ಪೋಸ್ಟ್‌ಗಳು

Ramdhari Singh Dinakar ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕೃಷ್ಣನ ಎಚ್ಚರಿಕೆ

ಇಮೇಜ್
ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್"  ಕನ್ನಡ ಭಾಷಾಂತರ: ಸಿ. ಪಿ. ರವಿಕುಮಾರ್  ವರುಷಗಟ್ಟಲೆ ಅಲೆದಲೆ ದು ಕಾಡುಮೇಡುಗಳಲ್ಲಿ  ಎಲ್ಲೆಡೆ ಕಾಲ್ತೊಡರುವ ವಿಘ್ನ ಬಾಧೆಗಳ  ಬಳ್ಳಿ  ಚುಚ್ಚುವ ಕಲ್ಮುಳ್ಳು, ಬಿಸಿಲು ಮಳೆಗಾಳಿಗೆ  ಪಾಂಡವರು ಮಾಗಿದರು ವಿಧಿಯ ಈ ದಾಳಿಗೆ  ಸೌಭಾಗ್ಯವೆಂಬುದು ಸದಾ ನಿದ್ರಿಸುವುದಿಲ್ಲ  ಬನ್ನಿ ನೋಡುವ ಮುಂದಿನ  ಕುತೂಹಲ!  ತಿಳಿಸಿ ಹೇಳಲು ಸ್ನೇಹಮಾರ್ಗವನ್ನು  ಸರಿದಾರಿಗೆ ಕರೆತರಲು ಎಲ್ಲರನ್ನೂ  ದುರ್ಯೋಧನನಿಗೆ ಸಮಯಕ್ಕೆ ನೀಡಿ  ತಿಳುವಳಿಕೆ  ತಪ್ಪಿಸಲು ಭೀಷಣ ವಿಧ್ವಂಸ ಮುಂದಕ್ಕೆ  ಭಗವಂತನು ಕಾಲಿಟ್ಟನು ಹಸ್ತಿನಾಪುರಕೆ  ಹೊತ್ತು ಪಾಂಡವರ ಸಂದೇಶ, ಹಾರೈಕೆ  "ನ್ಯಾಯ ನೀಡುವುದಾದರೆ ನೀಡು ನಮ್ಮರ್ಧ  ಅಡ್ಡ ಬಂದರೆ ಅದಕ್ಕೂ  ನಿನ್ನ ಕಡುಸ್ವಾರ್ಥ  ಕೊಟ್ಟು ತೀರಿಸು ಕೇವಲ ಐದು ಗ್ರಾಮಗಳು  ಇಟ್ಟುಕೋ ನಿನ್ನ ಬಳಿ  ಬೇರೆಲ್ಲವನ್ನೂ   ಅಷ್ಟರಲ್ಲೇ ನಮಗೆ ಸಿಕ್ಕುವುದು ತೃಪ್ತಿ  ಬಂಧುಕಲಹದಲ್ಲಿಲ್ಲ ನಮಗೆ ಆಸಕ್ತಿ" ಅದನ್ನೂ ದುರ್ಯೋಧನ ಕೊಡಲಾರದೆ ಹೋದ  ಪಡೆಯಲಾರದೆ ಹೋದ ಸಮಾಜದ ಆಶೀರ್ವಾದ  ಸಾಲದಕ್ಕೆ  ಹರಿಯನ್ನೇ ...

