ಪೋಸ್ಟ್‌ಗಳು

B.R. Lakshmana Rao ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ತಂತ್ರಜ್ಞಾನದ ನಡುವೆಯೂ ಒಂದು ಕರ್ನಾಟಕ ರಾಜ್ಯೋತ್ಸವ

ಇಮೇಜ್
ಸಿ ಪಿ ರವಿಕುಮಾರ್ ಸೆಪ್ಟೆಂಬರ್ ತಿಂಗಳಲ್ಲಿ ನಾನು ಬಿ. ಆರ್. ಲಕ್ಷ್ಮಣರಾವ್ ಅವರ "ಸಂವಾದ" ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರನ್ನು ನಮ್ಮ ಕಚೇರಿಯಲ್ಲಿ ನಡೆಯುವ ರಾಜ್ಯೋತ್ಸವ ಸಮಾರಂಭಕ್ಕೆ ಆಹ್ವಾನಿಸಬೇಕು ಎಂಬ ಉತ್ಸಾಹ ಉಂಟಾಯಿತು. ನನ್ನ ಸಹೋದ್ಯೋಗಿಗಳ ಬೆಂಬಲದಿಂದ ಇದು ಸಾಧ್ಯವಾಯಿತು. ನಮ್ಮ ಆಹ್ವಾನಕ್ಕೆ ಒಪ್ಪಿ ಕವಿ ಲಕ್ಷ್ಮಣರಾವ್ ನಮ್ಮ ಕಚೇರಿಗೆ ಬಂದು ನಮ್ಮೊಂದಿಗೆ ಎರಡೂವರೆ ಗಂಟೆ ಕಾಲ ಕಳೆದದ್ದು ನಮಗೆಲ್ಲಾ ಸಂತೋಷದ ವಿಷಯವಾಯಿತು. ನಮ್ಮ ಕಚೇರಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಾಫ್ಟ್ ವೇರ್ ಪರಿಭಾಷೆಯೇ ಹೆಚ್ಚು ರೂಢಿಯಲ್ಲಿರುವ ಸ್ಥಿತಿ ಇದ್ದರೂ ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ನಡೆಸುವ ರೂಢಿ ನಡೆದುಕೊಂಡು ಬಂದಿದೆ. ಹಿಂದೆ ಚಿತ್ರ ನಿರ್ದೇಶಕ ನಾಗಾಭರಣ, ಸಮಾಜ ಕಾರ್ಯಕರ್ತ ಎಚ್ ಸುದರ್ಶನ್, ಕವಿ ಎಚ್ ಎಸ್ ವೆಂಕಟೇಶಮೂರ್ತಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಬಂದಿದ್ದಾರೆ. ಈ ಸಲದ ರಾಜ್ಯೋತ್ಸವ ನವೆಂಬರ್ ಐದನೇ ತಾರೀಕು ಸಂಪನ್ನವಾಯಿತು. ನಮ್ಮ ಕಚೇರಿಯಲ್ಲಿ ರಾಜ್ಯೋತ್ಸವದ ಹಿಂದಿನ ವಾರ ಮತ್ತು ಆಚರಣೆಯ ದಿವಸ  ಹಲವಾರು ಕಾರ್ಯಕ್ರಮಗಳು   ನಡೆಯುತ್ತವೆ. ಕನ್ನಡೇತರರಿಗಾಗಿ ಕನ್ನಡ ಮಾತಾಡುವ ಸ್ಪರ್ಧೆ, ಛಾಯಾಚಿತ್ರ ಗ್ರಹಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಗಳು ಜನಪ್ರಿಯವಾಗಿವೆ. ಅದರಲ್ಲೂ ಕನ್ನಡೇತರರು ಭಾಗವಹಿಸುವ "ಸಂಭಾಷಣಾ ಸ್ಪರ್ಧ...

