ಪೋಸ್ಟ್‌ಗಳು

Sonnet ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ದೊರೆ ನೆಬುಕಡ್ನೆಜ್ಜರ್ ಕಂಡನಂತೆ ಒಂದು ದುಃಸ್ವಪ್ನ

ಇಮೇಜ್
ಮೂಲ: ಜಾನ್ ಕೀಟ್ಸ್ ಕನ್ನಡಕ್ಕೆ: ಸಿ. ಪಿ. ರವಿಕುಮಾರ್ ಕವಿತೆ ಓದುವ ಮುನ್ನ: ನೆಬೂಕಡ್ನೆಜ್ಜರ್ ಎಂಬ ರಾಜನ ಕಥೆ ಬೈಬಲ್ಲಿನಲ್ಲಿದೆ. ಇವನು ಬ್ಯಾಬಿಲಾನ್ ದೇಶದ ದೊರೆ. ತನ್ನ ಬಗ್ಗೆ ಅವನಿಗೆ ಗರ್ವ ಉಂಟಾದಾಗ ದೇವರು ಅವನಿಗೆ ಪಾಠ ಕಲಿಸಲೆಂದು ಒಂದು ಕನಸು ಕಾಣುವಂತೆ ಮಾಡುತ್ತಾನೆ. ಈ ಕನಸಿನಲ್ಲಿ ಅವನ ಪ್ರತಿಮೆಯೊಂದು ಕಾಣುತ್ತದೆ. ಅದರ ತಲೆ ಬಂಗಾರದ್ದು. ತಲೆಯಿಂದ ಪಾದಗಳ ಕಡೆಗೆ ಇಳಿಯುತ್ತಾ ಬೆಳ್ಳಿ, ಕಂಚು ಇತ್ಯಾದಿ ಕಡಿಮೆ ಮೌಲ್ಯದ ಲೋಹಗಳು. ಈ ಕನಸಿನ ಅರ್ಥವೇನೆಂದು ಅವನಿಗೆ ಹೊಳೆದರೂ ಅವನು ತನ್ನ ಆಸ್ಥಾನದ ಮುತ್ಸದ್ದಿಗಳನ್ನು ಕೇಳುತ್ತಾನೆ. ಮುಂದೆ ಬರುವ ರಾಜರು ಇವನಿಗಿಂತಲೂ ಕಡಿಮೆ ಮಹತ್ವದ ರಾಜರು ಎಂಬುದು ಕನಸಿನ ಗೂಢ.  ಯಾರೂ ಕನಸಿನ ಅರ್ಥ ಹೇಳಲಾರದಾದಾಗ ಕೋಪಗೊಂಡ ರಾಜ ಅವರನ್ನು ಕೊಲ್ಲಿಸುತ್ತಾನೆ.  ಡೇನಿಯಲ್ ಎಂಬುವನು ಮಾತ್ರ ಅದರ ಅರ್ಥ ಹೇಳುತ್ತಾನೆ. ರಾಜನ ಗರ್ವಭಂಗ ಮಾಡಲು ದೇವರು ಅವನಿಗೆ ಹುಚ್ಚು ಹಿಡಿಯುವ ಹಾಗೆ ಮಾಡುತ್ತಾನೆ. ರಾಜನು ಇಲಿಬಾವಲಿಗಳೊಂದಿಗೆ ಬಾಳುತ್ತಾ ಹುಲ್ಲು ತಿನ್ನುತ್ತಾ ಬದುಕುತ್ತಾನೆ.  ಕೆಲವು ವರ್ಷಗಳ ನಂತರ ಅವನ ಮನೋವ್ಯಾಧಿ ಗುಣವಾಗಿ ಅವನು ದೇವರಿಗೆ ತಲೆಬಾಗುತ್ತಾನೆ.  ಪ್ರಸ್ತುತ  ಸಾನೆಟ್ಟಿನಲ್ಲಿ ಕೀಟ್ಸ್ ಅಂದಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಕುರಿತು ಕೂಡಾ ವಿಶ್ಲೇಷಿಸುತ್ತಿರಬಹುದು.  ಕವಿತೆ: ಇಲಿಬಾವಲಿಗಳೊಂದಿಗೆ ವಾಸ ಮಾಡಲು ಹೊರಡುವ ಮುನ್ನ ದೊರೆ ನ...