ಶಕ್ತಿ ಮತ್ತು ಕ್ಷಮೆ

ಇಮೇಜ್
ರಾಮಧಾರಿ ಸಿಂಗ್ 'ದಿನಕರ್' ಅವರ 'ಶಕ್ತಿ ಮತ್ತು ಕ್ಷಮೆ' ಎಂಬ ಪ್ರಸಿದ್ಧ ಕವಿತೆಯ ಅನುವಾದವನ್ನು ಕೆಳಗೆ ಕೊಟ್ಟಿದ್ದೇನೆ. ದಿನಕರ್ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವರು. ಬ್ರಿಟಿಷ್ ಸರಕಾರದ ವಿರುದ್ಧ ಅವರು ಜನರನ್ನು ರೊಚ್ಚಿಗೆಬ್ಬಿಸುವ ಕವಿತೆಗಳನ್ನು ಬರೆದವರು. ಗಾಂಧೀಜಿಯ ಅಹಿಂಸಾಮಾರ್ಗವನ್ನು ಕುರಿತು ಯುವಕವಿಗೆ ಅನುಮಾನಗಳಿವೆ. ಯಾರ ತೋಳಿನಲ್ಲಿ ಶಕ್ತಿ ಇಲ್ಲವೋ ಅವರ ವಿನಯ, ತ್ಯಾಗ, ಕ್ಷಮೆಗಳನ್ನು ಜನರು ಹೇಡಿತನವೆಂದೇ ಭಾವಿಸುತ್ತಾರೆ ಎನ್ನುವುದು ಕವಿಯ ವಾದ.  ಕವಿತೆಯಲ್ಲಿ ಕವಿ ಯುಧಿಷ್ಥಿರನನ್ನು ಸಂಬೋಧಿಸುತ್ತಾನೆ. ಯುಧಿಷ್ಥಿರ ದುರ್ಯೋಧನನನ್ನೂ ಕ್ಷಮಿಸುವ ಸ್ವಭಾವದವನು. ಅವನನ್ನು ಸುಯೋಧನ ಎಂದು ಕರೆಯುತ್ತಿದ್ದವನು. ಆದರೆ ಅವನ ತಾಳ್ಮೆ ಅವನಿಗೆ ಕೊಟ್ಟ ಪ್ರತಿಫಲವೇನು ಎಂದು ಕವಿ ಮೂದಲಿಸುತ್ತಾನೆ. ರಾಮಾಯಣದ ಒಂದು ಕಥೆಯನ್ನು ಕವಿ ನೆನೆಯುತ್ತಾನೆ. ಕಡಲನ್ನು ದಾಟಬೇಕಾದಾಗ ರಾಮನು ಮೂರು ದಿವಸಗಳ ಕಾಲ "ಶಾಂತನಾಗು, ಸೇತುವೆಯನ್ನು ಕಟ್ಟಲು ಅವಕಾಶ ಮಾಡಿಕೊಡು" ಎಂದು ಬೇಡಿಕೊಂಡನಂತೆ. ಸಮುದ್ರವು ರಾಮನ ಪ್ರಾರ್ಥನೆಗೆ ಓಗೊಡದೆ ಭೋರ್ಗರೆಯುತ್ತಲೇ ಇತ್ತು. ಆಗ ರಾಮನ ಬಾಣವೇ ಮಾತಾಡಿತು. ತೋಳ್ಬಲಕ್ಕೆ ಮಣಿದ ಸಾಗರ ರಾಮನ ಕಾಲಿಗೆ ಬಂದು ನಮಸ್ಕರಿಸಿ ಸೇತುವೆ ಕಟ್ಟಲು ಅನುವು ಮಾಡಿಕೊಟ್ಟಿತು.  ಮೂಲ ಕವಿತೆ - ರಾಮಧಾರಿ ಸಿಂಗ್ ದಿನಕರ್  ಕನ್ನಡ ಅನುವಾದ - ಸಿ. ಪಿ. ರವಿಕುಮಾರ್  ಕ್ಷಮೆ...

