ಪೋಸ್ಟ್‌ಗಳು

ಸೆಪ್ಟೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಶ್ರೀಮಂತ ರೂಪದರ್ಶಿ - 1

ಇಮೇಜ್
  ಮೂಲ ಇಂಗ್ಲಿಷ್ ಕತೆ -  ಆಸ್ಕರ್ ವೈಲ್ಡ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಕೈಯಲ್ಲಿ ದುಡ್ಡಿಲ್ಲದಿದ್ದರೆ ನೋಡಲು ಚೆನ್ನಾಗಿದ್ದರೇನು ಬಂತು? ಪ್ರೀತಿ-ಪ್ರೇಮ ಎಲ್ಲವೂ ದುಡ್ಡಿದ್ದವರಿಗೆ ಸರಿ; ಕೆಲಸ-ಬೊಗಸವಿಲ್ಲದವರಿಗೆ ಇದೆಲ್ಲಾ ಕಟ್ಟಿಕೊಂಡು ಏನಾಗಬೇಕಿದೆ? ಬಡವಾ ನೀನು ಮಡಗಿದಲ್ಲಿರು ಅಂತ ಸುಮ್ಮನೆ ಹೇಳುತ್ತಾರೆಯೇ? ಆಹಾ ಇವನೆಷ್ಟು ಚೆಲುವ ಎಂದು ಜನ ಹೊಗಳುವಷ್ಟು ಆಕರ್ಷಕವಾಗಿರುವ ಬದಲು ತಿಂಗಳಿಗೆ ಒಂದಿಷ್ಟು ಆದಾಯವಿರುವುದು ಎಷ್ಟೋ ಮೇಲು. ಆಧುನಿಕ ಜೀವನದ ಇಂತಹ ಮಹಾನ್ ಸತ್ಯಗಳನ್ನು ಹ್ಯೂಯಿ ಎರ್ಸ್ಕಿನ್ ಅರಿತುಕೊಂಡಿರಲಿಲ್ಲ.  ಹ್ಯೂಯಿ ಒಬ್ಬ ಪಾಪದ ಪ್ರಾಣಿ! ಓದು-ಬರಹ ಅಷ್ಟೇನೂ ತಲೆಗೆ ಹತ್ತಲಿಲ್ಲ. ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ಹೇಳಿಕೊಳ್ಳುವಂಥ ಸಾಧನೆಯನ್ನೇನೂ ಅವನು ಮಾಡಲಿಲ್ಲ. ಆದರೆ ದೇವರು ಅವನಿಗೆ ರೂಪವನ್ನು ಧಾರಾಳವಾಗಿ ಸುರಿದು ಕಳಿಸಿದ್ದಾನೆ. ಗರಿಗರಿಯಾದ ಕಂದು ಬಣ್ಣದ ತಲೆಗೂದಲು. ಕಡೆದಂಥ ಮಾಟದ ಶರೀರ. ಬೂದಿ ಬಣ್ಣದ ಕಣ್ಣುಗಳು. ಹೆಂಗಸರು-ಗಂಡಸರು ಎನ್ನದೆ ಎಲ್ಲರ ನಡುವೆಯೂ ಅವನು ಜನಪ್ರಿಯ ವ್ಯಕ್ತಿ.  ಅವನ ತಂದೆ ಅವನಿಗೆ ಅಂಥ ಆಸ್ತಿಯನ್ನೇನು ಬಿಟ್ಟು ಹೋಗಿರಲಿಲ್ಲ - ಯುದ್ಧದಲ್ಲಿ ಬಳಸಿದ ಒಂದು ಖಡ್ಗ ಮತ್ತು ದ್ವೀಪ ಭೂಖಂಡ ಯುದ್ಧದ ಸುದೀರ್ಘ ಇತಿಹಾಸದ ಹದಿನೈದು ಸಂಪುಟಗಳನ್ನು  ಬಿಟ್ಟರೆ! ಕತ್ತಿಯನ್ನು ಹ್ಯೂಯಿ ಮನೆಯಲ್ಲಿ ಕನ್ನಡಿಯ ಮೇಲೆ ಅಲಂಕಾರಕ್ಕಾಗಿ ನೇತುಹಾಕಿದ್ದಾನೆ. ಇತಿಹಾಸದ ಪುಸ್ತಕಗಳು ಕಪಾಟ

ಟಾಲ್ಸ್ ಟಾಯ್ ಮಹರ್ಷಿಯ ಎರಡು ಕತೆಗಳು

ಇಮೇಜ್
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಒಂದು ಸಣ್ಣಕತೆಯ ಹೆಸರು ' ಟಾಲ್ಸ್ ಟಾಯ್ ಮಹರ್ಷಿಯ ಭೂರ್ಜವೃಕ್ಷಗಳು .'  ಅವರು ಲಿಯೋ ಟಾಲ್ಸ್ ಟಾಯ್ ನನ್ನು "ಮಹರ್ಷಿ" ಎಂದೇಕೆ ಕರೆದರು?  ಋಷಿ ಎಂದರೆ ಜಟೆ ಕಟ್ಟಿಕೊಂಡು ತಪಸ್ಸು ಮಾಡಬೇಕಾಗಿಲ್ಲ!  ಟಾಲ್ಸ್ ಟಾಯ್ ನೋಡಲೂ ಕೂಡಾ ಋಷಿಯಂತೆ ಕಾಣುತ್ತಾನೆ, ಬಿಡಿ! ಅವನ ಬರವಣಿಗೆ ಯಾವ ತಪಸ್ಸಿಗೆ ಕಡಿಮೆ? ಟಾಲ್ಸ್ ಟಾಯ್ ತನ್ನ ಜೀವನದ ಕೊನೆಯಲ್ಲಿ ಬರೆದ ಕತೆಗಳಲ್ಲಿ ಋಷಿಗಳು ಹೇಳಿದರು ಎನ್ನಲಾಗುವ ನೀತಿಕತೆಗಳ ಗುಣವಿದೆ.  ಕತೆಗಾರನೂ ಆದ ಟಾಲ್ಸ್ ಟಾಯ್ ಈ ಕತೆಗಳಿಗೆ ತನ್ನ ಕಲೆಯ ಮಾಂತ್ರಿಕ ಸ್ಪರ್ಶವನ್ನು ನೀಡುತ್ತಾನೆ. ಇತ್ತೀಚಿಗೆ ಅವನ ಎರಡು ಕತೆಗಳನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ಇವುಗಳನ್ನು ನೀವು ನನ್ನ ಬ್ಲಾಗ್ ನಲ್ಲಿ ಓದಬಹುದು. ಮೊದಲನೆಯದು ' ದೇವರು ಸತ್ಯವನ್ನು ಕಾಣುತ್ತಾನೆ, ಆದರೆ ಕಾಯುತ್ತಾನೆ ' ಎಂಬ ಕತೆ. ಎರಡನೆಯದು ' ಮನುಷ್ಯನಿಗೆ ಎಷ್ಟು ಜಮೀನು ಬೇಕು ?' ಎಂಬ ನೀಳ್ಗತೆ.  ಕತೆಗಳನ್ನು ಓದಲು ಲಿಂಕ್ ಗಳನ್ನು ಅನುಸರಿಸಿ. ಇಂದಿಗೂ ಈ ಕತೆಗಳು ಪ್ರಸ್ತುತವಾಗಿವೆ.  'ಮನುಷ್ಯನಿಗೆ ಎಷ್ಟು ಜಮೀನು ಬೇಕು?' ಎಂಬ ಕತೆ ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. - ಸಿ ಪಿ ರವಿಕುಮಾರ್ 