ಹೂವಿನ ಸಂಕೋಲೆ

ಇಮೇಜ್
ಮೂಲ ಇಂಗ್ಲಿಷ್ ಕವಿತೆ : ಜಾನ್ ಕೀಟ್ಸ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್   ಕವಿತಾಸ್ವಾದನೆ: ಇಪ್ಪತ್ತಾರರ ಎಳೆಯ ವಯಸ್ಸಿನಲ್ಲೇ ಕಾಲವಾದ ಜಾನ್ ಕೀಟ್ಸ್ ಇಂಗ್ಲಿಷ್ ಭಾಷೆಯ ಪ್ರಮುಖ ಕವಿಗಳಲ್ಲಿ ಒಬ್ಬ. ಅವನು 64 ಸಾನೆಟ್ ಗಳನ್ನು ರಚಿಸಿದ್ದಾನೆ. ಅವನ ಸಮಕಾಲೀನ ವಿಮರ್ಶಕರು ಅವನ ಕಾವ್ಯವನ್ನು ಕಟುವಾಗಿ ವಿಮರ್ಶಿಸುತ್ತಿದ್ದರು. ಅಂದು ಸಾನೆಟ್ ಕಾವ್ಯಪ್ರಕಾರವನ್ನು ವಿಮರ್ಶಕರು ಕಡೆಗಣ್ಣಿನಿಂದ ನೋಡುತ್ತಿದ್ದರು. ಹಿಂದೊಮ್ಮೆ ಷೇಕ್ಸ್ ಪಿಯರ್ ಬಳಸಿದ ಈ ಕಾವ್ಯಪ್ರಕಾರವು ಜಾನ್ ಕೀಟ್ಸ್ ಗೆ ಆಪ್ಯಾಯವಾದದ್ದು. ವಿಮರ್ಶಕರ ಅಸಡ್ಡೆಯ ಬಗ್ಗೆ ಅವನಿಗೆ ತುಂಬಾ ಕೋಪ-ತಾಪಗಳಿದ್ದವು. ತನ್ನ ಕಾವ್ಯಕ್ಕೆ ಸಿಕ್ಕಿದ ಕಟುವಾದ ವಿಮರ್ಶೆಯೇ  ಅವನನ್ನು ಸಾವಿಗೆ ದೂಡಿತು ಎಂದು ಕೆಲವರು ನಂಬಿದ್ದಾರೆ. ಪ್ರಸ್ತುತ ಕವಿತೆಯಲ್ಲಿ ಅವನು ತನಗೆ ಇಷ್ಟವಾದ ಕಾವ್ಯಪ್ರಕಾರವಾದ ಸಾನೆಟ್ ಕುರಿತು ಬರೆದಿದ್ದಾನೆ. ಇಲ್ಲಿ ಬರುವ ಆಂಡ್ರೋಮೀಡಾ ಎಂಬ ಚೆಲುವೆಯ ಉಲ್ಲೇಖ ಗ್ರೀಕ್ ಪುರಾಣದಿಂದ ಆಯ್ದುಕೊಂಡದ್ದು. ಇವಳ ತಾಯಿಯು ತನ್ನ ಮಗಳ ಸೌಂದರ್ಯ ಜಲಕನ್ಯೆಯರ ಸೌಂದರ್ಯವನ್ನೂ ಮೀರಿದ್ದು ಎಂದು ಕೊಚ್ಚಿಕೊಂಡಾಗ ಕುಪಿತಗೊಂಡ ಸಮುದ್ರದೇವತೆ ಪೊಸೈಡನ್ ಜಲರಾಕ್ಷಸರನ್ನು ಕಳಿಸಿ ತಾಯಿ ಮತ್ತು ಮಗಳನ್ನು ಬಂಧಿಸುತ್ತಾನೆ. ಚೆಲುವೆ ಆಂಡ್ರೋಮೀಡಾಳನ್ನು ಜಲದೇವತೆಗೆ ಬಲಿ ನೀಡುವ ಉದ್ದೇಶದಿಂದ ಬಂಡೆಗೆ ಬಿಗಿದು ಕಟ್ಟಲಾಗುತ್ತದೆ. ಪರ್ಸಿಯಸ್ ಎಂಬ ದೇವತೆ ಅವಳನ್ನ...

ನಿನಗೆ ನಾನೇನನ್ನು ಕೊಡಲಿ ಪ್ರತಿಯಾಗಿ?

ಇಮೇಜ್
ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಸಾನೆಟ್ 8  ಮೂಲ : ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಇದು ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ ಅವರ  "ಸಾನೆಟ್ಸ್ ಫ್ರಂ ದ ಪೋರ್ಚುಗೀಸ್" ಸಂಗ್ರಹದ ಎಂಟನೇ ಸಾನೆಟ್.  ಇದಕ್ಕೆ ಹಿಂದಿನ ಸಾನೆಟ್ಟುಗಳ ಅನುವಾದವನ್ನು ಇದೇ ಬ್ಲಾಗಿನಲ್ಲಿ ಓದಬಹುದು.  ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ತನಗೆ ಸಿಕ್ಕ ಪ್ರೇಮಕಾಣಿಕೆಯನ್ನು ಸ್ವೀಕರಿಸುತ್ತಾ ಅದಕ್ಕೆ ಪ್ರತಿಯಾಗಿ ತಾನೇನನ್ನು ಕೊಡಲೆಂದು ಚಿಂತಿಸುತ್ತಾಳೆ.  ನಿನಗೆ ನಾನೇನನ್ನು ಕೊಡಲಿ ನೀನಿತ್ತ ರಾಜೋಚಿತ  ಉಡುಗೊರೆಗಳ ಪ್ರತಿಯಾಗಿ? ತೆರೆದು ಹೃದಯದ ಕಪಾಟು  ಹಾಸಿರುವೆ ಹೊಳೆವ ಬಂಗಾರದ ತಾಟು, ಹರಡಿರುವೆ ಅದರೊಳಗೆ ನಿಷ್ಕಳಂಕ ರತ್ನಖಚಿತ  ಪ್ರೇಮಾಭರಣಗಳನ್ನು ನನ್ನಂತಹವಳಿಗಾಗಿ, ಬಿಗಿದು ಕೊರಳು   ಸ್ವೀಕರಿಸುವೆಯಾ ಎಂದು ಕೇಳುತ್ತಿರುವೆ! ಕಠಿಣ ಹೃದಯವೇ ನನ್ನದು? ಕೃತಘ್ನಳೇ ನಾನು? ಕೃಪಣ ಮನದವಳೇ ಪ್ರತಿಯಾಗಿ ಮರಳಿ ಏನನ್ನೂ ನೀಡದಿರಲು?   ಕೃಪಣತನವಲ್ಲ, ದಟ್ಟದಾರಿದ್ರ್ಯವೆನ್ನುವುದು ಮೇಲು, ಕೇಳು ಎಲ್ಲವನ್ನೂ ಬಲ್ಲ ದೈವವನ್ನು. ಆ ದೇವರಿಗೆ ಗೊತ್ತು, ನಿರಂತರ ಸುರಿಸಿ ಕಳೆದುಕೊಂಡಿರುವೆ ಹೃದಯದೆಲ್ಲ ಮುತ್ತು, ಮಾಸಿಹೋಗಿವೆ ಕಂಬನಿಯಲ್ಲಿ ಜೀವನದ ಬಣ್ಣಗಳು! ...