ರೊಟ್ಟಿ ಮತ್ತು ಸ್ವಾತಂತ್ರ್ಯ

ಇಮೇಜ್
ರಾಮಧಾರಿ ಸಿಂಗ್ ದಿನಕರ್ ಹಿಂದಿಯ ಬಹಳ ಮುಖ್ಯ ಕವಿ.  ಸ್ವಾತಂತ್ರ್ಯ ಹೋರಾಟದಲ್ಲಿ ಸ್ವತಃ ಪಾಲ್ಗೊಂಡವರು. ಸ್ವಾತ್ಯಂತ್ರ್ಯ ಬಂದ ಹೊಸ್ತಿಲಲ್ಲಿ ಇವರು ಬರೆದ ಕವಿತೆ ಇಂದಿಗೂ ಪ್ರಸ್ತುತವಾಗಿದೆ. ಸ್ವಾತಂತ್ರ್ಯದಿನದಂದು ನಾವು ಕಲಿಯಬೇಕಾದ ಮುಖ್ಯಪಾಠವನ್ನು ಅವರು ಎಷ್ಟು ಚೆನ್ನಾಗಿ ಕವಿತೆಯ ರೂಪದಲ್ಲಿ ಹೇಳಿದ್ದಾರೆ, ನೋಡಿ.  "ಹಸಿವು ತಾಳಿಕೋ, ನಿನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೇಡ" ಎಂದು ಹೇಳುವವರು ಈಗ ಇಲ್ಲವೇ ಇಲ್ಲ.  ನಾನಾ ಬಗೆಯ ಹಸಿವುಗಳಿಗೆ ಶರಣಾಗುತ್ತಿರುವ ಇಂದಿನ ಸಮಾಜವನ್ನು ಈ ಕವಿತೆ ಎಚ್ಚರಿಸುತ್ತದೆ.   ಮೂಲ ಹಿಂದಿ ಕವಿತೆ : ರಾಮಧಾರಿ ಸಿಂಗ್ ದಿನಕರ್  ಕನ್ನಡ ಅನುವಾದ : ಸಿ ಪಿ ರವಿಕುಮಾರ್  ಸ್ವಾತಂತ್ರ್ಯವೇನೋ ಸಿಕ್ಕಿತು, ಆದರೆ ಸ್ಥಿರವಾಗಿರುವುದೇ ಈ ಗೌರವ? ಮಾರಿ ತಿಂದುಬಿಡುವಿಯೋ ಹೇಗೆ, ಹಸಿವೆಯಲ್ಲಿ ಸಾಯುತ್ತಿರುವ ಭಾರತೀಯ? ಸ್ವಾತಂತ್ರ್ಯವು ರೊಟ್ಟಿಯಲ್ಲ, ಇವೆರಡೂ ಶತ್ರುಗಳೂ ಅಲ್ಲ, ಹಸಿವೇ ದೊಡ್ಡದಾದರೆ ಮಾತ್ರ ಸ್ವಾತ್ರಂತ್ರ್ಯಕ್ಕೆ ಉಳಿಗಾಲವಿಲ್ಲ  ಸ್ವಾತ್ರಂತ್ರ್ಯ ದ್ರೋಹಿಗಳು ಎದ್ದು ನಿಲ್ಲುತ್ತಿದ್ದಾರೆ  ನಾಲ್ಕೂ ಕಡೆ ರೊಟ್ಟಿ ತೋರಿಸಿ ಪಶುಗಳನ್ನು  ಅಟ್ಟಿಕೊಂಡೊಯ್ಯುವುದು ಇವರ ನಡೆ. ಎಷ್ಟು ದಿನ ಸಹಿಸುವನು ಹಸಿದು ಕಂಗಾಲಾದವನು ಇವರ ಮಾಯೆ? ಹೊಟ್ಟೆಯ ಬೆಂಕಿಗೆ ಸಿಕ್ಕಿದ ಮಾನವ ಸುಟ್ಟುಹೋಗದೇ ಇರುವನೆ?   ಕೊಡಬಲ್ಲೆಯಾ ಬಲಿದಾನ? ಸಹಿಸಿಕೊಳ್...

