ಪೋಸ್ಟ್‌ಗಳು

ಜೂನ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಳೆ ಬರುವ ಮುನ್ನವೇ

ಇಮೇಜ್
ಕವಿತೆ ಓದುವ ಮುನ್ನ ... "ಮಳೆ ಬರುವ ಕಾಲಕ್ಕs ಒಳಗ್ಯಾಕs ಕುಳಿತೇವೋ, ಬಾ ಗೆಣೆಯ ಜಳಕಾs ಮಾಡೋಣs! ನಾವೂನೂ ಮೋಡಗಳ ಆಟ ಆಡೋಣs" ಎಂದರು ನಮ್ಮ ಬೇಂದ್ರೆ.  ಮಳೆಗೆ ಮಲೆನಾಡಿನವರು, ಕರಾವಳಿ ಪ್ರದೇಶದಲ್ಲಿರುವವರು  ಹೆದರುವುದಿಲ್ಲ. ಆದರೆ ನಗರದ ಜನರಿಗೆ ಮಳೆಯೆಂದರೆ ಗಾಬರಿ! ದೇವಲೋಕದ ಜೊತೆಗೆ ಭೂಮಿಯನ್ನು ಒಂದಷ್ಟು ಕಾಲ ಕನೆಕ್ಟ್ ಮಾಡುವ ಮಳೆಗೆ ನಾವು ಯಾಕೆ ಹೆದರುತ್ತೇವೆ? ಈ ಪ್ರಶ್ನೆಯನ್ನು ಗುಲ್ಜಾರ್ ಈ ಕವಿತೆಯಲ್ಲಿ ಕೇಳುತ್ತಾರೆ .... ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಮಳೆ ಬರುವ ಮುನ್ನವೇ ನಡೆಯುತ್ತಿದೆ ಮಳೆಯಿಂದ ಪಾರಾಗುವ ತಯಾರಿ ಗೋಡೆಗಳ ಬಿರುಕುಗಳನ್ನು ಮುಚ್ಚಿ ಛಾವಣಿಯ ಮೇಲೆ ಸುಣ್ಣ ಸಾರಿಸಿ ಸಾಲದ್ದಕ್ಕೆ ನಡೆಯುತ್ತಿದೆ ಕೊಡೆಯ ರಿಪೇರಿ ಹೊರಗಡೆ ತೆರೆಯುವ ಕಿಟಕಿಯ ಮೇಲೆ ಚಜ್ಜ ಹಾಕಿಸಿದ್ದಾಯ್ತು ಮರಳು ಮತ್ತಿನ್ನೇನೋ ಕುಟ್ಟಿ ಗಟ್ಟಿ ಮಾಡುತ್ತಿದ್ದಾರೆ ಮೇನ್ ರೋಡಿನಿಂದ ಮನೆವರೆಗೆ ಬರುವ ಕಿರುದಾರಿ ಇಲ್ಲದಿದ್ದರೆ ನೋಡಿ ಹಳ್ಳಗಳಲ್ಲಿ ತುಂಬಿಕೊಂಡು ನೀರು ಉಟ್ಟ ಬಟ್ಟೆ ಬೂಟುಗಳಿಗೆಲ್ಲ ಕೆಂಪು ಕಸರಿನ ರಾಡಿ ಸದ್ಯ ಎಲ್ಲಾದರೂ ತೊಡರೀತು ಸಪ್ತ ವರ್ಣ! ನೆಂದರೇನು ಗತಿ  ಮೋಡದಲ್ಲಿ! ಪಾರಾಗುತ್ತ ಶ್ರಾವಣದಿಂದ ಅಂತೂ ಇಂತೂ ಬದುಕೋಣ ಹೇಗಾದರೂ ಮಾಡಿ ಮಳೆ ಬರುವ ಮುನ್ನವೇ ನಡೆಯುತ್ತಿದೆ ಮಳೆಯಿಂದ ಪಾರಾಗುವ ತಯಾರಿ Kannada translation of a Hindi Po

