಾಲ ಮಿಂಚಿಲ್ಲ  ಅದನ್ನು ಎಬ್ಬಿಸಲು. ಕೂಗಿ ಕರೆ ಮರೆತುಹೋದ ಹೆಸರುಗಳನ್ನು ಈಗಲೂ: ಕಾಜಾಣ, ಗೊರವಂಕ, ಗುಬ್ಬಿ, ಮುತ್ತುಗ, ಮಂದಾರ ಉಳಿಸಲಾರೆ ಜಗತ್ತನ್ನು ಆದರೆ ತೆರೆದು ನೆಲಮಾಳಿಗೆಯ ದ್ವ...

ಸರ್ವಾಧಿಕಾರಿಯ ಮೃತ್ಯುಶಾಸನ

 ಸರ್ವಾಧಿಕಾರಿಯ ಮೃತ್ಯುಶಾಸನ ಅವನು ಹುಡುಕಾಡುತ್ತಿದ್ದ ವಸ್ತು: ಒಂದು ಬಗೆಯ ಪರಿಪೂರ್ಣತೆ ನೇರವಾಗಿ ಮುಟ್ಟುವಂತಿತ್ತು ಅವನು ಹುಟ್ಟುಹಾಕಿದ ಕವಿತೆ ಜನರು ಏನೇನು ಮಾಡಿಕೊಳ್ಳುತ್ತಾರೆ ಎಡವಟ್ಟು ಎಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಅವನಿಗೆ ಇದ್ದ ಪ್ರಮುಖ ಆಸಕ್ತಿ  ಸೈನ್ಯಗಳು, ನೌಕೆಗಳು, ಪರಮಾಣುಶಕ್ತಿ. ಅವನು ನಕ್ಕಾಗ ಪಕ್ಕದಲ್ಲಿದ್ದ ಗೌರವಾನ್ವಿತ ನಾಯಕರ ಹಿಂಡು ಕೇಕೆ ಹಾಕುತ್ತಾ ನಗುತ್ತಿತ್ತು ಪಕ್ಕೆ ಹಿಡಿದುಕೊಂಡು ಅವನು ಅತ್ತಾಗ ಏನೆಂದರೆ ಉಂಟಾಗುತ್ತಿದ್ದ ಪರಿಣಾಮ  ಬೀದಿ ಬೀದಿಗಳಲ್ಲಿ ಬೀಳುವ ಪುಟ್ಟ ಮಕ್ಕಳ ಹೆಣ. ಮೂಲ: ಡಬ್ಲ್ಯೂ ಎಚ್ ಆಡೆನ್  ಅನುವಾದ: ಸಿ ಪಿ ರವಿಕುಮಾರ್