ಎಷ್ಟು ಮೋಹಕವಾಗಿದೆ ಹೊಸಪಲ್ಲವಿ!

ಇಮೇಜ್
ಮೂಲ ಸಾನೆಟ್ : ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಸಂಗ್ರಹದ ಏಳನೇ ಸಾನೆಟ್.  ಇದಕ್ಕೆ ಹಿಂದಿನ ಸಾನೆಟ್ಟುಗಳ  ಅನುವಾದವನ್ನು ನೀವು ಇದೇ ಬ್ಲಾಗಿನಲ್ಲಿ ಓದಬಹುದು. ಪ್ರಸ್ತುತ ಕವಿತೆಯಲ್ಲಿ  ಕವಯಿತ್ರಿಯು  ತನ್ನಲ್ಲಿ ಅಂಕುರಿತವಾದ ಪ್ರೇಮವು ತನ್ನನ್ನು ಸಾವಿನ ಅಂಚಿನಿಂದ ಹೇಗೆ ಕಾಪಾಡಿತು ಎಂಬ ಕೃತಜ್ಞತಾ ಭಾವನೆಯನ್ನು ವ್ಯಕ್ತಗೊಳಿಸುತ್ತಿದ್ದಾಳೆ.  ಇಡಿಯ ವಿಶ್ವದ ರೂಪವೇ ಬದಲಾದಂತೆ ನನಗೆ ತೋರುತ್ತದೆ, ಕೇಳಿದಾಗಿನಿಂದಲೂ ನಿನ್ನಾತ್ಮದ  ಹೆಜ್ಜೆಸಪ್ಪಳ! ಹಗುರ, ಓ ಬಹು ಹಗುರ ನಡೆಯಲ್ಲಿ  ಬಂದು ನಿಂತಿಹುದು ಹತ್ತಿರ, ನನಗೂ ಮತ್ತು ಆ ಭಯಾನಕ ಅಂಚಿಗೂ ನಡುವೆ.  ನಿಸ್ಸಂದೇಹವೂ ಅದು ಸಾವಿನಂಚು, ಮುಳುಗುತ್ತಿದ್ದೆನೇನೋ ನಾನು, ಪ್ರೇಮದ ಸುಳಿಯಲ್ಲಿ ಸಿಲುಕದಿದ್ದರೆ, ನನ್ನ ಜೀವನಕ್ಕೆ  ಪ್ರಾಪ್ತವಾಗದಿದ್ದರೆ ಹೀಗೆ ಹೊಸ ನರ್ತನದ ಹೆಜ್ಜೆ! ಸ್ವೀಕರಿಸುವೆ ದೈವ ನನಗಿತ್ತ ಪ್ರಸಾದರೂಪದ ಜೇನು, ನಿನ್ನ ಸಾನ್ನಿಧ್ಯವು ಅದಕ್ಕೆ ನೀಡುತ್ತಿದೆ ಅಪೂರ್ವ ಸವಿ! ಸ್ವರ್ಗವೆಂಬುದು ನನ್ನ ಹೊಸ ವಿಳಾಸದ ಹೆಸರು, ನೀನಿರುವ ಸ್ಥಾನಕ್ಕೆ ಬೇರೇನೆಂದು ಕರೆಯಬಹುದು? ಕೊಳಲ ದನಿಯಲ್ಲಿ ಎಷ್ಟು ಮೋಹಕವಾಗಿದೆ ಹೊಸಪಲ್ಲವಿ! ಹಾಗೇಕೆಂದು ಹಾಡುವ ಗಂಧರ್ವರಿಗೂ ಗೊತ...