ಕರಗುತ್ತಿದೆ ಕರದಲಿ ನವನೀತ

ಸೂರದಾಸ್ ಉತ್ತರಭಾರತದ ಸಂತಕವಿ. ಕೃಷ್ಣ ಇವನ ಇಷ್ಟದೈವ. ಕುರುಡನಾಗಿದ್ದರೂ ಇವನ ಒಳಗಣ್ಣಿಗೆ ಕೃಷ್ಣನ ಬಾಲಲೀಲೆಗಳು ವೇದ್ಯವಾಗಿದ್ದು  ತನ್ನ ರಚನೆಗಳಲ್ಲಿ ಗ್ರಾಮ್ಯ ಭಾಷೆಯ ಮಾಧುರ್ಯದಲ್ಲಿ ಅದ್ಭುತವಾಗಿ ವರ್ಣಿಸುತ್ತಾನೆ. ಅವನ "ಶೋಭಿತ ಕರ್ ನವನೀತ್ ಲಿಯೇ" ಎಂಬ ಭಜನೆಯ ಭಾವಾನುವಾದವನ್ನು ಇಲ್ಲಿ ಓದಿ. ಮೂಲ ರಚನೆ: ಸಂತ ಸೂರದಾಸ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಕರಗುತ್ತಿದೆ ಕರದಲಿ ನವನೀತ ಕರಗುತ್ತಿದೆ  ಹೃದಯವು ನೋಡುತ್ತಾ ಧೂಳು ಮಣ್ಣಿನಲ್ಲಿ ಅಂಬೆಗಾಲಿಡುತ್ತ ಹಾಲುಗಲ್ಲದ ಮೆಲುನಗೆ ಚೆಲ್ಲುತ್ತ   ॥ ೧ ॥ ತುದಿಬಾಯೊಳು ಮೊಸರಿನ ಅವಶೇಷ ದಧಿಯೊಲು ಸಿಹಿನಗೆ ಕಳೆವುದು ಕ್ಲೇಶ || ೨ ॥ ಹೊಳೆವುದು ಹಣೆಯಲಿ ಗೋರೋಚನ ತಿಲಕ ಸುಳಿಗಲ್ಲದ ನಗೆ ಕಿವಿಗಳ ತನಕ  ॥ ೩ ॥ ಗುಂಗುರು ಕೇಶದ ರಾಶಿಯ ನೋಟ ಭೃಂಗಾವಳಿ ಮಧುವನದಲಿ  ಹಾರಾಟ ॥ ೪ ॥ ಪದಕ ವಜ್ರ ಹೊಳೆವುದು ಕೊರಳಲ್ಲಿ ಸಿಂಹನಖವು ತರುವುದು ಶುಭದೃಷ್ಟಿ   ॥ ೫ ॥ ಕ್ಷಣವೊಂದರ ಈ ದರುಶನ ಭಾಗ್ಯ ಏಳುಕಲ್ಪಗಳ ಸುಖ ಸಾಮ್ರಾಜ್ಯ   ॥ ೬ ॥ ------ A bhajan by Surdas (Shobhit Kar Navneet Liye), translated into Kannada by C.P. Ravikumar