ಗಾಂಧಿ

ಮೂಲ ಹಿಂದಿ ರಚನೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ದೇಶದಲ್ಲಿ ಎಲ್ಲೇ ಹೋದರೂ ಕಿವಿಗೆ ಕೇಳುತ್ತದೆ ಅದೇ ಆಹ್ವಾನ: ಜಡತ್ವ ಹೊಡೆದೋಡಿಸಲು  ಸೃಷ್ಟಿಸು ಯಾವುದಾದರೂ ಭೂಕಂಪ!  ಕವಿದಿರುವ ಕತ್ತಲಿನಲ್ಲಿ  ನಿನ್ನ ದೊಂದಿ ಮತ್ತೆ ಹಚ್ಚು! ಇಡೀ ಬೆಟ್ಟವನ್ನು ಕೈಯಲ್ಲಿ ಹೊತ್ತು ಹನುಮಂತನ ಉಪಾದಿಯಲ್ಲಿ ಲಂಘಿಸು! ಬಿರುಗಾಳಿ ಎಬ್ಬಿಸು, ಕವಿ! ಗರ್ಜಿಸು! ಗರ್ಜಿಸು! ಗರ್ಜಿಸು! ನಾನು ತಣ್ಣಗೆ ಕುಳಿತು ಯೋಚಿಸುತ್ತೇನೆ - ನಾನೆಂದು ಗರ್ಜಿಸಿದೆ? ನನ್ನ ಗರ್ಜನೆಯೆಂದು ಜನರು ಭ್ರಮಿಸಿದರಲ್ಲ ಅದು ನಿಜಕ್ಕೂ ಗಾಂಧಿಯ ಗರ್ಜನೆಯಾಗಿತ್ತು ನಮಗೆ ಜನ್ಮ ಕೊಟ್ಟರಲ್ಲ ಆ ಗಾಂಧಿಯ ಗರ್ಜನೆ. ಆಗಲೂ ನಾವು ನೋಡಿದ್ದು ಬಿರುಗಾಳಿಯನ್ನು, ಗಾಂಧಿಯನ್ನಲ್ಲ ಬಿರುಗಾಳಿ ಮತ್ತು ಗರ್ಜನೆಗಳ ನೇಪಥ್ಯದಲ್ಲಿ  ಅವರು ಇರುತ್ತಿದ್ದರು. ನಿಜವೆಂದರೆ ತಮ್ಮ ಲೀಲೆಯಲ್ಲಿ ಬಿರುಗಾಳಿ ಗರ್ಜನೆಗಳು ಸೇರಿಕೊಳ್ಳುವುದನ್ನು ಕಂಡು ಅವರು ನಗುತ್ತಿದ್ದರು. ಗರ್ಜನೆ ಹೊರಡುವುದು ದೊಡ್ಡ ಧ್ವನಿಯಿಂದಲ್ಲ ಮೆಲುದನಿಯಿಂದ ಒಂಟಿ ಉರಿಯುವ ಮೋಂಬತ್ತಿಯಂಥ ಧ್ವನಿ ಹದ್ದಿನಂತಲ್ಲ ಪಾರಿವಾಳದ ನಡೆ ನಡೆಯುವ ಧ್ವನಿ ಗಾಂಧಿ ಹದ್ದನ್ನೂ ಮೀರಿಸಿದ ಹದ್ದಾಗಿದ್ದರು ಏಕೆಂದರೆ ಅವರು ನೀರವತೆಯ ಸದ್ದಾಗಿದ್ದರು --- [ಈ ಕವಿತೆಯನ್ನು ಬರೆದ ರಾಮಧಾರಿ ಸಿಂಹ್ "ದಿನಕ...

ಚಂದ್ರನ ಅಂಗಿ

ಇಮೇಜ್
ಮೂಲ ಹಿಂದಿ ಬಾಲಕವಿತೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್  ಹೀಗಾಯಿತು ಒಮ್ಮೆ, ಚಂದ್ರಮನು ಗೋಗರೆದ ತಾಯ ಬಳಿ ಬಂದು  "ಅಮ್ಮಾ! ಹೊಲಿಸಿಕೊಡು ಚಂದದ ಅಂಗಿ ನನಗೊಂದು  ನೋಡಮ್ಮಾ ಬರಿಮೈಯಲಿ ತಿರುಗುವೆ ಹನ್ನೆರಡೂ ಮಾಸಗಳು  ಬಿಸಿಲು ಮಳೆ ಚಳಿಗಾಳಿಯಲ್ಲಿ ನಲುಗುತ್ತಿದೆ ಹೊಂದೊಗಲು!" ತಾಯಿಗೆ ನಗು ಬಂತು  ಕೊಟ್ಟಳು  ಹೂಮುತ್ತು  "ಮಗೂ! ನನಗೆ ತಿಳಿಯದೇನಪ್ಪ ನಿನ್ನ ಕಷ್ಟ ಕೊರತೆ? ಏನು ಮಾಡಲಿ! ಬದಲಾಯಿಸುವೆ ನೀನು ಪ್ರತಿದಿನವೂ ಅಳತೆ! ಪೂರ್ಣನಾಗುವೆ ಒಮ್ಮೆ, ಅರೆಮೈಯೊಮ್ಮೆ, ಕೆಲವೊಮ್ಮೆ ಸಂಪೂರ್ಣ ಮಾಯ!" ಬಾಡಿತು ಇಂದುಮುಖ, ಮರುಕ್ಷಣ  ಅರಳಿತು, ಹೊಳೆಯಿತು ಒಂದು ಉಪಾಯ! "ಸರಿಯಮ್ಮಾ! ಹೊಲಿಸಿಬಿಡು ಹಾಗಾದರೆ ಹೊಸಬಟ್ಟೆ  ಒಂದಲ್ಲ ಹದಿನೈದು  ಧರಿಸುವೆ ಒಪ್ಪುವಳತೆಯ ಚಂದದಂಗಿ ಪ್ರತಿದಿನ ಬೇರೊಂದು!" Translation by C.P. Ravikumar of a Children's Poem in Hindi by Ramdhari Singh "Dinakar"

