ಪೋಸ್ಟ್‌ಗಳು

Stafford ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪರಸ್ಪರರಿಗೆ ಓದಬೇಕಾದ ಸಂಪ್ರದಾಯದ ಓಲೆ

ಇಮೇಜ್
 ಮೂಲ ಕವಿತೆ: ವಿಲಿಯಂ ಸ್ಟಾಫರ್ಡ್ ಅನುವಾದ: ಸಿ. ಪಿ. ರವಿಕುಮಾರ್ ನಾನೆಂಥ ವ್ಯಕ್ತಿಯೆಂದು ಗೊತ್ತಿಲ್ಲದಿದ್ದರೆ ನಿನಗೆ ಮತ್ತು ನನಗೆ ಗೊತ್ತಿಲ್ಲದಿದ್ದರೆ ನೀನೆಂಥ ವ್ಯಕ್ತಿ ಎಂದು ತೋರುತ್ತವೆ ದಾರಿಯನ್ನು ಬೇರೆ ಯಾರೋ ಹಾಕಿದ ಗೆರೆ, ಹಾಗಾಗಿ ತಪ್ಪು ದೇವರನ್ನು ನಂಬಿಕೊಂಡು ನಾವು ಕಳೆದುಕೊಳ್ಳಬಹುದು ನಮ್ಮ ತಾರೆ. ಏಕೆಂದರೆ ಮನದಾಳದಲ್ಲಿ ಇರುತ್ತವೆ ಸಣ್ಣಪುಟ್ಟ ಮೋಸಗಳು, ಭುಜ ಕುಣಿಸಿದರೂ ಮುರಿಯುತ್ತದೆ ನಾಜೂಕು ಎಳೆ; ಬಾಲ್ಯದ ತಪ್ಪುಗಳು ಚೀತ್ಕರಿಸುತ್ತಾ ಹೊರನುಗ್ಗುತ್ತವೆ ಓಡಿಬಿಡುತ್ತೇವೆ ಭದ್ರಕೋಟೆಯ ಶಿಥಿಲ ಬಾಗಿಲಿನ ಆಚೆ. ಸಾಗುತ್ತವಲ್ಲ ಮೆರವಣಿಗೆ ಆನೆಗಳು ಒಂದರ ಬಾಲವನ್ನು ಇನ್ನೊಂದು ಹಿಡಿದು ತಪ್ಪಿದರೂ ಒಂದು ಹೋಗಿ ಮುಟ್ಟಲಾರವು ಸರ್ಕಸ್ ಡೇರೆ. ಏನು ನಡೆಯುತ್ತಿದೆ ಎಂದಷ್ಟೇ ಹೇಳಿ ಸರಿಸದಿರುವುದು ಏಕೆನ್ನುವ ತೆರೆ ನನಗೆ ಕ್ರೌರ್ಯ ಎನ್ನಿಸುತ್ತದೆ, ಎಲ್ಲಾ ಕ್ರೌರ್ಯದ ತಾಯಿಬೇರು ಅದೇ. ಹೀಗಾಗಿ ವಾಕ್ಕಿಗೆ ನನ್ನದೊಂದು ಕೋರಿಕೆ, ಅಸ್ಪಷ್ಟ ನೆರಳಿನಂಥ ಆ ವಸ್ತುವಿಗೆ, ಮಾತಾಡುವ ಎಲ್ಲರಲ್ಲೂ ಇರುವ ಆ ಮುಖ್ಯ ಪ್ರದೇಶಕ್ಕೆ: ಮರುಳು ಮಾಡುವುದೇನು ದೊಡ್ದದಲ್ಲ ಪರಸ್ಪರರನ್ನು, ಆದರೂ ವಹಿಸಿ ಜಾಗರೂಕತೆ ಇಲ್ಲದಿದ್ದರೆ ಕತ್ತಲಲ್ಲಿ ಕಳೆದುಹೋದೀತು ನಮ್ಮ ಸಹಬಾಳ್ವೆ ಎಂಬ ಮೆರವಣಿಗೆ. ಏಕೆಂದರೆ ಎಚ್ಚರವಾಗಿರುವುದು ಮುಖ್ಯ ಎಚ್ಚರವಿರುವ ಮಂದಿ, ಸಾಲು ಮುರಿದರೆ ಅವರು ನಿದ್ದೆಗೆ ಜಾರಬಹುದು ಅಧೀರರಾಗಿ; ನಾವು ನೀಡುವ ಸಂಕೇತಗಳು - ಹೌದು, ಇಲ್ಲ, ಬಹು...