ಗಾಜಿನ ಬೀರುಗಳಿಂದ ಇಣುಕುತ್ತವೆ ಪುಸ್ತಕ

ಇಮೇಜ್
ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಪುಸ್ತಕಗಳೊಂದಿಗೆ ಒಂದು ರಕ್ತ ಸಂಬಂಧವಿತ್ತಲ್ಲ, ಕಡಿದುಹೋಗಿದೆ ಒಂದು ಕಾಲ ಇತ್ತು: ಎದೆಯ ಮೇಲಿಟ್ಟುಕೊಂಡು ಮಲಗಿಕೊಳ್ಳುವುದೇನು ಮಡಿಲಲ್ಲಿಟ್ಟುಕೊಂಡು ಮೆರೆಸುವುದೇನು ಕೆಲವೊಮ್ಮೆ ಮಂಡಿಗಳನ್ನೇ ಮಂದಲಗೆ ಮಣೆ ಮಾಡಿಕೊಂಡು ನತಮಸ್ತಕರಾಗಿ ಓದುತ್ತಿದ್ದೆವಲ್ಲ, ಹಣೆ ಮುಟ್ಟಿಸಿಕೊಂಡು ತಿಳುವಳಿಕೆಗೇನು ಸಿಕ್ಕುವುದು ಹೇಗೂ ಆದರೆ ಸಿಕ್ಕುತ್ತಿದ್ದವಲ್ಲ ಹೂವಿನ ಒಣಗಿದ ಪಕಳೆ ಘಮ್ಮೆನ್ನುವ ಹಾಳೆ ಪುಸ್ತಕ ಕೇಳಿ ಪಡೆಯುವ ನೆಪದಲ್ಲಿ, ಬೀಳುವ ಎತ್ತಿಕೊಡುವ ನೆಪದಲ್ಲಿ ಹುಟ್ಟಿಕೊಳ್ಳುತ್ತಿದ್ದವಲ್ಲ ಸಂಬಂಧಗಳು ಅವುಗಳಿಗೆ ಬಹುಶಃ ಇನ್ನು ಇಲ್ಲ ಅವಕಾಶ Translation of a Hindi Poem by Gulzar (ಈ-ಪುಸ್ತಕಗಳ ಕಾಲ ಬರುವುದಕ್ಕೆ ಬಹಳ ಹಿಂದೆಯೇ ಗುಲ್ಜಾರ್ ಈ ಕವಿತೆ ಬರೆದಿದ್ದರು! ಡೌನ್ ಲೋಡ್ ಮಾಡಿಕೊಂಡು ಪುಸ್ತಕ ಓದುವಾಗ ನಮಗೆ ಅದರಲ್ಲಿ ನವಿಲುಗರಿಯಾಗಲಿ, ಹೂವಿನ ಪಕಳೆಗಳಾಗಲಿ ದೊರೆಯುವುದಿಲ್ಲ! ಯಾರೋ ಪುಸ್ತಕದ ಅಂಚಿನಲ್ಲಿ  ಗೀಚಿದ ಬರಹ ನಮ್ಮನ್ನು ಕಾಡುವುದಿಲ್ಲ. ನಶಿಸುತ್ತಿರುವ ಮಾನವ ಸಂಬಂಧಗಳನ್ನು ಕುರಿತು ಈ ಕವಿತೆ ಸೂಕ್ಷ್ಮವಾಗಿ ವ್ಯಾಖ್ಯಾನ ಮಾಡುತ್ತದೆ. ಇದರಿಂದ ಸ್ಫೂರ್ತಿ ಪಡೆದವರು ಯಾರಾದರೂ ಹೊಸ ಬಗೆಯ ಈ-ಪುಸ್ತಕ ಅಪ್ಲಿಕೇಶನ್ ತಯಾರಿಸಬಹುದೇನೋ!)