ಕೆರೆ

ಇಮೇಜ್
ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್  ಮುಟ್ಟಬೇಡಿ ಈ ಕೆರೆಯನ್ನು  ತೂರದಿರಿ ಕಲ್ಲು  ಎಸೆಯದಿರಿ ಹುಲ್ಲು  ವಿನಾ ಕಾರಣ ಕಿತ್ತ ಎಲೆ ಹೂವು  ತೇಲಿ ಬಿಡದಿರಿ ಕಾಗದದ ನಾವೆಯನ್ನು  ಕ್ಷಣಿಕ  ಪುಳಕದ ಈ  ಆಟಗಳು ನಿಮಗಿಷ್ಟ  ಅಲೆಯೆಬ್ಬಿಸಲು ಸಲಿಲಕ್ಕೆ ಎಷ್ಟು ಕಷ್ಟ Kannada Translation by C.P. Ravikumar of a Hindi poem by Ramdhari Simgh "Dinakar"

ಋತುಗಳ ರಾಜ ವಸಂತ! ವರ್ಷ ಋತುಗಳ ರಾಣಿ!

ಇಮೇಜ್
ಋತುಗಳ ರಾಜ ವಸಂತ! ವರ್ಷ ಋತುಗಳ ರಾಣಿ! ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್  ಕವಿತೆ ಓದುವ ಮುನ್ನ - ರಾಮಧಾರಿ ಸಿಂಹ್ ದಿನಕರ್ ಹಿಂದಿಯ ಜನಪ್ರಿಯ ಕವಿ; ಹಿಂದಿ ಕವಿಗಳ ಸಾಲಿನಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ದ್ವಿತೀಯರು.  ಇವರು ರಚಿಸಿದ ಸಾನೆಟ್ "ಋತುಗಳ ರಾಜ ವಸಂತ! ವರ್ಷ ಋತುಗಳ ರಾಣಿ" ಎಂಬುದರ ಅನುವಾದವನ್ನು ಇಲ್ಲಿ ಕೊಟ್ಟಿದ್ದೇನೆ.  ಈ ಕವಿತೆಯಲ್ಲಿ  ಕವಿ ವಸಂತವನ್ನು ಗಂಡಿಗೆ ಮತ್ತು ಹೆಣ್ಣನ್ನು ವರ್ಷ ಋತುವಿಗೆ ಹೋಲಿಸುತ್ತಾರೆ.  ಕವಿತೆಯಲ್ಲಿ ಬಳಸಲಾಗುವ ವಿಶಿಷ್ಟ ಪದಪ್ರಯೋಗವನ್ನು ಗಮನಿಸಿ. ಉದಾಹರಣೆಗೆ "ನಗೆಮುಗುಳು ರಾಜನ ಮೊಗದಲ್ಲಿ" ಎಂಬ ಸಾಲು ವಸಂತ ಋತುವಿನಲ್ಲಿ ವನವು ಚಿಗುರಿ ಹೂವುಗಳು ಅರಳುವುದನ್ನು ಹೇಗೆ ಸೂಚಿಸುತ್ತದೋ ಹಾಗೇ ಸಮಾಜದಲ್ಲಿ ಗಂಡಿಗೆ ಸಿಗುವ ಸ್ಥಾನಮಾನದ ಬಗ್ಗೆಯೂ ಹೇಳುತ್ತದೆ. ವಸಂತ ಮಾಸದಲ್ಲಿ ಹೂವಿನ ಸುತ್ತಲೂ ಹಾರಾಡುವ ಪಾತರಗಿತ್ತಿಗಳು ಎಷ್ಟೋ! ಹಾಗೇ ಗಂಡಿನ ಸುತ್ತಲೂ ಸೇವೆಗೆ ಸಿದ್ಧರಾಗಿ ನಿಂತ ಅಪ್ಸರೆಯರು ಎಷ್ಟೋ!  ವಸಂತದ ಸಂಭ್ರಮಕ್ಕೆ ಹೋಲಿಸಿದರೆ ವರ್ಷ ಋತು ಗಾಂಭೀರ್ಯವನ್ನು ಧ್ವನಿಸುತ್ತದೆ. "ಬಿಚ್ಚಿದ ಸೆರಗು" ಎಂಬುದು ಮೋಡಕ್ಕೆ ರೂಪಕವಾಗುತ್ತದೆ.  "ಕವಿಯುವ ವ್ಯಥೆ" ಎಂಬ ಪದಪ್ರಯೋಗ ಕವಿಯುವ ಮೋಡಕ್ಕೆ ತಾಳೆ...