ಮನುಷ್ಯನಿಗೆ ಎಷ್ಟು ಜಮೀನು ಬೇಕು? - 7

ಇಮೇಜ್
ಮೂಲ ರಷ್ಯನ್ ಕಥೆ - ಲಿಯೋ ಟಾಲ್ಸ್ ಟಾಯ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  (ಆರನೇ ಭಾಗವನ್ನು  ಇಲ್ಲಿ ಓದಿ .)  ಪಹೋಮ್ ನೇರವಾಗಿ ಬೆಟ್ಟದ ಕಡೆಗೆ ಸಾಗಿದ. ಆದರೆ ಅವನಿಗೆ ಈಗ ನಡೆಯುವುದು ಕಷ್ಟವಾಗುತ್ತಿತ್ತು. ಉರಿಬಿಸಿಲಿನಲ್ಲಿ ನಡೆದಿದ್ದರಿಂದ ಅವನು ನಿತ್ರಾಣನಾಗಿದ್ದ. ಪಾದರಕ್ಷೆಗಳಿಲ್ಲದೆ ಅವನ ಕಾಲುಗಳಲ್ಲಿ ಗಾಯವಾಗಿತ್ತು. ಅವನ ಕಾಲುಗಳು ಸೋಲತೊಡಗಿದವು. ಸ್ವಲ್ಪ ಹೊತ್ತು ಕೂತು ಸುಧಾರಿಸಿಕೊಳ್ಳಲು ಅವನ ಮನಸ್ಸು ಹಾತೊರೆಯಿತು. ಆದರೆ ಸೂರ್ಯಾಸ್ತಕ್ಕೆ ಮುನ್ನ ಬಂದ ಸ್ಥಳವನ್ನು ಮುಟ್ಟಬೇಕಾದರೆ ಅದಕ್ಕೆ ಅವಕಾಶವಿರಲಿಲ್ಲ. ಸೂರ್ಯನು ಯಾರಿಗೂ ಕಾಯುವುದಿಲ್ಲ. ಅವನು ಈಗಾಗಲೇ ವೇಗವಾಗಿ ಪಶ್ಚಿಮದತ್ತ ಇಳಿಯುತ್ತಿದ್ದ.   "ಅಯ್ಯೋ! ನಾನು ಅತ್ಯಾಸೆಗೆ ಬಿದ್ದೆನೆ? ನಾನು ವಾಪಸಾಗುವುದು ತಡವಾದರೇನು ಗತಿ?" ಎಂದು ಪಹೋಮನಿಗೆ ದಿಗಿಲಾಯಿತು. ಅವನು ಬೆಟ್ಟದ ಕಡೆಗೊಮ್ಮೆ ಮತ್ತು ಸೂರ್ಯನ ಕಡೆಗೊಮ್ಮೆ ನೋಡಿದ. ಗುರಿ ಇನ್ನೂ ದೂರದಲ್ಲಿತ್ತು. ಸೂರ್ಯನಾದರೋ ತನ್ನ ಗುರಿಗೆ ತೀರಾ ಸಮೀಪನಾಗಿದ್ದ. ಪಹೋಮ್ ಲೆಕ್ಕಿಸದೆ ನಡೆದ. ಹೆಜ್ಜೆ ಎತ್ತಿ ಎತ್ತಿ ಹಾಕುತ್ತಾ ನಡೆದ. ಎಷ್ಟು ವೇಗವಾಗಿ ನಡೆದರೂ ಗುರಿಯು ಹತ್ತಿರವಾದಂತೆ ತೋರಲಿಲ್ಲ. ಅವನು ಓಡತೊಡಗಿದ. ತನ್ನ ಕೋಟು, ಬೂಟು, ಹೂಜಿ, ಟೋಪಿ ಎಲ್ಲವನ್ನೂ ಕಿತ್ತೆಸೆದ.  ಕೈಯಲ್ಲಿ ಬರೀ ಸನಿಕೆಯನ್ನು ಮಾತ್ರ ಇಟ್ಟುಕೊಂಡ. ಅದನ್ನು ಊರುಗೋಲಿನಂತೆ ಬಳಸುತ್ತಾ ಮುಂದೆ ಧಾವಿಸಿದ. 