ಶೂನ್ಯ ರೇಖೆ

ಇಮೇಜ್
ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  (ಕವಿತೆಯನ್ನು ಓದಿದ ಮೇಲೆ ಕೆಳಗಿರುವ ಟಿಪ್ಪಣಿ ಓದಿ ನಂತರ ಕವಿತೆಯನ್ನು ಮತ್ತೊಮ್ಮೆ ಓದಿ.) ಹೆಜ್ಜೆಗಳನ್ನು ಅಳೆಯುತ್ತಾ  ನಾನು ವಾಘಾದಲ್ಲಿ ಶೂನ್ಯರೇಖೆಯ ಮೇಲೆ ಬಂದು ನಿಂತಾಗ ನನ್ನ ನೆರಳು ಪಾಕೀಸ್ತಾನದಲ್ಲಿತ್ತು. ಸೂರ್ಯ ನನ್ನ ಬೆನ್ನಿಗಿದ್ದ. ಎದುರಿಗೆ ನನ್ನ ಅಬ್ಬೂ ಗೋಚರಿಸಿದರು. ನನ್ನನ್ನು ನೋಡಿದವರೇ ಕೈಯಲ್ಲಿದ್ದ ಕೋಲನ್ನು ನೆಲಕ್ಕೆ ಊರಿ ಮುಗುಳ್ನಕ್ಕು ಮಾತಾಡಿಸಿದರು: "ಅಲ್ಲಿ ಮಣ್ಣು ಹಾಕಿದ ಮೇಲೆ  ನಾನು ನನ್ನ ಮನೆಗೆ ಮರಳಿ ಬಂದೆ;  ನನಗೆ ವಿದಾಯ ಹೇಳಲು  ನೀನು ಬಂದೇ ಬರುತ್ತೀಯ  ಅಂತ ನನಗೆ ಭರವಸೆ ಇತ್ತು.  ನನ್ನ ಸಾವಿನ ಸುದ್ದಿ ನಿನಗೆ ಮುಟ್ಟಿರಲಿಲ್ಲ!" ಕೋಲನ್ನು ನೆಲಕ್ಕೆ ಮತ್ತೊಮ್ಮೆ ಬಡಿದು ನನ್ನ ಕಡೆ ಕೈ ಚಾಚಿ ನುಡಿದರು - "ನಡೆ, ದೀನಾಗೆ ಹೋಗೋಣ." [ಗುಲ್ಜಾರ್ ಹುಟ್ಟಿದ್ದು ಇಂದಿನ ಪಾಕಿಸ್ತಾನದ ದೀನಾ ಎಂಬ ಊರಿನಲ್ಲಿ.  ಭಾರತದ ವಿಭಜನೆಗೆ ಮುಂಚೆ ಅವರ ತಂದೆ  ಪಾಕಿಸ್ತಾನದಲ್ಲಿದ್ದ  ತಮ್ಮ ನೆಲೆಯನ್ನು ತ್ಯಜಿಸಿ ಕುಟುಂಬದೊಂದಿಗೆ ಭಾರತಕ್ಕೆ ಬಂದು ದೆಹಲಿಯಲ್ಲಿ ನೆಲೆಸಿದರು. ಮುಂದೆ ಗುಲ್ಜಾರ್ ಕವಿತೆಗಳನ್ನು ಬರೆಯತೊಡಗಿ ಮುಂಬೈಗೆ ಚಿತ್ರರಂಗದಲ್ಲಿ ಕೆಲಸ ಮಾಡಲೆಂದು ಹೋದಾಗ ಅವರ ತಂದೆಗೆ ಅದು ಇಷ್ಟವಿರಲಿಲ್ಲ. "ಇದರಲ್ಲಿ ನಿನಗೆ ಏನು ಸಂಪಾದನೆ ಇದ್ದೀತು? ನಿನ್ನ ಅಣ್ಣನ ಮೇಲೆ ನೀನು ಹೊರೆಯಾ

ಹೀಗೊಂದು ಇತ್ತು ಬಾಲ್ಯ

ಇಮೇಜ್
ಮೂಲ ಹಿಂದಿ ಕವಿತೆ: ಗುಲ್ಜಾರ್  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಹೀಗೊಂದು ಇತ್ತು ಬಾಲ್ಯ ಪುಟ್ಟದಾಗಿತ್ತು,  ಇಷ್ಟೇ ಇಷ್ಟು, ಬಾಲ್ಯ  ಬಾಲ್ಯದಲ್ಲೊಬ್ಬರು, ಅಪ್ಪ ಎಂಬವರು,  ಸಾಚಾತನ, ಒಳ್ಳೆಯತನ ಅವರ ಆಂತರ್ಯ  ಹೇಗಿತ್ತು ನಮ್ಮ ಸುಂದರ ಬಾಂಧವ್ಯ! ಹೀಗೊಂದು ಇತ್ತು ಬಾಲ್ಯ  ಮೇಲೆ ರೆಂಬೆಯನ್ನೇರಿ  ಬಾ  ಎನ್ನುವ  ಹೂಗಳು ಹಿಡಿಯಲು ಕೈ ಎತ್ತಿದರೆ  ನಿಲುಕಲಾರವು  ಚಾಚಿದರೂ  ಆಗ ಎಲ್ಲಿಂದಲೋ ಬಂದು  ಬಾಲ್ಯದ ಎರಡು ಕೈಗಳು  ಮೇಲೆತ್ತಿದರೆ ಮುಟ್ಟುವುದು  ಹೂವಿನೊಂದಿಗೆ ಹೂಬೆರಳು - ಇತ್ತು ಬಾಲ್ಯ ಹೀಗೊಂದು  ಹೀಗೇ ಬರುವಾಗ  ಎಲ್ಲೋ ಯಾವಾಗಲೋ  ಬಾಲ್ಯದಲ್ಲೇ ಅಪ್ಪ  ಲೀನವಾದರು  ಕೈಬಿಟ್ಟು  ಮುಷ್ಟಿಯಲ್ಲಿವೆ ಇನ್ನೂ  ಒಣಗಿ ಹೋದ ಹೂದಳ  ಬದುಕ ಬೇಕೆಂಬಾಸೆ  ಈ ಹೂವಿನ ಪರಿಮಳ - ಹೀಗೊಂದು ಇತ್ತು ಬಾಲ್ಯ  ನನ್ನ ತುಟಿಗಳ ಮೇಲೆ ಇನ್ನೂ  ಅವರ ದನಿ ಆಡುತ್ತಿದೆ  ಲಾಸ್ಯ  ನನ್ನ ಉಸಿರಿನಲ್ಲಿ ಇನ್ನೂ ಇದೆ  ಅವರಿತ್ತ ಆತ್ಮವಿಶ್ವಾಸ  ಎಂದು ಸಿಕ್ಕುವರೋ ಮತ್ತೆ  ಯಾವುದೋ ತಿರುವಿನಲ್ಲಿ  ಕೇಳುವರು - ನೆನಪಿದೆಯೇ  ಬಾಲ್ಯದ ವಿಳಾಸ? ಹೀಗೊಂದು ಇತ್ತು ಬಾಲ್ಯ  Kannada translation of a poem "Ek tha Bachpan" by Gulzar  (ಹಿಂದಿಯ ಆಶೀರ್ವಾದ್ ಎಂಬ ಚಿತ್ರದಲ್ಲಿ ಗುಲ್ಶಾರ್ ಅವರ "ಏಕ್  ಥಾ ಬಚ್ ಪನ್ " ಕವಿತೆಯನ್ನು ಲ

