ಪೋಸ್ಟ್‌ಗಳು

Mohan Rana ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮೂರನೆಯ ಜಾವ

ಇಮೇಜ್
ಕವಿತೆಯ ಸ್ವಾರಸ್ಯ: ಪ್ರಶ್ನೆಗಳನ್ನು ಕೇಳುವುದು ಮನುಷ್ಯನ ಸ್ವಭಾವ. ವಿಜ್ಞಾನಕ್ಕೆ ಪ್ರತಿಯೊಂದು ವಿಷಯವನ್ನೂ ಕುರಿತು ಅದಮ್ಯ ಕುತೂಹಲ. ತಾರೆಗಳಿಂದ ಬಂದ ಬೆಳಕು ಅದೆಷ್ಟೋ ಕೋಟಿ ವರ್ಷಗಳ ಹಿಂದೆ ಹುಟ್ಟಿದ್ದು ಎನ್ನುತ್ತದೆ ವಿಜ್ಞಾನ. ಈಗ ನಮಗೆ ಕಾಣುವುದು ಹಿಂದೆಂದೋ ನಡೆದದ್ದರ ಪ್ರತಿಫಲನ.  ಒಂದು ರಾತ್ರಿ ಕವಿಗೆ ಮೂರನೆಯ ಜಾವದಲ್ಲಿ ಎಚ್ಚರವಾದಾಗ ಕಿಟಕಿಯಿಂದ ತಾರೆಗಳನ್ನು ನೋಡುತ್ತಾನೆ. ಅವನಿಗೆ ತಾರೆಗಳ ಬೆಳಕಿನ ಕುರಿತಂತೆ ಪ್ರಶ್ನೆಯೊಂದು ಹೊಳೆಯುತ್ತದೆ.  ತಾನೂ ಜೀವಿಸುತ್ತಿರುವುದು ಯಾವುದೋ  ಹಳೆಯದನ್ನೇ ಎಂಬ ಆಲೋಚನೆ ಅವನಿಗೆ ಬರುತ್ತದೆ ("ಪುನರಪಿ ಜನನಂ").  ಪ್ರಶ್ನೆಗಳನ್ನು ಕೇಳುತ್ತಾ ವಸ್ತುವಿನ ತೀರಾ ಹತ್ತಿರಕ್ಕೆ ಬಂದಾಗ ಉತ್ತರ ನಮಗೆ ದಕ್ಕುವುದೇ? ಎಲ್ಲವೂ ಗೋಜಲಾಗಿ "ಅಳಿಸಿಹೋಗುತ್ತಲೇ ಇದ್ದವು ಚಹರೆಯಿಂದ ಪದಗಳು."   ಮೂರನೆಯ ಜಾವ  ಮೂಲ ಹಿಂದಿ ಕವಿತೆ: ಮೋಹನ್ ರಾಣಾ  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ನಾನು ತಾರೆಗಳನ್ನು ನೋಡಿದಾಗ ದೂರದಲ್ಲಿ  ನನ್ನ ಮತ್ತು ಅವುಗಳ ನಡುವಿನ ದೂರದಿಂದ  ಅವು ನನಗೆ ಕಂಡದ್ದು ಈ ಕ್ಷಣದಲ್ಲಿ  ಮಿನುಗುವ ಕಳೆದುಹೋದ ಕ್ಷಣಗಳಂತೆ  ಕತ್ತಲಿನ ಅನಂತತೆಯಲ್ಲಿ  ಬೆಳಗಿನ ಬೆನ್ನು ಹತ್ತಿದ ರಾತ್ರಿಯಲ್ಲಿ  ಈ ಮೂರನೆಯ ಜಾವ  ನನಗೆ ನಿರ್ಧರಿಸಲು ಸಾಧ್ಯವಾಗದು...

ನೀರಿನ ಬಣ್ಣ

ಇಮೇಜ್
ಮೂಲ ಹಿಂದಿ ಕವಿತೆ: ಮೋಹನ್ ರಾಣಾ  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ದಿನ ಬೆಳಗಾದರೆ ಸುರಿಯುವ ಮಳೆ   ತೊಳೆಯಲು ಬಂದಂತಿದೆ ನಮ್ಮೆಲ್ಲ ಶಾಶ್ವತ ಕಲೆ  ಆದರೆ ಅದಕ್ಕೆ ಸಾಧ್ಯವಾದದ್ದು   ಈ ಹಳೇ  ಶರ್ಟಿನ ಬಣ್ಣವನ್ನು ಮಾಸಲು ಮಾಡಿದ್ದು ಮತ್ತು ಗೋಡೆಗಳಿಂದ  ಕಳೆದ ಋತುಮಾನಗಳ ನೆನಪುಗಳನ್ನು  ತೊಳೆದು ಹಾಕಿದ್ದು, ಅಷ್ಟೇ.  ಇದು ಬೇಸಗೆಯಲ್ಲ,  ಶರತ್ಕಾಲವಲ್ಲ, ಚಳಿಗಾಲವೂ ಅಲ್ಲ:  ನಾನೇ ಕೆಲವೊಮ್ಮೆ ಗುರುತಿಸಿದರೂ  ಮರೆತುಬಿಡುತ್ತೇನೆ ಬೇಗ.  ಇಷ್ಟೊಂದು ಮಳೆಯ ನಂತರ  ನನ್ನ ಶರ್ಟಿನ ಎಲ್ಲಾ ಬಣ್ಣಗಳೂ ಹೋಗಿ  ಕೊನೆಗೆ ಉಳಿಯುತ್ತದೇನೋ  ನೀರಿನ ಬಣ್ಣ.  ಕವಿತೆಯ ಸ್ವಾರಸ್ಯ:   ಮಳೆ ಬಂದಾಗ ಶರ್ಟಿನ ಬಣ್ಣ ಮಾಸುವುದು ಸಹಜ.  ಮೊದಲು ಈ ಕವಿತೆಯನ್ನು ಅದರ ಸಾಧಾರಣ ಅರ್ಥದಲ್ಲಿ ಓದಿ. ನಂತರ ಮಳೆ ಮತ್ತು ಬಣ್ಣ ಇವುಗಳಿಗೆ ಯಾವುದಾದರೂ ವಿಶೇಷ ಅರ್ಥವಿದೆಯೇ ಎಂದು ಯೋಚಿಸಿ. ಪ್ರತಿನಿತ್ಯ ನಾವು ಅನೇಕ ಬಗೆಯ "ಮಳೆ"ಗಳನ್ನು ಎದುರಿಸುತ್ತೇವೆ - ಉದಾಹರಣೆಗೆ ನಮ್ಮ ಮೇಲೆ ಸುರಿಯುವ ಅಭಿಪ್ರಾಯಗಳ ಮಳೆ. ಇವು ನಮ್ಮಿಂದ ನಮ್ಮತನವನ್ನು ಸ್ವಲ್ಪಸ್ವಲ್ಪವೇ ಅಳಿಸುತ್ತಿವೆ ಎಂದು ನಿಮಗೂ ಅನ್ನಿಸಿರಬಹುದು. ಕವಿತೆಯನ್ನು ಈ ಬೆಳಕಿನಲ್ಲಿ ಹಿಡಿದು ನೋಡಿ. ಕವಿ ತಾನು ಋತುಮಾನಗಳನ್ನು ಮರೆತು ಬಿಡುತ್ತ...