ಮನುಷ್ಯನಿಗೆ ಎಷ್ಟು ಜಮೀನು ಬೇಕು? - 6

ಇಮೇಜ್
ಮೂಲ ರಷ್ಯನ್ ಕಥೆ - ಲಿಯೋ ಟಾಲ್ಸ್ ಟಾಯ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  (ಐದನೇ ಭಾಗವನ್ನು  ಇಲ್ಲಿ ಓದಿ .)  ಹಕ್ಕಿಗಳ ಮೆತ್ತನೆಯ ಪುಕ್ಕಗಳು ತುಂಬಿದ್ದ ಹಾಸಿಗೆಯಲ್ಲೂ ಪಹೋಮ್ ಗೆ ನಿದ್ದೆ ಬರಲಿಲ್ಲ. ಅವನಿಗೆ ಜಮೀನಿನದೇ ಯೋಚನೆ.  "ನಾನು ಆದಷ್ಟೂ ದೊಡ್ಡ ಜಮೀನಿನ ಭಾಗವನ್ನು ದಕ್ಕಿಸಿಕೊಳ್ಳುತ್ತೇನೆ! ದಿನಕ್ಕೆ ಮೂವತ್ತೈದು ಮೈಲಿಯಾದರೂ ನಾನು ನಡೆಯಬಲ್ಲೆ! ಈಗ ಬೇಸಗೆಯಾದ್ದರಿಂದ ದಿನಗಳು ದೀರ್ಘವಾಗಿರುತ್ತವೆ. ಮೂವತ್ತೈದು ಮೈಲಿಗಳ ಸುತ್ತಳತೆಯಲ್ಲಿ ಎಂಥ ದೊಡ್ಡ ಜಮೀನು ನನಗೆ ಪ್ರಾಪ್ತವಾಗುತ್ತದೆ! ಅದರಲ್ಲಿ ಅಷ್ಟೇನೂ ಒಳ್ಳೆಯದಲ್ಲದ ಜಮೀನನ್ನು ನಾನು ಮಾರಿಬಿಡುತ್ತೇನೆ. ಅಥವಾ ಬಾಡಿಗೆಗೆ ಕೊಡುತ್ತೇನೆ.  ಅತ್ಯಂತ ಒಳ್ಳೆಯ ಭೂಮಿಯನ್ನು ನಾನೇ ಉಳುಮೆ ಮಾಡುತ್ತೇನೆ. ಎರಡು ಜೊತೆ ಎತ್ತುಗಳನ್ನು ಕೊಳ್ಳುತ್ತೇನೆ. ಇಬ್ಬರು ಆಳುಗಳನ್ನು ಗೊತ್ತು ಮಾಡಿಕೊಳ್ಳುತ್ತೇನೆ. ಸುಮಾರು ನೂರಾ ಐವತ್ತು ಎಕರೆಯಲ್ಲಿ ಕೃಷಿ ಮಾಡುತ್ತೇನೆ.  ಉಳಿದ ಭೂಮಿಯನ್ನು ಜಾನುವಾರುಗಳನ್ನು ಮೇಯಿಸಲು ಇಟ್ಟುಕೊಳ್ಳುತ್ತೇನೆ!" ಎಂದು ಅವನ ಆಲೋಚನಾ ಸರಣಿ ಸಾಗಿತ್ತು. ರಾತ್ರಿಯೆಲ್ಲಾ ನಿದ್ದೆಯಿಲ್ಲದೆ ಬೆಳಗಿನ ಜಾವದಲ್ಲಿ ಅವನಿಗೆ ಜೊಂಪು ಹತ್ತಿತು. ಕಣ್ಣು ಮುಚ್ಚಿತೋ ಇಲ್ಲವೋ ಅವನಿಗೊಂದು ಕನಸು ಬಿತ್ತು. ತಾನು ಇದೇ ಡೇರೆಯಲ್ಲಿ ಮಲಗಿದ್ದೇನೆ. ಹೊರಗಡೆ ಯಾರೋ ನಕ್ಕ ಸದ್ದು. ಅದು ಯಾರಿರಬಹುದು? ಅವನು ಮೇಲೆದ್ದು ಡೇರೆಯ ಹೊರಗೆ ಬಂದು ನೋಡುತ್ತಾನೆ. ಹೊ

ಮನುಷ್ಯನಿಗೆ ಎಷ್ಟು ಜಮೀನು ಬೇಕು? - 5

ಇಮೇಜ್
ಮೂಲ ರಷ್ಯನ್ ಕಥೆ - ಲಿಯೋ ಟಾಲ್ಸ್ ಟಾಯ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  (ನಾಲ್ಕನೆ ಭಾಗವನ್ನು ಇಲ್ಲಿ ಓದಿ .)  ಭಾಗ - ೫ ಅತಿಥಿ ಹೇಳಿದ ಸ್ಥಾನಕ್ಕೆ ಹೋಗಿ ತಲುಪುವುದು ಹೇಗೆ ಎಂಬುದನ್ನು ಪಹೋಮ್ ಕೇಳಿ ತಿಳಿದುಕೊಂಡ. ಅತಿಥಿ ಹೊರಟ ಕೂಡಲೇ ಅಲ್ಲಿಗೆ ಹೋಗಲು ತಯಾರಿ ಪ್ರಾರಂಭಿಸಿದ.  ಮನೆಯ ಜವಾಬ್ದಾರಿಯನ್ನು ಹೆಂಡತಿಗೆ ಬಿಟ್ಟು ಜೊತೆಗೊಬ್ಬ ಆಳನ್ನು ಕರೆದುಕೊಂಡು ಹೊರಟ. ದಾರಿಯಲ್ಲಿ ಒಂದು ಊರಿನಲ್ಲಿ ಪ್ರಯಾಣ ನಿಲ್ಲಿಸಿ ಅವರು ಚಹಾ ಪುಡಿಯ ಪೆಟ್ಟಿಗೆ, ಮದ್ಯದ ಸೀಸೆಗಳು ಮೊದಲಾದ ಹಲವಾರು ಉಡುಗೊರೆಗಳನ್ನು ಖರೀದಿ ಮಾಡಿದರು.  ಏಳು ದಿನಗಳ ಕಾಲ ಸತತವಾಗಿ ಸುಮಾರು ಮುನ್ನೂರು ಮೈಲಿ ಪ್ರಯಾಣ ಮಾಡಿದ ನಂತರ ಅವರಿಗೆ ಬಷ್ಕಿರ್ ಜನಾಂಗದವರು ಹಾಕಿದ್ದ ಡೇರೆಗಳು ಗೋಚರಿಸಿದವು. ಎಲ್ಲವೂ ನೆಲಹಿಡುಕ ಹೇಳಿದಂತೆಯೇ ಇತ್ತು. ಬಷ್ಕಿರ್ ಜನ ನದಿಯ ಹತ್ತಿರ ಬೆಟ್ಟದ ಇಳಿಜಾರುಗಳಲ್ಲಿ ಕಟ್ಟಿದ ಡೇರೆಗಳಲ್ಲಿ ವಾಸವಾಗಿದ್ದರು. ಅವರು ನೆಲವನ್ನು ಉಳುತ್ತಿರಲಿಲ್ಲ. ರೊಟ್ಟಿ ಬೇಯಿಸಿ ತಿನ್ನುತ್ತಲೂ ಇರಲಿಲ್ಲ. ಅವರ ದನಕರುಗಳು ಗುಂಪುಗುಂಪಾಗಿ ಹುಲ್ಲುಗಾವಲುಗಳಲ್ಲಿ ಮೇಯುತ್ತಿದ್ದವು. ಡೇರೆಗಳ ಹಿಂಬದಿಯಲ್ಲಿ ಕುದುರೆ ಮರಿಗಳನ್ನು ಕಟ್ಟಿದ್ದರು. ದಿನಕ್ಕೆ ಎರಡು ಸಲ ತಾಯಿಕುದುರೆಗಳನ್ನು ಮರಿಗಳ ಬಳಿಗೆ ಕರೆದೊಯ್ಯುತ್ತಿದ್ದರು. ಮರಿಗಳು ಹಾಲು ಕುಡಿದ ಅನಂತರ ಹೆಣ್ಣುಕುದುರೆಗಳ ಹಾಲು ಕರೆಯುತ್ತಿದ್ದರು. ಈ ಹಾಲಿನಿಂದ ಹೆಂಗಸರು ಕ್ಯುಮಿಸ್ ಎಂಬ