ಪರಂಪರೆ

ಇಮೇಜ್
  ಕವಿತೆ ಓದುವ ಮುನ್ನ ...  ಹಿಂ ದಿ ಸಾಹಿತ್ಯದಲ್ಲಿ ದಿನಕರ್ ಅವರದ್ದು ದೊಡ್ಡ ಹೆಸರು.   ಸ್ವಾತಂತ್ರ್ಯಪೂರ್ವದಲ್ಲಿ ಬರೆಯಲು ಪ್ರಾರಂಭಿಸಿದ ದಿನಕರ್ ತಮ್ಮ ಕ್ರಾಂತಿಕಾರಿ ಧ್ವನಿಗೆ ಹೆಸರಾದವರು; ಅವರ ಕವಿತೆಗಳು ಸಾಮ್ರಾಜ್ಯಶಾಹಿಯ ವಿರುದ್ಧ ಜನರನ್ನು ಬಡಿದೆಬ್ಬಿಸುತ್ತಿದ್ದವು. ಅವರ ಕಾವ್ಯದಲ್ಲಿ ಭಾಷೆಯ ಪ್ರಯೋಗ ಯಾರನ್ನಾದರೂ ತಲೆದೂಗುವಂತೆ ಮಾಡುತ್ತದೆ. ಸ್ವಾತಂತ್ರ್ಯೋತ್ತರ ಭಾರತ ಸರಕಾರದಲ್ಲಿ ಅವರು ಸಚಿವರಾಗಿದ್ದರು.  ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದರು.    ಸ್ವಾ ತಂತ್ರ್ಯದ ಪೂರ್ವದಲ್ಲಿ ಭಾರತದ ಪರಂಪರೆಗಳು ಹೊರನಾಡುಗಳಿಂದ ಬಂದು ಇಲ್ಲಿ ಆಳಿದವರ ಬಲವಂತಕ್ಕೆ ಸಿಕ್ಕಿದವು.  ಸ್ವಾತಂತ್ರ್ಯದ ನಂತರದ  ದಿನಗಳಲ್ಲಿ ನಮ್ಮ ಪರಂಪರೆಗಳನ್ನು ಉಳಿಸುವ ಅಥವಾ ಅಳಿಸುವ ಬಾಧ್ಯತೆ ಭಾರತೀಯರ ಮೇಲೇ ಬಿತ್ತು. ದುರದೃಷ್ಟವಶಾತ್ ಈ ಪರಂಪರೆಗಳಿಗೆ ಈಗಾಗಲೇ ಧರ್ಮಗಳ, ಜಾತಿಗಳ, ಭಾಷೆಗಳ ಲೇಬಲ್ ಗಳು ಅಂಟಿಬಿಟ್ಟಿದ್ದವು.   ಪ್ರಸ್ತುತ ಕವಿತೆಯಲ್ಲಿ ಪರಂಪರೆಯನ್ನು ಕುರಿತಾಗಿ ಒಂದು ಜಿಜ್ಞಾಸೆ ಇದೆ. ಆಗಿನ ಕಾಲದಲ್ಲಿ ಬರುತ್ತಿದ್ದ ಸಾಹಿತ್ಯವನ್ನು ಕುರಿತು ಒಂದು ನೋಟವಿದೆ. ಪರಂಪರೆ ನಮ್ಮ ಸ್ವಂತಿಕೆಯನ್ನು ಕಾಯುತ್ತದೆ.  ಅದು "ಜನರ ನಂಬಿಕೆಯ ಆಧಾರ." ಅವುಗಳನ್ನು "ಕುರುಡು ದೊಣ್ಣೆಯಿಂದ" ಚಚ್ಚುವುದು ಸರಿಯಲ್ಲ  ಎಂಬುದು ಕವಿತೆಯ ಆಶಯ....