ದೂರವಾಗಿರು ನನ್ನಿಂದ ಎಂದು ನಿನ್ನಲ್ಲಿ ಪ್ರಾರ್ಥಿಸಿದರೂ

ಇಮೇಜ್
ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಸಾನೆಟ್ - 6 ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ: ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಸಂಗ್ರಹದಲ್ಲಿ ಆರನೇ ಸಾನೆಟ್. ಹಿಂದಿನ ಸಾನೆಟ್ಟುಗಳ ಅನುವಾದವನ್ನು ಇದೇ ಬ್ಲಾಗಿನಲ್ಲಿ ಓದಬಹುದು. ಪ್ರಸ್ತುತ ಕವಿತೆಯಲ್ಲಿ ಕವಯಿತ್ರಿ ತನ್ನಲ್ಲಿ ಉಂಟಾದ ಬದಲಾವಣೆಯನ್ನು ತೋಡಿಕೊಳ್ಳುತ್ತಾಳೆ. ಅವಳಲ್ಲಿ ರಾಬರ್ಟ್ ಬ್ರೌನಿಂಗ್ ಅನುರಕ್ತನಾದಾಗ ಅವಳಿಗೆ ಮೊದಲು ಭಯವುಂಟಾಗುತ್ತದೆ. ತನ್ನ ಖಿನ್ನ ಜಗತ್ತಿನಲ್ಲಿ ಅವನಿಗೂ ಹಾನಿಯಾದರೆ ಎಂಬ ಭೀತಿ ಅವಳನ್ನು ಕಾಡುತ್ತದೆ. "ನನ್ನಿಂದ ದೂರವಿರು" ಎಂದು ಅವನಿಗೆ ಹೇಳಿದರೂ ತಾನು ಅವನಿಂದ ದೂರವಿರಬಲ್ಲೆನೇ ಎಂಬ ಅನುಮಾನ ಅವಳನ್ನು ಈಗ ಕಾಡುತ್ತಿದೆ. ತನ್ನ ಸರ್ವಸ್ವವೂ ಈಗ ಅವನಿಂದಲೇ ಎಂಬ ಸಮರ್ಪಣ ಭಾವವನ್ನು ಈ ಕವಿತೆಯಲ್ಲಿ ನೋಡಬಹುದು.  ದೂರವಾಗಿರು ನನ್ನಿಂದ   ಎಂದು ನಿನ್ನಲ್ಲಿ ಪ್ರಾರ್ಥಿಸಿದರೂ  ಇರಬೇಕಾಗಬಹುದೇನೋ ಮುಂದೆ ನಿನ್ನ ನೆರಳಿನಲ್ಲೇ.  ನನ್ನ ಆತ್ಮಕ್ಕೀಗ ನನ್ನ ಬಳಿ ಕೆಲಸವಿಲ್ಲ ಯಾವುದೇ, ಸ್ವಂತ  ಬಾಳೆಂಬುದು ನನಗಿನ್ನು ಮುಚ್ಚಿದ ಬಾಗಿಲು.  ಶಾಂತಿ ಎಂಬುದು ಇನ್ನು ಸಿಕ್ಕಲಾರದು ನೀನಿಲ್ಲದೆ, ಎತ್ತಲಾರೆನೇನೋ ನನ್ನ ಇಚ್ಛೆಯಿಂದ ನನ್ನ ಕಿರುಬೆರಳು, ನಿನ್ನ ಕೈಬೆರಳಿನ ಸ್ಪರ್ಶಕ್ಕೆ ...

ಮೇಲೆತ್ತಿದಂತೆ ಎಲೆಕ್ಟ್ರಾ ಚಿತಾಭಸ್ಮಕರಂಡಕವನ್ನು

ಇಮೇಜ್
ಸಾಣೆಟ್ಸ್ ಫ್ರಂ ದ ಪೋರ್ಚುಗೀಸ್ - ಸಾನೆಟ್ 5  ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡ ಅನುವಾದ: ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ:  ಇದು ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ ಎಂಬ ಸಂಗ್ರಹದ ಐದನೇ ಸಾನೆಟ್.  ಹಿಂದಿನ ಸಾನೆಟ್ಟುಗಳ ಅನುವಾದ ಇದೇ ಬ್ಲಾಗಿನಲ್ಲಿ  ಓದಬಹುದು. ಈ  ಸಾನೆಟ್ಟಿನಲ್ಲೂ ಕವಯಿತ್ರಿಯು ತನ್ನ ಅಳುಕನ್ನು ಹೊರಗೆಡಹುತ್ತಾಳೆ. ರಾಬರ್ಟ್ ಬ್ರೌನಿಂಗ್ ಅವಳಲ್ಲಿ ತನ್ನ ಪ್ರೇಮವನ್ನು ತೋಡಿಕೊಂಡಿದ್ದಾನೆ. ಆದರೆ ತನ್ನೊಳಗಿನ ದುಃಖವು ಅವನಿಗೆ ಹಾನಿ ಮಾಡಬಹುದೆಂಬ ಭೀತಿ ಕವಯಿತ್ರಿಯನ್ನು ಕಾಡುತ್ತದೆ. ಚಿತಾಭಸ್ಮವನ್ನು ಹೊತ್ತ ಹೆಣ್ಣೊಬ್ಬಳ ಚಿತ್ರವನ್ನು ಈ ಸಾನೆಟ್ಟಿನಲ್ಲಿ ಬಳಸಲಾಗಿದೆ. ಗ್ರೀಕ್ ನಾಟಕವೊಂದರ ನಾಯಕಿ ಎಲೆಕ್ಟ್ರಾ ತನ್ನ ತಂದೆಯ ಚಿತಾಭಸ್ಮವನ್ನು ಕರಂಡಕದಲ್ಲಿ ಹೊತ್ತಳಂತೆ. ಕವಯಿತ್ರಿಯೂ ತನ್ನ ಹೃದಯದಲ್ಲಿ ಇಂಥದ್ದೇ ಯಾವುದೋ ನೋವನ್ನು ಹೊತ್ತಿದ್ದಾಳೆ.   ಹಿಂದೊಮ್ಮೆ  ಎಲೆಕ್ಟ್ರಾ  ಮೇಲೆತ್ತಿದಂತೆ  ಚಿತಾಭಸ್ಮಕರಂಡಕವನ್ನು  ನನ್ನ ಹೃದಯದ ಭಾರವನ್ನು ತುಟಿಕಚ್ಚಿ ಮೇಲೆತ್ತಿ   ಸುರಿಯುವೆನು ನಿನ್ನ ಪಾದಗಳಲ್ಲಿ ಹೊಗೆಯಾಡುವ ಬೂದಿ  ನಿನ್ನ ಕಣ್ಣುಗಳಲ್ಲಿ ನೆಟ್ಟು ನನ್ನ ಕಣ್ಣು  ಇದೋ ನೋಡು ನನ್ನೊಳಗೆ ಹುದುಗಿದ್ದ ದುಃಖ   ಹೇಗೆ ಮಿನುಗುತ್ತಿವೆ ನೋಡು ಹಾರಾಡುವ ಕೆಂಪುಕ...

