ಪೋಸ್ಟ್‌ಗಳು

Kannada Poems ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹತ್ತು ಹನಿಗವನಗಳು

ಇಮೇಜ್
Add caption

ಚೌಚೌಪದಿ - 4

ಇಮೇಜ್

ಚೌಚೌಪದಿ - 3

ಇಮೇಜ್

ಚೌಚೌಪದಿ - 2

ಇಮೇಜ್
ಸಿ ಪಿ ರವಿಕುಮಾರ್ 

ರವಿಕುಮಾರ್ ಚೌಪದಿ - 1 (ರಿಟರ್ನ್ ರಾಜಕೀಯ)

ಇಮೇಜ್
ಸಿ ಪಿ ರವಿಕುಮಾರ್ 

ಬಾಹುಬಲಿ

ಸಿ ಪಿ ರವಿಕುಮಾರ್  ಅವನ ಬಾಹುಗಳಲ್ಲಿ ಬಲವಿತ್ತು ಮನದಲ್ಲಿ ಹಂಬಲವಿತ್ತು ಬಂಜರಿನಲ್ಲೂ ಬಿತ್ತಿ ಬೆಳೆಯುವ ಛಲವಿತ್ತು. ಯಾವ ಸಿಡಿಲು ತಾಕಿತೋ ನಿಂತ ದಿಗಂಬರನಾಗಿ ಎಲ್ಲಾ ಬಿಟ್ಟು ಬೆಟ್ಟದ ಮೇಲೇರಿ ಕಣ್ ತೆರೆದು ಅಜಾತಶತ್ರು ಎಲ್ಲವನ್ನೂ ತ್ಯಾಗ ಮಾಡು ಕೊಟ್ಟುಬಿಡು ಬಲಿ ನಿನ್ನ ನಡೆ, ನಿನ್ನ ನುಡಿ ಬಿತ್ತಿ            ಬೆಳೆದದ್ದು                    ಸಾಕು ಬಾಹುಬಲಿ, ಬಿಟ್ಟಿ             ಬಂದದ್ದು                   ಉಣ್ಣುವುದ ಕಲಿ.

ಕೋಳಿಗೆ ಕಾಳು

ಇಮೇಜ್
ಸಿ ಪಿ ರವಿಕುಮಾರ್  ನನ್ನ ಮುದ್ದಿನ ಕೋಳಿಗಳೇ ಬನ್ನಿ ನಿಮಗೊಂದು ಕಟ್ಟಿದ್ದೇನೆ ಚಂದದ ಗೂಡು ಪ್ರತಿನಿತ್ಯ ನಿಮಗೆ ತಂದು ಹಾಕುತ್ತೇನೆ ಎಷ್ಟು ಬೇಕಾದರೂ ತಿನ್ನಿ ಬಿಟ್ಟಿಕಾಳು ಬದಲಿಗೆ ನಾನು ಕೇಳುವುದಿಷ್ಟೇ ಓಡಿ ಬರಬೇಕು ನಾನು ಕರೆದಾಗ ಕೊಕ್ ಕೊಕ್ ಎಂದು ಮಾರ್ನುಡಿಯಬೇಕು ನಗಬೇಕು ನಾನು ನಕ್ಕಾಗ ಅಳಬೇಕು ನಾನು ಮುಖ ಹಿಂಡಿದಾಗ ಮೊಟ್ಟೆ ಇಡಬೇಕು ನಾನು ಬೇಡಿದಾಗ ಕಾವು ಕೊಡಬೇಕು ಮರಿ ಮಾಡಬೇಕು ನಿಮ್ಮ ಮರಿಮೊಮ್ಮರಿಗಳಿಗೂ ಕೊಡುತ್ತೇನೆ ಕಾಳು ಬೇಕಾಗಿಲ್ಲ ಕಿಂಚಿತ್ತೂ ಚಿಂತೆ ದೊಡ್ಡ ಸ್ಕ್ರೀನ್ ಟಿ.ವಿ. ಹಾಕಿಸಿದ್ದೇನೆ ನಿಮ್ಮ ಮನರಂಜನೆಗಾಗಿ 24 ಗಂಟೆ ನೋಡುತ್ತಾ ಕಳೆಯಿರಿ ಕಾಲ ಮರಿ ಮಾಡುವಾಗ, ಕಾವು ಕೂತಾಗ ಒಮ್ಮೆಮ್ಮೆ ತರುವೆನು ಚೂರಿ ನನಗಿಷ್ಟ ಚಿಕನ್ ಮಂಚೂರಿ ಹಬ್ಬ ಮಾಡಿದರೆ ಒಮ್ಮೊಮ್ಮೆ ಏನಾಯಿತೀಗ?