ಭಾವಗೀತೆಯ ಗುಂಗು

ಇಮೇಜ್
ಸಿ  ಪಿ ರವಿಕುಮಾರ್  "ಸಂವಾದ" ಟ್ರಸ್ಟ್ ಪ್ರತಿ ತಿಂಗಳು ಆಯೋಜಿಸುವ 'ಸಂವಾದ' ಕಾರ್ಯಕ್ರಮದಲ್ಲಿ ಭಾಗವಹಿಸಿ ಕವಿ ಬಿ ಆರ್ ಲಕ್ಷ್ಮಣರಾವ್ ಅವರ ಮಾತುಗಳನ್ನು ಕೇಳುವ ಅವಕಾಶ ಇವತ್ತು ಸಿಕ್ಕಿತು. ಬಿ ಆರ್ ಲಕ್ಷ್ಮಣರಾವ್ ತಮ್ಮ ಕಾವ್ಯದ ಬಗ್ಗೆ ಸಂಕ್ಷಿಪ್ತವಾಗಿ ಆದರೆ ಸ್ವಾರಸ್ಯವಾಗಿ ಮಾತಾಡಿದರು. ಕೇವಲ ಒಂದೂವರೆ ಗಂಟೆಯ ಕಾರ್ಯಕ್ರಮದಲ್ಲಿ ಸಮಯ ಪಾಲನೆ ಬಹಳ ಮುಖ್ಯ. ಸಂವಾದ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಪ್ರಶ್ನೆ ಕೇಳಬಹುದು - ಹೀಗಾಗಿ ಸಮಯ ನಿಯಂತ್ರಿಸುವುದು ಒಂದು ಕಲೆ. ಇದನ್ನು ಕವಿ ಲಕ್ಷ್ಮಣರಾವ್ ಚೆನ್ನಾಗಿ ಮಾಡಿದರು ಎನ್ನಿಸಿತು. ಅನೌಪಚಾರಿಕವಾಗಿದ್ದರೂ ಕಾರ್ಯಕ್ರಮದಲ್ಲಿ ಆಯೋಜಕರು ಒಂದು ರೂಪರೇಷೆಯನ್ನು ಇಟ್ಟುಕೊಂಡಿದ್ದರು.  ಮೊದಲು ಕವಿ ತಾವು ಕಾವ್ಯಜೀವನಕ್ಕೆ ಹೇಗೆ ಬಂದರು ಎಂಬ ಬಗ್ಗೆ ಮಾತಾಡಿದರು. ಅವರ ಕೆಲವು ಗೀತೆಗಳನ್ನು ಉಪಾಸನಾ ಮೋಹನ್ ಮತ್ತು ವರ್ಷಾ ಎಂಬ ಕಲಾವಿದರು ಸುಶ್ರಾವ್ಯವಾಗಿ ಹಾಡಿದರು. ಕವಿ ತಮ್ಮ ಕೆಲವು ಕವಿತೆಗಳನ್ನು ಓದಿದರು. ಪ್ರಶ್ನೋತ್ತರಕ್ಕೂ ಅವಕಾಶವಿತ್ತು. ಪೂರ್ವನಿಯೋಜಿತವಲ್ಲದ ಒಂದು ದಿಢೀರ್ ವಿಮರ್ಶೆ ಕೂಡಾ ನಡೆಯಿತು - ಪ್ರೊ ಸಿ ಎನ್ ರಾಮಚಂದ್ರನ್ ಅವರನ್ನು ಕವಿ ಕೆಲವು ಮಾತುಗಳನ್ನು ಆಡಬೇಕೆಂದು ಕೇಳಿಕೊಂಡಿದ್ದು ಒಂದಿಷ್ಟು ಒಳ್ಳೆಯ ಚರ್ಚೆಗೆ ಅವಕಾಶ ಮಾಡಿಕೊಟ್ಟಿತು. ಹೀಗೆ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸುವುದು ಮತ್ತು ನಿರ್ವಹಣೆ ಮಾಡುವುದು ಕೂಡಾ ಅಪರೂಪದ ಕಲೆ. 'ಸಂ...