ಗುಡಿಸಿಲಿನಲ್ಲಿ ಒಪ್ಪುವುದೇ ನಿನ್ನಪೂರ್ವ ಗಾನಧನ?

ಇಮೇಜ್
ಸಾನೆಟ್ಸ್ ಫ್ರಂ ದ ಪೋರ್ಚುಗೀಸ್ - 4  ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ:    ಇದು  ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಎಂಬ ಸಂಗ್ರಹದ ನಾಲ್ಕನೇ ಸಾನೆಟ್.  ಹಿಂದಿನ ಸಾನೆಟ್ಟುಗಳ ಅನುವಾದ ಇದೇ ಬ್ಲಾಗಿನಲ್ಲಿ  ಓದಬಹುದು.  ತನ್ನ ಪ್ರೇಮವನ್ನು ಬಯಸಿ ಬಂದ ಪ್ರಿಯಕರನ ನಡೆ ಕವಯಿತ್ರಿಯನ್ನು ಚಕಿತಗೊಳಿಸುತ್ತದೆ. ರಾಬರ್ಟ್ ಬ್ರೌನಿಂಗ್ ವಿಕ್ಟೋರಿಯಾ ಮಹಾರಾಣಿಯ ಕಾಲದ ಒಬ್ಬ ಅಗ್ರಮಾನ್ಯ ಕವಿ ಮತ್ತು ನಾಟಕಕಾರ. ಅವನ ಸ್ಥಾನಮಾನವೇನು, ತನ್ನ ಸ್ಥಾನಮಾನವೇನು ಎಂಬ ಚಿಂತೆ ಕವಯಿತ್ರಿಯನ್ನು ಆವರಿಸಿದೆ.  ತನ್ನ ಮನಸ್ಸಿನಲ್ಲಿರುವ ಖಿನ್ನತೆಯನ್ನು ಕುರಿತು ಕೂಡಾ ಅವಳಿಗೆ ಅರಿವಿದೆ. ತನ್ನನ್ನು ಬಯಸಿಬಂದ ಪ್ರಿಯಕರನಿಗೆ ನಿಜಸ್ಥಿತಿಯ ಅರಿವು ಮಾಡಿಕೊಡುವುದು ಕವಯಿತ್ರಿಯ ಆಶಯ.  ಅರಮನೆಯ ಭವ್ಯ ಸಭಾಗೃಹಗಳು ನಿನಗೆ ಉಚಿತ ಸ್ಥಾನ! ಎಲ್ಲಿ ಹರಿಯುವುದೋ ನಿನ್ನ ಉತ್ಕೃಷ್ಟ ಕಾವ್ಯವಾಚನದ ಹೊಳೆ  ನರ್ತಿಸುವ ಜೋಡಿಗಳು  ನಿಲ್ಲಿಸಿ ತಮ್ಮ ನರ್ತನ ಅರ್ಧದಲ್ಲೇ ಆಸ್ವಾದಿಸುತ್ತವಲ್ಲ ನಿನ್ನ ತುಟಿಗಳಿಂದ ಹೊಮ್ಮುವ ದಿವ್ಯಗಾನ!  ನಾಚುತ್ತಿದೆ ನೀನೀಗ ತಟ್ಟುತ್ತಿರುವ ನನ್ನ ಮನೆಬಾಗಿಲಿನ ಚಿಲಕ   ನಿನ್ನ ಕೈಸ್ಪರ್ಶಕ್ಕೆ ಅನರ್ಹವೆಂದು ತಾನು! ಯೋಚಿಸು ಒಂದು ಕ್ಷಣ...