ಸಾಹಿರ್ ಲುಧಿಯಾನವಿ ಅವರ ಗಜಲ್

ಗಜಲ್ - ಸಾಹಿರ್ ಲುಧಿಯಾನವಿ  ಕನ್ನಡಕ್ಕೆ: ಸಿ.ಪಿ. ರವಿಕುಮಾರ್  ಭಾಷಾಂತರಕಾರನಿಗೆ ಅತ್ಯಂತ ಕಷ್ಟದ ಕೆಲಸವೆಂದರೆ ಗಜಲ್ ಅನುವಾದ! ಉರ್ದುವಿನ ಹೆಸರಾಂತ ಕವಿ ಸಾಹಿರ್ ಲುಧಿಯಾನವಿ ಅವರ ಕೆಲವು ಗಜಲ್ ಗಳ ಅನುವಾದವನ್ನು ಇಲ್ಲಿ ಪ್ರಯತ್ನಿಸಿದ್ದೇನೆ. ಹಿಂದಿ ಚಿತ್ರಗೀತೆಗಳಿಗೆ ಸಾಹಿರ್ ಅವರ ಕೊಡುಗೆ ಅಪಾರವಾದದ್ದು. ಅವರ ಹೆಸರೇ ಹೇಳುವಂತೆ ಅವರು ಪಂಜಾಬಿನ ಲುಧಿಯಾನಾ ಪ್ರಾಂತದವರು (ಜನನ - ೮ ಮಾರ್ಚ್ ೧೯೨೧). ಸಾಹಿರ್ ಹದಿಮೂರು ವರ್ಷದ ಹುಡುಗನಾಗಿದ್ದಾಗ ಅವರ ತಂದೆ ಎರಡನೇ ಮದುವೆ ಮಾಡಿಕೊಂಡರು. ಈ ಪ್ರಕರಣಕ್ಕೆ ಆಗಿನ ಕಾಲಕ್ಕೆ ಸಾಹಿರ್ ನ ತಾಯಿಯ ಪ್ರತಿಕ್ರಿಯೆ ತೀಕ್ಷ್ಣವಾದುದಾಗಿತ್ತು. ಅವರು ತಮ್ಮ ಪತಿಯನ್ನು ಬಿಟ್ಟು ಬೇರೆ  ಮನೆ ಮಾಡಿದರು. ಮಗು ಸಾಹಿರ್ ತಾಯಿಯ ಜೊತೆ ಇರಲು ಇಷ್ಟ ಪಟ್ಟ. ಶ್ರೀಮಂತ ತಂದೆಯ ಆಸ್ತಿಯನ್ನು ತೊರೆಯಬೇಕಾಯಿತು. ಅಷ್ಟೇ ಅಲ್ಲ, ಸೇಡಿನ ಮನೋಭಾವದ ತಂದೆಯ ಕ್ರೌರ್ಯವನ್ನೂ ಎದುರಿಸಬೇಕಾಯಿತು.  ತಾಯಿಯನ್ನು ಹೀಗೆ ಹಚ್ಚಿಕೊಂಡ ಸಾಹಿರ್ ಮುಂದೆ ವಿವಾಹ ಕೂಡಾ ಮಾಡಿಕೊಳ್ಳಲಿಲ್ಲ. ಬಡತನದಲ್ಲಿ ಬಾಲ್ಯ ಕಳೆಯಿತು. ಯುವಕ ಸಾಹಿರ್ ತನ್ನನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡ. ಅವನ ಬರಹಗಳು ಪ್ರಚೋದನಕಾರಿ ಎಂಬ ಕಾರಣಕ್ಕೆ ಬ್ರಿಟಿಷ್ ಸರಕಾರ ಅವನ ಮೇಲೆ ನಿಗಾ ಇಟ್ಟಿತು.  ಹೀಗಾಗಿ ಸಾಹಿರ್ ದೆಹಲಿಗೆ ಓಡಿ ಹೋಗಬೇಕಾಯಿತು. ಮುಂಬೈ ನಗರಿಯಲ್ಲಿ ಚಲನಚಿತ್ರಗಳಿಗೆ ಬರೆಯುವುದರಿಂದ ಬಡತನವನ್ನು ನೀಗಬಹುದು ಎಂಬ ಯಾರದೋ ಸಲಹೆಯ ಮೇರೆಗೆ ಅ