ಲೇಖನಿ, ಇಂದವರನ್ನು ನೆನೆ!

ಇಮೇಜ್
ಕವಿತೆ ಓದುವ ಮುನ್ನ  ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ ಇತಿಹಾಸವಾಗಿ ಇಂದು ನೆನಪಿನಲ್ಲಿ ಉಳಿದವರು ಕೆಲವರು; ಆದರೆ ಲಕ್ಷಾಂತರ ಭಾರತೀಯ ಜನಸಾಮಾನ್ಯರು ಈ ಹೋರಾಟದಲ್ಲಿ ಭಾಗವಹಿಸದಿದ್ದರೆ ಅದಕ್ಕೆ ಅರ್ಥವಿರುತ್ತಿರಲಿಲ್ಲ. ದಿನಕರ್ ತಮ್ಮ ಕವಿತೆಯಲ್ಲಿ ಇಂಥ ಸಾಮಾನ್ಯರಿಗೆ ನಮನ ಸಲ್ಲಿಸುತ್ತಾರೆ. ಗಾಂಧೀಜಿ ಸತ್ಯಾಗ್ರಹಕ್ಕೆ ಕರೆ ಕೊಟ್ಟಾಗ ಸಾಮಾನ್ಯರು ಅವರ ಮಾರ್ದನಿಯಾಗಿ ಅಲ್ಲಿರುತ್ತಿದ್ದರು. ಈ ಜನಸಾಮಾನ್ಯರ ಸ್ವಂತ ಪ್ರಭಾವಳಿ ದೊಡ್ಡದಲ್ಲದೇ ಇರಬಹುದು; ಆದರೆ ಅವರು ಲಕ್ಷಾಂತರ ಸಂಖ್ಯೆಯಲ್ಲಿ ಉರಿದು ಭಾರತದ ಸ್ವಾತಂತ್ರ್ಯಕ್ಕೆ ನಾಂದಿಯನ್ನಿಟ್ಟರು. ಗಾಂಧಿ, ನೆಹರೂ, ಲಾಜಪತ್ ರಾಯ್, ಪಟೇಲ್ ಇಂಥವರೆಲ್ಲ ಕಣ್ಣಿಗೆ ಕುಕ್ಕುವ ಬೆಳಕುಗಳು; ಹಾಗೆಂದು ಅವರನ್ನು ಮಾತ್ರ ನೆನೆದರೆ ಇತಿಹಾಸಕ್ಕೆ ಅಪಚಾರವಾಗುತ್ತದೆ ಎಂಬುದು ಕವಿತೆಯ ಆಶಯ.  "ದಿನಕರ್" ಸ್ವಾತಂತ್ರ್ಯಪೂರ್ವದಲ್ಲಿ ಬರೆಯಲು ಆರಂಭಿಸಿದ ಹಿಂದಿ ಕವಿ. ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿರದಿಂದ ನೋಡಿದವರು.  ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತರಾದ ಹಿಂದಿ ಕವಿ. ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್" ಕನ್ನಡ ಅನುವಾದ: ಸಿ.ಪಿ. ರವಿಕುಮಾರ್  ಅದೆಷ್ಟು ಸಲ ಇಂಥವರ ಅಸ್ಥಿಗಳ ಸುಟ್ಟೆವೋ ಎಷ್ಟು ಸಲ ಇಂಥವರ ಚಿತೆಗೆ ಕಿಡಿ ಕೊಟ್ಟೆವೋ ಸೇರಿದರು ಹೇಗೋ ತಮ್ಮ ಕೊನೆಯ ನೆಲೆ ಗಳಿಸಲಾರದೆ ತಮ್ಮ ನಿಜವಾದ ಬೆಲೆ - ಲೇಖನಿ, ಇಂದವರನ್ನು...