ಭಾವಗೀತೆಯ ಗುಂಗು

ಇಮೇಜ್
ಸಿ  ಪಿ ರವಿಕುಮಾರ್  "ಸಂವಾದ" ಟ್ರಸ್ಟ್ ಪ್ರತಿ ತಿಂಗಳು ಆಯೋಜಿಸುವ 'ಸಂವಾದ' ಕಾರ್ಯಕ್ರಮದಲ್ಲಿ ಭಾಗವಹಿಸಿ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಮಾತುಗಳನ್ನು ಕೇಳುವ ಅವಕಾಶ ಇವತ್ತು ಸಿಕ್ಕಿತು. ಬಿ ಆರ್ ಲಕ್ಷ್ಮಣರಾವ್ ತಮ್ಮ ಕಾವ್ಯದ ಬಗ್ಗೆ ಸಂಕ್ಷಿಪ್ತವಾಗಿ ಆದರೆ ಸ್ವಾರಸ್ಯವಾಗಿ ಮಾತಾಡಿದರು. ಕೇವಲ ಒಂದೂವರೆ ಗಂಟೆಯ ಕಾರ್ಯಕ್ರಮದಲ್ಲಿ ಸಮಯ ಪಾಲನೆ ಬಹಳ ಮುಖ್ಯ. ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಪ್ರಶ್ನೆ ಕೇಳಬಹುದು - ಹೀಗಾಗಿ ಸಮಯ ನಿಯಂತ್ರಿಸುವುದು ಒಂದು ಕಲೆ. ಇದನ್ನು ಕವಿ ಲಕ್ಷ್ಮಣರಾವ್ ಚೆನ್ನಾಗಿ ಮಾಡಿದರು ಎನ್ನಿಸಿತು. ಅನೌಪಚಾರಿಕವಾಗಿದ್ದರೂ ಕಾರ್ಯಕ್ರಮದಲ್ಲಿ ಆಯೋಜಕರು ಒಂದು ರೂಪರೇಷೆಯನ್ನು ಇಟ್ಟುಕೊಂಡಿದ್ದರು.  ಮೊದಲು ಕವಿ ತಾವು ಕಾವ್ಯಜೀವನಕ್ಕೆ ಹೇಗೆ ಬಂದರು ಎಂಬ ಬಗ್ಗೆ ಮಾತಾಡಿದರು. ಅವರ ಕೆಲವು ಗೀತೆಗಳನ್ನು ಉಪಾಸನಾ ಮೋಹನ್ ಮತ್ತು ವರ್ಷಾ ಎಂಬ ಕಲಾವಿದರು ಸುಶ್ರಾವ್ಯವಾಗಿ ಹಾಡಿದರು. ಕವಿ ತಮ್ಮ ಕೆಲವು ಕವಿತೆಗಳನ್ನು ಓದಿದರು. ಪ್ರಶ್ನೋತ್ತರಕ್ಕೂ ಅವಕಾಶವಿತ್ತು. ಪೂರ್ವನಿಯೋಜಿತವಲ್ಲದ ಒಂದು ದಿಢೀರ್ ವಿಮರ್ಶೆ ಕೂಡಾ ನಡೆಯಿತು - ಪ್ರೊ ಸಿ ಎನ್ ರಾಮಚಂದ್ರನ್ ಅವರನ್ನು ಕವಿ ಕೆಲವು ಮಾತುಗಳನ್ನು ಆಡಬೇಕೆಂದು ಕೇಳಿಕೊಂಡಿದ್ದು ಒಂದಿಷ್ಟು ಒಳ್ಳೆಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಹೀಗೆ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸುವುದು ಮತ್ತು ನಿರ್ವಹಣೆ ಮಾಡುವುದು ಕೂಡಾ ಅಪರೂಪದ ಕಲೆ. 'ಸಂ

ಮನುಷ್ಯನಿಗೆ ಎಷ್ಟು ಜಮೀನು ಬೇಕು? - 4

ಇಮೇಜ್
ಮೂಲ ರಷ್ಯನ್ ಕತೆ - ಲಿಯೋ ಟಾಲ್ಸ್ ಟಾಯ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  (ಮೂರನೇ ಭಾಗವನ್ನು ಇಲ್ಲಿ ಓದಿ ) ಭಾಗ - ೪ ಪರಿವಾರ ಸಮೇತನಾಗಿ ಪಹೋಮ್ ತನ್ನ ಹೊಸ ವಾಸ್ತವ್ಯವನ್ನು ಸೇರಿದ. ಅತ್ಯಂತ ದೊಡ್ಡ ಹಳ್ಳಿಯನ್ನು ಹುಡುಕಿ ಅದರ ಸಮಾಜದ ಸದಸ್ಯತ್ವಕ್ಕಾಗಿ ಅವನು ಅರ್ಜಿ ಹಾಕಿಕೊಂಡ. ಊರಿನ ಹಿರಿಯರಿಗೆ ಸನ್ಮಾನ ಮಾಡಿ ಸದಸ್ಯತ್ವಕ್ಕೆ ಬೇಕಾದ ಕಾಗದ ಪತ್ರಗಳನ್ನು ಒಂದುಗೂಡಿಸಿಕೊಂಡ. ಅವನು ಮತ್ತು ಅವನ ನಾಲ್ಕು ಗಂಡುಮಕ್ಕಳಿಗಾಗಿ ತಲಾ ಇಪ್ಪತ್ತೈದು ಎಕರೆ ಜಮೀನನ್ನು ಕೊಟ್ಟರು. ಆದರೆ ಈ ಜಮೀನುಗಳೆಲ್ಲಾ ಒಂದಕ್ಕೊಂದು ಹತ್ತಿಕೊಂಡು ಇರಲಿಲ್ಲ; ಬೇರೆ ಬೇರೆ ಪ್ರದೇಶಗಳಲ್ಲಿದ್ದವು. ಇದಲ್ಲದೆ ಸಮಾಜಕ್ಕೆ ಸೇರಿದ ಹುಲ್ಲುಗಾವಲಿನ ಉಪಯೋಗಕ್ಕೆ ಅನುಮತಿ ಸಿಕ್ಕಿತು.  ಪಹೋಮ್ ಜಮೀನಿನಲ್ಲಿ ಬೇಕಾದ ಕಟ್ಟಡಗಳನ್ನು ಎಬ್ಬಿಸಿದ. ಜಾನುವಾರುಗಳನ್ನು ಕ್ರಯಕ್ಕೆ ಕೊಂಡ.  ಈಗ ಅವನಿಗೆ ಸಮಾಜವು ಉಚಿತವಾಗಿ ಕೊಟ್ಟ ಭೂಮಿಯೇ ಹಿಂದೆ ಅವನ ಬಳಿಯಿದ್ದ ಭೂಮಿಗಿಂತ ಮೂರು ಪಟ್ಟು ಹೆಚ್ಚಾಗಿತ್ತು. ಇಲ್ಲಿನ ಭೂಮಿಯಲ್ಲಿ ಜೋಳದ ಫಸಲು ಚೆನ್ನಾಗಿ ಬಂತು. ಹಿಂದಿದ್ದಕ್ಕಿಂತ ಪಹೋಮ್ ಬಳಿ ಈಗ ಹತ್ತು ಪಟ್ಟು ಆಸ್ತಿ ಇತ್ತು.  ಬೇಕಾದಷ್ಟು ನೀರಾವರಿ ಜಮೀನು, ಬೇಕಾದಷ್ಟು ಜಾನುವಾರುಗಳು ಎಲ್ಲವೂ ಇದ್ದವು.  ಹೊಸ ಜಾಗಕ್ಕೆ ಬಂದ ಹೊಸತರಲ್ಲಿ ಪಹೋಮ್ ಗೆ ತನ್ನ ಸಂಪತ್ತನ್ನು ನೆನೆದು ಸಂತೋಷವಾದರೂ ಕಾಲ ಕಳೆದಂತೆ ಅವನಿಗೆ ಇಲ್ಲೂ ತನ್ನ ಬಳಿ ಹೆಚ್ಚೇನೂ ಜಮೀನು