ಮಿಡಿಯುವೆಯೇಕೆ ಮೌನದಲಿ ಕಣ್ಣೀರು?

ಇಮೇಜ್
ಮೂಲ ಹಿಂದಿ ಕವಿತೆ: ನೀರಜ್  ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್  ಮಿಡಿಯುವೆಯೇಕೆ  ಮೌನದಲಿ ಕಣ್ಣೀರು? ವ್ಯರ್ಥ  ಹರಿಸುವೆಯೇಕೆ ಮುತ್ತುಗಳ ಧಾರೆ? ಕೆಲವೊಂದು ಕನಸುಗಳ ಕೊಲೆಯಾದರೇನಂತೆ  ಅನಂತ ಜೀವನವು ಕೊನೆಯಾಗಿಬಿಡುವುದೆ? ಕನಸೆಂದರೇನು? ನಯನ ಶಯ್ಯೆಯ ಮೇಲೆ  ಮಲಗಿರುವ ಒಂದು ಕಣ್ಣೀರ ಹನಿಯಷ್ಟೆ  ಮುರಿದುಹೋದರೆ ಕನಸು ಅದರರ್ಥವಿಷ್ಟೆ: ಯೌವ್ವನವು   ಅರೆನಿದ್ದೆಯಲ್ಲೆದ್ದಂತೆ   ಒದ್ದೆ ಮಾಡುವೆಯಲ್ಲ  ಬದುಕು?  ಮೀಯುವೆಯಲ್ಲ ಹಾಕದೇ ಮುಳುಗು? ಹರಿದುಹೋದರೆ ಹೋಯ್ತು ಒಂದಷ್ಟು ನೀರು;  ಅದರಿಂದ ಶ್ರಾವಣಕ್ಕೆ ಬರುವುದೇ ಸಾವು? ಹರಿದು ಹೋಯಿತೆ ಮಾಲೆ?  ತಾನೇ ಬಗೆ ಹರಿಯಿತು ಸಮಸ್ಯೆ! ಕಣ್ಣಲ್ಲಿ ಚಿಮ್ಮಿತೇ ಒಮ್ಮೆಲೇ ಧಾರೆ?  ಮುಗಿಯಿತೊಂದು ದೀರ್ಘ ತಪಸ್ಯೆ!  ಮುನಿಸಿಕೊಂಡೇ ಕಳೆವೆ ಏತಕ್ಕೆ ದಿನವನ್ನು ಹರಿದು ಹೋದದ್ದಕ್ಕೆ ಹಾಕುತ್ತ ತೇಪೆ? ಒಂದೆರಡು ದೀಪಗಳು  ಆರಿಹೋದರೆ ಮಂಕೆ   ಸಾವು  ಬರುವುದೇ ಹೇಳು ಮನೆಯ  ಅಂಗಳಕೆ? ಕಳೆದು  ಹೋಗದು ಎಂದೂ   ಯಾವುದೂ  ಇಲ್ಲಿ;  ಅದೇ ಥೈಲಿ, ಬದಲು ಹೊರಕವಚ ಮಾತ್ರ  ರಾತ್ರಿ ಹೊದ್ದ ಹುಣ್ಣಿಮೆಯನು ಕಳಚಿ ಬೆಳಗು ಉಟ್ಟಂತೆ ಬಿಸಿಲಿನ ಧೋತ್ರ  ಹೊರವಸ್ತ್ರ ಬದಲಾಯಿಸಿ ಬೇರೆಯಾಗುವೆಯಾ? ನಡಿಗೆ ಬದಲಾಯಿಸಿ ಬೇರೆ ಗುರಿಯ ಸೇರುವೆಯಾ? ಕಳೆದು ಹೋದರೆ  ಆಟಿಕೆಗಳೊಂದೆರಡು   ಸತ್ತು ಹೋಗುವುದೇನು ಹೇಳು  ಬಾಲ್ಯ? ಗಡಿಗೆಗಳು ಲಕ್ಷ ಸಲ ಮುರಿದು ಚೂರಾದವು;  ಬಾವಿಕ

ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು!

ಇಮೇಜ್
ಮೂಲ ಹಿಂದಿ ಕವಿತೆ: ಶಿವಮಂಗಲ ಸಿಂಗ್ ಸುಮನ್ ಕನ್ನಡಕ್ಕೆ: ಸಿ.ಪಿ. ರವಿಕುಮಾರ್ ಇಂದು ಸಾಗರವು ವಿಷವನು ಕಕ್ಕಿ  ಅಲೆಗಳಲೊಮ್ಮೆಲೆ   ಯೌವ್ವನ ಉಕ್ಕಿ  ಹೃದಯದಲ್ಲಿಯೂ ಸಾಗರದಂತೆ  ಮೇಲೇಳುತ್ತಿದೆ ಪ್ರವಾಹಸಿಂಧು  ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು!  ಅಲೆಗಳ ಭಾಷೆಯಲೇ ಮಾತಾಡು  ಚಂಡಮಾರುತದ ಸಾಹಸ ಬೇಡು   ಜೀವನದಲ್ಲೆಲ್ಲೋ ಒಮ್ಮೊಮ್ಮೆ  ಸಿಗುವುದು ಬಿರುಗಾಳಿಯ  ಸಮ ಬಂಧು! ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು!  ಅನಂತ ಸಾಗರವೂ ಅರಿತಿಹುದು  ಸೀಮಾರೇಖೆಯು ಇದೆ ತನಗೊಂದು! ಉಕ್ಕುತಿರುವ ಅಲೆಗಳಿಗೂ ಗೊತ್ತು  ಸೋಲೊಪ್ಪನು ಮೃಡ ಮಾನವನೆಂದು! ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು!  ಇರಬಹುದೆಷ್ಟೋ ಕಡಲೊಳು ಕೆಚ್ಚು  ದಣಿವಿಲ್ಲದ ನಾವಿಕನಿಗೆ ಇನ್ನೆಷ್ಟು? ದೇಹದೊಳಿರುವಾಗಿನ್ನೂ ಕೊನೆಯುಸಿರು  ತ್ಯಜಿಸುವನೇ ಹರಿಗೋಲನು ಕೈಬಿಟ್ಟು? ಈ ಛಲದಿಂದಲೆ ಗೆದ್ದನು ಬಿಡದೆ  ಸಪ್ತಸಾಗರಗಳಲೊಂದೂ! ಬಿರುಗಾಳಿಯ ಕಡೆ ತಿರುಗಿಸು ನಾವಿಕ ನಿನ್ನಯ ನಾವೆಯನಿಂದು! (Hindi poem by Shivmangal Singh Suman, translated by C.P. Ravikumar)