ಭಿನ್ನರು ನಾವಿಬ್ಬರೂ ಎಂಬುದರಲ್ಲಿ ಇನ್ನೂ ಸಂದೇಹವೇ

ಇಮೇಜ್
ಸಾನೆಟ್ಸ್ ಫ್ರಮ್ ದ ಪೋರ್ಚುಗೀಸ್ - 3  ಮೂಲ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ : ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ:   ಇದು  ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಎಂಬ ಸಂಗ್ರಹದ ಮೂರನೇ  ಸಾನೆಟ್.  ಹಿಂದಿನ ಸಾನೆಟ್ಟುಗಳ ಅನುವಾದ ಇದೇ ಬ್ಲಾಗಿನಲ್ಲಿ  ಓದಬಹುದು.  ಪ್ರಿಯಕರನು ಪ್ರೇಮ ನಿವೇದನೆ ಮಾಡಿದಾಗ ಕವಿತೆಯ ನಾಯಕಿಗಯ ಮನದಲ್ಲಿ ತನ್ನ ಮತ್ತು ತನ್ನ ಪ್ರಿಯಕರನ ನಡುವೆ ತಾಳೆಯಾಗುವುದೇ ಎಂಬ ಆಲೋಚನೆ ಮೂಡುತ್ತದೆ. ತಮ್ಮ ಜೀವನ ಎಷ್ಟು ವಿಭಿನ್ನ  ಎಂದು ಅವಳು ಚಿಂತಿಸುತ್ತಾಳೆ. ತಮ್ಮ ನಕ್ಷತ್ರದೇವತೆಗಳು ಕೂಡಾ ವಿರುದ್ಧ ದಿಕ್ಕುಗಳಲ್ಲಿ ಹಾರಾಡುತ್ತಿದ್ದವು! ಒಂದರ ರೆಕ್ಕೆ ಇನ್ನೊಂದಕ್ಕೆ ಅಕಸ್ಮಾತ್ ಬಡಿದಾಗ ಅವುಗಳೂ ಆಶ್ಚರ್ಯಚಕಿತವಾಗಿವೆ! ಈ ಮಿಲನ ಸಾಧ್ಯ ಎಂಬುದು ದೇವತೆಗಳಿಗೂ ಊಹಿಸಲು ಸಾಧ್ಯವಾಗಿರಲಿಲ್ಲ! ತನ್ನ ಪ್ರಿಯಕರನೋ ಒಬ್ಬ ರಸಿಕ. ಅವನ ಒಡನಾಟ ಐಶ್ವರ್ಯವಂತರೊಂದಿಗೆ. ಅಲ್ಲಿಯ ಜಗಮಗ ಬೆಳಕಿನಲ್ಲಿ ಅವನನ್ನು ದಿಟ್ಟಿಸಿನೋಡುವ ಅದೆಷ್ಟು ತೇಜಃಪೂರ್ಣ ಕಣ್ಣುಗಳಿವೆ! ಇವರೆಲ್ಲರನ್ನೂ ಬಿಟ್ಟು ಅವನೇಕೆ ತನ್ನಲ್ಲಿ ಅನುರಕ್ತನಾಗಿದ್ದಾನೆ? ಸಾವಿನಲ್ಲಿ ಮಾತ್ರ ತಮ್ಮ ಮಿಲನ ಸಾಧ್ಯವೆಂಬ ಆಲೋಚನೆ ಅವಳನ್ನು ಅಧೀರಳನ್ನಾಗಿ ಮಾಡುತ್ತದೆ. ಭಿನ್ನರು ನಾವಿಬ್ಬರೂ ಎಂಬುದರಲ್ಲಿ ಇನ್ನೂ ಸಂದೇಹವೇ ನಿನ್ನ  ರಾಜಸೀ ಹೃದಯಕ್ಕೆ? ನಮ್ಮ ಧ್ಯೇಯೋ...