ಮನುಷ್ಯನಿಗೆ ಎಷ್ಟು ಜಮೀನು ಬೇಕು? - 3

ಇಮೇಜ್
ಮೂಲ ಕಥೆ - ಲಿಯೋ ಟಾಲ್ಸ್ ಟಾಯ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್ (ಎರಡನೇ ಭಾಗವನ್ನು ಇಲ್ಲಿ ಓದಿ ) ಭಾಗ - ೩ ಹೀಗೆ ಪಹೋಮ್ ಸಂತೃಪ್ತಿಯಿಂದ ಜೀವನ ಸಾಗಿಸುತ್ತಿದ್ದ. ನೆರೆಯ ಕೆಲವು ರೈತರು ಅವನಿಗೆ ಸೇರಿದ ಜಮೀನನ್ನು ಪ್ರವೇಶಿಸದೇ ಇದ್ದಿದ್ದರೆ ಅವನ ತೃಪ್ತಿಕರ ಜೀವನಕ್ಕೆ ಬಾಧೆ ಉಂಟಾಗುತ್ತಿರಲಿಲ್ಲ. ಅವನು ಅವರಿಗೆ ಒಳ್ಳೆಯ ಮಾತಿನಲ್ಲಿ ಹೇಳಿದ. ಪ್ರಯೋಜನವಾಗಲಿಲ್ಲ. ಅವರ ಜಾನುವಾರುಗಳು ಅವನ ಜೋಳದ ಹೊಲಕ್ಕೆ, ಅವನ ಹುಲ್ಲುಗಾವಲಿಗೆ ನುಗ್ಗಿ ಬರುತ್ತಿದ್ದವು. ಅವುಗಳನ್ನು ಓಡಿಸಿ ಓಡಿಸಿ ಇವನಿಗೆ ಸಾಕಾಯಿತು. ಪಶುಗಳು ಮಾಡಿದ ಅಪರಾಧಕ್ಕೆ ಅವನೆಂದೂ ಅವುಗಳ ಒಡೆಯರ ಮೇಲೆ ಆಪಾದನೆ ಮಾಡಲಿಲ್ಲ. ಆದರೆ ಕೊನೆಗೆ ಅವನ ತಾಳ್ಮೆಯ ಕಟ್ಟೆಯೂ ಒಡೆಯಿತು. ಜಿಲ್ಲೆಯ ಕೋರ್ಟಿಗೆ ಹೋಗಿ ದೂರು ಕೊಟ್ಟ. ರೈತರ ಬಳಿ ಜಮೀನು ಇದ್ದಿದ್ದರೆ ಅವರು ಪಶುಗಳನ್ನು ಹೀಗೆ ಅಲೆದಾದಲು ಬಿಡುತ್ತಿರಲಿಲ್ಲ ಎಂದು ಅವನಿಗೆ ಗೊತ್ತು. "ಆದರೆ ನಾನು ಎಷ್ಟು ದಿವಸ ಸುಮ್ಮನಿರಲಿ? ಅವರಿಗೆ ಪಾಠ ಕಲಿಸಲೇ ಬೇಕು" ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ.  ಕೆಲವರಿಗೆ ಛೀಮಾರಿ ಹಾಕಿ ಬುದ್ಧಿ ಹೇಳಲಾಯಿತು. ಕೆಲವರಿಗೆ ದಂಡ ವಿಧಿಸಲಾಯಿತು. ಪಹೋಮನ ನೆರೆಯವರಿಗೆ ಈಗ ಅವನನ್ನು ಕಂಡರೆ ದ್ವೇಷ ಉಂಟಾಯಿತು. ಕೆಲವು ಸಲ ಅವರು ಬೇಕೆಂದೇ ತಮ್ಮ ಪಶುಗಳನ್ನು ಅವನ ಹೊಲಕ್ಕೆ ಅಟ್ಟುತ್ತಿದ್ದರು. ಒಬ್ಬ ರೈತ ಒಂದು ರಾತ್ರಿ ಪಹೋಮನ ಹೊಲಕ್ಕೆ ಹೊಕ್ಕು ಐದು ನಿಂಬೆಯ ಮರಗಳನ್ನು ಕಡಿದ