ಚಿಂತೆ, ಬಿಡಿಹೂವ ಮುಡಿದಂತೆ

ಇಮೇಜ್
ಸಿ ಪಿ ರವಿಕುಮಾರ್  ಬಿಡಿಹೂವು ಮುಡಿದ ಸಸಿಗೆ ಏನು ಚಿಂತೆ? ಮಸಿಯಂತೆ ದಟ್ಟವಾಗಿ ಏಳುತ್ತಿರುವ ಇಂಗಾಲದ ಹೊಗೆ ಆಗಸದವರೆಗೂ ಅದರ ವ್ಯಾಪಕತೆ ಹಾರಾಡುತ್ತಿವೆ ಕ್ರೌರ್ಯ, ದ್ವೇಷ, ಅರಾಜಕತೆ ಪಂಡೋರಳ ಪಟ್ಟಿಗೆಯಿಂದ ಹೊರಬಂದ ಟೆರೋಸಾರ್ಗಳಂತೆ ಗ್ರೀಸ್ ದೇಶದಲ್ಲಿ ಇನ್ನೊಂದು ದುರಂತ ಕತೆ ... ನುಂಗಿಕೊಂಡು ಅರಳಿದೆಯಲ್ಲ ನಗೆಮುಗುಳು ಏನು ನಿನ್ನ ರಹಸ್ಯ? ಕಿವಿಯಲ್ಲಿ ಹೇಳು.

ಅರಳು ಮತ್ತು ತೂಕ

ಸಿ ಪಿ ರವಿಕುಮಾರ್  ಅರಳು ~~~~ ಎರಡು ವರ್ಷದ ಹಿಂದೆ. ಕ್ಷೌರದ ಅಂಗಡಿ (ಅಲ್ಲ ಹೇರ್ ಕಟಿಂಗ್ ಸಲೂನ್). ಐದು ವರ್ಷದ ಮಗು ಅರಳು ಹುರಿದಹಾಗೆ ಕನ್ನಡ ಮಾತಾಡುತ್ತಿದ್ದ ಮಾತಾಡಿಸಿದೆ, ನಿರ್ಭಯವಾಗಿ ಉತ್ತರಿಸಿದ. ಅವನ ತಾಯಿ ಕೂದಲು ಕತ್ತರಿಸಿಕೊಂಡಿದ್ದರೂ ಕುಂಕುಮ ಬಿಟ್ಟಿರಲಿಲ್ಲ ತನ್ನ ಹರಕು ಇಂಗ್ಲಿಷ್ ನಲ್ಲಿ ಗದರಿಸಿ ಹೇಳಿದಳು - ಇಂಗ್ಲಿಷ್ ನಲ್ಲಿ ಮಾತಾಡು ಅಮ್ಮ ಅಲ್ಲ ಮಮ್ಮಿ ಅನ್ನು ಮಗು ಮತ್ತು ನಾನು ಪೆಚ್ಚಾಗಿ ಸುಮ್ಮನಾದೆವು. ಈಗ ಅವನು ಸೇರಿರಬಹುದು ಯಾವುದೋ ಕಾನ್ವೆಂಟು ಪೂರ್ತಿ ಹರಿದಿರಬಹುದು ನಂಟು. ತೂಕ ~~~ ಹಿಂದೊಮ್ಮೆ ಹೀಗಿತ್ತು ಇಂಗ್ಲಿಷ್ ಪತ್ರಿಕೆ ತೂಕಕ್ಕೆ ಹಾಕಿದರೆ ಎರಡೂವರೆ ರೂಪಾಯಿ ಕನ್ನಡ ಪತ್ರಿಕೆಗೆ ಎರಡೇ ರೂಪಾಯಿ. ಇವತ್ತು ಸಾಧಿಸಿದ್ದೇವೆ ಪ್ರಗತಿ - ಎರಡಕ್ಕೂ ಸಿಕ್ಕುತ್ತಿದೆ ಒಂದೇ ಗತಿ ಇದರ ರಹಸ್ಯ ಬಿಡಿಸಲೇ? ಕನ್ನಡ ಪತ್ರಿಕೆಯ ಮುಖಕ್ಕೆ ಆಗಾಗ ಇಂಗ್ಲಿಷ್ ಜಾಹೀರಾತಿನ ಆರತಿ. 