ನೀನೀಗ ನನಗೆ ಹೇಳಿದ ಮಾತು ಕೇಳಿಸಿಕೊಂಡವರು

ಇಮೇಜ್
ಸಾಣೆಟ್ಸ್ ಫ್ರಂ ದ ಪೋರ್ಚುಗೀಸ್ - 2 ಮೂಲ ಇಂಗ್ಲಿಷ್ ಕವಿತೆ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  Add caption ಕವಿತಾಸ್ವಾದನೆ:  ಇದು  ಸಾನೆಟ್ಸ್ ಫ್ರಂ ದ ಪೋರ್ಚುಗೀಸ್  ಎಂಬ ಸಂಗ್ರಹದ ಎರಡನೇ ಸಾನೆಟ್.  ಮೊದಲ ಸಾನೆಟ್ಟಿನ ಅನುವಾದವನ್ನು ಇದೇ ಬ್ಲಾಗಿನಲ್ಲಿ  ಓದಬಹುದು.  ಮೊದಲ ಸಾನೆಟ್ಟಿನಲ್ಲಿ ಕವಯಿತ್ರಿಗೆ ಅವಳ ಪ್ರೇಮಿಯು ತನ್ನ ಪ್ರೇಮವನ್ನು ನಿವೇದಿಸಿಕೊಂಡಿದ್ದಾನೆ. ಇದನ್ನು ಕೇಳಿದಾಗ ಕವಯಿತ್ರಿಯ ಮನಸ್ಸಿನಲ್ಲಿ  ಮೂಡುವ ಭಾವನೆಗಳು ಈ ಸಾನೆಟ್ಟಿನಲ್ಲಿ ಚಿತ್ರಿತವಾಗಿವೆ.  ಪ್ರಿಯಕರನ ಪ್ರೇಮನಿವೇದನೆಯಿಂದ ಅವಳಿಗೆ ಜೀವನದಲ್ಲಿ ಮತ್ತೊಮ್ಮೆ ಉತ್ಸಾಹ ಮೂಡಿದೆ. ಅವಳಿಗೆ ದೇವರೇ ಬಂದು (ಜೀವನ)ಪ್ರೇಮವನ್ನು ಬೋಧಿಸಿದಂತೆ ತೋರುತ್ತದೆ.  ದೈಹಿಕ ನೋವುಗಳನ್ನು ಕುರಿತು ಅವಳಿಗೆ ನೆನಪಾಗುತ್ತದೆ. ಅದು ಅವಳಿಗೆ ತಗುಲಿದ್ದ ಶಾಪವೆಂದು ಕವಯಿತ್ರಿಗೆ ಅನ್ನಿಸುತ್ತದೆ. ಇದೇ ಕಾರಣ ತನ್ನ ಪ್ರಿಯಕರನನ್ನು ನೋಡಲು ಕೂಡಾ ಆವಳಿಗೆ ಸಾಧ್ಯವಾಗಿರಲಿಲ್ಲ. ಈ ದೈಹಿಕ ಬಾಧೆಗಳ ಕಾರಣ ತನ್ನ ಪ್ರಾಣವೇ ಹೋಗಿದ್ದರೂ ಪ್ರಿಯಕರನನ್ನು ನೋಡದ ಬಾಧೆಗಿಂತ ಅದು ಹೆಚ್ಚಲ್ಲ ಎಂದು ಕವಯಿತ್ರಿಗೆ ಅನ್ನಿಸುತ್ತದೆ. ಇದುವರೆಗೆ ದೈವವೇ ತನಗೆ ಪ್ರೇಮವನ್ನು ನಿರಾಕರಿಸಿತ್ತೇ? ಈಗ ತನಗೆ ಅದು ಸಿಕ್ಕಿದ ಮೇಲೆ ಯಾವುದೇ ಶಕ್ತಿಯೂ ಪ್ರಿಯಕರನಿಂದ ತನ್ನನ್ನು ಬೇರ...

ಹೀಗೇ ಒಮ್ಮೆ ಮೆಲುಕು ಹಾಕುತ್ತಿದ್ದೆ ಥಿಯೋಕ್ರಿಟಸ್ ಹಾಡಿದ ಪಂಕ್ತಿ

ಇಮೇಜ್
ಸಾನೆಟ್ಸ್  ಫ್ರಂ ದ ಪೋರ್ಚುಗೀಸ್ - 1  ಮೂಲ: ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್  ಕವಿತಾಸ್ವಾದನೆ:   ಮುಂದೆ ರಾಬರ್ಟ್ ಬ್ರೌನಿಂಗ್ ಕವಿಯ ಪತ್ನಿಯಾದ ಎಲಿಜಬೆತ್ ಬ್ಯಾರೆಟ್ ಬ್ರೌನಿಂಗ್ 1845-1846 ಅವಧಿಯಲ್ಲಿ ಬರೆದ 44 ಸಾನೆಟ್ಟುಗಳ ಸಂಗ್ರಹದ ಮೊದಲ ಸಾನೆಟ್ ಇದು. ಈ ಸಾನೆಟ್ಟುಗಳು ತೀರಾ ವೈಯಕ್ತಿಕವೆಂಬ ಕಾರಣ ಅವುಗಳನ್ನು ಅಚ್ಚು ಮಾಡಲು ಎಲಿಜಬೆತ್ ಅನುಮಾನಿಸಿದಳಂತೆ. ಆಗ ರಾಬರ್ಟ್ ಬ್ರೌನಿಂಗ್ "ಇವು ಶೇಕ್ಸ್ ಪಿಯರ್ ಕವಿಯ ಸಾನೆಟ್ಟುಗಳ ತರುವಾಯ ಬರೆಯಲಾದ ಅತ್ಯಂತ ಶ್ರೇಷ್ಠ ಸಾನೆಟ್ಟುಗಳು" ಎಂದು ಹುರುದುಂಬಿಸಿ ಅಚ್ಚು ಹಾಕಿಸಿದನಂತೆ.  ಸ್ವಲ್ಪವಾದರೂ ಮುಚ್ಚುಮರೆ ಇರಲೆಂದು ಆಕೆ ಅವುಗಳನ್ನು ಬೇರೆ ಭಾಷೆಯಿಂದ ಅನುವಾದಿಸಿದ ಸಾನೆಟ್ಟುಗಳೆಂದು ಬಿಂಬಿಸಿದಳಂತೆ. ಹೀಗಾಗಿ "ಪೋರ್ಚುಗೀಸ್ ಸಾನೆಟ್ಟುಗಳು" ಎಂಬ ಹೆಸರು ಕೊಡಲಾಯಿತಂತೆ. "ನನ್ನ ಪುಟ್ಟ ಪೋರ್ಚುಗೀಸ್" ಎಂಬುದು  ರಾಬರ್ಟ್ ಬ್ರೌನಿಂಗ್ ಅವಳನ್ನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು ಕೂಡಾ. ಪ್ರಸ್ತುತ ಕವಿತೆಯಲ್ಲಿ ಒಂದು ಹೆಣ್ಣು ತನ್ನ ಜೀವನದ ಕಳೆದ ವರ್ಷಗಳನ್ನು ಪರಾಮರ್ಶಿಸುತ್ತಾ ಅವುಗಳಲ್ಲಿ ತುಂಬಿರುವ ದುಃಖವನ್ನು ನೆನೆದು ಕಣ್ಣೀರು ಹಾಕುತ್ತಾಳೆ. ಆಗ ಅವಳಿಗೊಂದು ಆಶ್ಚರ್ಯ ಕಾದಿದೆ.  ಹೀಗೇ ಒಮ್ಮೆ ಮೆಲುಕು ಹಾಕುತ್ತಿದ್ದೆ ಥಿಯೋಕ್ರಿಟಸ್ ಹಾಡಿದ ಪಂಕ್ತಿಗಳು  ಎಲ್ಲ...