ವಿಕ್ಟರ್

ಇಮೇಜ್
ಮೂಲ ಇಂಗ್ಲಿಷ್ ಕವಿತೆ: ಡಬ್ಲ್ಯೂ.ಎಚ್. ಆಡೆನ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಈ ಜಗತ್ತನ್ನು ಹೊಕ್ಕಾಗ  ವಿಕ್ಟರ್ ಎಂಬ ಪುಟ್ಟ ಮಗು ತೊಡೆಯ ಮೇಲಿಟ್ಟುಕೊಂಡು ಅಪ್ಪ ಅಂದಿದ್ದು: "ಕುಲದ ಹೆಸರನ್ನು ಕೆಡಿಸದಿರು ಎಂದೂ" ಅಪ್ಪನ ಕಡೆಗೆ ನೋಡಿದನು ವಿಕ್ಟರ್ ಪಿಳಿಪಿಳಿ ತನ್ನ ಕಣ್ಣುಗಳ ಅರಳಿಸಿ ಅಪ್ಪನೆಂದ: "ನನ್ನ ಒಬ್ಬನೇ ಮಗ ವಿಕ್ಟರ್, ಜೀವನದಲ್ಲಿ ಎಂದಿಗೂ ನುಡಿಯದಿರು ಹುಸಿ" ಹೊರಟಾಗ ವಿಕ್ಟರ್ ಅಪ್ಪನ ಜೊತೆಗೆ ವಾಯುವಿಹಾರಕ್ಕೆ ಕುದುರೆ ಬಂಡಿಯಲ್ಲಿ ಕುಳಿತು ಅಪ್ಪ ಜೋಬಿನಿಂದ ತೆಗೆದು ಬೈಬಲ್ ಓದಿದ: "ಶುದ್ಧಹೃದಯರಿಗೆ ಸಿಕ್ಕುವುದು ದೈವಾಶೀರ್ವಾದ" ಅದೊಂದು ಕೊರೆವ ಡಿಸೆಂಬರ್ ತಿಂಗಳು ವಿಕ್ಟರ್ ಗೆ ಇನ್ನೂ ಪ್ರಾಯ ಹದಿನೆಂಟು ಮುದ್ದಾಗಿತ್ತು ಆದರೂ ಅವನ ಕೈಬರವಣಿಗೆ ಮತ್ತು ಶುದ್ಧವಾಗಿದ್ದವು ಅವನ ಮಣಿಕಟ್ಟು ದ ಪೆವೆರಿಲ್ ಎಂಬ ಮರ್ಯಾದಸ್ತರ ಲಾಡ್ಜ್ ಅಲ್ಲಿ ವಿಕ್ಟರ್ ಮಾಡಿಕೊಂಡಿದ್ದ ಪುಟ್ಟ ಕೋಣೆ ಕಾಲವು ಅವನ ಮೇಲೆ ಕಣ್ಣಿಟ್ಟಿತ್ತು ಪ್ರತಿದಿನವೂ ಬೆಕ್ಕು ಕಣ್ಣಿಟ್ಟಂತೆ ಇಲಿಯ ಮೇಲೆ ಹೆಗಲ ಮೇಲೆ ಕೈಯಿಟ್ಟು ಸಹೋದ್ಯೋಗಿಗಳು "ವಿಕ್ಟರ್! ಹೆಣ್ಣಿನ ಸಂಗ ಮಾಡಿರುವೆಯಾ ಎಂದಾದರೂ? ನಡೆ ನಮ್ಮ ಜೊತೆ ಶನಿವಾರ ರಾತ್ರಿ ಪೇಟೆಗೆ!" ಎಂದಾಗ ತಲೆ ಅಲ್ಲಾಡಿಸುತ್ತಿದ್ದ ಮುಗುಳ್ನಕ್ಕು ಕೊರೋನಾ ಸಿಗಾರ್ ಸೇದುವ ಮ್ಯಾನೇಜರ್ ಎಂದ: "ಅಯ್ಯೋ ಅವನೊಬ್ಬ ಸಾಧು ಪ್ರಾಣಿ! ಅಷ್ಟೊಂದು ಮುಂದುವರೆವ...

ಕರುಣಿಸು ಅರೋಚಕ ಕಾಲಮಾನವನ್ನು

ಇಮೇಜ್
  ಕರುಣಿಸು ಪ್ರಭೂ ಒಂದು ನಿಧಾನ ಸುದ್ದಿಯ ದಿನವ, ಕಾಲ ಸರಿಯುವುದನ್ನು ಹೊರತು  ಕಾಫಿ ಕುಡಿಯುವುದನ್ನು ಬಿಟ್ಟು ಟಿವಿಯಲ್ಲಿ ಯಾವುದೋ ಹಳೆಯ ಧಾರಾವಾಹಿ  ನೋಡುವುದನ್ನು ಹೊರತಾಗಿ ಹೆಚ್ಚೇನೂ ನಡೆಯದ ನಿಶ್ಶಬ್ದ ನಿರಾಡಂಬರ ದಿವಸವೊಂದನ್ನು. ಕರುಣಿಸು ಸುದ್ದಿಗಳಿಲ್ಲದ ಒಂದು ದಿನವ, ತಲೆಗೊಂದು ಹರಟೆ  ಬುಡವಿಲ್ಲದ ಅಭಿಪ್ರಾಯ ಐರುಗೈರುಗಳಿಂದ ಕೇಳಬೇಕಾದ ದಿನವ. ಏನೂ ಜರುಗಲೇ ಬಾರದು ಅಂಥ ದಿವಸ, ಹೆಚ್ಚೆಂದರೆ ಒಂದೆರಡು ಗಂಟೆ ಒಡನಾಟ, ಸ್ಥಳೀಯ ಹವಾಮಾನದ ಕಡೆ ಕಣ್ಣೋಟ, ನೆನಪಿನಲ್ಲಿಡಲು ಪ್ರಯಾಸ ಪಡಬೇಕಾದ ದಿವಸ. ಮೂಲ: ಬ್ರಯಾನ್ ಬಿಲ್ಸ್ಟನ್  ಕನ್ನಡಕ್ಕೆ : ಸಿ ಪಿ ರವಿಕುಮಾರ್