ನನ್ನನ್ನು ಕೇಳು

ಇಮೇಜ್
 ಮೂಲ: ವಿಲಿಯಂ ಸ್ಟಾಫರ್ಡ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ನದಿಯು ಹಿಮಗಡ್ಡೆಯಾಗಿ ಬದಲಾದಾಗ ಎಂದಾದರೂ ನೀನು ಕೇಳು ಏನೇನು ತಪ್ಪುಗಳನ್ನು ಮಾಡಿರುವೆ ನಾನು. ಕೇಳು ನಾನು ಮಾಡಿದ್ದೆಲ್ಲವೂ ಕೂಡಿ  ನನ್ನ ಬದುಕಾಯಿತೇ ಎಂದು. ನುಸುಳಿ ಬಂದಿದ್ದಾರೆ ಮೆಲ್ಲನೆ ನನ್ನ ಆಲೋಚನೆಗಳಲ್ಲಿ ಹಲವರು ಕೆಲವರು ನೋಯಿಸಲು, ಕೆಲವರು ನೆರವಾಗಲು: ಕೇಳು ಅವರ ಕಡುದ್ವೇಷ ಮತ್ತು ಉತ್ಕಟಪ್ರೇಮ ಬೀರಿವೆಯೇ ಏನಾದರೂ ಪರಿಣಾಮ. ನೀನು ಹೇಳಿದ್ದನ್ನು ಕೇಳಿಸಿಕೊಳ್ಳುವೆ ನಾನು. ನೀನು ಮತ್ತು ನಾನು ಇಬ್ಬರೂ ತಿರುಗಿ ನೋಡೋಣ ಮೌನವಾಗಿರುವ ನದಿಯ ಕಡೆಗೆ ಮತ್ತು ಕಾಯೋಣ. ನಮಗೆ ಗೊತ್ತು ಅಲ್ಲಿ ಗುಪ್ತ ಹರಿವಿದೆ ಎಂದು.  ಮೈಲುಗಟ್ಟಲೆ ದೂರದಲ್ಲಿ ನಡೆವ ಆಗುಹೋಗುಗಳು ಹಿಡಿದಿಡುತ್ತವೆ ಯಥಾವತ್ ಮುಂದಿನ ಅಚಲತೆ. ನದಿಯು ಏನು ಹೇಳುತ್ತದೋ ನನ್ನ ಉತ್ತರವೂ ಅದೇ.

ಭದ್ರತೆ

ಇಮೇಜ್
ಮೂಲ ಕವಿತೆ: ವಿಲಿಯಂ ಸ್ಟಾಫರ್ಡ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ನಾಳೆಗೆ ಇರುವುದೊಂದು ದ್ವೀಪ.  ಸಿಕ್ಕುವುದು ನನಗೆ ಇರುಳು ಇಳಿಯುವ ಮುನ್ನವೇ, ಎಂದಿನಂತೆ. ತದನಂತರ ಹೊರಡುವೆ ಮತ್ತೊಂದನ್ನು ಅರಸಿ. ಈ ಸ್ಥಳಗಳು ಹಗಲಿನಲ್ಲಿ ಅಡಗಿಕೊಂಡಿರುತ್ತವೆ. ಕರೆದರೆ ಓಗೊಟ್ಟು ಬರುತ್ತವೆ ಕಳಚಿಕೊಂಡು. ಅವುಗಳ ಇರುವಿನ ಅರಿವು ಇರಬೇಕು ಅಷ್ಟೇ, ಅವು ಹುಟ್ಟುವ ಮುನ್ನವೇ. ಮುಂದೆ ಎಂದಾದರೂ ಬರಬಹುದೊಂದು ಯಾವ ದ್ವೀಪವೂ ಇಲ್ಲದ ನಾಳೆ ಇಂದಿನವರೆಗೂ ನಾನು ಹಾಗಾಗಲು ಬಿಟ್ಟಿಲ್ಲ. ಆದರೆ ನನ್ನ ತರುವಾಯ ಉಳಿದವರು ಬೆಳೆಸಿಕೊಳ್ಳಬಹುದು ಅಪನಂಬಿಕೆ ಮತ್ತು ಅಜಾಗರೂಕತೆ. ಅವರ ಮುಂದೆ ಭೋರ್ಗರೆಯುವುದು ವಿಶಾಲ ಅವಿಚ್ಛಿನ್ನ ಸಮುದ್ರ. ನೋಡುತ್ತಾ ನಿಲ್ಲುವರು ನೆಟ್ಟು ದಿಗಂತದತ್ತ ದೃಷ್ಟಿ ಅಭದ್ರ. ಹೀಗಾಗಿ, ಗೆಳೆಯಾ, ನಿನ್ನಲ್ಲಿ ನಾನು ಹೇಳಿಬಿಡುವೆ ನನ್ನ ರಹಸ್ಯ: ಶೋಧಕನಾಗಲು ನಿನಗೆ ಬೇಕಾದದ್ದು ಭದ್ರವಾಗಿ ಹಿಡಿದುಕೊಳ್ಳುವುದು ಸಿಕ್ಕಿದ್ದನ್ನು. ಅದೇನೆಂದು ನಿರ್ಧರಿಸಿ ಕಾಲಾಂತರದಲ್ಲಿ ಅನಂತರ ನೀನು ತೆರಳಿದ ಸ್ಥಳದ ಮೇಲೆ ಊರಿ ಭದ್ರವಾಗಿ ಕಾಲು ತೆರೆದ ಕಡಲಿನ ಕಡೆಗೆ ನೋಡಿ ಕೈ ಬಿಟ್ಟು ನಿಲ್ಲು.