ನಡುರಾತ್ರಿಯ ಪರಿಚಯ

ಇಮೇಜ್
ಕವಿತೆ ಓದುವ ಮುನ್ನ: ರಾಬರ್ಟ್ ಫ್ರಾಸ್ಟ್ ಒಬ್ಬ ಪ್ರಮುಖ ಅಮೆರಿಕನ್ ಕವಿ.  ಈ ಸಾನೆಟ್ಟಿನಲ್ಲಿ ಅವನು ಒಂದು ಘಟನೆಯ ಚಿತ್ರಣವನ್ನು ನೀಡಿದ್ದಾನೆ. ಘಟನೆಯ ವಿವರಗಳು ಸ್ಪಷ್ಟವಾಗಿಲ್ಲ. ಮಳೆ ಬೀಳುತ್ತಿರುವ ಒಂದು ರಾತ್ರಿ. ಯಾವುದೋ ಕಾರಣಕ್ಕಾಗಿ ನಾಯಕ ಮನೆಯಿಂದ ಹೊರಗೆ ಹೊರಟು ಬಂದಿದ್ದಾನೆ.  ಮನೆಯಲ್ಲಿ ನಡೆದ ಯಾವುದೋ ಅಹಿತಕರ ಘಟನೆಯಿಂದ ಅವನ ಮನಸ್ಸು ಪ್ರಕ್ಷುಬ್ಧವಾಗಿರಬಹುದು. ಹೀಗೆ ಹೊರಟುಬಂದವನು ಬಹಳ ದೂರದವರೆಗೂ ಮಳೆಯಲ್ಲೇ ನಡೆದು ನಗರದ ತುದಿಯವರೆಗೂ ಹೋಗಿನಿಂತಿದ್ದಾನೆ. ಕಾವಲುಗಾರ ಇವನನ್ನು ಅನುಮಾನದ ದೃಷ್ಟಿಯಿಂದ ನೋಡಿದಾಗ ಸರೀಕನಾದ ಇವನಿಗೆ ಏನೂ ತೋಚದೆ ಮುಖ ಕೆಳಗೆ ಹಾಕಿದ್ದಾನೆ. ತನ್ನ ಹೆಜ್ಜೆಯ ಸಪ್ಪಳ ತನಗೇ ಅಸಹನೀಯವೆನ್ನಿಸಿ ಸ್ವಲ್ಪಹೊತ್ತು ಸುಮ್ಮನೆ ನಿಂತುಬಿಡುತ್ತಾನೆ.   ನಗರದ ಅತ್ಯಂತ ದುಃಖದ ಬೀದಿಗಳ ಮೂಲಕ ಹಾದುಹೋಗುವಾಗ ಅವನಿಗೆ ತನ್ನ ದುಃಖ ಅಂಥ ದೊಡ್ಡದೇನೂ ಅಲ್ಲ ಎನ್ನಿಸಿರಬಹುದು. ದೂರದಲ್ಲೆಲ್ಲೋ ಅವನಿಗೆ ಒಂದು ಕರೆ ಕೇಳುತ್ತದೆ. ಅವನಿಗೆ ವಿದಾಯ ಹೇಳಲು ಹೊರಟ ಕರೆಯಲ್ಲ; ಅವನನ್ನು ಮರಳಿ ಬಾ ಎಂದು ಕೂಗುವ ಕರೆಯೂ ಅಲ್ಲ. ದೂರದಲ್ಲಿ ಅವನಿಗೆ ಗಡಿಯಾರದ ಗೋಪುರ ಕಾಣುತ್ತದೆ. ಬಹುಶಃ ಅವನಿಗೆ ಕೇಳಿದ ಕರೆಯು ಈ ಗಡಿಯಾರದ ಗಂಟೆಯೇ ಇದ್ದರೂ ಇರಬಹುದು. "ಮನೆಗೆ ಮರಳು" ಎಂದು ಅದು ಹೇಳುತ್ತಿದೆಯೇ? "ಇಲ್ಲ, ಹೊರಡು" ಎಂದು ಅದು ಹೇಳುತ್ತಿದೆಯೇ? ಇದು ಯಾವುದೂ ಅಲ್ಲ. ಸರಿಯಾದ ಕಾಲ ಎನ್ನುವುದು ತನ್...