ಹನಿ ಹನಿ ಕವನ!

ಹನಿ ಹನಿ ಕವನ!  ಸಿ.ಪಿ. ರವಿಕುಮಾರ್  (ನನ್ನ ಹನಿಸಂಗ್ರಹ) ವೋಟು ಕೊಡಿ!  ಬಾಜಾ ಬಜಂತ್ರಿಯೊಂದಿಗೆ ಬಂದ ಮೆರವಣಿಗೆಯಲ್ಲಿ ರಾಜಕಾರಣಿಯೊಬ್ಬ ಕೂಗುತ್ತಿದ್ದ: ಓಟು ಕೊಡಿ ಎಂದು! ತೇಜಹೀನ ಕಳೆಯುಳ್ಳ ಮಿ॥ ಕಾಮನ್ ಗೊಣಗುತ್ತಿದ್ದ "ನಿಜ ಹೇಳಲೇ? ನಮಗೆ ಓಟು ನೀವು ಕೊಡಬೇಕು!" ರಜಾ ಕೊಟ್ಟು ನಿಮ್ಮ ಘೋಟಾಲೆಗಳಿಂದ ಒಂದಿಷ್ಟು ತಾಜಾ O2 ನಮಗೆ ಉಸಿರಾಡಲು ಬೇಕು"  ಮತಯಾಚನಾ ಗೀತೆ ಒಮ್ಮೆ ಕೇವಲ ಒಮ್ಮೆ ಮತಕೊಟ್ಟು ನೋಡಿ! ನಿಮ್ಮ ಭಾಗ್ಯವು ಹೇಗೆ ತೆರೆದುಕೊಳ್ಳುವುದು! ನಮ್ಮ ಪಕ್ಷಕ್ಕೊಮ್ಮೆ ಮತಹಾಕಿ ನೋಡಿ ನಿಮ್ಮ ರಾಜ್ಯದ ನಕ್ಷೆ ಬದಲಾಯಿಸುವೆವು! ಗಣಿ ತೋಡಿ ಅಗೆಯುವೆವು! ಬೆಟ್ಟ ಪುಡಿ ಮಾಡುವೆವು! ನಿಮ್ಮ ರಾಜ್ಯದ ನಕ್ಷೆ ಬದಲಾಯಿಸುವೆವು! ಕೆರೆಗಳನು ಮುಚ್ಚುವೆವು! ಲೇಔಟ್ ಕಟ್ಟುವೆವು! ನಿಮ್ಮ ರಾಜ್ಯದ ನಕ್ಷೆ ಬದಲಾಯಿಸುವೆವು! ಸಾಲುಮರ ಕಡೆದರೂ ಸೇತುವೆಯ ಕಟ್ಟುವೆವು! ನಿಮ್ಮ ರಾಜ್ಯದ ನಕ್ಷೆ ಬದಲಾಯಿಸುವು! ಶಾಲೆಗಳ ಮುಚ್ಚುವೆವು, ಮಾಲುಗಳ ಕಟ್ಟುವೆವು! ನಿಮ್ಮ ರಾಜ್ಯದ ನಕ್ಷೆ ಬದಲಾಯಿಸುವೆವು! ಅಲ್ಲಿಂದ ಇಲ್ಲಿಂದ ಹೂಡಿಕೆಯ ತರುವೆವು! ನಿಮ್ಮ ರಾಜ್ಯದ ಮಹಿಮೆ ಎಲ್ಲೆಡೆಗು ಮೆರೆವೆವು! ಒಮ್ಮೆ ಕೇವಲ ಒಮ್ಮೆ ಮತಕೊಟ್ಟು ನೋಡಿ ನಿಮ್ಮ ಭಾಗ್ಯವು ಹೇಗೆ ತೆರೆದುಕೊಳ್ಳುವುದು! ಬಸ್ ಒಳಗೆ ಕಂಡ ಬರಹ ಬಸ್ಸಿನಲ್ಲಿ ಕೂತ ಶಾಲಾ ಮಾಸ್ತರರ ಕಣ್ಣಿಗೆ ಬಿಟ್ಟು ಬರಹ: "ಸಂಸ್ಥೆಯ ವಾಹನ ನಮ್ಮೆಲ್ಲರ ಆಸ್ತಿ ಹಾನಿ ಮಾಡದಂತೆ ಸಹಕರಿಸಿ" ವಿ...