ಮನುಷ್ಯನಿಗೆ ಎಷ್ಟು ಜಮೀನು ಬೇಕು? - 2

ಇಮೇಜ್
ಮೂಲ ರಷ್ಯನ್ ಕತೆ - ಲಿಯೋ ಟಾಲ್ಸ್ ಟಾಯ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  (ಮೊದಲ ಭಾಗವನ್ನು ಇಲ್ಲಿ ಓದಿ ) ಭಾಗ - ೨ ಹಳ್ಳಿಗೆ ಸಮೀಪದಲ್ಲಿ ಒಬ್ಬ ಜಮೀನುದಾರಳ ಮನೆಯಿತ್ತು. ಅವಳು ಸುಮಾರು ಮುನ್ನೂರು ಎಕರೆ ಜಮೀನಿನ ಒಡತಿ. ತನ್ನ ಜಮೀನಿನಲ್ಲಿ ದುಡಿಯುವ ರೈತರನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ಮೇಲುಸ್ತುವಾರಿ ಕೆಲಸಕ್ಕೆಂದು ಅವಳು ಒಬ್ಬ ಮನುಷ್ಯನನ್ನು ಗೊತ್ತು ಮಾಡಿಕೊಂಡಮೇಲೆ ಇದು ಬದಲಾಯಿತು. ಅವನು ಹಿಂದೆ ಸೈನ್ಯದಲ್ಲಿ ಕೆಲಸ ಮಾಡಿದ ಆಳು. ಕೆಲಸ ಮಾಡುವವರ ಮೇಲೆ ದಂಡ ಹಾಕುವುದು ಅವನ ಜಾಯಮಾನ. ಪಹೋಮ್ ಎಷ್ಟೇ ಜಾಗರೂಕನಾಗಿದ್ದರೂ ಒಂದಲ್ಲ ಒಂದು ತಪ್ಪು ನಡೆದೇ ಹೋಗುತ್ತಿತ್ತು. ಅವನ ಕುದುರೆ ಜಮೀನುದಾರಳ ಓಟ್ಸ್ ಹೊಲಕ್ಕೆ ನುಗ್ಗಿ ಬಿಡುವುದು. ಹಸು ಕಣ್ಣು ತಪ್ಪಿಸಿ ಆಕೆಯ ತೋಟಕ್ಕೆ ನುಸುಳುವುದು.  ಕರುಗಳು ಆಕೆಯ ಹುಲ್ಲುಗಾವಲಿಗೆ ನುಗ್ಗಿಬಿಡುವುವು. ಹೀಗಾದಾಗಲೆಲ್ಲಾ ದಂಡ ತೆರಬೇಕಾಗುತ್ತಿತ್ತು.  ದಂಡ ತೆತ್ತ ದಿನ ಪಹೋಮ್ ಗೊಣಗುತ್ತಾ ಮನೆಗೆ ಬರುತಿದ್ದ. ಆ ದಿನ  ಅವನ ಕೋಪ ಮನೆಯವರ ಮೇಲೆ ತಿರುಗುವುದು. ಈ ವರ್ಷ ಇಡೀ ಬೇಸಗೆ ಪೂರ್ತಿ ಮೇಲಧಿಕಾರಿಗೂ ಇವನಿಗೂ ಏನಾದರೂ ಕಿರಿಕಿರಿ ನಡೆದೇ ಇತ್ತು. ಚಳಿಗಾಲದಲ್ಲಿ ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕುವಾಗ ಅವನಿಗೆ ಸಮಾಧಾನವೇ ಆಯಿತು. ಈಗ ಅವುಗಳಿಗೆ ತಾನೇ ಮೇವು ತಂದು ಹಾಕಬೇಕು. ಆದರೆ ದಂಡ ಕಟ್ಟಬೇಕಾಗುವುದೋ ಎಂಬ ಆತಂಕವಿಲ್ಲ! ಚಳಿಗಾಲದ ಕ

ಮನುಷ್ಯನಿಗೆ ಎಷ್ಟು ಜಮೀನು ಬೇಕು? - 1

ಇಮೇಜ್
ಮೂಲ ರಷ್ಯನ್ ಕತೆ - ಲಿಯೋ ಟಾಲ್ಸ್ ಟಾಯ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಹಳ್ಳಿಯಲ್ಲಿದ್ದ ತಂಗಿಯನ್ನು ನೋಡಲು ಒಮ್ಮೆ ಅಕ್ಕ ಪಟ್ಟಣದಿಂದ ಬಂದಳು. ಅಕ್ಕನಿಗೆ ಪಟ್ಟಣದಲ್ಲಿದ್ದ ವ್ಯಾಪಾರಿಯೊಬ್ಬನನ್ನು ಕೊಟ್ಟು ಮದುವೆಯಾಗಿತ್ತು. ತಂಗಿಯನ್ನು ಹಳ್ಳಿಯಲ್ಲಿದ್ದ ಒಬ್ಬ ಕೃಷಿಕನಿಗೆ ಕೊಟ್ಟು ಮಾಡುವೆ ಮಾಡಿದ್ದರು. ಚಹಾ ಕುಡಿಯುತ್ತಾ ಹರಟುವಾಗ ಅಕ್ಕ ಪಟ್ಟಣದ ಜೀವನವನ್ನು ಹೊಗಳಿದಳು. ತಾವು ಎಷ್ಟು ಆರಾಮವಾಗಿದ್ದೇವೆ, ತಮ್ಮ ಉಡುಗೆ ತೊಡುಗೆಗಳು ಎಷ್ಟು ಚೆನ್ನಾಗಿದೆ, ತಮ್ಮ ಆಹಾರ-ವಿಹಾರಗಳು ಎಷ್ಟು ದಿವಿನಾಗಿವೆ, ನೋಡಲು-ಮಾಡಲು ಪಟ್ಟಣದಲ್ಲಿ ಎಷ್ಟೊಂದಿದೆ ಎಂದು ವರ್ಣಿಸಿದಳು ಕಿರಿಯವಳಿಗೆ ಇದನ್ನು ಕೇಳಿ ಕೆಣಕಿದಂತಾಯಿತು. ಅವಳು ಪಟ್ಟಣದ ವ್ಯಾಪಾರಿ ಜೀವನದ ಬಗ್ಗೆ ಸ್ವಲ್ಪ ಕೀಳಾಗಿ ಮಾತಾಡಿದಳು. ಹಳ್ಳಿಯ ರೈತನ ಜೀವನಶೈಲಿಯನ್ನು ಹೊಗಳಿದಳು. "ನನಗೆ ನೀನು ಏನೇ ಕೊಟ್ಟರೂ ನನಗೆ ಈ ಬದುಕಿನ ಹೊರತು ಬೇರೆ ಏನೂ ಬೇಡ. ನಮ್ಮ ಜೀವನ ಒರಟಾಗಿರಬಹುದು. ಆದರೆ ನಮಗೆ ಯಾವ ಆತಂಕವೂ ಇಲ್ಲ.  ಲಾಭ-ನಷ್ಟಗಳು ಅಣ್ಣ ತಮ್ಮಂದಿರು ಅಂತ ಗಾದೆ ಕೇಳಿದ್ದೀಯಲ್ಲ! ಪಟ್ಟಣದಲ್ಲಿ ದುಡ್ಡು ಮಾಡಿಕೊಂಡವರ ಕತೆ ನಾನೂ ಕೇಳಿದ್ದೇನೆ - ಇವತ್ತು ಐಶ್ವರ್ಯದಲ್ಲಿ ಉರುಳಾಡಿದವರು ನಾಳೆ ತಿರುಪೆ ಬೇಡಿದ ಸಂಗತಿಗಳನ್ನೂ ಕೇಳಿದ್ದೇನೆ. ಅದಕ್ಕೆ ಹೋಲಿಸಿದರೆ ನಾವೇ ಮೇಲು. ನಮ್ಮ ಜೀವನದಲ್ಲಿ  ಅಷ್ಟೊಂದು ರಂಗಿಲ್ಲದೇ ಇರಬಹುದು, ನಮ್ಮ ಹತ್ತಿರ ಹೆಚ್ಚು ಹಣಕಾಸು ಇಲ್ಲದೇ

ದೇವರು ಸತ್ಯವನ್ನು ಕಾಣುತ್ತಾನೆ, ಆದರೆ ತಡ ಮಾಡುತ್ತಾನೆ -3

ಇಮೇಜ್
(ಎರಡನೇ ಬಾಗವನ್ನು ಇಲ್ಲಿ ಓದಿ .) ಭಾಗ - ೩ ಒಂದು ದಿನ ಹೊಸ ಕೈದಿಗಳ ಒಂದು ಗುಂಪು ಜೈಲಿಗೆ ಆಗಮಿಸಿತು. ಸಂಜೆ ಹಳೆಯ ಕೈದಿಗಳು ಹೊಸಬರನ್ನು ಸುತ್ತುವರೆದು ಅವರಿಗೆ ಯಾಕೆ ಶಿಕ್ಷೆಯಾಯಿತು ಎಂಬ ಹಿನ್ನೆಲೆಯನ್ನು ಕೇಳಿ ತಿಳಿದುಕೊಂಡರು. ತಮ್ಮ ತಮ್ಮ ಹಳ್ಳಿ ಮತ್ತು ಪಟ್ಟಣಗಳ ವಿಷಯ ಕೇಳಿದರು.   ಎಲ್ಲರೊಂದಿಗೆ ಐವಾನ್ ಕೂಡಾ ಮೌನವಾಗಿ ಕುಳಿತು ತಲೆ ತಗ್ಗಿಸಿಕೊಂಡೇ ಈ ಸಂಭಾಷಣೆಯನ್ನು ಕೇಳಿಸಿಕೊಂಡ.  ಅರವತ್ತು ವರ್ಷವಾದರೂ ಗಟ್ಟಿಮುಟ್ಟಾಗಿದ್ದ ಒಬ್ಬ ಹೊಸ ಕೈದಿ ತನಗೆ ಜೈಲಾದದ್ದು ಹೇಗೆ ಎಂಬ ಕಥೆ ಹೇಳುತ್ತಿದ್ದ. ಅವನ ಬೆಳ್ಳಗಿನ ಗಡ್ಡವನ್ನು ಸಣ್ಣದಾಗಿ ಕತ್ತರಿಸಲಾಗಿತ್ತು.  "ಗೆಳೆಯರೇ, ನನ್ನ ಕತೆ ಕೇಳಿ. ನಾನು ಮಾಡಿದ್ದು ಇಷ್ಟೆ. ಒಂದು ಸ್ಲೆಜ್ ಗೆ ಕಟ್ಟಿದ್ದ ಕುದುರೆಯನ್ನು ಬಿಚ್ಚಿಕೊಂಡು ಅದನ್ನು ಬಳಸಿದ್ದೇ ನನ್ನ ಅಪರಾಧ. ನನ್ನ ಮೇಲೆ ಕಳ್ಳತನದ ಆರೋಪ ಹೊರಿಸಿದರು. ಮನೆಗೆ ತರಾತುರಿಯಲ್ಲಿ ಹೋಗಬೇಕಾದ್ದರಿಂದ ನಾನು ಹಾಗೆ ಮಾಡಿದೆ; ಮನೆಗೆ ಹೋದ ಮೇಲೆ ಕುದುರೆಯನ್ನು ಬಿಟ್ಟುಬಿಟ್ಟೆ  ಎಂದು ಹೇಳಿದರೂ ಉಪಯೋಗವಾಗಲಿಲ್ಲ.  ಇಲ್ಲ, ನೀನು ಕದ್ದಿದ್ದೀಯ ಎಂದೇ ಅವರು ವಾದಿಸಿದರು. ನಾನು ಕುದುರೆಯನ್ನು ಎಲ್ಲಿ ಕದ್ದೆ, ಹೇಗೆ ಕದ್ದೆ ಎಂದು ಅವರು ಹೇಳಲಿಲ್ಲ.  ಹಿಂದೊಮ್ಮೆ ನಾನು ನಿಜವಾಗಲೂ ತಪ್ಪು ಮಾಡಿದ್ದೆ. ಆಗಲೇ ನಾನು ಇಲ್ಲಿಗೆ ಬರಬೇಕಾಗಿತ್ತು. ಆದರೆ ಆಗ ನಾನು ಸಿಕ್ಕಿಹಾಕಿಕೊಳ್ಳಲಿಲ್ಲ! ಈಗ ನಾನು ಅಂಥದ್ದೇನೂ ಮಾಡದಿದ್ದರೂ

ದೇವರು ಸತ್ಯವನ್ನು ಕಾಣುತ್ತಾನೆ, ಆದರೆ ತಡ ಮಾಡುತ್ತಾನೆ - 2

ಇಮೇಜ್
ಮೂಲ ರಷ್ಯನ್ ಕತೆ - ಲಿಯೋ ಟಾಲ್ಸ್ ಟಾಯ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  (ಮೊದಲ ಭಾಗವನ್ನು ಇಲ್ಲಿ ಓದಿ ) ಭಾಗ - ೨ ಐವಾನನ ಹೆಂಡತಿಗೆ ದಿಕ್ಕೇ ತೋರಲಿಲ್ಲ. ಯಾರನ್ನು ನಂಬುವುದು? ಮನೆಯಲ್ಲಿ ಎಳೆಯ ಮಕ್ಕಳು; ಚಿಕ್ಕದು ಇನ್ನೂ ಎದೆ ಹಾಲು ಕುಡಿಯುವ ಹಸುಳೆ.  ಸಂಸಾರವನ್ನು ಕಟ್ಟಿಕೊಂಡು ಅವಳು ಗಂಡನನ್ನು ಇಟ್ಟಿದ್ದ ಜೈಲಿಗೆ ಹೋದಳು. ಮೊದಲು ಅವನನ್ನು ಕಾಣಲು ಅವಳಿಗೆ ಅನುಮತಿ ಸಿಕ್ಕಲಿಲ್ಲ. ಆದರೆ ಸಾಕಷ್ಟು ಗೋಗರೆದ ನಂತರ ಅವಳನ್ನು ಗಂಡನ ಬಳಿಗೆ ಕರೆದೊಯ್ಯಲಾಯಿತು. ಐವಾನನಿಗೆ ಕೈದಿಗಳ ವಸ್ತ್ರ ತೊಡಿಸಿ, ಕೈಕಾಲುಗಳಿಗೆ ಕೋಳ ತೊಡಿಸಿ ಕಳ್ಳಕಾಕರೊಂದಿಗೆ ಕಾರಾಗೃಹದಲ್ಲಿ ಬಂಧಿಸಿಟ್ಟಿರುವುದನ್ನು ಕಂಡು ಅವಳು ಮೂರ್ಛೆ ಹೋದಳು. ಬಹಳ ಹೊತ್ತಿನ ನಂತರ ಅವಳಿಗೆ ಅರಿವು ತಿಳಿಯಿತು. ತನ್ನ ಮಕ್ಕಳನ್ನು ಬಳಿಗೆ ಸೆಳೆದು ಅವಳು ಐವಾನನ ಹತ್ತಿರ ಕುಳಿತಳು. ಮನೆಯ ವಿಷಯಗಳನ್ನು ಅವನಿಗೆ ವರದಿ ಮಾಡಿ ನಂತರ ಅವನ ವಿಚಾರ ಕೇಳಿದಳು. ಅವನು ಎಲ್ಲವನ್ನೂ ಚಾಚೂ ತಪ್ಪದೆ ವಿವರಿಸಿದ ಮೇಲೆ "ಈಗ ನಾವೇನು ಮಾಡುವುದು?" ಎಂದು ಕೇಳಿದಳು.  "ಜಾರ್ ದೊರೆಯ ಮೊರೆ ಹೋಗಬೇಕು - ಅವರ ಆಳ್ವಿಕೆಯಲ್ಲಿ ಒಬ್ಬ ಅಮಾಯಕನಿಗೆ ಈ ಸ್ಥಿತಿ ಬರಬಾರದು." ತಾನು ಈಗಾಗಲೇ ಜಾರ್ ದೊರೆಗೆ ಪತ್ರ ಕಳಿಸಿದ್ದರೂ ಅದು ಸ್ವೀಕೃತವಾಗಲಿಲ್ಲವೆಂದು ತಿಳಿಸಿದಳು.  ಐವಾನ್ ಉತ್ತರಿಸಲಿಲ್ಲ. ಅವನು ಕಳೆಗುಂದಿದಂತೆ ತೋರಿತು.  ಅವನ ಹೆಂಡತಿ &

ದೇವರು ಸತ್ಯವನ್ನು ಕಾಣುತ್ತಾನೆ, ಆದರೆ ತಡ ಮಾಡುತ್ತಾನೆ - 1

ಇಮೇಜ್
ಮೂಲ (ರಷ್ಯನ್) ಕಥೆ - ಲಿಯೋ ಟಾಲ್ಸ್ ಟಾಯ್  ಕನ್ನಡ ಅನುವಾದ - ಸಿ ಪಿ ರವಿಕುಮಾರ್  ಭಾಗ - ೧ ವ್ಲಾಡಿಮಿರ್ ಪಟ್ಟಣದಲ್ಲಿ ಐವಾನ್ ಡಿಮಿಟ್ರಿಚ್ ಆಕ್ಸಿಯನೋವ್ ಎಂಬ ಯುವಕ ವ್ಯಾಪಾರಿಯಿದ್ದ. ಎರಡು ಅಂಗಡಿಗಳಲ್ಲದೆ ಸ್ವಂತ ಮನೆಯ ಒಡೆಯನೂ ಆಗಿದ್ದ.   ಅವನು ತಲೆತುಂಬ ಗುಂಗುರು ಕೂದಲಿದ್ದ ಸ್ಫುರದ್ರೂಪಿ ತರುಣ. ಸದಾ ಮಂದಸ್ಮಿತನಾಗಿ ಎಲ್ಲರನ್ನೂ ನಗಿಸುವ ಸ್ವಭಾವದವನು. ಹಾಡುವುದು ಅವನ ಹವ್ಯಾಸ.  ಮದುವೆಗೆ ಮುಂಚೆ ಅವನಿಗೆ ಕುಡಿತದ ಚಟವಿತ್ತು. ಹೆಚ್ಚು ಕುಡಿದಾಗ ಹುಚ್ಚಾಪಟ್ಟೆ ಆಡುತ್ತಿದ್ದ. ಮದುವೆಯಾದಮೇಲೆ ಅದೆಲ್ಲಾ ನಿಂತಿದೆ. ಈಗೇನಿದ್ದರೂ ಅಪರೂಪಕ್ಕೊಮ್ಮೆ ಮಿತವಾದ ಮದ್ಯಪಾನ.  ಒಂದು ವರ್ಷ ಬೇಸಗೆಯ ದಿನಗಳಲ್ಲಿ ಐವಾನ್ ತನ್ನ ಕಾರ್ಯನಿಮಿತ್ತವಾಗಿ ನಿಜ್ನಿ ಎಂಬ ಪಟ್ಟಣಕ್ಕೆ ಜಾತ್ರೆಗೆ ಹೋಗಬೇಕಾಯಿತು. ಅವನು ಹೊರಟು ನಿಂತಾಗ ಹೆಂಡತಿ ಅವನ ಹತ್ತಿರ ಬಂದು "ಐವಾನ್, ಇವತ್ತು ಹೊರಡಬೇಡ; ನಿನ್ನನ್ನು ಕುರಿತು ಒಂದು ಕೆಟ್ಟ ಕನಸು ಕಂಡೆ," ಎಂದಳು.  ಅವನು ನಕ್ಕು "ನಾನು ಮನೆಯಿಂದ ಹೊರಗಿದ್ದಾಗ ಕುಡಿದು ರಂಪ ಮಾಡುತ್ತೇನೆಂದು ತಾನೇ ನಿನ್ನ ಅಳುಕು?" ಎಂದ. "ನನ್ನ ಗಾಬರಿಗೆ ಇಂಥ ಕಾರಣವೆಂದು ಸ್ಪಷ್ಟವಾಗಿ ಹೇಳಲಾರೆ. ನನ್ನ ಕನಸಿನಲ್ಲಿ ನೀನು ಮರಳಿ ಬಂದು ನಿನ್ನ ಟೊಪ್ಪಿಗೆ ತೆಗೆದಾಗ ನಿನ್ನ ತಲೆಗೂದಲು ಬೆಳ್ಳಗಾಗಿತ್ತು." "ಅಯ್ಯೋ ಹುಚ್ಚಿ! ಅದು ಒಳ್ಳೆಯ ಶಕುನ!&quo